UN NETWORKS ಇರಾ: ಇರಾ ಗ್ರಾಮ ಪಂಚಾಯಿತಿಯ ಮಹಾತ್ಮ ನರೇಗಾ ಯೋಜನೆಯ 2018-19ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆ ಮಂಗಳವಾರ ನಡೆಯಿತು. ಇರಾ ಯುವಕ ಮಂಡಲದಲ್ಲಿ ನಡೆದ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೆಶಕ ಕೃಷಿ ಇಲಾಖೆ ನಾಯಾಯಣ ಶೆಟ್ಟಿ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಳಿನಿ ಎ.ಕೆ., ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ನರೇಗಾ ಯೋಜನೆಯ ತಾಲೂಕು ಸಂಯೋಜಕ ಪವಿತ್ರಾ ಶೆಟ್ಟಿ ಯೋಜನೆಯ ಬಗ್ಗೆ ವರದಿ ಹಾಗು ಮಾಹಿತಿ ನೀಡಿದರು. ಗ್ರಾಮ ಸಂಪನ್ಮೂಲ ವ್ಯಕ್ತಿ ಧರ್ಮಾವತಿ,ಸುಜಾತ, ಶ್ರುತಿ ಹಾಗೂ ಪ್ರವೀಣ್ ಉಪಸ್ಥಿತರಿದ್ದರು.
Author: UllalaVani
UN NETWORKS ತೊಕ್ಕೊಟ್ಟು: ತೊಕ್ಕೊಟ್ಟಿನ ಭಟ್ನಗರ ಶ್ರೀ ಜೈವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವ ಆಶ್ರಯದಲ್ಲಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಶ್ರಯದಲ್ಲಿ ಸೋಮವಾರ ನಡೆದ 58ನೇ ಮೊಸರುಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ರಥೋತ್ಸವದಲ್ಲಿ ಆಕರ್ಷಕ ಸ್ತಬ್ಧಚಿತ್ರಗಳು.
UN NETWORKS ನರಿಂಗಾನ :ವಾರ್ಡ್ ಸಭೆಗಳಲ್ಲಾದ ನಡಾವಳಿಯನ್ನು ಸಭೆಯಲ್ಲಿಗ್ರಾಮಸ್ಥರ ಮುಂದೆಯೇ ಓದಿ ಅಲ್ಲೇ ಸಹಿ ಹಾಕಿಸಬೇಕು ಎಂಬ ನಿಯಮವನ್ನು ಪಿಡಿಒ ಸಮರ್ಪಕವಾಗಿ ಕಾರ್ಯಗತಗೊಳಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದು ಚರ್ಚಿಸಿ ಕೊನೆಗೂ ಯಶಸ್ವಿಯಾದರು. ಅಷ್ಟಕ್ಕೂ ಅದಕ್ಕೆ ತೆಗೆದುಕೊಂಡ ಸಮಯ ಬರೋಬ್ಬರಿ ಎರಡು ಗಂಟೆ. ಹೌದು ಇದು ನರಿಂಗಾನ ಗ್ರಾಮಸಭೆಯಲ್ಲಿ ಹಲವು ವರ್ಷಗಳ ಬಳಿಕ ಸುದೀರ್ಘ ಚರ್ಚಾ ವಿಷಯದ ಫಲಶ್ರುತಿ. ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮ ಪಂಚಾಯಿತಿಗೆ ಮೊಂಟೆಪದವು ಸರಕಾರಿ ಪ್ರೌಢಶಾಲೆಯಲ್ಲಿಮಂಗಳವಾರ ನಡೆದ 2018-19ರ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿವಾರ್ಡ್ ಸಭೆಗಳಲ್ಲಾದ ಚರ್ಚೆ ಬಳಿಕ ತೆಗೆದುಕೊಂಡ ನಿರ್ಣಯಗಳನ್ನು ಅಲ್ಲೇ ನಡಾವಳಿ ಮಂಡಿಸದೆ ನಿರ್ಲಕ್ಷ್ಯ ತೋರುವವರ ವಿರುದ್ಧ ಗ್ರಾಮಸ್ಥರು ಬರೋಬ್ಬರಿ ಎರಡು ಗಂಟೆಗಳ ಕಾಲ ಚರ್ಚಿಸಿ ತೆಗೆದುಕೊಂಡ ನಿರ್ಣಯಗಳನ್ನು ಸ್ವತಃ ಪಿಡಿಒ ಅವರಿಂದಲೇ ಓದಿಸಿ ಹಳೆಯ ಪದ್ಧತಿಗೆ ತಿಲಾಂಜಲಿ ಹಾಕಿದರು. ವಾರ್ಡ್ ಸಭೆಯ ನಡಾವಳಿ ವಾರ್ಡ್ ಸಭೆಯಲ್ಲಿಯೇ ಮುಗಿಸಬೇಕು. ಹೊರತು ಸಭೆ ಮುಗಿದು ಮನೆಯಲ್ಲಿಇಷ್ಟ ಬಂದ ಹಾಗೆ ಬರೆಯುವುದಕ್ಕೆ ಇರೋದಲ. ಗ್ರಾಮದ ಒಂದನೆಯ…
UN NETWORKS ಪಾವೂರು: ಗ್ರಾಮೀಣ ಭಾಗದ ಕ್ರೀಡೆ ಎನಿಸಿಕೊಂಡಿದ್ದ ಕಬಡ್ಡಿ ಇಂದು ನಗರ ಭಾಗದಲ್ಲೂ ಜನಪ್ರಿಯತೆ ಪಡೆದಿದ್ದು, ಪ್ರೋತ್ಸಾಹ ನೀಡುವಲ್ಲಿ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮುಂಚೂಣಿಯಲ್ಲಿದೆ ಎಂದು ಉಳ್ಳಾಲ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಶ್ ಭಟ್ನಗರ ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಪಾವೂರು ಸರ್ಕಾರಿ ಪ್ರೌಢಶಾಲೆಯ ಸಹಕಾರದಲ್ಲಿ ಪಾವೂರು ಶಾಲಾ ಮೈದಾದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಬಡ್ಡಿ ಎನ್ನುವುದು ಒಂದು ರೀತಿಯ ಸಾಹಸ ಕ್ರೀಡೆ, ಮಕ್ಕಳು ಶಾಲಾ ಜೀವನದಲ್ಲೇ ಶಿಕ್ಷಣಕ್ಕೆ ಆಸಕ್ತಿ ತೋರಿಸಿದಂತೆ ಕ್ರೀಡೆಯತ್ತಲೂ ಒಲವು ಹೊಂದಿರಬೇಕು. ಶಿಕ್ಷಣ ಮತ್ತು ಕ್ರೀಡೆಯ ಮೂಲಕ ಸಮಾಜಕ್ಕೆ ಸ್ಪೂರ್ತಿಯಾಗುವ ಪ್ರಯತ್ನ ನಡೆಸಬೇಕು ಎಂದು ಹೇಳಿದರು. ತಾಲೂಕು ಪಂಚಾಯಿತಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಮೋನು ಮಾತನಾಡಿ, ಮಂಗಳೂರು ತಾಲೂಕಿನಲ್ಲಿದೈಹಿಕ ಶಿಕ್ಷಕರ ಅತ್ಯುತ್ತಮ ತಂಡ ದಕ್ಷಿಣ ವಲಯದಲ್ಲಿದೆ.…
UN NETWORKS ತಲಪಾಡಿ: ಭಾರತ ಜಗತ್ತಿಗೆ ತನ್ನದೇ ಆದ ಸಾಂಸ್ಕೃತಿಕ ಕೊಡುಗೆಯನ್ನು ನೀಡಿದೆ. ಶ್ರೀರಾಮ, ಶ್ರೀಕೃಷ್ಣ ಅವತರಿಸಿದ ಪುಣ್ಯಭೂಮಿ ನಮ್ಮದು. ಭಾರತದ ಮಣ್ಣಿನಲ್ಲಿ ಅವರ ತತ್ವ ಆದರ್ಶಗಳು ಮಿಳಿತಗೊಂಡಿದೆ. ಶ್ರೀಕೃಷ್ಣನ ಆದರ್ಶಗಳು, ಗೀತೆಗಳ ಮೂಲಕ, ಶ್ಲೋಕ ಪಠಣಗಳ ಮೂಲಕ ಸಂಸ್ಕೃತಿಯ ಆಚಾರ ವಿಚಾರಗಳನ್ನು ಬಲಪಡಿಸುತ್ತದೆ. ವಿದ್ಯಾರ್ಥಿಗಳು ಶ್ರೀರಾಮ, ಶ್ರೀಕೃಷ್ಣನ ಆದರ್ಶಗಳನ್ನು ಮೈಗೂಡಿಸಿಕೊಂಡು ಭಾರತೀಯ ಸಂಸ್ಕೃತಿಯ ರಾಯಭಾರಿಗಳಾಗಬೇಕು ಎಂದು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು. ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನಲ್ಲಿ ನಡೆದ ಶ್ರೀಕೃಷ್ಣಲೀಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಡಕೆಯನ್ನು ಒಡೆಯುವ ಮೂಲಕ ವಿಟ್ಲ ಪಿಂಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶಾಲೆಯಲ್ಲಿ ಆಕರ್ಷಕ ಶೋಭಾಯಾತ್ರೆ, ಶ್ರೀ ಕೃಷ್ಣ ಮತ್ತು ರಾಧೆಯ ವೇಷಧರಿಸಿದ ವಿದ್ಯಾರ್ಥಿಗಳು, ಕಲ್ಲಡ್ಕ ಬೊಂಬೆ, ಚೆಂಡೆ, ನಾಸಿಕ್ ಬ್ಯಾಂಡ್, ಹುಲಿವೇಷಗಳು ಮೆರವಣಿಗೆಗೆ ಮೆರಗನ್ನು ನೀಡಿದವು. ಶ್ರೀಕೃಷ್ಣನ ಪ್ರಧಾನ ಪೂಜೆಯ ನಂತರ ವಿದ್ಯಾರ್ಥಿಗಳು ಶ್ರೀಕೃಷ್ಣನ ಬಾಲಲೀಲೆಗಳನ್ನು ಪ್ರತಿಬಿಂಬಿಸುವ ನೃತ್ಯ, ಹರಿಕಥೆ, ಭಾಷಣ ಹಾಗೂ ಭಜನಾ ಕಾರ್ಯಕ್ರಮಗಳನ್ನು ಪ್ರಸ್ತುತ…
UN NETWORKS ಬೋಳಿಯಾರು: ಮನುಷ್ಯ ಹುಟ್ಟಿದಾಗ ಅಳಬೇಕು, ಸತ್ತಾಗ ನಗಬೇಕು. ಆದರೆ ಜನರು ನಗುವಂತೆ ಮಾಡಬಾರದು. ಜೀವಿತಾವಧಿಯಲ್ಲಿ ಸಮಾಜಕ್ಕಾಗಿ ಉತ್ತಮ ಕೆಲಸ ಮಾಡಿದಾಗ ನಾವು ಸತ್ತಾಗ ಜನ ಅಳುತ್ತಾರೆ ಎಂದು ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ ಅಭಿಪ್ರಾಯಪಟ್ಟರು. ಬೋಳಿಯಾರು ಧರ್ಮನಗರ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿಯಿಂದ ಧರ್ಮನಗರದಲ್ಲಿ ಸೋಮವಾರ ನಡೆದ 13ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ನಡೆದ’ ಕೆಸರ್ಡ್ ಒಂಜಿ ದಿನ’ದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆವರು ಮಾತನಾಡಿದರು. ಶ್ರೀ ಕೃಷ್ಣನ ಬಾಲ ಲೀಲೆಗಳು ಆಟದಲ್ಲೇ ನಡೆಯುತ್ತಿದ್ದವು. ಪ್ರಸ್ತುತ ದಿನಗಳಲ್ಲಿ ಕ್ರೀಡಾಕೂಟ ಸಂಘಟಿಸುವ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ರಾಜೇಶ್ ಶೆಟ್ಟಿ ಪಜೀರುಗುತ್ತು ಹೇಳಿದರು. ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಸದಸ್ಯ…
UN NETWORKS ಉಳ್ಳಾಲ: ಒಟ್ಟು ವಾರ್ಡ್ 31 ಕಾಂಗ್ರೆಸ್ : 13, ಬಿಜೆಪಿ : 06 , ಎಸ್ಡಿಪಿಐ : 06 ಜೆಡಿಎಸ್ : 04, ಪಕ್ಷೇತರರು : 02 1ನೇ ವಾರ್ಡ್ ಕೋಟೆಪುರ : (ಎಸ್ಡಿಪಿಐ) ಚಲಾಯಿತ ಮತ : 863 ಆಯಿಷಾ ಮಿನಾಸ್ (ಕಾಂಗ್ರೇಸ್) : 293 ರುಕಿಯಾ ಬಾನು (ಎಸ್ಡಿಪಿಐ) : 562 ನೋಟಾ : ……………………………….. ಒಟ್ಟು ಮತ : 863 2ನೇ ವಾರ್ಡ್ ಉಳ್ಳಾಲಕೋಡಿ : (ಎಸ್ಡಿಪಿಐ ) ಚಲಾಯಿತ ಮತ : 734 ಅಸೀಯಾ (ಬಿಜೆಪಿ) : 24 ಹಸೀನಾ (ಕಾಂಗ್ರೇಸ್) : 127 ಹಸೀನಾ ಅಶ್ರಫ್ (ಜೆಡಿಎಸ್) :198 ಶಹನಾಝ್ ಅಕ್ರಮ್ ಹಸನ್ (ಎಸ್ಡಿಪಿಐ) 381 ನೋಟಾ : 4 ……………………………….. ಒಟ್ಟು ಮತ :734 3ನೇ ವಾರ್ಡ್ ಸೇನೆರೆಬೈಲು 1: (ಪಕ್ಷೇತರ ) ಚಲಾಯಿತ ಮತ : 529 ಮಹಮ್ಮದ್ ನುರುಲ್ ಹಕ್ (ಬಿಜೆಪಿ) : 4 ಹಮೀದ್ (ಕಾಂಗ್ರೇಸ್)…
UN NETWORKS ಉಳ್ಳಾಲ: ಕೇಸರೀಕರಣದ ಹೆಸರಿನಲ್ಲಿ ಹಿಂದೆ ಶಾಲೆಗಳಲ್ಲಿ ನಡೆಯುತ್ತಿದ್ದಂತಹ ಸರಸ್ವತಿ ಪೂಜೆ, ರಾಮಕೃಷ್ಣರ ಪಾಠ, ಭಜನೆಯನ್ನು ನಿಲ್ಲಿಸಿದ ಪರಿಣಾಮವಾಗಿ ಇಂದು ಮಕ್ಕಳ ಮನಸ್ಸುಗಳನ್ನು ಕೆರಳಿಸುವಂತಹ ಬ್ರೇಕ್ ಡ್ಯಾನ್ಸ್ ಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳಗಿಸುವ ಕಾರ್ಯ ಮಂದಿರದಿಂದ ಆಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರು ಶ್ರೀ ಬಾಲಕೃಷ್ಣ ಮಂದಿರ ಕುಂಪಲ ಇದರ 21 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೃಷ್ಣ ನ ವೇಷಧಾರಿಗಳಾಗಿ, ಮಕ್ಕಳ ಮನಸ್ಸಿನಲ್ಲಿ ಕೃಷ್ಣನ ಆದರ್ಶಗಳು ನೆಲೆಯೂರಲು ಮುದ್ದುಕೃಷ್ಣ ವೇಷ ಸ್ಪರ್ಧೆ ಉತ್ತಮ ವೇದಿಕೆ. ಮೂಢನಂಬಿಕೆಯವರು ಹಿಂದೂಗಳಲ್ಲ. ಚರಾಚರ ಜೀವಿಗಳಾಗಿ ಭಗವಂತನ ಕಂಡವರು. ಪ್ರತಿಯೊಬ್ಬರಲ್ಲೂ ಭಗವಂತನಿದ್ದಾನೆ. ಆಧ್ಯಾತ್ಮ ಚಿಂತನೆ ಬೆಳಕನ್ನು ಮಕ್ಕಳ ಮನಸ್ಸಿನಲ್ಲಿ ಹಚ್ಚುವ ಮೂಲಕ ಅವರೊಳಗಿನ ಭಗವಂತನ ಕಾಣಲು ಸಾಧ್ಯ. ಇಂದಿನ ಜೀವನ ಶೈಲಿ ಫ್ಲಾಟಲ್ಲಿ ಇರುವ ಕಾರಣ ತುಳಸೀಕಟ್ಟೆಯೂ ಇಲ್ಲ, ಮನೆಗಳಲ್ಲಿ ಭಜನೆಯೂ ಇಲ್ಲವಾಗಿದೆ. ಶಾಲೆಗಳಲ್ಲಿ…
UN NETWORKS ಉಳ್ಳಾಲ: ಚರಂಡಿ ಅವ್ಯವಸ್ಥೆಯಿಂದಾಗಿ ದೇರಳಕಟ್ಟೆಯ ಕಾನಕ್ಕೆರೆ ಪ್ರದೇಶದ ಸುಮಾರು 20 ಬಾವಿಗಳ ನೀರು ಕಲುಷಿತಗೊಂಡಿರುವ ಘಟನೆ ನಡೆದಿದ್ದು, ಇದರಿಂದ ಪ್ರದೇಶದ ಮನೆಮಂದಿ ಕುಡಿಯುವ ನೀರಿನ ತೊಂದರೆಗೆ ಒಳಗಾಗಿದ್ದು, ಈ ಕುರಿತು ಜಿಲ್ಲಾಡಳಿತ ಹಾಗೂ ಸ್ಥಳೀಯ ಪಂಚಾಯಿತಿಗೂ ಗ್ರಾಮಸ್ಥರು ದೂರು ನೀಡಿದ್ದಾರೆ. ದೇರಳಕಟ್ಟೆ ಜಂಕ್ಷನ್ನಿನಲ್ಲಿ ಎರಡು ವರ್ಷಗಳ ಹಿಂದೆ ನೆಲೆನಿಂತ ಸಿದ್ಧಿ ವ್ಯೂ ಅನ್ನುವ ಖಾಸಗಿ ಕಟ್ಟಡದಿಂದ ಚರಂಡಿ ಅವ್ಯವಸ್ಥೆ ನಿರ್ಮಾಣವಾಗಿದೆ. ಇದರಿಂದ 100 ವರ್ಷಗಳಿಂದ ಬಾಳುತ್ತಿರುವ ಕಾನೆಕೆರೆ ಪ್ರದೇಶದ ಜನ ತೊಂದರೆಗೀಡಾಗುತ್ತಿದ್ದಾರೆ. ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಹೊಟೇಲು, ಅಂಗಡಿಗಳು ಹಾಗೂ ಲಾಡ್ಜಿಂಗ್ ವ್ಯವಸ್ಥೆ ಇದೆ. ಆದರೆ ಕಟ್ಟಡದ ಮಾಲೀಕರು ಚರಂಡಿ ನಿರ್ಮಿಸಿದ್ದರೂ, ತೈಲದಂತೆ ರಾಸಾಯನಿಕ ಹರಿದು ಸ್ಥಳೀಯ ಬಾವಿಗಳನ್ನು ಸೇರುತ್ತಿದೆ. ಇದರಿಂದ ಬಾವಿಗಳಲ್ಲಿನ ನೀರು ಕುಡಿಯಲು ಅಯೋಗ್ಯವಾಗಿದೆ. ವರ್ಷದಿಂದ ಸಮಸ್ಯೆ ಉಲ್ಬಣವಾಗಿದ್ದು, ಜಿಲ್ಲಾಡಳಿತ ಹಾಗೂ ಸ್ಥಳೀಯ ಬೆಳ್ಮ ಗ್ರಾಮ ಪಂಚಾಯಿತಿಗೆ ದೂರು ನೀಡುತ್ತಾ ಬಂದಿದ್ದೇವೆ . ಆದರೂ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ ಅನ್ನುವ ಆರೋಪ ಸ್ಥಳೀಯರದ್ದಾಗಿದೆ. ಪೈಪ್ ಮುಚ್ಚಿದ ಪಂಚಾಯತ್…
UN NETWORKS ಉಳ್ಳಾಲ: ಜೆಡಿಎಸ್ನ ಚುನಾವಣೆ ಪ್ರಣಾಳಿಕೆ ಸ್ಪಷ್ಟವಾಗಿದ್ದ ಕಾರಣದಿಂದಲೇ ಚುನಾವಣೆಯಲ್ಲಿ ಉಳ್ಳಾಲದ ಮತದಾರರು ಜೆಡಿಎಸ್ನ ನಾಲ್ಕು ದಕ್ಷ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕೆಲವೇ ವಾರ್ಡ್ಗಳಲ್ಲಿ ಸ್ಪರ್ಧಿಸದ್ದರೂ 10ಕಡೆ ಗೆಲುವಿನ ಹಂತಕ್ಕೆ ಬಂದು ಬೆರಳೆಣಿಕೆಯ ಮತಗಳ ಅಂತರದಲ್ಲಿ ಆಭ್ಯರ್ಥಿಗಳು ಸೋಲನ್ನು ಕಂಡರೂ ಜನತೆ ನಮ್ಮ ಪರವಾಗಿದ್ದಾರೆ ಎಂಬುದು ಸಾಬೀತಾಗಿದ್ದು ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆ ಆಗಲಿದೆ ಎಂದು ಜೆಡಿಎಸ್ ಕ್ಷೇತ್ರ ಚುನಾವಣಾ ಸಂಚಾಲಕ ನಝೀರ್ ಉಳ್ಳಾಲ ಹೇಳಿದರು. ಚುನಾವಣಾ ಫಲಿತಾಂಶದ ಬಳಿಕ ತೊಕ್ಕೊಟ್ಟು ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಹಳ ಸಂತಸದಿಂದ ಮಾತನಾಡಿದ ಆವರು ಕಡಿಮೆ ಮತಗಳ ಅಂತರದ ಸೋಲು ನಮ್ಮದಾಗಿದೆ ಎಂಬುದುಕ್ಕೆ ಅರ್ಥ ಮುಂದಕ್ಕೆ ನಾವು ಗೆಲುವು ಸಾಧಿಸಲಿದ್ದೇವೆ ಎಂಬ ಸೂಚನೆಯಾಗಿದೆ. ಜನಪರ ಆಡಳಿತ ಕೊಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಿದ್ದೇವೆ. ತ್ಯಾಜ್ಯ, ಘನತ್ಯಾಜ್ಯ ಘಟಕ ನಿರ್ಮಾಣ, ಭ್ರಷ್ಟಾಚಾರ ಮುಕ್ತ ಆಡಳಿತ ದೂರ ಮಾಡಿ ಪಾರದರ್ಶಕ ಆಡಳಿತ ಕೊಡಲಿದ್ದೇವೆ. ಹತ್ತು ವರ್ಷಗಳ ಬಳಿಕ ಜನತಾದಳದ ಅಭ್ಯರ್ಥಿ ಆಯ್ಕೆಯಾಗಿದ್ದೇವೆ. ಚುನಾವಣೆ…

