Author: UllalaVani

Kannada News From Coastal Karnataka

UN NETWORKS ದೇರಳಕಟ್ಟೆ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಇದರ ದೇರಳಕಟ್ಟೆ ಸೆಕ್ಟರ್ ವ್ಯಾಪ್ತಿಯ ಕಾನೆಕೆರೆ ಶಾಖೆಯ ಮಹಾಸಭೆ ಮುಹಮ್ಮದ್ ರಫೀಖ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಇಸ್ಹಾಖ್ ಝುಹುರಿ ಸಭೆಯನ್ನು ಉದ್ಘಾಟಿಸಿದರು. 2018-19ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಚುನಾವಣಾ ವೀಕ್ಷಕರಾಗಿ ಸೆಕ್ಟರ್ ಎಸ್. ಬಿ. ಎಸ್ ಕನ್ವಿನರ್ ಅಲ್ತಾಫ್ ಶಾಂತಿಬಾಗ್ ಹಾಗೂ ಅಲ್ತಾಫ್ ಬದ್ಯಾರ್ ಆಗಮಿಸಿದ್ದರು.ನೂತನ ಅಧ್ಯಕ್ಷರಾಗಿ ಸಾಜಿದ್ ಹಿಮಾಮಿ, ಪ್ರಧಾನ ಕಾರ್ಯದರ್ಶಿ ಇಫಾಝ್ ತಮೀಂ, ಕೋಶಾಧಿಕಾರಿ‌ ಅಹ್ಮದ್ ಕಬೀರ್, ಉಪಾಧ್ಯಕ್ಷರಾಗಿ‌ ಇರ್ಷಾದ್ ಕೆ. ಎ, ಜೊತೆ ಕಾರ್ಯದರ್ಶಿಗಳಾಗಿ ಶಫೀಖ್ ಕೆ, ಅವರನ್ನು ಆಯ್ಕೆಮಾಡಲಾಯಿತು. ಸಭೆಯಲ್ಲಿ‌ ಎಸ್.ವೈ.ಎಸ್ ಅಧ್ಯಕ್ಷರು ಬಿ. ಕೆ. ಮುಹಮ್ಮದ್, ಎಸ್.ವೈ.ಎಸ್ ಸದಸ್ಯರಾದ ಉಮರ್,‌ ಹಸೈನಾರ್, ಹೈದರ್ ಮತ್ತಿತ್ತರು ಉಪಸ್ಥಿತರಿದ್ದರು. ಇಫಾಝ್ ತಮೀಂ ಸ್ವಾಗತಿಸಿ, ನಿರೂಪಿಸಿದರು.

Read More

UN NETWORKS ಮಂಗಳೂರು: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ವಾರ್ಷಿಕ ಕೌನ್ಸಿಲ್ ತಾಜುಲ್ ಉಲಮಾ ಸುನ್ನೀ ಸೆಂಟರ್, ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ಕಛೇರಿಯಲ್ಲಿ ಶಾಖಾ ಅಧ್ಯಕ್ಷ ನವಾಝ್ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಖಾ ಕಾರ್ಯದರ್ಶಿ ಮುಹಾಝ್ ಇಸ್ಮಾಯಿಲ್ ಸ್ವಾಗತಿಸಿ, ಸಭೆಗೆ ಚಾಲನೆ ನೀಡಿದರು. ಪ್ರಸ್ತುತ ಕೌನ್ಸಿಲ್ಗೆ ದ.ಕ ಜಿಲ್ಲಾ ಎಸ್ಸೆಸ್ಸೆಫ್ ನಾಯಕರಾದ ಸೆಯ್ಯಿದ್ ಖುಬೈಬ್ ತಂಙಳ್, ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಸಖಾಫಿ, ಸೆಕ್ಟರ್ ಅಧ್ಯಕ್ಷ ಮುಸ್ತಫಾ ಮಾಸ್ಟರ್, ಸೆಕ್ಟರ್ ಎಲೆಕ್ಷನ್ ಆಫೀಸರ್ ಸಿರಾಜ್ ಅಕ್ಕರಕೆರೆ ಮತ್ತು ಮುಝಮ್ಮಿಲ್ ಉಸ್ತಾದ್ ಸಭೆಯಲ್ಲಿದ್ದರು. ನಂತರ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಮ್ರಾನ್ , ಉಪಾಧ್ಯಕ್ಷರುಗಳಾಗಿ ಹಸೈನಾರ್ ಉಸ್ತಾದ್, ಶಫೀಕ್, ಖಲೀಲ್, ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್, ಜೊತೆ ಕಾರ್ಯದರ್ಶಿಯಾಗಿ ವಾನಿಶ್, ಸೌಹಾನ್, ಅಫ್ರೀದ್, ಕೋಶಾಧಿಕಾರಿಯಾಗಿ ರಮೀಝ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಾಝ್, ಹೈಸ್ಕೂಲ್ ಕನ್ವೀನರಾಗಿ ಅಶ್ವಾನ್ , ಶಿಹಾನ್ ರವರನ್ನು ಒಳಗೊಂಡ 25 ಕಾರ್ಯಕಾರಿ ಸಮಿತಿಗಳನ್ನು ಆಯ್ಕೆ ಮಾಡಲಾಯಿತು. ನೂತನ…

Read More

UN NETWORKS ಕೊಣಾಜೆ: ಅತಿಯಾದ ಚಾಕಲೇಟ್, ಬಿಸ್ಕತ್ , ಟೂತ್ ಪೇಸ್ಟ್ ಬಳಸುವುದರಿಂದ ಮಕ್ಕಳಲ್ಲಿ ಖಿನ್ನತೆ, ಅನಾರೋಗ್ಯ ಹೆಚ್ಚಾಗುತ್ತಿದೆ. ಇದರಿಂದಾಗಿ ದೇಹದಲ್ಲಿ ಆಕ್ಸಿಟಾಸಿನ್ ಪ್ರಮಾಣವೂ ಜಾಸ್ತಿಯಾಗಿ ಜೀವನದಲ್ಲಿ ದುರ್ನಡತೆಗಳೇ ಹೆಚ್ಚಾಗುತ್ತಿದೆ ಎಂದು ವೆಲೆನ್ಶಿಯಾ ತ್ರಿವೇಣಿ ಆಯುರ್ವೇದ ಆಸ್ಪತ್ರೆಯ ಬ್ರದರ್ ಎಲ್ದೋ ತ್ರಿವೇಣಿ ಎಚ್ಚರಿಕೆ ನೀಡಿದರು. ಧಕ್ಷ ಯುವಬಳಗ ಗ್ರಾಮಚಾವಡಿ, ಮುಲಾರ ಬಜರಂಗದಳ ಪಾಂಚಜನ್ಯ ಶಾಖೆ , ರಾಮಾಂಜನೇಯ ವ್ಯಾಯಾಮ ಶಾಲೆ ಅಣ್ಣೆರೆಪಾಲು ಮತ್ತು ಮಾಧ್ಯಮ ಕೇಂದ್ರ ತೊಕ್ಕೊಟ್ಟು ಇವರ ಸಹಕಾರದೊಂದಿಗೆ ಕೊಣಾಜೆ ಪರಂಡೆಯ ಯುಬಿಎಂಸಿ ಶಾಲೆಯಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಆರನೇ ದಿನದಂದು ಪ್ರಗತಿಪರ ಕೃಷಿಕ ಹಾಗೂ ಸ್ಥಳೀಯ ಮುಖಂಡ ಸುದರ್ಶನ ಭಟ್ ಇವರ ಮನೆ ಆವರಣದಲ್ಲಿ ಶುಕ್ರವಾರ ನಡೆದ ವೆಲೆನ್ಶಿಯಾ ತ್ರಿವೇಣಿ ಆಯುರ್ವೇದ ಆಸ್ಪತ್ರೆ ವತಿಯಿಂದ ಪಾರಂಪರಿಕ ಔಷಧ ಆಧಾರಿತ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಮಾಹಿತಿ ನೀಡಿ ಮಾತನಾಡಿದರು. ಶೇ.20 ಯುವ…

Read More

UN NETWORKS ಉಳ್ಳಾಲ: ಜಮೀಯ್ಯತುಲ್ ಫಲಾಹ್ ವಿಧ್ಯಾಸಂಸ್ಥೆ ಯ ಅಧೀನದಲ್ಲಿರುವ ಗ್ರೀನ್ ವೀವ್ ಪ್ರಾಥಮಿಕ,ಪ್ರೌಢ, ಹಾಗೂ ಪದವಿ ಪೂರ್ವ ಕಾಲೇಜು ಇದರ ವಾರ್ಷಿಕ ಕ್ರೀಡಾಕೂಟ ಇಂದು ಉಧ್ಘಾಟನೆಗೊಂಡಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಿಯ್ಯತುಲ್ ಫಲಾಹ್ ದ.ಕ ಹಾಗೂ ಉಡುಪಿ ಜಿಲ್ಲೆ ಇದರ ಕೋಶಾಧಿಕಾರಿಯಾದ ಜನಾಬ್ ಇಬ್ರಾಹಿಂ ಕೋಡಿಜಾಲ್ ವಹಿಸಿದ್ದರು, ಎ.ಬಿ. ಹಸೈನಾರ್ ರವರು ಕ್ರೀಡಾಕೂಟ ಉದ್ಘಾಟನೆಗೈದರು, ಜಮಿಯ್ಯತುಲ್ ಫಲಾಹ್ ಇದರ ಆಡಳಿತಾಧಿಕಾರಿ ಶಮೀರ್ ಕುದ್ರೋಳಿ ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ ಇದರ ಅಧ್ಯಕ್ಷರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಿರಾಜ್ ಅಡ್ಕರೆಪಡ್ಪು ಕ್ರೀಡಾಕೂಟವನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಗ್ರೀನ್ ವೀವ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಿಯಾದ ಎವ್ಲಿನ್ ಡಿ ಐಮನ್, ಸಮಾಜ ಸೇವಕರಾದ ಮಹಮ್ಮದ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು ಹಾಜರಿದ್ದರು, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಮುಸ್ತಫಾ ರವರು ವಂದನೆ ಸ್ವೀಕರಿಸಿದರು. ಉಪಾಧ್ಯಕ್ಷೆಯಾದ ಸ್ನೇಹದೀಪ ಸಂಚಾಲಕಿ ತಬಸ್ಸುಂ ರವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಪಂಚಾಯತ್ ಸದಸ್ಯರಾದ ತಾಹಿರಾ ಹಾಗೂ ಪ್ಲೇವಿ…

Read More

UN NETWORKS ಉಳ್ಳಾಲ: ವ್ಯೆದ್ಯಕೀಯ ಸರ್ಜಿಕಲ್ ನರ್ಸಿಂಗ್ ವಿಭಾಗ ಹಾಗೂ ಆಕ್ಟ್ಸ್ -ಯೆನ್ ವತಿಯಿಂದ ಇಸಿಜಿ ಇಂಟರ್ಪ್ರೆಟೇಷನ್ಸ್ – ಬಿಯಾಂಡ್ ದಿ ಬೇಸಿಕ್ಸ್ ಎಂಬ ಪ್ರಾದೇಶಿಕ ಕಾರ್ಯಾಗಾರವನ್ನು ನಡೆಸಲಾಯಿತು. ಯೇನೆಪೊಯ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಸಿ. ವಿ. ರಘುವೀರ್, ಯೇನೆಪೊಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಗಂಗಾಧರ ಸೋಮಯಾಜಿ, ಯೇನೆಪೊಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಲೀನ ಕೆ .ಸಿ ಹಾಗೂ ಆಕ್ಟ್ಸ್ -ಯೆನ್ ಸಂಯೋಜಕ ಡಾ. ಮೇಘನಾ ಮುಕುಂದ್, ವ್ಯೆದ್ಯಕೀಯ ಸರ್ಜಿಕಲ್ ನರ್ಸಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಶಶಿಕುಮಾರ್ ಜವದಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಯೇನೆಪೊಯ ವ್ಯೆದ್ಯಕೀಯ ಸರ್ಜಿಕಲ್ ನರ್ಸಿಂಗ್ ವಿಭಾಗದ ಸಹಾಯಕ ಪ್ರೊ. ಗಿರೀಶ್ ಜಿ. ಆರ್ ಸ್ವಾಗತಿಸಿದರು. ಸಂತೋಷ್ ಥೋಮಸ್ ವಂದಿಸಿದರು. ಕಾರ್ಯಗಾರದಲ್ಲಿ 94ಮಂದಿ ಭಾಗವಹಿಸಿದರು.

Read More

UN NETWORKS ಉಳ್ಳಾಲ: ದಿನನಿತ್ಯ ಸವಾಲುಗಳನ್ನು ಎದುರಿಸುವ ಪ್ರಾಂಶುಪಾಲರು ಕಾರ್ಯಗಾರದಲ್ಲಿ ಭಾಗವಹಿಸುವ ಮೂಲಕ ಆಧುನಿಕ ಶಿಕ್ಷಣ ವ್ಯವಸ್ಥೆಯ ಕುರಿತು ತಿಳುವಳಿಕೆಯನ್ನು ಪಡೆದು ಆತ್ಮವಿಶ್ವಾಸ ಹೆಚ್ಚಿಸಲು ಸಾಧ್ಯ ಎಂದು ಮಂಗಳೂರು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕಿ ಎಲ್ವೀರಾ ಫಿಲೊಮಿನಾ ಅಭಿಪ್ರಾಯಪಟ್ಟರು. ಅವರು ಕ್ಷೇಮ ಆಸ್ಪತ್ರೆ ಚಿಂತನ ಸಭಾಂಗಣದಲ್ಲಿ ಗುರುವಾರ ನಡೆದ ` ಶಿಕ್ಷಣದಲ್ಲಿ ಸವಾಲುಗಳು ಮತ್ತು ಅವಕಾಶಗಳು’ ವಿಚಾರದ ಕುರಿತು ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಿಗಾಗಿ ನಿಟ್ಟೆ ವಿ.ವಿ ಹಮ್ಮಿಕೊಂಡ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತಲೇ ಬಂದಿದೆ. ಪ್ರಾಂಶುಪಾಲರೇ ಎಲ್ಲಾ ವಿಚಾರಗಳಲ್ಲಿಯೂ ಜವಾಬ್ದಾರರಾಗಿರುತ್ತಾರೆ. ಶಿಕ್ಷಣ ವ್ಯವಸ್ಥೆಯ ಪ್ರತಿವಿಚಾರದಲ್ಲೂ ಜ್ಞಾನ ಅಗತ್ಯ. ಪ್ರಸ್ತುತ ವರ್ಷದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಅನ್ನುವ ನೀತಿ ಸರಕಾರದಿಂದ ಜಾರಿಯಾಗಿದೆ. ಜಿಲ್ಲೆಯ ಮುತ್ತೂರು, ಪುಂಜಾಲಕಟ್ಟೆ, ಕೈಯ್ಯೂರು, ಕನ್ಯಾನ, ಬೆಳ್ಳಾರೆ ಕಾಲೇಜುಗಳಿಗೆ ಜಾರಿಯಾಗಿದೆ. ಪ್ರಾಂಶುಪಾಲರ ಕರ್ತವ್ಯ ಸಂಧಿಗ್ದ ಸ್ಥಿತಿಯಲ್ಲಿ ಬಂದು ನಿಂತಿದೆ. ವಿದ್ಯಾರ್ಥಿಗಳಿಗೆ ಹೊಡೆದು-ಬಡಿದು ಬುದ್ಧಿ ಕಲಿಸುವಂತಿಲ್ಲ. ಆದರೂ ಅವರನ್ನು…

Read More

UN NETWORKS ಮಂಗಳೂರು: ಕರಾವಳಿ ಕರ್ನಾಟಕದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನ ನಾಡು ನುಡಿ ವೈಭವದ ರತ್ನೋತ್ಸವ ಡಿಸೆಂಬರ್ 15 ರಂದು ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಗ್ರೀನ್ ಗ್ರೌಂಡ್ ನಲ್ಲಿ ನಡೆಯಲಿದೆ.ದೇರಳಕಟ್ಟೆ ವಿದ್ಯಾರತ್ನ ವಿದ್ಯಾಸಂಸ್ಥೆಯು ಸಂಸ್ಥಾಪಕ ಆಡಳಿತ ನಿರ್ದೇಶಕ ರವೀಂದ್ರ ಶೆಟ್ಟಿ ಉಳಿದೊಟ್ಟು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು. ದೇರಳಕಟ್ಟೆ ಬೆಳ್ಮ ಪಂಚಾಯತ್ ವಠಾರದಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಸಾಂಸ್ಕೃತಿಕ ದಿಬ್ಬಣ ಹೊರಡಲಿದ್ದು,ವಿಜಯ ಕೃಷ್ಣಪ್ಪ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.ರತ್ನ ಎಜ್ಯುಕೇಶನ್ ನ ಟ್ರಸ್ಟಿ ರತ್ನಾವತಿ ಕೆ.ಶೆಟ್ಟಿ ಅವರು ರತ್ನೋತ್ಸವದ ದ್ವಜಾರೋಹಣ ನೆರವೇರಿಸಲಿದ್ದಾರೆ.ರತ್ನೋತ್ಸವದ ಉದ್ಘಾಟಕರಾಗಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಆಗಮಿಸಲಿದ್ದು,ಹೆಸರಾಂತ ಸಾಹಿತಿ,ಕಥೆಗಾರ ನಾ.ಡಿಸೋಜ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಜೊತೆಗೆ ಕವಿ ಕಾವ್ಯ,ಗಾನ,ಕುಂಚ,ಜನಪದ ಕುಣಿತ,ಯಕ್ಷಗಾನ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ ಎಂದು ರವೀಂದ್ರ ಶೆಟ್ಟಿ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಸೌಮ್ಯ ಆರ್ ಶೆಟ್ಟಿ,ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ,ಶಾಲಾ…

Read More

UN NETWORKS ಮುಡಿಪು: 2019ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಆಗಲಿ ಎಂದು ಹಾರೈಸಿ ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಷಷ್ಠಿ ಮಹೋತ್ಸವದ ಸಂದರ್ಭ ಸ್ಥಳೀಯ ಬಿಜೆಪಿ ಯುವನಾಯಕ ಪ್ರಧಾನಿ ಹೆಸರಿನಲ್ಲಿ ಪೂಜೆ ಸಲ್ಲಿಸಿದ್ದಾರೆ. ನರೇಂದ್ರ ದಾಮೋದರ ದಾಸ ಮೋದಿ ಅವರ ಹೆಸರಿನಡಿ ಅನುರಾಧ ನಕ್ಷತ್ರದ ಹೆಸರಿನಲ್ಲಿ ಪೂಜೆಯನ್ನು ಸಲ್ಲಿಸಿದ್ದಾರೆ. ಸ್ಥಳೀಯ ಬಿಜೆಪಿ ನಾಯಕ ಹರೀಶ್ ಬಂಗೇರ ಪೂಜೆ ಸಲ್ಲಿಸಿದ್ದಾರೆ.

Read More

UN NETWORKS ಅಸೈಗೋಳಿ: ಅಸೈಗೋಳಿ ಶ್ರೀ ಧರ್ಮಶಾಸ್ತ ಅಯ್ಯಪ್ಪನ ನೂತನ ವಿಗ್ರಹದ ಎರಕ ಹೊಯ್ಯುವ ಹಾಗೂ ನೂತನ ನಾಗನಕಟ್ಟೆಯ ಭೂಮಿಪೂಜೆ ಮತ್ತು 32ನೇ ವಾರ್ಷಿಕೋತ್ಸವ ಭಾನುವಾರ ನಡೆಯಲಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗಣಹೋಮ, ಭಜನಾ ಸಂಕೀರ್ತನೆ, ಅಯ್ಯಪ್ಪ ಸ್ವಾಮಿಯ ನೂತನ ವಿಗ್ರಹದ ಎರಕ, ಧಾರ್ಮಿಕ ಸಭೆ, ಮಹಾಪೂಜೆ, ಸಂಕ್ರಮಣ ಪೂಜೆ ನಡೆಯಲಿದೆ. ಸಭಾ ಕಾರ್ಯಕ್ರಮ ವಿಶ್ವನಾಥ ಕಾಯರ್‍ಪಳಿಕೆ ಉದ್ಘಾಟಿಸಲಿದ್ದಾರೆ. ಸಚಿವ ಯು.ಟಿ.ಖಾದರ್, ಪದ್ಮನಾಭ ಕೋಟ್ಯಾನ್, ಜಿತೇಂದ್ರ ಶೆಟ್ಟಿ, ಮಿಥುನ್ ರೈ, ಚಂದ್ರಹಾಸ ಉಳ್ಳಾಲ್, ವಿಶ್ವಾಸ್ ದಾಸ್, ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರ್‍ಗುತ್ತು, ಹರೀಶ್ ಕುತ್ತಾರ್, ಅನಿಲ್‍ದಾಸ್, ಶಂಕರ್ ನಾರಾಯಣ ಭಟ್, ಸತೀಶ್ಚಂದ್ರ ಸೆಟ್ಟಿ ಕುಡಾಗುತ್ತು, ಸುರೇಶ್ ಭಟ್ನಗರ, ಅಶೋಕ್ ಭಂಡಾರಿ, ಮಂಜುನಾಥ ಆಳ್ವ, ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ರಘುರಾಮ ಕಾಜವ, ಸಂತೋಷ್ ಶೆಟ್ಟಿ, ಬಾಸ್ಕರ ಕೆ., ಶೌಕತ್ ಅಲಿ, ರಾಜಾರಾಮ ರೈ, ಹೇಮಂತ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಂದಿರದ ಸಂಚಾಲಕ ಶ್ರೀನಿವಾಸ ಶೆಟ್ಟಿ ಪುಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

UN NETWORKS ತೊಕ್ಕೊಟ್ಟು: ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರ ಸಿಎಲ್ ಸಿ ಪೆರ್ಮನ್ನೂರು ಸಮುದಾಯದ 43 ನೇ ವಾರ್ಷಿಕೋತ್ಸವ ಸಮಾರಂಭ ಬಲಿಪೂಜೆ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ಫಾ.ಜೆ.ಬಿ ಸಲ್ದಾನ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹಾಯಕ ಗುರು ಫಾ.ಸ್ಟ್ಯಾನಿ ಪಿಂಟೋ,ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಮೆಲ್ವಿನ್ ಡಿಸೋಜ, ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಇದೇ ಸಂದರ್ಭ ಕೆ ಎಸ್ ಆರ್ ಟಿಸಿ ಸಂಸ್ಥೆಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉತ್ತಮ ನಿರ್ವಾಹಕ ಎಂಬ ಪ್ರಶಂಸೆ ಹೊಂದಿರುವ ಉರ್ಬನ್ ಅಪೋಸ್ ಎಂಬವರನ್ನು ಸನ್ಮಾನಿಸಲಾಯಿತು. ಸಿ.ಎಲ್ ಸಿ ಅಧ್ಯಕ್ಷ ಜೋಸೆಫ್ ಡಿಸೋಜ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಜೋಸೆಫ್ ಡೇಸಾ ವಂದಿಸಿದರು. ಮೌರೀಸ್ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.

Read More