UN NETWORKS ದೇರಳಕಟ್ಟೆ: ಪುಸ್ತಕಗಳ ಅಧ್ಯಯನದ ಜೊತೆಗೆ ಕೌಶಲ್ಯ ವೃದ್ಧಿಯನ್ನು ವೈದ್ಯರು ನಡೆಸುವುದರ ಮೂಲಕ ವೈದ್ಯ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಚೆನ್ನೈ ಶ್ರೀ ರಾಮಚಂದ್ರ ಉನ್ನತ ವ್ಯಾಸಾಂಗ ಹಾಗೂ ಸಂಶೋಧನಾ ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿ ಡಾ|.ಸುಬ್ರಹ್ಮಣ್ಯ ರಂಗಸ್ವಾಮಿ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಸೋಮವಾರ ಜರಗಿದ ದಿ| ಡಾ. ಅಮರನಾಥ ಹೆಗ್ಡೆ ಸ್ಮರಣಾರ್ಥ ಕ್ಲಿನಿಕಲ್ ರೀಸನಿಂಗ್ : ಪ್ರಿನ್ಸಿಪಲ್ಸ್ ಆಂಡ್ ಪ್ರಾಕ್ಟಿಸ್’ ವಿಚಾರದ ಕುರಿತು ದತ್ತಿ ಉಪನ್ಯಾಸ ನೆರವೇರಿಸಿ ಮಾತನಾಡಿದರು. ಜ್ಞಾನ ಸಂಪಾದನೆಗೆ ಪುಸ್ತಕ ಓದುವುದು ಸರಿಯಾದ ಕ್ರಮ. ಆದರೆ ವೈದ್ಯ-ರೋಗಿಗಳ ಜೊತೆಗಿನ ಉತ್ತಮ ಬಾಂಧವ್ಯವನ್ನು ಕಾಪಾಡಲು ಕ್ಷೇತ್ರದಲ್ಲಿ ಕೌಶಲ್ಯವೃದ್ಧಿಯನ್ನು ನಡೆಸಬೇಕಿದೆ. ಔಷಧ ವಿಜ್ಞಾನವಲ್ಲ, ಅನಿಶ್ಚಿತತೆಯ ಕಲೆಯಾಗಿದೆ. ಪರಿಣತರನ್ನು ಎಲ್ಲಾ ಸಮಯದಲ್ಲೂ ಒಪ್ಪಿಕೊಳ್ಳಬೇಕೆಂದೇನಿಲ್ಲ,. ವೃತ್ತಿ ಜೀವನದ ಅನುಭವ ಪರಿಣತರನ್ನಾಗಿಸುತ್ತದೆ ಎಂದರು. ನಿಟ್ಟೆ ವಿ.ವಿ ಸಹಕುಲಾಧಿಪತಿ ಪ್ರೊ.ಕೆ.ಶಾಂತಾರಾಮ ಶೆಟ್ಟಿ ಮಾತನಾಡಿ ಡಾ| ಅಮರನಾಥ ಹೆಗ್ಡೆ ಅಗಲುವಿಕೆ ಇಡೀ ಮಂಗಳೂರಿಗರಿಗೆ ತುಂಬಲಾರದ ನಷ್ಟವಾಗಿತ್ತು. ವೈದ್ಯ ವೃತ್ತಿಯ ಜೊತೆಗೆ ಮಾನವೀಯತೆಯ…
Author: UllalaVani
UN NETWORKS ದೇರಳಕಟ್ಟೆ: ಪ್ರಪಂಚದಾದ್ಯಂತ ಬಹಳಷ್ಟು ಸಂಖ್ಯೆಯಲ್ಲಿ ಕಲಾ ಮಾಧ್ಯಮಗಳಿದ್ದರೂ ಪ್ರಖರ ಮಾಧ್ಯಮವಾಗಿರುವ ಸಾಹಿತ್ಯಕ್ಕೆ ಕೊಡುವ ಗೌರವ ಎಲ್ಲಕ್ಕಿಂತ ಮಿಗಿಲಾಗಿದೆ ಎಂದು ಖ್ಯಾತ ಕಾದಂಬರಿಕಾರ, 80ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ನಾ. ಡಿಸೋಜ ಹೇಳಿದರು. ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ಹಾಗೂ ದೇರಳಕಟ್ಟೆಯ ರತ್ನ ಎಜ್ಯುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಗ್ರೀನ್ ಗ್ರೌಂಡ್ ನಲ್ಲಿ ನಡೆದ ನಾಡು ನುಡಿ ವೈಭವದ ರತ್ನೋತ್ಸವ- 2018 ಕರಾವಳಿ ಕರ್ನಾಟಕದ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನದ ಸಮಾರೋಪದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.ಸಾಹಿತಿ ನೆಲೆಯಲ್ಲಿ ನನಗೆ ಸಿಕ್ಕಿರುವ ಗೌರವ ಸನ್ಮಾನ ಎಲ್ಲವೂ ಕನ್ನಡ ಭುವನೇಶ್ವರಿಗೆ ಸಂದ ಗೌರವ. ಸಾಹಿತ್ಯದ ವಿಶೇಷತೆ ಭಾಷೆಯನ್ನು ಬಳಸಿಕೊಳ್ಳುವುದರಲ್ಲಿ ಅಡಗಿದೆ. ಲೇಖಕನಾದವ ಸಮಾಜದ ಒಳಿತಿಗಾಗಿ ದುಡಿಯಬೇಕು ಎಂದರು. ಸಾಹಿತ್ಯ ಮನುಷ್ಯನ ಬದುಕು ಕಾಪಾಡುವ ಪ್ರಯತ್ನ ಮಾಡುತ್ತದೆ. ನಾವು ಬಳಸುವ ಶಬ್ಧದ ಬಳಕೆಯಿಂದ ಒಬ್ಬ ವ್ಯಕ್ತಿ, ಸಮಾಜದ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಬಹುದು, ಬೀರಿಸಬಹುದು.…
UN NETWORKS ಅಸೈಗೋಳಿ: ಶಬರಿಮಲೆಯಲ್ಲಿ ಹಿಂದಿನಿಂದಲೂ ವಿಶೇಷ ಸಂಸ್ಕಾರ, ಸಂಸ್ಕೃತಿ ಇದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ಮಹಿಳೆಯರೇ ವಿರೋಧಿಸುವ ಮೂಲಕ ಕ್ಷೇತ್ರದ ಪಾವಿತ್ರ್ಯತೆ ಕಾಪಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗುರುಸ್ವಾಮಿ ವಿಶ್ವನಾಥ ಕಾಯರ್ ಪಳಿಕೆ ಅಭಿಪ್ರಾಯಪಟ್ಟರು. ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಭಾನುವಾರ ನಡೆದ ಶ್ರೀ ಧರ್ಮಶಾಸ್ತ ಅಯ್ಯಪ್ಪನ ನೂತನ ವಿಗ್ರಹದ ಎರಕ ಹೊಯ್ಯುವ ಕಾರ್ಯಕ್ರಮ, ನೂತನ ನಾಗನಕಟ್ಟೆಯ ಭೂಮಿಪೂಜೆ ಹಾಗೂ 32ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಅಸೈಗೋಳಿ ಅಯ್ಯಪ್ಪ ಸ್ವಾಮಿ ಮಂದಿರಕ್ಕೆ ಈಗಾಗಲೇ 15 ಲಕ್ಷ ಅನುದಾನ ನೀಡಲಾಗಿದೆ, ಇನ್ನಷ್ಟು ಅನುದಾನ ನೀಡುವ ಇಚ್ಛೆ ಇತ್ತಾದರೂ ಕ್ಷೇತ್ರದ ವಿವಿದ ಕಡೆ ದೇವಸ್ಥಾನ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಹೆಚ್ಚಿನ ಅನುದಾನ ನೀಡುವುದು ಅಸಾಧ್ಯ ಎನಿಸಿದೆ ಎಂದು ಹೇಳಿದರು. ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ವಲಯ ಬಂಟರ…
UN NETWORKS ಹರೇಕಳ: ಶೈಕ್ಷಣಿಕ ಜೀವನದಲ್ಲೇ ಹಾಕುವ ಪರಿಶ್ರಮ ದೊಡ್ಡ ಮಟ್ಟದ ಸಾಧನೆ ಮಾಡುವ ಮೂಲಕ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟರು. ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದ ಕನ್ನಡ ಶಾಲೆಗಳ ಮೇಲೆ ಕೀಳರಿಮೆ ಅನಗತ್ಯ, ಆಂಗ್ಲ ಮಾಧ್ಯಮಕ್ಕಿಂತಲೂ ಗ್ರಾಮೀಣ ಭಾಗದಲ್ಲಿ ಕನ್ನಡ ಶಾಲೆಯಲ್ಲಿ ಕಲಿತವರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಗ್ರಾಮೀಣ ಭಾಗದಿಂದ ವಾಹನದಲ್ಲಿ ದೂರದ ಆಂಗ್ಲಮಾಧ್ಯಮ ಶಾಲೆಗೆ ಹೋಗುವವರ ಬಗ್ಗೆ ಚಿಂತಿಸದೆ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕಿಂತ ಬೇರೆ ಉಡುಗೊರೆ ಬೇಕಿಲ್ಲ ಎಂದು ಹೇಳಿದರು. ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿ, ಒಂದು ಸಮಯದಲ್ಲಿ ಅಮೆರಿಕಾದ ಮಕ್ಕಳು ಊಟ ಮಾಡದಿದ್ದರೆ ಭಾರತದ ಹಸಿದ ಮಕ್ಕಳು ನಿನ್ನನ್ನು ಎತ್ತಿಕೊಂಡು ಹೋಗ್ತವೆ ಎಂದು ಅಲ್ಲಿನ ತಾಯಂದಿರು ಹೇಳುತ್ತಿದ್ದರು. ಆದರೆ ಇಂದು ತನ್ನ ಮಕ್ಕಳು…
UN NETWORKS ಪಾವೂರು: ಸಮಾಜದಲ್ಲಿ ಜನರಿಗೆ ಜೀವನ ನಡೆಸಲು ಇರುವ ಹಕ್ಕು ಪಶುಗಳಿಗೂ ಇದ್ದು ನಮ್ಮಂತೆ ಅವುಗಳಿಗೂ ಆಹಾರ ನೀಡಿ ಸಲಹಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಪಾವೂರು ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಪಾವೂರು ಪಶು ಚಿಕಿತ್ಸಾಲಯದಲ್ಲಿ ಭಾನುವಾರ ನಡೆದ ಮಿಶ್ರತಳಿ ಹಸು, ಕರುಗಳ ಪ್ರದರ್ಶನ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ನಾಲ್ಕು ಗೋಶಾಲೆಗಳಿ 38 ಲಕ್ಷ ಅನುದಾನ ನೀಡುತ್ತಿದೆ. ಪ್ರತಿ ಗೋವಿಗೂ ಸರ್ಕಾರ ತಿಂಗಳಿಗೆ ಮೂರುವರೆ ಸಾವಿರ ರೂಪಾಯಿ ಖರ್ಚು ಮಾಡುತ್ತಿದೆ. ಮುಂದೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದ್ದು, ಇದಕ್ಕೆ ಬೇಕಾಗುವ ಅನುದಾನ ಸರ್ಕಾರದಿಂದ ದೊರಕಿಸಲಾಗುವುದು. ಅನುಮಾನಕ್ಕೆ ಕಾಯದೆ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡು ದೊಡ್ಡ ಬಹುಮಾನ ನೀಡಲು ಕ್ರಮ ಕೈಗೊಳ್ಳಿ ಎಂದು ಹೇಳಿದರು. ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಮಂಗಳೂರು ಕ್ಷೇತ್ರಕ್ಕೆ ಒಂಬತ್ತು ಪಶು ಚಿಕಿತ್ಸಾಲಯಗಳನ್ನು ಸಚಿವರು ಬಿಡುಗಡೆಗೊಳಿಸಿದ್ದು…
UN NETWORKS ದುಬೈ: ದುಬೈ ಕರ್ನಾಟಕ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ದುಬೈ ಮತ್ತು ಕಮ್ಯುನಿಟಿ ಡೆವಲಪ್ಮೆಂಟ್ ಅಥಾರಿಟಿ ದುಬೈ ಪ್ರಾಯೋಜಕತ್ವದಲ್ಲಿ ದುಬೈ ಹೆಲ್ತ್ ಅಥಾರಿಟಿ ಸಹಯೋಗದಲ್ಲಿ ಬ್ಲಡ್ ಡೋನರ್ಸ್ (ರಿ) ಮಂಗಳೂರು ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬರವು ದುಬೈಯ ಲತೀಫಾ ಹಾಸ್ಪಿಟಲ್ ನಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಹಮ್ಮದ್ ಇಸ್ಮಾಯಿಲ್ (ಅಧ್ಯಕ್ಷರು ಕರ್ನಾಟಕ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ದುಬೈ.) ರಕ್ತವನ್ನು ಯಾರಿಂದಲೂ ಉತ್ಪಾದಿಸಲು ಆಗೋದಿಲ್ಲ ರಕ್ತದಾನ ಮಾಡುವ ಮೂಲಕವೇ ಒಂದು ಜೀವವನ್ನು ಉಳಿಸಲು ಸಾಧ್ಯ ಹಾಗೂ ರಕ್ತದಾನ ಮಾಡಿದ ಮೇಲೆ ಆಗುವಂತಹ ಲಾಭದಾಯಕ ಅಂಶಗಳನ್ನು ಅವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ರಕ್ತದಾನದ ಮಹತ್ವದ ಕುರಿತು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಎಸ್ ಕೆ ಸಮೀರ್ ,ಬದ್ರಿಯಾ ಫ್ರೆಂಡ್ಸ್ ರಶೀದ್ ಬ್ಯಾರಿ(ರಾಶ್ ಬ್ಯಾರಿ) ಬ್ಯಾರಿ ನಿಖಹ್ ಹೆಲ್ಪ್ ಲೈನ್ ಸ್ಥಾಪಕ ಅಧ್ಯಕ್ಷರು, ಬ್ಲಡ್ ಡೋನಾರ್ಸ್ ಮಂಗಳೂರು,ನಿರ್ವಾಹಕರಾದ ಶಂಸುದ್ದೀನ್ ಪಿಲಿಗೂಡು ನಝೀರ್ ಬಿಕರ್ನಕಟ್ಟೆ,ಸಮೀರ್ ಕಡವಿನ ಬಾಗಿಲು, ಕೆ ಎಸ್ ಸಿ…
UN NETWORKS ಕೊಣಾಜೆ: ದೇರಳಕಟ್ಟೆಯಿಂದ ಕೊಣಾಜೆಗೆ ಕಬ್ಬಿಣದ ಕೊಳವೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಮಂಗಳೂರು ವಿಶ್ವವಿದ್ಯಾಲಯದ ಪ್ರವೇಶ ದ್ವಾರ ಗಣೇಶ್ ಮಹಲ್ ಏರುತಿರುವಿನಲ್ಲಿ ಹಿಂದುಗಡೆ ಭಾರ ಹೆಚ್ಚಾದ ಪರಿಣಾಮ ಲಾರಿಯ ಎದುರು ಭಾಗ ಮೇಲಕ್ಕೆದ್ದು ರಸ್ತೆಯಲ್ಲೇ ನಿಂತು ಸಾರ್ವಜನಿಕರಿಗೆ ಮನರಂಜನೆ ನೀಡಿತು. https://www.youtube.com/watch?v=-RpXY0doKXE
UN NETWORKS ದೇರಳಕಟ್ಟೆ: ರತ್ನೋತ್ಸವ-2018 ಅಂಗವಾಗಿ ದೇರಳಕಟ್ಟೆ ಬೆಳ್ಮ ಪಂಚಾಯಿತಿ ವಠಾರದಿಂದ ಆರಂಭಗೊಂಡ ಸಾಂಸ್ಕೃತಿಕ ದಿಬ್ಬಣ ಮೆರವಣಿಗೆಗೆ ಬೆಳ್ಮ ಗ್ರಾ.ಪಂ ಅಧ್ಯಕ್ಷೆ ವಿಜಯ ಕೃಷ್ಣಪ್ಪ ಪೂಜಾರಿ ಚಾಲನೆ ನೀಡಿದರು. ಪೂರ್ಣ ಕುಂಭ, ಮಂಗಳವಾದ್ಯ, ಚೆಂಡೆವಾದನ, ಕಂಸಾಲೆ, ಕಥಕ್ಕಳಿ, ಹಾಲಕ್ಕಿ, ವೀರಗಾಸೆ, ಕೀಲುಕುದುರೆ, ಹುಲಿವೇಷ, ಕರಗ ನೃತ್ಯ, ಗೊಂಬೆ ಕುಣಿತ, ಪೂಜಾ ಕುಣಿತ, ಬಣ್ಣದ ಕೊಡೆಗಳ ಜೊತೆಗೆ ಸಮ್ಮೇಳನಾಧ್ಯಕ್ಷ 80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಿರಿಯ ಸಾಹಿತಿ ನಾ.ಡಿ.ಸೋಜ ಅವರನ್ನು ದೇರಳಕಟ್ಟೆ ಗ್ರೀನ್ ಗ್ರೌಂಡಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.
UN NETWORKS ಮಂಜನಾಡಿ: ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಟೆಕಲ್ ಹಾಗೂ ಕಲ್ಕಟ್ಟ ಎಂಬಲ್ಲಿ ಹೊಸದಾಗಿ ನಿರ್ಮಾಣ ಮಾಡಿದ ಅಂಗಡಿ ಕೋಣೆಗಳ ಬಹಿರಂಗ ಹರಾಜು ಪ್ರಕ್ರಿಯೆ ಡಿ.20 ರಂದು ಗುರುವಾರ ಅಪರಾಹ್ನ 3.00 ಗಂಟೆಗೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಲಿದೆ. ಆಸಕ್ತರು ಡಿ.19 ರಂದು 12.00 ಗಂಟೆಯೊಳಗೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹೆಸರು ನೋಂದಾಯಿಸಕೊಳ್ಳಬೇಕಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
UN NETWORKS ಉಳ್ಳಾಲ: ಸಯ್ಯಿದ್ ಮದನಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತುಸಯ್ಯಿದ್ ಮದನಿ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾ ಕೂಟ ಅಳೇಕಲ ಮದನಿ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯರಾದ ಧನಲಕ್ಷ್ಮಿ ಗಟ್ಟಿಯವರು ಶಾಂತಿಯ ಸಂಕೇತವಾದ ಪಾರಿವಾಳ ವನ್ನು ಹಾರಿಸುವುದರೊಂದಿಗೆ ಉದ್ಘಾಟಿಸಿದರು.ನಂತರ ಮಾತನಾಡಿ ಅವರು ಪಠ್ಯೇತರ ಚಟುವಟಿಕೆಯೊಂದಿಗೆ ಕಲೆ ಸಾಹಿತ್ಯ ಸಂಸ್ಕ್ರತಿ ಜೊತೆಗೆ ಕ್ರೀಡಾಕೂಟಕ್ಕೆ ಹಳೇಕೋಟೆ ಶಾಲೆ ಹೆಚ್ಚಿನ ಒತ್ತು ನೀಡುತ್ತಿರುವ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿ ಗಳ ಭವಿಷ್ಯವನ್ನು ಉಜ್ವಲವಾಗಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಸಂಸ್ಥೆಯಲ್ಲಿ ಆಯೋಜಿಸಲಾಗುತ್ತಿದೆ. ಮುಂದಿನ ವರ್ಷದಿಂದ ಹೆಣ್ಮಕ್ಕಳ ಶಿಕ್ಷಣಕ್ಕೂ ಸಂಸ್ಥೆ ಅವಕಾಶ ಮಾಡಿಕೊಡುತ್ತಿರುವುದು, ಶಿಕ್ಷಣ ಸಂಸ್ಥೆ ಯ ಸಾಮಾಜಿಕ ಬದ್ಧತೆ ಎತ್ತಿ ಹಿಡಿಯುವಂತಿದೆ ಎಂದರು. ಉಳ್ಳಾಲ ಆರಕ್ಷಕ ಠಾಣಾ ಉಪನಿರೀಕ್ಷಕ ವಿನಾಯಕ್ ತೋರಗಲ್ ಹಸಿರು ನೀಲ್ ತೋರಿಸುವಿದರೊಂದಿಗೆ ಪಥಸಂಚಲನಕ್ಜೆ ಚಾಲನೆ ನೀಡಿದರು. ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ವಿ ಆಳ್ವ ಧ್ವಜ ವಂದನೆ ಸ್ವೀಕರಿಸಿದು.ಸಯ್ಯದ್…

