Author: UllalaVani

Kannada News From Coastal Karnataka

UN NETWORKS ಇನೋಳಿ: ಇನೋಳಿ ಬಾರ್ಲ ನಿವಾಸಿ, ಪಾವೂರು ಗ್ರಾಪಂ ಮಾಜಿ ಸದಸ್ಯ ನಾಗಪ್ಪ ಶೆಟ್ಟಿ ಇನೋಳಿ (80) ರವಿವಾರ ರಾತ್ರಿ ತನ್ನ ಸ್ವಗೃಹದಲ್ಲಿ ನಿಧನರಾದರು. ಮೂರು ಅವಧಿಗೆ ಪಾವೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಜನಾನುರಾಗಿಯಾಗಿದ್ದ ನಾಗಪ್ಪ ಶೆಟ್ಟಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಗಮನ ಸೆಳೆದಿದ್ದರು. ಸ್ಥಳೀಯ ದೇವಸ್ಥಾನ ಸಮಿತಿಯ ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಹಾಗೂ ಎಂಟು ಮಂದಿ ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Read More

UN NETWORKS ಉಳ್ಳಾಲ: ಗಾಳದ ಕೊಂಕಣಿ ಸಮಾಜ ಬಾಂಧರಿಂದ ಗೋವಾ ರಾಜ್ಯದ ದಾರ್ಗಲ್ ನಲ್ಲಿರುವ ಕುಲದೇವಿ ಶ್ರೀ ಶಾಂತಾದುರ್ಗಾ ದೇವಿಗೆ ಸುಮಾರು 2.16 ಲಕ್ಷ ರೂ.ವೆಚ್ಚದ ಹವಳದ ಚಿನ್ನದ ಚಿನ್ನ ಸರವನ್ನು ಸಮರ್ಪಿಸಲಾಯಿತು. ಮಂಗಳೂರು,ಬಂಟ್ವಾಳ,ಮುಂಬೈ,ಬೆಂಗಳೂರಿನ ಕುಲಬಾಂಧವರು ಗೋವಾದ ಶ್ರೀ ಶಾಂತಾದುರ್ಗಾ ದೇವಳದ ಆರ್ಚಕ ಗುರುಪ್ರಸಾದ ಜೋಷಿ ಅವರ ಮಾರ್ಗದರ್ಶನದಲ್ಲಿ ವಿವಿಧ ಪೂಜಾವಿಧಿವಿಧಾನ, ವಿಶೇಷಪೂಜೆಯ ಬಳಿಕ ದೇವಿಗೆ ಹವಳದ ಚಿನ್ನದ ಸರವನ್ನು ಸಮರ್ಪಣೆಗೈಯಲಾಯಿತು. ಹಾಗೆಯೇ ನಾಗೇಶ್ರೀ ಮಹಾರುದ್ರ ದೇವಸ್ಥಾನಕ್ಕೆ ದೀಪವನ್ನು ಕೂಡ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಹರೇಕಳ, ಶ್ರೀ ಕೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಪ್ರ.ಕಾರ್ಯದರ್ಶಿ ಯು.ದಯಾನಂದ ನಾಯ್ಕ್,ಗೌರವಾಧ್ಯಕ್ಷ ವಿಶ್ವನಾಥ ನಾಯ್ಕ್ ಕಲ್ಲಾಪು, ಶ್ರೀ ಸೋಮೇಶ್ವರಿ ಸೌ.ಸ.ನಿ.ದ ಅಧ್ತಕ್ಷ ಉಮಾನಾಥ ನಾಯ್ಕ್ ಉಳ್ಳಾಲ, ಮುಂಬೈ ಸಜ್ಜನ್ ಸೇವಾ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ , ಗುರಿಕಾರ ರಾಮಚಂದ್ರ‌ನಾಯ್ಕ, ಪದಾಧಿಕಾರಿಗಳಾದ ಕೋಡಿ ಜಯ ನಾಯ್ಕ್, ಶ್ರೀರಿಷ್ ನಾಯ್ಕ್ ಕಾಪಿಕಾಡ್,ವೆಂಕಟೇಶ್ ಬಂಟ್ವಾಳ,ವಿಶ್ವನಾಥ ನಾಯ್ಕ್ ಬಂಟ್ವಾಳ,…

Read More

UN NETWORKS ದೇರಳಕಟ್ಟೆ: ಆಸ್ಕಿ ಕೇಂದ್ರವನ್ನು ಕ್ಷೇಮದಲ್ಲಿ 2004ರಲ್ಲಿ ಆರಂಭಿಸಲಾಗಿದ್ದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆಸ್ಕಿ ಎದುರಿಸುವುದು ಕಠಿಣವಾಗಿದ್ದರೂ ಪಾರದರ್ಶಕವಾಗಿರುವುರಿಂದ ಈ ಕೇಂದ್ರದಿಂದಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಿದೆ ಎಂದು ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು. ಕ್ಷೇಮ ಮೆಡಿಕಲ್ ಅಕಾಡೆಮಿಯ ಇಎನ್‍ಟಿ ವಿಭಾಗದ ಆಶ್ರಯದಲ್ಲಿ ಶನಿವಾರ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ನಡೆದ ಕ್ಷೇಮ ಇಎನ್‍ಟಿ-ಒಎಸ್‍ಸಿಇ ಕಾರ್ಯಗಾರ-2019, ಸ್ನಾತಕೋತ್ತರ ಬೋಧನಾ ಕಾರ್ಯಕ್ರಮ ಹಾಗೂ 15ನೇ ಒಎಸ್‍ಸಿಇ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಒಂದು ಕೇಂದ್ರ ಆರಂಭವಾಗಿ ನಿರಂತರ ಕಾರ್ಯಗಾರ ನಡೆಯುತ್ತಿದ್ದರೆ ಅದು ಪರೀಕ್ಷಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಠಿಣ ಸ್ಪಧೆಋಗಳು ಸವಲುಗಳು ಎದುರಗುತ್ತಿದ್ದು ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅಸ್ಕಿ ಪ್ರಯೋಜನಕರಿ ಎಂದು ಮಂಗಳೂರಿನ ಫಾ. ಮುಲ್ಲರ್ ಮೆಡಿಕಲ್ ಕಾಲೇಜು ಡೀನ್ ಪ್ರೊ. ಡಾ. ಜೆ.ಪಿ. ಆಳ್ವ ಹೇಳಿದರು. ಕ್ಷೇಮ ಮೆಡಿಕಲ್ ಕಾಲೇಜು ಡೀನ್ ಡಾ.ಪಿ.ಎಸ್. ಪ್ರಕಾಶ್ ಮಾತನಾಡಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಉನ್ನತ…

Read More

UN NETWORKS ಹರೇಕಳ: ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸರಕಾರದಿಂದ ನೀಡಲ್ಪಡುವ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಎಂಟನೇ ತರಗತಿಯ ಸುಮಾರು 93 ಮಕ್ಕಳಿಗೆ ಸೈಕಲನ್ನು ವಿತರಿಸಿ ಮಾತನಾಡಿದ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೋನುರವರು, ಶಾಲಾ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಸರಕಾರವು ಹೊರತಂದಿದ್ದು ಅವುಗಳೆಲ್ಲಾವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಳ್ಳಬೇಕು ಹಾಗೂ ವ್ಯಕ್ತಿತ್ವ ವಿಕಸನಕ್ಕೆಪೂರಕವಾದ ಅಂಶಗಳಾದ ಧೈರ್ಯ, ತಾಳ್ಮೆ, ಏಕಾಗ್ರತೆ ಮತ್ತು ದೈಹಿಕ ಬೆಳವಣಿಗೆ ಮುಂತಾದ ಗುಣಗಳನ್ನು ಉತ್ತಮ ಪಡಿಸಿಕೊಳ್ಳಲು ಸರಕಾರವು ಈ ಯೋಜನೆಯನ್ನು ಹಮ್ಮಿಕೊಂಡಿದೆ.ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನಿತಾ ಡಿ’ ಸೋಜ ಇವರು ವಿದ್ಯಾರ್ಥಿಗಳು ಮನೆಯ ಅಂಗಳದಲ್ಲಿ ಮೊದಲು ಸೈಕಲ್ ತುಳಿಯಲು ಅಭ್ಯಾಸವನ್ನು ಮಾಡಿ ಅದರ ನಂತರವೇ ದಾರಿಗೆ ಸೈಕಲ್ ಸವಾರಿ ಮಾಡುವುದು ಒಳಿತು. ಆರೋಗ್ಯ ದೃಷ್ಟಿಯಲ್ಲಿ ಉತ್ತಮವೆಂದರೂ ಸೈಕಲ್…

Read More

UN NETWORKS ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ70ನೇ ಗಣರಾಜೋತ್ಸವವನ್ನು ಸಂಭ್ರ್ರಮದಿಂದಆಚರಿಸಲಾಯಿತು. ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್‍ತ್ವಾಹ ಬೆಳಿಗ್ಗೆ 8.30ಕ್ಕೆ ದರ್ಗಾ ವಠಾರದಲ್ಲಿದ್ವಜಾರೋಹಣಗೈದರು. ಸಯ್ಯಿದ್ ಮದನಿ ಅರಬಿಕ್‍ಕಾಲೇಜು ಪ್ರಾಂಶುಪಾಲರಾದಉಸ್ಮಾನ್ ಪೈಝಿತೋಡಾರ್‍ಉಸ್ತಾದ್‍ದುಆಗೈದರು, ಅರಬಿಕ್‍ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ, ಅಲಿಮೋನು, ಎಚ್.ಕೆ ಮುಹಮ್ಮದ್ ಮತ್ತಿತ್ತರರು ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಸೋಮೇಶ್ವರ ಗ್ರಾಮದ ಕುತ್ತಾರ್ ಮುಂಡೋಳಿ ಪರಿಸರದ ಆದಿಸ್ಥಳ ಶ್ರೀ ರಕ್ತೇಶ್ವರಿ ಏಳುವರೆ ಸಿರಿಗಳು ಕೊರಗಜ್ಜ ಕ್ಷೇತ್ರ ನಿರ್ಮಾಣ ಆಗುತ್ತಿರುವ ಜಾಗದಲ್ಲಿ ವಾಸ್ತವವಿದ್ದ ಸುಂದರಿಯವರ ಮನೆಯನ್ನು ಕ್ಷೇತ್ರದ ನಿರ್ಮಾಣದ ಪ್ರಯುಕ್ತ ತೆರವು ಮಾಡಿದ ಹಿನ್ನೆಲೆಯಲ್ಲಿ ಸಮಿತಿಯವರು ಕೊಟ್ಟ ಮಾತಿನಂತೆ ಅವರಿಗೆ ರಕ್ತೇಶ್ವರಿ ಕ್ಷೇತ್ರದ ಬಳಿ ನಿರ್ಮಿಸಲಾದ ಹೊಸ ಮನೆಯ ಹಸ್ತಾಂತರ ಶನಿವಾರ ನಡೆಯಿತು. ಸಮಿತಿಯ ಅಧ್ಯಕ್ಷ ಉದ್ಯಮಿ ಹರೀಶ್ ಕುತ್ತಾರ್ ಮನೆಯ ಕೀಲಿಕೈ ಸುಂದರಿಯವರ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಮನೆಯವರಿಗೆ ಕೊಟ್ಟ ಭಾಷೆಯನ್ನು ಪಾಲಿಸಿ ಶಿಲಾನ್ಯಾಸಕ್ಕಿಂತ ಮೊದಲೇ ಹೊಸ ಮನೆಯನ್ನು ನಿರ್ಮಿಸಿಕೊಟ್ಟಿದ್ದೇವೆ ಶ್ರೀ ರಕ್ತೇಶ್ವರಿ, ಏಳುವರೆ ಸಿರಿಗಳು ಕೊರಗಜ್ಜ ದೈವದ ಅನುಗ್ರಹದಲ್ಲಿ ಮನೆಯ ಕೆಲಸ ಆಗಿದೆ ಎಂದರು. ರಮಾನಾಥ ದಿನೇಶ್ ಕಾಜವ, ಸದಾಶಿವ ಆಚಾರ್ಯ, ಮಧುಸೂದನ, ಭವಾನಿ ಶಂಕರ್, ಉದಯಶಂಕರ್, ನಾಗೇಶ್ ಗಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗೃಹಪ್ರವೇಶದ ಪ್ರಯುಕ್ತ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ , ಅನ್ನ ಸಂತರ್ಪಣೆ ನಡೆಯಿತು.

Read More

UN NETWORKS ಕುತ್ತಾರು: ಕುತ್ತಾರು ಎಂಬುದು ಪುಣ್ಯಭೂಮಿ. ರಕ್ತೇಶ್ವರೀ ಕಾರಣಿಕ ಶಕ್ತಿಯಾಗಿದ್ದು ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಕುತ್ತಾರು ಕನ್ನಡಿಕೆರೆ ಋಷಿಮುನಿಗಳೇ ತಪಸ್ಸು ಮಾಡುತ್ತಿದ್ದ ಅತಿ ಪವಿತ್ರವಾದ ತಪೋ ಭೂಮಿ. ಹಾಗಾಗಿ ಇಲ್ಲಿ ಕ್ಷೇತ್ರ ನಿರ್ಮಾಣ ಅತಿ ಶೀಘ್ರದಲ್ಲಿ ನಡೆಯುವುದರಿಂದ ಸಮಾಜದ ಎಲ್ಲರಿಗೂ ಒಳಿತಾಗಲಿದೆ ಎಂದು ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಆಶೀರ್ವಚನದ ಮಾತುಗಳನ್ನಾಡಿದರು. ಕುತ್ತಾರು ಕನ್ನಡಿಕೆರೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಕನ್ನಡಿಕೆರೆ ಆದಿಸ್ಥಳ ಶ್ರೀ ರಕ್ತೇಶ್ವರೀ ಎಳ್ವೆರ್ ಸಿರಿಗಳು ಕೊರಗಜ್ಜ ಕ್ಷೇತ್ರಕ್ಕೆ ಭಾನುವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ ಉಳ್ಳಾಲ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕರ ಕಿಣಿ ಮಾತನಾಡಿ ಇಂದಿನ ಪೀಳಿಗೆಯ ಭಾಗ್ಯ ಎಂಬಂತೆ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಷೇತ್ರಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆಯುವುದನ್ನು ಕಾಣುವುದೇ ನಮ್ಮ ಪುಣ್ಯ, ನಮ್ಮ ಭಾಗ್ಯ ಎಂದು ನುಡಿದರು.ಧಾರ್ಮಿಕ ಕಾರ್ಯಗಳನ್ನು ದೇವರು ಅವರಿಗೆ ಬೇಕಾದಾಗ ನಮ್ಮಿಂದ…

Read More

UN NETWORKS ಉಳ್ಳಾಲ: ಎಸ್ ವೈಎಸ್, ಎಸ್ಸೆಸ್ಸೆಫ್ ಹಾಗೂ ಎಸ್ ಬಿಎಸ್ ಕುತುಬಿ ನಗರ ಕಿನ್ಯ ಶಾಖೆವತಿಯಿಂದ ತಾಜುಲ್ ಉಲಮಾ ಅನುಸ್ಮರಣಾ ಸಂಗಮ ಕುತುಬಿ ನಗರ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಿತು. ಸಯ್ಯದ್ ಅಲವಿ ತಂಙಳ್ ಕಿನ್ಯ ದುಅ ನೇತೃತ್ವ ವಹಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಮೂಸ ಹಾಜಿ ಕುತುಬಿನಗರ ಧ್ವಜಾರೋಹಣ ಗೈದರು. ಎಸ್ ವೈಎಸ್ ಕುತುಬಿ ನಗರ ಶಾಖೆಯ ಅಧ್ಯಕ್ಷ ಮುಹಮ್ಮದ್ ಹನೀಫ್ ಸಖಾಫಿ ಕಾರ್ಯಕ್ರಮ ಅಧ್ಯಕ್ಷತೆವಹಿಸಿದರು.ಎಸ್ ವೈಎಸ್ ಮಂಗಳೂರು ವಲಯ ಅಧ್ಯಕ್ಷ ಮುಹಮ್ಮದಾಲಿ ಸಖಾಫಿ ಅಶ್-ಅರಿಯ್ಯಾ ಸುರಿಬೈಲ್, ಡಾ.ಫಾರೂಕ್ ನ ಈಮಿ ಅಲ್- ಬುಖಾರಿ ಕೊಲ್ಲಂ ಮುಖ್ಯ ಪ್ರಭಾಷಣಗೈದರು.ಕಾರ್ಯಕ್ರಮದಲ್ಲಿ ದ.ಕ ಉಸ್ತುವಾರಿ ಸಚಿವ ಯು.ಟಿ ಖಾದರ್ ರಿಗೆ ಸನ್ಮಾನಿಸಲಾಯಿತು. ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್-ಹೈದ್ರೂಸಿ ತಂಙಳ್ ಕಿಲ್ಲೂರು, ಕುತುಬಿನಗರ ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷ ಅರಬಿ ಕುಂಞ, ಖತೀಬ್ ಮುಹಮ್ಮದ್ ಶಫೀಕ್ ಸ ಅದಿ, ಪಿಲಿಕೂರು ಮುಹ್ಯಿದ್ದೀನ್ ಜುಮಾ ಮಸೀದಿ ಖತೀಬ್ ಅಬ್ದುಲ್ ಬಾರಿ ಸ ಅದಿ, ಪಂಜಳ‌…

Read More

UN NETWORKS ಮುಂಬಯಿ: ಬಂಟ್ವಾಳ ಜೋಡುಮಾರ್ಗ (ಬಿ.ಸಿ ರೋಡು)ದ ಸಂಚಯಗಿರಿ ಅಲ್ಲಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಇಂದಿಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ ಚಂದ್ರಶೇಖರ್ ಎಸ್.ಪೂಜಾರಿ, ಲೋನಾವಲ ಮುನ್ಸಿಪಾಲ್ ಕೌನ್ಸಿಲ್‍ನ ನಗರ ಅಧ್ಯಕ್ಷೆ ಸುರೇಖಾ ಜಾಧವ್, ನಗರ ಉಪಾಧ್ಯಕ್ಷ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಲೋನಾವಲ ಸ್ಥಳೀಯ ಕಚೇರಿಯ ಗೌರವಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ ಭೇಟಿ ನೀಡಿದರು. ಭಾರತ ರಾಷ್ಟ್ರದ ಕರ್ನಾಟಕದ ಕರಾವಳಿ ಕಾಸರಗೋಡುನಿಂದ ಉಡುಪಿಯ ಬಾರ್ಕೂರು ತನಕ ಪರಶುರಾಮನ ಸೃಷ್ಠಿಯ ಒಂದು ಭಾಗವಾಗಿ ಮಹಾ ದಾರ್ಶನಿಕರಿಗೆ ಮತ್ತು ಸಂತ ಮಹಾಂತರಿರಿಗೆ ಜನ್ಮ ನೀಡಿದ, ಹತ್ತುಹಲವಾರು ಸಂಪ್ರದಾಯ, ಕೂಡು ಕಟ್ಟುಕಟ್ಟಾಲೆಗಳನ್ನು ಬೆಳೆಸಿ ಉಳಿಸಿ ತುಳು ಭಾಷೆಯೊಂದಿಗೆ ಸ್ವಂತಿಕೆಯ ನಾಡುವಾಗಿ ಸಾವಿರ ಸಾವಿರ ವರ್ಷಗಳ ಇತಿಹಾಸವುಳ್ಳ ಪುಣ್ಯಭೂಮಿ ಪ್ರಸಿದ್ಧಿಯ ತುಳುನಾಡು ಬಗ್ಗೆ ತಿಳಿದು ತುಳು ಬದುಕು ಹಾಗೂ ತೌಳವರ ಪರಂಪರೆ, ಬದುಕು ರೂಪಿಸುವಲ್ಲಿ ಉಪಯೋಗಿಸಲ್ಪಡುವ…

Read More

UN NETWORKS ನರಿಂಗಾನ: ಮಂಜನಾಡಿಯ ಅಲ್ ಮದೀನಾ ಸಂಸ್ಥೆಯಲ್ಲಿಂದು ಬೆಳಗ್ಗೆ 70ನೇ ಗಣರಾಜೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶೈಖುನಾ ಅಬ್ಬಾಸ್ ಉಸ್ತಾದ್ ಅವರ ಆರ್ಶೀವಾದದೊಂದಿಗೆ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಧ್ವಜರೋಹಣಗೈದರು‌‌. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಅ್ ವಾ ಕಾಲೇಜು ಮುದರ್ರಿಸ್ ಅಬ್ದುಲ್ ಅಝೀಝ್ ಅಹ್ಸನಿ ವಹಿಸಿದ್ದರು.ಅಶ್ರಫ್ ಸಖಾಫಿ ಪ್ರಾಸ್ತಾವಿಕ ಭಾಷಣವನ್ನು ಮಂಡಿಸಿದರು.ದಅ್ ವಾ ಕಾಲೇಜು ಮುದರ್ರಿಸ್ ಅಬ್ದುರ್ರಹ್ಮಾನ್ ಅಹ್ಸನಿ, ರಿಸಾಲ ಅಕಾಡಮಿ ಪ್ರಾಧ್ಯಾಪಕ ಕಬೀರ್ ಸಅದಿ, ಹಿಫ್ಳುಲ್ ಕುರ್ ಆನ್ ಕಾಲೇಜಿನ ಪ್ರಾಧ್ಯಾಪಕರಾದ ಹಾಫಿಳ್ ಮರ್ಶದ್ ಹುಮೈದಿ, ಹಾಫಿಳ್ ಇಸ್ಮಾಯೀಲ್ ಹನೀಫಿ, ನಾರ್ತ್ ಕರ್ನಾಟಕ ಹೋಮ್ ನ ಬದ್ರುದ್ದೀನ್ ಹಿಮಮಿ, ಅಬ್ರಾರ್ ಫಾಝಿಲಿ ಬಿಹಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಅದ್ ಮೊಂಟುಗೋಳಿ ಕಾರ್ಯಕ್ರಮ ನಿರೂಪಿಸಿದರು. ಬಿಶಾರತುಲ್ ಮದೀನಾ ಅಧ್ಯಕ್ಷ ಅನೀಸ್ ಸುರತ್ಕಲ್ ಸ್ವಾಗತಿಸಿದರು. ನೌಫಲ್ ಮಲಾರ್ ವಂದಿಸಿದರು.

Read More