Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಉಳ್ಳಾಲದ ಜನನಿಬಿಡ ಪ್ರದೇಶವಾದ ಉಳ್ಳಾಲ ಬೈಲ್‍ನಲ್ಲಿ ಸಂಘಪರಿವಾರದ ಸಂಘಟನೆಯೊಂದು ಅಳವಡಿಸಿದ ಫ್ಲೆಕ್ಸ್ ನ್ನು ಉಳ್ಳಾಲ ಪೊಲೀಸರು ರವಿವಾರ ರಾತ್ರಿ ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ದೇಶದ ಗಡಿಕಾಯುವ ಸೈನಿಕರ ಮೇಲೆ ದಾಳಿ ನಡೆಸಿ ಹತೈಗೈದ ಕೃತ್ಯಕ್ಕೆ ಸಂಬಂಧಿಸಿ `ವಿಶ್ವಹಿಂದೂ ಪರಿಷತ್ ಬಜರಂಗ ದಳ’ ಎಂಬ ಹೆಸರಿನಲ್ಲಿ ಉಳ್ಳಾಲ ಬೈಲ್‍ನ ಶ್ರೀ ವೈದ್ಯನಾಥ ಛತ್ರಪತಿ ಶಾಖೆಯ ವತಿಯಿಂದ ಉಳ್ಳಾಲ ಬೈಲ್‍ನಲ್ಲಿ ಪ್ರಚೋದನಕಾರಿ ಫ್ಲೆಕ್ಸ್ ಅಳವಡಿಸಿತ್ತು. ಅಂದರೆ `ದೇಶದ ಯೋಧರ ಸಾವಲ್ಲೂ ಅಲ್ಪಸಂಖ್ಯಾತರ ನಗು, ಶತ್ರುಗಳು ದೇಶದ ಹೊರಗಿಲ್ಲ- ದೇಶದ ಒಳಗಡನೇ ಇದ್ದಾರೆ’ ಎಂದು ಬರೆಯಲಾಗಿತ್ತು. ಅಲ್ಲದೆ `ಮ್ಯಾಂಗಲೂರ್ ಮುಸ್ಲಿಂ ಫೇಸ್ ಬುಕ್ ಪೇಜ್‍ನ ಕೆಲವು ತುಣುಕುಗಳನ್ನೂ ಕೂಡ ಫ್ಲೆಕ್ಸ್ ನಲ್ಲಿ ಅಳವಡಿಸಿತ್ತು. ಈ ಕುರಿತು ಸ್ಥಳೀಯ ಸಂಘಟನೆಗಳ ಪ್ರಮುಖರು ತಕ್ಷಣ ಉಳ್ಳಾಲ ಪೊಲೀಸರ ಗಮನ ಸೆಳೆದರು. ಅದರಂತೆ ಉಳ್ಳಾಲ ಠಾಣೆಯ ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ಶಾಖೆಯ ಪ್ರಮುಖರನ್ನು ಕರೆಯಿಸಿ ಫ್ಲೆಕ್ಸ್ ತೆರವುಗೊಳಿಸಿದರು.…

Read More

UN NETWORKS ಉಳ್ಳಾಲ : ಎಸ್‍ಕೆಎಸ್‍ಎಸ್‍ಫ್ ಕನ್ಯಾನ ಶಾಖೆಯ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಮಜ್ಲಿಸ್‍ನ್ನೂರು ಮಹಾ ಸಂಗಮ ನಡೆಸಲು ಉದ್ದೇಶಿಸಿದ್ದು, ಕಾರ್ಯಕ್ರಮಕ್ಕೆ ಎಲ್ಲರು ಸಹಕಾರ ನೀಡಬೇಕು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು. ಫೆ. 19ರಂದು ನಡೆಯಲಿರುವ ಎಸ್‍ಕೆಎಸ್‍ಎಸ್‍ಎಫ್ ಕನ್ಯಾನ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಏಕದಿನ ಮತ ಪ್ರವಚನ ಹಾಗೂ ಮಜ್ಲಿಸುನ್ನೂರ್ ಮಹಾಸಂಗಮದ ವಾಹನ ಪ್ರಚಾರ ಜಾಥಾಕ್ಕೆ ಶನಿವಾರ ಉಳ್ಳಾಲ ದರ್ಗಾ ಚಾಲನೆ ನೀಡಿ ಮಾತನಾಡಿದರು. ಸಯ್ಯದ್ ಹಾದಿ ತಂಙಳ್ ಮಾತನಾಡಿ ಮಹಾನ್ ವಿದ್ವಾಂಸರು ಸೇರಿ ನಡೆಸಲಿರುವ ಮಜ್ಲಿಸುನ್ನೂರು ಕಾರ್ಯಕ್ರಮವನ್ನು ಅಪಾರ ಸಂಖ್ಯೆಯಲ್ಲಿ ಜನರು ಸೇರಿ ಯಶಸ್ಸುಗೊಳಿಸಬೇಕಾಗಿದೆ ಎಂದು ಕರೆ ನೀಡಿದರು. ಖಾಸಿಂ ದಾರಿಮಿ ಕಿನ್ಯ, ಅಮೀರ್ ತಂಙಳ್ ಕಿನ್ಯ, ಉಸ್ತಾದ್ ಹಾರೂನ್ ಅಹ್ಸನಿ, ದಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮೊಹಮ್ಮದ್ ತ್ವಾಹ, ಉಳ್ಳಾಲ ದರ್ಗಾ ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಹಾಫಿಲ್ ಝೈನ್ ಸಖಾಫಿ, ಉಸ್ತಾದ್ ಹಮೀದ್ ಬಾಖವಿ ಬೈರಕಟ್ಟೆ, ಸಯ್ಯಿದ್ ಹಾದಿ…

Read More

UN NETWORKS ತಲಪಾಡಿ: ದಿವಂಗತ ಐತಪ್ಪ ಗುರಿಕಾರ ಅವರ 10ನೇ ವರ್ಷದ ಸ್ಮರಣಾರ್ಥ ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆಯ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಔಷಧಿ ವಿತರಣೆ ಉದ್ಯಾವರ ಮಾಡದ ತೀಯಾ ಸಮಾಜ ಸಭಾಭವನದಲ್ಲಿ ನಡೆಯಿತು. ಶಾರದಾ ಆಯುರ್ವೇದ ಆಸ್ಪತ್ರೆಯ ಮುಖ್ಯ ಅಧೀಕ್ಷಕ ಡಾ. ರವಿಗಣೇಶ್ ಎಂ. , ಹರೀಶ್ ಶೆಟ್ಟಿ ಮಾಡ , ನೀಲಯ್ಯ ಮೇಸ್ತ್ರಿ, ನಾರಾಯಣ ಚಿಪ್ಲುಕೋಟೆ ಹಾಗೂ ರಾಜ ಬೆಳ್ಚಪ್ಪಾಡ ಉಪಸ್ಥಿತರಿದ್ದರು.

Read More

UN NETWORKS ತಲಪಾಡಿ: ಶೈಕ್ಷಣಿಕ ವರ್ಷ 2018-19ನೇ ಸಾಲಿನ ಕೇಂದ್ರ ಪಠ್ಯಕ್ರಮದ ಹತ್ತನೇ ತರಗತಿಯ ಪರೀಕ್ಷೆಯ ಮೌಲ್ಯಮಾಪನ ಕಾರ್ಯದ  ರೂಪುರೇಷಗಳನ್ನು ಮೌಲ್ಯಮಾಪಕರಿಗೆ ಪರಿಚಯಿಸುವ ಸಲುವಾಗಿ ಚೆನೈ ನ ಸಿ.ಬಿ.ಎಸ್.ಸಿ ಬೋರ್ಡ್‍ನ ವತಿಯಿಂದ ಒಂದು ದಿನದ ಅಣುಕು ಮೌಲ್ಯಮಾಪನ ಕಾರ್ಯಗಾರ ಕರಾವಳಿ ಸಹೋದಯ ಒಕ್ಕೂಟದ ಸಹಯೋಗದೊಂದಿಗೆ, ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆಯಿತು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಚೆನೈನ ಸಿ.ಬಿ.ಎಸ್.ಸಿ. ಬೋರ್ಡ್‍ನ ಸಹಕಾರ್ಯದರ್ಶಿ ಆರ್. ವೆಂಕಟೇಶ್ ಮತ್ತು ಪ್ರಾಂತೀಯ ವಿಭಾಗದ ಅಕಾರಿ ವಿ. ನಿರ್ಮಲ ಭಾಗವಹಿಸಿ ಶಿಕ್ಷಕರಿಗೆ ಮೌಲ್ಯಮಾಪನದ ಕುರಿತಾದ ಮಾಹಿತಿ ನೀಡಿದರು. ಪ್ರಸಕ್ತ ಶೈಕ್ಷಣಿಕ ವರ್ಷದ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಮೌಲ್ಯಮಾಪನದ ಹಲವು ಸಂದೇಹಗಳನ್ನು ಪರಿಹರಿಸಲಾಯಿತು. ಪ್ರಸಕ್ತ ವರ್ಷದಲ್ಲಿ ಮೌಲ್ಯಮಾಪನದಲ್ಲಿ ಮಾಡಲಾದ ಕೆಲವೊಂದು ಬದಲಾವಣೆಗಳನ್ನು ವೀಡಿಯೋ ಪ್ರದರ್ಶನದ ಮೂಲಕ ಶಿಕ್ಷಕರಿಗೆ ತಿಳಿಸಲಾಯಿತು. ದೆಹಲಿಯ ಸಿ.ಬಿ.ಎಸ್.ಸಿ ಬೋರ್ಡ್‍ನಲ್ಲಿ ಆಯೋಜಿಸಲಾದ ‘ಪರೀಕ್ಷೆ ಮತ್ತು ಮೌಲ್ಯಮಾಪನ’ ಕಾರ್ಯದ ವಿಚಾರ ಸಂಕಿರಣದ ನೇರ ಸಂವಾದ ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು. ಕೇಂದ್ರೀಯ ಪಠ್ಯಕ್ರಮವನ್ನು ಅನುಸರಿಸುವ ದಕ್ಷಿಣ ಕನ್ನಡ…

Read More

UN NETWORKS ಮುಡಿಪು : ಮುಸ್ಲಿಂ ಸಮಾಜದಲ್ಲಿ ಧಾರ್ಮಿಕ ಶಿಕ್ಷಣದ ಕೊರತೆ ಎದುರಾದಾಗ ಅವರಲ್ಲಿ ದುಷ್ಟಮನೋಭಾವನೆ ಬೇರೂರುತ್ತದೆ. ಸಮಾಜಘಾತುಕ ಕೃತ್ಯಗಳನ್ನು ನಡೆಸಲು ಮುಂದಾಗುತ್ತಾರೆ. ದೇಶದ ಜನತೆಗೆ ಬೇಡವಾದ ಕೃತ್ಯ ನಡೆಸುವ ಮುಸ್ಲಿಂ ಸಮಾಜದ ಯಾರೇ ಆದರೂ ಅವರನ್ನು ನೈಜ ಇಸ್ಲಾಂ ಎಂದಿಗೂ ಒಪ್ಪದು ಎಂದು ಧಾರ್ಮಿಕ ಮುಖಂಡ ಸಿಟಿಎಂ ಮುಹಮ್ಮದ್ ಸಲೀಂ ಅಸ್ಸಖಾಫ್ ತಂಙಳ್ ಹೇಳಿದರು. ಮುಡಿಪು ಸಾಂಬಾರ್‍ತೋಟದಲ್ಲಿ ಅಲ್ ಅಬ್‍ರಾರ್ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಶನಿವಾರ ನಡೆದ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸೌಮ್ಯ ಸ್ವಭಾವದ ಮುಸ್ಲಿಂ ಸಮಾಜ ಜಗತ್ತಿನೆಲ್ಲಡೆ ಬಹಳ ಸಂಕಷ್ಟದಲ್ಲಿ ಬದುಕುವಂತಹ ವಾತಾವರಣ ಸೃಷ್ಟಿಯಾಗಿದೆ. ಮುಸ್ಲಿಂರನ್ನು ತೀವ್ರವಾದಿಗಳು, ಭಯೋತ್ಪಾದಕರು ಎಂಬ ದೃಷ್ಟಿಯಲ್ಲಿ ನೋಡುವಂತಹ ಸ್ಥಿತಿ ಬಂದೊದಗಿದೆ. ಮುಸ್ಲಿಂರಾದರೂ ತಾವು ಹುಟ್ಟಿದ ಮಣ್ಣನ್ನು ಪ್ರೀತಿಸುವವರೇ ಆಗಿದ್ದಾರೆ. ಭಾರತದಲ್ಲಿ ಹುಟ್ಟಿದ ಮುಸ್ಲಿಂರು ಭಾರತ ಪ್ರೇಮಿಗಳೇ ಆಗಿದ್ದಾರೆ ಎಂದು ನುಡಿದರು.ಮುಸ್ಲಿಂ ಮಕ್ಕಳು ಮಸೀದಿಯಲ್ಲಿ ಐದು ಹೊತ್ತು ನಮಾಜ್ ಮಾಡುವ, ಭಾರತದ ಕಾನೂನಿಗೆ ವಿರುದ್ಧವಾಗಿ ನಡೆಯದಂತೆ, ಇಸ್ಲಾಂ ನಿಯಮ ಪಾಲಿಸುತ್ತಾ,…

Read More

UN NETWORKS ಉಳ್ಳಾಲ: ಪಂಪ್‍ವೆಲ್ ಮತ್ತು ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಮಾಜಿ ಶಾಸಕ ಜೆ.ಆರ್ ಲೋಬೊ ಮತ್ತು ಸಚಿವ ಯು.ಟಿ.ಖಾದರ್ ಅವರಲ್ಲಿರುವ ಜಾತಿ ಪ್ರೇಮವೇ ಕಾರಣವಾಗಿದೆ. ತಮ್ಮ ಜಾತಿ ಬಾಂಧವರ ಕಟ್ಟಡಗಳನ್ನು ಉಳಿಸುವ ಉದ್ದೇಶದಿಂದ ಕಾಮಗಾರಿ ವಿಳಂಬವಾಗುವಂತೆ ಮಾಡಿ ಇದೀಗ ತನ್ನ ಮೇಲೆ ತೂಗುಗತ್ತಿ ಇಡಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಭರವಸೆಯ ಮಾತುಗಳನ್ನಾಡಿದರು. ಬಿಜೆಪಿಯ ಕೋಟೆಕಾರು ಶಕ್ತಿ ಕೇಂದ್ರದ ಆಶ್ರಯದಲ್ಲಿ ಕೋಟೆಕಾರಿನಲ್ಲಿ ಭಾನುವಾರ ನಡೆದ “ಮತ್ತೊಮ್ಮೆ ನರೇಂದ್ರ ಮೋದಿ” ಅಂಬಿಕಾರೋಡ್ ನಿಂದ ಕೋಟೆಕಾರು ತನಕ ನಡೆದ ಬೃಹತ್ ಜನಬೆಂಬಲ ಯಾತ್ರೆ ಹಾಗೂ ಚುನಾವಣಾ ಕಾರ್ಯಾಲಯ ಉದ್ಘಾಟನೆ ಬಳಿಕ ಕೋಟೆಕಾರು ಜಂಕ್ಷನ್ ನಲ್ಲಿ ನಡೆದ ಸಮಾವೇಶದಲ್ಲಿ ಪುಲ್ವಾಮದಲ್ಲಿ ವೀರಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿ ಅವರು ಮಾತನಾಡಿದರು.ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಸಂದರ್ಭ ತನ್ನ ಜಾತಿ ಬಾಂಧವರ ಮೂರು ಕಟ್ಟಡಗಳನ್ನು ಉಳಿಸುವ ಉದ್ದೇಶದಿಂದ ಮೂರು ಬಾರಿ ತಡೆ ಹಾಕಿದ್ದರಿಂದಾಗಿ ಮೂರು ಬಾರಿ ಪ್ಲ್ಯಾನ್ ಬದಲಾವಣೆಯಾಗಿ ವಿಳಂಬವಾಯಿತು. ಅದೇ ರೀತಿಯಲ್ಲಿ ಪಂಪ್ ವೆಲ್…

Read More

UN NETWORKS ಕೊಣಾಜೆ: ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸ್ನೇಹ ಸಂಬಂಧಗಳು ಕೇವಲ ಡಿಜಿಟಲ್ ರೂಪಕ್ಕೆ ಸೀಮಿತವಾಗದೆ ನೈಜ ರೂಪದಲ್ಲಿ ಗಟ್ಟಿಯಾಗಲಿ ಎಂದು ಮಂಗಳೂರು ವಿಶ್ವವಿದ್ಯಾಲಯದ ಮೊದಲ ಬ್ಯಾಚ್‍ನ ವಿದ್ಯಾರ್ಥಿ ಪ್ರೊ. ಬಿ.ಎ. ವಿವೇಕ್ ರೈ ಹೇಳಿದರು. “ಮಾ’ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಭಾನುವಾರ ಮಂಗಳೂರು ವಿಶ್ವವಿದ್ಯಾಲಯದಲ್ಲಿನಡೆದ `ಮಾ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.ಮಂಗಳೂರು ವಿವಿವಿಯ ವಿದ್ಯಾರ್ಥಿಗಳು ಇಂದು ವಿಶ್ವದ ನಾನಾ ಭಾಗದಲ್ಲಿದ್ದು ತಮ್ಮ ಗೆಳೆಯರು, ಕಾಲೇಜಿನೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಕಷ್ಟ ಸುಖಗಳ ವಿನಿಮಯ ಮಾಡಲು ಸಾಧ್ಯವಾಗುತ್ತದೆ. ಹಳೆ ವಿದ್ಯಾರ್ಥಿ ಮಿತ್ರರು ಡಿಜಿಟಲ್ ರೂಪಕ್ಕೆ ಸೀಮಿತವಾಗದೇ, ಮುಖತಃ ಭೇಟಿಯಾಗಿ ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸುವ ರೂಪದಲ್ಲಿರಬೇಕು ಎಂದರು.ಮಂಗಳೂರು ವಿವಿ ನನ್ನ ಮನೆ, ವಿದ್ಯಾರ್ಥಿಗಳು ನನ್ನ ಕುಟುಂಬವಿದ್ದಂತೆ. ಹಂಪಿ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗುವ ಅರ್ಹತೆ ನೀಡಿದ್ದು ಈ ನನ್ನ ಮಂಗಳಗಂಗೋತ್ರಿ. ನಾಯಕತ್ವ ಪಾಠ ಕಲಿಸಿಕೊಟ್ಟದ್ದು ಗಂಗೋತ್ರಿ. ಬಾನಂಗಳದಲ್ಲಿ ಹಾರುತ್ತಿರುವ ನನ್ನಂತಹ ಹಲವಾರು ಬಲೂನುಗಳಿಗೆ ಹಾರುವ ಶಕ್ತಿಯನ್ನು ತುಂಬಿದ್ದು ಈ ವಿಶ್ವವಿದ್ಯಾಲಯ ಎಂದು…

Read More

UN NETWORKS ಮೊಂಟೆಪದವು: ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷ ಸೈನಿಕರ ಹೆಸರಿನಲ್ಲಿ ಸುಳ್ಳು ಹೇಳಿ ರಾಜಕಾರಣ ಮಾಡುವುದನ್ನು ಬಿಟ್ಟು ಸೈನಿಕರ ಸುರಕ್ಷತೆಗೆ ಅತ್ಯಾಧುನಿಕ ವಾಹನ, ಸುರಕ್ಷತಾ ಉಪಕರಣ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕೆಂದು ಟೀಂ ಇಂಡಿಯಾ ಸಂಘಟನೆಯ ಮುಖಂಡ ಅಶ್ರಫ್ ಕೆಸಿ ರೋಡ್ ಹೇಳಿದರು. ಮೊಂಟೆಪದವು ಜಂಕ್ಷನ್‍ನಲ್ಲಿ ಟೀಂ ಇಂಡಿಯಾದ ವತಿಯಿಂದ ಹುತಾತ್ಮ ಯೋಧರಿಗೆ ನಮನ , ಪಾಕ್ ಭಯೋತ್ಪಾದಕರು ನಡೆಸಿದ ದುಷ್ಕೃತ್ಯದ ಖಂಡನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶದಲ್ಲಿರುವ ಕೆಲವರಿಗೆ ದೇಶಕ್ಕಿಂತ ವ್ಯಕ್ತಿ ಮುಖ್ಯವಾಗಿರುವುದು ಖೇದಕರವಾಗಿದ್ದು ವ್ಯಕ್ತಿ ನಶ್ವರ, ದೇಶ ಅಮರ. ಹೀಗಾಗಿ ವ್ಯಕ್ತಿಗಿಂತ ದೇಶದ ಮೇಲೆ ನಮಗೆ ಪ್ರೀತಿ ಅಭಿಮಾನ ಮೂಡಬೇಕು ಎಂದರು. ಬಳಿಕ ಅಗಲಿದ ಯೋಧರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯಲ್ಲಿ ಡಿವೈಎಫ್‍ಐ ಉಳ್ಳಾಲ ವಲಯ ಕಾರ್ಯದರ್ಶಿ ರಜಾಕ್ ಮೊಂಟೆಪದವು, ಪಂಚಾಯಿತಿ ಸದಸ್ಯರಾದ ಇಸ್ಮಾಯಿಲ್ ಮೋನು, ಫಯಾಜ್ ಮೊಂಟೆಪದವು, ಮಾಜಿ ಸದಸ್ಯ ಎಂ.ಎಂ. ಕುಂಞ, ಮಸೀದಿ ಕಾರ್ಯದರ್ಶಿ ಅಬ್ದುಲ್ ಖಾದರ್ , ಉದ್ಯಮಿ ಅಶ್ರಫ್…

Read More

UN NETWORKS ಉಳ್ಳಾಲ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಪಾಕ್ ಪ್ರೇರಿತ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಚಿರಶಾಂತಿ ಕೋರಿ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಉಳ್ಳಾಲ ವೀರ ರಾಣಿ ಅಬ್ಬಕ್ಕ ವೃತ್ತದ ಬಳಿ ಹಣತೆ ಬೆಳಗಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಧಾರ್ಮಿಕ ಪರಿಷತ್‍ನ ಸದಸ್ಯ ಕೃಷ್ಣ ಗಟ್ಟಿ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ. ಸುವರ್ಣ, ಭಗವತೀ ತೀಯಾ ಸಮಾಜದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ಬಾಲಕೃಷ್ಣ ಮಂದಿರ ಅಧ್ಯಕ್ಷ ಸತೀಶ್ ಕುಂಪಲ, ಬಂಟರ ಸಂಘ ಉಳ್ಳಾಲ ವಲಯದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಶೃಂಗೇರಿ ಮಠ ಕೋಟೆಕಾರು ಶಾಖೆಯ ಉತ್ಸವ ಸಮಿತಿಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಗೆಜ್ಜೆಗಿರಿ ನಂದನಬಿತ್ತಿಲ್ ಕ್ಷೇತ್ರ ಉಳ್ಳಾಲ ಸಮಿತಿಯ ಚಂದ್ರಶೇಖರ ಉಚ್ಚಿಲ್, ಬಿರುವೆರ್ ಕುಡ್ಲ ಉಳ್ಳಾಲದ ಅಧ್ಯಕ್ಷ ಚಂದ್ರಹಾಸ ಪಂಡಿತ್‍ಹೌಸ್, ನಿವೃತ್ತ ಸೇನಾನಿ ಪ್ರವೀಣ್ ಶೆಟ್ಟಿ, ಉಳ್ಳಾಲ ನಗರಸಭೆ ಸದಸ್ಯ ಮಮತಾ ಮೊಗವೀರಪಟ್ನ, ನಮಿತಾ ಗಟ್ಟಿ ಗೀತಾ ಬಾಯಿ, ಮಹಮ್ಮದ್ ಮುಕ್ಕಚೇರಿ,…

Read More

UN NETWORKS ಉಳ್ಳಾಲ: ಕೇಂದ್ರ ಸರಕಾರ ಯುವ ಜನತೆಗಾಗಿ ಕೇಂದ್ರ ಸರಕಾರದ ದೀನ್ ದಯಾಳ್ ಕೌಶಲ ಯೋಜನೆ ಸೇರಿದಂತೆ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಎಲ್ಲ ಯೋಜನೆಗಳನ್ನು ಯುವಜನತೆ ಸದುಪಯೋಗಪಡಿಸಿಕೊಳ್ಳಬೇಕು. ಅದೇ ರೀತಿ ದೀನ್ ದಯಾಳ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟರು. ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಸಂತ ಅಲೋಶಿಯಸ್ ಕಾಲೇಜಿನ ದೀನ್ ದಯಾಳ್ ಉಪಾಧ್ಯಾಯ ಕೌಶಲ ಕೇಂದ್ರ ಹಾಗೂ ತಾಲೂಕು ಯುವಜನ ಒಕ್ಕೂಟ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ನಾಯಕತ್ವ ಹಾಗೂ ಸಮುದಾಯ ತರಬೇತಿ ಶಿಬಿರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮಾತನಾಡಿ ಯುವ ಜನತೆ ಈ ದೇಶದ ಅಡಿಪಾಯವಿದ್ದಂತೆ. ಹಾಗಾಗಿ ಸಮಾಜದ ಅಭಿವೃದ್ಧಿಯಲ್ಲಿ ಯುವಜನತೆ ಪಾತ್ರ…

Read More