Author: UllalaVani

Kannada News From Coastal Karnataka

UN NETWORKS ಮುಡಿಪು: ಕಾರೊಂದು ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿಗೆ ಆಹುತಿಯಾದ ಘಟನೆ ಮುಡಿಪು ಸಮೀಪದ ಹೂಹಾಕುವಕಲ್ಲು ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಹೂಹಾಕುವ ಕಲ್ಲಿನಿಂದ ಮುಡಿಪು ಕಡೆಗೆ ಸಂಚರಿಸುತ್ತಿದ್ದ ಮಾರುತಿ 800 ಕಾರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಕಾರಿನೊಳಗಿದ್ದ ದಂಪತಿಗಳು ಕಾರಿನಿಂದ ಇಳಿದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ

Read More

UN NETWORKS ಮುಡಿಪು : ನೂರಾನಿಯಾ ಜುಮಾ ಮಸೀದಿ ಮತ್ತು ಸಲಾಹುದ್ದೀನ್ ಸೆಕೆಂಡರಿ ಮದ್ರಸ ಸಾಂಬಾರ್ ತೋಟ ಮುಡಿಪು ಮತ್ತು ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಸಾಂಬಾರ್ ತೋಟ ಇವರ ಜಂಟಿ ಆಶ್ರಯದಲ್ಲಿ ಕಾಶ್ಮೀರದ ಪುಲ್ವಾನಾದಲ್ಲಿ ನಮ್ಮ ಸೈನಿಕರ ಮೇಲೆ ನಡೆದ ಪೈಶಾಚಿಕ ಕೃತ್ಯವನ್ನು ಖಂಡಿಸಿ. ಖಂಡನಾ ಸಭೆ ಮದ್ರಸ ವಠಾರದಲ್ಲಿ ಶನಿವಾರ ಬೆಳಿಗ್ಗೆ ನಡೆಯಿತು. ನೂರಾನಿಯಾ ಜುಮಾ ಮಸೀದಿಯ ಖತೀಬರಾದ ಪಿ.ಕೆ.ಮೊಹಮ್ಮದ್ ಮದನಿ ,ಮಸೀದಿಯ ಅಧ್ಯಕ್ಷರಾದ ಇಬ್ರಾಹಿಮ್ ಹಾಜಿ, ಕಾರ್ಯದರ್ಶಿ ಎಸ್.ಇ.ಮೊಹಮ್ಮದ್, ಸದಸ್ಯರಾದ ನಾಸೀರ್ ಅರಫಾ, ಜೊತೆ ಕಾರ್ಯದರ್ಶಿ ಹಸನ್ ಹಾಜಿ, ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಸಾಂಬಾರ್ ತೋಟ ಇದರ ಸಂಘಟನಾ ಕಾರ್ಯದರ್ಶಿ ಅಸ್ಗರ್ , ಪ್ರಧಾನ ಕಾರ್ಯದರ್ಶಿ ಯಾಸೀರ್ ಅಹ್ಮದ್, ಕಾರ್ಯದರ್ಶಿ ಎಸ್.ಎಚ್.ಅಝೀಝ್, ಸದಸ್ಯರಾದ ಶರೀಫ್ ಸಾಂಬಾರ್ ತೋಟ, ಝಾಹೀದ್, ವಿಸ್ಡಮ್ ವೆಲ್ಫೇರ್ ಅಸೋಸಿಯೇಶನ್ ಗೌರವ ಅಧ್ಯಕ್ಷ ಎಸ್.ಎಚ್.ಇಬ್ರಾಹಿಮ್, ಮಸೀದಿಯ ಮುಖ್ಯ ಉಪಾಧ್ಯಾಯರಾದ ಖಾಸಿಮ್ ಸ ಅದಿ, ಅದ್ಯಾಪಕರಾದ ಮುಸ್ತಫ ಸ ಅದಿ, ಆರೀಸ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ತೊಕ್ಕೊಟ್ಟು: ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಭಾರತೀಯ ಯೋಧರ ಆತ್ಮಕ್ಕೆ ಶಾಂತಿಸಿಗಲಿ, ಅವರ ಅಗಲುವಿಕೆಯ ದುಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಭಾರತೀಯ ಯೋಧರಿಗೆ ಉಗ್ರಗಾಮಿಗಳನ್ನು ಮಟ್ಟಹಾಕಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ ತೊಕ್ಕೊಟ್ಟಿನ ಶ್ರೀ ಗಣೇಶ ಮಂದಿರದಲ್ಲಿ ನಿನ್ನೆ ಮಾತೃಭೂಮಿ ಸೇವಾ ಪ್ರತಿಷ್ಠಾನದ ಅದ್ಯಕ್ಷ ಕೆ.ಟಿ.ಸುವರ್ಣರ ನೇತೃತ್ವದಲ್ಲಿ ಪೂಜಾ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದ ಆಡಳಿತ ಮೊಕ್ತೇಸರಾದ ಚಂದ್ರಹಾಸ್ ಅಡ್ಯಂತಾಯ, ಗಣೇಶ ಮಂದಿರದ ಅದ್ಯಕ್ಷ ಸದಾನಂದ ಗಣೇಶನಗರ, ಮಾಜಿ ಅದ್ಯಕ್ಷ ಟಿ.ರಾಮ, ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಪ್ರವೀಣ್.ಎಸ್.ಕುಂಪಲ, ತೊಕ್ಕೊಟ್ಟು ಹಿಂದೂ ಯುವ ಸೇನಾ ಅದ್ಯಕ್ಷ ದೀಕ್ಷಿತ್ ಪೂಜಾರಿ, ಜೈ ವೀರಮಾರುತಿ ವ್ಯಾಯಾಮ ಶಾಲಾ ಕಾರ್ಯದರ್ಶಿ ಪುರುಷೋತ್ತಮ ಕಲ್ಲಾಪು, ಕೌನ್ಸಿಲರ್ ನಮಿತಾ ಗಟ್ಟಿ, ವಿಶ್ವಹಿಂದೂ ಪರಿಷತ್ ನ ಪುರಂದರ ತೊಕ್ಕೊಟ್ಟು ಉಪಸ್ಥಿತರಿದ್ದರು.

Read More

UN NETWORKS ಮಂಗಳೂರು: ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧರಿಗೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮೊದಲಾದೆಡೆ ಶುಕ್ರವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.ಕದ್ರಿ ಮತ್ತು ಅಜ್ಜರಕಾಡಿನಲ್ಲಿರುವ ಯೋಧರ ಸ್ಮಾರಕದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಸೈನಿಕರ ಪರವಾಗಿಯೂ ಗೌರವ ನಮನ ಸಲ್ಲಿಸಲಾಯಿತು. ಜಿಲ್ಲಾ ಯುವ ಕಾಂಗ್ರೆಸ್‌ ಹಾಗೂ ಸಂಘ- ಸಂಸ್ಥೆಗಳ ನೇತೃತ್ವದಲ್ಲಿ ಕದ್ರಿಯ ಯೋಧರ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾರ್ವಜನಿಕರೂ ಆಗಮಿಸಿದ್ದರು. ಮಂಗಳೂರು ಮೇಯರ್‌ ಭಾಸ್ಕರ್‌ ಕೆ. ಮಾತನಾಡಿ, ನಮ್ಮನ್ನು ಕಾಯುವವರ ಮೇಲೆ ನಡೆದಿರುವ ದಾಳಿ ಘೋರವಾಗಿದೆ. ಹುತಾತ್ಮ ಯೋಧರು ಚಿರಸ್ಥಾಯಿಗಳು ಎಂದರು. ಹೇಯ ಕೃತ್ಯ: ಕ್ಯಾ| ಕಾರ್ಣಿಕ್‌ ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ಕಾರ್ಣಿಕ್‌ ಮಾತನಾಡಿ, ಉಗ್ರರು ಹೇಯ ಕೃತ್ಯನಡೆಸಿದ್ದಾರೆ. ಸೈನಿಕರನ್ನು ಗೌರವಿಸುವ ಮನೋಭಾವ ನಮ್ಮಲ್ಲಿ ಮೊದಲು ಜಾಗೃತವಾಗ ಬೇಕು. ಪ್ರತ್ಯೇಕತೆ, ಜಾತೀಯತೆ, ಸಂಕುಚಿತ ಭಾವನೆ ತೊರೆದು ದೇಶ ರಕ್ಷಕರನ್ನು ಸದಾ ಸ್ಮರಣೀಯವಾಗಿಸೋಣ ಎಂದರು.ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ನಿವೃತ್ತ ಸೈನಿಕರಾದ…

Read More

UN NETWORKS ಉಳ್ಳಾಲ : ಸ್ವಚ್ಛ, ಆರೋಗ್ಯವಂತ ಉಳ್ಳಾಲ ನಿರ್ಮಾಣ ನಿಟ್ಟಿನಲ್ಲಿ ಮುಂದಡಿಯಿಟ್ಟಿರುವ ನಗರಸಭೆ, ಕಸ ಸಂಗ್ರಹಣೆಗೆ ಬಕೆಟ್ ಖರೀದಿ, ಶೌಚಾಲಯಗಳಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್ ವಿಲೇವಾರಿ ಘಟಕ, ಕಸ ವಿಲೇವಾರಿ ಯಂತ್ರ ಖರೀದಿಗೆ ಅನುದಾನ ಮೀಸಲಿಡಲಾಗಿದೆ. ನಗರಸಭೆಯ ಅಧಿಕಾರಿಗಳು ತಯಾರಿಸಿದ ಬಜೆಟ್‍ಗೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದಾರೆ. ಉಳ್ಳಾಲದ ಘನತ್ಯಾಜ್ಯ ವಸ್ತು ವಿಲೇವಾರಿ ನಿಟ್ಟಿನಲ್ಲಿ ವೀಲ್ಡ್ ಬಿನ್ಸ್ ಖರೀದಿ, ಒಣಕಸ ಸಂಗ್ರಹ ಕೇಂದ್ರ, ಬೈಲಿಂಗ್ ಯಂತ್ರ ಖರೀದಿ, ಮೂಲದಲ್ಲಿಯೇ ಕಸ ಸಂಗ್ರಹಣೆ ಮಾಡಲು ಬಕೆಟ್ ಖರೀದಿ, ಎಲ್ಲಾ ಸರ್ಕಾರಿ ಕಚೇರಿ ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್ ವಿಲೇವಾರಿ ಘಟಕ ಮತ್ತು ಕಸ ವಿಲೇವಾರಿ ಮಾಡಲು ಯಂತ್ರಗಳ ಖರೀದಿಗೆ 260ಲಕ್ಷ ಮೀಸಲಿಡಲಾಗಿದೆ.2019-20ನೇ ಸಾಲಿನಲ್ಲಿ ನೀರು ಸರಬರಾಜು ಉತ್ತಮಗೊಳಿಸುವ ನಿಟ್ಟಿನಲ್ಲಿ ನೀರಿಗೆ ಸಂಬಂಧಪಟ್ಟ ಕಾಮಗಾರಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ನಗರಸಭಾ ನಿಧಿ, 14ನೇ ಹಣಕಾಸು ಆಯೋಗದ ಅನುದಾನ, ವಿಶೇಷ ಅನುದಾನ, ಕುಡಿಯುವ ನೀರಿನ ಸಮಸ್ಯೆಯ ಬಗೆಹರಿಸಲು ಬರುವ ಅನುದಾನಗಳನ್ನು ಸೇರಿಸಿ ಒಟ್ಟು ರೂ. 240ಲಕ್ಷ…

Read More

UN NETWORKS ಮಂಗಳೂರು: ಕಾಶ್ಮೀರದಲ್ಲಿ ನಮ್ಮ ದೇಶದ ಸೈನಿಕರ ಮೇಲೆ ನಡೆದಿರುವ ಉಗ್ರ ದಾಳಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಅಮಾನವೀಯ ಹಾಗೂ ಹೇಯ ಕೃತ್ಯ. ಈ ಉಗ್ರರ ಕೃತ್ಯಕ್ಕೆ ತೀರುಗೇಟು ನೀಡಲೇಬೇಕಾಗಿದೆ. ಕೇಂದ್ರ ಸರಕಾರದ ಜೊತೆ ಈ ಸಂದರ್ಭದಲ್ಲಿ ನಾವಿದ್ದೇವೆ. ಹುತಾತ್ಮ ಸೈನಿಕರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಚಿವರು ತಿಳಿಸಿದ್ದಾರೆ.

Read More

UN NETWORKS ನವದೆಹಲಿ: ಆತ್ಮಾಹುತಿ ದಾಳಿಗೆ ಕಾರಣವಾಗಿರುವ ಜೈಷ್ – ಎ-ಮೊಹಮದ್ ಸಂಘಟನೆ ಸ್ಥಾಪಕನ ಪರವಾಗಿ ಪಾಕಿಸ್ತಾನ ಹಾಗೂ ಚೀನಾ ಬ್ಯಾಟ್ ಮಾಡುತ್ತಿದೆ. ಹೀಗಾಗಿ ಉಗ್ರ ದಾಳಿ ಕುರಿತು ಇವೆರಡು ದೇಶಗಳ ಸರ್ಕಾರದಿಂದ ಅಧಿಕೃತ ಹೇಳಿಕೆಯೇ ಬಂದಿಲ್ಲ. ಶಾಂತಿ ಮಾತುಕತೆ ಮಾತನ್ನಾಡುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಾಕ್ತಿಸ್ತಾನದಲ್ಲಿ ಉತ್ತಮ ಮಳೆಯಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಅವರ ನೆಲದಲ್ಲಿ ಉಗ್ರ ಸಂಘಟನೆ ಮಾಡಿರುವ ಕುಕೃತ್ಯದ ಬಗ್ಗೆ ಮಾತ್ರ ಮೌನವಾಗಿದ್ದಾರೆ. ಇನ್ನೊಂದೆಡೆ ಪಾಕ್ ಪ್ರೇರಿತ ಉಗ್ರ ಚಟುವಟಿಕೆಗೆ ಜಾಗತಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅಮೆರಿಕಾ, ರಷ್ಯಾ, ಫ್ರಾನ್ಸ್, ಬ್ರಿಟನ್, ನೇಪಾಳ ಸೇರಿ ಬಹುತೇಕ ರಾಷ್ಟ್ರಗಳ ಭಾರತದ ಪರವಾಗಿ ನಿಂತಿದೆ. ಉಗ್ರ ದಾಳಿ ಹೇಯ ಕೃತ್ಯವಾಗಿದ್ದು, ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತದ ಪರವಾಗಿ ನಿಲ್ಲುವೆವು ಎಂದು ರಾಷ್ಟ್ರಗಳು ಹೇಳಿವೆ.

Read More

UN NETWORKS ನವದೆಹಲಿ: ಉಗ್ರರ ದಾಳಿಯಿಂದಾಗಿ ವೀರಮರಣವನ್ನಪ್ಪಿದ ಸಿಆರ್‌ಪಿಎಫ್‌ ಯೋಧರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಗೌರವ ಸಮರ್ಪಿಸಿದರು. ದೆಹಲಿ–ವಾರಾಣಸಿ ಸಂಚರಿಸಲಿರುವ ವಂದೇ – ಭಾರತ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡುವ ಮುನ್ನ ಹುತಾತ್ಮರಾದ ಯೋಧರಿಗೆ ಎರಡು ನಿಮಿಷಗಳ ಕಾಲ ಮೌನಾಚರಿಸಿದರು. ಇದೇ ವೇಳೆ ದಾಳಿಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಮ್ಮ ರಕ್ಷಣಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರ ಶೌರ್ಯದ ಬಗ್ಗೆ ನಮಗೆ ನಂಬಿಕೆ ಇದೆ. ಒಂದು ವೇಳೆ ನೆರೆಯ ದೇಶ ಈ ದಾಳಿಯ ಮೂಲಕ ಭಾರತವನ್ನು ದುರ್ಬಲಗೊಳಿಸಬಹುದು ಎಂದು ಭಾವಿಸಿದ್ರೆ ಆ ವಿಚಾರವನ್ನು ನೆರೆಯ ದೇಶ ಮರೆತುಬಿಡುವುದು ಒಳ್ಳೆಯದು. ನಮ್ಮ ಭದ್ರತಾ ಪಡೆಯ ಮೇಲೆ ಉಗ್ರರು ದಾಳಿ ಮಾಡಿ, ಬಹುದೊಡ್ಡ ತಪ್ಪು ಮಾಡಿದ್ದಾರೆ. ಇದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.ಉಗ್ರರ ಈ ಪೈಶಾಚಿಕ ಕೃತ್ಯದಿಂದ ವೀರಯೋಧರು ಹುತಾತ್ಮರಾಗಿದ್ದು ನೋಡಿ ನಮ್ಮೆಲ್ಲರ ರಕ್ತ ಕುದಿಯುತ್ತಿರುತ್ತದೆ ಎಂದು…

Read More

UN NETWORKS ದೆಹಲಿ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಉಗ್ರರ ಪಾಪ ಕೃತ್ಯಕ್ಕೆ 42 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಸಿಆರ್​​ಪಿಎಫ್​ ಯೋಧರು ಚಲಿಸುತ್ತಿದ್ದ 70 ವಾಹನಗಳ ಮೇಲೆ ರಕ್ಕಸ ಉಗ್ರರು ಗುಂಡಿನ ಮಳೆಗೈದಿದ್ದಾರೆ. ಶ್ರೀನಗರದ ಅವಂತಿಪುರ್​-ಪುಲ್ವಾಮಾ​ ಮಾರ್ಗ ಮಧ್ಯೆ ಸುಧಾರಿತ ಸ್ಪೋಟಕ ಬಳಸಿ ದಾಳಿ ಮಾಡಲಾಗಿದೆ. ಉಗ್ರರ ದಾಳಿಗೆ ಹಲವು ವಾಹನಗಳು ಧ್ವಂಸಗೊಂಡಿದ್ದು, ಯೋಧರ ಒಂದು ವಾಹನ ಸಂಪೂರ್ಣ ಸುಟ್ಟುಕರಕಲಾಗಿದೆ. ಜೈಷ್-ಎ-ಮೊಹಮ್ಮದ್ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಜೈಷ್ ಉಗ್ರ ಅದಿಲ್ ಅಹಮ್ಮದ್ ಖಾನ್ ತನ್ನ ಕಾರಿನಲ್ಲಿ ಸ್ಪೋಟಕಗಳನ್ನು ತುಂಬಿಕೊಂಡು ಬಂದು ಯೋಧರು ಚಲಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದುಕೊಂಡಿದ್ದಾನೆ. ಹಾಗೂ ತನ್ನನ್ನು ತಾನೇ ಸ್ಪೋಟಿಸಿಕೊಂಡಿದ್ದಾನೆ. ಬಳಿಕ ಉಗ್ರರು ಗುಂಡಿನ ಮಳೆಗೈದಿದ್ದಾರೆ. 54 ಬೆಟಾಲಿಯನ್ 34 ಸೇನಾ ಯೋಧರಿದ್ದ ಸೇನಾ ವಾಹನದ ಮೇಲೆ ಗ್ರೆನೆಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಸುಮಾರು 45 ಯೋಧರು ಗಾಯಗೊಂಡಿದ್ದಾರೆ. ಯೋಧರು ಉಗ್ರರ ವಿರುದ್ಧ ಸಾವು ಬದುಕಿನ ಹೋರಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಭದ್ರತಾ…

Read More

UN NETWORKS ಕೊಣಾಜೆ : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಖಾಲಿ ಇರುವ ಕಾನೂನು ಸುವ್ಯವಸ್ಥೆ ಹಾಗು ಕ್ರೈಂ ವಿಭಾಗದ ಉಪನಿರೀಕ್ಷಕರು ಹಾಗೂ ಇತರ ಖಾಲಿ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಿಸುವಂತೆ ಒತ್ತಾಯಿಸಿ ಡಿವೈಎಫ್‍ಐ ನಿಯೋಗ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಕಳ್ಳತನ, ಗಾಂಜಾ ಸಾಗಾಟ, ಸುಲಿಗೆಯಂತಹ ಚಟುವಟಿಕೆಗಳಿಂದ ಜನರು ಭೀತಿಯಿಂದ ಬದುಕುವಂತಾಗಿದೆ. ಆದ್ದರಿಂದ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳುವಂತೆ ನಿಯೋಗ ಒತ್ತಾಯಿಸಿತು. ನಿಯೋಗದಲ್ಲಿ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಉಳ್ಳಾಲ ವಲಯ ಉಪಾಧ್ಯಕ್ಷ ರಫೀಕ್ ಹರೇಕಳ, ಮುಖಂಡರಾದ ಅಶ್ರಫ್ ಕೆ.ಸಿ.ರೋಡ್, ಸುನೀಲ್ ತೇವುಲ ಹಾಗೂ ಶಾಕಿರ್ ಹರೇಕಳ ಉಪಸ್ಥಿತರಿದ್ದರು.

Read More