Author: UllalaVani

Kannada News From Coastal Karnataka

UN NETWORKS ಕುಂಪಲ: ಕುಂಪಲ ಬೈಪಾಸ್‌ನಿಂದ ಕುಂಪಲ ಆಶ್ರಯ ಕಾಲನಿವರೆಗೆ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಪರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ನೇತೃತ್ವದಲ್ಲಿ ವಿನೂತನ ರೀತಿಯಲ್ಲಿ ರೋಡ್‌ ಶೋ ಮೂಲಕ ಮತಯಾಚನೆ ನಡೆಸಲಾಯಿತು. ರೋಡ್‌ ಶೋನಲ್ಲಿ ಹುಲಿ ವೇಷ, ಕಂಬಳದ ಎತ್ತುಗಳ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಅಭ್ಯರ್ಥಿ ಮಿಥುನ್‌ ರೈ, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ ಅಸೈಗೋಳಿ, ಉಪಾಧ್ಯಕ್ಷ ಸುರೇಶ್‌ ಭಟ್ನಗರ, ದಿನೇಶ್‌ ಕುಂಪಲ, ಗ್ರಾಮಾಧ್ಯಕ್ಷ ಕಿಶೋರ್‌ ಮುಂಡೋಳಿ, ವಿನೋದ್‌ ಕುಂಪಲ, ದೀಪಕ್‌ ಪಿಲಾರ್‌, ದಿನೇಶ್‌ ಬೇಕಲ್‌, ಬಾಝಿಲ್‌ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು.

Read More

UN NETWORKS ಕುಂಪಲ: ಮತ್ತೂಮ್ಮೆ ಮೋದಿ ಮಗದೊಮ್ಮೆ ನಳಿನ್‌ ಘೋಷಣೆಯೊಂದಿಗೆ ಸೋಮೇಶ್ವರ ಗ್ರಾಮದ ಕುಂಪಲ ಬಗಂಬಿಲದಿಂದ ಕುಂಪಲ ಶಾಲೆ, ಚೇತನ್‌ನಗರವಾಗಿ ಕುಂಪಲ ಬೈಪಾಸ್‌ವರೆಗೆ ಮೈ ಬಿ ಚೌಕಿದಾರ್‌ ಪಾದಯಾತ್ರೆ ನಡೆಯಿತು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್‌ ಕುಂಪಲ ನೇತೃತ್ವದಲ್ಲಿ ವಿಧಾನ ಪರಿಷತ್‌ ವಿರೋಧ ಪಕ್ಷದ ಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಜಿಲ್ಲಾ ಚುನಾವಣೆ ಸಂಚಾಲಕ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಕೋಶಾಧಿಕಾರಿ ಸಂಜಯ್‌ ಪ್ರಭು, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಪೂಜಾ ಪೈ, ಕ್ಷೇತ್ರಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್‌, ಕಾರ್ಯದರ್ಶಿ ನಮಿತಾ ಶ್ಯಾಮ್‌, ಕ್ಷೇತ್ರ ಪ್ರಭಾರಿ ರಾಧಕೃಷ್ಣ ರೈ ಬೂಡಿಯಾರ್‌, ವಿಶ್ವ ಹಿಂದು ಪರಿಷತ್‌ನ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಗೋಪಾಲ್‌ ಕುತ್ತಾರು, ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ಕೆ.ಟಿ.ಸುವರ್ಣ, ಕ್ಷೇತ್ರ ಪ್ರ. ಕಾರ್ಯದರ್ಶಿ ಮೋಹನ್‌ ರಾಜ್‌ ಕೆ.ಆರ್‌., ಜಿ.ಪಂ. ಸದಸ್ಯೆ ಧನಲಕ್ಷೀ ಗಟ್ಟಿ, ತಾಲೂಕು ಪಂ. ಸದಸ್ಯ…

Read More

UN NETWORKS ತೊಕ್ಕೊಟ್ಟು : 2019ರ ಐತಿಹಾಸಿಕ 17ನೇ ಮಹಾ ಚುನಾವಣೆಯು ನಮ್ಮ ದೇಶ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ನಿರ್ಮಿಸುವ ಚುನಾವಣೆಯಾಗಿದ್ದು, ಮತದಾರರು ಅತ್ಯಂತ ಶ್ರದ್ಧೆಯಿಂದ ತಮ್ಮ ಜವಾಬ್ದಾರಿ ನಿಭಾಯಿಸಬೇಕೆಂದು ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಹೇಳಿದರು. ತೊಕ್ಕೊಟ್ಟು ಕಾಪಿಕಾಡಿನ ಬಿಜೆಪಿ ಚುನಾವಣೆ ಕಾರ್ಯಾಲಯದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ, ಐತಿಹಾಸಿಕ ಚುನಾವಣೆಯಲ್ಲಿ ಚೌಕಿದಾರ್‌ ಹೆಸರಲ್ಲಿ ಸ್ವಯಂ ಸ್ಫೂರ್ತಿಯಿಂದ ಕಾರ್ಯಕರ್ತರು ತೊಡಗಿಸಿದ್ದಾರೆ ಎಂದರು. ಕ್ಷೇತ್ರಾಧ್ಯಕ್ಷ ಸಂತೋಷ್‌ ಕುಮಾರ್‌ ಬೋಳಿಯಾರ್‌, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಸತೀಶ್‌ ಕುಂಪಲ, ನಮಿತಾ ಶ್ಯಾಂ, ಸಂಜೀವ ಶೆಟ್ಟಿ ಅಂಬ್ಲಿಮೊಗರು, ಹರಿ ಯಪ್ಪ ಸಾಲಿಯಾನ್‌, ಜೀವನ್‌ ತೊಕ್ಕೊಟ್ಟು, ಚರಣ್‌, ಪ್ರಕಾಶ್‌ ಸಿಂಪೋನಿ ಉಪಸ್ಥಿತರಿದ್ದರು.

Read More

UN NETWORKS ಪಿಲಾರು : ಶಿವನಿಗೆ ಅಭಿಷೇಕದ ಮೂಲಕ ಸೇವೆ ಸಲ್ಲಿಸಿದರೆ, ದೇವಿಗೆ ಅರ್ಚನೆಯ ಮುಖಾಂತರ ಒಲಿಸಲು ಪ್ರಯತ್ನಿಸುತ್ತೇವೆ. ಸರ್ವ ದೇವರನ್ನು ಒಂದೇ ವಿಧದಲ್ಲಿ ಒಲಿಸಲು ಭಜನೆಯಿಂದ ಸಾಧ್ಯ ಎಂದು ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಹೇಳಿದರು. ಪಿಲಾರು ಶ್ರೀ ಮಹಾಲಕ್ಷ್ಮೀ ಮಂದಿರ ದ ಪ್ರತಿಷ್ಠಾ ದಶಮಾನೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ದ್ವೇಷ ಮರೆತು ಎಲ್ಲರು ಒಂದಾಗಿ ಭಗವಂತನ ಭಜಿಸಬೇಕು. ಆ ಮೂಲಕ ಸಂಘಟನಾ ಸಾಮಾರ್ಥ್ಯ ಹೆಚ್ಚಿಸಬೇಕು. ಸಂಘಟನೆಯ ಮುಖಾಂತರ ಸಮಾಜಮುಖಿ ಕಾರ್ಯಗಳನ್ನ ನಡೆಸುವಂತಾಗಬೇಕು ಎಂದರು. ಕೋಟೆಕಾರು ಶೃಂಗೇರಿ ಶಾಖಾ ಮಠದ ಧರ್ಮದರ್ಶಿ ಸತ್ಯಶಂಕರ ಬೊಳ್ಳಾವ ಮಾತನಾಡಿ ಯುವ ಶಕ್ತಿಗಳಿಂದು ಹಾದಿ ತಪ್ಫುತ್ತಿದ್ದು,ಮಂದಿರಗಳು ,ಸಂಘ ಸಂಸ್ಥೆಗಳು ಒಟ್ಟಾಗಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ನಡೆಸಬೇಕು ಎಂದು ನುಡಿದರು. ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ನಿವೃತ್ತ ಕಾರ್ಗಿಲ್ ಯೋಧ ಪ್ರವೀಣ್…

Read More

UN NETWORKS ಪಜೀರ್ : ಮತದಾನ ನಮ್ಮ ಹಕ್ಕು, ಭಾಗವಹಿಸುವಿಕೆ ಪ್ರತಿಯೊಬ್ಬರ ಕರ್ತವ್ಯ, ಕ್ರೈಸ್ತರೆಲ್ಲರೂ ಈ ಬಾರಿಯ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರೆ.ಫಾ.ಫ್ರಾನ್ಸಿಸ್ ಆಲ್ಮೇಡ ಹೇಳಿದರು. ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ 25ನೇ ವರ್ಷದ ಪ್ರಯುಕ್ತ ಕೆಥೊಲಿಕ್ ಸಭಾ ಪಜೀರ್ ಘಟಕದ ಆಶ್ರಯದಲ್ಲಿ ಭಾನುವಾರ ಪಜೀರ್ ಮೆರ್ಸಿಯಮ್ಮನವರ ಇಗರ್ಜಿಯಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮತದಾನ ಹಕ್ಕಾಗಿದ್ದು ಅಭ್ಯರ್ಥಿ ಆಯ್ಕೆಯೂ ಸ್ವತಂತ್ರವಾಗಿದೆ. ಈ ವಿಷಯದಲ್ಲಿ ಯಾರ ಒತ್ತಡಕ್ಕೂ ಒಳಗಾಗದೆ ಪ್ರತಿಯೊಬ್ಬರೂ ಗೌಪ್ಯತೆ ಕಾಪಾಡಿಕೊಳ್ಳಬೇಕು. ಈ ವರ್ಷದ ಮತದಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಪ್ರಜಾಪ್ರಭುತ್ವ ಬಲಿಷ್ಠಗೊಳಿಸಬೇಕು ಎಂದು ಕರೆ ನೀಡಿದರು. ಪಜೀರ್ ಚರ್ಚ್ ಧರ್ಮಗುರು ರೆ.ಫಾ.ಸುನಿಲ್ ವೇಗಸ್, ಜೆಪ್ಪು ಸಂತ ಜೋಸೆಫರ ಸೆಮಿನಾರ್ ಆಡಳಿತಾಧಿಕಾರಿ ರೆ.ಫಾ.ಪ್ರವೀಣ್ ಲಿಯೋ ಲಾಸ್ರಾದೋ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಜೋನ್ ವಿಕ್ಟರ್ ಮೆಂಡೋನ್ಸ, ಕೆಥೊಲಿಕ್ ಸಭಾ ಅಧ್ಯಕ್ಷ ಹಿಲರಿ ಡಿಸೋಜ, ರಾಜಕೀಯ ಸಂಚಾಲಕ ವಲೇರಿಯನ್ ಡಿಸೋಜ, ಕಾರ್ಯದರ್ಶಿ ವಿಲಿತಾ…

Read More

UN NETWORKS ಮುಡಿಪು : ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ ಅವರಂತಹ‌ ಸಮರ್ಥ ನಾಯಕರನ್ನು ಮೂಲೆಗುಂಪು ಮಾಡಿದ್ದೇ ಮೋದಿ ಅವರ ಸಾಧನೆ ಎಂದು ಸಂಸದ, ಚಿತ್ರನಟ ಶತ್ರುಘ್ನ‌ ಸಿನ್ಹ‌ ಹೇಳಿದರು. ಮುಡಿಪು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಮುಡಿಪು ಜಂಕ್ಷನ್ ನಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ವಾಜಪೇಯಿ ಒಳ್ಳೆಯ ಸಮರ್ಥ ಆಡಳಿತಗಾರ ಸಾವನ್ನಪ್ಪಿದ್ದಾರೆ. ಅಡ್ವಾಣಿ , ಯಶವಂತ ಸಿನ್ಹ ಅವರಂತಹ ಧೀಮಂತ ನಾಯಕರ ಸ್ಥಿತಿ ನಿಮಗೆಲ್ಲರಿಗೂ ಗೊತ್ತಿದೆ. ಅಷ್ಟಕ್ಕೂ ಇಂದಿರಾ ಗಾಂಧಿಯವರು ಜೀವಿಸಿದ್ದರೆ ನಾನು ಕಾಂಗ್ರೆಸ್ಸಿನಲ್ಲೇ ಇರುತ್ತಿದ್ದೆ. ಹಲವು ಕಾರಣದಿಂದ ದೂರವಾದೆ. ಇದೀಗ ಡೇರಿಂಗ್, ಡ್ಯಾಶಿಂಗ್ ಯುವ ನಾಯಕ ರಾಹುಲ್ ಗಾಂಧಿ ಸಾರಥ್ಯ ಕಾಂಗ್ರೆಸ್ ಗೆ ಇರುವುದು ಯುವಜನತೆಯ ನಿರೀಕ್ಷೆ ಹೆಚ್ಚಿಸಿದೆ ಎಂದು ಮಾಜಿ ಸಂಸದ, ಚಿತ್ರನಟ ಶತ್ರುಘ್ನ ಸಿನ್ಹ ಹೇಳಿದರು. ಪಾಟ್ನಾದಿಂದ ಬಂದು ಸೌತ್ ಇಂಡಿಯಾದ ಮಂಗಳೂರು ಕ್ಷೇತ್ರದ ಮುಡಿಪಿನಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದೇನೆ.‌ ಯಾವುದೇ ವಿಷಯಕ್ಕೆ ಬಂದರೂ ವ್ಯಕ್ತಿಗಿಂತ ಪಕ್ಷ ದೊಡ್ಡದು,…

Read More

UN NETWORKS ಮದೀನಾ(ಸೌದಿ ಅರೇಬಿಯಾ) : ಇಂಡಿಯನ್ ಸೋಶಿಯಲ್ ಫೋರಂ (ಕರ್ನಾಟಕ ಚಾಪ್ಟರ್) ಮದೀನಾ ಮುನವ್ವರವತಿಯಿಂದ ಅನಿವಾಸಿ ಕನ್ನಡಿಗರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು ಪ್ರಸಕ್ತ ರಾಜಕೀಯ ಮತ್ತು ಮುಸ್ಲಿಮರು ಎಂಬ ಸಾರ್ವಜನಿಕ ಕಾರ್ಯಕ್ರಮವು ಮದೀನಾದಲ್ಲಿ ನಡೆಯಿತು. ಐ.ಎಸ್.ಎಫ್ ಮದೀನಾ ಮುನವ್ವರ ಕರ್ನಾಟಕ ಚಾಪ್ಟರ್ ಅಧ್ಯಕ್ಷರಾದ ಇಲ್ಯಾಸ್ ಗುರುಪುರ ಸಭಾಧ್ಯಕ್ಷತೆ ವಹಿಸಿದರು, ಹಾಪಿಳ್ ಇಲ್ಯಾಸ್ ಅಲ್ ಖಾಸಿಮಿ ದುವಾ ನೆರವೇರಿಸಿದರು. ಕಾರ್ಯಕ್ರಮವನ್ನು ಉಧ್ಘಾಟಿಸಿದ ಐ.ಎಸ್.ಎಫ್ ಮದೀನಾ ಕೇರಳ ಘಟಕ ವೆಲ್ಫೇರ್ ಚೇರ್ಮೆನ್ ಅಶ್ರಫ್ ಚೋಕ್ಲಿ ಇಂಡಿಯನ್ ಸೋಷಿಯಲ್ ಫೋರಂನ ಕಾರ್ಯ ಚಟುವಟಿಕೆಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಐ.ಎಸ್.ಎಫ್. ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಮಜೀದ್ ವಿಟ್ಲ ಮಾತನಾಡುತ್ತಾ ದೇಶದಲ್ಲಿ ಮುಸ್ಲಿಮರ ಪರಿಸ್ಥಿತಿಯು ದಲಿತರಿಗಿಂತಲೂ ಹೀನಾಯವಾಗಿದೆ ಎಂದು ಸಾಚಾರ್ ಕಮಿಷನ್ ವರದಿ ಮಾಡಿದೆ. ನಮ್ಮ ಮತಗಳನ್ನು ಪಡೆದ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೂ ನಮ್ಮ ಹಕ್ಕುಗಳ ಬಗ್ಗೆ ಲೋಕಸಭೆ, ಶಾಸನ ಸಭೆಗಳಲ್ಲಿ ಮಾತನಾಡುತ್ತಿಲ್ಲ. ಬಿಜೆಪಿಯನ್ನು ತೋರಿಸಿ ಮತ ಪಡೆದು ಉನ್ನತ ಅಧಿಕಾರ ಪಡೆದ…

Read More

UN NETWORKS ದೇರಳಕಟ್ಟೆ : ಇಂದು ಸಂಜೆ 7ಕ್ಕೆ ಸರಿಯಾಗಿ ದೇರಳಕಟ್ಟೆಯ ಸಿಟಿ ಗ್ರೌಂಡ್ ನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಲಿದೆ. ಚುನಾವಣಾ ಪ್ರಚಾರವಾಗಿ ಸಂಜೆ ಐದು ಗಂಟೆಗೆ ಸರಿಯಾಗಿ ನಾಟೆಕಲ್ ಜಂಕ್ಷನ್ ನಿಂದ ಪ್ರಾರಂಭವಾಗುವ ಬೃಹತ್ ಪಾದಯಾತ್ರೆ ಮೂಲಕ ದೇರ್ಲಕಟ್ಟೆಯ ಜಂಕ್ಷನ್ನಲ್ಲಿ ಮತಯಾಚನೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.

Read More

UN NETWORKS ದೇರಳಕಟ್ಟೆ : ನೈತಿಕ ಸ್ಥೈರ್ಯ ಸಮರ್ಥ ಜೀವನಕ್ಕೆ ಸಹಕಾರಿ. ಭಯವನ್ನು ಎಂದಿಗೂ ತೋರಿಸದೆ ಶಾರೀರಿಕವಾಗಿ ಧೈರ್ಯವಿದ್ದಲ್ಲಿ ಯಶಸ್ವಿ ಜೀವನ ರೂಪಿಸಲು ಸಾಧ್ಯ ಎಂದು ಬೆಳಗಾವಿ ಕೆಎಲ್‍ಇ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಮುಕುಂದ್ ಎ. ಉಡ್ಜಂಕರ್ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜಿನ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಹೋಮಿಯೋಪಥಿ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಸೂಕ್ಷ್ಮಾಣು ಜೀವಿಗಳ ರೂಪದಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳಿಗೆ ಸ್ಯಾಮ್ಯುಯೆಲ್ ಹಾನಿಮನ್ ಔಷಧಿಯನ್ನು ಕಂಡು ಹಿಡಿದು ಹೋಮಿಯೋಪತಿ ಆರಂಭವಾಗಿತ್ತು. ಹೋಮಿಯೋಪತಿ ವೈದ್ಯಕೀಯ ಪದ್ಧತಿಯ ಮಹತ್ತರ ಬೆಳವಣಿಗೆಗೆ ಹಾನಿಮನ್ ನಂತಹ ಶ್ರೇಷ್ಟ ವ್ಯಕ್ತಿಗಳು ಮತ್ತೆ ಹೆಚ್ಚು 10 ವರ್ಷಗಳ ಕಾಲ ಬಾಳಬೇಕಿತ್ತು. ಪ್ರಾಮಾಣಿಕತೆ, ಸಮಗ್ರತೆ ಜೀವನದ ಪ್ರಮುಖ ಅಂಶಗಳಾಗಿವೆ. ಅದನ್ನು ವಿದ್ಯಾರ್ಥಿಗಳಿಗೆ ಅರಿಯುವಂತೆ ಪದವಿಯನ್ನು ನೀಡುತ್ತಿರುವ ಫಾದರ್ ಮುಲ್ಲರ್ಸ್ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ರೆ. ಫಾ. ರಿಚ್ಚಾರ್ಡ್…

Read More

UN NETWORKS ಕೊಣಾಜೆ : ಕೊಣಾಜೆ ಠಾಣಾ ವ್ಯಾಪ್ತಿಯ ಗಣೇಶ್ ಮಹಲ್ ಬಳಿ ಬೈಕೊಂದಕ್ಕೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹೊತ್ತಿ ಉರಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.ಘಟನೆಯಲ್ಲಿ ಬೈಕ್ ಸವಾರ ಹಾಗೂ ಸಹ ಸವಾರನಿಗೆ ಗಂಭೀರ ಗಾಯವಾಗಿದೆ. ಮಂಗಳೂರು ವಿಶ್ವವಿದ್ಯಾಲಯ ಬಳಿಯ ಗಣೇಶ್ ಮಹಲ್ ಸಮೀಪ ಪಿಕಪ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆ ಸಂಭವಿಸಿದಾಗ ಬೈಕ್ಮನ ಸವಾರರು ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ..ಅವರನ್ನು ದೇರಳಕಟ್ಟಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಕೂಡಲೇ ಬೈಕ್ ಗೆ ಬೆಂಕಿ ಹಿಡಿದಿದ್ದು ಬೈಕ್ ಸಂಪೂರ್ಣ ಸುಟ್ಟು ಹೋಗಿದೆ. ಗಾಯಗೊಂಡ ಬೈಕ್ ಸವಾರರನ್ನು ಬಾಕ್ರಬೈಲ್ ಮುದುಂಗಾರು ಕಟ್ಟೆ ಮೂಲದವರು ಎನ್ನಲಾಗಿದೆ.

Read More