Author: UllalaVani

Kannada News From Coastal Karnataka

UN NETWORKS ಉಳ್ಳಾಲ : ಉಳ್ಳಾಲದ ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ, ಶ್ರೀ ಮಲರಾಯ ದೇವಸ್ಥಾನ ಇಲ್ಲಿ ಎ.24ರಿಂದ ಎ.26ರ ವರೆಗೆ ನಡೆಯಲಿರುವ ವರ್ಷಾವಧಿ ಉತ್ಸವದ ಪೂರ್ವಭಾವಿಯಾಗಿ ಕೋಳಿ ಕುಂಟವು ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉಳ್ಳಾಲಗುತ್ತು ಬಾಲಕೃಷ್ಣ ಶೆಟ್ಟಿ, ರಮಾನಾಥ ಭಂಡಾರಿ ಉಳ್ಳಾಲಗುತ್ತು, ಗಣೇಶ ಶೆಟ್ಟಿ ಬೊಡಂಗಿಲ ಮನೆ, ಸುರೇಂದ್ರ ಶೆಟ್ಟಿ ಮಂಚಿಲ, ಶಂಕರ ಹೊಗೆಮನೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಳ್ಳಾಲ ಸುಂದರ, ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀನಿವಾಸ ಕೊರಸಾನ, ಯು.ಕೆ. ಗೋಪಾಲ, ಹರ್ಷವರ್ಧನ ಉಳ್ಳಾಲ, ದೇವಕಿ ಆರ್. ಉಳ್ಳಾಲ್, ಹರಿಣಾಕ್ಷಿ ಬಂಡಿಕೊಟ್ಯ, ಕಾರ್ಯಕಾರಿ ಸಮಿತಿ ಸದಸ್ಯ ಮಧ್ವರಾಜ್ ತೊಕ್ಕೊಟ್ಟು, ಲಕ್ಷ್ಮಣ ಬಂಡಸಾಲೆ, ಲತೀಶ್ ಬಂಡಿಕೊಟ್ಯ, ಉದಯ ಆರ್.ಕೆ. ಉಳ್ಳಾಲ್, ಜಗದೀಶ್ ಬಂಡಿಕೊಟ್ಯ ಉಪಸ್ಥಿತರಿದ್ದರು. ಎ.24 ರಿಂದ ವರ್ಷಾವಧಿ ಉತ್ಸವ ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ ಶ್ರೀ ಮಲರಾಯ ದೇವಸ್ಥಾನದ ವರ್ಷಾವಧಿ ಉತ್ಸವ ಎ.24 ರಿಂದ ಎ.26 ರವರೆಗೆ ನಡೆಯಲಿದೆ. ಶ್ರೀ ಕ್ಷೇತ್ರದ ನಾಗದೇವರಿಗೆ ತಂಬಿಲದ ಮೂಲಕ ಆರಂಭವಾಗಲಿರುವ…

Read More

UN NETWORKS ಉಳ್ಳಾಲ : ನಾಲ್ಕು ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದ ಮತದಾನ ವಿಳಂಬ, ಬಿಜೆಪಿ ಪರ ಪೊಲೀಸ್ ಪೇದೆ ನಿಂತ ಆರೋಪ ಸೇರಿದಂತೆ ಗೊಂದಲಗಳ ನಡುವೆ ಮಂದಗತಿಯಲ್ಲಿ ಉಳ್ಳಾಲ ಭಾಗದಲ್ಲಿ ಮತದಾನ ನಡೆಯಿತು. ಮಹಿಳಾ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ ಹೆಚ್ಚು ಮಹಿಳೆಯರೇ ಮತ ಚಲಾಯಿಸಿದರು. ಕುಂಪಲ ಶಾಲೆಯ ಮತಗಟ್ಟೆಯಲ್ಲಿ 85ರ ಹರೆಯದ ಕೃಷ್ಣನಗರ ನಿವಾಸಿ ಬಂಟಪ್ಪ ಪೂಜಾರಿ ವಾಕಿಂಗ್ ಸ್ಟಿಕ್ ಹಿಡಿದುಕೊಂಡೇ ಮತಚಲಾಯಿಸಿದರು. ಅಪಘಾತದಲ್ಲಿ ನಡೆಯಲಾಗದ ಸ್ಥಿತಿಯಲ್ಲಿರುವ ಅವರ ಪುತ್ರ 30ರ ಹರೆಯದ ಅಶೋಕ್ ಪೂಜಾರಿ ಅವರನ್ನು ಸ್ಥಳೀಯ ಯುವಕರು ಎತ್ತಿಕೊಂಡು ಕರೆತಂದು ಮತದ ಹಕ್ಕು ಚಲಾಯಿಸಲು ಸಹಕರಿಸಿದರು. ತೊಕ್ಕೊಟ್ಟು ಕಾಪಿಕಾಡು ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕಟ್ಟಡದಿಂದ ಬಿದ್ದು ಬೆನ್ನಿಗೆ ಗಾಯಗೊಂಡು ನಡೆಯಲಾಗದ ಸ್ಥಿತಿಯಲ್ಲಿರುವ ಹರ್ಷಿತ್ ಗಟ್ಟಿ ಅನ್ನುವ ಯುವಕನನ್ನು ಸ್ಥಳೀಯರೇ ಎತ್ತಿಕೊಂಡು ಕರೆತಂದು ಮತ ಚಲಾಯಿಸಿದರು. ಉಳ್ಳಾಲದ ಬಿ.ಎಂ ಶಾಲೆಯ ಮತಗಟ್ಟೆಯಲ್ಲಿ ಕಾಪಿಕಾಡು ಗಟ್ಟಿ ಸಮಾಜಭವನದಲ್ಲಿ ಮದುವೆಯಾದ ಮೊಗವೀರಪಟ್ನದ ಅರ್ಚನಾ ಅನ್ನುವ ಮದುಮಗಳು ಮದುವೆ ಬಳಿಕ…

Read More

UN NETWORKS ಮಂಗಳೂರು : ಮಂಗಳೂರಿನ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜು ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.96 ಫಲಿತಾಂಶವನ್ನು ಗಳಿಸಿದೆ. ಪರೀಕ್ಷೆಗೆ ಹಾಜರಾದ 201 ವಿದ್ಯಾರ್ಥಿಗಳಲ್ಲಿ 49 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ 120 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜು ಸಹಾಯಕ ವ್ಯವಸ್ಥಾಪಕ ಮುಖ್ಯಸ್ಥ ಮುರಳಿ ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ವಿದ್ಯಾರ್ಥಿಗಳಾದ ಶ್ರುತಿ ಕಾಮತ್ ಶೇ 96.3 ಹಾಗೂ ಜಾಸ್ವಿನ್ ಡಿ. ಕೋಟ್ಯಾನ್ ಶೇ 95.1 ಅಂಕಗಳನ್ನು ಗಳಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದರು. ಪ್ರಿನ್ಸಿಪಾಲ್ ರಾಮಕೃಷ್ಣ ಭೋಗ್ಯಾಮ್, ಉಪ ಪ್ರಿನ್ಸಿಪಾಲರಾದ ಸಿಂಧು ಮತ್ತಿತರರು ಉಪಸ್ಥಿತರಿದ್ದರು.

Read More

UN NETWORKS ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವಿವಿಧೆಡೆ ಮುಂಜಾನೆಯಿಂದಲೇ ಮತದಾನ ಪ್ರಕ್ರಿಯೆ ಚುರುಕಿನಿಂದ ಆರಂಭಗೊಂಡಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ತಮ್ಮ ಹಕ್ಕು ಚಲಾಯಿಸಿದ್ದಾರೆ. ನಗರದ ಬಲ್ಮಠದಲ್ಲಿ ಮತದಾನ ಮಾಡಿದ್ದು, ಇತರ ಮತದಾರರಿಗೆ ಸಾಥ್ ನೀಡುತ್ತಿದ್ದಾರೆ. ಮಂಗಳೂರಿನ ಬಲ್ಮಠ ಮತಗಟ್ಟೆಯಲ್ಲಿ ಬೆಳಿಗ್ಗೆಯೇ ಮತದಾನಕ್ಕೆ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದು, ಚುರುಕಿನಿಂದ ಮತದಾನ ನಡೆಯುತ್ತಿದೆ. ಪ್ರಜಾಪ್ರಭುತ್ವದ ಹಬ್ಬ, ಭವಿಷ್ಯಕ್ಕಾಗಿ ಪ್ರಜೆಗಳು ತಮ್ಮ ಪವರ್ ತೋರಿಸುವ ಅವಕಾಶ ಬಂದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಬಹಳ ಉತ್ಸಾಹದಿಂದ ಮತದಾರ ಪ್ರಭುಗಳು ಮತದಾನ ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

Read More

UN NETWORKS ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವಿವಿಧೆಡೆ ಮುಂಜಾನೆಯಿಂದಲೇ ಮತದಾನ ಪ್ರಕ್ರಿಯೆ ಚುರುಕಿನಿಂದ ಆರಂಭಗೊಂಡಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ತಮ್ಮ ಮತ ಚಲಾಯಿಸಿದ್ದಾರೆ. ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮತ ಚಲಾಯಿಸಿದ್ದಾರೆ. ಮಂಗಳೂರಿನ ಹಲವೆಡೆ ಮತಗಟ್ಟೆಯಲ್ಲಿ ಬೆಳಿಗ್ಗೆಯೇ ಮತದಾನಕ್ಕೆ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದು, ಚುರುಕಿನಿಂದ ಮತದಾನ ನಡೆಯುತ್ತಿದೆ.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಬಹಳ ಉತ್ಸಾಹದಿಂದ ಮತದಾರ ಪ್ರಭುಗಳು ಮತದಾನ ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

Read More

UN NETWORKS ಬೋಳಿಯಾರು : ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಬೋಳಿಯಾರು ಜಾರದಗುಡ್ಡೆಯ ರಂತಡ್ಕ ಸರಕಾರಿ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 103 ರಲ್ಲಿ ಮತ ಚಲಾಯಿಸಿದರು. ಪತ್ನಿ ಲೆಮೀಸ್ ಖಾದರ್ ಅವರು ಜತೆಗಿದ್ದು ಮತ ಚಲಾಯಿಸಿದರು. ಬೆಂಬಲಿಗರ ಜತೆಗೆ ಮತಗಟ್ಟೆಗೆ ಆಗಮಿಸಿದ್ದ ಸಚಿವರು ` ಮಿಥುನ್ ರೈ ಅತುತ್ತಮ ಅಭ್ಯರ್ಥಿ. ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಜನತೆ ಬೆಂಬಲಿಸುವ ವಿಶ್ವಾಸವಿದೆ. ಜನರ ಭಾವನೆಗಳೊಂದಿಗೆ ಬಿಜೆಪಿ ಮತ ಪಡೆಯುತ್ತಿದೆ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಜನರ ಬದುಕಿಗೆ ಬೇಕಾದ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಜನರಿಂದ ಮತ ಪಡೆಯುತ್ತದೆ ಎಂದರು.

Read More

UN NETWORKS ಮಂಗಳೂರು: ಸಮಾಜ ಸೇವಕ ಎ.ಕೆ ಇಕ್ಬಾಲ್ (49) ಮಂಗಳೂರಿನ ಪಾಂಡೇಶ್ವರ ನಿವಾಸದಲ್ಲಿ ನಿಧನರಾದರು. ಇವರು ರೊಟ್ರಾಕಟ್ಟ್ ಕ್ಲಬ್ ಪೊರ್ಟ್ ಟೌನ್ ಇದರ ಅಧ್ಯಕ್ಷರಾಗಿ, ಅಝ್ ಅರಿಯ್ಯಾ ಫುಟ್ಬಾಲ್ ಕ್ಲಬ್ ನ ಕಾರ್ಯದರ್ಶಿ ಯಾಗಿ, ಯುತ್ ಕಾಂಗ್ರೆಸ್ ನ ಕೋಶಾಧಿಕಾರಿ ಹಾಗೂ ಹಲವಾರು ಸಂಘ ಸಂಸ್ಥೆಯಲ್ಲಿ ಸೇವೆಸಲ್ಲಿಸಿದ್ದರು. ಉಸ್ತುವಾರಿ ಸಚಿವ ಯು.ಟಿ ಖಾದರ್, ಮಾಜಿ ಸಚಿವ ಜೆ.ಆರ್ ಲೋಬೋ. ಕಾಂಗ್ರೆಸ್ ಮುಖಂಡ ಶಾಹುಲ್ ಹಮೀದ್, ಹೈದರ್ ಪಾರ್ತಿಪ್ಪಾಡಿ, ಅಸ್ಲಂ, ಕಾರ್ಪೊರೇಟ್ ಗಳಾದ ವಿನಯ ರಾಜ್, ಅಬ್ದುಲ್ ಲತೀಫ್ ಖಂದಕ್, ಅಬ್ದುಲ್ ರವೂಫ್ ಭೇಟಿ ನೀಡಿ ಸಂತಾಪ ಸೂಚಿಸಿದರು.

Read More

UN NETWORKS ಉಳ್ಳಾಲ: ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಸಲುವಾಗಿ ಹಿಂದುಳಿದ ವರ್ಗ, ದಲಿತರು ಮುಂದೆ ನಿಂತು ಕೆಲಸ ಮಾಡುವ ಮೂಲಕ ಸಮರ್ಪಕ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಕೆ.ಸಿ ರೋಡಿನಲ್ಲಿ ಸೋಮವಾರ ಲೋಕಸಭಾ ಚುನಾವಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾನೂನು ಮೂಲಕ ಸಮಾಜದ ಪಿಡುಗುಗಳನ್ನು ನಿರ್ಮೂಲನೆ ಮಾಡಲು ಅಸಾಧ್ಯ. ಧಾರ್ಮಿಕ ಮುಖಂಡರ, ಉಲೇಮಾಗಳ ಚಿಂತನೆಗಳಿಂದ ಸಮಾಜದ ಬದಲಾವಣೆ ಸಾಧ್ಯ. ಅವರ ಮಾರ್ಗದರ್ಶನ ಪಡೆದುಕೊಂಡು ಎಲ್ಲಾ ಧರ್ಮವನ್ನು ಪ್ರೀತಿಸಿಕೊಂಡು ಹೋಗುವಂತಹ ವಾತಾವರಣ ನಿರ್ಮಾಣವಾಗಬೇಕಿದೆ. ಉಳ್ಳಾಲ ಕ್ಷೇತ್ರದಲ್ಲಿ ತನಗೆ ಸಿಕ್ಕ ಮತಗಳಿಗಿಂತ ದುಪ್ಪಟ್ಟು ಲೀಡ್ ಮಿಥುನ್ ರೈ ಗೆ ಸಿಗಬೇಕಿದೆ ಎಂದ ಅವರು ಚುನಾವಣೆ ಪೂರ್ವ ನೀರಿನ ಸಮಸ್ಯೆ ಈಡೇರಿಸುವ ಭರವಸೆ ನೀಡಿದ್ದೆ. ಅದರಂತೆ ನಗರಾಭಿವೃದ್ಧಿ ಸಚಿವ ಸ್ಥಾನ ಸಿಗುತ್ತಿದ್ದಂತೆ 250 ಕೋಟಿ ರೂ. ಅನುದಾನಗಳಲ್ಲಿ ಡ್ಯಾಂ ಕಟ್ಟುವ ಮುಖೇನ ಇಡೀ ಕ್ಷೇತ್ರಕ್ಕೆ ಕುಡಿಯುವ ನೀರಿನ ಯೋಜನೆ…

Read More

UN NETWORKS ತೊಕ್ಕೊಟ್ಟು: ಲೋಕಸಭಾ ಚುನಾವಣಾ ಪ್ರಚಾರ ಕಾರ್ಯ ಪ್ರಯುಕ್ತ ಮೈ ಬಿ ಚೌಕಿದಾರ್ ಪಾದಯಾತ್ರೆ ಬಿ.ಜೆ.ಪಿ.ಮಂಗಳೂರು ಕ್ಷೇತ್ರದ ಕಾಪಿಕಾಡ್ ಬಳಿಯ ಚುನಾವಣಾ ಕಾರ್ಯಾಲಯ ದಿಂದ ತೊಕ್ಕೊಟು ಜಂಕ್ಷನ್ ವರೆಗೆ ಮತ್ತು ತೊಕ್ಕೊಟು ಒಳಪೇಟೆವರೆಗೆ ನಡೆಯಿತು. ಸಾವಿರಾರು ಕಾರ್ಯಕರ್ತರು ಕೇಸರಿ ಪೇಟ ಧರಿಸಿ ಮೋದಿ ಪರ ಘೊಷಣೆ ಕೂಗುತ್ತಾ ನಡೆದರು. ಬಳಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸದರೆ ಜಿಲ್ಲೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮೂರು ಲಕ್ಷ ಕ್ಕೂ ಮತಗಳಿಂದ ಜಯಶಾಲಿಯಾಗುತ್ತಾರೆ ಎನ್.ಡಿ.ಎ.ಗೆ 350 ಕ್ಕಿಂತಲೂ ಸ್ಥಾನ ಸಿಗಲಿದೆ ಎಂದರು. ವಿಧಾನ ಪರಿಷತ್ ನ ವಿರೋಧ ಪಕ್ಷದ ಮಾಜಿ ಮುಖ್ಯ ಸಚೇತಕ ಕ್ಯಾ ಗಣೇಶ್ ಕಾರ್ಣಿಕ್, ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಶಾಸಕರು ಕೆ.ಜಯರಾಮ ಶೆಟ್ಟಿ, ಕ್ಷೇತ್ರ ಚುನಾವಣಾ ಪ್ರಭಾರಿ ರಾದಕೃಷ್ಣ ರೈ ಬೂಡಿಯಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾದ ರವೀಂದ್ರ ಶೆಟ್ಟಿ, ಜಿಲ್ಲಾ…

Read More

UN NETWORKS ಕಣಚೂರು : ದೇರಳಕಟ್ಟೆಯ ಕಣಚೂರು ಮಹಿಳಾ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 99% ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದ ಒಟ್ಟು 105 ವಿಧ್ಯಾರ್ಥಿಗಳಲ್ಲಿ 104 ಮಂದಿ ಉತ್ತೀರ್ಣರಾಗಿದ್ದಾರೆ. 17 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಫಾತಿಮತ್ತುಲ್ ಮುಬೀನಾ ಶೇ.96.33%, ವಿಜ್ನಾನ ವಿಭಾಗದಲ್ಲಿ ಸಫೀನಾ ಜೈನಾಬ ಶೇ. 92.33% ಉತ್ತಮ ಫಲಿತಾಂಶ ಗಳಿಸಿದ್ದಾರೆ.

Read More