UN NETWORKS ಪೆರ್ಮನ್ನೂರು : ಗರಿಗಳ ಭಾನುವಾರದ ಪ್ರಯುಕ್ತ ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದಲ್ಲಿ ವಿಶೇಷ ಬಲಿಪೂಜೆ ಪ್ರದಾನ ಧರ್ಮಗುರು ಫಾ. ಜೆ.ಬಿ ಸಲ್ಡಾನಾ ಇವರ ನೇತೃತ್ವದಲ್ಲಿ ನಡೆಯಿತು.
Author: UllalaVani
UN NETWORKS ಪಾನೀರ್ : ಗರಿಗಳ ಆದಿತ್ಯವಾರ ಪ್ರಯುಕ್ತ ದೇರಳಕಟ್ಟೆ ಪಾನೀರು ದಯಾ ಮಾತೆ ಇಗರ್ಜಿಯಲ್ಲಿ ಭಾನುವಾರ ಬೆಳಗ್ಗೆ ಗರಿಗಳ ಆಶೀರ್ವಚನ ಕಾರ್ಯಕ್ರಮ , ಮೆರವಣಿಗೆ ಹಾಗೂ ದಿವ್ಯ ಬಲಿಪೂಜೆ ನೆರವೇರಿತು. ದಿವ್ಯ ಬಲಿ ಪೂಜೆಯನ್ನು ವಂ . ಡಾ. ಫಾದರ್ ರೋಬರ್ಟ್ ಕ್ರಾಸ್ತ ನೆರವೇರಿಸಿದರು. ಪಾನೀರ್ ಚರ್ಚಿನ ಧರ್ಮಗುರು ವಂ. ಫಾ. ಡೆನ್ನಿಸ್ ಸುವಾರಿಸ್ ಮತ್ತು ಲ್ಯಾರಿ ಪಿಂಟೋ ಉಪಸ್ಥಿತರಿದ್ದರು. ಪಾನೀರ್ ಚರ್ಚಿನ ಧರ್ಮ ಭಗಿನಿಯರು ಕ್ರೈಸ್ತ ಬಾಂಧವರು ಚರ್ಚಿನ ಎಲ್ಲ ವಾಳೇಯ ಗುರಿಕಾರರು ಸಂಘ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು.
UN NETWORKS ಉಳ್ಳಾಲ: ಪ್ರಧಾನಿ ಮೋದಿ ರ್ಯಾಲಿಯಿಂದ ವಾಪಸ್ಸಾಗುತ್ತಿದ್ದ ಬಸ್ಸಿಗೆ ನುಗ್ಗಿ ದಾಂಧಲೆ, ವಾಹನಗಳಿಗೆ ಕಲ್ಲು ತೂರಾಟ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 50 ಕ್ಕೂ ಅಧಿಕ ಮಂದಿಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಏಳು ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕುಪ್ಪೆಪದವು ಕಿಲಿಂಜೂರು ನಿವಾಸಿ ಸಲ್ಮಾನ್ ಫಾರಿಷ್ (21), ಜೆಪ್ಪು ಎಂ. ಆರ್ ಭಟ್ ಲೇನಿನ ಮಹಮ್ಮದ್ ಸಿನಾನ್( 19), ಜೆಪ್ಪು ಮಹಾಂಕಾಳಿಪಡ್ಪುವಿನ ಮಹಮ್ಮದ್ ಅರ್ಫಾಝ್ (27), ಮದನಿನಗರ ಶಾಂತಿಬಾಗ್ ನ ನೌಫಾಲ್ ಯಾನೆ ಕಿಡ್ನಿ ನೌಫಾಲ್ (20), ಅಡ್ಯಾರು ಕೆಂಪುಗುಡ್ಡೆ ಕಣ್ಣೂರಿನ ಮಹಮ್ಮದ್ ರಫೀಜ್ ಯಾನೆ ಅಫ್ರೀದ್ (20) ಹಾಗೂ ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಬಂಧಿತ 7 ಮಂದಿ ಸೇರಿದಂತೆ 50ಕ್ಕೂ ಹೆಚ್ಚು ಗುಂಪಿನ ವಿರುದ್ ಪ್ರಕರಣ ದಾಖಲಾಗಿದೆ. ಬಸ್ಸಿನ ಒಳಗೆ ನುಗ್ಗಿ ದಾಂಧಲೆ, ಕಲ್ಲು ತೂರಾಟ, ಭಯದ ವಾತಾವರಣ, ಕೊಲೆ…
UN NETWORKS ಉಳ್ಳಾಲ : ಬಿಜೆಪಿ ಅಭ್ಯರ್ಥಿ ನಳಿನ್ ಕಟೀಲ್ ನಾಲಾಯಕ್, ಗೂಂಡಾ ಸಂಸದ, ಈ ನಿಟ್ಟಿನಲ್ಲಿ ಎಲ್ಲರೂ ಬಿಜೆಪಿಯನ್ನು ಸೋಲಿಸುವ ಪ್ರಯತ್ನ ಮಾಡಬೇಕಿದೆ ಎಂದು ಸಿಪಿಎಂ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಹೇಳಿದರು. ಸಿಪಿಎಂ ಉಳ್ಳಾಲ ವಲಯ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಭಾನುವಾರ ಜರಗಿದ ರಾಜಕೀಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಐದು ವರ್ಷಗಳಿಗೊಮ್ಮೆ ಕಾಣುವ ಸಂಸದ ಜನಪರವಾಗಿರದೆ ಜನವಿರೋಧಿ ನೀತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಗೆ ಬೆಂಕಿ ಹಚ್ಚುವ ಘೋಷಣೆಗಳನ್ನು ಕೂಗುವ ಸಂಸದ ನಾಲಾಯಕ್ ಹಾಗೂ ಗೂಂಡಾ ಆಗಿದ್ದಾರೆ. ಇಂತಹ ಅಭ್ಯರ್ಥಿ ಹಾಗೂ ಬಿಜೆಪಿ ಪಕ್ಷವನ್ನು ಯಾರೂ ಬೆಂಬಲಿಸಬಾರದು ಎಂದ ಅವರು ಪ್ರಧಾನಿ ಮೋದಿ ತಮ್ಮ ಮೇಕಪ್ ಗೆ ರೂ.75,000 ಖರ್ಚು ಮಾಡುವವರು, ದೇಶದ ಕಾವಲುಗಾರ ಅನ್ನುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಅವರ ದಿನ ಖರ್ಚು ಕೇವಲ ರೂ.10. ಪ್ರಧಾನಿಯಾದ ಆರಂಭದಲ್ಲಿಯೇ ಅಮೆರಿಕಾ, ಪಾಕಿಸ್ತಾನದ ಪ್ರಧಾನಿಗಳನ್ನು ಕರೆಸುವ ಮೂಲಕ ಭಾರತದ ವಿದೇಶಾಂಗ ನೀತಿಯನ್ನೇ…
UN NETWORKS ಉಳ್ಳಾಲ : ಮೋದಿ ರ್ಯಾಲಿಯಿಂದ ವಾಪಸ್ಸಾಗುತ್ತಿದ್ದ ಕಾರು ಮತ್ತು ಬಸ್ಸಿಗೆ ಕಲ್ಲು ತೂರಾಟ ನಡೆದು ನಾಲ್ವರು ಗಾಯಗೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಮದನಿನಗರ ಸಮೀಪ ಶನಿವಾರ ಸಂಜೆ ವೇಳೆ ನಡೆದಿದೆ. ಕೃತ್ಯ ಖಂಡಿಸಿ ಹಾಗೂ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕೊಣಾಜೆ ಠಾಣೆಯೆದುರು ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆಯೂ ನಡೆದಿದೆ. ಕುಂಪಲ ನಿವಾಸಿಗಳಾದ ಸುಜನ್ (24) ಮತ್ತು ನಾಹುಷ್ (21) , ಮದನಿ ನಗರ ನಿವಾಸಿ ಮಹಮ್ಮದ್ ಅಜ್ಮಲ್ ಹಾಗೂ ಉಳ್ಳಾಲದ ಸಂಶೀರ್(30) ಗಾಯಗೊಂಡವರು. ಮದನಿನಗರ ಸಮೀಪ ಕಾರು ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತಕ್ಕೆ ಪ್ರತಿಯಾಗಿ ಕೇರಳ ನೋಂದಾಯಿತ ಕಾರಿನಲ್ಲಿ ಬಂದ ನಾಲ್ವರ ತಂಡ, ಅಪಘಾತವಾಗಿದ್ದ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ಇದೇ ವೇಳೆ ಮೋದಿ ರ್ಯಾಲಿಯಿಂದ ವಾಪಸ್ಸಾಗುತ್ತಿದ್ದ ಬಸ್ ನಲ್ಲಿದ್ದ ಯುವಕರು ಗಲಾಟೆಯನ್ನು ಪ್ರಶ್ನಿಸಿದ್ದರು. ಈ ವೇಳೆ ಇತ್ತಂಡಗಳ ನಡುವೆ ಹೊಡೆದಾಟ ಸಂಭವಿಸಿ, ತಂಡವೊಂದು ಬಸ್ಸಿನೊಳಗಡೆ ಇದ್ದ ಮಹಿಳೆಯರ ಮೇಲೂ ಕೈ…
UN NETWORKS ಕೊಣಾಜೆ : ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬದುಕುವ ಜತೆಗೆ ಸಮಾಜ ಸುಧಾರಣೆಯ ಕೆಲಸ ಮಾಡಿದ ಮಹಾತ್ಮರ ಜೀವನ ಹಾದಿಯಿಂದ ಸ್ಫೂರ್ತಿಯನ್ನು ಪದವೀಧರರು ಪಡೆಯುವ ಅಗತ್ಯವಿದೆ ಎಂದು ಕೇರಳ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ಬರೋಡಾದ ಎಂ.ಎಸ್.ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮ ರಾಮಚಂದ್ರನ್ ಹೇಳಿದರು. ಅವರು ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆದ ಮಂಗಳೂರು ವಿವಿಯ 37ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಮಂದಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಆದರೆ ಇಂತಹ ಶಿಕ್ಷಣ ಪಡೆದವರು ಇತರರಿಗೆ ಆದರ್ಶರೂಪದಲ್ಲಿ ಬದುಕುವ ಜತೆಯಲ್ಲಿ ತಾವು ಕಲಿತ ಶಿಕ್ಷಣವನ್ನು ಮತ್ತೊಬ್ಬರಿಗೆ ಹಂಚುವ ಕೆಲಸದಿಂದ ಸಮಾಜದಲ್ಲಿ ಸಾಕಷ್ಟು ಸುಧಾರಣೆ, ಬದಲಾವಣೆಗೆ ಅವಕಾಶ ಸಿಗಲಿದೆ ಎಂದರು. ಈ ಸಂದರ್ಭ ಕುಲಸಚಿವ .ಎ.ಎಂ.ಖಾನ್ ಅವರು ಮಂಗಳೂರು ವಿವಿಯ ಸಾಧನೆಯನ್ನು ವಾಚಿಸಿದರು. 149 ಮಂದಿಗೆ ಪಿಎಚ್ಡಿ ಪದವಿ: ಈ ಘಟಿಕೋತ್ಸವದಲ್ಲಿ ಮಂಗಳೂರು ವಿವಿಯಿಂದ ಒಬ್ಬರಿಗೆ ಡಾಕ್ಟರ್ ಆಫ್ ಸಯನ್ಸ್, ಕಲೆ ನಿಕಾಯದಲ್ಲಿ 27, ವಿಜ್ಞಾನ…
UN NETWORKS ಉಳ್ಳಾಲ : ಸೋಮೇಶ್ವರ ಗ್ರಾಮದ ಉಚ್ಚಿಲ ಕಾಟುಂಗರಗುಡ್ಡೆ ನಿವಾಸಿಗಳು ಕುಡಿಯುವ ನೀರು, ಕಡಲ್ಕೊರೆತ ತಡೆಗೋಡೆ ಸಮಸ್ಯೆಯನ್ನು ಎದುರಿಟ್ಟು ಚುನಾವಣಾ ಬಹಿಷ್ಕಾರ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಸ್ಥಳೀಯ ನಿವಾಸಿ ಸಂಶುದ್ದೀನ್ ಉಚ್ಚಿಲ ಮಾತನಾಡಿ ಸೋಮೇಶ್ವರ ಗ್ರಾಮದ ಕಾಟುಂಗರಗುಡ್ಡೆಯಲ್ಲಿ ಸುಮಾರು 30 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಕಡಲ್ಕೊರೆತ ಹೆಚ್ಚಿರುವ ಪ್ರದೇಶದಲ್ಲಿ ಶಾಶ್ವತ ತಡೆಗೋಡೆಯೂ ಮರೀಚಿಕೆಯಾಗಿದೆ. ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ, ಸೋಮೇಶ್ವರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಮನವಿಗೆ ಆಶ್ವಾಸನೆ ಮಾತ್ರ ಈವರೆಗೆ ದೊರೆತಿದೆ. ಈವರೆಗೂ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ. ನೀರಿಗಾಗಿ ಅಧಿಕಾರಿಗಳ ಟೇಬಲ್ ಬಳಿ ಹೋದಾಗ ಎರಡು ದಿನಗಳವರೆಗೆ ಟ್ಯಾಂಕರ್ ಮುಖೇನ ನೀರು ಸರಬರಾಜು ಆಗುತ್ತದೆ. ಆ ಬಳಿಕ ಪತ್ತೆಯೇ ಇರುವುದಿಲ್ಲ. ಜಿಲ್ಲಾಧಿಕಾರಿಗಳು ಆದೇಶ ಮಾಡಿರುವ ನೀರು ಎಲ್ಲಿಗೆ ಹೋಗುತ್ತಿದೆ ಅನ್ನುವ ಪ್ರಶ್ನೆ ಸ್ಥಳೀಯರಲ್ಲಿ ಮೂಡುತ್ತಿದೆ. ಇದೀಗ ಮತಯಾಚನೆಗೆ ಬರುವವರು ಪೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಲೋಕಸಭಾ ಚುನಾವಣೆಯನ್ನು ಉಚ್ಚಿಲ…
UN NETWORKS ಉಳ್ಳಾಲ: ಕೋಳಿ ಬಾಲಿನಿಂದ ಇರಿದು ಗಂಭೀರ ಗಾಯಗೊಂಡಿದ್ದ ಉಳ್ಳಾಲ ಬಂಡಿ ಕೊಟ್ಯ ನಿವಾಸಿ ನಿತಿನ್ ಜೋಗಿ(35) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾತರಿಯಾಗದೆ ಸಾವನ್ನಪ್ಪಿದ್ದಾರೆ . ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಮೊಗವೀರಪಟ್ನ ನಿವಾಸಿ ರಜನೀಶ್ ಬಂಧಿತ. ಎ.7 ಭಾನುವಾರ ಉಳ್ಳಾಲ ಪ್ಯಾರೀಸ್ ಜಂಕ್ಷನ್ನಿನಲ್ಲಿರುವ ಉಳ್ಳಾಲ್ ವೈನ್ಸ್ ನಲ್ಲಿ ಕೆಲಸಕ್ಕಿದ್ದ ನಿತಿನ್, ಬಳಿ ದಿನನಿತ್ಯ ರಜನೀಶ್ ಬಂದು ಹರಟೆ ಮಾತನಾಡುತ್ತಿದ್ದ . ಮೊನ್ನೆ ದಿನ ರಜನೀಶ್ ಬಂದವ ಹರಟೆ ಹೊಡೆಯುತ್ತಾ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿ ವೈನ್ಸ್ ಅಂಗಡಿಯಿಂದ ಸ್ವಲ್ಪ ದೂರದಲ್ಲಿರುವ ಡಾಲಿ ಬಾರ್ ಸಮೀಪ ನಿತಿನ್ ಬರುವಂತೆ ರಜನೀಶ್ ಕರೆದಿದ್ದಾನೆ. ಅಲ್ಲಿಗೆ ಬಂದಾಗ ಏಕಾಏಕಿ ರಜನೀಶ್ ತನ್ನ ಬಳಿಯಿದ್ದ ಕೋಳಿ ಬಾಲಿನಿಂದ , ನಿತಿನ್ ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ಗಾಬರಿಗೊಂಡು ನಿತಿನ್ ಗಾಯದೊಂದಿಗೆ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದತ್ತ ಒಬ್ಬನೇ ತೆರಳಿದ್ದನು. ಆದರೆ ಗಂಭೀರ…
UN NETWORKS ಕೊಣಾಜೆ: ರಕ್ತದಾನ ಸೌಹಾರ್ದತೆಯ ಸಂಕೇತ.ರಕ್ತದಾನ ಮಾಡುವುದಕ್ಕೆ ಯಾವುದೇ ಜಾತಿ ಮತದ ಭೇದವಿಲ್ಲ ಎಂದು ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್ನ ಪ್ರಾಂಶುಪಾಲ ಡಾ| ಅಬ್ದುಲ್ ಶರೀಫ್ ಹೇಳಿದರು. ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ರಾಷ್ಟ್ರೀಯ ಸೇವಾ ಯೋಜನ ಘಟಕ ಮತ್ತು ಯೆನಪೋಯ ಆಸ್ಪತ್ರೆ ದೇರಳಕಟ್ಟೆ ರಕ್ತನಿಧಿ ಇದರ ಆಶ್ರಯದಲ್ಲಿ ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಏರ್ಪಡಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದ ಆವಶ್ಯಕತೆ ಇರುವವರಿಗೆ ರಕ್ತದಾನ ಮಾಡುವುದರಿಂದ ಮಾನವೀಯ ಮೌಲ್ಯಗಳಿಗೆ ನ್ಯಾಯ ಒದಗಿಸಿದಂತಾ ಗುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಪಿ.ಎ. ಪಾಲಿ ಟೆಕ್ನಿಕ್ನ ಪ್ರಾಂಶುಪಾಲ ಪ್ರೊ| ಕೆ. ಪಿ. ಸೂಫಿ ಮಾತನಾಡಿ, ರಕ್ತದಾನ ಮಹಾದಾನವಾಗಿ ದ್ದು ಕೃತಕವಾಗಿ ಉತ್ಪಾದಿಸಲು ಸಾಧ್ಯ ವಿಲ್ಲದ ಕಾರಣ ತುರ್ತು ರಕ್ತದ ಅಗತ್ಯ ಇರುವವರಿಗೆ ನೀಡುವುದರಿಂದ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದರು. ಯೆನಪೋಯ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ|ನಿಶಾ ರಕ್ತದಾನದ ಮಹತ್ವದ ಕುರಿತು ಮಾಹಿತಿ ನೀಡಿ, ರಕ್ತದಾನದಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂಬುದು ತಪ್ಪು ಕಲ್ಪನೆಯಾಗಿದೆ. ರಕ್ತ…
UN NETWORKS ಬಾಳೆಪುಣಿ : ಉಳ್ಳಾಲ ಭಾಗದಲ್ಲಿ ಗುರುವಾರ ಸಂಜೆ ಗುಡುಗು, ಗಾಳಿ ಸಹಿತ ಮಳೆಯಾಯಿತು. ಸುಡುಬಿಸಿಲಿನಿಂದ ಕೂಡಿದ್ದ ವಾತಾವರಣ 15 ನಿಮಿಷಗಳ ಕಾಲ ಸುರಿದ ಮಳೆಯಿಂದಾಗಿ ತಂಪಾಯಿತು. ಮುಡಿಪು ಸಮೀಪದ ಬಾಳೆಪುಣಿ ಸರಕಾರಿ ಶಾಲೆಯ ಹೆಂಚುಗಾಳು ಹಾರಿಹೋಗಿ ಅಪಾರ ನಷ್ಟ ಸಂಭವಿಸಿದೆ. ಬಾಳೆಪುಣಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಸುಮಾರು 100 ಕ್ಕೂ ಅಧಿಕ ಹಂಚುಗಳು ಹಾರಿಹೋಗಿ ನಷ್ಟ ಸಂಭವಿಸಿದೆ. ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಮಕ್ಕಳು ಹಾಗೂ ಸಿಬ್ಬಂದಿ ಯಾರೂ ಇರಲಿಲ್ಲ. ಇದರಿಂದಾಗಿ ಸಂಭಾವ್ಯ ಅನಾಹುತ ತಪ್ಪಿದೆ. ಘಟನೆ ಕುರಿತು ಶಾಲಾ ಸಮಿತಿ ಸ್ಥಳೀಯ ಪಂಚಾಯಿತಿ ಗಮನಕ್ಕೆ ತಂದಿದೆ. ತೊಕ್ಕೊಟ್ಟು, ತಲಪಾಡಿ, ಕೋಟೆಕಾರು, ಬೀರಿ, ಉಳ್ಳಾಲ, ಕುತ್ತಾರು, ದೇರಳಕಟ್ಟೆ ಭಾಗದಲ್ಲಿ ಸಂಜೆ ಮಳೆಯಾಯಿತು. ಸಿಡಿಲು ಮತ್ತು ಗಾಳಿಯಿಂದ ಆರಂಭಗೊಂಡ ಮಳೆ 15 ನಿಮಿಷಗಳ ಕಾಲ ಸುರಿಯಿತು. ಅನಿರೀಕ್ಷಿತ ಮಳೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು ಪರದಾಡಿದರು. ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ, ದೇರಳಕಟ್ಟೆಯಿಂದ ಕುತ್ತಾರು ರಸ್ತೆ ಅಗಲೀಕರಣ ಕಾಮಗಾರಿ…

