Author: UllalaVani

Kannada News From Coastal Karnataka

ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಕ್ಯಾಂಪಸ್‍ನಲ್ಲಿರುವ ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿ.ಯು.ಸಿ ಅಥವಾ ತತ್ಸಮಾನ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ 2019-20ರ ಶೈಕ್ಷಣಿಕ ವರ್ಷದ ಬಿ.ಎ., ಬಿ.ಕಾಂ. ಹಾಗೂ ಬಿ.ಬಿ.ಎ. ಪದವಿ ಕೋರ್ಸುಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಪತ್ರ ಹಾಗೂ ಕೈಪಿಡಿಯನ್ನು ಮಂಗಳಗಂಗೋತ್ರಿ (ಕೊಣಾಜೆ)ಯ ಗ್ರಂಥಾಲಯ ಹಿಂಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಲೇಜಿನ ಕಚೇರಿಯಿಂದ ಬೆಳಿಗ್ಗೆ 10ರಿಂದ ಸಂಜೆ 3.30 ಗಂಟೆಯೊಳಗೆ ಪಡೆದು ಕೊಳ್ಳಬಹುದು. ಭರ್ತಿಮಾಡಿದ ಅರ್ಜಿ ಪತ್ರಗಳನ್ನು ನೀಡಲು ದಿನಾಂಕ- 06, ಮೇ 2019 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 0824-2287326 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

UN NETWORKS ಮದೀನಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಮುನವ್ವರ ಝೋನ್ ಸಮಿತಿಯ ದ್ವೈವಾರ್ಷಿಕ ಮಹಾಸಭೆಯು ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ನಡೆಯಿತು. ಕೆಸಿಎಫ್ ಐ.ಎನ್.ಸಿ ಶಿಕ್ಷಣ ವಿಭಾಗ ಕನ್ವೀನರ್ ಕಮರುದ್ದೀನ್ ಗೂಡಿನಬಳಿ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕೆಸಿಎಫ್ ಮದೀನಾ ಝೋನ್ ಕಾರ್ಯಕರ್ತರು ಸೇವಾ ಚಟುವಟಿಕೆಗಳಲ್ಲಿ ಗರಿಷ್ಟ ಗುಣಮಟ್ಟ ಹೊಂದಿದವರಾಗಿದ್ದಾರೆ. ಹಜ್ಜ್ ಸಮಯದಲ್ಲಿ ಮದೀನಾ ಹೆಚ್.ವಿ.ಸಿ ಕಾರ್ಯಕರ್ತರ ನಿಸ್ವಾರ್ಥ ಸೇವೆಯು, ಸೌದಿ ಅರೇಬಿಯಾ ಮಾತ್ರವಲ್ಲ, ಅಂತರಾಷ್ಟ್ರೀಯ (ಐ.ಎನ್.ಸಿ) ಮಟ್ಟದಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಗೊಂಡಿದೆ ಎಂದರು. ಹುಸೈನಾರ್ ಉರುವಾಲ್ ಪದವು ಗತ ವರ್ಷದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಝೋನ್ ರೀ ಆರ್ಗನೈಸಿಂಗ್ ಆಫೀಸರ್ ಆಗಿ ಆಗಮಿಸಿದ ಫೈಝಲ್ ಕೃಷ್ಣಾಪುರ, ಮುಹಮ್ಮದ್ ಕಲ್ಲರ್ಬೆ ಅವರು ನೂತನ ಸಮಿತಿಯನ್ನು ಆಯ್ಕೆ ಗೊಳಿಸಿದರು. KCF ಮದೀನಾ ಮುನವ್ವರ ಝೋನ್ ನೂತನ ಸಮಿತಿ ಅಧ್ಯಕ್ಷರಾಗಿ ಹಮೀದ್ ಮುಸ್ಲಿಯಾರ್ ಕರಾಯ,ಪ್ರ.ಕಾರ್ಯದರ್ಶಿಯಾಗಿ ಹುಸೈನಾರ್ ಉರುವಾಲ್ ಪದವು ಹಾಗೂ ಕೋಶಾಧಿಕಾರಿಯಾಗಿ -ಅಶ್ರಫ್ ಹಾಜಿ ಕಿನ್ಯ ಅವರನ್ನು ಆಯ್ಕೆ…

Read More

UN NETWORKS ಉಳ್ಳಾಲ : ಮಾಜಿ ಜಿಲ್ಲಾ ಪರಿಷತ್ ಸದಸ್ಯ, ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಆಡಳಿತ ಸಮಿತಿಯ ಮಾಜಿ ಉಪಾಧ್ಯಕ್ಷ ಎ.ಎ.ಖಾದರ್ ಸೋಮವಾರ ಬೆಳಗ್ಗೆ ನಿಧನರಾದರು. ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾಗಿ, ಕುಂಪಲ ನೂರಾನಿ ಯತೀಮ್ ಖಾನಾದ ಸದಸ್ಯರಾಗಿ, ಅಲೇಕಳ ಮದನಿ ಜೂನಿಯರ್ ಕಾಲೇಜ್‍ನ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನುಸ್ರತುಲ್ ಮಸಾಕೀನ್ ಅಧ್ಯಕ್ಶರಾಗಿದ್ದ ಸಂದರ್ಭ ಮೂರು ಜೋಡಿ ಬಡ ಹೆಣ್ಣುಮಕ್ಕಳ ಮದುವೆ ಮಾಡಿಸಿ ಸಾಮೂಹಿಕ ವಿವಾಹ, ರಂಝಾನ್‍ನಲ್ಲಿ ಬಡವರಿಗೆ ಒಂದು ತಿಂಗಳ ರೇಷನ್ ವ್ಯವಸ್ಥೆ ಆರಂಭಿಸಿದ್ದರು.

Read More

UN NETWORKS ಉಳ್ಳಾಲ: ಚಲಿಸುತ್ತಿದ್ದ ರಿಕ್ಷಾ ಮೇಲೆಯೇ ಹಳೇಯ ಬೃಹತ್ ಗಾತ್ರದ ಮಾವಿನ ಮರ ಉರುಳಿಬಿದ್ದು ರಿಕ್ಷಾ ನುಜ್ಜುಗುಜ್ಜಾಗಿ, ಚಾಲಕನ ಸಮಯಪ್ರಜ್ಞೆಯಿಂದ ಐದು ಜೀವಗಳು ಪವಾಡಸದೃಶವಾಗಿ ಪಾರಾದ ಘಟನೆ ಉರುಳಿಬಿದ್ದ ಹಳೇಯ ಮಾವಿನ ಮರ ಕೋಟೆಕಾರು ಸಮೀಪದ ಕೋಟೆಕಾರು ಪಟ್ಟಣ ಪಂಚಾಯಿತಿ ಎದುರುಗಡೆ ಇಂದು ಸಂಜೆ ಸಂಭವಿಸಿದೆ. ತಲಪಾಡಿ ಪಾರ್ಕಿನ ರಿಕ್ಷಾ ಚಾಲಕ ಉಮೇಶ್ ಪೂಜಾರಿ ಸಮಯಪ್ರಜ್ಞೆಯಿಂದ ಇಬ್ಬರು ಮಕ್ಕಳು, ಮೂವರು ಮಹಿಳಾ ಪ್ರಯಾಣಿಕರು ಸೇರಿದಂತೆ ಚಾಲಕನ ಜೀವ ಬಚಾವಾಗಿದೆ.ತಲಪಾಡಿಯಿಂದ ಸೋಮೇಶ್ವರ ಕಡೆಗೆ ಬಾಡಿಗೆ ಬರುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಚಲಿಸುತ್ತಿರುವಾಗಲೇ ಬುಡಸಮೇತ ಕಿತ್ತು ಬೀಳುತ್ತಿರುವ ಮರವನ್ನು ಕಂಡ ತಕ್ಷಣ ರಿಕ್ಷಾ ಚಾಲಕ ಬ್ರೇಕ್ ಹಾಕಿದ್ದರು. ಇದರಿಂದಾಗಿ ರಿಕ್ಷಾದ ಎದುರು ಭಾಗಕ್ಕೆ ಮರದ ಗೆಲ್ಲು ಬಿದ್ದು ರಿಕ್ಷಾಗೆ ಮಾತ್ರ ಹಾನಿಯಾಗಿದೆ. ರಿಕ್ಷಾದೊಳಗೆ ಇದ್ದ ಆರು ಜೀವಗಳು ಪಾರಾಗಿವೆ.ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ಸ್ಥಳೀಯ ಮೆಸ್ಕಾಂ ಸಿಬ್ಬಂದಿ ಸೇರಿಕೊಂಡು ಮರ ತೆರವುಗೊಳಿಸಿದರು. ತಪ್ಪಿದ ಭಾರೀ ಅನಾಹುತ : ಘಟನೆ ನಡೆದ ಸ್ಥಳದಲ್ಲಿ ರೈಲ್ವೇ…

Read More

UN NETWORKS ಉಳ್ಳಾಲ: ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಇದರ ಅಧೀನದ ಹಝ್ರತ್ ಸಯ್ಯಿದ್ ಮದನಿ ವುಮೆನ್ಸ್ ಪಿ.ಯು ಕಾಲೇಜು ಕಲಾ ವಿಭಾಗದ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದುಕೊಂಡಿದೆ. ವಾಣಿಜ್ಯ ವಿಭಾಗದಲ್ಲಿ ಶೇ.94 ಫಲಿತಾಂಶವನ್ನು ಪಡೆದಿದೆ. ಒಟ್ಟು 72 ವಿದ್ಯಾರ್ಥಿಗಳ ಪೈಕಿ 5 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

Read More

UN NETWORKS ದುಬೈ : ಕರ್ನಾಟಕ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್(ಕರ್ನಾಟಕ ಸ್ಪೋಟ್ರ್ಸ್ ಆಂಡ್ ಕಲ್ಚರಲ್ ಕ್ಲಬ್) ದುಬೈ ಸರ್ಕಾರಿ ಸಮುದಾಯ ಅಭಿವೃದ್ದಿ ಪ್ರಾಧಿಕಾರದ ಸಹಯೋಗದಲ್ಲಿ ಡೆರಿಯ ದುಬೈಯ ಯುನಿಯನ್ ಮೆಟ್ರೊ ಸ್ಟೇಷನ್ ಹೊರಗಡೆ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ರಕ್ತದಾನ ಶಿಬಿರವು ಬೆಳಿಗ್ಗೆ ಯಿಂದ ಮಧ್ಯಾಹ್ನ ತನಕ ನಡೆಯಿತು. ಸುಮಾರು 60 ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು. ಶಿಬಿರವನ್ನು ಕೆಎಸ್‍ಸಿಸಿ ಕ್ಲಬ್ ಉಪಾಧ್ಯಕ್ಷ ಝಿಯಾವುದ್ದೀನ್ ಉದ್ಘಾಟಿಸಿ, ಸ್ವಯಂಸೇವಕರಿಗೆ ಉತ್ತೇಜನಕಾರಿ ನುಡಿಗಳನ್ನು ನೀಡಿದರು. ಕ್ಲಬ್ ವ್ಯವಸ್ಥಾಪಕ ಮೊಹಮ್ಮದ್ ಶಾಫಿ ಮತ್ತು ಖಜಾಂಚಿ ಮೊಹಮ್ಮದ್ ಫರಾಝ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಕ್ತದಾನ ಶಿಬಿರಕ್ಕೆ ಸಹಕರಿಸಿದ ದುಬೈ ಹೆಲ್ತ್ ಅಥಾರಿಟಿ ಮತ್ತು ಸಮುದಾಯ ಅಭಿವೃದ್ದಿ ಪ್ರಾಧಿಕಾರ ಮತ್ತು ದುಬೈ ಸರ್ಕಾರಕ್ಕೆ ಕೆಎಸ್‍ಸಿಸಿ ಕ್ಲಬ್ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ ಇದೇ ವೇಳೆ ಸ್ವಯಂ ಸೇವಕರು ಮತ್ತು ಬೆಂಬಲಿಗರಿಗೂ ಧನ್ಯವಾದ ಅರ್ಪಿಸಿದ್ದಾರೆ ಮಾತ್ರವಲ್ಲ ಶಿಬಿರದಲ್ಲಿ ರಕ್ತದಾನ ಮಾಡಿ ಸಹಕರಿಸಿದ ಎಲ್ಲಾ ರಕ್ತದಾನಿಗಳನ್ನು ಪ್ರಶಂಸಿಸಿದ್ದಾರೆ.…

Read More

UN NETWORKS ಉಳ್ಳಾಲ : ಸೌಜನ್ಯ ಸ್ಕೌಟ್ಸ್ ದಳ ಶ್ರೀ ರಾಮಕೃಷ್ಣ ಪ್ರೌಢಶಾಲೆ ಹರೇಕಳ ವತಿಯಿಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಳ್ಳಾಲ ಸ್ಥಳೀಯ ಸಂಸ್ಥೆಯ ರಾಜ್ಯ ಪುರಸ್ಕಾರ ಸ್ಕೌಟ್ಸ್ ಗೈಡ್ಸ್‍ಗಳಿಗಾಗಿ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಸಿದರು . ಪಾವೂರು-ಹರೇಕಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಡ್ವರ್ಡ್ ನಥಾನಿಯಲ್ ಐಮನ್ ರವರು ಸ್ಕೌಟ್ಸ್ ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಎಳವೆಯಲ್ಲೇ ವ್ಯಕ್ತಿತ್ವ ವಿಕಸನದ ಗುಣಗಳಾದ ಧೈರ್ಯ, ತಾಳ್ಮೆ, ಆತ್ಮವಿಶ್ವಾಸ, ಸಮಯಪ್ರಜ್ಞೆ ಮತ್ತು ನಾಯಕತ್ವ ಮುಂತಾದವುಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿ ಬರಬೇಕೆಂದರು. ಅಧ್ಯಕ್ಷತೆಯನ್ನು ಜಿಲ್ಲಾ ಸ್ಕೌಟ್ ಗೈಡ್ ಸಂಸ್ಥೆಯ ತರಬೇತಿ ಕೌನ್ಸಿಲರ್ ತ್ಯಾಗಂ ಹರೇಕಳ ವಹಿಸಿ ಸ್ಕೌಟ್ಸ್ ಗೈಡ್ಸ್ ಚಳುವಳಿಯಲ್ಲಿ ಅತ್ಯುನ್ನತ ಪದಕವೆಂದರೆ ರಾಷ್ಟ್ರಪತಿ ಪದಕ. ಇದನ್ನು ಪಡೆಯಲು ವಿದ್ಯಾರ್ಥಿಗಳು ಬೇರೆ ಬೇರೆ ಸಾಹಸಮಯ ಚಟುವಟಿಕೆಗಳು, ಪ್ರಾವಿಣ್ಯತಾ ಪದಕಗಳು, ಸಮಾಜ ಸೇವಾ ಕಾರ್ಯಗಳು, ಸಮುದಾಯ ಅಭಿವೃದ್ಧಿ ಚಟುವಟಿಕೆಗಳು ಮುಂತಾದ ಪಠ್ಯೇತ್ತರ ಚಟುವಟಿಕೆಗಳಲ್ಲಿ…

Read More

UN NETWORKS ಉಳ್ಳಾಲ : ವಧೆ ನಡೆಸಲೆಂದು ಅಕ್ರಮವಾಗಿ ಕಟ್ಟಿಹಾಕಲಾಗಿದ್ದ 20 ಜಾನುವಾರು, 20 ಕೆ.ಜಿ ದನದ ಮಾಂಸ ಹಾಗೂ ರಿಕ್ಷಾ ವನ್ನು ಎಸಿಪಿ ನೇತೃತ್ವದ ವಿಶೇಷ ತಂಡ ಹಾಗೂ ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಉಳ್ಳಾಲದ ಕೋಡಿತೋಟ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. ಬಯಲು ಪ್ರದೇಶದಲ್ಲಿ 20 ದನ ಹಾಗೂ ಕರುಗಳನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಲಾಗಿತ್ತು. ಆಹಾರ, ನೀರು ಪೂರೈಸದೆ ಬಿಸಿಲಿನಲ್ಲಿ ನರಳಾಡುತ್ತಿರುವ ಜಾನುವಾರುಗಳ ಖಚಿತ ಮಾಹಿತಿ ಪಡೆದ ಎಸಿಪಿ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿತ್ತು. ಆರೋಪಿ ಇಬ್ರಾಹಿಂ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ವಧೆ ನಡೆಸಿದ ಜಾನುವಾರುಗಳ ಮಾಂಸ ಸಾಗಾಟಕ್ಕೆ ಉಪಯೋಗಿಸುತ್ತಿದ್ದ ರಿಕ್ಷಾ, 20 ಕೆ.ಜಿ ಮಾಂಸ ಮತ್ತು 20 ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಜಾನುವಾರುಗಳನ್ನು ಕೊಣಾಜೆಯ ಪಜೀರು ಗೋವನಿತಾಶ್ರಯಕ್ಕೆ ಹಸ್ತಾಂತರಿಸಲಾಗಿದೆ. ಆರೋಪಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಆರೋಪಿತನ ವಿರುದ್ಧ ಗೋಕಳವು ಸಹಿತ ಜಾನುವಾರು ಮಾಂಸ ಸಾಗಾಟ ಪ್ರಕರಣಗಳು ಉಳ್ಳಾಲ ಠಾಣೆಯಲ್ಲಿ…

Read More

UN NETWORKS ಉಳ್ಳಾಲ : ದುಡಿಯುವ ಕೈಯನ್ನು,ಮಿಡಿಯುವ ಮನಸ್ಸನ್ನು ತರಬೇತಿಗೊಳಿಸುವ ಎನ್ನೆಸ್ಸೆಸ್‌ ಘಟಕಕ್ಕೆ ಉತ್ತಮ ಭವಿಷ್ಯವಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಎನೆಸ್ಸೆಸ್‌ ಪೂರಕ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್‌ ಹೇಳಿದರು. ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜು, ಎನೆಸ್ಸೆಸ್‌ ಘಟಕದ ವಾರ್ಷಿಕ ಶಿಬಿರ ಸಮಾಪನದಲ್ಲಿ ಸಮಾರೋಪ ಭಾಷಣ ಮಾಡಿದರು. ಹತ್ತಾರು ಸದ್ವಿಚಾರಗಳಲ್ಲಿ ನಮ್ಮ ನೆಲದ ಸಂಸ್ಕೃತಿಯ ಹಿರಿಮೆಯಿದೆ.ಹಂಚಿ ತಿನ್ನುವುದನ್ನು ಕೂಡಿ ಬಾಳುವುದನ್ನು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಕಲಿಸಿಕೊಡುತ್ತದೆ. ಬೆನ್ನು ಬಾಗಿಸಿ ದುಡಿದು ಕೈಕೆಸರಾದರೆ ಮಾತ್ರ ಬಾಯಿಗೆ ಮೊಸರನ್ನ ಸಿಗುತ್ತದೆ ಈ ನಿಟ್ಟಿನಲ್ಲಿ ಎನ್‌ಎಸ್‌ಎಸ್‌ ಈ ಎಲ್ಲ ಕೌಶಲವನ್ನು ಕಲಿಸಿಕೊಡುತ್ತದೆ ಎಂದರು.ಅಷ್ಟಾವಧಾನಿ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್‌ ಅವರು ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿಗಳಾದ ಸೂರಜ್‌ ಎಂ. ದೇವಾಡಿಗ ಪ್ರಾಸ್ತಾವಿಸಿದರು. ಆಡ‌ಳಿಧಿಕಾರಿ ವಿವೇಕ್‌ ತಂತ್ರಿ ಶುಭ ಹಾರೈಸಿದರು. ಎನ್ನೆಸ್ಸೆಸ್‌ನ ಸಹ ಯೋಜನಾಧಿಕಾರಿ ಅಮಿತ ಆಳ್ವ, ಉಪ ಪ್ರಾಂಶುಪಾಲ ಪ್ರೊಣಮಾಧವ ಕೆ.ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವರ್ಷಾ ಸ್ವಾಗತಿಸಿದರು. ಸಮೀಕ್ಷಾ ವಂದಿಸಿದರು.ರಕ್ಷಿತ್‌ ಕಿರಣ್‌…

Read More

UN NETWORKS ಪೆರ್ಮನ್ನೂರು : ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದಲ್ಲಿ ಶುಭ ಶುಕ್ರವಾರದ ಪ್ರಯುಕ್ತ ಶಿಲುಬೆಯ ಹಾದಿಯನ್ನು ಪ್ರದಾನ ಧರ್ಮಗುರುಳಾದ ವಂದನೀಯ ಜೆ.ಬಿ ಸಲ್ಡಾನಾ ಇವರ ನೇತ್ರತ್ವದಲ್ಲಿ ನೆರವೇರಿಸಲಾಯಿತು.

Read More