Author: UllalaVani

Kannada News From Coastal Karnataka

UN NETWORKS ಕೊಣಾಜೆ : ಕೊಣಾಜೆಯ ವಿಶ್ವಮಂಗಳ ಆಂಗ್ಲಮಾಧ್ಯಮ ಪ್ರೌಢಶಾಲೆ ಈ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶ ದಾಖಲಿಸಿದೆ.ಪರೀಕ್ಷೆಗೆ 52ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಆದ್ಯಾ 610 ಅಂಕ ಗಳಿಸ್ದಿದಾರೆ.

Read More

UN NETWORKS ಉಳ್ಳಾಲ: ಖುಷಿ, ದು:ಖಗಳ ಸಮ್ಮಿಲನ ಬೀಳ್ಕೊಡುಗೆ ಆಗಿದೆ. ಇಂತಹ ಸನ್ನಿವೇಶವನ್ನು ಅದ್ಧೂರಿಯಾಗಿ ಆಯೋಜಿಸಿದ ಸಂಘಟಕರ ಕಾರ್ಯ ಶ್ಲಾಘನೀಯ ಎಂದು ಕಣ್ಣೂರು ಎಕೆಜಿ ಮೆಮೋರಿಯಲ್ ಕೋ-ಆಪರೇಟಿವ್ ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಹಾಗೂ ಕೇರಳ ವೈದ್ಯಕೀಯ ವಿಶ್ವವಿದ್ಯಾನಿಲಯಗಳ ಸೆನೆಟ್ ಸದಸ್ಯ ಡಾ.ಕಾಮರಾಜ್ ಬಿ. ಅಭಿಪ್ರಾಯಪಟ್ಟರು. ಅವರು ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ 2015-16ನೇ ಬ್ಯಾಚ್‍ನ ವಿದ್ಯಾರ್ಥಿಗಳಿಗೆ , ಮೂರನೇ ವರ್ಷದ ಬಿಪಿಟಿ ವಿದ್ಯಾರ್ಥಿಗಳು , ಸಿಬ್ಬಂದಿ ಹಾಗೂ ಸಿಬ್ಬಂದಿ ಯೇತರರು ವತಿಯಿಂದ ದೇರಳಕಟ್ಟೆ ಕ್ಷೇಮ ಆಡಿಟೋರಿಯಂನಲ್ಲಿ ಮಂಗಳವಾರ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಆಟೊಗ್ರಾಫ್ ಪಡೆಯುವ ಕಾಲ ಬದಲಾಗಿದೆ. ಮೊಬೈಲ್ ಮೂಲಕವೇ ಪ್ರಪಂಚವನ್ನು ಕೈಗಳಲ್ಲಿ ಕಾಣುವ ಕಾಲಘಟ್ಟದಲ್ಲಿ ಎಲ್ಲರನ್ನೂ ಸ್ನೇಹಿತರನ್ನಾಗಿಸಬಹುದು. ಫಿಸಿಯೋಥೆರಪಿಸ್ಟ್ ಗಳು ಒಗ್ಗೂಡುವಿಕೆಯಿಂದ ಕಾರ್ಯನಿರ್ವಹಿಸಿದಾಗ ಕಾರ್ಯಕ್ಷೇತ್ರಗಳಲ್ಲಿ ಯಶಸ್ಸು ಕಾಣಲು ಸಾಧ್ಯ. ಹಿಂದೆ ಕೇಂದ್ರ ಸರಕಾರ ಜಾರಿಗೆ ತಂದಿರುವ ನ್ಯಾಷನಲ್ ಅಲೈಡ್ ಹೆಲ್ತ್ ಕೇರ್ ಪಾಲಿಸಿ ಮೂಲಕ ಆರೋಗ್ಯ ಕ್ಷೇತ್ರಗಳಲ್ಲಿ ಬಹಳ ಬದಲಾವಣೆಯಾಗಿದೆ. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವವವನ್ನು ಅರಿಯುವುದರ ಜತೆಗೆ ರಾಜಕೀಯ…

Read More

ಉಳ್ಳಾಲ : ಯು.ಟಿ.ಫರೀದ್ ಪೌಂಡೇಶನ್ ಹಾಗೂ ಕೆರೆಬೈಲ್ ಫ್ರೆಂಡ್ಸ್ ಸರ್ಕಲ್ ಇದರ ಜಂಟಿ ಆಶ್ರಯದಲ್ಲಿ ನಡೆದ ಕೆರೆಬೈಲ್ ಪ್ರೀಮಿಯರ್ ಲೀಗ್-2, ಕ್ರಿಕೆಟ್ ಪಂದ್ಯಾಟದಲ್ಲಿ ಈಗಲ್ ಐಸ್ ತಂಡ ಪ್ರಶಸ್ತಿ ಪಡೆಯಿತು. ಈವ್ನಿಂಗ್ ಸ್ಟಾರ್ ತಂಡ ರನ್ನರ್ಸ್ ಆಗಿ ಹೊರಹೊಮ್ಮಿತು. ಪ್ರಶಸ್ತಿ ಪಡೆದ ತಂಡಕ್ಕೆ ಶಾಶ್ವತ ಟ್ರೋಫಿ ಮತ್ತು ಟಿವಿಎಸ್ ದ್ವಿಚಕ್ರ ವಾಹನ ಬಹುಮಾನವಾಗಿ ನೀಡಲಾಯಿತು. ಚೆಂಬುಗುಡ್ಡೆಯ ಖಾಸಗಿ ಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಇಂಡಿಯನ್ ಓವರ್ಸಿಸ್ ಕಾಂಗ್ರೆಸ್‍ನ ಮಧ್ಯಪ್ರಾಚ್ಯ ಅಧ್ಯಕ್ಷ ಅಬ್ದುಲ್ ಶಕೀಲ್ ಬಹುಮಾನವನ್ನು ವಿತರಿಸಿದರು. ಯು.ಟಿ ಫರೀದ್ ಪೌಂಡೇಶನ್‍ನ ಯು.ಟಿ.ಇಫ್ತಿಕಾರ್ ಆಲಿ, ಕಣಚೂರು ಗ್ರೂಪ್ ನಿರ್ದೇಶಕ ಅಬ್ದುಲ್ ರಹ್‍ಮಾನ್, ಉದ್ಯಮಿಗಳಾದ ಅಬ್ದುಲ್ ರವೂಫ್, ಆಸಿಫ್ ಸೀಕೋ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮ ಸಂಘಟಕ ಅಶ್ರಫ್ ಕೆರೆಬೈಲ್ ಸ್ವಾಗತಿಸಿದರು. ಸಾಗರ್ ಅಬ್ದುಲ್ ರಹಮಾನ್ ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ಉಳ್ಳಾಲ : ಭೂಲೋಕ ಎಂದರೆ ಸುಖದಲ್ಲಿ ಜೀವಿಸುವಂತಹದ್ದಲ್ಲ, ಇಲ್ಲಿ ನಮಗೆ ಜೀವನಕ್ಕೆ ಸಿಗುವ ಸಮಯದಲ್ಲಿ ಪರಲೋಕದಲ್ಲೂ ವಿಜಯ ಸಾಧಿಸುವ ನಿಟ್ಟಿನಲ್ಲಿ ನೊಂದವರ ಕಣ್ಣೀರು ಒರೆಸುವ ಕಾರ್ಯಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಉಳ್ಳಾಲದ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ಅಭಿಪ್ರಾಯಪಟ್ಟರು. ಅಲೇಕಳದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಮುಕ್ಕಚ್ಚೇರಿ ರಾಯಲ್ ಗಾರ್ಡನ್‍ನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮಾತನಾಡಿದರು.ದೇವ ಭಯವುಳ್ಳವರಿಗೆ ಶಾಶ್ವತ ಜೀವನ ಸಾಗಿಸುವ ಅವಕಾಶ ಪರಲೋಕದಲ್ಲಿ ಸಿಗಲಿದೆ, ಪರಲೋಕದಲ್ಲಿ ವಿಜಯ ಸಾಧಿಸಬೇಕಾದರೆ, ಇಹಲೋಕದಲ್ಲಿ ಕಷ್ಟ, ನಷ್ಟ ಎಲ್ಲವನ್ನೂ ಸಮಾನವಾಗಿ ಎದುರಿಸಬೇಕಿದೆ. ಇಹಲೋಕದಲ್ಲಿ ಸರಿಯಾದ ದಾರಿ ತೋರಿಸುವ ಕಾರ್ಯ ಧಾರ್ಮಿಕ ಗುರುಗಳು ಮಾಡುತ್ತಿದ್ದಾರೆ. ಇಂದು ಸಂಘಟನೆ ಮಾಡುತ್ತಿರುವ ಉತ್ತಮ ಕೆಲಸ ಶಾಶ್ವತವಾಗಿರಲಿ ಎಂದು ಆಶಿಸಿದರು. ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ತ್ವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಜೀಝ್ ಬಾಖವಿ, ಮಾಜಿ ಮೇಯರ್ ಕೆ.ಅಶ್ರಫ್, ಪತ್ರಕರ್ತ ವಿದ್ಯಾಧರ್…

Read More

UN NETWORKS ದೇರಳಕಟ್ಟೆ: ಯೇನೆಪೊಯ ನರ್ಸಿಂಗ್ ಕಾಲೇಜಿನ ಮಕ್ಕಳ ಶುಶ್ರೂಷಾ ವಿಭಾಗದ ವತಿಯಿಂದ ಸೆನ್ಸಿಟೈಝಷನ್- ಸಿಸ್ಟಮ್ಯಾಟಿಕ್ ರಿವ್ಯೂ ಮತ್ತು ಮೆಟಾ -ಅನಾಲಿಸಿಸ್ ವಿಚಾರದಲ್ಲಿ ಕಾರ್ಯಾಗಾರ ಯೇನೆಪೊಯ ವಿವಿ ಕ್ಯಾಂಪಸ್‍ನಲ್ಲಿ ನಡೆಯಿತು. ಯೇನೆಪೊಯ ವಿವಿ ಸಹ ಕುಲಾಧಿಪತಿ ಡಾ| ಸಿ ವಿ ರಘುವೀರ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಯೇನೆಪೊಯ ವಿವಿ ಕುಲಸಚಿವ ಡಾ| ಗಂಗಾಧರ ಸೋಮಯಾಜಿ, ಯೇನೆಪೊಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಲೀನಾ ಕೆ ಸಿ, ಮಣಿಪಾಲ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ಡಾ| ರಮೇಶ್ ಸಿ. ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ವಿವಿಧ ಕಾಲೇಜಿನ 72 ಪ್ರತಿನಿಧಿಗಳು ಭಾಗವಹಿಸಿದ್ದರು. ವಿಭಾಗದ ಮುಖ್ಯಸ್ಥೆ ಪ್ರೊ| ಉಮಾರಾಣಿ ಜೆ ಸ್ವಾಗತಿಸಿದರು. ಕಾರ್ಯದರ್ಶಿ ಮೆಲ್ಬ ಲೋಬೊ ವಂದಿಸಿದರು.

Read More

UN NETWORKS ಕುವೈತ್ : ಕೆಸಿಎಫ್ ಕುವೈತ್ ಜಹರಾ ಸೆಕ್ಟರ್ ಇದರ ಪುನರ್ರಚನೆ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ಜ ಹರಾ ಫಾರೂಕ್ ಬಾಯಿ ರವರ ನಿವಾಸದಲ್ಲಿ  ಬಾದುಷ ಸಖಾಫಿ  ಉಸ್ತಾದರ ದುವಾದೊಂದಿಗೆ ಮಾಸಿಕ ಸ್ವಲಾತ್ ಮಜ್ಲಿಸ್ ಆರಂಭವಾಯಿತು. ಅಧ್ಯಕ್ಷತೆಯನ್ನು ಜಹರಾ ಸೆಕ್ಟರ್ ನ  ಅಧ್ಯಕ್ಷರಾದ ಅಬ್ದುಲ್ ಲತೀಫ್ ಕೋಡಿಬೈಲ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕೆಸಿಎಫ್ ಕುವೈತ್ NRD ಕನ್ವೀನರ್ ಮುಸ್ತಫಾ ಉಳ್ಳಾಲ,ಕೆಸಿಎಫ್ ರಾಷ್ಟ್ರೀಯ ಸಂಘಟನಾ ಕನ್ವೀನರ್ ತೌಫೀಕ್ ಅಡ್ಡೂರ್, ಕುವೈತ್  ರಾಷ್ಟ್ರೀಯ ಸಾಂತ್ವಾನ ಕನ್ವೀನರ್ ಇಕ್ಬಾಲ್ ಕಂದಾವರ,ಕೆಸಿಎಫ್ ಕುವೈತ್ ಫರ್ವಾನಿಯ ಸೆಕ್ಟರ್ ಅಧ್ಯಕ್ಷರಾದ ಹೈದರ್ ಪಟ್ಟೋರಿ,ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಕೋರಿದ ಜಹರಾ ಸೆಕ್ಟರ್  ಕಾರ್ಯದರ್ಶಿ ಶಂಸುದ್ದೀನ್ ಕಾಪು  ವರದಿ ವಾಚಿಸಿ. ಲೆಕ್ಕ ಪತ್ರ ಮಂಡಿಸಿದರು.ಸೆಕ್ಟರ್ ಪುನರ್ರಚನೆ ಹಾಗೂ ನೂತನ ಪಧಾದಿಕಾರಿಗಳನ್ನು R.O ಆಗಿ ಬಂದ  ಕೆಸಿಎಫ್ ರಾಷ್ಟ್ರೀಯ NRD ಕನ್ವೀನರ್  ಮುಸ್ತಫಾ ಉಳ್ಳಾಲ ಹಾಗೂ ಕೆಸಿಎಫ್  ಕುವೈತ್  ರಾಷ್ಟ್ರೀಯ ಸಂಘಟನಾ ಕನ್ವೀನರ್ ತೌಫೀಕ್ ಅಡ್ಡೂರ್ ಅವರ ನೇತ್ರತ್ವದಲ್ಲಿ ಹೊಸ ಸಮಿತಿ ರಚಿಸಲಾಯಿತು.ಬಹುಮಾನ್ಯ ಬಾದುಷ…

Read More

UN NETWORKS ದೇರಳಕಟ್ಟೆ : SKSSF ದೇರಳಕಟ್ಟೆ ಶಾಖೆಯ ವತಿಯಿಂದ ಶಾಖಾ ಕಚೇರಿಯಲ್ಲಿ  ಶಂಸುಲ್ ಉಲಮಾ ಮೌಲಿದ್ ಮಜ್ಲಿಸ್  ಹಾಗೂ ರಮಳಾನ್ ಸ್ವಾಗತ ಕಾರ್ಯಕ್ರಮ ನಡೆಯಿತು. SKSSF ದೇರಳಕಟ್ಟೆ ಶಾಖಾ ಅಧ್ಯಕ್ಷರಾದ ಮೊಹಮ್ಮದ್ ಇರ್ಫಾನ್ ರವರ ಆದ್ಯಕ್ಷತೆಯಲ್ಲಿ ನಡೆದಕಾರ್ಯಕ್ರಮದಲ್ಲಿ SKSSF ಕೇಂದ್ರ ಸಮಿತಿ ಸದಸ್ಯರಾದ ಬಹು ತಬೂಕ್ ದಾರಿಮಿ ರವರು  ಮೌಲಿದ್ ಮಜ್ಲಿಸ್ ಗೆ ನೇತೃತ್ವ ವಹಿಸಿದರು. SKSSF ಮಂಗಳೂರು ವಲಯ ಸಮಿತಿ ಪ್ರದಾನ ಕಾರ್ಯದರ್ಶಿ ಹಾಫಿಲ್ ಝೈನ್ ಸಖಾಫಿ ಉಳ್ಳಾಲ ಮುಖ್ಯ  ಪ್ರಭಾಷಣವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಮಂಗಳ ನಗರ ಮಸ್ಜಿದುನ್ನೂರ್ ಮಸೀದಿ ಖತೀಬ್  ಬಹು ತ್ವಯಿಬ್ ಫೈಝಿ.,ಅರಫಾ ಮಸೀದಿ ಇಮಾಮರಾದ ಇಸ್ಹಾಕ್ ಫೈಝಿ, SKSSF ದೇರಳಕಟ್ಟೆ ಕ್ಲಸ್ಟರ್ ಸಮಿತಿ ಅಧ್ಯಕ್ಷರಾದ ಸಯ್ಯದ್ ಅಲಿ SKSSF ಮಾಜಿ ಅಧ್ಯಕ್ಷರಾದ ಹಾಜಿ ಕೆರೀಮ್ ಡಿ. ಮೊಹಮ್ಮದ್ ಡಿ.ಎಂ ಮುಂತಾದ ಹಲವಾರು ಗಣ್ಯರು ಬಾಗವಹಿದರು. ಕಾರ್ಯಕ್ರಮದಲ್ಲಿ SKSSF ದೇರಳಕಟ್ಟೆ ಶಾಖೆ ಯ ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ಮುನ್ಸಿದ್ ಸ್ವಾಗತಿಸಿ ವಂದಿಸಿದರು.

Read More

UN NETWORKS ಮಂಗಳೂರು : ರಂಗಸ್ವರೂಪ ಕುಂಜತ್ತಬೈಲ್ ಮಂಗಳೂರು 2019ರ ಸೃಜನಾಂತರಂಗ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮತ್ತು ಅಕ್ಷರ ಸಂತ ಹರೇಕಳ ಹಾಜಬ್ಬ ರವರಿಗೆ ‘ರಂಗ ಸ್ವರೂಪ ಪ್ರಶಸ್ತಿ’ ಪ್ರದಾನ ಸಮಾರಂಭ ದ.ಕ.ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮರಕಡ ಕುಂಜತ್ತಬೈಲ್ ನಡೆಯಿತು. ಖ್ಯಾತ ಕಲಾವಿದ ಮತ್ತು ಪರಿಸರ ವಾದಿ ದಿನೇಶ್ ಹೊಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಹಾಜಬ್ಬ ಓರ್ವ ರಿಯಲ್ ಹೀರೊ ಆಗಿದ್ದಾರೆ. ರಂಗ ಸ್ವರೂಪ ಸಂಸ್ಥೆ ಈ ಭಾರೀಯ ಪ್ರಶಸ್ತಿಗೆ ಹರೇಕಳ ಹಾಜಬ್ಬರನ್ನು ಆಯ್ಕೆ ಮಾಡಿದು ಉತ್ತಮ ಆಯ್ಕೆಯಾಗಿದೆ.ಹಾಜಬ್ಬರಂತಹವರನ್ನು ಗುರಿತಿಸುವ ಕಾರ್ಯ ರಂಗ ಸ್ವರೂಪ ಸಂಸ್ಥೆ ಮುಂದುವರಿಸಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ ರವರಿಗೆ ‘ರಂಗ ಸ್ವರೂಪ ಪ್ರಶಸ್ತಿ2019’ ಪ್ರದಾನ ಮಾಡಲಾಯಿತು.ಪ್ರಶಸ್ತಿ ಸ್ವೀಕರಿಸಿ ಹರೇಕಳ ಹಾಜಬ್ಬ ಮಾತನಾಡಿ ಮಾಧ್ಯಮ ಕ್ಷೇತ್ರ ನನ್ನನ್ನು ಜಗತ್ತಿಗೆ ಗುರಿತಿಸುವ ಕೆಲಸ ಮಾಡಿದೆ. ದೇಶಾದ್ಯಂತ ನನಗೆ ನಮ್ಮ ಶಾಲೆಗೆ ಮಾನ್ಯತೆಯನ್ನು ಹೆಚ್ಚಿಸಿದೆ. ಇವತ್ತು ರಂಗ ಸ್ವರೂಪ…

Read More

UN NETWORKS ಪಜೀರು : ಈಸ್ಟರ್ ದಿನ ಶ್ರೀಲಂಕಾದಲ್ಲಿ ನಡೆದ ಉಗ್ರದಾಳಿಯನ್ನು‌ ಖಂಡಿಸಿ ಭಾನುವಾರ ಪಜೀರ್ ಮೆರ್ಸಿಯಮ್ಮನವರ ಚರ್ಚ್, ಕೆಥೊಲಿಕ್ ಸಭಾ ಪಜೀರು ಘಟಕ, ಭಾರತೀಯ ಕೆಥೊಲಿಕ್ ಯುವಸಂಚಲನ ಪಜೀರು ಘಟಕ ಹಾಗೂ ಪಜೀರ್ ಚರ್ಚ್ ವ್ಯಾಪ್ತಿಯ ಕ್ರೈಸ್ತರಿಂದ ವಿಶೇಷ ಪ್ರಾರ್ಥನೆ, ಸಂತಾಪ‌ ಸೂಚಕ‌ ಹಾಗೂ ಖಂಡನಾ ಸಭೆ ಮತ್ತು ಪಜೀರ್ ಹೊಸ ಚರ್ಚ್ ನಿಂದ ಗ್ರಾಮಚಾವಡಿ ಜಂಕ್ಷನ್ ವರೆಗೆ ಕ್ಯಾಂಡಲ್ ಮಾರ್ಚ್ ನಡೆಯಿತು. ವಿಶೇಷ ಪ್ರಾರ್ಥನೆಯ ನೇತೃತ್ವ ವಹಿಸಿದ ಚರ್ಚ್ ನ ಧರ್ಮಗುರು ಫಾ.ಸುನಿಲ್ ವೇಗಸ್ ಮಾತನಾಡಿ, ಉಗ್ರದಾಳಿಯಲ್ಲಿ ಮೃತರಾದವರ ಕುಟುಂಬದ ದುಃಖದಲ್ಲಿ ನಾವಿದ್ದೇವೆ. ಇಂದಿನ ಸಂಕಷ್ಟ ಸಂದರ್ಭದಲ್ಲಿ ನಮ್ಮ ಪ್ರಾರ್ಥನೆ ಅಗತ್ಯವಿದ್ದು, ಅದರ ಫಲವಾಗಿ ಮೃತರ‌ ಕುಟುಂಬಕ್ಕೆ ಶಾಂತಿ, ನೆಮ್ಮದಿ ಸಿಗಲಿ ಎಂದು ಹೇಳಿದರು. ಮನುಷ್ಯರಾಗಿರುವ ನಾವೆಲ್ಲರೂ ಪರಸ್ಪರ ಸಹೋದರತೆಯಿಂದ ಜೀವಿಸಲು ಮುಂದಾದಾಗ ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ಸಾಧ್ಯ. ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮದವರು ದ್ವೇಷದಿಂದ ಕಂಡರೆ ಜಗತ್ತಿನಲ್ಲಿ ಯಾರೂ ನೆಮ್ಮದಿಯಿಂದ ಜೀವಿಸಲು ಅಸಾಧ್ಯ. ನಮ್ಮ ದೇಶ,…

Read More

UN NETWORKS ಉಳ್ಳಾಲ : ಪ್ರವಾದಿಯವರ ತತ್ವಾದರ್ಶಗಳನ್ನು ಪಾಲಿಸದಿದ್ದರೆ ಇಸ್ಲಾಂನಲ್ಲಿ ರಕ್ಷಣೆ ಸಾಧ್ಯವಿಲ್ಲ. ಅಲ್ಲಾಹನಿಗೆ, ಪ್ರವಾದಿ ಮತ್ತು ಹಿರಿಯರಿಗೆ ಗೌರವ ನೀಡಿ ಬದುಕುವ ಕೆಲಸ ನಮ್ಮದಾಗಬೇಕು. ಅಕ್ರಮಗಳಿಗೆ ಇಸ್ಲಾಂನಲ್ಲಿ ಅವಕಾಶ ಇಲ್ಲ. ಅದು ಧಾರ್ಮಿಕ ಚೌಕಟ್ಟು ಮೀರಿದ ಕೆಲಸವಾಗಿದೆ. ಪರಲೋಕ ರಕ್ಷಣೆಗಾಗಿ ನಾವು ಪ್ರಾರ್ಥನೆ ಮಾಡಬೇಕಾಗಿದೆ ಎಂಧು ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಹೇಳಿದರು. ಅವರು ಬುಖಾರಿ ಜುಮಾ ಮಸೀದಿಯ ಕಿನ್ಯ ಇದರ ವತಿಯಿಂದ ಶನಿವಾರ ನಡೆದ ಸ್ವಲಾತ್ ವಾರ್ಷಿಕದ ನೇತೃತ್ವ ವಹಿಸಿ ಮಾತನಾಡಿದರು. ಸಯ್ಯದ್ ಆಲವಿ ತಂಙಳ್ ದುವಾ ನೆರವೇರಿಸಿದರು. ಉಸ್ಮಾನ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಮ್ಮದ್ ಅಲಿ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಿನ್ಯ ಜುಮಾ ಮಸೀದಯ ಅಧ್ಯಕ್ಷರಾಗಿ ಆಯ್ಕೆಯಾದ ಕೆಸಿ ಇಸ್ಮಾಯಿಲ್ ಹಾಜಿ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾದ ಅಬ್ದುಲ್ ಖಾದರ್ ಕುತುಬಿನಗರ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅಬ್ಬಾಸ್ ಹಾಜಿ ನಾಟೆಕಲ್, ಕೆ.ಎಂ. ಸಿದ್ದೀಕ್ ಮೀಂಪ್ರಿ, ಇಬ್ರಾಹಿಂ ಹಾಜಿ, ಅಹ್ಮದ್ ಕಂಞ, ಇಬ್ರಾಹಿಂ ಹಾಜಿ ಕುತುಬಿನಗರ,…

Read More