UN NETWORKS ತೋಡಾರ್ : ತೋಡಾರಿನಲ್ಲಿ ಇಂದು ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರ ಸಭೆ ನಡೆಯಿತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ ಜಿಲ್ಲಾಧ್ಯಕ್ಷರಾದ ಅಬ್ದುರ್ರಹ್ಮಾನ್ ದಾರಿಮಿ ತಬೂಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಅಧ್ಯಕ್ಷರಾದ ಸಯ್ಯದ್ ಅಫ್ಹಾಮ್ ತಂಗಳ್ ರವರು ಉದ್ಘಾಟಿಸಿದರು. ಬಳಿಕ ನಡೆದ ಸಭೆಯಲ್ಲಿ ಮುಸ್ಲಿಂ ಯೂತ್ ಲೀಗ್ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹನೀಫ್ ಹೆಚ್. ಎಂ. ಟಿ,ಪ್ರ.ಕಾರ್ಯದರ್ಶಿಯಾಗಿ ಝುಬೈರ್, ಕೋಶಾಧಿಕಾರಿಯಾಗಿ ಟಿ.ಹೆಚ್ ಅನ್ಸಾರ್,ಉಪಾಧ್ಯಕ್ಷರುಗಳಾಗಿ ನೌಫಾಲ್ ಹೆಚ್.ಎಂ.ಟಿ,ರಿಯಾಝ್ ಬಿ.ಎಸ್,ಕಾರ್ಯದರ್ಶಿಗಳಾಗಿ ಸಫರ್.ಝುಲ್ಫಿಕರ್.ಕೆ.ಶಂಶು,ಸಂಘಟನಾ ಕಾರ್ಯದರ್ಶಿಯಾಗಿ ನಾಸಿರುದ್ದೀನ್.ಮೀಡಿಯಾ ಕಾರ್ಯದರ್ಶಿಯಾಗಿ ಮೊಹಮ್ಮದ್ ಅನೀಸ್.ಆಯ್ಕೆಗೊಂಡಿದ್ದಾರೆ. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಯೂತ್ ಲೀಗ್ ಪ್ರ.ಕಾರ್ಯದರ್ಶಿ ಶಬೀರ್ ಅಬ್ಬಾಸ್ ತಲಪಾಡಿ. ಜಿಲ್ಲಾ ಸಮಿತಿ ಕೋಶಾಧಿಕಾರಿಯಾದ ಹೈದರ್ ಕಳಂಜ.ಉಪಾಧ್ಯಕ್ಷರಾದ ಶಬೀರ್ ಪಾಂಡವರಕಲ್ಲು. ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ.ಶರೀಫ್ ಕಕ್ಕಿಂಜೆ ಹಾಗೂ ಇನ್ನಿತರ ಮುಸ್ಲಿಂ ಲೀಗ್ ಹಾಗೂ ಯೂತ್ ಲೀಗ್ ನೇತಾರರು ಬಾಗವಹಿಸಿದರು.
Author: UllalaVani
UN NETWORKS ಉಳ್ಳಾಲ : ಕಾಂಗ್ರೆಸ್ ಪಕ್ಷದಿಂದ ಎಲ್ಲವನ್ನೂ ಪಡೆದು ಅನುಭವಿಸುವಾಗ ಇಸ್ಲಾಂ ಧರ್ಮದ ನೆನಪಾಗದೆ ,ಮುಸ್ಲಿಮರಿಗೆ ಅನ್ಯಾಯವಾಗುವಾಗ ಜಾಣಮೌನ ವಹಿಸಿದ ರೋಷನ್ ಬೇಗ್ ತನಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ ಕಾರಣಕ್ಕಾಗಿ ಕಾಂಗ್ರೆಸ್ ಮುಸ್ಲಿಮರಿಗೆ ಅನ್ಯಾಯ ಮಾಡಿದ್ದಾರೆ ಎಂದು ಸಮುದಾಯವನ್ನು ಎಳೆದು ತಂದದ್ದು ನಾಚಿಕಗೇಡು ಎಂದು ಮಾನವ ಹಕ್ಕುಗಳ ಹೋರಾಟಗಾರ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅಭಿಪ್ರಾಯ ಪಟ್ಟಿದ್ದಾರೆ. ಪಕ್ಷದಿಂದ ಎಲ್ಲವೂ ಸಿಗುವಾಗ ಒಬ್ಬನೇ ಅನುಭವಿಸಿ ಧರ್ಮ ನೆನಪು ಬಾರದ ಬೇಗ್ ಗೆ ಈಗ ತಾನು ಮುಸ್ಲಿಂ ಎಂದು ನೆನಪಾದದ್ದು ವಿಷಾದನೀಯ ಎಂದು ಹೇಳಿದ್ದಾರೆ. ಇದೀಗ ಜಾರಕಿಹೊಳಿಯೊಂದಿಗೆ ಬಿಜೆಪಿ ಗೆ ಹಾರಿದರೆ ವಕ್ಫ್ ಖಾತೆಯನ್ನು ಪಡೆಯಬಹುದೆಂಬ ಆಸೆಯಿಂದ “ಅಗತ್ಯಬಂದರೆ ಮುಸ್ಲಿಮರು ಬಿಜೆಪಿ ಯ ಕೈ ಹಿಡಿಯಬೇಕೆಂದು ಬೇಗ್ ಹೇಳಿದ್ದಾರೆ. ದೃಶ್ಯ ಮಾಧ್ಯಮದ ನಿರೂಪಕನೊಬ್ಬ ಪ್ರವಾದಿಯವರನ್ನು ನಿಂದನೆ ಮಾಡಿದಾಗ ಇಡೀ ಸಮುದಾಯ ವೇ ಅದರ ವಿರುದ್ಧ ಧ್ವನಿ ಎತ್ತಿತ್ತು.ಆಗ ಅದರ ಬಗ್ಗೆ ಒಂದೇ ಒಂದು ಮಾತನಾಡದ ರೋಷನ್ ಬೇಗ್ ಗೆ ಈಗ ತನ್ನ…
UN NETWORKS ಕೊಣಾಜೆ: ರಂಝಾನ್ನ ಒಂದು ತಿಂಗಳು ವೃತಾನುಷ್ಠಾನದ ಮೂಲಕ ಧಾರ್ಮಿಕ ಪಾವಿತ್ರ್ಯತೆ ಕಾಪಾಡಿದಂತೆ ಮುಂದಿನ ದಿನಗಳಲ್ಲೂ ಅದನ್ನು ಪಾಲಿಸಿಕೊಂಡು ಹೋಗಬೇಕು. ಕುರ್ಆನ್ ಅರ್ಥಮಾಡಿಕೊಂಡವನು ಯಾವುದೇ ಧರ್ಮ, ವ್ಯಕ್ತಿಗೆ ತೊಂದರೆ ಕೊಡಲು ಸಾಧ್ಯವೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಕೊಣಾಜೆಯ ಕೋಡಿಜಾಲ್ ರಿಫಾಯಿಯಾ ಜುಮಾ ಮಸೀದಿಯಲ್ಲಿ ಹಾಜಿ ಇಬ್ರಾಹಿಂ ಕೋಡಿಜಾಲ್ ಅವರ ನೇತೃತ್ವದಲ್ಲಿ ಭಾನುವಾರ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಸುರೇಂದ್ರರಾವ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಧರ್ಮ ಎನ್ನುವುದನ್ನು ನಾವು ಮಾಡಿಕೊಂಡಿದ್ದು, ಮನುಷ್ಯನಾಗಿ ಹುಟ್ಟಿದ ಬಳಿಕ ಪ್ರಾಣಿಗಳಾಗಬಾರದು. ಶ್ರೀಮಂತರಿಗೆ ಹಸಿವು ಗೊತ್ತಿರುವುದಿಲ್ಲ, ಆ ಕಾರಣಕ್ಕೆ ನಾವೇ ಗೊತ್ತು ಮಾಡಬೇಕಾಗುತ್ತದೆ. ಎಲ್ಲಾ ಧರ್ಮಗಳು ಒಳ್ಳೆಯ ಮಾತುಗಳನ್ನೇ ಹೇಳಿದರೂ ಅದನ್ನು ಪಾಲಿಸುವಲ್ಲಿ ಮನುಷ್ಯ ವಿಫಲನಾಗಿದ್ದಾನೆ ಎಂದು ಹೇಳಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮಸೀದಿಯ ಖತೀಬ್ ಅಬೂಬಕ್ಕರ್ ಸಖಾಫಿ ಮಾತನಾಡಿ, ಯಾರಾದರು ಕಷ್ಟದಲ್ಲಿದ್ದಾಗ ನಮಾಝ್ ನಲ್ಲಿದ್ದರೂ ಕೈಬಿಟ್ಟು…
UN NETWORKS ಕೋಟೆಕಾರು : ಸ್ಕೂಟರ್ ಅಪಘಾತಕ್ಕೀಡಾಗಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ಕೋಟೆಕಾರು ಸಮೀಪದ ಪಾನೀರು ಬಳಿ ಭಾನುವಾರ ತಡರಾತ್ರಿ ವೇಳೆ ನಡೆದಿದೆ. ಮೊದಲ ಮಳೆಯಿಂದಾಗಿ ರಸ್ತೆಯಲ್ಲಿ ವಾಹನ ಜಾರಿ ಅಪಘಾತ ಸಂಭವಿಸಿದೆ. ಕೋಟೆಕಾರು ನಡಾರು ಸಾಯಿನಗರ ನಿವಾಸಿ ಪುಷ್ಪರಾಜ್ (45) ಸಾವನ್ನಪ್ಪಿದವರು. ರಿಕ್ಷಾ ಚಾಲಕರಾಗಿದ್ದ ಇವರು ಭಾನುವಾರ ದೇರಳಕಟ್ಟೆಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಆವರಣದಲ್ಲಿ ಬೆಂಕಿ ಬಿದ್ದಿರುವುದನ್ನು ನಂದಿಸಲು ಅಗ್ನಿ ಶಾಮಕ ದಳದ ಜತೆಗೆ ಸಹಕರಿಸಿದ್ದರು. ಬೆಂಕಿ ನಂದಿಸಿದ ಬಳಿಕ ಇವರ ಜತೆಗಿದ್ದ ಗೆಳೆಯನನ್ನು ಕೋಟೆಕಾರು ಕಡೆಗೆ ಸ್ಕೂಟರಿನಲ್ಲಿ ಬಿಟ್ಟು ಮನೆಗೆ ವಾಪಸ್ಸಾಗುವಾಗ ಘಟನೆ ಸಂಭವಿಸಿದೆ. ಮೊದಲ ಮಳೆಯಿಂದಾಗಿ ರಸ್ತೆಯಲ್ಲಿ ನೀರು ಹರಿದು ಸ್ಕೂಟರ್ ಜಾರಿ ಅಪಘಾತ ಸಂಭವಿಸಿದೆ. ರಸ್ತೆಗೆ ಉರುಳಿದ್ದ ಪುಷ್ಪರಾಜ್ ಅವರಿಗೆ ತಲೆಗೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಶಾಲೆ ಕಲಿಯುತ್ತಿರುವ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
UN NETWORKS ಇರಾ : ಇರಾ ಗ್ರಾಮದ ಕೆಂಜಿಲ ಎಂಬಲ್ಲಿ ಶ್ರೀಮತಿ ರಾಧಮ್ಮ ಎಂಬವರ ಮನೆಗೆ ಇಂದು ಮುಂಜಾನೆ ಸಿಡಿಲು ಬಡಿದು ಮನೆಗೆ ಹಾನಿಯಾಗಿ ಮನೆಯ ವೈರಿಂಗ್ ಸಂಪೂರ್ಣ ಉರಿದುಹೋಗಿ ಅದೃಷ್ಟವಶಾತ್ ಮನೆಯ ಸದಸ್ಯರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಪಂಚಾಯತ್ ಸದಸ್ಯರಾದ ತುಳಸಿ ಪೂಜಾರಿ, ಶೇಖರ ಪೂಜಾರಿ, ಸುಧಾಕರ ಕೆ.ಟಿ., ಗ್ರಾಮ ಕರಣೀಕರಾದ ತೌಫೀಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ ಎ.ಕೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
UN NETWORKS ಮುಡಿಪು : ಕರಾವಳಿಯ ಹೃದಯ ಬಾಗವಾಗಿರುವ ಈ ಪರಿಸರದಲ್ಲಿ ಹಿಂದೂ ಯುವಕನೋರ್ವ ತನ್ನ ಮದುವೆಯ ಔತಣಕೂಟದ ಸಲುವಾಗಿ, ಮಸೀದಿಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸೌಹಾರ್ದ ಮೆರೆದ ಘಟನೆ ಬಂಟ್ವಾಳ ತಾಲೂಕಿನ ಮುಡಿಪು ಸಮೀಪದ ಸಂಬಾರ ತೋಟ ಎಂಬಲ್ಲಿ ನಡೆದಿದೆ. ಇಂದು ಮನುಷ್ಯ ಮನಸ್ಸುಗಳಲ್ಲಿ ಸಾವಿರ ರೀತಿಯ ತನ್ನದೇ ಧರ್ಮದ ಚಿಂತನೆಗಳು ಮೂಡುತ್ತಿರುವ ಸಂಧರ್ಭದಲ್ಲಿ ಶೈಲೇಶ್ ಎಂಬ ವ್ಯಕ್ತಿಯ ಈ ಸುಂದರ ಚಿಂತನೆಯನ್ನು ಸರ್ವಧರ್ಮಿಯರು ಕೊಂಡಾಡಬೇಕಾಗಿದೆ. ಶೈಲೇಶ್ ಎಂಬ ವ್ಯಕ್ತಿಯು ಮೂಲತಃ ಇರಾ ವ್ಯಾಪ್ತಿಯಲ್ಲಿ ನೆಲೆಸಿ,, ತನ್ನ ಉದ್ಯೋಗ ವೃತ್ತಿಯನ್ನು ಮುಡಿಪು ಪರಿಸರದ ಸಂಬಾರ ತೋಟದಲ್ಲಿ “ಅಮ್ಮ ಎಂಟರ್ಪ್ರೈಸಸ್ “ಎಂಬ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ಮಾರಾಟ ಮಾಡುವ ತನ್ನದೇ ಆದ ಸ್ವಂತ ಕೇಂದ್ರದಲ್ಲಿ ತನ್ನ ಉದ್ಯೋಗವನ್ನು ಎಲ್ಲರ ಮೆಚ್ಚುಗೆಯೊಂದಿಗೆ ಮುನ್ನಡೆಸುತ್ತಿದ್ದಾರೆ. ಸರ್ವಧರ್ಮಿಯರು ಕೇವಲ ವ್ಯಾಪಾರಕ್ಕೆ ಮಾತ್ರ ಸೀಮಿತ ಅಲ್ಲ, ನನ್ನ ಜೀವನದ ಎಲ್ಲ ಕಷ್ಟ ಸುಖಗಳಿಗೂ ಸೀಮಿತ ಎನ್ನುವ ನಿಟ್ಟಿನಲ್ಲಿ, ಶೈಲೇಶ್ ಅವರು ತನ್ನ ಕರ್ಮಭೂಮಿಯ ಸುತ್ತಮುತ್ತಲಿನ ಎಲ್ಲಾ…
UN NETWORKS ಕುರ್ನಾಡು : ಮುಡಿಪು ವಿಶ್ವಕರ್ಮ ಸಂಘ ಮತ್ತು ಸಿಂಧೂರ ಮಹಿಳಾ ಮಂಡಳಿ ಇದರ ವಾರ್ಷಿಕ ಮಹಾ ಸಭೆ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವು ಸಂಘದ ಅಧ್ಯಕ್ಷ ಇರಾ ಯೋಗೀಶ್ ಆಚಾರ್ಯ ಮುಡಿಪು ಇವರ ಅಧ್ಯಕ್ಷತೆಯಲ್ಲಿ ಸಂಘದ ಕಟ್ಟಡದಲ್ಲಿ ಜರಗಿತು. ಗೌರವಾರ್ಪಣೆ ಮುಖ್ಯ ಅತಿಥಿಗಳಾಗಿ ವಿಶ್ವಕರ್ಮ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ, ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ .ಕೇಶವ ಆಚಾರ್ಯ ಮಂಗಳೂರು, ಸಂಘದ ಗೌರವ ಸಲಹೆಗಾರರಾದ ಕೆ.ಕೆ ಆಚಾರ್ಯ, ಬೈಕಾಡಿ ಜನಾರ್ದನ ಆಚಾರ್ಯ, ಎಸ್ .ವಿ. ಆಚಾರ್ಯ, ಯೋಗೀಶ್ ಆಚಾರ್ಯ, ಕಾನೂನು ಸಲಹೆಗಾರರಾದ ಪ್ರಭಾಕರ ಆಚಾರ್ಯ, ಸ್ಥಳದಾನಿಗಳಾದ ನೇತ್ರಾವತಿ ಪದ್ಮನಾಭ ಆಚಾರ್ಯ ಮುಡಿಪು ಇವರಿಗೆ ಗೌರವಾರ್ಪಣೆ ಮಾಡಲಾಯಿತು.ಬಳಿಕ ಪ್ರಾಥವಿುಕ ಶಾಲಾ ಹಂತದಿಂದ ಕಾಲೇಜು ವರೆಗಿನ ಸುಮಾರು 127 ವಿದ್ಯಾರ್ಥಿಗಳಿಗೆ ಸಾರ್ವಜನಿಕವಾಗಿ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಸಂಘದ ಗೌರವಾಧ್ಯಕ್ಷರಾದ ವಿಠಲ ಆಚಾರ್ಯ ಮಿತ್ತಕೊಡಿ, ಕಟ್ಟಡ ಸಮಿತಿಯ ಕಾರ್ಯಾ ಧ್ಯಕ್ಷರಾದ ಹರೀಶ್ ಆಚಾರ್ಯ ಹರೇಕಳ, ಸಿಂಧೂರ ಮಹಿಳಾ ಮಂಡಳಿ ಅಧ್ಯಕ್ಷೆ ಮಾಧವಿ…
UN NETWORKS ಉಳ್ಳಾಲ : ಎರಡು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹ ಉಳ್ಳಾಲದ ನೇತ್ರಾವತಿ ನದಿ ತಟದಲ್ಲಿ ಇಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ.ಮಾಡೂರು ನಿವಾಸಿ ಲೋಕೇಶ್ (63) ಎಂಬವರು ಮೇ.13 ರಿಂದ ನಾಪತ್ತೆಯಾಗಿದ್ದರು.ಬಳಿಕ ಮನೆಮಂದಿ ಹುಡುಕಾಟ ನಡೆಸಿದ್ದರೂ ಲೋಕೇಶ್ ಪತ್ತೆಯಾಗಿರಲಿಲ್ಲ. ಮಂಗಳವಾರ ಸಂಜೆ ನೇತ್ರಾವತಿ ಸೇತುವೆಯಲ್ಲಿ ಕುಡಿದ ಜ್ಯೂಸಿನ ಬಾಟಲಿ ಹಾಗೂ ಚಪ್ಪಲಿಗಳು ಪತ್ತೆಯಾಗಿತ್ತು. ಇದರಿಂದ ಸಂಶಯಗೊಂಡ ಮನೆಮಂದಿ ಉಳ್ಳಾಲ, ಅಳಿವೆಬಾಗಿಲು ಸಹಿತ ಸಮುದ್ರ ತೀರದಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಇಂದು ಮಧ್ಯಾಹ್ನ ನೇತ್ರಾವತಿ ಸೇತುವೆಯ ಕೆಳಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಲೋಕೇಶ್ ಅವರು ಹಿಂದೆ ಖಾಸಗಿ ಬಸ್ಸು ಚಾಲಕರಾಗಿ ದುಡಿಯುತ್ತಿದ್ದರು . ಕೆಲ ವರ್ಷಗಳಿಂ ಅನಾರೋಗ್ಯ ದಿಂದ ಬಳಲುತ್ತಿದ್ದ ಇವರು ಕಿಡ್ನಿ ಸಮಸ್ಯೆಗೂ ಒಳಗಾಗಿದ್ದರು. ಡಯಾಲಿಸಿಸ್ ಮಾಡುತ್ತಿದ್ದ ಅವರು ಮಾನಸಿಕವಾಗಿ ಕುಗ್ಗಿದ್ದರು. ಇದರಿಂದ ನೊಂದು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪುತ್ರ ಸಂತೋಷ್ ಎರಡು ದಿನಗಳಲ್ಲಿ ವಿದೇಶಕ್ಕೆ ತೆರಳುವವರಿದ್ದರು.
UN NETWORKS ತೌಡುಗೋಳಿ : ಎಸ್ಸೆಸ್ಸೆಫ್ ತೌಡುಗೊಳಿ ಶಾಖಾ ವತಿಯಿಂದ ಪಕ್ಷಿಗೊಂದು ಹನಿ ನೀರು ಅಭಿಯಾನ ಕಾರ್ಯಕ್ರಮವು ತೌಡುಗೊಳಿ ಪರಿಸರದಲ್ಲಿ ಉಮರುಲ್ ಫಾರೂಕ್ ಸುನ್ನಂಗಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ತೌಡುಗೋಳಿ ಜುಮಾ ಮಸೀದಿ ಕತೀಬ್ ಅಬ್ದುಲ್ ಹಮೀದ್ ಸಖಾಫಿಯವರು ಬೇಸಿಗೆ ಕಾಲದಲ್ಲಿ ನೀರಿಲ್ಲದೆ ಮೂಕ ಪ್ರಾಣಿ ಪಕ್ಷಿಗಳು ಸಾವಿನಂಚಿನಲ್ಲಿದೆ ನಾವು ಅದರ ರಕ್ಷಣೆ ಮಾಡಬೇಕಾಗಿದೆ ಎಂದು ಯುವಕರಲ್ಲಿ ಅರಿವು ಮೂಡಿಸಿದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಮುಡಿಪು ಡಿವಿಜನ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಮಾತನಾಡುತ್ತಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ತಾಪಕ್ಕೆ ಎಲ್ಲಾ ಜೀವಿಗಳು ತತ್ತರಿಸುತ್ತಿವೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳು ನೀರಿಗಾಗಿ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರಿತ ಪ್ರಾಣಿ, ಪಕ್ಷಿಗಳ ಸಂಕಷ್ಟ ಅರಿತು ರಕ್ಷಣೆ ಮಾಡಲು ಇಲ್ಲಿಯ ಎಸ್ಸೆಸ್ಸೆಫ್ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಆ ಮೂಲಕ ಮಾನವ ಧರ್ಮಕ್ಕೆ ಮುನ್ನಡೆ ಬರೆದಿದ್ದಾರೆ. ತಾಲ್ಲೂಕಿನಾದ್ಯಂತ ದಾಖಲೆ ಪ್ರಮಾಣದಲ್ಲಿ ಬಿಸಿಲಿನ ತಾಪಮಾನವಿದೆ. ಜಲಮೂಲಗಳು ಬತ್ತಿವೆ. ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ.…
UN NETWORKS ಉಳ್ಳಾಲ : ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧೀನದಲ್ಲಿರುವ ಹರಮ್ ಯೂನಿಟ್ ವತಿಯಿಂದ ಹರಮಿನ ಕ್ಲಾಕ್ ಟವರ್ ನ ಮೂರನೇ ಮಹಡಿಯಲ್ಲಿ ಯೂನಿಟ್ ಅಧ್ಯಕ್ಷ ಅಶ್ರಫ್ ಮಂಜನಾಡಿಯವರ ಅಧ್ಯಕ್ಷತೆಯಲ್ಲಿ ಬೃಹತ್ ಇಫ್ತಾರ್ ಸಂಗಮ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಯುವ ಪ್ರಭಾಷಣಗಾರ ಕಾಂತಪುರಂ ಅಬ್ದುಲ್ ಲತೀಫ್ ಸಖಾಫಿ ರಂಝಾನಿನ ಸಂದೇಶ ನೀಡಿ, ನಬಿ ಮದ್ಹ್ ಗೀತೆ ದುಆಃ ಮಜ್ಲಿಸ್ ನಡೆಸಿ ಕೊಟ್ಟರು. ಈ ಸಂದರ್ಭ ಕೆಸಿಎಫ್ ಜಿದ್ದಾ ಝೋನ್, ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ನೇತಾರರು ಹಾಗೂ ಸೆಕ್ಟರ್ ನ ಯೂನಿಟ್ ಗಳ ಕಾರ್ಯಕರ್ತರು ಹಾಗೂ ಮೊದಲಾದ ನೇತಾರರು ಸಾರ್ವಜನಿಕರು ಉಪಸ್ಥಿತರಿದ್ದರು. ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿದರು. ಯೂನಿಟ್ ಪ್ರ. ಕಾರ್ಯದರ್ಶಿ ಮುಜೀಬುರ್ರಹ್ಮಾನ್ ಹರೇಕಳ ವಂದಿಸಿದರು.

