Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ಗಾಂಧಿ ಜಯಂತಿ ರಜೆ ನಿಮಿತ್ತ ಈಜಲು ಹೋದ ಬಾಲಕನೋರ್ವ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಚ್ಚಿಲ ತಲಪಾಡಿ ಬಳಿಯ ಅಳಿವೆಬಾಗಿಲಿನಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದ್ದು, ಮುಳುಗುತ್ತಿದ್ದ ಮತ್ತಿಬ್ಬರು ಬಾಲಕರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮೃತ ಬಾಲಕನನ್ನು ತಲಪಾಡಿ ಕೆ.ಸಿ.ನಗರ ಪಿಲಿಕೂರು ನಿವಾಸಿ ಅಬ್ಬಾಸ್ ಎಂಬವರ ಪುತ್ರ ಅರ್ಫಾಝ್ (16) ಎಂದು ಗುರುತಿಸಲಾಗಿದ್ದು, ತಲಪಾಡಿ ಕೆ.ಸಿ.ರೋಡ್ ನ ಫಲಾಹ್ ಶಿಕ್ಷಣ ಸಂಸ್ಥೆಯಲ್ಲಿ 9ನೇ ತರಗತಿ ವಿದ್ಯಾರ್ಥಿ. ಶಾಲೆಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಕೆ.ಸಿ.ನಗರದ ಸುಮಾರು 10-15 ರಷ್ಟು ಮಕ್ಕಳ ತಂಡ ತಲಪಾಡಿಯ ಅಳಿವೆಬಾಗಿಲು ಸಮೀಪ ಈಜಲು ತೆರಳಿದ್ದರು. ಮಧ್ಯಾಹ್ನ ವೇಳೆ ಈಜಾಟ ಆಡಲು ಆರಂಭಿಸಿದ್ದ ಮಕ್ಕಳ ಪೈಕಿ ಮೂವರು ಸಂಜೆ ವೇಳೆ ಕೆಸರಿನಲ್ಲಿ ಹೂತು ಮುಳುಗಿದ್ದರು. ಇದನ್ನು ಕಂಡು ಉಳಿದ ಮಕ್ಕಳು ರಕ್ಷಣೆಗಾಗಿ ಬೊಬ್ಬೆ ಹಾಕಿದ್ದು, ಕೂಡಲೇ ಸ್ಥಳೀಯರು ಸ್ಥಳಕ್ಕಾಗಮಿಸಿ ಇಬ್ಬರನ್ನು ರಕ್ಷಿಸಿದರೆ ಅರ್ಫಾಝ್ ಮಾತ್ರ ನೀರುಪಾಲಾಗಿದ್ದ. ತಲಪಾಡಿ ಕಡೆಯಿಂದ ಹರಿದುಬರುವ ಹೊಳೆ ಸಮುದ್ರಕ್ಕೆ ಸೇರುವಲ್ಲಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಹಿಳೆಯೋರ್ವರ ಸರವನ್ನು ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಕಳವುಗೈದಿರುವ ಘಟನೆ ಸೋಮೇಶ್ವರದ ಉಚ್ಚಿಲ ರೈಲ್ವೇ ಟ್ರಾಕ್ ಸಮೀಪ ಗುರುವಾರ ರಾತ್ರಿ ವೇಳೆ ನಡೆದಿದೆ. ಸೋಮೇಶ್ವರ ಉಚ್ಚಿಲದ ನಿವಾಸಿ ಶಹನಾಝ್ (62) ಎಂಬವರು ಮನೆಗೆಂದು ನಡೆದುಕೊಂಡು ರೈಲ್ವೇ ಹಳಿಯನ್ನು ದಾಟುವ ಸಂದರ್ಭ ಪಲ್ಸಾರ್ ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಅವರ ಕುತ್ತಿಗೆಯಲ್ಲಿದ್ದ ರೂ.30,000 ಬೆಲೆಬಾಳುವ 15 ಗ್ರಾಂ ಚಿನ್ನದ ಸರವನ್ನು ಕಳವುಗೈದು ಪರಾರಿಯಾಗಿದ್ದಾರೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾರಗಳ ಹಿಂದೆ ಉಚ್ಚಿಲದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಗನವಾಡಿ ಶಿಕ್ಷಕಿಯ ಸರವನ್ನು ಇದೇ ರೀತಿಯಲ್ಲಿ ಬೈಕಿನಲ್ಲಿ ಬಂದ ಕಳ್ಳರು ಕಳವುಗೈದಿದ್ದರು.

Read More

ಉಳ್ಳಾಲ: ಹೆಚ್ಚುವರಿ ಬಡ್ಡಿ ನೀಡಲು ಪೀಡಿಸುತ್ತಿದ್ದ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದಾತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಮೇಶ್ವರ ನಿವಾಸಿ ಜೀತು ಪೂಜಾರಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಲ ತಿಂಗಳ ಹಿಂದೆ ಕುಂಪಲ ನಿವಾಸಿ ಹರೀಶ್ ಎಂಬವರು ಜೀತು ಪೂಜಾರಿ ಕೈಯಿಂದ ರೂ. 5 ಲಕ್ಷ ಹಣವನ್ನು ಬಡ್ಡಿಸಾಲದ ರೂಪದಲ್ಲಿ ಪಡೆದುಕೊಂಡಿದ್ದರು. ಅದರ ಅಸಲು ಹಣ ಮತ್ತು ಬಡ್ಡಿಯಾಗಿ ರೂ. 2 ಲಕ್ಷ ನಗದನ್ನು ಹರೀಶ್ ವಾಪಸ್ಸು ಮಾಡಿದ್ದರು. ಆದರೆ ಹೆಚ್ಚುವರಿ ಬಡ್ಡಿ ನೀಡಬೇಕೆಂದು ಒತ್ತಾಯಿಸಿ ಅವಾಚ್ಯ ಶಬ್ದಗಳಿಂದ ಜೀತುಪೂಜಾರಿ ನಿಂದಿಸಿ ಬೆದರಿಕೆ ಒಡ್ಡುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಹರೀಶ್ ಅವರು ಉಳ್ಳಾಲ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕುಂದಾಪುರ ಟು ತಲಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಆರಂಭವಾಗಿ ವರ್ಷಗಳು ಸಂದು ರಸ್ತೆ ಕಾಮಗಾರಿ ಪೂರ್ಣವಾಗದೆ, ಅದರ ಅವ್ಯವಸ್ಥೆಗೆ ಜೀವಗಳು ಮಾತ್ರ ಬಲಿಯಾಗುತ್ತಲೇ ಇವೆ. ಆದರೂ ಗಮನಹರಿಸಬೇಕಾದ ಜನಪ್ರತಿನಿಧಿಗಳು ಜನರ ಧ್ವನಿಗೆ ಪ್ರತಿಕ್ರಿಯಿಸದೆ ತಮ್ಮ ಪಾಲಿಗೆ ಮುಂದುವರಿಯುತ್ತಿರುವ ನಡೆ ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ. ಮಂಗಳೂರಿನಿಂದ ತಲಪಾಡಿಯವರೆಗೂ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಅಗಲೀಕರಣ ಕಾಮಗಾರಿಯ ಟೆಂಡರ್ ಮೇ. 2008ರಲ್ಲಿ ಕರೆಯಲಾಗಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಒಂದೇ ವರ್ಷ ಅಂದರೆ 2009ರಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಯಿತು. ಆದರೆ ಈವರೆಗೆ ಕಾಮಗಾರಿ ಪೂರ್ಣವಾಗದೆ ಸರಿಸುಮಾರು 7 ವರ್ಷಗಳು ಪೂರ್ಣವಾಗುತ್ತಾ ಬಂದಿದೆ. ಈ ನಡುವೆ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆ ಕಂಪೆನಿಗಳಿಂದ ಜನಪ್ರತಿನಿಧಿಗಳು ಕಮೀಷನ್ ಪಡೆದುಕೊಂಡು ಕಾಮಗಾರಿ ವಿಳಂಬವಾದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಅನ್ನುವ ಆರೋಪವೂ ಕೇಳಿಬಂದಿದೆ. ಲೆಕ್ಕವಿಲ್ಲದ ಅಪಘಾತಗಳು : ಕುಂದಾಪುರದಿಂದ ತಲಪಾಡಿವರೆಗೆ ಹಲವೆಡೆ ಕಾಮಗಾರಿಗಳು ಪೂರ್ಣವಾಗಿದೆ. ಪಡುಬಿದ್ರಿ, ಮುಲ್ಕಿ, ಕುಳಾಯಿ, ನಂತೂರು, ಪಂಪ್‍ವೆಲ್, ಕಲ್ಲಾಪು, ತೊಕ್ಕೊಟ್ಟು,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಅನಧಿಕೃತ ಜಾಗದಲ್ಲಿ ವಾಸಿಸುವ ಮಂದಿಗೆ ದಂಡ ವಿಧಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಯ್ದೆ ಸರಕಾರದಲ್ಲಿದ್ದು, ಈ ಮೂಲಕ ಬಡ ಕುಟುಂಬಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಗರಸಭೆ ಸದಸ್ಯರು ಪ್ರಂiÀiತ್ನಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಉಳ್ಳಾಲ ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಗರಸಭೆ ವ್ಯಾಪ್ತಿಯಲ್ಲಿ ಶೌಚಾಲಯ, ವಿದ್ಯುತ್, ಕುಡಿಯುವ ನೀರು ಮೊದಲಾದ ಮೂಲಭೂತ ಸೌಕರ್ಯಗಳಿಲ್ಲದೆ ಜನ ವಾಸಿಸುತ್ತಿದ್ದಾರೆ. ದಾಖಲೆಗಳು ಇಲ್ಲವೆಂದು ಸಮಾಜದಿಂದಲೇ ಅವರನ್ನು ದೂರ ಮಾಡುವುದು ಸರಿಯಲ್ಲ. ಅದಕ್ಕೆಂದೇ ಕಾನೂನುಗಳು ಇದ್ದರೂ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಅಂತಹ ನಿರ್ಗತಿಕ ಕುಟುಂಬಗಳಿಗೆ ದಾರಿ ತೋರಿಸಬೇಕಿದೆ. ಅಲ್ಲದೆ ಸರಕಾರದಿಂದ ಅಂತಹ ಕುಟುಂಬಗಳಿಗೆ ದಂಡ ವಿಧಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಯ್ದೆ ಇದೆ ಎಂದ ಅವರು ಸಾಮಾನ್ಯ ಸಭೆ ಚರ್ಚೆಗಳಲ್ಲೇ ಮುಗಿಯುವುದಕ್ಕಿಂತ ಪೂರ್ವಭಾವಿಯಾಗಿ ಸದಸ್ಯರು, ಅಧ್ಯಕ್ಷರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಮಂಡಿಸುವ ವಿಚಾರದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಭಾರತದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಭಗತ್‍ಸಿಂಗರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಕಾರ್ಯ ಮಾಡುತ್ತಿರುವ ಭಗತ್ ಸಿಂಗ್ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದ್ದು, ಅವರ ಆದರ್ಶ, ಚಿಂತನೆಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಭಗತ್‍ಸಿಂಗ್ ಪ್ರತಿಷ್ಠಾನ ಕೇಂದ್ರ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ ಭಗತ್‍ಸಿಂಗರ ಜನ್ಮದಿನೋತ್ಸವದ ಅಂಗವಾಗಿ ಯುವ ಉದ್ಯಮಿ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ರಿಷಿ ಹಾರ್ಡ್‍ವೇರ್‍ನ ಮಾಲಕ ಸತೀಶ್ ಕರ್ಕೇರ ಅವರಿಗೆ ಭಗತ್‍ಸಿಂಗ್ ಉದ್ಯಮಶೀಲತಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಉದ್ಯಮದೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸತೀಶ್ ಕರ್ಕೇರ ಅವರನ್ನು ಭಗತ್‍ಸಿಂಗ್ ಪ್ರತಿಷ್ಠಾನ ಗುರುತಿಸಿ ಗೌರವಿಸುವುದು ಶ್ಲಾಘನೀಯ. ಕೇಂದ್ರ ಸರಕಾರದ ಮುದ್ರಾ ಯೋಜನೆಯನ್ನು ಭಗತ್‍ಸಿಂಗ್ ಪ್ರತಿಷ್ಠಾನದ ಪ್ರತಿಯೊಬ್ಬ ಸದಸ್ಯರು ಸದುಪಯೋಗಪಡಿಸಿಕೊಂಡು ಯಶಸ್ವಿ ಉದ್ಯಮಿಯಾಗಿ ಉದ್ಯೋಗ ಸೃಷ್ಟಿಸಿ ಎಂದರು. ಸನ್ಮಾನ ಸ್ವೀಕರಿಸಿದ ಉದ್ಯಮಿ ಸತೀಶ್ ಕರ್ಕೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಗತ್‍ಸಿಂಗ್ ಪ್ರತಿಷ್ಠಾನದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ನಿಟ್ಟೆ ಉಷಾ ಇನ್ಸಿ ್ಟಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ನ ವತಿಯಿಂದ ಕ್ಷೇಮ ಅಡಿಟೋರಿಯಮ್‍ನಲ್ಲಿ ಪ್ರಥಮ ಬಿ.ಎಸ್ಸಿ, ಪ್ರಥಮ ಪಿಬಿ.ಬಿ.ಎಸ್ಸಿ, ಪ್ರಥಮ ಜಿ.ಎನ್.ಎಮ್. ಹಾಗೂ ಪ್ರಥಮ ಎಮ್.ಎಸ್ಸಿ ಶುಶ್ರೂಷ ವಿದ್ಯಾರ್ಥಿಗಳಿಗೆ ಫ್ರೆಶರ್ಸ್ ಡೇ ಮಂಗಳವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸಿ ್ಟಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಸ್ನಾತಕೋತ್ತರ ವಿಭಾಗ ಡೈರೆಕ್ಟರ್ ಡಾ. ಬಿ. ರಾಜೇಂದ್ರಪ್ರಸಾದ್ ಭಾಗವಹಿಸಿದ್ದರು. ಉಪಪ್ರಾಂಶುಪಾಲೆ ಪ್ರೊ. ಸಬಿತಾ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ಲೀಟಾ ಪಿಂಟೋ ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳಾದ ವಿಕ್ಟೋರಿಯ, ಮಾಯಾಂಕ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಎಸ್.ಎಸ್.ಎಫ್ ತೊಕ್ಕೊಟ್ಟು ಸೆಕ್ಟರ್‍ನ ಪಟ್ಲ ಶಾಖೆಯ ವತಿಯಿಂದ ಪ್ರತಿಭೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಪಟ್ಲ ಮದ್ರಾಸಾ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮದ್ರಸ ಸದರ್ ಅಬ್ದುಲ್ ರಹಮಾನ್ ಉದ್ಘಾಟಿಸಿದರು. ಈ ಸಂದರ್ಭ ಕೋಶಾಧಿಕಾರಿ ತೌಸೀದ್, ಶೌಕತ್, ಉಪಾಧ್ಯಕ್ಷ ಶರೀಫ್, ಸೆಕ್ಟರ್ ಕಾರ್ಯದರ್ಶಿ ಜುನೈದ್ ಪಟ್ಲ, ಮಸೀದಿ ಕಾರ್ಯದರ್ಶಿ ಹಾರಿಶ್, ಸದ್ದಾಂ ಉಪಸ್ಥಿತರಿದ್ದರು. ಶಾಖಾ ಕಾರ್ಯದರ್ಶಿ ಸಾಲಿಂ ಸ್ವಾಗತಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾದ ಅಬ್ಬಕ್ಕಳ ದೇಶಪ್ರೇಮ, ಸ್ವಾಭಿಮಾನ, ಸೌಹಾರ್ದತೆಯನ್ನು ಎತ್ತಿ ತೋರಿಸುವಂತಹ ಈ ಅಬ್ಬಕ್ಕ ಉತ್ಸವವು ಜನರ ಉತ್ಸವ ಎಂದು ಮಾಜಿ ಶಾಸಕ ಹಾಗೂ ಸಮಿತಿಯ ಸ್ವಾಗತಧ್ಯಕ್ಷ ಕೆ.ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಕ್ಲಿಕ್ ಮ್ಯಾರೇಜ್ ಹಾಲ್‍ನಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ 19ನೇ ವರ್ಷದ ಅಬ್ಬಕ್ಕ ಉತ್ಸವದ ಪ್ರಥಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಅಬ್ಬಕ್ಕ ಉತ್ಸವವನ್ನು ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ಆಚರಿಸುತ್ತಾ ಬರುತ್ತಿರುವುದು ಪ್ರಶಂಸನೀಯ. ಊರಿನ ಎಲ್ಲಾ ಧರ್ಮದವರೂ, ವರ್ಗದವರು ಪಾಲ್ಗೊಂಡು ಆಚರಿಸುವ ಈ ಉತ್ಸವವು ಸರಕಾರದ ಪ್ರೋತ್ಸಾಹದಿಂದ ಇನ್ನಷ್ಟೂ ಯಶಸ್ವಿಯಾಗಲೆಂದು ಹಾರೈಸಿದರು. ಈ ಸಭೆಯಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಯು. ಸದಾನಂದ ಬಂಗೇರ, ಫಾ. ಪ್ರವೀಣ್ ಜೋಯ್ ಸಲ್ಡಾನಾ, ತೋನ್ಸೆಪುಷ್ಕಳ್ ಕುಮಾರ್, ಯು.ಪಿ.ಆಲಿಯಬ್ಬ, ಡಿ.ಎನ್.ರಾಘವ, ಎಂ.ವಾಸುದೇವ ರಾವ್, ಅಬ್ದುಲ್ ಅಜೀಜ್ ಹಕ್, ಲಕ್ಷ್ಮೀನಾರಾಯಣ ರೈ, ಹರೇಕಳ ತ್ಯಾಗಂ ಹರೇಕಳ, ಲೋಕನಾಥ ರೈ, ತುಕರಾಮ,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಸರಿಯಾದ ಯೋಜನೆ ರೂಪಿಸದೆ ಹೆದ್ದಾರಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಜಂಕ್ಷನ್ನಿನ ಫ್ಲೈಓವರ್ ನಿರ್ಮಾಣದಲ್ಲಿ ವಿಳಂಬವಾಗಿದೆ. ಇದರಿಂದ ಜನ ಸಂಕಷ್ಟಕ್ಕೀಡಾಗುತ್ತಿದ್ದರೂ ಸಂಸದರ ಧೋರಣೆ ನೀತಿಯೇ ಕಾರಣ ಎಂದು ಡಿವೈಎಫ್ ಐ ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ಹೇಳಿದ್ದಾರೆ. ಅವರು ಉಳ್ಳಾಲ ವಲಯ ಡಿವೈಎಫ್ ಐ ಸಮಿತಿ ವತಿಯಿಂದ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ವಿಳಂಬ ನೀತಿಯನ್ನು ಖಂಡಿಸಿ, ಟ್ರಾಫಿಕ್ ಜಾಮ್ ಪರಿಹಾರಕ್ಕೆ ಆಗ್ರಹಿಸಿ, ರಾ.ಹೆ66 ರ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ನಿಧಾನಗತಿಯಿಂದ ಸಾಗುತ್ತಿರುವ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯಿಂದ ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಸರಿಯಾದ ಯೋಜನೆಯನ್ನು ರೂಪಿಸದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಇದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ತೊಕ್ಕೊಟ್ಟುವಿನ ಫ್ಲೈಓವರ್ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಸರಿಯಾದ ಸಮಯಕ್ಕೆ ಕಾರ್ಯಕ್ಷೇತ್ರಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಂಜೆ ವೇಳೆ ಯುವತಿಯರು 4 ಗಂಟೆಗೆ ಕಾರ್ಯಕ್ಷೇತ್ರವನ್ನು ಬಿಟ್ಟರೂ…

Read More