ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ವಿಶ್ವವನ್ನೇ ಭಯೋತ್ಪಾದನೆ ಮತ್ತು ಜಾಗತಿಕ ತಾಪಮಾನಗಳೆಂಬ ಎರಡು ಗಂಡಾಂತರಗಳು ಆಳುತ್ತಿದ್ದು ಅದರಿಂದ ಮುಕ್ತರಾಗಲು ಯುವಶಕ್ತಿಗಳು ಒಂದಾಗಬೇಕೆಂದು ಪರಿಸರವಾದಿ ಮಾಧವ ಉಳ್ಳಾಲ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟಿನ ಜಗತ್ ಫ್ರೆಂಡ್ಸ್ ಸರ್ಕಲ್ನ ಬೆಳ್ಳಿ ಹಬ್ಬದ ಆಚರಣೆ ಪ್ರಯುಕ್ತ ಆಯೋಜಿಸಲಾದ `ವೃಕ್ಷ ಆಂದೋಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತಾಪಮಾನದ ಹೊಡೆತಕ್ಕೆ ಸಿಲುಕಿ ಹಚ್ಚ ಹಸುರಿನ ಪರಿಸರ ಮಾಯವಾಗುತ್ತಿದೆ. ಇಡೀ ವಿಶ್ವವೇ ಜಾಗತಿಕ ತಾಪಮಾನವೆಂಬ ಗಂಡಾಂತರ ಎದುರಿಸುತ್ತಿದ್ದು ಅದನ್ನು ಹೋಗಲಾಡಿಸಲು ಯುವಕರು ಜಾಗೃತಿ ಅಭಿಯಾನಗಳ ಮೂಲಕ ಜನರನ್ನು ಜಾಗೃತಗೊಳಿಸುವ ಕಾರ್ಯ ನಡೆಸಬೇಕಿದೆ. ಸಸಿಗಳಿಗೆ ಸದಾ ನೀರೆರೆದು ಮಕ್ಕಳಂತೆ ಪೆÇೀಷಿಸಿ ಅದನ್ನು ಗಿಡದಿಂದ ಮರವನ್ನಾಗಿಸುವ ಜವಬ್ದಾರಿ ತೆಗೆಯಬೇಕೆಂದು ಹೇಳಿದರು. ಕಾರ್ಯಕ್ರಮ ಸಂಘಟಕ ರೋಹಿತ್ ಉಳ್ಳಾಲ್ ಮಾತನಾಡಿ ಜಗತ್ ಫ್ರೆಂಡ್ಸ್ ಸರ್ಕಲ್ ಕಳೆದ ಇಪ್ಪತ್ತೈದು ವರುಷಗಳಿಂದಲೂ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಕ್ಷೇತ್ರದ ಜನರ ಪ್ರೀತಿಗೆ ಪಾತ್ರವಾಗಿದ್ದು ಸಂಸ್ಥೆಯು ಬೆಳ್ಳಿ ಹಬ್ಬ ಆಚರಿಸುತ್ತಿರುವ ಸಂಧರ್ಭದಲ್ಲಿ ತೊಕ್ಕೊಟ್ಟು ಮೇಲ್ಸೇತುವೆಯ ಪ್ರವೇಶ ಮಾರ್ಗದ ಎರಡೂ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ತೊಕ್ಕೊಟ್ಟಿನ ವೈನ್ ಶಾಪ್ ಮಾಲಕನಿಗೆ ತಲವಾರು ತೋರಿಸಿ 1.68 ಲಕ್ಷ ರೂ. ದರೋಡೆ ಮಾಡಿ ಪರಾರಿಯಾದ ಘಟನೆ ತೊಕ್ಕೊಟ್ಟು ಜಂಕ್ಷನ್ನಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಘಟನೆಗೆ ಸಂಬಂಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟು ಜಂಕ್ಷನ್ ಬಳಿ ವೈನ್ಶಾಪ್ ಹೊಂದಿರುವ ಹರೀಶ್ ಶೆಟ್ಟಿ ಎಂಬವರೇ ದರೋಡೆಗೊಳಗಾದವರು. ವೈನ್ ಶಾಪ್ನಲ್ಲಿ ವ್ಯವಹಾರ ಮುಗಿಸಿ ಹಣದೊಂದಿಗೆ ಕಾರಿನಲ್ಲಿ ಕುಳಿತುಕೊಂಡಾಗ ಏಕಾಏಕಿ ಆಗಮಿಸಿದ ಮೂವರು ಆಗಂತುಕರು ತಲವಾರಿನಿಂದ ಕಾರಿನ ಗಾಜನ್ನು ಹೊಡೆದು ಅವರ ಕೈಯಿಂದ ಹಣವನ್ನು ಎಳೆದು ಬೈಕ್ ಮತ್ತು ಕಾರಿನಲ್ಲಿ ಪರಾರಿಯಾಗಿದ್ದರೆ. ಸಂದರ್ಭದಲ್ಲಿ ಹರೀಶ್ ಅವರ ಕುತ್ತಿಗೆಯಲ್ಲಿ ಬಂಗಾರದ ಸರಕ್ಕೂ ಕೈ ಹಾಕಿ ಎಳೆದಿದ್ದು, ಅದು ತುಂಡಾಗಿ ಅಂಗಿಯೊಳಗೆ ಬಿದ್ದಿತ್ತು. ಹರೀಶ್ ಅವರ ಬೊಬ್ಬೆ ಕೇಳಿ ಸ್ಥಳೀಯ ಅಂಗಡಿಯವರು ಓಡಿ ಬಂದಾಗ ದರೋಡೆಕೋರರು ಪರಾರಿಯಾಗಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ವತಿಯಿಂದ ಟಿ.ಎಂ ಮುಹೀಯದ್ದೀನ್ ಸಖಾಫಿತೊಕೆ ಉಸ್ತಾದರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಮುಸ್ತಾಫ ಮೋರೆಲ್ ಅಕಾಡೆಮಿಗೆ ಸಹಾಯ ಧನವಾದ 10,000 ಸಾವಿರ ರೂಪಾಯಿಯ ಚೆಕ್ನ್ನು ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ಅಧ್ಯಕ್ಷರಾದ ಇಲ್ಯಾಸ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಮಂಜನಾಡಿ ಸೆಕ್ಟರ್ಅಧ್ಯಕ್ಷರಾದ ಇಬ್ರಾಹಿಂ ಅಹ್ಸನಿಯವರು ನೀಡಿದರು. ಈ ಕಾರ್ಯಕ್ರಮವನ್ನು ಶಫೀಕ್ಅಹ್ಸನಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕೋಶಾ„ಕಾರಿ ಅಲ್ತಾಫ್ ಕುಂಪಲ, ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ರಿಲೀಪ್ ಸರ್ವೀಸ್ ವೈಸ್ಚೆಯರ್ಮ್ಯಾನ್ ಬದ್ರುದ್ದೀನ್ ಸೇವಂತಿಗುಡ್ಡೆ, ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ಕೋಶಾ„ಕಾರಿ ಶಮೀರ್ ಸೇವಂತಿಗುಡ್ಡೆ, ಶಹೀದ್ ಮಂಚಿಲ, ಸವಾದ್ಕಲ್ಲಾಪು ಉಪಸ್ಥಿತರಿದ್ದರು.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಉದ್ಯೋಗಿಯ ಮೇಲೆ ಚಲಿಸುವ ವಾಹನದಲ್ಲಿ ಗ್ಯಾಂಗ್ ರೇಪ್ ನಡೆಸಿದ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಮೂವರು ವಿಶೇಷ ಪೊಲೀಸರ ತಂಡಗಳನ್ನು ರಚನೆ ಮಾಡಲಾಗಿದೆ. ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಬರುತ್ತಿದ್ದ ವೇಳೆ ಯುವತಿಯನ್ನು ದುಷ್ಕರ್ಮಿಗಳು ಡ್ರಾಪ್ ಕೊಡುವ ನೆಪದಲ್ಲಿ ಹತ್ತಿಸಿಕೊಂಡಿದ್ದಾರೆ. ಬಳಿಕ ಆಕೆಯನ್ನು ಮಡಿವಾಳ ಕಡೆ ಸುತ್ತಾಡಿಸಿ, ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರಕ್ಕೆ ಗುರಿಯಾದ ಯುವತಿ ಮಧ್ಯಪ್ರದೇಶ ಮೂಲದವಳು ಎಂದು ತಿಳಿದುಬಂದಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಅಸ್ವಸ್ಥಗೊಂಡಿದ್ದ ಯುವತಿ, ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಆಕೆಯನ್ನು ಸೇಂಟ್ಸ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ದಿನದಿಂದ ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈಕೆಯನ್ನು ಸೋಮವಾರ ಆಸ್ಪತ್ರೆಯಿಂದ ಹಾಸ್ಟೆಲ್ಗೆ ಮರಳಿದ್ದಾರೆ. ಮೂವರ ಶಂಕಿತರ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಠಾಣಾ ಪೊಲೀಸರು ತನಿಖೆ ಚುರುಕು ಗೊಳಿಸಿದ್ದು, ಮಂಗಳವಾರ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.…
ಬೆಂಗಳೂರು: ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನು ನಗರದ ವಿಠಲ್ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಎಂದಿನಂತೆ ಜಿಮ್ ನಿಂದ ಬಂದ ಇವರಿಗೆ ಬಲಭುಜದ ಬಳಿ ನೋವು ಕಾಣಿಸಿಕೊಂಡಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇವರ ಕುಟಂಬ ಮೂಲಗಳು ತಿಳಿಸಿವೆ. ಶಿವಣ್ಣ ಅವರು ಆರೋಗ್ಯವಾಗಿದ್ದು, ಯಾರೂ ಆತಂಕಪಡಬೇಕಾದ ಅವಶ್ಯಕತೆಯಿಲ್ಲ ಎಂದು ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಹಿಂದೂ ಸಮಾಜ ಬಾಂಧವರ ಆಧುನಿಕ ಶೈಲಿಯ ಬದುಕು, ಸುಖಮಯ ಜೀವನದ ಕನಸು, ಸಮಾಜದ ಕೆಲವೊಂದು ಕಟ್ಟುಪಾಡುಗಳಿಂದಾಗಿ ಈ ದೇಶದಲ್ಲಿ ಹಿಂದೂ ಬಲ ಕುಸಿಯುತ್ತಿದ್ದು ಅಂಕಿಅಂಶಗಳು ತಿಳಿಸುವಂತೆ ಬಹುಸಂಖ್ಯಾತ ಹಿಂದೂ ಸಮಾಜ 2061ರ ಹೊತ್ತಿಗೆ ಅಲ್ಪಸಂಖ್ಯಾತ ಸಮಾಜವಾಗುವ ಆತಂಕವಿದೆ. ಆ ದಿಸೆಯಲ್ಲಿ ಸಮಾಜ ಬಾಂಧವರು ಎಚ್ಚೆತ್ತುಕೊಳ್ಳಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಅವರು ಸಾಮರಸ್ಯ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ತೊಕ್ಕೊಟ್ಟು ಅಂಬಿಕಾರೋಡಿನ ಗಟ್ಟಿ ಸಮಾಜಭವನದಲ್ಲಿ ಭಾನುವಾರ ನಡೆದ ಸದ್ಭಾವನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಕೆಲವು ಸಮುದಾಯದ ಜನರು ತಮ್ಮ ಮಕ್ಕಳನ್ನು ಕೆಲವು ಕಟ್ಟುಪಾಡುಗಳ ಮಧ್ಯೆಯೂ ಹೇಗಾದರೂ ಸಾಕುತ್ತಾರೆ. ಅವರು ಹೇಗಾದರೂ ಬದುಕುತ್ತಾರೆ. ಅಂತಹ ಸಮಾಜದ ಮಹಿಳೆಯರಿಗೆ ಇರುವ ಸ್ಥೈರ್ಯ ಹಿಂದು ಸಮಾಜದ ಮಹಿಳೆಯರಿಗೆ ಏಕಿಲ್ಲ ಎಂಬುದನ್ನು ಯೋಚಿಸಬೇಕಿದೆ ಎಂದರು. ಕರ್ನಾಟಕ ಸಾಮರಸ್ಯ ವೇದಿಕೆ ಸಂಯೋಜಕ ವಾದಿರಾಜ್ ಅವರು 2011ರ ಜನಗಣತಿ, ಏರುಪೇರು ಚಿತ್ರಣ, ಪರಿಣಾಮ ಕುರಿತು ವಿವರಿಸಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ದಕ್ಷಿಣ ಭಾರತದ ಜನ ಸ್ವಾಭಿಮಾನದಿಂದ ಬದುಕಲು ನಾರಾಯಣ ಗುರುಗಳ ಆದರ್ಶಗಳಿಂದ ಸಾಧ್ಯವಾಗಿದೆ ಎಂದು ಮಂಗಳೂರು ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಅಭಿಪ್ರಾಯಪಟ್ಟರು. ತೊಕ್ಕೊಟ್ಟಿನ ಸುವರ್ಣ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆ ಕೇಂದ್ರ ಸಮಿತಿ ತೊಕ್ಕೊಟ್ಟು , ಉಳ್ಳಾಲ ಇದರ ವತಿಯಿಂದ ಗುರುಸ್ಮರಣೆ – ಬ್ರಹ್ಮಶ್ರೀ ಚೈತನ್ಯ ಸಭೆಯಲ್ಲಿ ಗುರು ಸಂದೇಶ ನೀಡಿದರು. ಗುರುಗಳು ಬಿತ್ತಿರುವ ಚಿಂತನೆಗಳು, ಶಕ್ತಿಗಳ ಸೂಕ್ಷ್ಮವಾಗಿ ಅವಲೋಕನ ಮಾಡಬೇಕಿದೆ. ಅವರ ಆದರ್ಶಗಳು ದಕ್ಷಿಣದ ಜನರಿಗೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿದೆಯಾದರೂ ಎಲ್ಲರೂ ಅದನ್ನು ಒಪ್ಪುತ್ತಿಲ್ಲ. ಬಸವಣ್ಣ, ಗೌತಮ ಬುದ್ಧ, ಅಂಬೇಡ್ಕರ್, ಮಹಾತ್ಮ ಗಾಂಧಿ ಇಂತಹ ಮಹಾತ್ಮರಿಗೆ ಸಿಕ್ಕ ಪ್ರಚಾರ ಶೋಷಣೆಗೊಳಗಾದ ಸಮಾಜದ ಪರ ನಿಂತ ಗುರುಗಳಿಗೆ ಸಿಗದೇ ಇರುವುದು ಖೇದಕರ. ಮುಂದಿನ ದಿನಗಳಲ್ಲಾದರೂ ಅವರ ಚಿಂತನೆಗಳು ಪಠ್ಯಪುಸ್ತಕಗಳಲ್ಲಿ ಅಳವಡಿಕೆಯಾಗಲು ಎಲ್ಲರೂ ಎದ್ದುನಿಲ್ಲಬೇಕಾಗಿದೆ. ಸಾಂಪ್ರಾದಾಯಿಕ ಶಿಕ್ಷಣದ ಜತೆಗೆ ವೃತ್ತಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಂಬಿಕಾರೋಡ್: ನೇತ್ರಾವತಿ ನದಿ ತಿರುವು ವಿರೋಧಿಸಿ ಸಮಾನ ಮನಸ್ಕರ ಚಿಂತನ-ಮಂತನ ಸಭೆ ಅ.8 ರ ಸಂಜೆ 4.00ಗಂಟೆಗೆ ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ. ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರದಲ್ಲಿ ಗುತ್ತಿಗೆದಾರರು, ಜನಪ್ರತಿನಿಧಿಗಳಿಗೆ , ಅಧಿಕಾರಿಗಳಿಗೆ ಕೋಟ್ಯಂತರ ರೂ ಲಂಚದ ರೂಪದಲ್ಲಿ ಹೋಗಿರುವ ಸಂಶಯವಿದೆ. 5 ವರ್ಷದ ವಾರಾಹಿ ಯೋಜನೆಗೆ 35 ವರ್ಷ ತೆಗೆದುಕೊಂಡು 50 ಕೋಟಿಯ ಯೋಜನೆಗೆ 500 ಕೋಟಿ ಖರ್ಚು ಮಾಡಿದಂತೆ ಇನ್ನೂ ನೆನೆಗುದಿಗೆ ಬಿದ್ದಿರುವ ಕಳಸ-ಬಂಡೂರಿ ಯೋಜನೆಯಂತೆ ಇದು ಕುಡ ದುಡ್ಡು ಹೊಡೆಯುವ ಯೋಜನೆ. ಮುಂದಿನ ಜನಾಂಗಕ್ಕಾಗಿ ಸಮೃದ್ಧ ಕರಾವಳಿ ಮೀನುಗಾರಿಕೆ, ಕೃಷಿ ಉಳಿವಿಗಾಗಿ ಧಾರ್ಮಿಕ ಕ್ಷೇತ್ರದಲ್ಲಿನ ಪವಿತ್ರ ನೀರು ಬತ್ತಿ ಹೋಗದಂತೆ ನೋಡಿಕೊಳ್ಳಲು ಜನರನ್ನು ತೋಳಿನಲ್ಲಿ ರಕ್ಷಣೆ ಮಾಡುತ್ತಿರುವ ಪಶ್ಚಿಮ ಘಟ್ಟದ ರಕ್ಷಣೆಗಾಗಿ ಹೋರಾಟ ನಡೆಸುವ ತೀರ್ಮಾನ ಕೈಗೊಂಡು ಸಭೆಯನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಶಿಕ್ಷಣ ವ್ಯವಸ್ಥೆಯಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಕ್ರಿಯಾಶೀಲ ಅನುಭವೀ ಮಾರ್ಗದರ್ಶಕರ ಸಮ್ಮುಖದಲ್ಲಿ ನಡೆಯುವ ಸಮಾವೇಶಗಳು ಸಂಶೋಧಕರಿಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸುತ್ತಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಹೇಳಿದರು. ಅವರು ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಶನಿವಾರ ನಿಟ್ಟೆ ವಿಶ್ವವಿದ್ಯಾನಿಲಯ ಮತ್ತು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ಜರಗಿದ ಕ್ಷೇಮ ಸ್ಟೆಮ್ಕಾನ್-2015 , ಕಾಂಡಕೋಶಗಳ ವಾಸ್ತು ಸ್ಥಿತಿ ಹಾಗೂ ಮೂಳೆಶಾಸ್ತ್ರಕ್ಕೆ ಅನ್ವಯವಾಗುವ ಜೀವಕೋಶ ಆಧಾರಿತ ಚಿಕಿತ್ಸೆಗೆ ಒತ್ತು ಕುರಿತ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗಳು ಕ್ಷೀಣಿಸುತ್ತಿವೆ. ವೈದ್ಯಕೀಯ ಶಿಕ್ಷಣದ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ನಿಟ್ಟೆ ವಿ.ವಿ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದಕ್ಕಾಗಿ ಕ್ರಿಯಾಶೀಲ ಮಾರ್ಗದರ್ಶಕರೂ ಸಂಸ್ಥೆಯಲ್ಲಿ ಲಭ್ಯವಿದ್ದಾರೆ. ಇಂತಹ ಕ್ಷೇತ್ರದಲ್ಲಿನ ವಿಪುಲ ಅವಕಾಶಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ನಿಟ್ಟೆ ವಿ.ವಿ ಉಪಕುಲಪತಿ ಡಾ.ಯಸ್.ರಮಾನಂದ ಶೆಟ್ಟಿ ಮಾತನಾಡಿ ಭಾರತ ಸರಕಾರವು ಕಳೆದ ಹದಿನೈದು ವರುಷಗಳಿಂದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲಬೈಲು: ಬೈಕ್ ಸೀಝ್ ಮಾಡಲು ಬಂದ ಸೀಝರ್ಗಳ ತಂಡ ಮತ್ತು ಬೈಕ್ ಮಾಲೀಕನ ತಂಡಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಶುಕ್ರವಾರ ಸಂಜೆ ತೊಕ್ಕೊಟ್ಟು ಉಳ್ಳಾಲಬೈಲಿನ ಗೇರುಕೃಷಿ ಅಭಿವೃದ್ಧಿ ಕೇಂದ್ರದ ಎದುರಿನಲ್ಲಿ ನಡೆದಿದೆ. ಮಂಗಳೂರಿನಿಂದ ಉಳ್ಳಾಲ ಭಾಗಕ್ಕೆ ಕೆ.ಎ.19.ಇ.ಜೆ .5657 ಎಂಟೈಸರ್ ಬೈಕಿನಲ್ಲಿ ತೆರಳುತ್ತಿದ್ದ ಸವಾರರನ್ನು ಎಕ್ಕೂರು ಮೂಲದ ಫೈನಾನ್ಸ್ ನ ಇಬ್ಬರು ಸೀಝರ್ ಗಳು ಕೆ.ಎ.19.ಇ.ಬಿ 386 ಪಲ್ಸಾರ್ ಬೈಕಿನಲ್ಲಿ ಹಿಂಬಾಲಿಸಿದ್ದರು. ಉಳ್ಳಾಲಬೈಲು ಸಮೀಪ ಪಲ್ಸಾರ್ ಬೈಕಿನಲ್ಲಿದ್ದವರು ಎಂಟೈಸರ್ ಬೈಕಿಗೆ ಅಡ್ಡವಿಟ್ಟು ಫೈನಾನ್ಸಿನ ಕಂತು ಪಾವತಿಸದ ಹಿನ್ನೆಲೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಫೈನಾನ್ಸ್ ಸೀಝರ್ ರಲ್ಲಿ ಓರ್ವ ಬೈಕಿನ ಕೀಯನ್ನು ತೆಗೆದು ಸಮೀಪದಲ್ಲಿದ್ದ ಮನೆಯೊಂದರ ಕಂಪೌಂಡಿನ ಒಳಗೆ ಬಿಸಾಡಿದ್ದರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಹಾಗೂ ಹೊಡೆದಾಟ ನಡೆಯಿತು. ಈ ವೇಳೆ ಎರಡು ಬೈಕುಗಳಲ್ಲಿ ಇದ್ದಂತಹ ಇಬ್ಬರು ತಮ್ಮ ತಂಡಗಳಿಗೆ ವಿಷಯ ತಿಳಿಸಿದ್ದು, ಕೂಡಲೇ ಉಳ್ಳಾಲ ಭಾಗದಿಂದ 10-15 ಮಂದಿಯ ತಂಡ…

