ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಸಹಕಾರಿ ಸಂಘಗಳು ಹೆಚ್ಚಿದಷ್ಟು ವ್ಯಾವಹಾರಿಕ ಕ್ಷೇತ್ರವೂ ಬೆಳವಣಿಗೆ ಸಾಧ್ಯವಾಗುತ್ತದೆ. ಈ ಮೂಲಕ ಜನರ ಬದುಕು ಕೂಡಾ ಉತ್ತಮವಾಗಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಅವರು ಕುಂಪಲ ಅಮೃತನಗರದಲ್ಲಿ ಆರಂಭಗೊಂಡ ಅನುಗ್ರಹ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದರು. ವ್ಯಾವಹಾರಿಕ ಕ್ಷೇತ್ರದಲ್ಲಿ ಪೈಪೋಟಿ ಇದ್ದರೆ ಮಾತ್ರ ಬೆಳೆಯಲು ಸಾಧ್ಯ. ಪೈಪೋಟಿ ಇಲ್ಲದಿದ್ದರೆ ತಾವು ಮಾಡಿದ್ದೇ ಸರಿ ಎಂಬ ಭಾವನೆ ಬರುತ್ತದೆ. ಹಾಗಾಗಿ ಸಾಮಾನ್ಯ ಜನರಿಗೂ ವ್ಯವಹಾರ ಮಾಡಲು ಅವಕಾಶ ಲಭಿಸುವಂತೆ ಮಾಡಿದ ಅನುಗ್ರಹ ಸೊಸೈಟಿ ನಿರ್ಮಾಣ ಕಾರ್ಯ ಶ್ಲಾಘನೀಯವಾಗಿದ್ದು ಭವಿಷ್ಯದಲ್ಲಿ ಎಲ್ಲ ಸೊಸೈಟಿಗಳಿಗೂ ಪೈಪೋಟಿ ನೀಡುವ ಮಟ್ಟಕ್ಕೆ ಕ್ಷಿಪ್ರಗತಿಯಲ್ಲಿ ಬೆಳೆಯಲಿ ಎಂದರು. ನೂತನ ಕಟ್ಟಡ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ದಕ್ಷಿಣ ಜಿಲ್ಲೆ ಸಹಕಾರಿ ಕಾಶಿಯಾಗಿದ್ದು ಜಿಲ್ಲೆಯ ಸಹಕಾರಿ ರಂಗ ಅದ್ಭುತ ಸಾಧನೆ ಮಾಡಿದ್ದು ಶತಮಾನಗಳ ಇತಿಹಾಸವಿದೆ. ಅನುಗ್ರಹ ರಾಜ್ಯದ…
Author: UllalaVani
ಉಳ್ಳಾಲ್ ನ್ಯೂಸ್ ಡೆಸ್ಕ್ ತೊಕ್ಕೊಟ್ಟು: ಬೋಳಾರದ ಎರಡು ರೌಡಿ ಬಣಗಳ ನಡುವಿನ ಮದುವೆ ಮನೆಯಲ್ಲಿ ಭುಗಿಲೆದ್ದ ವೈಷಮ್ಯ ಬೋಳಾರದ ವಿಕ್ರಂ.ಆರ್ ಯಾನೆ ವಿಕ್ಕಿ ಬೋಳಾರ (29) ಎಂಬಾತನ ಕೊಲೆಯಲ್ಲಿ ಪರ್ಯಾವಸನಗೊಂಡಿದೆ. ಎದುರುಬಣದ ರೌಡಿ ಸೈಕೋ ವಿಕ್ಕಿ ತಂಡ ಹತ್ಯೆ ನಡೆಸಿದೆ ಎನ್ನಲಾಗಿದೆ. ಕುಂಪಲ ಮೂರುಕಟ್ಟದಲ್ಲಿ ತಮ್ಮ ಸ್ನೇಹಿತ ರೋಹಿತ್ ಎಂಬಾತನ ಮೆಹಂದಿ ಕಾರ್ಯಕ್ರಮದಲ್ಲಿ ಎರಡು ರೌಡಿಗಳ ತಂಡ ಭಾಗವಹಿಸಿತ್ತು. ಅಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯೊಂದು ನಡೆದಿತ್ತು. ಆ ಬಳಿಕ ಸೈಕೋ ವಿಕ್ಕಿ ಮನೆಯಿಂದ ಹೊರಹೋಗಿದ್ದನು. ಮತ್ತೆ ರಾತ್ರಿ ಸುಮಾರು 2.00 ಗಂಟೆ ವೇಳೆ ಪಾರ್ಟಿ ಮುಗಿಸಿ ಮಂಗಳೂರು ಕಡೆಗೆ ಅಭಿಲಾಷ್ ಶೆಟ್ಟಿ ಎಂಬಾತನ ಜತೆಗೆ ಬೋಳಾರ ವಿಕ್ಕಿ ಎಫ್.ಝೀ ಬೈಕಿನಲ್ಲಿ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಅದಾಗಲೇ ಕುಂಪಲ ಬೈಪಾಸಿನ ಸಮೀಪ ಬಿಳಿ ಸ್ಕಾರ್ಪಿಯೋ ವಾಹನದಲ್ಲಿ ಸೈಕೋ ವಿಕ್ಕಿ, ಗೌರೀಶ್ ಮತ್ತೆ ಇನ್ನೋರ್ವ ಸೇರಿದ ತಂಡ ಸ್ಕಾರ್ಪಿಯೋ ವಾಹನದಲ್ಲಿ ಎದುರು ನಿಂತಿದ್ದರು. ಕೂಡಲೇ ಅಪಾಯವರಿತ ಬೋಳಾರ ವಿಕ್ಕಿ ಬೈಕನ್ನು ವೇಗ ಚಲಾಯಿಸುವಂತೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಚಾಲಕನ ಅತೀ ವೇಗದ ಅಜಾಗರೂಕತೆಯ ಚಾಲನೆಯಿಂದ ಆಟೋರಿಕ್ಷಾ ಪಲ್ಟಿ ಹೊಡೆದು ಒಂದೇ ಕುಟುಂಬದ ಆರು ಮಂದಿ ಆಸ್ಪತ್ರೆಗೆ ಸೇರಿದ ಘಟನೆ ಕುಂಪಲದಲ್ಲಿ ನಡೆದಿದೆ. ಕುಂಪಲದ ಸುರಕ್ಷಾ ನಗರದ ಸಂಭಂಧಿಯ ಮದುವೆ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಬಸ್ಸಿಗಾಗಿ ಕಾಯುತ್ತಿದ್ದ ಆರು ಮಂದಿ ಸಂಭಂಧಿಗಳನ್ನು ರಿಕ್ಷಾ ಚಾಲಕನು ಕುಂಪಲ ಬಾಲಕೃಷ್ಣ ಮಂದಿರದ ಬಳಿ ಹತ್ತಿಸಿಕೊಂಡು ಕುಂಪಲ ಸರಕಾರಿ ಶಾಲೆ ಕಡೆಗೆ ಇಳಿಜಾರು ರಸ್ತೆಯಲ್ಲಿ ಅತೀ ವೇಗದಿಂದ ಚಲಾಯಿಸಿ ಕೊಂಡು ಬಂದು ತಿರುವಿನಲ್ಲಿ ಏಕಾಏಕಿ ತಿರುಗಿಸಿದಾಗ ಆಟೋ ರಿಕ್ಷಾ ಪಲ್ಟಿ ಹೊಡೆದಿದೆ.ಪರಿಣಾಮ ರಿಕ್ಷಾದಲ್ಲಿದ್ದ ಮಾಡೂರು ನಿವಾಸಿಗಳಾದ ನಿಶಿತ್(16)ತಂದೆ ವಿಶ್ವನಾಥ್ (42) ಬಲ್ಲಾಳ್ ಭಾಗ್ ನಿವಾಸಿಗಳಾದ ಭಾಸ್ಕರ್ (45) ಪತ್ನಿ ವನಿತಾ (38) ಮಗಳು ವಿನಿಶಾ (16) ಮತ್ತು ಶಕ್ತಿನಗರದ ಹಿತೇಶ್ (14) ಗಾಯಗೊಂಡು ನರಳಾಡುತ್ತಿದ್ದರೆ,ರಿಕ್ಷಾ ಚಾಲಕ ಪರಾರಿಯಾಗಿದ್ದು ,ಸ್ಥಳೀಯರು ರಿಕ್ಷಾವನ್ನು ಮೇಲಕ್ಕೆತ್ತಿ ಗಾಯಾಲುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಗಾಯಗೊಂಡವರಲ್ಲಿ ನಿಶಿತ್ (16)ನ ಎಡಗಾಲು ಮುರಿತಕ್ಕೊಳಗಾಗಿ ಶಸ್ತ್ರಕ್ರಿಯೆ ನಡೆಸಲಾಗಿದೆ.ನಿಶಿತ್ ಮಂಗಳೂರಿನ…
ಉಳ್ಳಾಲ್ ನ್ಯೂಸ್ ಡೆಸ್ಕ್ ನಾಟೆಕಲ್ : ತಾಯಿ ಹಾಗೂ ಅಜ್ಜಿಯೊಂದಿಗೆ ಕಾಸರಗೋಡಿನ ತಳಂಗರೆ ಮಾಲಿಕ್ ದೀನಾರ್ ದರ್ಗಾಕ್ಕೆ ಝಿಯಾರತ್ಗೆ ತೆರಳಿದ್ದ ನಾಟೆಕಲ್ ಸಮೀಪದ ನಿವಾಸಿ ಸಹೋದರ ಬಾಲಕರಿಬ್ಬರು ಕೊಳವೆಯಲ್ಲಿ ಮುಳುಗಿ ದಾರುಣ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ. ನಾಟೆಕಲ್ ಸಮೀಪದ ಅನ್ವರ್ ಮತ್ತು ರೇಷ್ಮಾ ದಂಪತಿ ಮಕ್ಕಳಾದ ಅಲ್ತಾಫ್ (8), ಆತಿಫ್ (7) ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರು. ಗುರುವಾರ ಬೆಳಿಗ್ಗೆ ಕಾಸರಗೋಡಿಗೆ ತೆರಳಿದ್ದ ಕುಟುಂಬ, ತಳಂಗೆರೆ ಮಾಲಿಕ್ ದೀನಾರ್ ದರ್ಗಾದಲ್ಲಿ ಝಿಯಾರತ್ ಮುಗಿಸಿದ್ದರು. ತಾಯಿ ಮತ್ತು ಅಜ್ಜಿ ಇಬ್ಬರೂ ದರ್ಗಾದಲ್ಲಿದ್ದ ಸಂದರ್ಭ, ಇಬ್ಬರು ಬಾಲಕರು ಸಮೀಪದಲ್ಲಿದ್ದ ಕೊಳವೆಯ ನೀರಿಗೆ ಇಳಿದು ಈಜಲು ಆರಂಭಿಸಿದ್ದರು. ಆದರೆ ಕೊಳದಲ್ಲಿ ನೀರು ಆಳವಾಗಿದ್ದರಿಂದಾಗಿ ಈಜು ಗೊತ್ತಿಲ್ಲದ ಮಕ್ಕಳು ಮುಳುಗಲು ಆರಂಭವಾಗುತ್ತಿದ್ದಂತೆ ಕೂಗಾಡಲು ಆರಂಭಿಸಿದ್ದರು. ಸದ್ದು ಕೇಳಿ ಸ್ಥಳೀಯರು ಕೊಳವೆ ಸಮೀಪ ಧಾವಿಸಿ ಮಕ್ಕಳನ್ನು ನೀರಿನಿಂದ ಮೇಲಕ್ಕೆತ್ತಿದರೂ, ಅಷ್ಟರಲ್ಲಿ ಇಬ್ಬರ ಪ್ರಾಣಪಕ್ಷಿಯೂ ಹಾರಿಹೋಗಿತ್ತು. ಕಾಸರಗೋಡು ಚೌಕಿಯ ಅಜ್ಜಿ ಮನೆಗೆ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಬಾಲಕರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಗ್ರಾಮೀಣ ಪ್ರದೇಶಕ್ಕೆ ಕೇಂದ್ರ, ರಾಜ್ಯ ಸರಕಾರದ ಆರ್ಥಿಕ ಸೌಲಭ್ಯಗಳನ್ನು ಸೊಸೈಟಿ ಮುಖೇನ ನೀಡುವ ಉದ್ದೇಶದಿಂದ ಕುಂಪಲದ ಅಮೃತನಗರದ ನಿಸರ್ಗ ಪರಿಸರದಲ್ಲಿ ಅನುಗ್ರಹ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ಅ.25 ರಂದು ಬೆಳಿಗ್ಗೆ 10.00ಕ್ಕೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಅವರು ಕುಂಪಲದ ಅನುಗ್ರಹ ಕಾ-ಆಪರೇಟಿವ್ ಸೊಸೈಟಿಯಲ್ಲಿ ಬುಧವಾರ ಹಮ್ಮಿಕೊಂಡ ಸುದ್ಧಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸೊಸೈಟಿಯನ್ನು ಉದ್ಘಾಟಿಸಲಿದ್ದು, ಹೊಸ ಕಟ್ಟಡವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ವಹಿಸಲಿದ್ದಾರೆ. ಸೋಮೇಶ್ವರ ಗ್ರಾಮದಲ್ಲಿ ಕುಂಪಲ ದೊಡ್ಡ ಜನಸಂಖ್ಯೆಯುಳ್ಳ ಪ್ರದೇಶವಾಗಿದೆ. ಕಳೆದ 15 ವರ್ಷಗಳ ಹಿಂದೆ ಪ್ರದೇಶ ತೀರಾ ಹಿಂದುಳಿದಿತ್ತು. ಇದೀಗ ಪ್ರದೇಶ ಸಾಮಾಜಿಕ , ಧಾರ್ಮಿಕ ಇನ್ನಿತರ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಈ ಭಾಗಕ್ಕೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ : ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನಲ್ಲಿ ಸಿಂಗಾಪುರ ಮೂಲದ ಕೆಇಎಫ್ ಹೋಲ್ಡಿಂಗ್ಸ್ ನ ಅಂಗ ಸಂಸ್ಥೆಯ ಕೆಇಎಫ್ ಇನ್ಫ್ರಾ ಸಂಸ್ಥೆ ಭಾರತದಲ್ಲಿ ಪ್ರಥಮವಾಗಿ ಫ್ಯಾಕ್ಟರಿಯಲ್ಲಿ ತಯಾರಿಸಿದ ಮೆರಿಡಿಯನ್ ವಸತಿ ಸಮುಚ್ಛಯವನ್ನು ರಾಜ್ಯ ಅರಣ್ಯ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಬುಧವಾರ ಉದ್ಘಾಟಿಸಿದರು. ಕೆಇಎಫ್ ಕ್ರೋನಿಕಲ್ಸ್ ವಿಶೇಷ ಸುದ್ಧಿ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ ಕಡಿಮೆ ಅವಧಿ ಹಾಗೂ ಖರ್ಚಿನಲ್ಲಿ ನೂತನ ತಂತ್ರಜ್ಞಾನಗಳೊಂದಿಗೆ ನಿರ್ಮಾಣವಾಗುವ ಕಟ್ಟಡಗಳ ಬಗ್ಗೆ ಸರಕಾರ ಹೆಚ್ಚಿನ ಚಿಂತನೆ ನಡೆಸಲಿದೆ. ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸರಕಾರಿ ಸಂಬಂಧಿ ಕಟ್ಟಡಗಳನ್ನು ಇದೇ ತಂತ್ರಜ್ಞಾನದೊಂದಿಗೆ ನಿರ್ಮಿಸುವುದರ ಮೂಲಕ ಕಡಿಮೆ ಅನುದಾನಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಮಾಡಲು ಸಾಧ್ಯ ಎಂದರು. ಭಾರತದಲ್ಲಿ ಪ್ರತಿಯೊಬ್ಬರಿಗೂ ಸ್ವಂತದ್ದಾದ ಮನೆ ಹೊಂದುವ ಕನಸಿದ್ದು ಅದು ಈಡೇರುವಲ್ಲಿ ಕೆಇಎಫ್ ಇನ್ಫ್ರಾ ತಂತ್ರe್ಞÁನದಲ್ಲಿ ನಿರ್ಮಿಸಲಾಗುವ ಮನೆ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲ ಮಸೀದಿಗೆ ದುಷ್ಕರ್ಮಿಗಳ ತಂಡವೊಂದು ಕಲ್ಲೆಸೆದು ಹಾನಿಗೊಳಿಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಿದ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ವಿವರ: ಕುಂಪಲ ಮಸೀದಿಯ ರಾತ್ರಿಯ ನಮಾಜು ಮುಗಿಸಿ ಹೋದ ಬಳಿಕ ತಡರಾತ್ರಿ ಕಿಟಕಿಯ ಬಾಗಿಲಿಗೆ ಕಲ್ಲು ಬಿದ್ದ ಶಬ್ಧ ಸಮೀಪದವರಿಗೆ ಕೇಳಿಸಿತ್ತು. ತಕ್ಷಣ ಮಸೀದಿಯ ಗುರು ಲೈಟ್ ಹಾಕಿದರು ಎನ್ನಲಾಗಿದೆ. ಈ ವೇಳೆ ಕಲ್ಲೆಸೆದ ದುಷ್ಕರ್ಮಿಗಳು ಮಸೀದಿಯ ಕಡೆ ಇರಲಿಲ್ಲ. ಆದರೆ ಮಸೀದಿಯ ಕಿಟಕಿ ಗಾಜು ಹಾನಿಯಾಗಿತ್ತು. ರಸ್ತೆಯಲ್ಲಿ ಹೋಗುತ್ತಿದ್ದ ದುಷ್ಕರ್ಮಿಗಳು ಕಲ್ಲೆಸೆದಿರಬೇಕೆಂದು ಶಂಕಿಸಿದ ಈ ಜಮಾಅತ್ನ ಸದಸ್ಯರು ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸುರ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಚ್ಚಿಲ: ಬೈಕ್ ಹಾಗೂ ಇನ್ನೋವಾ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಚ್ಚಿಲ ಸಂಕೊಳಿಗೆ ಎಂಬಲ್ಲಿ ಬುಧವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಮೃತರನ್ನು ಉಚ್ಚಿಲ ಗುಡ್ಡೆ ನಿವಾಸಿ ಎಂ.ಇಬ್ರಾಹಿಂ (60) ಮತ್ತು ಉಚ್ಚಿಲ ನ್ಯಾಯಪಟ್ನ ನಿವಾಸಿ ಮಹಮ್ಮದ್ ಆಲಿ(40) ಮೃತಪಟ್ಟವರು. ಘಟನೆ ವಿವರ: ಇಬ್ರಾಹಿಂ ಅವರ ಮೂರನೇ ಮಗಳ ಮದುವೆ ನ.1 ರಂದು ನಿಗದಿಯಾಗಿತ್ತು. ಅದರ ಆಮಂತ್ರಣ ಪತ್ರಿಕೆಯನ್ನು ಹಂಚಲೆಂದು ತಲಪಾಡಿ ಕಡೆಗೆ ದೂರದ ಸಂಬಂಧಿ ಹಾಗೂ ಆಪ್ತ ಸ್ನೇಹಿತ ಮಹಮ್ಮದ್ ಆಲಿ ಅವರ ಜತೆಗೆ ಬೈಕಿನಲ್ಲಿ ತೆರಳುವಾಗ ಘಟನೆ ಸಂಭವಿಸಿದೆ. ಉಚ್ಚಿಲ ಬೋವಿ ಶಾಲೆ ಯ ಒಳರಸ್ತೆಯಿಂದ ರಾ.ಹೆ.66ರನ್ನು ಪ್ರವೇಶಿಸಲು ರಸ್ತೆಬದಿಯಲ್ಲಿ ಬೈಕನ್ನು ನಿಲ್ಲಿಸಿದ್ದ ಸಂದರ್ಭ ಕಾಸರಗೋಡು ಕಡೆಯಿಂದ ಮಂಗಳೂರಿಗೆ ಅತಿವೇಗವಾಗಿ ಬರುತ್ತಿದ್ದ ದೆಹಲಿ ನೋಂದಾಯಿತ ಇನೋವಾ ವಾಹನ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಬೈಕನ್ನು 20 ಮೀ.ವರೆಗೆ ಎಳೆದೊಯ್ದಿತ್ತು. ಗಂಭೀರ ಗಾಯಗೊಂಡ ಈರ್ವರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ದೆಹಲಿ ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕಿ ಪ್ರೊ.ಉಪಿಂದರ್ ಸಿಂಗ್ ಅವರು ಸೋಮವಾರ ಭೇಟಿ ನೀಡಿ ಮೆಚ್ಚುಗೆ ನೀಡಿದರು. ಈ ಸಂದರ್ಭದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ.ಚಿನ್ನಪ್ಪ ಗೌಡ, ಪ್ರೊ.ಬಿ. ಸುರೇಂದ್ರರಾವ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದ ದಕ್ಷಿಣವಲಯ ಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಂಗಳೂರು ವಿವಿ ತಂಡವು ಅಣ್ಣಾಮಲೈ ವಿಶ್ವವಿದ್ಯಾನಿಲಯವನ್ನು 22-18, ಭಾರತಿದಾಸನ್ ವಿಶ್ವವಿದ್ಯಾನಿಲಯವನ್ನು 28-14 ಹಾಗೂ ಮದ್ರಾಸ್ ವಿಶ್ವವಿದ್ಯಾನಿಲಯದೊಂದಿಗೆ ನಡೆದ ಪಂದ್ಯಾಟದಲ್ಲಿ ಸಮಬಲವನ್ನು ಸಾಧಿಸಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ದಕ್ಷಿಣ ವಲಯ ಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ತಂಡದಲ್ಲಿ ದಿವಾಕರ್(ಕಪ್ತಾನ), ನಾಗರಾಜ್ ನಾಯ್ಕ್(ಉಪನಾಯಕ) ಧನರಾಜ್, ಪ್ರವೀಣ್ ಕುಮಾರ್, ಜಸ್ವಂತ್, ಹರ್ಷಿತ್, ಸಂತೋಷ್, ಮೂರ್ತಿ, ಜಾಯ್ಸನ್, ಮಲ್ಲಿಕಾರ್ಜುನ್, ವಿಕ್ರಾಂತ್, ವಿಜಯ್ ಸಚಿನ್ ಭಾಗವಹಿಸಿದ್ದರು. ತರಬೇತುದಾರರಾಗಿ ಸತೀಶ್ ನಾಯ್ಕ್ ಮತ್ತು ಕಿರಣ್ ಕುಮಾರ್, ವ್ಯವಸ್ಥಾಪಕರಾಗಿ ಎಲಿಯಾಸ್ ಪಿಂಟೋ ಭಾಗವಹಿಸಿದ್ದರು. ದಕ್ಷಿಣವಲಯ ಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು 25 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ಮಂಗಳೂರು ವಿವಿ ದೈಹಿಕ ಶಿಕ್ಷಣ…

