Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ 2015 ನೇ ಸಾಲಿನ ಪ್ರತಿಭೋತ್ಸವದ ತೊಕ್ಕೊಟ್ಟು ಸೆಕ್ಟರ್ ಮಟ್ಟದ ಸ್ಪರ್ಧೆಗಳಲ್ಲಿ ಎಸ್ಸೆಸ್ಸೆಫ್ ಅಳೇಕಲ ಶಾಖೆಯು ಚಾಂಪಿಯನ್ ಆಗಿ ಹೊರಹೊಮ್ಮಿತು. ಸಬ್ ಜೂನಿಯರ್ ವಿಭಾಗದಲ್ಲಿ ರಿನಾಝ್ ತಂಙಳ್ ಹಾಗೂ ಜನರಲ್ ವಿಭಾಗದಲ್ಲಿ ಜಂಶೀರ್ ಅಳೇಕಲ ವ್ಯಯಕ್ತಿಕ ಚಾಂಪಿಯನ್ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡರು. ಜವಾಹಿರ್ ತಂಙಳ್, ಹಾಫಿûಳ್ ಮುಹಮ್ಮದ್ ಇರ್ಷಾದ್, ಮುಹಮ್ಮದ್ ಆಶಿಕ್, ಮುಹಮ್ಮದ್ ಕೈಸ್, ರಹ್ಮತ್ ತಾಝಿಲ್, ಅಬೂಬಕ್ಕರ್ ನಾಝಿಮ್, ಮುಹಮ್ಮದ್ ಸುಫೈದ್, ಮುಹಮ್ಮದ್ ನೌಫನ್, ಮುಹಮ್ಮದ್ ಇಸ್ತಿಹಾಕ್, ಮುಹಮ್ಮದ್ ಹಫೀಪ್, ಅನ್ನಜಾತ್ ದಪ್ ತಂಡ, ಲದಲ್ ಹಬೀಬ್ ಬುರ್ದಾ ತಂಡ ಪ್ರಥಮ ಸ್ಥಾನ ಪಡೆದಿದೆ ಎಂದು ಎಸ್ಸೆಸ್ಸೆಫ್ ಅಳೇಕಲ ಶಾಖೆಯ ಪ್ರತಿಭೋತ್ಸವ ಕನ್‍ವೀನರ್ ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಪ್ಪಿನಂಗಡಿ: ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಈ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಉಚಿತ ಕೃತಕ ಕಾಲುಜೋಡಣೆ, ಉಚಿತ ಕೃತಕ ದಂತಪಂಕ್ತಿ ಜೋಡಣಾ , ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರವು ಅ.19ರಿಂದ ಅ.25ರ ವರೆಗೆ ಹಾಗೂ ಅ.28ರಿಂದ ಅ.30ರವರೆಗೆ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿಯ ಶಾಲಾ ವಠಾರದಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿ ಜೈಪುರ್ ಇವರ ಸಹಕಾರದೊಂದಿಗೆ ಉಚಿತ ಕೃತಕ ಕಾಲುಜೋಡಣೆ ಅ.28ರಿಂದ ಅ.30ರವರೆಗೆ ನಡೆಯಲಿದೆ. ಹಾಗೂ ಪ್ರಾಸ್ಧೊಡೋಂಟಿಕ್ಸ್ ವಿಭಾಗ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ನಿಟ್ಟೆ ಮಂಗಳೂರು ಇಲ್ಲಿನ ದಂತ ವೈದ್ಯರಿಂದ ಉಚಿತ ದಂತಪಂಕ್ತಿ ಜೋಡಣಾ ಶಿಬಿರ ಅ.19ರಂದು ನಡೆಯಲಿದ್ದು. ಮೊದಲ ಹಂತದ ಬಾಯಿ ತಪಾಸಣೆ ಹಾಗೂ ಆಳತೆಯನ್ನು ಮಾಡಲಾಗುವುದು. ಈ ದಿನ ಆಯ್ದ ಫಲಾನುಭವಿಗಳಿಗೆ ಅ.25ರಂದು ಕೃತಕ ದಂತಪಂಕ್ತಿಯನ್ನು ಜೋಡಿಸಲಾಗುವುದು. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆಯುವಂತೆ ಪ್ರಕಟನೆ ತಿಳಿಸಿದೆ. ಉಚಿತ ಕೃತಕ ಕಾಲುಜೋಡಣೆಗೆ ಸಾರ್ವಜನಿಕರು ಸಂಪರ್ಕಿಸಬೇಕಾದ ದೂರವಾಣಿ…

Read More

ನವದೆಹಲಿ: ಉತ್ತರ ಪ್ರದೇಶದ ದಾದಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ ಸುಮ್ಮನಿದ್ದು ಪ್ರತಿ ಪಕ್ಷಗಳಿಂದ ತೀವ್ರ ಟೀಕೆಗೊಳಗಾಗಿದ್ದ ಪ್ರಧಾನಮಂತ್ರಿ ಮೋದಿ ಕೊನೆಗೂ ಮೌನವನ್ನು ಮುರಿದು, ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಸಂಗ್ರಹಿಸಿಟ್ಟಿದ್ದ ಸುಳ್ಳು ವದಂತಿಯಿಂದ ಮುಸ್ಲಿಂ ವ್ಯಕ್ತಿಯ ಹತ್ಯೆ ಪ್ರಕರಣ ಹಾಗೂ ಪಾಕ್ ಗಾಯಕ ಗುಲಾಂ ಆಲಿ ಕಾರ್ಯಕ್ರಮ ರದ್ದಾಗಿರುವುದು ದುರದೃಷ್ಟಕರ. ಇಂತಹ ಕೃತ್ಯಗಳಿಗೆ ಬಿಜೆಪಿ ಎಂದಿಗೂ ಬೆಂಬಲ ನೀಡುವುದಿಲ್ಲ ಎಂದು ಆಂಗ್ಲಪತ್ರಿಕೆಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಂತಹ ಘಟನೆಗಳು ಹಿಂದೆಯೂ ನಡೆದಿದ್ದವು, ಬಿಜೆಪಿ ಸುಳ್ಳು ಜಾತ್ಯಾತೀತವಾದವನ್ನು ವಿರೋಧಿಸುತ್ತದೆ. ವಿರೋಧ ಪಕ್ಷಗಳು ಇಂತಹ ಘಟನೆಗಳನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿವೆ, ಮಾತುಕತೆಯಿಂದ ಇಂತಹ ಘಟನೆಗಳಿಗೆ ಅಂತ್ಯ ಹಾಡಬಹುದು ಎಂದು ಮೋದಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಪಶ್ಚಿಮ ಘಟ್ಟ ಮತ್ತು ನೇತ್ರಾವತಿ ನದಿ ಮೂಲಕ್ಕೆ ತೀರಾ ಹಾನಿಯಾಗಲಿರುವ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಬದುಕಿಗೆ ಭವಿಷ್ಯದಲ್ಲಿ ಕುಡಿಯುವ ನೀರಿಗೆ ಗಂಭೀರ ಸಮಸ್ಯೆಯಾಗಲಿರುವ, ಮೀನುಗಾರರಿಗೆ ತೊಂದರೆಯಾಗಲಿರುವ ಎತ್ತಿನಹೊಳೆ ಯೋಜನೆಯನ್ನು ಜಿಲ್ಲೆಯ ಜನರು ವಿರೋಧಿಸಿ, ಪ್ರತಿಭಟಿಸುತ್ತಿದ್ದರೂ ಸರಕಾರವು ಈ ಯೋಜನೆಯನ್ನು ಮಾಡಿಯೇ ತೀರುವುದೆಂಬ ಹಠಕ್ಕೆ ಬಿದ್ದಿರುವುದು ಖಂಡನೀಯ. ಜಿಲ್ಲೆಯ ಜೀವನಾಡಿಯಾಗಿರುವ ತಾಯಿ ನೇತ್ರಾವತಿಯನ್ನು ಉಳಿಸುವುದು ಎಲ್ಲರ ಪ್ರಾಮಾಣಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಅ. 15ರಂದು ನಡೆಯುವ ರಸ್ತೆ ತಡೆ ಚಳುವಳಿಗೆ ಉಳ್ಳಾಲ ನೇತ್ರಾವತಿ ನದಿ ತಿರುವು ಸಮಿತಿ, ತೊಕ್ಕೊಟ್ಟು ಶ್ರೀ ವಿದ್ಯಾಗಣಪತಿ ರಾಮ ಸೇವಾ ಸಮಿತಿ ಹೋರಾಟವನ್ನು ಬೆಂಬಲಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಅ. 13 ಮಂಗಳವಾರದಿಂದ, 21ರ ಬುಧವಾರದರ ವರೆಗೆ ನವರಾತ್ರಿ ಉತ್ಸವ ಹಾಗೂ ಅ. 27ರಂದು ಮಂಗಳವಾರ ತುಲಾಪತ್ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Read More

ಉಳ್ಳಾಲ್ ನ್ಯೂಸ್ ನೆಟ್  ವರ್ಕ್ ಉಳ್ಳಾಲ: ಕಾಲು ಮುರಿತಕ್ಕೊಳಗಾಗಿ ಅ.8 ರಂದು ಆಸ್ಪತ್ರೆಗೆ ದಾಖಲಾಗಿದ್ದ ವಿವಾಹಿತರೊಬ್ಬರು ಸೋಮವಾರ ನಸುಕಿನ ಜಾವ ಮೃತಪಟ್ಟಿದ್ದು, ಮೃತರ ಸಂಬಂಧಿ ಹಾಗೂ ಸ್ನೇಹಿತರು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಸೋಮವಾರ ನಡೆದಿದೆ. ಘಟನೆ ಕುರಿತ ಪ್ರಕರಣ ಉಳ್ಳಾಲ ಠಾಣೆಯಲ್ಲಿ ದಾಖಲಾಗಿದೆ. ಕೈರಂಗಳ ಗ್ರಾಮದ ಮೋಂಟುಗೋಳಿ ನಿವಾಸಿ ಖಾಸಗಿ ಬಸ್ಸು ನಿರ್ವಾಹಕ ವಿಜಯ್(36) ಮೃತರು. ಅ.8 ರಂದು ಅದೇ ಆಸ್ಪತ್ರೆಯಲ್ಲಿ ದಾಖಲಾಗಿರುವ ತನ್ನ 3ರ ಹರೆಯದ ಮಗುವನ್ನು ನೋಡಿ ವಾಪಸ್ಸಾಗುವ ಸಂದರ್ಭ ಆಸ್ಪತ್ರೆಯ ಬೇಸ್‍ಮೆಂಟಿನಲ್ಲಿ ಜಾರಿಬಿದ್ದಿದ್ದರು. ರಾತ್ರಿ ಪೂರ್ತಿ ಪ್ರe್ಞÁಹೀನರಾಗಿ ಅಲ್ಲೇ ಉಳಿದ ಅವರು ಮರುದಿನ ಬೆಳಗ್ಗೆ ಅದೇ ಆಸ್ಪತ್ರೆಗೆ ದಾಖಲಾಗಿದ್ದರು. ಬಲಕಾಲು ಮುರಿತಕ್ಕೊಳಗಾದ ವಿಜಯ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಆದರೆ ವೈದ್ಯರು ನಿರ್ಲಕ್ಷ್ಯ ವಹಿಸಿ ಶಸ್ತ್ರಚಿಕಿತ್ಸೆ ನಡೆಸದೇ ಇದ್ದ ಪರಿಣಾಮ ವಿಜಯ್ ಮೃತಪಟ್ಟಿದ್ದಾರೆಂದು ಸಂಬಂಧಿಕರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ. ಇದೇ ವಿಚಾರದಲ್ಲಿ ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಾಗ ಸ್ಥಳಕ್ಕಾಗಮಿಸಿದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಮಿನಿಸ್ಕ್ರಿವ್ಸ್ ಫಾರ್ ಆರ್ಥಡಾಂಟಿಕ್ಸ್ ಎಂಬ ವಿಷಯದ ಕುರಿತ ನಿರಂತರ ಕಲಿಕಾ ಕಾರ್ಯಗಾರ ದೇರಳಕಟ್ಟೆಯ ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ವಿಂಶತಿ ಭವನದಲ್ಲಿ ನಡೆಯಿತು. ನವದೆಹಲಿಯ ಏಮ್ಸ್ ಆಸ್ಪತ್ರೆಯ ದಂತ ಸಂಶೋಧನಾ ಮತ್ತು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರೊ.ಖರ್ಬಾಂದ ಕಾರ್ಯಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆಧುನಿಕ ತಂತ್ರಜ್ಞಾನದಲ್ಲಿ ವೈದ್ಯರು ನಿಸ್ಸೀಮರಾಗಬೇಕಿದ್ದು, ಈ ಮೂಲಕ ರೋಗಿಗಳಿಗೆ ಚಿಕಿತ್ಸೆಗಳು ಪರಿಣಾಮಕಾರಿಯಾಗುವುದು ಎಂದರು. ಈ ಸಂದರ್ಭ ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಸ್ಥಾಪಕ ಡೀನ್ ಪ್ರೊ.ಡಾ.ಯನ್ ಶ್ರೀಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದಂತ ಮಹಾವಿದ್ಯಾಲಯದ ಡೀನ್ ಡಾ.ಯು.ಎಸ್.ಕೃಷ್ಣ ನಾಯಕ್ ನಿಟ್ಟೆ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕಲಿಕಾ ವಿಭಾಗದ ನಿರ್ದೇಶಕ ಡಾ.ರಾಜೇಂದ್ರ ಪ್ರಸಾದ್ , ದಂತ ಮಹಾವಿದ್ಯಾಲಯದ ಉಪಪ್ರಾಂಶುಪಾಲೆ ಡಾ.ಎನ್.ಮಿತ್ರಾ ಹೆಗ್ಡೆ ಹಾಗೂ ಎ.ಬಿ ಶೆಟ್ಟಿ ಆರ್ಥೊ ಅಲುಮಿನಿಯ ಕಾರ್ಯದರ್ಶಿ ಡಾ.ಎಂ.ಯನ್ ಕುಟ್ಟಪ್ಪ ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಮ0ಗಳೂರು ಪೂರ್ವ ರೋಟರಿ ಕ್ಲಬ್ , ಸೋಮೇಶ್ವರ ಕೊಲ್ಯದ ರೋಟರಿ ಸಮುದಾಯ ದಳ ಹಾಗೂ ಕೊಲ್ಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಹಾಗೂ ಮಂಗಳೂರಿನ ಪ್ರಾಣಿ ದಯಾ ಸಂಘದ ಆಶ್ರಯದಲ್ಲಿ “ಹುಚ್ಚು ನಾಯಿ ನಿಯ0ತ್ರಣ ಲಸಿಕಾ ಶಿಬಿರ” ಕೊಲ್ಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯಲ್ಲಿ ಭಾನುವಾರ ನಡೆಯಿತು. ಕೊಲ್ಯ ರೋಟರಿ ಸಮುದಾಯದಳ ಇದರ ಅಧ್ಯಕ್ಷ ಶಶಿಕಾ0ತ್, ರೊಟೇರಿಯನ್ ಜೈಕುಮಾರ್ ಮತ್ತು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಇದರ ಅಧ್ಯಕ್ಷ ಪ್ರವೀಣ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸುಮಾರು 135 ನಾಯಿಗಳಿಗೆ “ಹುಚ್ಚು ನಾಯಿ ನಿಯ0ತ್ರಣ ಲಸಿಕೆಯನ್ನು ನೀಡಲಾಯಿತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹರೇಕಳ: ಸರಳ ವ್ಯಕ್ತಿತ್ವದ ರಾಜ್ಯ ಸರ್ಕಾರದ ಆರೋಗ್ಯ ಸಚಿವರಾದ ಯು.ಟಿ.ಖಾದರ್ ತಮ್ಮ 46 ನೇ ಹುಟ್ಟುಹಬ್ಬವನ್ನು ಹರೇಕಳದ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಜತೆಗೆ ಕೇಕ್ ತುಂಡರಿಸುವ ಮೂಲಕ ಸೋಮವಾರ ಆಚರಿಸಿದರು. ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸೌಜನ್ಯ ಸ್ಕೌಟ್ಸ್ ದಳ, ಶ್ರೀರಾಮಕೃಷ್ಣ ಪ್ರೌಢಶಾಲೆ, ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಮಟ್ಟದ ಆಹ್ವಾನಿತ ಶಾಲೆಗಳ ಸ್ಕೌಟ್ಸ್ -ಗೈಡ್ಸ್ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿನೂತನ ಶೈಲಿಯ ಸ್ಕೌಟ್ಸ್ -ಗೈಡ್ಸ್ ಪ್ರತಿಭೋತ್ಸವ-2015 ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಆಯೋಜಿಸಿದ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಮೂಲಕವೇ ಕೇಕನ್ನು ತುಂಡರಿಸಿ, ಅವರ ಕೈಯಿಂದಲೇ ತಿನ್ನುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಈವರೆಗೂ ಹುಟ್ಟುಹಬ್ಬವನ್ನು ಆಚರಿಸಿದವನಲ್ಲ. ಆಚರಿಸಿಯೂ ಗೊತ್ತಿಲ್ಲ. ಪ್ರೀತಿಪೂರ್ವಕವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಯೋಜಿಸಿದ ಹುಟ್ಟುಹಬ್ಬದ ಸರಳ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಸಂತಸವಾಗಿದೆ ಎಂದರು. ಈ ಸಂದರ್ಭ ತ್ರಿಶಕ್ತಿ ವಿದ್ಯಾವರ್ಧಕ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಸೋಮೇಶ್ವರ ಗ್ರಾಮದ ಕೊಲ್ಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುವ 34ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಅ.19 ರಿಂದ ಅ. 24ರವರೆಗೆ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಕೊಲ್ಯ ಶ್ರೀ ಶಾರದಾ ಸಭಾ ಸದಸನದಲ್ಲಿ ನಡೆಯಲಿದೆ ಎಂದು ಸಮಿತಿ ಕೊಶಾ„ಕಾರಿ ಪ್ರಕಾಶ್ ಎಚ್. ತಿಳಿಸಿದರು. ಕೊಲ್ಯ ಶ್ರೀ ಶಾರದಾ ಸಭಾ ಸದಸನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅ. 19ರಂದು ಬೆಳಗ್ಗೆ 7ಕ್ಕೆ ಸೋಮೇಶ್ವರ ಶ್ರೀ ಮದ್ವೇಶ ಭಟ್ ನೇತೃತ್ವದಲ್ಲಿ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ನಡೆಯಲಿದ್ದು, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕೊಲ್ಯ ಶ್ರೀ ನಾಗಬ್ರಹ್ಮಸ್ಥಾನ ಧರ್ಮದರ್ಶಿ ಭಾಸ್ಕರ ಐತಾಳ್ ಚಾಲನೆ ನೀಡಲಿದ್ದು, ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಅ.19ರಿಂದ 24ರವರೆಗೆ ಪ್ರತಿ ದಿನ ಬೆಳಗ್ಗೆ ಶ್ರೀ ಶಾರದಾ ಮಹಿಳಾ ಮಂಡಳಿಯಿಂದ ಲಲಿತಾ ಸಹಸ್ರನಾಮ ಪಠಣ, ಮಹಾಪೂಜೆ, ಮಹಾ ಅನ್ನಸಂತರ್ಪಣೆ, ಅ.21ರಂದು ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಾಂಸ್ಕøತಿಕ ಸ್ಪರ್ಧೆ ನಡೆಯಲಿದೆ.…

Read More