ಉಳ್ಳಾಲ: ಉಳ್ಳಾಲದ ಭಗವತಿ ಕ್ಷೇತ್ರಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ತೊಕ್ಕೊಟ್ಟು ಕೃಷ್ಣನಗರದ ನಿವಾಸಿ ಚಂದ್ರಕಾಂತ್ ಎಂಬವರಿಗೆ ಉಳ್ಳಾಲಬೈಲಿನ ಪ್ರೀತೇಶ್ ಎಂಬಾತ ಪಂಚ್ನಿಂದ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಚಂದ್ರಕಾಂತ್ ಅವರು ಕ್ಷೇತ್ರದಿಂದ ವಾಪಸ್ಸಾಗುವಾಗ ತಡೆದ ಪ್ರೀತೇಶ್ ಕೈಗೆ ಸುತ್ತಿದ ಕಬ್ಬಿಣದ ಸಂಕೋಲೆಯಿಂದ ಕೆನ್ನೆ ಮತ್ತು ತಲೆಯ ಭಾಗಕ್ಕೆ ಬಲವಾಗಿಹೊಡೆದಿದ್ದಾನೆ. ಆನಂತರ ಚೂರಿ ತೋರಿಸಿ ಜೀವಬೆದರಿಕೆಯೊಡ್ಡಿದ್ದಾನೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಪ್ರೀತೇಶ್ ಮತ್ತು ಕವಿತ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾಗ, ಅವರ ಬೈಕನ್ನು ಚಂದ್ರಕಾಂತ್ ಅವರಿಗೆ ಸೇರಿದ ಓಮ್ನಿ ಕಾರಿನಲ್ಲಿ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿತ್ತು. ಇದರಿಂದ ಚಂದ್ರಕಾಂತ್ ಅವರೇ ಪೊಲೀಸರಿಗೆ ದೂರು ನೀಡಿ ತಮ್ಮನ್ನು ಬಂಧಿಸಿದ್ದು ಎಂದು ಪೂರ್ವದ್ವೇಷವನ್ನು ತೀರಿಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Author: UllalaVani
ಉಳ್ಳಾಲ: ಗೋಣಿಚೀಲಗಳಲ್ಲಿ ಇರಿಸಲಾಗಿದ್ದ ಸುಲಿದ ಅಡಿಕೆಯನ್ನು ಕಳ್ಳರು ಕಳವುಗೈದಿರುವ ಘಟನೆ ಪಜೀರು ಗ್ರಾಮದ ಪಾನೇಲ ಬಾಕೀಮಾರ್ ಎಂಬಲ್ಲಿ ನಡೆದಿದೆ. ಅಬ್ದುಲ್ ರವೂಫ್ ಎಂಬವರಿಗೆ ಸೇರಿದ , 8 ಗೋಣಿ ಚೀಲಗಳಲ್ಲಿ ಇರಿಸಲಾಗಿದ್ದ ಅಡಿಕೆ ಕಳವಾಗಿದೆ. ನಾಲ್ಕು ಕ್ವಿಂಟಾಲ್ ತೂಕವುಳ್ಳ ಅಡಿಕೆಯ ಅಂದಾಜು ಮೌಲ್ಯ ರೂ. 80,000 ಆಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಕೋಟೆಕಾರು: ರಾಮರಾಜ ಕ್ಷತ್ರಿಯ ಸೇವಾ ಸಂಘ ಕುಂಪಲ ಉಳ್ಳಾಲ ವಲಯದ ವತಿಯಿಂದ ಶ್ರೀ ರಾಮನವಮಿ ಉತ್ಸವ ಕೋಟೆಕಾರು ಶೃಂಗೇರಿ ಮಠದಲ್ಲಿ ಶನಿವಾರ ನಡೆಯಿತು. ರಾಮರಾಜ ಕ್ಷತ್ರೀಯ ಸೇವಾ ಸಂಘದ ಅಧ್ಯಕ್ಷ ಬಿ.ಕೆ.ಮೂರ್ತಿ ಪಾರೆಮನೆ, ಕಾರ್ಯದರ್ಶಿ ಸತ್ಯ ಕುಂಪಲ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ, ಇಂಧುಶ್ರೀ, ಶೃಂಗೇರಿ ಮಠದ ಸತ್ಯಶಂಕರ ಬೊಳ್ಳಾವ ಮೊದಲಾದವರು ಉಪಸ್ಥಿತರಿದ್ದರು.
ಕೊಣಾಜೆ: ಮಂಗಳೂರು ಇಂದು ಶಿಕ್ಷಣ ಕಾಶಿಯೆಂದೇ ಖ್ಯಾತಿಯನ್ನು ಪಡೆದಿದೆ. ಕಾರಣ ಈ ಪ್ರದೇಶದಲ್ಲಿರುವ ವಿಶ್ವವಿದ್ಯಾನಿಲಯ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಹಾಗೂ ಶೈಕ್ಷಣಿಕ ಸಂಸ್ಥೆಗಳು, ಇದರಿಂದ ದೇಶ ವಿದೇಶದ ವಿದ್ಯಾರ್ಥಿಗಳನ್ನು ಮಂಗಳೂರು ಆಕರ್ಷಿಸುವಂತಾಗಿದೆ. ಆದ್ದರಿಂದ ಇಂದಿನ ಆಧುನಿಕ ಕಾಲಕ್ಕನುಸಾರವಾಗಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಆಧುನಿಕ ಸೌಲಭ್ಯಗಳನ್ನು ನಾವು ವಿಸ್ತರಿಸಿಕೊಳ್ಳಬೇಕಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ವೈಫೈ ಸೌಲಭ್ಯವನ್ನು ಶನಿವಾರ ಮಂಗಳಾ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ, ತಂತ್ರಜ್ಞಾನದ ಯುಗದಲ್ಲಿ ನಾವಿದ್ದೇವೆ. ಇಂದು ಜಗ್ತತು ಎಷ್ಟು ವೇಗದಲ್ಲಿ ಆಧುನಿಕತೆಯೊಂದಿಗೆ ಬದಲಾವಣೆಯಾಗುತ್ತಿದ್ದೆಯೋ ಹಾಗೆಯೇ ನಮ್ಮ ಜೀವನ ಶೈಲಿಯೂ ವೇಗತೆಯನ್ನು ಪಡೆಯುತ್ತಿದೆ. ಬದಲಾಗುತ್ತಿರುವ ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಅನುಕೂಲವಾಗುವಂತೆ ಮಂಗಳೂರು ವಿ.ವಿ,ಯಲ್ಲಿ ವೈಫೈ ಸೌಲಭ್ಯ ಉದ್ಘಾಟನೆಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಯೋಗ ವಿಜ್ಞಾನವು ಇವತ್ತು ಇಡೀ ಜಗತ್ತಿಗೇ ಮಾದರಿ ವಿಷಯವಾಗಿ ಬಹಳಷ್ಟು ಜನರು ಆಕರ್ಷಿತರಾಗಿದ್ದಾರೆ. ಇಂತಹ ಯೋಗ ವಿಜ್ಞಾನ ವಿಭಾಗ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ನೂತನ ನೇತ್ರಾವತಿ ಸೇತುವೆ ಕಾಮಗಾರಿ ಮುಗಿದು ಮುಂದೆ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಪಂಪ್ವೆಲ್ ನಡುವಿನ ಬ್ಲಾಕ್ ಸಮಸ್ಯೆ ಬಗೆಹರಿಯಿತು ಎಂದು ಜನತೆ ನಿಟ್ಟುಸಿರು ಬಿಟ್ಟಿದ್ದರೆ, ಇದೀಗ ಮತ್ತೆ ಹಳೇ ಸೇತುವೆ ದುರಸ್ತಿ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದ್ದು, ಶನಿವಾರ ದಿನವಿಡೀ ನಡೆದ ರಸ್ತೆ ತಡೆಗೆ ತಾಳ್ಮೆಯಿಲ್ಲದ ವಾಹನ ಸವಾರರೇ ಕಾರಣರಾದರು. ಹಳೆಯ ನೇತ್ರಾವತಿ ಸೇತುವೆಯ ದುರಸ್ತಿ ಕಾರ್ಯ ಕಳೆದ ಕೆಲ ದಿನಗಳಿಂದ ಆರಂಭವಾಗಿದೆ. ಇದರ ಜತೆಗೆ ಸೇತುವೆಯನ್ನು ತಾಗಿಕೊಂಡು ಜೆಪ್ಪಿನಮೊಗರು ಮತ್ತು ಕಲ್ಲಾಪು ಭಾಗದ ಅರ್ಧ ಕಿ.ಮೀಗಳಷ್ಟು ರಸ್ತೆಗಳ ಕಾಮಗಾರಿಯೂ ನಡೆಯುತ್ತಿದೆ. ಅದಕ್ಕಾಗಿ ನೂತನ ನೇತ್ರಾವತಿ ಸೇತುವೆಯಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ದ್ವಿಚಕ್ರ ವಾಹನ ಸವಾರರು ಸಹಿತ ಸಣ್ಣ ವಾಹನಗಳು ಎಲ್ಲೆಂದರೆಲ್ಲಿ ತಾಳ್ಮೆಯಿಲ್ಲದೆ ಸೇತುವೆಯಲ್ಲಿ ಸಂಚರಿಸುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ಶನಿವಾರದ ದಿನ ಆಗಿದ್ದರಿಂದ ಮಧ್ಯಾಹ್ನ ಸಮಯದಲ್ಲಿ ವಿದ್ಯಾರ್ಥಿಗಳು, ಕೆಲಸ ಬಿಟ್ಟು ತೆರಳುವವರು…
ಉಳ್ಳಾಲ: ಇಲ್ಲಿನ ದರ್ಗಾದ ಉರೂಸ್ ಸಮಾರಂಭದ ಪ್ರಯುಕ್ತ ಓವರ್ಬ್ರಿಡ್ಜ್ನಿಂದ ಹಿಡಿದು ಅಬ್ಬಕ್ಕ ಸರ್ಕಲ್ನವರೆಗೆ ಆಗುತ್ತಿರುವ ರಸ್ತೆಯ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಮತ್ತು ಹೆಚ್ಚುವರಿ ಸರಕಾರಿ ಬಸ್ಗಳನ್ನು ಉರೂಸ್ ಸಂದರ್ಭದಲ್ಲಿ ಮಂಗಳೂರು ಉಳ್ಳಾಲ ರಸ್ತೆಗೆ ಒದಗಿಸಲು ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಮತ್ತು ಸಚಿವ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಉಳ್ಳಾಲ ದರ್ಗಾದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು. ಒಂದು ತಿಂಗಳ ಕಾಲ ನಡೆಯಲಿರುವ ಉರೂಸ್ ಸಂದರ್ಭದಲ್ಲಿ ವಿದ್ಯುತ್ ಕಡಿತವನ್ನು ನಿಲ್ಲಿಸುವುದು ಮತ್ತು ನಾದುರಸ್ತಿಯಲ್ಲಿರುವ ವಿದ್ಯುತ್ ತಂತಿಯನ್ನು ಶೀಘ್ರದಲ್ಲಿ ದುರಸ್ತಿಗೊಳಿಸಬೇಕು. ಉರೂಸ್ನ ಸಮಯದಲ್ಲಿ ನಡೆಯುವ ಸಂದಲ್ಮೆರವಣಿಗೆಗೆ ಅಡ್ಡಿ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಕರ್ನಾಟಕದಾದ್ಯಂತ ಸಾರಿಗೆ ವ್ಯವಸ್ಥೆ ಮತ್ತು ತೊಕ್ಕೊಟ್ಟುವಿನಲ್ಲಿ ರೈಲು ನಿಲ್ದಾಣ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಭಕ್ತಾದಿಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಮುಖ ಔಷಧಿ ದಾಸ್ತಾನಿರಿಸಲು ಮತ್ತು 24 ಗಂಟೆ ಕಾರ್ಯನಿರ್ವಹಿಸಲು ಸಚಿವ ಖಾದರ್ ಆರೋಗ್ಯಧಿಕಾರಿಗಳಿಗೆ ಸೂಚಿಸಿದರು. ಜತೆಗೆ ದರ್ಗಾದ ಸಮೀಪ ದರ್ಗಾದ ಕಟ್ಟಡವೊಂದರಲ್ಲಿ…
ಉಪ್ಪಳ: ಕೊಂಡೆವೂರಿನಲ್ಲಿ ನಡೆಯುತ್ತಿರುವ ಮಹಾಯಾಗದ ಸಂದರ್ಭದಲ್ಲಿ ಪ್ರತಿನಿತ್ಯ ಪೂಜಿಸಲ್ಪಡುವ ಗೋಮಾತೆಯ ತುಲಾಭಾರ ಬಹಳ ವಿಜೃಂಭಣೆಯಿಂದ ನಡೆಯಿತು. ಕಟೀಲಿನ ಅನಂತ ಪದ್ಮನಾಭ ಅಸ್ರಣ್ಣರ ಉಪಸ್ಥಿತಿಯಲ್ಲಿ ಕೊಂಡೆವೂರು ಸ್ವಾಮೀಜಿ ಹಾಗೂ ಯಾಗ ಪ್ರಧಾನ ಸಮಿತಿಯ ನಾರಾಯಣ ಬೆಂಗಳೂರು, ಗೋಪಾಲ್ ಬಂದ್ಯೋಡ್, ದಿವಾಕರ ಸಾಮಾನಿ ಮತ್ತು ಶ್ರೀಮತಿ ಆಶಾಜ್ಯೋತಿ ರೈಗಳ ಸಮ್ಮುಖದಲ್ಲಿ ಇ.ಎಸ್. ರಾಮ್ ಭಟ್, ಕಿರಣ್ ಭಟ್ ಹಾಗೂ ಭಕ್ತಾದಿಗಳು ಬೆಲ್ಲ ದಮೂಲಕ “ ಗೋತುಲಾಭಾರ ಸೇವೆ” ನಡೆಸಿದರು.
ಉಪ್ಪಳ: ಭಾರತೀಯ ಸಂಸ್ಕೃತಿಯ ಮಾತೆಯಾದ ಶ್ರೀ ಗಾಯತ್ರಿಯ ಮಂತ್ರ ಪಠನದಿಂದ ಶಕ್ತಿಕೇಂದ್ರವು ಜಾಗೃತಿಗೊಂಡು ಬುದ್ಧಿಕೇಂದ್ರವು ಜಾಗೃತಿಗೊಳ್ಳುತ್ತದೆ, ಅದರ ತರಂಗಗಳು ಪೃಥ್ವಿ ಸುತ್ತಿ ನಮ್ಮ ಬಳಿಗೇ ಬರುತ್ತದೆ ಎನ್ನುವುದು ವಿಜ್ಞಾನಿಗಳೇ ಕಂಡುಕೊಂಡಿದ್ದಾರೆ ಎಂದು ಬಾಳೆಕುದ್ರು ಮಠದ ನೃಸಿಂಹಾಶ್ರಮ ಸ್ವಾಮೀಜಿ ಗಾಯತ್ರೀ ಮಂತ್ರದ ಮಹತ್ವವನ್ನು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು. ಕೊಂಡೆವೂರಿನಲ್ಲಿ ನಡೆಯುತ್ತಿರುವ ಮಹಾಯಾಗದ ನಾಲ್ಕನೇ ದಿನದಂದು ನಡೆದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತಾನಾಡಿದರು. ಭಗವಂತನಿಗಿರುವ ದೊಡ್ಡ ಶಕ್ತಿ ಪ್ರಪಂಚದಲ್ಲಿ ಬೇರೆಯಾವುದಕ್ಕೂ ಇಲ್ಲ, ಧರ್ಮ ಭಾವನೆ ಮತ್ತು ಭಕ್ತಿ ಮೂರೂ ಒಟ್ಟಾದಾಗ ಸಮಾಜಕ್ಕೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ ಎಂದು ಮಾಣಿಲ ಸ್ವಾಮೀಜಿ ಸದಾಶಯ ವ್ಯಕ್ತಪಡಿಸಿದರು. ಕೊಂಡೆವೂರು ಸ್ವಾಮೀಜಿ ಮಾತನಾಡಿ ನಮ್ಮ ಪ್ರತೀಕ್ಷಣವೂ ದೇವರ ಪ್ರೀತ್ಯರ್ಥವಾಗಿ ವಿನಿಯೋಗವಾಗಬೇಕು, ಶುದ್ಧ ಕರ್ಮಫಲವನ್ನು ಸ್ವೀಕರಿಸಬೇಕು” ಎಂದು ಅಪೇಕ್ಷೆ ಪಟ್ಟರು. ತಂತ್ರಿವರೇಣ್ಯರಾದ ಉಳಿಯತ್ತಾಯ ವಿಷ್ಣು ಅಸ್ರರು ಯಾಗದಿಂದಾಗುವ ಪ್ರಯೋಜನವನ್ನು ತಿಳಿಸುತ್ತಾ ಯಜ್ಞದಿಂದ ಮಳೆ, ಮಳೆಯಿಂದ ಅನ್ನ, ಅನ್ನದಿಂದ ಸಮಸ್ತ ಜೀವಿಗಳಿಗೆ ಬದುಕು, ಈ ಯಾಗದಿಂದ ರಾಮರಾಜ್ಯ ನಿರ್ಮಾಣವಾಗಲಿ ಎಂದು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಪ್ಪಳ:ಯಾಗ ತರಂಗದಿಂದ ರೋಗತರಂಗ ದೂರವಾಗುತ್ತದೆ. ಹಾಲಿನಲ್ಲಿ ಅಂತರ್ಗತವಾಗಿರುವ ತುಪ್ಪದ ಹಾಗೆ ಭಗವಂತನಿದ್ದಾನೆ. ಅಂತೆಯೇ ಈ ಯಾಗದಿಂದ ಸಮಸ್ತರ ಆಶೋತ್ತರ ಈಡೇರಿಸುವ ಘೃತ ತಯಾರಾಗಲಿ ಎಂದು ಆನೆಗುಂದಿ ಮಹಾಸಂಸ್ಥಾನಮ್ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮಿ ಶುಭಾಶೀರ್ವಚನ ನೀಡಿದರು. ಅವರು ಕೊಂಡೆವೂರಿನಲ್ಲಿ ನಡೆಯುತ್ತಿರುವ ಮಹಾಯಾಗದ ಎರಡನೇ ದಿನದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತಾನಾಡಿದರು. ಬಳಿಕ ಮಾತನಾಡಿದ ಕೋಝಿಕ್ಕೋಡಿನ ಅದ್ವೈತಾಶ್ರಮದ ಚಿದಾನಂದ ಪುರಿ ಸ್ವಾಮೀಜಿ ಪರಮಾತ್ಮನ ಸಂಕಲ್ಪದಂತೆ ಧರ್ಮ ಸಂಸ್ಥಾಪನೆಯ ಸಂಕಲ್ಪದ ಈ ಯಜ್ಞ ಸಮಸ್ಥ ಕುಟುಂಬಕ್ಕೂ ಒಳಿತನ್ನುಂಟುಮಾಡಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಬಿ, ಪುರಾಣಿಕ್ ಮಾತನಾಡಿ ಕಾಯಕವೇ ಕೈಲಾಸವಾದ ಅಪೂರ್ವ ಸಾಧನಾಶ್ರಮ ಇದಾಗಿದೆ. ಯಜ್ಞಯಾಗಾದಿಗಳು ನಡೆಯುವಲ್ಲಿ ಕೆಟ್ಟ ಅನಿಲ ಪ್ರವೇಶಿಸದೆ ಶುದ್ಧ ವಾತಾವರಣ ನೆಲೆಸಿರುತ್ತದೆ, ಜಗತ್ತಿಗೇ ಶಾಂತಿ ಸಂದೇಶ ನೀಡಿದ ಭಾರತ ಎದ್ದುನಿಲ್ಲಲಿ ಎಂದು ಕರೆಕೊಟ್ಟರು. ಕೆ.ಟಿ.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಪ್ಪಳ: ಯಜ್ಞ ಕುಂಡಗಳ ಊರು ಕೊಂಡೆವೂರು ಆಗಿದೆ , ಭಗವಂತ ಭಕ್ತರ ನಡುವೆ ಕೊಡುಕೊಳ್ಳುವಿಕೆಯ ವ್ಯವಹಾರವಿದ್ದು, ವೇದಗಳಲ್ಲಿ ಯಾವುದೇ ಬೇಧ-ಭಾವಗಳಿಲ್ಲದೆ ಲೋಕ ಕಲ್ಯಾಣದ ಚಿಂತನೆಯಷ್ಟೇ ಇದೆ. ಯಜ್ಞಕ್ಕೆ ನಾವು ನಮ್ಮ ಸ್ವಾರ್ಥವೆಂಬ ಪಶುತ್ವ ಬಲಿಕೊಡೋಣ, ವಂದೇಮಾತರಂ, ಜನ ಗಣ ಮನ ರಾಷ್ಟ್ರಗೀತೆಯಾದರೆ, ಗಾಯತ್ರೀ ವಿಶ್ವಗೀತೆಯಾಗಿದೆ ಎಂದು ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ವಿಶ್ವೇಶ ತೀರ್ಥ ಪಾದಂಗಳವರು ಕೊಂಡೆವೂರಿನಲ್ಲಿ ನಡೆಯುತ್ತಿರುವ ಮಹಾಯಾಗದ ಆರಂಭದ ಮೊದಲದಿನ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ತಮ್ಮ ಆಶೀರ್ವಚನ ನೀಡಿದರು. ±್ರೀ ಧಾಮ ಮಾಣಿಲದ ಪರಮಪೂಜ್ಯ ಮೋಹನದಾಸ ಪರಮಹಂಸ ಸ್ವಾಮೀಜಿಯವರು “ “ಗುರುವಿನ ಗುಲಾಮನಾಗುವ ತನಕ ಮುಕ್ತಿದೊರೆಯದು, ಅಂತ: ಸತ್ವದ ಶಕ್ತಿ, ಭಾವನೆ, ಭಕ್ತಿಯ ಶಕ್ತಿ ಇದು ವಿಶ್ವದಾದ್ಯಂತ ಬೆಳಗಲಿ” ಎಂದು ಹಾರೈಸಿದರು. ದಿಕ್ಸೂಚಿ ಆಶೀರ್ವಚನ ನೀಡಿದ ಪರಮಪೂಜ್ಯ ಯೋಗಾನಂದ ಸರಸ್ವತೀ ಸ್ವಾಮೀಜಿಯವರು “ಯಾಗದ ವಿಶೇಷತೆ, ಇಲ್ಲಿ ಆಗುತ್ತಿರುವ ಹಿನ್ನೆಲೆಯ ವಿಶೇಷತೆಯ ಬಗ್ಗೆ ವಿವರಿಸಿ, ಇದೆಲ್ಲವೂ ಕಾರ್ಯಕರ್ತರ ಪರಿಶ್ರಮದಿಂದ ಆದದುಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.…

