ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ರಾಷ್ಟ್ರೀಯ ಹೆದ್ದಾರಿ ೬೬ರ ಉಚ್ಚಿಲ ಸೇತುವೆಯಿಂದ ಅಕ್ರಮ ಕಸಾಯಿಖಾನೆ, ಕೋಳಿ ಅಂಗಡಿಗಳ ತ್ಯಾಜ್ಯ ಸೇರಿದಂತೆ ಕೊಳೆತ ವಸ್ತುಗಳನ್ನು ಉಚ್ಚಿಲ ಹೊಳೆಗೆ ಹಾಕುವುದರಿಂದ ಸ್ಥಳೀಯವಾಗಿ ಅನಾರೋಗ್ಯ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಸ್ಥಳಿಯಾಡಳಿತ ಶ್ರೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ತುಳುನಾಡು ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಸೇತುವೆಯಲ್ಲಿ ಹಾಕಿದ ವಸ್ತುಗಳು,ಹೊಳೆಯಲ್ಲಿ ಶೇಖರಣೆಗೊಂಡು ಕೊಳೆತ ತ್ಯಾಜ್ಯದಲ್ಲಿ ಹುಳಗಳು ಆಗಿದೆ. ಇದರಿಂದ ಸುತ್ತಮುತ್ತಲಿನ ಮನೆಗಳ ನಿತ್ಯ ಉಪಯೋಗದ ನೀರಿನ ಬಾವಿಗಳು ಕಲುಷಿತಗೊಂಡಿದೆ ಎಂದು ಪ್ರತಿಭಟನಾ ಕಾರರು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಮುಖ ತಾಣವಾಗಿರುವ ಉಚ್ಚಿಲ ಸೇತುವೆಯಲ್ಲಿ ತಲಪಾಡಿ, ಕೋಟೆಕಾರ್, ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯಗಳನ್ನು ಇಲ್ಲಿ ಸುರಿಯಲಾಗುತ್ತಿದೆ. ಕೋಳಿ ಅಂಗಡಿಗಳ ತ್ಯಾಜ್ಯ ಅಕ್ರಮ ಕಸಾಯಿಖಾನೆಯ ತ್ಯಾಜ್ಯ, ಕ್ಯಾಟರಿಂಗ್ ನಡೆಸುವವರು ತ್ಯಾಜ್ಯವನ್ನು ಇದೇ ಪ್ರದೇಶದಲ್ಲಿ ಸುರಿಯುತ್ತಿದ್ದಾರೆ. ಇದರೊಂದಿಗೆ ಕೇರಳದಿಂದ ಬರುವ ವಾಹನಗಳು ತ್ಯಾಜ್ಯವನ್ನು ಇದೇ ಸ್ಥಳದಿಂದ ಹಾಕುವುದರಿಂದ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ : ನಿಟ್ಟೆ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆರೋಗ್ಯ ಸ್ನಾತಕೋತ್ತರ ವಿಭಾಗದ ನಾಲ್ವರು ವಿದ್ಯಾರ್ಥಿಗಳು ಅಮೇರಿಕದ ಮಿನ್ನೆಸೋಟದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವಿಶ್ವವಿದ್ಯಾನಿಲಯ ಮಿನ್ನಿಯಾಪೊಲೀಸ್ನಲ್ಲಿ ಮೂರು ವಾರಗಳ ಕಾಲ ನಡೆಯಲಿರುವ ಸಾರ್ವಜನಿಕ ಆರೋಗ್ಯ ಶಿಕ್ಷಣದ ವಿಚಾರದಲ್ಲಿ ಉನ್ನತ ಅಧ್ಯಯನಕ್ಕೆ ಆಯ್ಕೆಯಾಗಿದ್ದಾರೆ. ಸಾರ್ವಜನಿಕ ಆರೋಗ್ಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ಡಾ. ಅರ್ಚನಾ ಆರ್., ಜೆನ್ನಿಫೆರ್ ಮಥಾಯಸ್, ನಿವೇದಿತಾ ಪಿ.ಜೆ., ನಿಲಿಟಾ ಸಲ್ದಾನ ಅಮೇರಿಕದ ವಿಶ್ವವಿದ್ಯಾನಿಲಯದಲ್ಲಿ ಮೂರು ವಾರಗಳ ಕಾಲ ಉನ್ನತ ಅಧ್ಯಯನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದು, ಇವರ ಅಧ್ಯಯನಕ್ಕೆ ಸುಮಾರು ೨೩ ಸಾವಿರ ಯುಎಸ್ ಡಾಲರ್ (೧೫ಲಕ್ಷ ರೂ.) ವಿದ್ಯಾರ್ಥಿ ವೇತನದೊಂದಿಗೆ ಆಯ್ಕೆಯಾಗಿದ್ದು, ನಿಟ್ಟೆ ವಿಶ್ವವಿದ್ಯಾನಿಲಯದಿಂದ ಮಿನ್ನೆಸೋಟ ವಿಶ್ವವಿದ್ಯಾನಿಲಯದ ಅಧ್ಯಯನ ಒಡಂಬಡಿಕೆಯಲ್ಲಿ ಅಮೇರಿಕಕ್ಕೆ ತೆರಳಲಿರುವ ಪ್ರಥಮ ವಿದ್ಯಾರ್ಥಿಗಳ ತಂಡವಾಗಿದೆ ಎಂದು ಕ್ಷೇಮದ ಡೀನ್ ಡಾ. ಸತೀಶ್ ಭಂಡಾರಿ ತಿಳಿಸಿದರು. ಈ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ರಮಾನಂದ ಶೆಟ್ಟಿ, ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ಸುದೀಪ್ ಶೆಟ್ಟಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುರ್ನಾಡು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಬೋಳಿಯಾರು ರಂತಡ್ಕದ ಜಾರದಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ -258 ರಲ್ಲಿ ಮತ ಚಲಾಯಿಸುವ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು ಗ್ರಾಮಸ್ಥರು ಸಕ್ರಿಯವಾಗಿ ಭಾಗವಹಿಸಬೇಕು. ಗ್ರಾಮೀಣ ಮಟ್ಟದ ಚುನಾವಣೆಯೇ ಪ್ರಜಾಪ್ರಭುತ್ವದ ಬಹುಮುಖ್ಯ ಆಸ್ತಿ . ಜನಸಾಮಾನ್ಯರ ನೋವುಗಳಿಗೆ ಸ್ಪಂಧಿಸುವ ಸಲುವಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಮುಟ್ಟಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಅಗತ್ಯ. ಅವರ ಆಯ್ಕೆ ಸರಿಯಾದಲ್ಲಿ ಊರಿನ ಅಭಿವೃದ್ಧಿ ಸಾಧ್ಯ ಎಂದರು.
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಸೋಮೇಶ್ವರ ಸಮುದ್ರ ತೀರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನೋರ್ವನನ್ನು ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆಯ ನಾಲ್ವರು ಸದಸ್ಯರು ರಕ್ಷಿಸಿದ್ದಾರೆ. ಗುಲಬರ್ಗಾ ಶಿವಪುರದ ನಿವಾಸಿ ಶಿವುಕುಮಾರ್ (೨೧) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಭಾನುವಾರ ಸಂಜೆ ೭.೩೦ರ ಸುಮಾರಿಗೆ ಸಮುದ್ರ ಕಿನಾರೆಗೆ ಬಂದಿದ್ದ ಶಿವುಕುಮಾರ್ ದೇವಸ್ಥಾನ ಸಮೀಪದ ಸಮುದ್ರ ತೀರದಿಂದ ತುಸು ದೂರ ನಡೆದುಕೊಂಡು ಹೋಗಿ ಬ್ಯಾಗನ್ನು ಎಸೆದು ಬಳಿಕ ಹಾರಿದ್ದನು. ಇದನ್ನು ಗಮನಿಸಿದ ಬೀಚ್ ಅಭಿವೃದ್ಧಿ ಯೋಜನೆಯ ಸದಸ್ಯರಾದ ಅಶೋಕ್ ಸೋಮೇಶ್ವರ, ಮೋಹನ್ಚಂದ್ರ ಸೋಮೇಶ್ವರ, ಕಿರಣ್ ಒಂಭತ್ತುಕೆರೆ, ವೆಂಕಟೇಶ್ ಸೋಮೇಶ್ವರ ಸಮುದ್ರಕ್ಕೆ ಹಾರಿ ೧೫ ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಶಿವುಕುಮಾರನನ್ನು ರಕ್ಷಿಸಿದ್ದಾರೆ. ಶಿವುಕುಮಾರ್ ಬೆಂಗಳೂರಿನ ಸರಕಾರಿ ಇಲಾಖೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೌಟುಂಬಿಕ ಕಲಹಕ್ಕೆ ನೊಂದು ಶಿವುಕುಮಾರ್ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ.
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಹರಿದರ್ಶನಕ್ಕೆಂದು ತೆರಳಿದ ಉಳ್ಳಾಲದ ಮಹಿಳೆಯೊಬ್ಬರು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗಿ ವಿಽವಶರಾದ ಘಟನೆ ಭಾನುವಾರ ದೆಹಲಿಯಲ್ಲಿ ನಡೆದಿದ್ದು ಮೃತರ ಪಾರ್ಥಿವ ಶರೀರವನ್ನು ದೆಹಲಿಯಂದ ಮಂಗಳೂರಿಗೆ ವಿಮಾನದ ಮೂಲಕ ಕರೆತರುವಲ್ಲಿ ಸಚಿವ ಯು.ಟಿ. ಖಾದರ್ ಅವರು ಮಾನವೀಯತೆ ಮೆರೆದಿದ್ದಾರೆ. ಸಚಿವರ ಹೃದಯವಂತಿಕೆಗೆ ಉಳ್ಳಾಲದ ಸುಮಾನ ಪೈ ಅವರ ಕುಟುಂಬ ಕೃತಜ್ಞತೆ ಸಲ್ಲಿಸಿದೆ. ಮಂಗಳೂರಿನಿಂದ ಹರಿದ್ವಾರಕ್ಕೆಂದು ಶ್ರೀಕರಕಿಣಿಯವರ ನೇತೃತ್ವದಲ್ಲಿ ತೆರಳಿದ್ದ ೧೫ಮಂದಿಯ ತಂಡದಲ್ಲಿದ್ದ ಉಳ್ಳಾಲದ ಸುಮಾನಾ ಪೈ(೬೦) ಅವರು ಕಳೆದ ವಾರ ಪ್ರಯಾಣ ಹೊರಟಿದ್ದು ದೆಹಲಿಯ ವಾತಾವರಣಕ್ಕೆ ಒಗ್ಗಿಕೊಳ್ಳದೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯವಾದ ಹಿನ್ನೆಲೆಯಲ್ಲಿ ವಿಽವಶರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದವಾರ ಸುಮನಾ ಪೈ ಅವರಿಗೆ ಪ್ರಯಾಣದಲ್ಲಿ ದೆಹಲಿಯ ಆಹಾರ ಪಥ್ಯವಾಗಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದ್ದು ಅದೇ ಹಿನ್ನೆಲೆಯಲ್ಲಿ ಜ್ವರವೂ ಬಂದಿತ್ತು ಎನ್ನಲಾಗಿದೆ. ಆರೋಗ್ಯ ಹದೆಗೆಡುತ್ತಿದ್ದಂತೆಯೇ ದೆಹಲಿಯ ರಾಜೇಂದರ್ ನಗರದ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಆಸ್ಪತ್ರೆಗೆ ಸಾಗಿಸುವಾಗಲೇ ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ. ಪಾರ್ಥಿವ ಶರೀರವನ್ನು ಸೋಮವಾರ ಬೆಳಗ್ಗೆ ೧೧.೩೦ಕ್ಕೆ ದೆಹಲಿಯಿಂದ…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ : ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ನೃತ್ಯ ಶಿಕ್ಷಣ ಸಂಸ್ಥೆಯಿಂದ ಗುರುಕುಲ ಉತ್ಸವ -೨೦೧೫ ಮತ್ತು ಯಕ್ಷ ನಾಟ್ಯಗುರು ಶ್ರೀ ಸಬ್ಬಣಕೋಡಿ ರಾಮ ಭಟ್ ಅವರಿಗೆ ‘ಯಕ್ಷ ಮಂತ್ರ್ಯಕ ಪ್ರಶಸ್ತಿ’ ಪ್ರಧಾನ ಕಾರ್ಯಕ್ರಮ ತೊಕ್ಕೊಟ್ಟು ಅಂಬಿಕಾರೋಡ್ ಬಳಿಯಿರುವ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು ಗುರುಕುಲ ಉತ್ಸವಕ್ಕೆ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಹಿರಿಯ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಚಾಲನೆ ನೀಡಿ ಪ್ರಪಂಚದಲ್ಲಿ ಭರತನಾಟ್ಯದಂತಹ ವಿದ್ಯೆ ಬೇರೊಂದಿಲ್ಲ. ಎಲ್ಲಾ ಸರ್ವಸ್ವವನ್ನು ಹೊಂದಿರುವ ಕಲೆ ಅದು ಭರತನಾಟ್ಯ ಮಾತ್ರ. ತಾಳ್ಮೆಯಿಂದ ಕಲೆಯನ್ನು ಪೋಷಿಸಿಕೊಂಡು ಮತ್ತು ಗುರುಗಳ ಮಾರ್ಗದರ್ಶನವನ್ನು ಕಾಪಾಡಿಕೊಂಡವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ .ಅದನ್ನು ಉಳಿಸಿ ಬೆಳೆಸುವ ಕಾರ್ಯ ಮುಂದಿನ ಪೀಳಿಗೆಯಿಂದ ಆಗಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಕಲೆಯಿಲ್ಲದ ಜೀವನ ವ್ಯರ್ಥ. ಪಾಶ್ಚಾತ್ಯ ಸಂಸ್ಕೃತಿಗಳಿಂದ ಭರತನಾಟ್ಯದಂತಹ ಕಲೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಅದರ ನಡುವೆಯೂ ಮಂತ್ರನಾಟ್ಯಕಲಾ ಗುರುಕುಲ ನೃತ್ಯ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಮಂಗಳೂರು ವಿಧಾನ ಸಬಾ ಕ್ಷೇತ್ರ ವ್ಯಾಪ್ತಿಯ ಸೋಮೇಶ್ವರ ಗ್ರಾಮ ಪಂಚಾಯತ್ಗೆ ೧೯ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತ್ನ ಹಾಲಿ ಅಧ್ಯಕ್ಷೆ ರಮಣಿ ಮತ್ತು ಉಪಾಧ್ಯಕ್ಷ ರಾಜೇಶ್ ಎ. ಉಚ್ಚಿಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತ್ನ ೬೧ ಸ್ಥಾನಗಳಲ್ಲಿ ೪೨ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಐದು ವಾರ್ಡ್ಗಳಲ್ಲಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಚುನಾವಣೆಯಿಂದ ಮುಕ್ತವಾಗಿದೆ. ಅಂಬಿಕಾ ರೋಡ್ ಪಿಲಾರ್ ೪ನೇ ವಾರ್ಡ್ನಲ್ಲಿ ಉದಯ ಗಟ್ಟಿ, ದೀಪಕ್ ಪಿಲಾರ್, ಪರ್ವೀನ್, ಕುಂಪಲ ಚೆತನ ನಗರ ೫ನೇ ವಾರ್ಡ್ನಲ್ಲಿ ಶಾಲಿನಿ, ಕುಂಪಲ ಕೃಷ್ಣನಗರ ೬ನೇ ವಾರ್ಡ್ನಲ್ಲಿ ಶಶಿಕಲಾ, ಕುಂಪಲ ಆಶ್ರಯ ಕಾಲನಿ ೮ನೇ ವಾರ್ಡ್ನಲ್ಲಿ ಕುಮುದಾಕ್ಷಿ, ಕನೀರು ತೋಟ ಹನುಮಾನ್ನಗರ ವಾರ್ಡ್ನಲ್ಲಿ ಹರಿಣಾಕ್ಷಿ , ಸುಕನ್ಯಾ, ಸೋಮೇಶ್ವರ ಫೆರಬೈಲ್ ವಾರ್ಡ್ನಲ್ಲಿ ರಮಣಿ, ವೇದಾವತಿ, ಅಜಿತ್, ಉಚ್ಚಿಲ ನೇತಾಜಿ ರಸ್ತೆ ೧೫ನೇ ವಾರ್ಡ್ನಲ್ಲಿ ರಾಜೇಶ್ ಎ. ಉಚ್ಚಿಲ, ಲೋಲಾಕ್ಷಿ, ಸಾವಿತ್ರಿ,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಸರಕಾರಿ ಪದವಿ ಪೂರ್ವ ಕಾಲೇಜು ಕುರ್ನಾಡು ಇದರ 2015ನೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಾಜರಾದ 292 ವಿದ್ಯಾರ್ಥಿಗಳಲ್ಲಿ 284 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು 93.83% ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ 4 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 16 ವಿದ್ಯಾರ್ಥಿಗಳು ಹಾಗೂ ಕಲಾ ವಿಭಾಗದಲ್ಲಿ 1 ವಿದ್ಯಾರ್ಥಿ ಡಿಸ್ಟಿಂಕ್ಷನ್ನೊಂದಿಗೆ ತೇರ್ಗಡೆಯಾಗಿದ್ದರೆ. 176 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 59 ದ್ವಿತೀಯ ಶ್ರೇಣಿ ಹಾಗೂ 18 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಬಲ್ಕೀಸ್ 548, ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ 566, ಕಲಾವಿಭಾಗದಲ್ಲಿ ಫಾತಿಮತ್ ತಸ್ವ 524 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಳೇಕಲ: ಸುನ್ನಿ ವಿದ್ಯಾರ್ಥಿ ಸಂಘಲ ಇದರ 2014-15 ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಳೇಕಲದ ಸುನ್ನೀ ಸೆಂಟರ್ ನಲ್ಲಿ ಎಸ್.ವಿ.ಎಸ್ ನ ನಿರ್ದೇಶಕರಾದ ಎನ್.ಡಿ ಅಬೂಬಕ್ಕರ್ ಮದನಿ ಉಸ್ತಾದರು ದುಆ ಮಾಡುವ ಮೂಲಕ ಮಹಾಸಭೆಯನ್ನು ಉದ್ಘಾಟನೆ ಮಾಡಿದರು. ಎಸ್.ವಿ.ಎಸ್ ನ ಅಧ್ಯಕ್ಷರಾದ ಅನ್ಸಾರ್ ಅಳೇಕಲ ಇವರ ಅಧ್ಯಕ್ಷತೆಯಲ್ಲಿ ಜರುಗಿತು. 2014-15ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ವಾಚಿಸಿ ಮಂಜೂರು ಮಾಡಲಾಯಿತು. 2014-15ನೇ ಸಾಲಿನ ಸಮಿತಿಯನ್ನು ಬರ್ಖಾಸ್ತು ಗೊಳಿಸಿ 2015-16ನೇ ಸಾಲಿಗೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಿ.ಎಮ್ ಅಶ್ರಫ಼್ , ಉಪಾಧ್ಯಕ್ಷರಾಗಿ ಫ಼ಾಝಿಲ್ ಅಳೇಕಲ , ಆರೀಫ಼್ ಸಾದುಹಿತ್ಲು , ಪ್ರ.ಕಾರ್ಯದರ್ಶಿಯಾಗಿ ಜವಾದ್ ಅಳೇಕಲ , ಕಾರ್ಯದರ್ಶಿಯಾಗಿ ರಹ್ಮತ್ ತಾಝಿಲ್, ಸಾದಿಕ್ ಪಾಂಡೆಲ್ ಪಕ್ಕ , ಕೋಶಾಧಿಕಾರಿಯಾಗಿ ಬಶೀರ್ ಅಳೇಕಲ , ಆಫೀಸ್ ಮೆನೇಜರ್ ಆಗಿ ಮುಹಮ್ಮದ್ ಕೈಸ್ ಇವರನ್ನು ನೇಮಕ ಮಾಡಲಾಯಿತು . ಕಾರ್ಯಕಾರಿಣಿ ಸದಸ್ಯರುಗಳಾಗಿ ಸಯ್ಯಿದ್ ಖುಬೈಬ್ ತಂಙಳ್ ,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಮುದ್ರ ತೀರದಲ್ಲಿದ್ದ ಅಂಗಡಿಯನ್ನು ದುಷ್ಕರ್ಮಿಗಳು ಸಂಪೂರ್ಣ ನಾಶಗೊಳಿಸಿರುವ ಘಟನೆ ಮಂಗಳವಾರ ಮೊಗವೀರಪಟ್ನದಲ್ಲಿ ಬೆಳಕಿಗೆ ಬಂದಿದೆ. ಮೊಗವೀರಪಟ್ನ ಸಮುದ್ರ ತೀರದಲ್ಲಿರುವ ಉಳ್ಳಾಲ ಕೈಕೋ ನಿವಾಸಿ ಇಸ್ಮಾಯಿಲ್ ಎಂಬವರಿಗೆ ಸೇರಿದ ಅಂಗಡಿಯನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಮಂಗಳವಾರ ತಡರಾತ್ರಿ ದುಷ್ಕರ್ಮಿಗಳು ತರ್ಪಾಲಿನಲ್ಲಿ ನಿರ್ಮಿಸಿದ್ದ ಅಂಗಡಿಯ ಸಾಮಗ್ರಿಗಳನ್ನು ಹೊರ ಎಸೆದು, ಸೋಡಾ ಬಾಟಲಿಗಳನ್ನು ಪುಡಿಗೈದು, ಅಂಗಡಿಯನ್ನೇ ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಡ ಕುಟುಂಬದ ಇಸ್ಮಾಯಿಲ್ ಅವರು ೧೫ ವರ್ಷಗಳಿಂದ ಉಳ್ಳಾಲ ಮೊಗವೀರಪಟ್ನದ ಸಮುದ್ರ ಕಿನಾರೆಯಲ್ಲಿ ತಂಪು ಪಾನೀಯ ಹಾಗು ಚರ್ಮುರಿ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದಲೇ ಪತ್ನಿ ಮತ್ತು ಮೂವರು ಮಕ್ಕಳಿರುವ ಕುಟುಂಬದ ನಿರ್ವಹಣೆಯನ್ನು ನಡೆಸುತ್ತಿದ್ದಾರೆ. ಘಟನೆಯಿಂದ ರೂ.೪೦,೦೦೦ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇಸ್ಮಾಯಿಲ್ ಅವರ ಅಂಗಡಿ ಸಮೀಪವೇ ಮೂರು ಹಿಂದುಗಳಿಗೆ ಸೇರಿದ ಗೂಡಂಗಡಿ ಇದ್ದು, ಅದಕ್ಕೆ ಯಾವುದೇ ಹಾನಿ ಸಂಭವಿಸದೇ ಇರುವುದರಿಂದ ಕೋಮು ಭಾವನೆ ಕೆರಳಿಸುವ ಸಲುವಾಗಿ…

