Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಇಲ್ಲಿಗೆ ಸಮೀಪದ ಕೆದುಂಬಾಡಿಯ ಜುಮ್ಮಾ ಮಸೀದಿಗೆ ಸಿಡಿಲು ಬಡಿದು ಮಸೀದಿಯ ಮಿನಾರ, ವಿದ್ಯುತ್, ಧ್ವನಿವರ್ದಕ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಶನಿವಾರ ರಾತ್ರಿ ವೇಳೆ ಬಂದ ಸಿಡಿಲು ಮಳೆಯ ವೇಳೆ ಬಡಿದ ಸಿಡಿಲು ಕೆದುಂಬಾಡಿಯ ಮಸೀದಿಗೆ ಬಿದ್ದಿದೆ. ಈ ವೇಳೆ ಮಸೀದಿಯಲ್ಲಿ ಯಾರೂ ಇರದಿದ್ದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಮಸೀದಿಯ ಮಿನಾರಕ್ಕೆ ಹಾನಿಯಾಗಿದೆ. ಧ್ವನಿವರ್ದಕ, ವಿದ್ಯುತ್ ವಯರ್, ಇನ್‍ವರ್ಟರ್, ಜನರೇಟರ್ ಕೆಟ್ಟುಹೋಗಿದೆ. ವಿದ್ಯುತ್ ವಯರ್ ಸುಟ್ಟು ಅಪಾರ ನಷ್ಟ ಸಂಭವಿಸಿದೆ.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ದೇರಳಕಟ್ಟೆ: ಕಾರು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸಹಸವಾರ ಕಲ್ಕಟ್ಟ ನಿವಾಸಿ ಮಹಮ್ಮದ್ ಶಫೀಕ್ (೧೬) ಮೃತಪಟ್ಟಿರುವ ಘಟನೆ ದೇರಳಕಟ್ಟೆ ಜಂಕ್ಷನ್ನಿನಲ್ಲಿ ಗುರುವಾರ ಸಂಭವಿಸಿದೆ. ಬೇಸಿಗೆ ರಜೆಯಲ್ಲಿ ದೇರಳಕಟ್ಟೆಯಲ್ಲಿರುವ ಮಾವನ ಇಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಫೀಕ್ ತನ್ನ ನೆರೆಮನೆಯವರಾದ ಅಬ್ದುಲ್ ರಝಾಕ್ ಎಂಬವರ ಆಕ್ಟಿವಾ ಸ್ಕೂಟರಿನಲ್ಲಿ ದೇರಳಕಟ್ಟೆ ಕಡೆಗೆ ಹೊರಟಿದ್ದ. ಈ ಸಂದರ್ಭ ದಾರಿಮಧ್ಯೆ ಸಿಕ್ಕ ಸಂಬಂಧಿಕರೋರ್ವರನ್ನು ಮಾತನಾಡಿಸಲೆಂದು ಅಬ್ದುಲ್ ರಝಾಕ್ ಅವರು ದೇರಳಕಟ್ಟೆ ಸಮೀಪ ಸ್ಕೂಟರ್ ನಿಲ್ಲಿಸುವ ಹಂತದಲ್ಲಿದ್ದಾಗ ಹಿಂಬದಿಯಿಂದ ಬಂದ ವೈದ್ಯೆಯೊಬ್ಬರ ಕಾರು ಡಿಕ್ಕಿ ಹೊಡೆಯಿತು. ಇದರಿಂದ ಗಂಭೀರ ಗಾಯಗೊಂಡ ಶಫೀಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಲ್ಕಟ್ಟ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿದ್ದ ಈತ ಮುಂದೆ ಪಿಯುಸಿ ಕಲಿಯುವವನಿದ್ದ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ತೊಕ್ಕೊಟ್ಟು : ೨೦೧೪-೧೫ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ಬಬ್ಬುಕಟ್ಟೆ ಹಿರಾ ಮಹಿಳಾ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಒಟ್ಟು ೨೬ ವಿದ್ಯಾರ್ಥಿನಿಯರಲ್ಲಿ ಇಬ್ಬರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ.೯೬ ಫಲಿತಾಂಶ ಪಡೆದುಕೊಂಡಿದ್ದಾರೆ. ಸೈದಾ ಅಲ್ಮಾಸ್ (೫೨೮), ನೆಫೀಸತ್ ಲಶೀದಾ (೫೨೩) ಉನ್ನತ ಶ್ರೇಣಿಯಲ್ಲಿ , ೨೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೨ ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ: ಸೈದಾ ಅಲ್ಮಾಸ್ (೫೨೮) , ನೆಫೀಸತ್ ಲಶೀದಾ (೫೨೩). ಕಲಾ ವಿಭಾಗದಲ್ಲಿ : ಫಾತಿಮಾ ಫಝೀನಾ (೫೩೬), ಫತಿಮಾ ಅಝ್ಮಿಯಾ (೫೩೪), ಆಯೇಷಾ ಅಬ್ದುಲ್ ರೆಹಮಾನ್ (೫೨೪), ತಸ್ಲೀಮಾ (೫೧೮) ವಾಣಿಜ್ಯ ವಿಭಾಗ: ಆಯೆಷಾ ತಬಸ್ಸುಮ್ (೫೫೪),ಮುನೀರಾ ಬೇಗಂ (೫೩೭), ರುಕ್ಸಾನಾ (೫೨೫),ಅರೀಫಾ.ಎ(೫೧೩),ಅತಿಕಾ ಸಲೀಮಾ (೫೧೫), ಆಯಿಷಾ ನಿತಾಶಿನ್ (೫೧೩), ಕೆ.ಫಾತಿಮಾ ನೂಹಾ(೫೪೨), ಆಯಿಷಾ ಮೊದಿನಬ್ಬ (೫೩೭), ಆಯಿಷಾ ಶೈಮಾ (೫೩೩), ಮೆಹನಾಝ್ (೫೧೭) ಅಂಕಗಳನ್ನು ಪಡೆದುಕೊಂಡಿದ್ದಾರೆ.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಮೊಗವೀರಪಟ್ಣ ಬೀಚ್‌ನಲ್ಲಿ ಭಾನುವಾರ ಸಮುದ್ರಪಾಲಾಗುತ್ತಿದ್ದ ಬೆಂಗಳೂರು ಮೂಲದ ಬಾಲಕ ಸಹಿತ ಮೂವರನ್ನು ಉಳ್ಳಾಲದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ರಕ್ಷಿಸಿದ್ದಾರೆ. ಆದರೆ ಕಳೆದ ಭಾನುವಾರದ ಘಟನೆಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ತಮ್ಮ ಸದಸ್ಯರು ಬರುವವರೆಗೆ ಜೀವರಕ್ಷಣೆ ಮಾಡುವುದು ಬೇಡ ಎನ್ನುವುದರ ನಿರ್ಣಯದ ನಡುವೆಯೇ ಮಾನವೀಯತೆಯ ಆಧಾರದಲ್ಲಿ ಮೂವರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಸಮುದ್ರಪಾಲಾಗುತ್ತಿದ್ದ ಬೆಂಗಳೂರು ನಂದಿನಿ ಲೇಔಟ್ ನಿವಾಸಿಗಳಾದ ಸೈಯ್ಯದ್ ಅಸ್ಲಾಂ(೮ವರ್ಷ), ಆತನ ತಂದೆ ಸೈಯ್ಯದ್ ಇಬ್ರಾಹಿಂ, ಮತ್ತು ಚಿಕ್ಕಪ್ಪ ಫಿರೋಜ್ ಎಂಬವರಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಉಳ್ಳಾಲ ದರ್ಗಾ ವೀಕ್ಷಿಸಲು ಆಗಮಿಸಿದ್ದ ಸೈಯ್ಯದ್ ಇಬ್ರಾಹಿಂ ಅವರ ಕುಟುಂಬದ ಸದಸ್ಯರು ಭಾನುವಾರ ಬೆಳಗ್ಗೆ ಉಳ್ಳಾಲ ಬೀಚ್‌ಗೆ ಆಗಮಿಸಿದ್ದರು. ತಂಡದಲ್ಲಿದ್ದ ಮಕ್ಕಳು ನೀರಿನ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ ಬಾಲಕ ಅಸ್ಲಾಂ ಸಮುದ್ರದ ದೊಡ್ಡ ಅಲೆಗೆ ಸಿಲುಕಿ ಸಮುದ್ರ ಪಾಲಾದ ಬಾಲಕನನ್ನು ರಕ್ಷಿಸಲು ತೆರಳಿದ ಬಾಲಕನ ತಂದೆ ಇಬ್ರಾಹಿಂ ಮತ್ತು ಚಿಕ್ಕಪ್ಪ ಫಿರೋಜ್ ಸಮುದ್ರ ಪಾಲಾಗುತ್ತಿದ್ದಾಗ ಮೀನುಗಾರಿಕೆಯಲ್ಲಿ ತೊಡಗಿದ್ದ…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ‘ಬೆನ್ನ ಹಿಂದೆ ಅಲೆದಾಡಿ ಪ್ರಶಸ್ತಿಯನ್ನು ಸ್ವೀಕರಿಸುವ ಗುಣ ತನ್ನದಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ನಡೆಸಿರುವ ಸಾಧನೆಯನ್ನು ಗುರುತಿಸಿ ಸಂಘ-ಸಂಸ್ಥೆಗಳು ನೀಡಿರುವ ಪ್ರಶಸ್ತಿಯನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ಆದರೆ ಕ್ಷೇತ್ರದಲ್ಲಿನ ಸಾಧನೆ ಪ್ರಶಸ್ತಿ ಸ್ವೀಕರಿಸುವಷ್ಟು ದೊಡ್ಡದಲ್ಲ, ಮುಂದೆಯೂ ಕ್ಷೇತ್ರದಲ್ಲಿ ಸಾಧನೆ ನಡೆಸಬೇಕಿತ್ತು ಎನ್ನುವ ಆಶಯ ತನ್ನಲ್ಲಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ. ಅಮೃತ ಸೋಮೇಶ್ವರ ಹೇಳಿದ್ದಾರೆ. ಅವರು ಸೋಮೇಶ್ವರ ಅವರ ನಿವಾಸ ಒಲುಮೆ’ಯಲ್ಲಿ ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಟಾನ, ವಿಜಯಪುರ ಇದರ ಆಶ್ರಯದಲ್ಲಿ ಜರಗಿದ ಕನ್ನಡ ಸಾಹಿತ್ಯ ಪರಿಷತ್ತು ಶತಮಾನ ಪ್ರಶಸ್ತಿ ಮತ್ತು ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಸಂಬಂಧಗಳಿಗೆ ಹೆಚ್ಚಿನ ಮಹತ್ವವಿದೆ. ಇಂತಹ ಸಂಬಂಧಗಳನ್ನು ಬೆಳೆಸುವ ಕಾರ್‍ಯ ಪ್ರಶಸ್ತಿ ಪ್ರಧಾನ ಸಮಾರಂಭದಿಂದ ನಡೆದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಸಾಧನೆ ಮಾಡಬೇಕಿತ್ತು. ಆದರೂ ಸಾಹಿತ್ಯವನ್ನು ದುಡಿಮೆಯಾಗಿ ತೆಗೆದುಕೊಂಡು ಬಾಳುವುದು ಜೀವನದ ಸಾಧನೆಯಾಗಿದೆ. ಕೃತಜ್ಞತೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ನಿಟ್ಟೆ ಉಷಾ ಶೂಶ್ರೂಷ ಸಂಸ್ಥೆಯ ವತಿಯಿಂದ ವಿಶ್ವ ಶೂಶ್ರೂಷಕರ ದಿನಾಚರಣೆಯನ್ನು ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಸೆಮಿನಾರ್ ಹಾಲ್‍ನಲ್ಲಿ ಆಚರಿಸಲಾಯಿತು. ದೇಶದ ಆರೋಗ್ಯದ ಮೂಲ ಸಂಪತ್ತು ದಾದಿಯರು ಎಂದು ಲಕ್ಷ್ಮಿ ಕಾಲೇಜ್ ಆಪ್ ನರ್ಸಿಂಗ್ ಉಪಪ್ರಾಂಶುಪಾಲರಾದ ಡಾ|ಥೆರೆಜಾ, ಎಲ್, ಮೆಂಡೂನ್ಸಾ ಮುಖ್ಯ ಅತಿಥಿಯಾಗಿ ಉಪನ್ಯಾಸ ನೀಡಿದರು. ಕಾಲೇಜು ಪ್ರಾಂಶುಪಾಲೆ ಡಾ.ಫಾತಿಮಾ ಡಿಸಿಲ್ವ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ಕೂಲ್ ಆಪ್ ನರ್ಸಿಂಗ್ ಪ್ರಾಂಶುಪಾಲರಾದ ಕ್ಲೀಟ ಪಿಂಟೋ, ನರ್ಸಿಂಗ್ ಮೇಲ್ವಿಚಾರಕಿ ಸುನಿತಾ ವೇಗಸ್, ಅರುಣಿ ಉಪಸ್ಥಿತರಿದ್ದರು. ಅರುಣಿ.ಜಿ ಸ್ವಾಗತಿಸಿದರು. ಅನ್ಸಿಲ್ಲಾ ರೀನಾ ರೋಜ್ ವಂದಿಸಿದರು. ಅಶ್ವಿನಿ ಕೆ.ವಿ ಕಾರ್ಯಕ್ರಮ ನಿರ್ವಹಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಪೆರ್ಮನ್ನೂರು ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆಯ 2014-15 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಶೇ.100 ಫಲಿತಾಂಶದಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ ಪ್ರತೀಕ್ 610, ಅಲೀಮಾ ಸಫಾ (607) ಮತ್ತು ಶುಭಲಕ್ಷ್ಮೀ (600) ಅಂಕ ಗಳಿಸುವುದರೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಸೋಮೇಶ್ವರದ ಆನಂದಾಶ್ರಮ ಪ್ರೌಢಶಾಲೆಯ 2014-15 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಶೇ. 90 ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ. ತೇಜಸ್ವಿನಿ. ಆರ್ (547), ಪ್ರತೀಕ್ಷಾ .ಯು (564), ತೇಜಸ್ವಿನಿ (545), ಅಕ್ಷತಾ.ಎ (556), ಜಿತೇಶ್ (553), ಶೃತಿ.ಬಿ.ಯನ್ (561), ಪ್ರತೀಕ್ಷಾ.ಬಿ(542), ರಕ್ಷಿತಾ (574), ಸೂರಜ್ (575) ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಯೇನೆಪೋಯ ನರ್ಸಿಂಗ್ ಕಾಲೇಜು, ಯೇನೆಪೋಯ ನರ್ಸಿಂಗ್ ಶಾಲೆ ಮತ್ತು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶುಶ್ರೂಷಾ ಸೇವೆಗಳ ಇಲಾಖೆ ಸಹಯೋಗದೊಂದಿಗೆ ಯೇನೆಪೋಯ ವಿಶ್ವವಿದ್ಯಾನಿಲಯದಲ್ಲಿ ಅಂತಾರಾಷ್ಟ್ರೀಯ ಶುಶ್ರೂಷಕರ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಅಥೇನಾ ನರ್ಸಿಂಗ್ ಕಾಲೇಜ್ ಪ್ರಾಂಶುಪಾಲೆ ರೆವರೆಂಡ್ ಸಿಸ್ಟರ್ ಜಸಿಂತಾ ಡಿಸೋಜ ಭಾಗವಹಿಸಿದ್ದರು. ಯೆನೆಪೋಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೆನೆಪೋಯ ವಿ.ವಿ ಉಪಕುಲಪತಿ ಡಾ ಪಿ ಚಂದ್ರಮೋಹನ್, ಪರೀಕ್ಷೆ ನಿಯಂತ್ರಣಾಧಿಕಾರಿ ಪ್ರೊ ಕೆ.ಪಿ. ಜಯರಾಜನ್, ಯೇನೆಪೋಯ ನರ್ಸಿಂಗ್ ಕಾಲೇಜ್ ಪ್ರಾಂಶುಪಾಲೆ ಡಾ. ಆಶಾ ಪಿ ಶೆಟ್ಟಿ, ಯೇನೆಪೋಯ ನರ್ಸಿಂಗ್ ಶಾಲೆ ಪ್ರಾಂಶುಪಾಲೆ ಮಂಜುಷ ಎ.ಪಿ, ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶುಶ್ರೂಷಾ ಸೇವೆಗಳ ಇಲಾಖೆ ಸೂಪರಿಂಟೆಂಡೆಂಟ್ ಭಾನುಮತಿ ಉಪಸ್ಥಿತರಿದ್ದರು. ಈ ಸಂದರ್ಭ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು. ಪರಿಷ್ಕೃತ ನಿಯಮಗಳು ಮತ್ತು ಶಾಸನಗಳು ಹಾಗೂ ಪಠ್ಯಗಳನ್ನೊಳಗೊಂಡ ಕೈಪಿಡಿಯನ್ನು ಬಿಡುಗಡೆಮಾಡಲಾಯಿತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದಾದಿಯರು ತಮ್ಮ ಬಗ್ಗೆ ಅಪಾರ ನಿರೀಕ್ಷೆಯೊಂದಿಗೆ ಬರುವ ರೋಗಿಗಳ ಸಂಪೂರ್ಣ ಆರೈಕೆಯನ್ನು ಮಾನವೀಯತೆಯಿಂದ ಮಾಡಬೇಕು ಎಂದು ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಅಧ್ಯಕ್ಷ ಕಣಚೂರು ಮೋನು ಹೇಳಿದರು. ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ಗುರುವಾರ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ ಅಂಗವಾಗಿ ನಡೆದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ. ರೋಗಿಗಳಿಗೂ ಚಿಕಿತ್ಸಾ ವಿಧಾನಗಳ ಕುರಿತಂತೆ ಜಾಗೃತಿ, ಮಾಹಿತಿ ಕೊರತೆ ಇದೆ. ಇದನ್ನು ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಿ ರೋಗಿಗಳ ಆರೈಕೆ ನಡೆಸುವ ದಾದಿಯರ ಕಾರ್ಯ ದೇವರು ಮೆಚ್ಚುವ ಕೆಲಸವಾಗಿದೆ ಎಂದರು. ಈ ಸಂದರ್ಭ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್, ಸಹಾದಾ ರೆಹಮಾನ್, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ಡೀನ್ ಪ್ರೊ. ಡಾ. ಖಾಜಾ ನಾಸಿರುದ್ಧೀನ್, ವೈದ್ಯಕೀಯ ಸುಪರಿಟೆಂಡೆಂಟ್ ಡಾ. ದೇವಿ ಪ್ರಸಾದ್, ಮುಖ್ಯ ವೈದ್ಯಕೀಯ ಅಧಿಕಾರಿ…

Read More