ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು :ರಕ್ತದಾನ ಶಿಬಿರ ಉತ್ತಮವಾದ ದಾನವಾಗಿದ್ದು, ಇದಕ್ಕೆ ಇಸ್ಲಾಂ ಮಹತ್ತರವಾದ ಸ್ಥಾನ ಕಲ್ಪಿಸಿದೆ. ರೋಗಿಗಳ ರಕ್ಷಣೆಗಾಗಿ ಉಚಿತ ರಕ್ತದಾನ ಮಾಡಿ ಸಹಕರಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕೆಂದು ಎಸ್ಎಸ್ಎಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಉಮ್ಮರ್ ಅಹ್ಸನಿ ಹೇಳಿದರು. ಅವರು ಎಸ್ಎಸ್ಎಫ್ ಉಳ್ಳಾಲ ಡಿವಿಷನ್ ಮತ್ತು ಕೆಎಂಸಿ ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ಎಸ್ಎಸ್ಎಫ್ ತಲಪಾಡಿ, ಉಳ್ಳಾಲ, ತೊಕ್ಕೊಟ್ಟು ಸೆಕ್ಟರ್ ಇದರ ಸಹಯೋಗದೊಂದಿಗೆ ಭಾನುವಾರ ತೊಕ್ಕೊಟ್ಟುವಿನಲ್ಲಿ ನಡೆದ ಉಚಿತ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಸಿಎಫ್ ಸದಸ್ಯ ಮಹಮಗಮದ್ ರಫೀಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಉಳ್ಳಾಲ ನಗರ ಸಭೆ ಕೌನ್ಸಿಲ್ರ್ ಉಸ್ಮಾನ್ ಕಲ್ಲಾಪು, ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ,ಎಸ್.ಎ. ಹಕೀಂ ಮದನಿ, ಶಕೀಲ್ ತುಂಬೆಜ, ಫಾರೂಕ್ ಸಖಾಫಿ, ಇಲ್ಯಾಸ್ ಸಖಾಫಿ, ಸೆಯ್ಯದ್ ಖುಬೈಬ್ ತಂಙಳ್, ಡಾ. ಅಕ್ಷಯ್, ಭವಾನಿಶಂಕರ್, ಎಸ್ಎಸ್ಎಫ್ ತೊಕ್ಕೊಟು ಸೆಕ್ಟರ್ ರಿಲೀಫ್ ಸರ್ವಿಸ್ ಅಧ್ಯಕ್ಷ ಅಲ್ತಾಫ್ ಕುಂಪಲ, ಸಮೀರ್ ಸೇವಂತಿಗುಡ್ಡೆ, ಮುಸ್ತಫಾ ಝುಹ್ರಿ ಮೊದಲಾದವರು ಉಪಸ್ಥಿತರಿದ್ದರು.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೂ ಅವರು ಮಾಡಿದ ಕಾರ್ಯ ಫಲಪ್ರದವಾಗಿಲ್ಲ. ಪ್ರಸಕ್ತ ಚುನಾವಣೆಯಲ್ಲಿ ಮುಡಿಪು ಭಾಗದಲ್ಲಿ ಬಹಳಷ್ಟು ಗ್ರಾಮಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಗೆದ್ದು ಬಂದಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಉಮ್ಮರ್ ಪಜೀರ್ ಹೇಳಿದರು. ಅವರು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹೂಹಾಕುವ ಕಲ್ಲುವಿನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಗೌರವಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಡಿಪು ಜಿ.ಪಂ. ಸದಸ್ಯ ಸಂತೋಷ್ ಕುಮಾರ್ ಅವರು ಕಾಂಗ್ರೆಸ್ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಲು ತೆರೆಮೆರೆಯ ಪ್ರಯತ್ನ ನಡೆಸಿದರು. ಅವರು ಕೆಲವು ಸವಾಲುಗಳನ್ನು ಕಾಂಗ್ರಸ್ಗರಿಗೆ ಹಾಕಿದ್ದರು. ಅವರ ಸವಾಲಿಗೆ ತಕ್ಕ ಉತ್ತರ ಕಾಂಗ್ರೆಸ್ ನೀಡಿದೆ. ಅವರ ಪ್ರಯತ್ನ ಬಾಳೆಪುಣಿ, ಬೆಳ್ಮ ಮತ್ತು ಇನ್ನಿತರ ಕೆಲವು ಗ್ರಾಮಗಳಲ್ಲಿ ಈ ಪ್ರಯತ್ನ ಪೂರ್ಣಮಟ್ಟದ ಪರಿಣಾಮ ಬೀರಿಲ್ಲ. ನಿರೀಕ್ಷೆಗಿಂತಲೂ ಜಾಸ್ತಿ ಗೆಲುವು ಪಡೆದಿದ್ದೇವೆ. ಪಜೀರ್ ಬಿಜೆಪಿ ಮುಕ್ತ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ : ಕಲಿಕಾ ಕೊಠಡಿಯಲ್ಲಿರುವ ವಿದ್ಯಾರ್ಥಿಗಳು ಬಲಿಷ್ಠರಾಗಿ ಅವರು ದೇಶದ ಸಂಪತ್ತಾದಾಗ ಭಾರತ ಸದೃಡವಾಗಿ ವಿಶ್ವದಲ್ಲಿ ಪ್ರಥಮ ಸ್ಥಾನಕ್ಕೆ ಏರಲು ಸಾಧ್ಯವಿದ್ದು, ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ, ವಿಜ್ಞಾನ ಹೆಚ್ಚಿಸುವ ಓಪನ್ಹೌಸ್ಗಳಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳನ್ನು ಬಲಯುತರನ್ನಾಗಿ ಮಾಡಲು ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪರಿಚಯಿಸುವ ಉದ್ಧೇಶದಿಂದ ಕ್ಯಾಂಪಸ್ ನೋಡ ಬನ್ನಿ ಎನ್ನುವ `ಓಪನ್ ಹೌಸ್’ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾನಿಲಯ ದೇಶದಲ್ಲಿ ಉತ್ತಮ ವಿ.ವಿ. ಎನ್ನುವ ಹೆಸರು ಗಳಿಸುತ್ತಿದ್ದು, ಸಂಶೋಧನೆ ವಿಚಾರದಲ್ಲಿ ದೇಶದ ಟಾಪ್ 50 ವಿ.ವಿ.ಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ ದೇಶದ 25 ವಿವಿಗಳ ಪಟ್ಟಿಯಲ್ಲಿ ಮಂಗಳೂರು ವಿ.ವಿ.ಬರಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ. ಭೈರಪ್ಪ ಮಾತನಾಡಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಎಲ್ಲ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ ಹಳೆ ವಿದ್ಯಾರ್ಥಿ ಸಂಘ (ಮಂಗಳಾ ಅಲ್ಯುಮಿನಿ ಅಸೋಸೀಯೇಶನ್(ಮಾ) ಕರ್ನಾಟಕ ಬ್ಯಾಂಕ್ನ ಸಹಭಾಗಿತ್ವದಲ್ಲಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಬಸ್ ನಿಲ್ದಾಣ ಬಳಿ ನೂತನವಾಗಿ ಕರ್ನಾಟಕ ಬ್ಯಾಂಕ್ನ ಸ್ಥಾಪಕ ಕೆ.ಎಸ್.ಎನ್. ಅಡಿಗ ಅವರ ಸ್ಮರಣಾಥವಾಗಿ ನಿರ್ಮಿಸಿದ ಸುಸಜ್ಜಿತವಾದ ಬಸ್ ತಂಗುದಾಣ ಮತ್ತು ವಿಶ್ವವಿದ್ಯಾನಿಲಯದ ಮಾಹಿತಿ ನೀಡುವ ಹೆಲ್ಪ್ ಡೆಸ್ಕ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು. ನೂತನ ಬಸ್ಸು ತಂಗುದಾಣಕ್ಕೆ ಚಾಲನೆ ನೀಡಿದ ಸಚಿವ ಯು.ಟಿ.ಖಾದರ್ ಮಾತನಾಡಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಜನಸಾಮಾನ್ಯರಿಗೂ ಸಹಾಯಕವಾದ ಈ ಮಾದರಿ ಬಸ್ ನಿಲ್ದಾಣದ ನಿರ್ಮಾಣ ಕಾರ್ಯ ಶ್ಲಾಘನೀಯವಾಗಿದ್ದು, ಕರ್ಣಾಟಕ ಬ್ಯಾಂಕ್ನಂತೆ ಇತರ ಸಂಘ ಸಂಸ್ಥೆಗಳು ವಿಶ್ವವಿದ್ಯಾನಿಲಯ ಜೊತೆಗೂಡಿ ಕಾರ್ಯ ನಿರ್ವಹಿಸಿದಾಗ ವಿಶ್ವವಿದ್ಯಾನಿಲಯ ಇನ್ನಷ್ಟು ಯಶಸ್ವಿಯಾಗಲು ಸಾಧ್ಯ ಎಂದರು. ಬಸ್ಸು ತಂಗುದಾಣದ ಫಲಕ ಅನಾವರಣಗೊಳಿಸಿ ಮಾತನಾಡಿದ ಕರ್ಣಾಟಕ ಬ್ಯಾಂಕ್ನ ಆಡಳಿತ ನಿರ್ದೇಶಕ ಜಯರಾಮ ಭಟ್ ಮಾತನಾಡಿ ಮಂಗಳೂರು ವಿಶ್ವವಿದ್ಯಾನಿಲಯದ ಮೂಲಭೂತ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಜಿಲ್ಲೆಯಲ್ಲಿ ತುಳು ಭಾಷೆ ಆಡುಭಾಷೆಯಾದರೆ, ತುಳು ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ತುಳುವರ ಮನ ಗೆಲ್ಲುತ್ತಿದೆ. ಆದರೆ ತುಳು ಲಿಪಿಗೆ ಈವರಗೆ ಯಾವುದೇ ಮಾನ್ಯತೆ ದೊರೆತಿಲ್ಲ. ಆದರೆ ಅದಕ್ಕೂ ಮನ್ನಣೆ ಸಿಗಬೇಕು ಅನ್ನುವ ದೃಷ್ಟಿಯನ್ನು ಇಟ್ಟುಕೊಂಡು ಹಲವು ರೀತಿಯಲ್ಲಿ ಶ್ರಮಿಸುತ್ತಿರುವ ಉಳ್ಳಾಲದ ನಿವಾಸಿಯೋರ್ವರು ತುಳು ಲಿಪಿಯಲ್ಲಿ ತಮ್ಮ ಬೈಕಿನ ನಂಬರ್ ಪ್ಲೇಟನ್ನು ಹಾಕುವ ಮೂಲಕ ತುಳು ಲಿಪಿಯಲ್ಲಿನ ಅಂಕಿ ಅಂಶದ ಬಗ್ಗೆಯೂ ಪರಿಚಯ ಮಾಡಲು ಹೊರಟಿದ್ದಾರೆ. ಉಳ್ಳಾಲಬೈಲು ನಿವಾಸಿ ಜಿ.ವಿ.ಸುಧಾಕರ್ ಉಳ್ಳಾಲ್ ಅವರು ತಮ್ಮ ಬೈಕಿನ ನೋಂದಾವಣಿ ಸಂಖ್ಯೆಯನ್ನು ತುಳು ಅಂಕಿ ಲಿಪಿಯಲ್ಲಿ ಹಾಕಿದ್ದಾರೆ. ತುಳು ಭಾಷೆ ಅಧ:ಪತನಕ್ಕೆ ಹೋಗಿದೆ. ಇತ್ತೀಚೆಗೆ ನಡೆದಂತಹ ವಿಶ್ವ ತುಳುವೆರೆ ಸಮ್ಮೇಳನದಂತಹ ಕಾರ್ಯಕ್ರಮದಿಂದಾಗಿ ತುಳು ಭಾಷೆಯ ಲಿಪಿಯೂ ಇರುವುದರ ಪರಿಚಯ ಜನರಿಗೆ ಆಗಿತ್ತು. ಅಲ್ಲದೆ ಲಿಪಿಯ ಪರಿಚಯ ಯುವಪೀಳಿಗೆಗೆ ಆಗಬೇಕು ಅನ್ನುವ ದೃಷ್ಟಿಯನ್ನು ಇಟ್ಟುಕೊಂಡು ತುಳು ಪಠ್ಯಪುಸ್ತಕವನ್ನು ಜಿ.ವಿ. ಸುಧಾಕರ್ ಅವರು ಬಿಡುಗಡೆಗೊಳಿಸಿ, ಅದರ ಕಲಿಕಾ ತರಬೇತಿಯನ್ನು ಬೆಂಗಳೂರು, ಕಾರ್ಕಳ,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ವಿಜೇತ ಕಾರ್ಯಕರ್ತರು ಗ್ರಾಮದ ಏಳಿಗೆಯನ್ನು ಮಾಡುವುದರ ಜತೆಗೆ ಪಕ್ಷದ ಹೆಸರಿಗೆ ಕೀರ್ತಿ ತರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಅವರು ಅಸೈಗೋಳಿ ಲಯನ್ಸ್ ಕ್ಲಬ್ ನಲ್ಲಿ ಶುಕ್ರವಾರ ಜರಗಿದ ಗ್ರಾಮ ಪಂಚಾಯಿತಿ ಚುನಾವಣೆ ವಿಜೇತರ ಹಾಗೂ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮದ ಜನರು ಅಭಿವೃದ್ಧಿಯ ಉದ್ದೇಶವನ್ನು ಇಟ್ಟುಕೊಂಡು ಪಕ್ಷದ ಕಾರ್ಯಕರ್ತರನ್ನು ಚುನಾಯಿಸಿದ್ದಾರೆ. ಅವರ ವಿಶ್ವಾಸವನ್ನು ಉಳಿಸುವ ಕಾರ್ಯ ಜಯಗಳಿಸಿದ ಕಾರ್ಯಕರ್ತರಿಂದ ಆಗಬೇಕಿದೆ. ಜನವಿರೋಧಿಯಾಗಿರುವ ಕೇಂದ್ರ ಸರಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವತಿಯಿಂದ ಹಕ್ಕೊತ್ತಾಯ ನಡೆಯಲಿದ್ದು, ಅದಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಮಾತನಾಡಿ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಪಕ್ಷದಲ್ಲಿದ್ದವರು, ಪಕ್ಷ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ಅಂತಹವರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಧಿಕೃತರಿಗೆ ದೂರು ನೀಡಲಾಗುವುದು ಹಾಗೂ ಜಯಗಳಿಸಿದ ಕಾರ್ಯಕರ್ತರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಿತ್ತಾಡದೆ, ಜನರ ಇಚ್ಛೆಯಂತೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ 1. ರಮಣಿ ಸೋಮೇಶ್ವರ, 2.ರಾಜೇಶ್ ಎ. ಉಚ್ಚಿಲ್, 3.ಅಜಿತ್ ಶೆಟ್ಟಿ ಸೋಮೇಶ್ವರ, 4. ಅರುಣ್ ಕುಮಾರ್ ಬೀರಿ, 5. ಅಶೋಕ್ ಕುಂಪಲ, 6. ಅಶ್ರಫ್ ಕಾಟುಂಗರೆಗುಡ್ಡೆ, 7. ಬಶೀರ್ ಮುಂಡೋಳಿ, 8. ದೀಪಕ್ ಪಿಲಾರ್, 9. ದೇವಾನಂದ ಶೆಟ್ಟಿ ಆಶ್ರಯಕೊಲನಿ, 10. ಗಂಗಾಧರ್ ಪಿಲಾರ್, 11. ಗೋಪಾಲ ಕೃಷ್ಣ ಸೋಮೇಶ್ವರ, 12. ಗೋಪಾಲ್ ಕೃಷ್ಣ ಕುಂಪಲ 13. ಎಚ್. ಪ್ರಕಾಶ್ ಕೊಲ್ಯ, 14. ಹರಿಪ್ರಸಾದ್ ಶೆಟ್ಟಿ ಕುಂಪಲ, 15. ಹರೀಶ್ ಕುಂಪಲ, 16. ಹರೀಶ್ಚಂದ್ರ ಅಡ್ಕ, 17. ಹೇಮಲತಾ ಚಿತ್ರಾಂಜಲಿ ನಗರ, 18. ಯು.ಎನ್. ಇಸ್ಮಾಯಿಲ್ ಉಚ್ಚಿಲ, 19. ಕಮಲ ಬಗಂಬಿಲ, 20. ಕಿಶೋರ್ ಕುಂಪಲ, 21. ಕುಮುದಾಕ್ಷಿ ಆಶ್ರಯಕೊಲನಿ, 22. ಲೋಲಾಕ್ಷಿ ಸಂಕೋಳಿಗೆ, 23. ಮನೋಜ್ ಕಟ್ಟೆಮನೆ ಕುಂಪಲ, 24. ನವೀನ್ ಕನೀರುತೋಟ, 25. ಪ್ರೇಮಾನಂದ ಪಿಲಾರ್, 26. ಪುರುಷೋತ್ತಮ ಶೆಟ್ಟಿ ಪಿಲಾರ್, 27. ರಫೀಕ್ ಕಾಟುಂಗರೆಗುಡ್ಡೆ, 28. ರಮೇಶ್ ಲಕ್ಷ್ಮಿಗುಡ್ಡೆ, 29.…
ವರದಿ: ಆರೀಫ್ ಕಲ್ಕಟ್ಟ ಉಳ್ಳಾಲ: ತಾಜುಲ್ ಉಲಮಾ ರಿಲೀಫ್ ಸರ್ವಿಸ್ ಬೆಳ್ಮ ಇದರ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ರೆಂಜಾಡಿ ಇಸ್ಲಾಮಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ರೆಂಜಾಡಿ ಇಸ್ಲಾಮಿಯ ಹಿರಿಯ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಲಯಿತು.ರೆಂಜಾಡಿ ಇಸ್ಲಾಮಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೊಪಾಧ್ಯಯ ಅಬ್ದುಲ್ ಕುಂಞ ಯು, ತಾಜುಲ್ ಉಲಮಾ ರಿಲೀಫ್ ಸರ್ವಿಸ್ ಬೆಳ್ಮ ಇದರ ಸದಸ್ಯರಾದ ಲತ್ತೀಫ್ ಎಮ್.ಎಲ್.ವಿ, ಸತ್ತಾರ್ ಬಿ.ಎಲ್.ಕೆ, ಕಾರ್ಯದರ್ಶಿ ಮೊಹಮ್ಮದ್ ಸಫೀರ್ ಯು.ಎ ಉಪಸ್ಥಿತರಿದ್ದರು.
ವರದಿ: ಆರೀಫ್ ಕಲ್ಕಟ್ಟ ಉಳ್ಳಾಲ: ಉಳ್ಳಾಲ ಅಳೇಕಲದ ಸುನ್ನೀ ವಿದ್ಯಾರ್ಥಿ ಸಂಘ (ಎಸ್ವಿಎಸ್) ಇದರ ವತಿಯಿಂದ ಉಳ್ಳಾಲ ಹಾಗೂ ಮಂಜನಾಡಿ ಪರಿಸರದ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಅಳೇಕಲ ಸುನ್ನೀ ಸೆಂಟರ್ನಲ್ಲಿ ನಡೆಯಿತು. ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು. ಎಸ್.ವಿ.ಎಸ್ ಅಧ್ಯಕ್ಷ ಸಿ.ಎಮ್ ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ.ಎಸ್ ಅಳೇಕಲ ಉಪಾಧ್ಯಕ್ಷ ಫಾಝಿಲ್ ಅಳೇಕಲ, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಪ್ರ.ಕಾರ್ಯರ್ದರ್ಶಿ ಜಾಫರ್ ಯು.ಎಸ್ , ಎಸ್ಸೆಸ್ಸೆಫ್ ಅಳೇಕಲ ಶಾಖೆಯ ಅಧ್ಯಕ್ಷ ಸಂಶುದ್ದೀನ್ ಜಝೀರ್, ಎಸ್ಸೆಸ್ಸೆಫ್ ಅಳೇಕಲ ಶಾಖೆಯ ಕೋಶಾಧಿಕಾರಿ ಜಂಶೀರ್ ಅಳೇಕಲ, ಅನ್ಸಾರ್ ಅಳೇಕಲ, ಸಿ.ಎಮ್ ಫಝಲ್, ಅಬ್ದುಲ್ ಸತ್ತಾರ್ ಮೇಲಂಗಡಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ಆರೀಫ್ ಕಲ್ಕಟ್ಟ ಉಳ್ಳಾಲ : ಅಳೇಕಲ ತಾಜುಲ್ ಉಲಮಾ ಸೆಂಟರ್ನಲ್ಲಿ ಮಾಸಿಕ ಸಿ.ಎಂ.ಮಡವೂರು ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮವು ಇತ್ತೀಚೆಗೆ ಸಯ್ಯಿದ್ ಅತಾವುಲ್ಲಾ ತಂಙಳ್ ಉದ್ಯಾವರ ನೇತೃತ್ವದಲ್ಲಿ ನಡೆಯಿತು. ಅಬೂ ಝಿಯಾದ್ ಮದನಿ ಪಟ್ಟಾಂಬಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಯು.ಎಸ್.ಹಂಝ, ತಾಜುಲ್ ಉಲಮಾ ಸೆಂಟರ್ನ ಗೌರಾವಾಧ್ಯಕ್ಷ ಜಲಾಲುದ್ದೀನ್ ತಂಙಳ್, ತಾಜುಲ್ ಉಲಮಾ ಸೆಂಟರ್ನ ಅಧ್ಯಕ್ಷ ಅಬ್ದುಲ್ ಲತೀಫ್ ಮದನಿ, ಪ್ರ.ಕಾರ್ಯದರ್ಶಿ ಜಂಶೀರ್ ಅಳೇಕಲ, ಸಿದ್ದೀಕ್ ಹಳೇಕೋಟೆ, ನಝೀರ್ ಅಳೇಕಲ, ಶಮೀರ್ ಅಳೇಕಲ, ಇರ್ಫಾನ್ ಅಳೇಕಲ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

