Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಂಬ್ಲಮೊಗರು: ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ರಫೀಕ್ ಅಂಬ್ಲಮೊಗರು ಮತ್ತು ಉಪಾಧ್ಯಕ್ಷೆಯಾಗಿ ಯಶೋಧ ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತ್ನಲ್ಲಿ ೧೩ ಸದಸ್ಯರಲ್ಲಿ ೧೦ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, ೩ ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ರಫೀಕ್ ಈ ಹಿಂದೆ ಅಂಬ್ಲಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಯಶೋಧ ಗ್ರಾಮ ಪಂಚಾಯತ್ಗೆ ಪ್ರಥಮ ಬಾರಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಮಹಮ್ಮದ್ ಮುಸ್ತಾಫ, ಮಾಜಿ ಸದಸ್ಯ ಸುದರ್ಶನ್ ಶೆಟ್ಟಿ, ರವಿರಾಜ್ ರೈ, ಕರುಣಾಕರ ಪೂಜಾರಿ, ಲಕ್ಷ್ಮಿ ನರಸಿಂಹ ದೇವಸ್ಥಾನ ಮುಖ್ಯಸ್ಥ ಪದ್ಮನಾಭ ರೈ, ಕುಂಡೂರು ಜುಮಾ ಮಸೀದಿ ಅಧ್ಯಕ್ಷ ಶರೀಫ್, ಪಂಚಾಯತ್ ಮಾಜಿ ಅದ್ಯಕ್ಷ ವಿಠಲ ಶೆಟ್ಟಿ, ಸೀತಾರಾಮ ಸಾಲ್ಯಾನ್, ಬಿಲ್ಲವ ಸಂಘದ ಆಂಬ್ಲಮೊಗರು ಘಟಕದ ರವೀಂದ್ರ ಕುಕ್ಯಾನ್, ಪಂಚಾಯಿತಿ ಸದಸ್ಯರಾದ ಮನೋಹರ್, ಖಾದರ್, ಇಕ್ಬಾಲ್ ಎಸ್.ಎಂ. ಸಲೀಂ ಮತ್ತಿತರರು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುನ್ನೂರು : ಅತಂತ್ರ ಸ್ಥಿತಿಯಲ್ಲಿದ್ದ ಮುನ್ನೂರು ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ‘ಕೈ’ ಕೊಟ್ಟ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ತನ್ನದಾಗಿಸುವ ಮೂಲಕ ಪ್ರಾಬಲ್ಯವನ್ನು ಮೆರೆದಿದೆ. ಬಿಜೆಪಿ ಬೆಂಬಲಿತ ಸದಸ್ಯರಾದ ರೂಪಾ.ಡಿ.ಶೆಟ್ಟಿ ಅಧ್ಯಕ್ಷರಾಗಿ , ಹರೀಶ್ ಭಂಡಾರಬೈಲು ಉಪಾಧ್ಯಕ್ಷರಾಗಿ ಜಯಗಳಿಸಿದ್ದಾರೆ. ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ೧೦ ಬಿಜೆಪಿ ಹಾಗೂ ೧೦ ಕಾಂಗ್ರೆಸ್ ಹಾಗೂ ೩ ಸಿಪಿಐಎಂ ಬೆಂಬಲಿತರು ಜಯಗಳಿಸಿದ್ದರು. ಸಿಪಿಐಎಂನ ಮೂವರು ಸದಸ್ಯರು ನಿರ್ಣಾಯಕರಾಗಿದ್ದರು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ರೂಪಾ.ಡಿ ಶೆಟ್ಟಿ ೨೩ ರಲ್ಲಿ ೧೨ ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ಪುಷ್ಪಲತಾ ಅಂಚನ್ ೧೧ ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಹರೀಶ್ ಭಂಡಾರಬೈಲು ೧೨ ಮತಗಳನ್ನು ಪಡೆದು ವಿಜಯಶಾಲಿಯಾದರೆ, ಕಾಂಗ್ರೆಸ್ ಬೆಂಬಲಿತ ಸದಸ್ಯೆ ಇಜಾಝ್ ಮದನಿನಗರ ೧೧ ಮತಗಳನ್ನು ಪಡೆದು ಸೋಲನ್ನಪ್ಪಿದ್ದರು. ಅನಿರೀಕ್ಷಿತ ಗೆಲುವು: ಅತಂತ್ರ ಸ್ಥಿತಿಯಲ್ಲಿದ್ದ ಮುನ್ನೂರು ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಗೆಲ್ಲುವ ಸೂಚನೆಯಿತ್ತು. ಚುನಾವಣೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಜಿಪ ಗ್ರಾಮದಲ್ಲಿ ಎಸ್‍ಡಿಪಿಐ- ಬಿಜೆಪಿ ನಡುವೆ ಮೈತ್ರಿ ನಡೆದಿದೆ ಅನ್ನುವ ಅಪಪ್ರಚಾರವನ್ನು sಮಾಡುತ್ತಿರುವ ಕೋಮುವಾದಿ ಪಕ್ಷ ಮತ್ತು ಜಾತ್ಯಾತೀತ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಸೋಲಿನಿಂದ ಹತಾಶೆಗೊಂಡು ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಸಜಿಪ ಗ್ರಾಮ ಪಂಚಾಯಿತಿ ಎಸ್ ಡಿಪಿಐ ಬೆಂಬಲಿತ ನೂತನ ಅಧ್ಯಕ್ಷ ನಾಸಿರ್ ಸಜಿಪ ಆರೋಪಿಸಿದ್ದಾರೆ. ತೊಕ್ಕೊಟ್ಟು ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಆರು ವರ್ಷಗಳ ಹಿಂದೆ ಹುಟ್ಟು ಪಡೆದ ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಜಿಲ್ಲೆಯಲ್ಲಿ 274 ಕಡೆಗಳಲ್ಲಿ ಸ್ಪರ್ಧಿಸಿ 50 ಕಡೆಗಳಲ್ಲಿ ವಿಜಯ ಸಾಧಿಸಿದ್ದಾರೆ. ಕೆಲ ಕಡೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು ಎಸ್ ಡಿಪಿಐ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಬಹಳ ಕೆಲಸವನ್ನು ನಡೆಸಿದ್ದಾರೆ. ಸಜಿಪ ಗ್ರಾ.ಪಂ.ನಲ್ಲಿ 15 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಎಸ್ ಡಿಪಿಐ ಪಡೆದುಕೊಂಡರೆ, ಕಾಂಗ್ರೆಸ್ 5 ಮತ್ತು ಬಿಜೆಪಿ 3 ಸ್ಥಾನಗಳಲ್ಲಿ ಜಯಗಳಿಸಿದೆ.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ : ೨೦೧೪-೧೫ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಸೋಮೇಶ್ವರ ಉಚ್ಚಿಲದ ಸಂಕೊಳಿಗೆ ಭಗವತೀ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಅಖಿಲ್ ಇವರು ೧೯ ಅಂಕ ಹೆಚ್ಚುವರಿಯಾಗಿ ಪಡೆದುಕೊಂಡಿದ್ದಾರೆ. ಅಖಿಲ್ ಗೆ ಈ ಮೊದಲು ಸಮಾಜವಿಜ್ಞಾನದಲ್ಲಿ ೫೪ ಅಂಕ ಲಭಿಸಿದ್ದು, ಮರುಮೌಲ್ಯಮಾಪನದ ನಂತರ ೧೯ ಅಂಕ ಪಡೆದುಕೊಂಡು ಒಟ್ಟು ೭೩ ಅಂಕವನ್ನು ಪಡೆದುಕೊಳ್ಳುವ ಮೂಲಕ ೫೮೩ರ ಬದಲಾಗಿ ೬೦೨ ಒಟ್ಟು ಅಂಕವನ್ನು ಗಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ : ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಯು ತನ್ನದಾಗಿಸಿಕೊಂಡಿದ್ದು, ಹಿಂದೆ ಉಪಾಧ್ಯಕ್ಷರಾಗಿದ್ದ ಬಿಜೆಪಿ ಬೆಂಬಲಿತ ಸುರೇಶ್ ಆಳ್ವ ಅಧ್ಯಕ್ಷರಾಗಿ ಹಾಗೂ ಅದೇ ಪಕ್ಷದ ಜಯಲಕ್ಷ್ಮೀ.ಟಿ. ಉಪಾಧ್ಯಕ್ಷೆಯಾಗಿ ಬುಧವಾರ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡರು. ತಲಪಾಡಿ ಪಂ.ಗೆ ನಡೆದ ಚುನಾವಣೆಯಲ್ಲಿ ೨೪ ವಾರ್ಡುಗಳಲ್ಲಿ ೧೨ ಬಿಜೆಪಿ ಬೆಂಬಲಿತ, ೯ ಕಾಂಗ್ರೆಸ್ ಬೆಂಬಲಿತ ಹಾಗೂ ೩ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು. ಬುಧವಾರ ಅಧ್ಯಕ್ಷ ಹುದ್ದೆಗೆ ನಡೆದ ಸುರೇಶ್ ಆಳ್ವ ಅವರಿಗೆ ಕಾಂಗ್ರೆಸ್ನ ವೈಭವ್ ಶೆಟ್ಟಿ ಎದುರಾಳಿಯಾಗಿ ನಿಂತಿದ್ದರು. ಸುರೇಶ್ ಅವರು ೧೪ ಸದಸ್ಯರ ಬೆಂಬಲ ಪಡೆದುಕೊಂಡು ಜಯಗಳಿಸಿದರೆ , ವೈಭವ್ ಶೆಟ್ಟಿ ೧೦ ಮಂದಿಯ ಬೆಂಬಲವನ್ನು ಪಡೆದುಕೊಂಡರು. ವಿಶೇಷವೆಂದರೆ ಮೂವರು ಪಕ್ಷೇತರರಲ್ಲಿ ಇಬ್ಬರು ಕಾಂಗ್ರೆಸ್ ಪರವಾಗಿದ್ದರೆ, ಓರ್ವ ಮಾತ್ರ ಬಿಜೆಪಿ ಪರವಾಗಿದ್ದರು. ಆದರೆ ಕಾಂಗ್ರೆಸ್ನ ಓರ್ವ ಸದಸ್ಯರು ಅಡ್ಡ ಮತ ಚಲಾಯಿಸಿದ ಪರಿಣಾಮ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಹಿನ್ನೆಡೆಯಾಯಿತು. ಉಪಾಧ್ಯಕ್ಷೆ ಸ್ಥಾನಕ್ಕೆ ಜಯಲಕ್ಷ್ಮೀ.ಟಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವೈದ್ಯಕೀಯ ಸೇವೆಯುದ್ದಕ್ಕೂ ಮಾನವೀಯತೆಯ ಮೌಲ್ಯವನ್ನು ಸಾರಿದ ಡಾ.ಬಿ.ಸಿ.ರಾಯ್ ಅವರ ಕಾರ್ಯವೈಖರಿ ಎಲ್ಲಾ ವೈದ್ಯರಿಗೂ ಮಾದರಿ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಡಾ.ಎಂ.ಶಾಂತಾರಾಮ ಶೆಟ್ಟಿ ಹೇಳಿದ್ದಾರೆ. ಡಾ. ಬಿ.ಸಿ.ರಾಯ್ ಜನ್ಮ ದಿನದ ಪ್ರಯುಕ್ತ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಸ್ಪತ್ರೆ ಸೆಮಿನಾರ್ ಹಾಲ್ನಲ್ಲಿ ಬುಧವಾರ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೈದ್ಯನಾಗಿದ್ದುಕೊಂಡು ರಾಜಕೀಯ ನೇತಾರನಾಗಿದ್ದ ಡಾ.ಬಿ.ಸಿ.ರಾಯ್ ಎಲ್ಲಾ ಕ್ಷೇತ್ರಗಳಲ್ಲಿ ಜ್ಞಾನ ವೃದ್ಧಿಸಿಕೊಂಡವರು. ನ್ಯಾಯಯುತವಾಗಿ ಬಾಳಿದ ಅವರು ಜನರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿಯೂ ಮಹತ್ತರ ಪಾತ್ರವನ್ನು ವಹಿಸಿದ್ದರು. ಅವರನ್ನು ಮಾದರಿಯಾಗಿಸಿಕೊಂಡು ವೈದ್ಯರಾದರು ತಾವು ನೀಡುವ ಸೇವೆಯಿಂದ ರೋಗಿ ಗುಣಮುಖನಾದರೆ ಅವರಿಗೆ ಅದರಿಂದ ಸಿಗುವ ಮಾನಸಿಕ ನೆಮ್ಮದಿ ಹಾಗೂ ಶಾಂತಿ ಬೇರೆ ಎಲ್ಲ ಸಂಪತ್ತಿಗಿಂತ ದೊಡ್ಡದು ಎಂಬುದನ್ನು ಅರಿತುಕೊಳ್ಳಬೇಕಿದೆ. ವೈದ್ಯಕೀಯ ಲೋಕದಲ್ಲಿ ರೋಗಿಗಳಿಗೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯಿಂದ ವೈದ್ಯ ದಿನಾಚರಣೆಯಲ್ಲಿ ಸನ್ಮಾನಗೊಂಡ ಖ್ಯಾತ ವೈದ್ಯರಾದ ಡಾ.ಡಿ.ಕೆ.ಶ್ರೀನಿವಾಸ್ ಹಾಗೂ ಫ್ಲೈಟ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಸಮೀಪದ ಜೋಡುಕಟ್ಟೆ ಎಂಬಲ್ಲಿ ಹಾರ್ಡ್‍ವೇರ್ ಅಂಗಡಿಯೊಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 35 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಹರೇಕಳ ಕಿಸಾನ್‍ನಗರ ನಿವಾಸಿ ಸಾಹುಲ್ ಹಮೀದ್ ಎಂಬವರಿಗೆ ಸೇರಿದ ಹಾರ್ಡ್‍ವೇರ್ ಅಂಗಡಿ ಬೆಂಕಿಗೆ ಆಹುತಿಯಾಗಿದ್ದು, ಬೆಂಕಿಗೆ ಕಾರಣಗಳು ತಿಳಿದು ಬಂದಿಲ್ಲ. ಬಡ ಕುಟುಂಬದಿಂದ ಬಂದಿರುವ ಸಾಹುಲ್ ಹಮೀದ್ ತನ್ನ ಸಹೋದರರೊಂದಿಗೆ ಸೇರಿ ಕಳೆದ ಎರಡು ವರ್ಷಗಳಿಂದ ಶ್ರಮ ವಹಿಸಿ ಅಂಗಡಿ ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಉತ್ತಮ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಪ್ರತೀ ದಿನ ಅಂಗಡಿ ಮುಚ್ಚುವಾಗ ಕರೆಂಟ್ ಮೈನ್ ಸ್ವಿಚ್ ಆಫ್ ಮಾಡಿ ಹೋಗುತ್ತಿದ್ದುದಾಗಿ ತಿಳಿಸಿರುವ ಅವರು ಸಾರ್ಟ್ ಸರ್ಕ್ಯುಟ್‍ನಿಂದ ಬೆಂಕಿ ಅವಘಡ ಆಗಿರುವ ಸಾದ್ಯತೆ ಇಲ್ಲ ಎಂದಿದ್ದಾರೆ. ಬುಧವಾರ ನಸುಕಿನ ವೇಳೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದವರು ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಅದಾಗಲೇ ಬೆಂಕಿಯಲ್ಲಿ ಅಂಗಡಿ ಸಂಪೂರ್ಣ ಭಸ್ಮವಾಗಿತ್ತು. ಬೆಂಕಿ ಹಚ್ಚಿರುವ ಸಾಧ್ಯತೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಬಳಿ ಸ್ಟುಡಿಯೋ, ಮೊಬೈಲ್ ಅಂಗಡಿ ಸೇರಿದಂತೆ 7 ಅಂಗಡಿಗಳಿಗೆ ಕನ್ನ ಹಾಕಿರುವ ಕಳ್ಳರು ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತನ್ನು ಕಳವುಗೈದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಲೇಡಿಸ್ ಹಾಸ್ಟೆಲ್ ಬಳಿಯ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆಸಿರುವ ಕಳ್ಳರು ಪತ್ರಿಕಾ ಛಾಯಾಗ್ರಾಹಕ ಅಪುಲ್ ಇರಾ ಅವರ ಅಮ್ಮ ಸ್ಟುಡಿಯೋದಿಂದ 2 ಲಕ್ಷ ರೂ. ಬೆಲೆ ಬಾಳುವ ಮೂರು ಎಸ್‍ಎಲ್‍ಆರ್ ಕ್ಯಾಮರ, ಸಹಲ್ ಎಂಬವರಿಗೆ ಸೇರಿದ ಮೊಬೈಲ್ ಅಂಗಡಿ ಯಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಮೊಬೈಲ್, ಚಾರ್ಜರ್‍ಗಳು, ಹರೀಶ್ ಎಂಬವರಿಗೆ ಸೇರಿದ ಮೊಬೈಲ್ ಅಂಗಡಿಯಿಂದ 20 ಸಾವಿರ ಮೌಲ್ಯದ ಮೊಬೈಲ್, ರವಿ ಜೆರಾಕ್ಸ್, ಮಹಮ್ಮದ್ ಎನ್.ಕೆ. ಅವರ ಜಿನಸು ಅಂಗಡಿ, ಸಾದಿಕ್ ಎಂಬವರ ಬೇಕರಿ,ಐಡಿಯಲ್ ಜ್ಯೂಸ್ ಸೆಂಟರ್‍ನಿಂದ ನಗದು ಹಣ ಮತ್ತು ಸಿಗರೇಟ್ ಪ್ಯಾಕೇಟ್‍ಗಳು ಕಳವಾಗಿದೆ. ಹೆಚ್ಚಿನ ಅಂಗಡಿಗಳ ಷಟರ್ ಒಡೆದು ಒಳ ನುಗ್ಗಿರುವ ಕಳ್ಳರು ಕೆಲವೆಡೆ ಬೆರಳಚ್ಚು ಗೊತ್ತಾಗದಂತೆ ಕೆಮಿಕಲ್ ಹಾಕಿರುವ…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಕೊಣಾಜೆ: ಶಾಲಾ ವಿದ್ಯಾರ್ಥಿಗಳಿಗೆ ಒಂದೆಡೆ ಪಾಠ ಪ್ರವಚನ. ಇನ್ನೊಂದೆಡೆ ಆಟದ ಮೈದಾನದಲ್ಲಿ ವಿವಿಧ ಕ್ರೀಡಾ ಚಟುವಟಿಕೆ ಇದರ ಮಧ್ಯೆ ಕೆಸರಿನ ಪಾಠದೊಂದಿಗೆ ಆಟ ಇಂತಹ ವಿನೂತನ ಕಾರ್ಯಕ್ರಮ. ಈ ಕಾರ್ಯಕ್ರಮ ಆಯೋಜಿಸಿದ್ದು ಕೊಣಾಜೆ ಸಮೀಪದ ಪರಂಡೆಯ ಕೆಸರು ತುಂಬಿದ ಗದ್ದೆಯಲ್ಲಿ . ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಹೊಸ ಹುರುಪಿನೊಂದಿಗೆ ಭಾನುವಾರ ಇಡೀ ದಿನ, ಹಗ್ಗ ಎಳೆದು, ಮಡಿಕೆ ಒಡೆದು, ಗದ್ದೆ ಪೂರ್ತಿ ಓಡಾಡಿ ಕುಣಿದು ಕುಪ್ಪಳಿಸಿದರು. ಇದು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳ ಇದರ ಸೌಜನ್ಯ ಸ್ಕೌಟ್ಸ್‍ದಳ ಮತ್ತು ಗೈಡ್ಸ್ ಕಂಪೆನಿ ಇದರ ವತಿಯಿಂದ ಕೊಣಾಜೆ ಗ್ರಾಮದ ಪರಂಡೆಯ ಯು.ಬಿ.ಎಂ.ಸಿ ಶಾಲೆಯಲ್ಲಿ ಮಂಗಳೂರು ತಾಲೂಕಿನ ವಿವಿಧ ಶಾಲೆಗಳ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಪಾರಂಪರಿಕ ಕೃಷಿ ಪ್ರಾತ್ಯಾಕ್ಷಿಕೆ, ಹಾಗೂ ವನಮಹೋತ್ಸವ, ತುಳುನಾಡ ಆಹಾರೋತ್ಸವ ಮತ್ತು ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಕಂಡು ಬಂದ ದೃಶ್ಯ ಮಂಗಳೂರು ತಾಲೂಕಿನ 12 ಶಾಲೆಗಳ ವಿದ್ಯಾರ್ಥಿಗಳು 300ಕ್ಕೂ ಹೆಚ್ಚು ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಕೊಣಾಜೆ : ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಕೊಡುವ ಪಾರಂಪರಿಕ ಕೃಷಿ ಪ್ರಾತ್ಯಾಕ್ಷಿಕೆ, ತುಳುನಾಡ ಆಹಾರೋತ್ಸವ ಮತ್ತು ಕೆಸರುಗದ್ದೆ ಕ್ರೀಡೋತ್ಸವ ಒಂದು ಉತ್ತಮ ಕಾರ್ಯವಾಗಿದ್ದು, ಮುಂದಿನ ಪೀಳಿಗೆಗೆ ಕೃಷಿ ಜೀವನವನ್ನು ತಿಳಿಸಿಕೊಡುವ ಮೂಲಕ ರಾಮಕೃಷ್ಣ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಶ್ಲಾಘನೀಯ ಎಂದು ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು. ಅವರು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳ ಇದರ ಸೌಜನ್ಯ ಸ್ಕೌಟ್ಸ್‍ದಳ ಮತ್ತು ಗೈಡ್ಸ್ ಕಂಪೆನಿ ಇದರ ವತಿಯಿಂದ ಕೊಣಾಜೆ ಗ್ರಾಮದ ಪರಂಡೆಯ ಯು.ಬಿ.ಎಂ.ಸಿ ಶಾಲೆಯಲ್ಲಿ ಮಂಗಳೂರು ತಾಲೂಕಿನ ವಿವಿಧ ಶಾಲೆಗಳ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಪಾರಂಪರಿಕ ಕೃಷಿ ಪ್ರಾತ್ಯಾಕ್ಷಿಕೆ, ಹಾಗೂ ವನಮಹೋತ್ಸವ, ತುಳುನಾಡ ಆಹಾರೋತ್ಸವ ಮತ್ತು ಕೆಸರುಗದ್ದೆ ಕ್ರೀಡೋತ್ಸವ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳ ಗಂಗೋತ್ರಿ ಲಯನ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಡಾ. ಪ್ರಶಾಂತ್…

Read More