Author: UllalaVani

Kannada News From Coastal Karnataka

ಉಳ್ಳಾಲ್‌ನ್ಯೂಸ್ ಡೆಸ್ಕ್ ಉಳ್ಳಾಲ: ಅಪ್ರಾಪ್ತೆಯೊರ್ವಳು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಪಲ ಕೃಷ್ಣನಗರದಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದ್ದು, ಆಕೆ ಬರೆದಿಟ್ಟಿರುವ ಡೆತ್ ನೋಟಲ್ಲಿ ಪೊಲೀಸ್ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದಾಳೆ. ಕೃಷ್ಣನಗರ ನಿವಾಸಿ ನಿವೃತ್ತ ಶಿಕ್ಷಕಿ ಜಯಂತಿ ಎಂಬವರ ಸಾಕುಪುತ್ರಿ ಜ್ಯೋತಿ (೧೭) ಆತ್ಮಹತ್ಯೆಗೈದಿರುವ ಬಾಲಕಿ. ಬುಧವಾರ ನಸುಕಿನ ಜಾವ ತಾಯಿ ಜಯಂತಿ ಅವರು ಕುಂಪಲದ ಕೇಸರಿ ಮಿತೃ ವೃಂದದಲ್ಲಿ ನಡೆಯುತ್ತಿದ್ದ ಯೋಗ ತರಬೇತಿಗೆ ತೆರಳಿದಾಗ ಜ್ಯೋತಿ ಕೃತ್ಯ ಎಸಗಿದ್ದಾಳೆ. ಮನೆಗೆ ವಾಪಸ್ಸಾದಾಗ ಮನೆಯಲ್ಲಿ ಕೋಣೆಯ ಬಾಗಿಲು ಮುಚ್ಚಿದ್ದು, ನೆರೆಮನೆಯವರನ್ನು ಕರೆದು ಬಾಗಿಲು ಒಡೆದು ನೋಡಿದಾಗ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಜ್ಯೋತಿ ಮೃತದೇಹ ಪತ್ತೆಯಾಗಿದೆ. ಸೋಮೇಶ್ವರ ಪರಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಮುಗಿಸಿರುವಾಕೆ, ಇದೀಗ ಬೆಸೆಂಟ್ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ಪದವಿಗೆ ಸೇರ್ಪಡೆಗೊಂಡು, ಇನ್ನಷ್ಟೇ ಕಾಲೇಜು ಆರಂಭವಾಗಬೇಕಿದೆ. ಪ್ರಿಯತಮ ಪೊಲೀಸ್ ಕಿರುಕುಳ ಆರೋಪ : ಆಕೆ ಬರೆದಿಟ್ಟಿರುವ ಡೆತ್ ನೋಟಲ್ಲಿ ಫೇಸ್ ಬುಕ್ ನಲ್ಲಿ…

Read More

ವರದಿ: ರಜಿನಿ ಜಗದೀಶ್ ಪಡೀಲ್ ದುಬೈ ದುಬೈ : ಯಕ್ಷಮಿತ್ರರು ದುಬೈ ಯುಎಇಯ ಇದರ ೧೨ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮಣಿಕಂಠ ಮಹಿಮೆ , ರತಿ ಕಲ್ಯಾಣ ಕನ್ನಡ ಪೌರಾಣಿಕ ಯಕ್ಷಗಾನ ಜೂ. ೧೨ ರಂದು ಅಪರಾಹ್ನ ೫ ಗಂಟೆಗೆ ಇಂಡಿಯನ್ ಹೈಸ್ಕೂಲ್ ದುಬೈಯ ಶೇಖ್ ರಶೀದ್ ಆಡಿಟೋರಿಯಂ ಇಲ್ಲಿನ ಭವ್ಯ ರಂಗ ಮಂಟಪದಲ್ಲಿ ನಡೆಯಲಿದೆ. ಕರ್ನಾಟಕ ಕರಾವಳಿಯ ಗಂಡು ಕಲೆ ಯಕ್ಷಗಾನ ದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಕಳೆದ ಹಲವು ವರ್ಷಗಳಿಂದ ದುಬಾ ಯುಎಇಯಲ್ಲಿ ಯಕ್ಷಮಿತ್ರರು ಎನ್ನುವ ಸಾಂಸ್ಕೃತಿಕ ಸಂಘಟನೆಯ ಮೂಲಕ ಯಕ್ಷಗಾನ ಪ್ರಿಯರಿಗೆ ರಸದೌತಣ ನೀಡುತ್ತಿದ್ದು, ಈ ಬಾರಿಯ ಯಕ್ಷ ಗಾನದಲ್ಲಿ ಕರ್ನಾಟಕದ ಕರಾವಳಿಯಲ್ಲಿ ತನ್ನ ಗಾನ ಸಿರಿಯ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಭಾಗವತ ಗಾನಕೋಗಿಲೆ ಪಟ್ಲ ಸತೀಶ್ ಶೆಟ್ಟಿ ಹಿಮ್ಮೇಳದಲ್ಲಿ ಭಾಗವತಿಕೆ ನಡೆಸಿಕೊಡಲಿದ್ದು, ಚೆಂಡೆಯಲ್ಲಿ ಚೈತನ್ಯ ಕೃಷ್ಣ ಪದ್ಯಾಣ, ಮದ್ದಳೆಯಲ್ಲಿ ಪುತ್ತಿಗೆ ವೆಂಕಟೇಶ ಶಾಸ್ತ್ರಿ, ಲಕ್ಷ್ಮೀಶ ಶರ್ಮ ಮಧೂರು, ಅತಿಥಿ ಕಲಾವಿದರಾಗಿ ಅಕ್ಷಯ್ ಕುಮಾರ್, ಲಕ್ಷ್ಮಣ ಕುಮಾರ್…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ತೊಕ್ಕೊಟ್ಟು: ಆರೋಗ್ಯ ಸಂಬಂಧಿ ಸಕಲ ಸವಲತ್ತುಗಳನ್ನು ಹೊಂದಿರುವ ವಿಸ್ತರಿತ ಸ್ಪೂರ್ತಿ ಕ್ಲಿನಿಕ್ ಕಟ್ಟಡ ಜೂ. 10ರಂದು ತೊಕ್ಕೊಟ್ಟು ಭಟ್ನಗರದಲ್ಲಿ ಕಾರ್ಯಾರಂಭಿಸಲಿದೆ. ಗ್ರಾಮೀಣ ಭಾಗದ ಜನರು ತೀವ್ರ ತೆರನಾದ ಕಾಯಿಲೆಗೆ ತುತ್ತಾದ ಸಂದರ್ಭ ನಗರ ಪ್ರದೇಶಗಳಿಗೆ ಚಿಕಿತ್ಸೆಗೆ ತೆರಳಬೇಕಾಗಿದ್ದು ಅದರಿಂದ ಬಡವರಿಗೆ ಹೆಚ್ಚಿನ ಖರ್ಚಾಗಿ ವೈದ್ಯಕೀಯ ಸೇವೆಯಿಂದ ವಂಚಿತರಾಗುತ್ತಾರೆ. ಅದನ್ನು ಮನಗಂಡು ನುರಿತ ವೈದ್ಯರ ತಂಡ ವೈದ್ಯಕೀಯ ಸಲಹೆ ಹಾಗೂ ಸೇವಾ ಕೇಂದ್ರ ಆರಂಭಿಸಿದೆ. 10 ವರುಷಗಳ ಹಿಂದೆ ತೊಕ್ಕೊಟ್ಟಿನಲ್ಲಿ ನಾಲ್ಕು ವೈದ್ಯರಿಂದ ಆರಂಭಗೊಂಡಿದ್ದ ಸ್ಪೂರ್ತಿ ಕ್ಲಿನಿಕ್ ಇದೀಗ ಭಟ್ನಗರದಲ್ಲಿ 10  ಸಾವಿರ ಚದರ ಅಡಿಯ ವಿಸ್ತರಿತ ಕಟ್ಟಡಕ್ಕೆ ವರ್ಗಾವಣೆಗೊಂಡಿದೆ. ಇಲ್ಲಿ 25  ವೈದ್ಯರು ಸೇವೆ ನೀಡಲಿದ್ದು ಅತ್ಯುತ್ತಮ ನಿರ್ವಹಣಾ ಸಾಫ್ಟ್‌ವೇರ್, ಡೆಂಟಲ್ ಕೇರ್ ಯೂನಿಟ್, ಡಿಜಿಟಲ್ ಎಕ್ಸ್‌ರೇ 300 ಎಂಎ ಜಿಇ ಉಪಕರಣ, ಅತೀ ಹೆಚ್ಚಿನ ಫ್ರಿಕ್ವೆನ್ಸಿ ಫ್ರೋಬ್‌ನೊಂದಿಗೆ ಫಿಲಿಪ್ಸ್ ಎಚ್‌ಡಿ   ಅಲ್ಟಾ ಸೌಂಡ್, ಇಸಿಜಿ ಹಾಗೂ ಕಾರ್ಡಿಯಾಕ್ ಇಖೊ ಸ್ಕಾ ನ್, ಫಾರ್ಮಸಿ, ಅತೀ…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಬೆಳ್ಮ : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬೆಂಬಲದಿಂದ ಸ್ಪರ್ಧಿಸಿದ್ದ ತಂದೆ ಮಗಳು ಇಬ್ಬರೂ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬೆಳ್ಮ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉಸ್ಮಾನ್ ಅಕ್ಸಾ ಎರಡನೇ ಬಾರಿ ಆಯ್ಕೆಯಾದರೆ , ಪ್ರಥಮ ಬಾರಿ ಸ್ಫರ್ಧಿಸಿದ ಅವರ ಮಗಳು ಸುಹೈಲಾ ಉಸ್ಮಾನ್ ಕೂಡಾ ಆಯ್ಕೆಯಾಗುವ ಮೂಲಕ ಒಂದೇ ಪಂ.ಗೆ ತಂದೆ-ಮಗಳು ಇಬ್ಬರು ಸದಸ್ಯರಾಗಿದ್ದಾರೆ. ಉಸ್ಮಾನ್ ಅಕ್ಸಾ ಮಂಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷನಾಗಿದ್ದರೆ, ಸುಹೈಲಾ ಬಿ.ಎಸ್ಸಿ ಪದವೀಧರೆಯಾಗಿದ್ದಾಳೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ:  ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಸೋಮೇಶ್ವರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ.  ಪಂಚಾಯತ್ ನ ೬೧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪೫ ಸ್ಥಾನಗಳನ್ನು ಬಿಜೆಪಿ ಪಡೆಯುವ ಮೂಲಕ ಸತತ ೪ನೇ ಅವಧಿಗೆ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.  ಈ ಹಿಂದೆ ಅಧಿಕಾರದಲ್ಲಿದ್ದ ತಲಪಾಡಿ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿ ಸ್ಪಷ್ಟ ಬಹುಮತಕ್ಕೆ ಬಂದಿದೆ. ಉಳಿದಂತೆ ಕಿನ್ಯಾ, ಬೆಳ್ಮ, ಅಂಬ್ಲಮೊಗರು ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಮುನ್ನೂರು ಗ್ರಾಮ ಪಂಚಾಯತ್ ತ್ರಿಶಂಕು  ಸ್ಥಿತಿಯಲ್ಲಿದೆ. ಮುನ್ನೂರು ಪಂಚಾಯಿತಿ : ೧ ವಾರ್ಡ್: ಸೋಮೇಶ್ವರ ಉಳಿಯದಲ್ಲಿ ಕಾಂಗ್ರೆಸ್ ಬೆಂಬಲಿತರಾದ ನವೀನ್ ಡಿಸೋಜಾ, ಲೀಲಾ. ೨ ವಾರ್ಡ್: ಬಿಜೆಪಿ ಬೆಂಬಲಿತರಾದ ಹರೀಶ್ ಭಂಡಾರಮನೆ, ವನಿತಾ.ಯು.ಶೆಟ್ಟಿ, ಲೀಲಾವತಿ ಗೌಡ, ೩ವಾರ್ಡ್: ಬಿಜೆಪಿ ಬೆಂಬಲಿತರಾದ ಕಿರಣ್ ಶೆಟ್ಟಿ, ಆಶಾ ಲತಾ, ೪ ವಾರ್ಡ್: ಸಿಪಿಐಎಂ ನ ಗಣೇಶ್ ಟೈಲರ್, ಶಶಿಕಲಾ ಹಾಗೂ ಚಂದ್ರವಾತಿ , ೫ ವಾರ್ಡ್:…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕುಂಪಲ ಹನುಮಾನ್ ನಗರದ ಲಕ್ಷ್ಮಣ ಅವರ ಮನೆಯಲ್ಲಿ ಅರಳಿದ ಬ್ರಹ್ಮಕಮಲ ಶ್ವೇತಾ ಕುಂಪಲ ಅವರ ಕ್ಯಾಮರಾದಲ್ಲಿ ಸೆರೆಯಾದ ಬಗೆ ಹೀಗೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: 8ರಿಂದ 15 ವರ್ಷದವರೆಗಿನ ಮಕ್ಕಳಿಗೆ ಅಯೋಜಿಸಲಾಗಿದ್ದ ಬೇಸಿಗೆ ಶಿಬಿರ ಉಳ್ಳಾಲದಲ್ಲಿ ಇತ್ತೀಚೆಗೆ ತೊಕ್ಕೊಟ್ಟಿನಲ್ಲಿ ಸಮಾರೋಪಗೊಂಡಿತು. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ಇದರ ಸಂಯುಕ್ತ ಆಶ್ರಯದಲ್ಲಿ ಶಿಬಿರ ನಡೆಯಿತು. ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ ಉಳ್ಳಾಲ ನಗರಸಭೆ ಅಧ್ಯಕ್ಷೆ ಗಿರಿಜಾ ಎಂ.ಬಾೈ ಉದ್ಘಾಟಿಸಿದರು. ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲ, ಸಂಪನ್ಮೂಲ ವ್ಯಕ್ತಿ ಸುರೇಖ, ಪ್ರಕಾಶ್, ಹರಿಶ್ಚಂದ್ರ, ಗಂಗಾಧರ್, ತೊಕ್ಕೊಟ್ಟು ಅಂಗನವಾಡಿ ಕಾರ್ಯಕರ್ತೆ ರೋಹಿಣಿ, ಕೌನ್ಸಿಲರ್ ಶಶಿಕಲಾ ಶೆಟ್ಟಿ, ಸುರೇಖ, ಶ್ರೀಕಾಂತ್ ಕೊಂಡಾಣ, ಮೊದಲಾದವರು ಉಪಸ್ಥಿತರಿದ್ದರು. ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಕಲ್ಪನಾ ಸ್ವಾಗತಿಸಿದರು. ಶಂಕರಿ ವಂದಿಸಿದರು. ರಾಯಿಫ ಕಾರ್ಯಕ್ರಮ ನಿರೂಪಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಗುರುವಾರ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ವಲ್ಪ ಕಾಲ ಸಂಚಾರ ಆಸ್ತವ್ಯಸ್ತಗೊಂಡಿತು. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ತೊಕ್ಕೊಟ್ಟು ಮತ್ತು ಕೋಟೆಕಾರ್‍ನಲ್ಲಿ ಹೆದ್ದಾರಿಯಲ್ಲಿ ಮಳೆ ನೀರು ನಿಂತಿದ್ದರಿಂದ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದ್ದು, ಬಳಿಕ ಜೆಸಿಬಿ ಮೂಲಕ ನೀರನ್ನು ತೆರವು ಮಾಡಲಾಯಿತು. ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನಲ್ಲಿ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ಮದುವೆ ಸೇರಿದಂತೆ ಶುಭ ಕಾರ್ಯಗಳಿಗೆ ಬರುವ ಜನರು ಮಳೆಯಿಂದಾಗಿ ಪರದಾಡುವಂತಾಯಿತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇವರು ಮನುಷ್ಯನಿಗೆ ಬಿಡುವು ಹಾಗೂ ಉತ್ತಮ ಆರೋಗ್ಯ ಕೊಟ್ಟಿದ್ದರೆ ಅದು ದೊಡ್ಡ ಸಂಪತ್ತು. ಆದರೆ ಮನುಷ್ಯ ಮಾತ್ರ ಅಂತಹ ಅವಕಾಶವನ್ನು ಉತ್ತಮ ಕಾರ್ಯಗಳಿಗೆ ವಿನಿಯೋಗಿಸಲು ವಿಫಲನಾಗುತ್ತಿದ್ದಾನೆ ಎಂದು ಮಂಜೇಶ್ವರ ಮಲ್ಹಾರ್ ಕ್ಯಾಂಪಸ್‍ನ ಕಾರ್ಯದರ್ಶಿ ಅಹ್ಮದ್ ಜಲಾಲುದ್ದಿನ್ ಅಲ್‍ಬುಖಾರಿ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ನೇತೃತ್ವದಲ್ಲಿ ಮಂಜೇಶ್ವರ ಮಲ್ಹಾರ್ ಕ್ಯಾಂಪಸ್‍ನ ಆಶ್ರಯದಲ್ಲಿ ಮಂಜೇಶ್ವರದಲ್ಲಿ ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಎಲ್ಲದರಲ್ಲೂ ಸದೃಢನಾಗಬೇಕಾದರೆ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಗಟ್ಟಿಯಾಗಿರಬೇಕು. ಹಾಗೆಯೇ ಬದುಕಿನಲ್ಲಿ ಉದ್ದೇಶಿತ ಗುರಿಯನ್ನು ಸಾಧಿಸಬೇಕಾದರೆ ಮಿಕ್ಕೆಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಉತ್ತಮ ಆರೋಗ್ಯ. ಅಂತಹ ಆರೋಗ್ಯವನ್ನು ಕಾಪಾಡುವ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದನ್ನು ಜನತೆ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಣಚೂರು ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ಹಣಕಾಸು ಹಾಗೂ ಆಡಳಿತ ನಿರ್ದೇಶಕ ಅಬ್ದುಲ್ ರಹಿಮಾನ್ ಅವರು ಕಣಚೂರು ಆಸ್ಪತ್ರೆ ಹಾಗೂ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ತಲಪಾಡಿ ಗ್ರಾಮದ ಕೆ.ಸಿರೋಡ್ ಕೃಷ್ಣ ನಗರ ನಿವಾಸಿ ಸೌಮ್ಯ (೨೨)ಎಂಬವರು ಕಾಣೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೌಮ್ಯಳು ಮೇ ೪ರಂದು ಮಂಗಳೂರಿನ ಪಾಂಡೇಶ್ವರದಲ್ಲಿರುವ ಮೋಲ್ ಗೆ ಕೆಲಸಕ್ಕೆಂದು ತೆರಳಿದವಳು ಈವರೆಗೆ ಮನೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾಳೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ್ ದಾಖಲಿಸಲಾಗಿದೆ.

Read More