ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಮರ್ದಿತರ, ಶೋಷಿತರ ದಮನಿತರ ಮತ್ತು ಅವಕಾಶ ವಂಚಿತರ ಪರವಾಗಿ ಮತ್ತು ದೇಶದ ಸಮಾನ ನ್ಯಾಯ ರಕ್ಷಣೆಗಾಗಿ ಎಸ್ ಡಿ ಪಿ ಐ ಹೋರಾಟ ನಡೆಸುವ ಪಕ್ಷವಾಗಿದೆ ಎಂದು ಎಸ್ ಡಿ ಪಿ ಐ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಎ ಆರ್ ಹೇಳಿದ್ದಾರೆ. ಅವರು ಎಸ್ ಡಿ ಪಿ ಐ ಸಂಸ್ಥಾಪನ ದಿನಚಾರಣೆಯ ಅಂಗವಾಗಿ ಎಸ್ಡಿಪಿಐ ಉಳ್ಳಾಲ ನಗರಸಭೆ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಮಾಸ್ತಿಕಟ್ಟೆ ಜಂಕ್ಷನ್ನಿನಲ್ಲಿ ನಡೆದ ಧ್ವಜಾರೋಹಣದಲ್ಲಿ ಭಾಗವಹಿಸಿದರು. ಎಸ್ಡಿಪಿಐ ಉಳ್ಳಾಲ ನಗರಸಭೆ ಘಟಕದ ಅಧ್ಯಕ್ಷ ಅಝ್ಗರ್ ಅಲಿ , ಮುಹಮ್ಮದ್ ಯು.ಬಿ , ಅಬ್ದುಲ್ ರಝಾಕ್, ಪೈರೋಝ್ ಉಳ್ಳಾಲ್ ಉಪಸ್ಥಿತರಿದ್ದರು.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಮನೆ ಹಾಗೂ ಅಂಗಡಿಗಳನ್ನೇ ಗುರಿಯಾಗಿಸಿ ಕೃತ್ಯ ಎಸಗುತ್ತಿದ್ದ ಕಳ್ಳರು , ಈ ಬಾರಿ ತಮ್ಮ ದಿಕ್ಕು ಬದಲಾಯಿಸಿ ಮಕ್ಕಳಿಗೆ ಅಕ್ಷರ ಕಲಿಸುವ ಶಾಲೆಗೆ ಕನ್ನ ಹಾಕುವ ಮೂಲಕ ರೂ.72,000 ನಗದು ಹಾಗೂ ಪಠ್ಯ ಸಾಮಗ್ರಿಗಳನ್ನು ಕಳವುಗೈದಿರುವ ಘಟನೆ ಕೊಲ್ಯ ಸಂತ ಜೋಸೆಫರ ಜಾಯ್ಲ್ಯಾಂಡ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಬುಧವಾರ ಬೆಳಕಿಗೆ ಬಂದಿದೆ. ಉಳ್ಳಾಲ ವ್ಯಾಪ್ತಿಯಲ್ಲಿ ಮನೆ ಹಾಗೂ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಶಾಲೆಯನ್ನೂ ಬಿಡದೆ ಕೃತ್ಯ ಮುಂದುವರಿಸಿದ್ದಾರೆ. ಮಂಗಳವಾರ ತಡರಾತ್ರಿ ವೇಳೆ ಕೃತ್ಯ ಎಸಗಿರುವ ಕಳ್ಳರು ಶಾಲೆಯ ಗೇಟಿನ ಹಾಗೂ ಮುಖ್ಯ ಕಚೇರಿಯ ಬೀಗ ಮುರಿದು ಒಳನುಗ್ಗಿದ್ದಾರೆ. ಅಲ್ಲಿ ಕಪಾಟು ಹಾಗೂ ಡ್ರಾವರಿನಲ್ಲಿರಿಸಿದ್ದ ರೂ. .72,000 ನಗದು ಹಾಗೂ ಪಠ್ಯ ಪುಸ್ತಕ ಮತ್ತು ಸಾಮಗ್ರಿಗಳನ್ನು ಕಳವುಗೈದಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲದ ಕಡಲ್ಕೊರೆತ ಪ್ರದೇಶಗಳಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಕಾಮಗಾರಿಗಳು ನಡೆಯುತ್ತಿದ್ದು, ಸದ್ಯ ವಿಪರೀತ ಗಾಳಿಯಿಂದ ಹಾನಿಗೊಳಗಾದ ಮನೆಯವರಿಗೆ ಸಂರಕ್ಷಣೆ ನೀಡುವಂತೆ ಮುಖ್ಯಮಂತ್ರಿ ಜತೆಗೆ ಚರ್ಚಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಬುಧವಾರ ಉಳ್ಳಾಲದ ಮೊಗವೀರಪಟ್ಣ, ಕೋಡಿ, ಕೋಟೆಪುರ, ಕೈಕೋ, ಹಿಲೇರಿಯಾನಗರ , ಉಚ್ಚಿಲ ಕಡಲ್ಕೊರೆತ ಉಂಟಾದ ಪ್ರದೆಶಗಳಿಗೆ ಭೇಟಿ ನೀಡಿದರು. ಕೇಂದ್ರದಲ್ಲಿ ಯುಪಿಎ ಸರಕಾರವಿದ್ದ ಸಂದರ್ಭ ತಲಪಾಡಿಯಿಂದ ಕಾರವಾರ ಹಾಗೂ ಗುಜರಾತಿನ ಕರಾವಳಿ ಪ್ರದೇಶಗಳಿಗೆ ಕಡಲ್ಕೊರೆತಕ್ಕೆ ಶಾಶ್ವತ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. ಅದರಲ್ಲಿ ಉಳ್ಳಾಲವನ್ನು ಪೈಲಟ್ ಸ್ಕೀಂ ಯೋಜನೆಗೆ ಸರಕಾರ ಸೂಚಿಸಿದೆ. ಉಳ್ಳಾಲದ ಒಂದೆಡೆ ತಾತ್ಕಾಲಿಕ ಹಾಗೂ ಇನ್ನೊಂದೆಡೆ ಶಾಶ್ವತ ಯೋಜನೆಯ ಪ್ರಥಮ ಹಂತದ ಕಾಮಗಾರಿ ಆರಂಭವಾಗಿದೆ. ಶಾಶ್ವತ ಕಾಮಗಾರಿಯು ಮೂರು ವರ್ಷದಲ್ಲಿ ಮುಗಿಸುವ ಭರವಸೆಯನ್ನು ಗುತ್ತಿಗೆ ಪಡೆದ ಕಂಪೆನಿ ನೀಡಿದೆ. ಬ್ರೇಕ್ ವಾಟರ್ ನ ಪ್ರಾಥಮಿಕ ಹಂತದ ಬರ್ಮ, ತಡೆ ಕಟ್ಟುವ ಕೆಲಸಗಳು ನಡೆಯುತ್ತಿದೆ. ಇದರಿಂದ ಉಳ್ಳಾಲ ಆಸುಪಾಸಿನಲ್ಲಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯ, ಕ್ಷೇಮ ಆಸ್ಪತ್ರೆ ಹಾಗೂ ನಿಟ್ಟೆ ವಿವಿಯ ಎನ್ಎಸ್ಎಸ್ ಘಟಕದ ಆಶ್ರಯದಲ್ಲಿ ಭಾನುವಾರ ನಿಟ್ಟೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ವಿಶ್ವಯೋಗ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ವಿವಿ ಉಪ ಕುಲಪತಿ ಪ್ರೊ.ಡಾ.ಎಸ್.ರಮಾನಂದ ಶೆಟ್ಟಿ ವಿಶ್ವ ಯೋಗ ದಿನಾಚರಣೆ ಭಾರತ ವಿಶ್ವಕ್ಕೆ ನೀಡಿದ ಅಮೂಲ್ಯ ಕೊಡುಗೆ. ವಿಶ್ವವೇ ಯೋಗ ದಿನ ಆಚರಿಸುತ್ತಿದ್ದು ಅದರ ಸಂಪೂರ್ಣ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ ಎಂದು ನುಡಿದರು. ಸಹಸ್ರಾರು ವರುಷಗಳಿಂದ ಭಾರತೀಯ ಯಾವುದೇ ಪದ್ದತಿ ವಿಶ್ವದ ಇತರ ದೇಶಗಳು ಮಾನ್ಯತೆ ನೀಡಿಲ್ಲ. ಹಾಗೆಯೇ ಅಂತರಾಷ್ಟ್ರೀಯ ಮಟ್ಟದಲ್ಲೂ ಆಚರಣೆಯಾದ ಇತಿಹಾಸವಿಲ್ಲ. ಯೋಗ ಎಂಬುದು ಭಾರತೀಯ ಪದ್ದತಿಯಾಗಿದ್ದರೂ ಈಗ ವಿಶ್ವವೇ ಅದನ್ನು ಒಪ್ಪಿಕೊಂಡು ವಿಶ್ವಮಾನ್ಯತೆ ನೀಡುವ ಮೂಲಕ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಭಾರತೀಯರ ಉತ್ತಮ ಆರೋಗ್ಯ, ಮಾನಸಿಕ ನೆಮ್ಮದಿ, ಬುದ್ಧಿ, ಕವಶಲ್ಯತನ, ಸಕಾರಾತ್ಮಕ ಚಿಂತನೆ ಆವೆಲ್ಲವನ್ನೂ ನೋಡಿದಾಗ ಯೋಗ ಭಾರತೀಯ ಜೀವನ ಪದ್ಧತಿಯೂ ಆಗಿದೆ ಎಂದು ನುಡಿದರು.…
ಉಳ್ಳಾಲ್ ನ್ಯೂಸ್ ಡೆಸ್ಕ್ ಕೊಣಾಜೆ: ಇಲ್ಲಿನ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಸಂದರ್ಭ ಮಂಗಳೂರು ವಿವಿಯ ಉಪ ಕುಲಪತಿ ಪ್ರೊ. ಕೆ.ಭೈರಪ್ಪ , ಪ್ರಜಾಪಿತ ಈಶ್ವರೀಯ ವಿಶ್ವ ವಿದ್ಯಾಲಯದ ಅಧ್ಯಾಪಕಿ ವಿಶ್ವೇಶ್ವೆರಿ ಕುಮಾರಿ, ವಿವಿ ಕುಲಸಚಿವ ಪ್ರೊ.ಪಿ.ಎಸ್.ಎಡಪಡಿತ್ತಾಯ, ಡಾ. ತಿರುಮಲೇಶ್ವರ ಪ್ರಸಾದ್ ಎಚ್., ವಿವಿಯ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನದ ಅಧ್ಯಕ್ಷ ಡಾ.ಕೆ.ಕೃಷ್ಣ ಶರ್ಮ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪಕುಲಪತಿಗಳು ಸೇರಿದಂತೆ ಸಾರ್ವಜನಿಕರಿಂದ ಯೋಗಾಭ್ಯಾಸ ಪ್ರದರ್ಶನ ನಡೆಯಿತು.
ವರದಿ : ರಜಿನಿ ಜಗದೀಶ್ ಪಡೀಲ್ ದುಬೈ ದುಬೈ: ದುಬೈನ ವರಮಹಾಲಕ್ಷ್ಮಿ ಪೂಜಾ ಸೇವಾ ಸಮಿತಿಯ ಅಶ್ರಯದಲ್ಲಿ ಪ್ರತಿವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಸುಮಂಗಲೆಯರು ಸೇರಿಕೊಂಡು ಆಚರಿಸುವ ಒಂಭತ್ತನೇಯ ವರ್ಷದ ವರಮಹಾಲಕ್ಷ್ಮೀ ಪೂಜೆಯನ್ನು ಅದ್ದೂರಿಯಿಂದ ಆಚರಿಸಲು ತೀರ್ಮಾನಿಸಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದು ಸ್ವರ್ಣಾ ಸತೀಶ್ ಪೂಜಾರಿ ಹೇಳಿದರು. ಅವರು ಫಾರ್ಚುನ್ ಗ್ರಾಂಡ್ ನಲ್ಲಿರುವ ಓಲ್ಡ್ ದುಬೈ ಗ್ರಾಂಡ್ ಹೊಟೇಲಿನ ಮೊದಲ ಮಹಡಿಯ `ಧಡ್ಕನ್’ ಬಾಂಕೆಟ್ ಸಭಾಂಗಣದಲ್ಲಿ ವರಮಹಾಲಕ್ಷ್ಮಿ ಪೂಜಾ ಸೇವಾ ಸಮಿತಿಯ ಅಶ್ರಯದಲ್ಲಿ ಜರಗಿದ ಮೊದಲ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಬಾರಿಯ ೯ನೇ ವರ್ಷದ ವರಮಹಾಲಕ್ಷ್ಮೀ ಪೂಜೆ ಇಂಡಿಯನ್ ಅಕಾಡೆಮಿ ಶಾಲೆಯಲ್ಲಿ ನಡೆಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಈ ಸಂದರ್ಭ ರಾಜೇಶ್ ಕುತ್ತಾರ್, ಬಾಲಕೃಷ್ಣ ಸಾಲ್ಯಾನ್, ಪ್ರಕಾಶ್ ಪಕಳ, ಸುಧಾಕರ್, ಸತೀಶ್ ಉಳ್ಳಾಲ್, ಅರುಣಾ ಜಗದೀಶ್ ಶೆಟ್ಟಿ, ಜಯಶ್ರೀ ಸುಧಾಕರ್, ಜಗನ್ನಾಥ ಬೆಳ್ಳಾರಿ,ರಮಾನಂದ ಬೆಳಪು ಮೊದಲಾದವರು ಉಪಸ್ಥಿತರಿದ್ದರು. ರೇಶ್ಮಾ ಶೆಟ್ಟಿ ಗಣಪತಿ ಸ್ತುತಿ…
*** ಲೇಖನ ಇಸ್ಲಾಂನ ಪ್ರಮುಖ ಅಂಗಗಳಲ್ಲಿ ಒಂದಾದ ರಂಝಾನ್ ಮಾಸವು ಅತ್ಯಂತ ಪವಿತ್ರ ಮಾಸವಾಗಿ ಮುಸ್ಲಿಮರನ್ನು ಪ್ರಪಂಚದ ಎದುರಿಗೆ ಪರಿಚಯಿಸುತ್ತಿದೆ. ಇಸ್ಲಾಂನ ತತ್ವಗಳಲ್ಲಿ ನಿಮ್ಮ ನೆರೆಮನೆಯವನು ಹಸಿದಿರುವಾಗ ನೀನು ಊಟ ಮಾಡುವುದು ಶ್ರೇಯಸ್ಕರವಲ್ಲ ಎಂಬುದನ್ನು ಸಾರುತ್ತದೆ, ಅದರಂತೆ ಹಸಿವು ಎಂದರೇನು? ಹಸಿವಿನಿಂದ ಕೂಡಿರುವ ಬಡವನ ಕಳವಳ, ತುಮುಲಗಳೇನು? ಎನ್ನುವುದನ್ನು ಇಸ್ಲಾಂ ವಿಶ್ವಾಸಿಗನಿಗೆ ರಂಝಾನ್ ಮಾಸವು ಅರ್ಥ ಮಾಡಿಕೊಡುತ್ತದೆ. ಬಡವ ಬಲ್ಲಿದನೆಂಬ ಬೇಧವಿಲ್ಲದೆ, ಹಸಿವು, ದಾಹ ಇದರ ಸಂಕಟಗಳನ್ನು ಮನುಷ್ಯನು ಅರ್ಥಮಾಡಿಕೊಳ್ಳುವಂತಾಗಿದೆ. ಆದರೆ ಇಸ್ಲಾಮಿನ ಪ್ರಕಾರ ಬರೇ ಉಪವಾಸವಿದ್ದರೆ ಸಾಲದು, ಈ ಉಪವಾಸದಲ್ಲಿ ಮನಸ್ಸಿನ ಎಲ್ಲಾ ವಿಕಾರಗಳನ್ನು ತ್ಯಜಿಸಿ ಉಪವಾಸದಲ್ಲಿ ಅತ್ಯಂತ ಪರಿಶುದ್ದ ಆಗಿರುವುದೇ ರಂಝಾನ್ ಮಾಸದ ತಿರುಳಾಗಿದೆ. ಆಚರಣೆ ಹೇಗೆ?: ಸೂರ್ಯ ಉದಯವಾಗುವ ಮೊದಲು ಎದ್ದು, ಮುಂಜಾನೆಗೂ ಮುನ್ನ ಅಗತ್ಯಕ್ಕೆ ತಕ್ಕಂತಿರುವ ಉಪಹಾರಗಳನ್ನು ಸೇವಿಸುವ ಮುಸ್ಲಿಂ ಬಾಂಧವರು ತದನಂತರ ಮುಂಜಾವಿನ ನಮಾಜನ್ನು ನೆರವೇರಿಸುತ್ತಾರೆ. ಸಂಜೆಯ ತನಕವೂ ಉಳಿದ ನಮಾಜುಗಳನ್ನು ನಿರ್ವಹಿಸಿ ಸೂರ್ಯ ಅಸ್ತಂಗತನಾಗುವ ಸಮಯದಲ್ಲಿ ಉಪವಾಸವನ್ನು ಇಫ್ತಾರ್ ಎಂಬ ಹೆಸರಿನಲ್ಲಿ ಉಪವಾಸವನ್ನು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಕುತ್ತಾರ್ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಹೆಂಚು, ಪಕ್ಕಾಸು ತುಂಡಾಗಿ ನೀರು ಸೋರುತ್ತಿರುವುದನ್ನು ಮನಗಂಡ ಜೈಹನುಮಾನ್ ಕ್ರೀಡಾ ಮಂಡಳಿ ಸದಸ್ಯರು ಭಾನುವಾರ ಶ್ರಮದಾನದ ಮೂಲಕ ದುರಸ್ತಿಗೊಳಿಸಿದ್ದು ಈ ಸಂದರ್ಭ ಎಸ್ಡಿಎಂಸಿಗೆ ಸಂಬಂಧಪಟ್ಟವರು ಸ್ಥಳಕ್ಕೆ ಬಾರದಿದ್ದು ಅಸಮಾಧಾನಕ್ಕೆ ಕಾರಣವಾಗಿದೆ. ಈ ಶಾಲೆಯ ಕಟ್ಟಡಕ್ಕೆ 30 ವರ್ಷಗಳಾಗಿದ್ದು ಪಕ್ಕಾಸು ಶಿಥಿಲಗೊಂಡಿದ್ದು ಹೆಂಚು ತೂತು ಬಿದ್ದು ಕೊಠಡಿ ಸೋರುತ್ತಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಸಂಘಟನೆ 50 ಸಾವಿರ ರೂಪಾಯಿ ವೆಚ್ಚದಲ್ಲಿ ದುರಸ್ತಿಪಡಿಸಿ ಸರ್ಕಾರದ ಜವಾಬ್ದಾರಿ ನಿರ್ವಹಿಸಿ ಸ್ಥಳೀಯರ ಪ್ರೀತಿಗೆ ಪಾತ್ರವಾಗಿದೆ. ಶಾಲೆಯಲ್ಲಿ 1ರಿಂದ 8ನೇ ತರಗತಿಯಿದ್ದು ಕಳೆದ ವರ್ಷ ಪಾಠದ ಸಂದರ್ಭ ಹೆಂಚು ಬಿದ್ದು ವಿದ್ಯಾರ್ಥಿಗಳಿಗೆ ಗಾಯವಾಗಿದ್ದರಿಂದ ಒಂದು ಕೊಠಡಿಯಲ್ಲಿ ತರಗತಿ ಸ್ಥಗಿತಗೊಳಿಸಿ ಬೇರೆ ಕೊಠಡಿಗೆ ವರ್ಗಾಯಿಸಲಾಗಿತ್ತು. ಶಾಲಾ ಸಭಾಂಗಣವೂ ಸೋರುತ್ತಿತ್ತು. ಭಾನುವಾರ ನಡೆದ ಶ್ರಮದಾನದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಟೈಲರ್, ಡಿವೈಎಫ್ಐ ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ಕುತ್ತಾರ್,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು :ರಕ್ತದಾನ ಶಿಬಿರ ಉತ್ತಮವಾದ ದಾನವಾಗಿದ್ದು, ಇದಕ್ಕೆ ಇಸ್ಲಾಂ ಮಹತ್ತರವಾದ ಸ್ಥಾನ ಕಲ್ಪಿಸಿದೆ. ರೋಗಿಗಳ ರಕ್ಷಣೆಗಾಗಿ ಉಚಿತ ರಕ್ತದಾನ ಮಾಡಿ ಸಹಕರಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕೆಂದು ಎಸ್ಎಸ್ಎಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಉಮ್ಮರ್ ಅಹ್ಸನಿ ಹೇಳಿದರು. ಅವರು ಎಸ್ಎಸ್ಎಫ್ ಉಳ್ಳಾಲ ಡಿವಿಷನ್ ಮತ್ತು ಕೆಎಂಸಿ ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ಎಸ್ಎಸ್ಎಫ್ ತಲಪಾಡಿ, ಉಳ್ಳಾಲ, ತೊಕ್ಕೊಟ್ಟು ಸೆಕ್ಟರ್ ಇದರ ಸಹಯೋಗದೊಂದಿಗೆ ಭಾನುವಾರ ತೊಕ್ಕೊಟ್ಟುವಿನಲ್ಲಿ ನಡೆದ ಉಚಿತ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಸಿಎಫ್ ಸದಸ್ಯ ಮಹಮಗಮದ್ ರಫೀಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಉಳ್ಳಾಲ ನಗರ ಸಭೆ ಕೌನ್ಸಿಲ್ರ್ ಉಸ್ಮಾನ್ ಕಲ್ಲಾಪು, ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ,ಎಸ್.ಎ. ಹಕೀಂ ಮದನಿ, ಶಕೀಲ್ ತುಂಬೆಜ, ಫಾರೂಕ್ ಸಖಾಫಿ, ಇಲ್ಯಾಸ್ ಸಖಾಫಿ, ಸೆಯ್ಯದ್ ಖುಬೈಬ್ ತಂಙಳ್, ಡಾ. ಅಕ್ಷಯ್, ಭವಾನಿಶಂಕರ್, ಎಸ್ಎಸ್ಎಫ್ ತೊಕ್ಕೊಟು ಸೆಕ್ಟರ್ ರಿಲೀಫ್ ಸರ್ವಿಸ್ ಅಧ್ಯಕ್ಷ ಅಲ್ತಾಫ್ ಕುಂಪಲ, ಸಮೀರ್ ಸೇವಂತಿಗುಡ್ಡೆ, ಮುಸ್ತಫಾ ಝುಹ್ರಿ ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೂ ಅವರು ಮಾಡಿದ ಕಾರ್ಯ ಫಲಪ್ರದವಾಗಿಲ್ಲ. ಪ್ರಸಕ್ತ ಚುನಾವಣೆಯಲ್ಲಿ ಮುಡಿಪು ಭಾಗದಲ್ಲಿ ಬಹಳಷ್ಟು ಗ್ರಾಮಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಗೆದ್ದು ಬಂದಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಉಮ್ಮರ್ ಪಜೀರ್ ಹೇಳಿದರು. ಅವರು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹೂಹಾಕುವ ಕಲ್ಲುವಿನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಗೌರವಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಡಿಪು ಜಿ.ಪಂ. ಸದಸ್ಯ ಸಂತೋಷ್ ಕುಮಾರ್ ಅವರು ಕಾಂಗ್ರೆಸ್ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಲು ತೆರೆಮೆರೆಯ ಪ್ರಯತ್ನ ನಡೆಸಿದರು. ಅವರು ಕೆಲವು ಸವಾಲುಗಳನ್ನು ಕಾಂಗ್ರಸ್ಗರಿಗೆ ಹಾಕಿದ್ದರು. ಅವರ ಸವಾಲಿಗೆ ತಕ್ಕ ಉತ್ತರ ಕಾಂಗ್ರೆಸ್ ನೀಡಿದೆ. ಅವರ ಪ್ರಯತ್ನ ಬಾಳೆಪುಣಿ, ಬೆಳ್ಮ ಮತ್ತು ಇನ್ನಿತರ ಕೆಲವು ಗ್ರಾಮಗಳಲ್ಲಿ ಈ ಪ್ರಯತ್ನ ಪೂರ್ಣಮಟ್ಟದ ಪರಿಣಾಮ ಬೀರಿಲ್ಲ. ನಿರೀಕ್ಷೆಗಿಂತಲೂ ಜಾಸ್ತಿ ಗೆಲುವು ಪಡೆದಿದ್ದೇವೆ. ಪಜೀರ್ ಬಿಜೆಪಿ ಮುಕ್ತ…

