ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ : ಸೋಮೇಶ್ವರ ಗ್ರಾಮ ಪಂಚಾಯತ್ ನ ವಿಜೇತ ಬಿಜೆಪಿ ಸದಸ್ಯರ ಹಾಗೂ ಅದ್ಯಕ್ಷ ರಾಜೇಶ್ ಉಚ್ಚಿಲ್ ಮತ್ತು ಉಪಾಧ್ಯಕ್ಷೆ ಸುಶೀಲ ಎಸ್. ನಾಯಕ್ ಅವರ ವಿಜಯೋತ್ಸವ ಮೆರವಣಿಗೆ ಕಾಪಿಕಾಡ್ ಅಂಬಿಕಾರೋಡ್ ನಿಂದ ಹೊರಟು, ಪಿಲಾರು ದಾರಂದಬಾಗಿಲು, ಪಂಡಿತ್ ಹೌಸ್, ಕುಂಪಲ, ಕನೀರುತೋಟ, ಉಚ್ಚಿಲ ಮಾರ್ಗವಾಗಿ ಸೋಮೇಶ್ವರ, ಸಾರಸ್ವತ ಕಾಲನಿಯಿಂದ ಕೋಟೆಕಾರಿನ ವರೆಗೂ ನಡೆಯಿತು.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ದಿನಗಳಿಂದ ಸುರಿಯದ ಮಳೆ ಏಕಾಏಕಿ ಸುರಿದಾಗ ಕುಂಪಲ ಪ್ರದೇಶಕ್ಕೆ ಹೋಗುವ ಮುಖ್ಯ ರಸ್ತೆ ಅಕ್ಷರಶಃ ದೋಣಿ ಸಾಗುವ ಹಾದಿಯಾಗಿ ತಿರುಗಿತ್ತು. ವಾಹನ ಸವಾರರು, ವಿದ್ಯಾರ್ಥಿಗಳು, ಪಾದಚಾರಿಗಳು ರಸ್ತೆ ಅವ್ಯವಸ್ಥೆಯಿಂದ ಪರದಾಡಬೇಕಾಯಿತು. ರಾಷ್ಟ್ರೀಯ ಹೆದ್ದಾರಿ ೬೬ರಿಂದ ಕುಂಪಲ ಕ್ಕೆ ತೆರಳುವ ಕಾಂಕ್ರೀಟಿಕರಣ ರಸ್ತೆಯಿಡೀ ಮಳೆ ನೀರಿನಿಂದ ತುಂಬಿ ಹೋಗಿದೆ. ಗುರುವಾರ ಬೆಳಗ್ಗಿನಿಂದ ಸಂಜೆಯವರೆಗೂ ಸುರಿದ ಭಾರೀ ಮಳೆಯಿಂದಾಗಿ ಕುಂಪಲ ಬೈಪಾಸ್ ರಸ್ತೆ ಅವ್ಯವಸ್ಥೆ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಯಿತು.೯ ಫೀಟ್ ಅಗಲ ರಸ್ತೆಯ ಎರಡು ಬದಿಗಳಲ್ಲಿ ತೆರೆದ ಚರಂಡಿಗಳಿವೆ. ಮಳೆಯ ಸಂದರ್ಭ ರಸ್ತೆಯಿಡೀ ಮಳೆಯ ನೀರು ಸೇರುವುದರಿಂದ ವಾಹನ ಸವಾರರು ಚರಂಡಿಗೆ ಬಿದ್ದಿರುವ ಉದಾಹರಣೆಗಳೂ ಇದೆ.ಸರಾಸರಿ ಆರು ಬಸ್ಸುಗಳ ಓಡಾಟ ಹಾಗೂ ನೂರಾರು ವಾಹನಗಳು ಇದೇ ಕಿರಿದಾದ ರಸ್ತೆಯಲ್ಲಿ ಹೋಗಬೇಕಿದೆ. ಅದೇ ಒಂದು ವಾಹನ ಚಾಲಕರಿಗೆ ಸಾಹಸವೆನಿಸಿದರೆ,ಮಳೆ ನೀರು ಸೇರಿದ ನಂತರ ರಸ್ತೆ ಹಾಗೂ ಚರಂಡಿ ವ್ಯತ್ಯಾಸ ತಿಳಿಯದೆ ಜೀವ ಕೈಲಿಟ್ಟು ಹೋಗಬೇಕಾದ ಅನಿವಾರ್ಯತೆ ಇದೆ ಎಂಬುದು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಹೋಲಿ ಸ್ಪಿರಿಟ್ ಚರ್ಚ್ ಮುಕ್ಕ ಇಲ್ಲಿನ ಧರ್ಮಗುರುಗಳಾದ ಫಾದರ್ ಥೋಮಸ್.ಸಿ.ಡಿಸೋಜಾ (60) ಹೃದಯಾಘಾತದಿಂದ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರು 7 ವರ್ಷಗಳ ಕಾಲ ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಸೇವೆ ಸಲ್ಲಿಸಿ ಸುರತ್ಕಲ್ ಮುಕ್ಕ ಚರ್ಚಿಗೆ ವರ್ಗಾವಣೆಗೊಂಡಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆ ಯೆನೆಪೋಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಕಾರ್ಯಕ್ರಮ ಇತ್ತೀಚೆಗೆ ಆಚರಿಸಿದರು. ಎಸ್.ಇ.ಝೆಡ್ ಲಿ. ಗ್ರೀನ್ ಬೆಲ್ಟ್ ನ ಸಲಹೆಗಾರ ದಿನೇಶ್.ಎಂ.ನಾಯಕ್ ಸಸಿಗಳನ್ನು ಕೊಡುಗೆಯಾಗಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಸಿ.ವಿ.ರಘುವೀರ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಪಿ. ಜಯರಾಜನ್ ಫಿಸಿಯೋಥೆರಪಿ ಕಾಲೇಜಿನ ಮುಖ್ಯಸ್ಥ ಪದ್ಮಕುಮಾರ್ ಎಸ್.ಪಿ ಉಪಸ್ಥಿತರಿದ್ದರು. ಪರಿಸರ ಶಿಕ್ಷಣ ಕೇಂದ್ರದ ನಿರ್ದೇಶಕಿ ಡಾ.ಭಾಗ್ಯ.ಬಿ.ಶರ್ಮಾ ಕಾರ್ಯಕ್ರಮ ಆಯೋಜಿಸಿದ್ದರು.
ಉಳ್ಳಾಲ: ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ವಲಸರಿ ಗದ್ದೆಯಲ್ಲಿ ನಾಟಿ ಚಟುವಟಿಕೆ ಗ್ರಾಮಸ್ಥರಿಂದ ಇತ್ತೀಚೆಗೆ ನಡೆಯಿತು. ಧರ್ಮದರ್ಶಿ ದೇವು ಮೂಲ್ಯಣ್ಣ, ಗುರಿಕಾರರು, ಚಾಕರಿಯವರು ಹಾಗೂ ಸ್ಥಳೀಯರು ಕೆಲಸದಲ್ಲಿ ಪಾಲ್ಗೊಂಡಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಮಲೇರಿಯಾ ಹಾಗೂ ಡೆಂಗೆ ಎಚ್ ಇಎನ್1 ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮವನ್ನು ಸಾರ್ವಜನಿಕರು ಕೈಗೊಳ್ಳಬೇಕು. ಜಾಗೃತಿ ಮೂಡಿಸಲು ವಿದ್ಯಾ ಸಂಸ್ಥೆಯ ವತಿಯಿಂದ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ ಹೇಳಿದ್ದಾರೆ. ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಗೈಡ್ಸ್ , ರತ್ನ ಇಕೋ ಕ್ಲಬ್ ಹಾಗೂ ವಿಜ್ಞಾನ ಸಂಘದ ಆಶ್ರಯದಲ್ಲಿ ಮಂಗಳವಾರದಂದು ಶಾಲೆಯಿಂದ ಬೆಳ್ಮ ಗ್ರಾಮ ಪಂಚಾಯಿತಿ ಕಚೇರಿವರೆಗೆ ನಡೆದ ಡೆಂಗೆ ಜಾಗೃತಿ ಜಾಥಾ ನೇತೃತ್ವ ವಹಿಸಿ ಮಾತನಾಡಿದರು. ದೇರಳಕಟ್ಟೆ ಪರಿಸರದಲ್ಲಿ ಬಹು ಮುಖ್ಯವಾಗಿ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿರಬೇಕು. ತಪ್ಪಿದಲ್ಲಿ ಅದರಿಂದ ಸಾಂಕ್ರಾಮಿಕ ರೋಗಗಳು ಹರಡುವುದು ಸರ್ವೆ ಸಾಮಾನ್ಯ. ಹಾಗಾಗಿ ಸ್ಥಳೀಯ ಆಡಳಿತ ಸಂಸ್ಥೆಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಾಗ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಬಹುದು. ಸಾರ್ವಜನಿಕರು ಆ ಬಗ್ಗೆ ಸಹಕರಿಸುವುದು ಅನಿವಾರ್ಯ ಎಂದರು. ಪಂಚಾಯಿತಿ ಸದಸ್ಯರಾದ ಯೂಸುಫ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಬಸ್ – ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕೊಲ್ಯ ನಿವಾಸಿ ಶಿವಪ್ರಸಾದ್ ನಾಯ್ಕ್ (44) ಎಂಬವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಲ್ಯ ಸಮೀಪ ಭಾನುವಾರ ರಾತ್ರಿ ವೇಳೆ ಸಂಭವಿಸಿದೆ. ಕೊಲ್ಯದ ತಾಯಿ ಮನೆಯಿಂದ ಮಂಗಳೂರಿನ ಬೆಂದೂರ್ನಲ್ಲಿರುವ ಕ್ವಾಟ್ರರ್ಸ್ಗೆ ತೆರಳುವ ಸಂದರ್ಭ ಮಂಗಳೂರಿನಿಂದ ಕಾಸರಗೋಡಿಗೆ ಹೋಗುತ್ತಿದ್ದ ಕೇರಳ ಸಾರಿಗೆ ಬಸ್ಸು ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಮಂಗಳೂರಿನ ಮಹಾನಗರ ಪಾಲಿಕೆಯ ನೀರು ಸರಬರಾಜು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ರಸಾದ್ ನಾಯ್ಕ್ ಅವರು ಎಂದಿನಂತೆ ತಾಯಿ ಮನೆಗೆ ಬಂದು ಕೈನೆಟಿಕ್ ಹೋಂಡಾ ಸ್ಕೂಟಿರನಲ್ಲಿ ವಾಪಸ್ಸಾಗುತ್ತಿದ್ದರು. ಅಂದೇ ಸ್ಕೂಟರಿನಲ್ಲಿ ಬಂದಿದ್ದರು : ಪ್ರತಿ ಬಾರಿ ಮನೆಗೆ ಬರುವ ಶಿವಪ್ರಸಾದ್ ಅವರು ತನ್ನಲ್ಲಿದ್ದ ದ್ವಿಚಕ್ರ ವಾಹನವನ್ನು ಮಂಗಳೂರಿನಲ್ಲಿಯೇ ಬಿಟ್ಟು ಬಸ್ಸಿನಲ್ಲಿ ಬಂದು ವಾಪಸ್ಸಾಗುತ್ತಿದ್ದರು. ನಿನ್ನೆ ಭಾನುವಾರ ಆಗಿದ್ದರಿಂದಾಗಿ ಮಂಗಳೂರಿಗೆ ಹೋಗಲು ಬಸ್ಸು ಇರುವುದಿಲ್ಲವೆಂದು ದ್ವಿಚಕ್ರ ವಾಹನದಲ್ಲಿಯೇ ಕೊಲ್ಯಕ್ಕೆ ಬಂದಿದ್ದರು. ಅರ್ಧ ಗಂಟೆ ಕಾಲ ಕಾರ್ಯಾಚರಣೆ ನಡೆಸಿದರು: ಕೊಲ್ಯ ಶಾರದಾ ಕಟ್ಟೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯಿತಿ ಆಗಿರುವ ಸೋಮೇಶ್ವರ ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ರಾಜೇಶ್ ಎ. ಉಚ್ಚಿಲ್ ಜಯಗಳಿಸಿದ್ದು, ಉಪಾಧ್ಯಕ್ಷರಾಗಿ ಸುಶೀಲ ಎಸ್. ನಾಯಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 61 ಸದಸ್ಯರಿದ್ದು, ಬಿಜೆಪಿ ಬೆಂಬಲಿತ 45, ಕಾಂಗ್ರೆಸ್ ಬೆಂಬಲಿತ 12, ಸಿಪಿಐಎಂ 1, ಮೂವರು ಪಕ್ಷೇತರರಿದ್ದು , ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ರಾಜೇಶ್ ಉಚ್ಚಿಲ್ ಅವರು 46 ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ಸದಸ್ಯ ದೀಪಕ್ ಪಿಲಾರ್13 ಮತಗಳನ್ನು ಪಡೆದರು. ಕಾಂಗ್ರೆಸ್ನ ಓರ್ವ ಸದಸ್ಯರು ಗೈರು ಹಾಜರಾಗಿದ್ದರೆ. ಬಿಜೆಪಿಯ ಓರ್ವ ಸದಸ್ಯರು ಅನಾರೋಗ್ಯ ಕಾರಣದಿಂದ ಮತದಾನದಲ್ಲಿ ಭಾಗವಹಿಸಿರಲಿಲ್ಲ. ಸೋಮೇಶ್ವರ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ರಾಜೇಶ್ ಎ.ಉಚ್ಚಿಲ್ ಕಳೆದ ಅವಧಿಯಲ್ಲಿ ಎರಡೂವರೆ ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು , ಈ ಬಾರಿ ನಡೆದ ಚುನಾವಣೆಯಲ್ಲಿ ಸೋಮೇಶ್ವರ ಗ್ರಾಮ ಪಂಚಾಯಿತಿಗೆ ಅಲ್ಪಸಂಖ್ಯಾತ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೆಳ್ಮ: ಬೆಳ್ಮ ಗ್ರಾಮ ಪಂಚಾಯತ್ ಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ವಿಜಯ ಕೃಷ್ಣಪ್ಪ ಅಧ್ಯಕ್ಷರಾಗಿ ಬಿ.ಎಂ.ಅಬ್ದುಲ್ ಸತ್ತಾರ್ ಬೆಳ್ಮ ದೋಟ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳ್ಮ ಗ್ರಾಮ ಪಂಚಾಯತ್ ನಲ್ಲಿ ೧೭ ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ೧೨, ಜೆಡಿಎಸ್ ಬೆಂಬಲಿತ ೫ ಸದಸ್ಯರಿದ್ದಾರೆ. ವಿಜಯ ಕೃಷ್ಣಪ್ಪ ಎರಡನೇ ಅವಧಿಗೆ ಸದಸ್ಯರಾಗಿ, ಒಂದು ಅವಧಿಗೆ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಬ್ದುಲ್ ಸತ್ತಾರ್ ಪ್ರಥಮ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯ ಮೈಸೂರು ಇಬ್ರಾಹಿಂ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಕಾರ್ಮಿಕ ಘಟಕದ ಅಧ್ಯಕ್ಷ ಟಿ.ಎಂ. ಫಾರೂಕ್, ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ. ಅಬ್ದುಲ್ ಹಮೀದ್, ಕಾಂಗ್ರೆಸ್ ಮುಖಂಡರಾದ ರವೂಫ್ ರೆಂಜಾಡಿ, ರವಿರಾಜ್ ಶೆಟ್ಟಿ ದೇರಳಕಟ್ಟೆ, ಶರೀಫ್ ಟಿ.ಎಂ.,ವೆಂಕಟೇಶ್, ಇಬ್ರಾಹಿಂ ಬದ್ಯಾರ್, ಶಾಮಣ್ಣ ಶೆಟ್ಟಿ, ಪಂಚಾಯತ್ ಮಾಜಿ ಅಧ್ಯಕ್ಷ ಯೂಸುಫ್ ಬಾವ ಉಪಸ್ಥಿತರಿದ್ದರು. ಚುನಾವಣಾ ಅಧಿಕಾರಿಯಾಗಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಿನ್ಯ : ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಮಾಲಿನಿ ನಾರಾಯಣ ಪೂಜಾರಿ ಮತ್ತು ಉಪಾಧ್ಯಕ್ಷರಾಗಿ ಸಿರಾಜುದ್ಧೀನ್ ಕಿನ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತ್ನಲ್ಲಿ ೧೨ ಸದಸ್ಯರಲ್ಲಿ ಬಿಜೆಪಿಯ ಓರ್ವ ಸದಸ್ಯೆ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ೧೧ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು. ಅಧ್ಯಕ್ಷರಾಗಿರುವ ಮಾಲಿನಿ ಪ್ರಥಮ ಬಾರಿಗೆ ಪಂಚಾಯತ್ ಸದಸ್ಯರಾಗಿದ್ದು, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿರಾಜುದ್ಧೀನ್ ಮೂರನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾದವರು. ಜಿಲ್ಲಾ ಶಿಕ್ಷಣಾಧಿಕಾರಿ ಎಂ.ಪಿ. eನೇಶ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಿನ್ಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹುಸೇನ್ ಕುಂಇ, ಎಂ.ಎ. ಮಹಮ್ಮದ್ ಬಶೀರ್, ಸ್ಥಳೀಯ ಜಮಾತ್ ಕಾರ್ಯದರ್ಶಿ ಅಬುಸಾಲಿ, ಕೃಷ್ಣಪ್ಪ ಪೂಜಾರಿ, ಪಿ.ಕೆ. ಅಬೂಬಕ್ಕಾರ್, ಅಬ್ಬು ಕುರಿಯ, ಪಂಚಾಯತ್ ಸದಸ್ಯರಾದ ಮಹಮ್ಮದ್, ಅಬುಸಾಲಿ, ಫಾರೂಕ್, ಮಹಾಬಲ ಪೂಂಜಾ, ಮೈಮುನಾ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ಸುರೇಖಾ ಉಪಸ್ಥಿತರಿದ್ದರು.

