ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಂಬ್ಲಮೊಗರು : ಬಸ್ಸಿನಲ್ಲಿ ಮುಂಬದಿಯ ಸೀಟಿನಲ್ಲಿ ಮಹಿಳೆಯರ ಜತೆಗೆ ಕುಳಿತಿರುವ ಮೂವರನ್ನು ಆಕ್ಷೇಪಿಸಿದ ಪ್ರಯಾಣಿಕನಿಗೆ ತಂಡವೊಂದು ಶನಿವಾರ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಉಳ್ಳಾಲ ಪೊಲೀಸರು ಬಸ್ ನಿರ್ವಾಹಕನನ್ನು ವಶಕ್ಕೆ ಪಡೆದುಕೊಂಡ ಹಿನ್ನೆಲೆಯಲ್ಲಿ ಮಂಗಳೂರು-ಎಲಿಯಾರುಪದವು ನಡುವೆ ಸಂಚರಿಸುವ ಬಸ್ ಸಿಬ್ಬಂದಿ ಕರ್ತವ್ಯ ನಡೆಸದೆ ಬಸ್ ಬಂದ್ ನಡೆಸಿದ ಪರಿಣಾಮ ಪ್ರಯಾಣಿಕರು ಪರದಾಡಬೇಕಾಯಿತು. ಘಟನೆ ವಿವರ: ಆ.21 ರಂದು ಬೆಳಿಗ್ಗೆ ಎಲಿಯಾರುಪದವಿನಿಂದ ಮಂಗಳೂರಿಗೆ ಹೋಗುತ್ತಿದ್ದ `ಬಾಯಾರ್’ ಹೆಸರಿನ ಬಸ್ಸಿನಲ್ಲಿ ಚಾಲಕನ ಬದಿಯಲ್ಲಿರುವ ಉದ್ದದ ಸೀಟಿನಲ್ಲಿ ಮೂವರು ಬಸ್ ಸಿಬ್ಬಂದಿಯ ತಂಡ ಕುಳಿತಿತ್ತು. ಅದೇ ಸೀಟಿನಲ್ಲಿ ಎರಡು ಮಹಿಳೆಯರು ಇದ್ದರು. ಮೂವರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆಂದು ಅಂಬ್ಲಮೊಗರು ತಮ್ಮಣಕಟ್ಟೆ ನಿವಾಸಿ ನವೀನ್ ಕುಮಾರ್ ಎಂಬವರು ಅದೇ ಬಸ್ಸಿನ ನಿರ್ವಾಹಕನಲ್ಲಿ ವಿಷಯ ತಿಳಿಸಿದ್ದರು. ಅದರಂತೆ ನಿರ್ವಾಹಕ ಮೂವರನ್ನು ಎಬ್ಬಿಸಿ ಬಸ್ಸಿನ ಹಿಂಬದಿಗೆ ಕಳುಹಿಸಿದ್ದಾರೆ. ಇದರಿಂದ ನವೀನ್ ವಿರುದ್ಧ ಧ್ವೇಷ ಇಟ್ಟುಕೊಂಡ ತಂಡ ಶನಿವಾರದಂದು ದೇಸೋಡಿ ಎಂಬಲ್ಲಿ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಪೇಪರ್ ಏಜೆಂಟ್ ಮತ್ತು ಹಾಲಿನ ವ್ಯಾಪಾರಿಯೋರ್ವರ ಕುತ್ತಿಗೆಯಿಂದ ಮೂರೂವರೆ ಪವನಿನ ಚಿನ್ನದ ಸರವನ್ನು ನಸುಕಿನ ಜಾವ ಎರಡು ಬೈಕುಗಳಲ್ಲಿ ಬಂದ ನಾಲ್ವರ ತಂಡ ಕಳವುಗೈದು ಪರಾರಿಯಾಗಿರುವ ಘಟನೆ ಶುಕ್ರವಾರ ಕುತ್ತಾರು ಜಂಕ್ಷನ್ನಿನಲ್ಲಿ ನಡೆದಿದೆ. ಪಂಡಿತ್ ಹೌಸ್ ಬಳಿಯ ನಿವಾಸಿ ಪವಿತ್ರ ಕುಮಾರ್ ಗಟ್ಟಿ ಅವರ ಕುತ್ತಾರು ಜಂಕ್ಷನ್ನಿನಲ್ಲಿರುವ ಗಟ್ಟೀಸ್ ನಂದಿನಿ ಮಿಲ್ಕ್ ಪಾರ್ಲರ್ ಅಂಗಡಿಯಲ್ಲಿ ಇರುವ ಸಂದರ್ಭ ಕೃತ್ಯ ನಡೆದಿದೆ. ಎಂದಿನಂತೆ ನಸುಕಿನ ಜಾವ ಪವಿತ್ರ ಗಟ್ಟಿ ಅವರು ಹಾಲನ್ನು ಒಳಗಿಡುತ್ತಿದ್ದ ಸಂದರ್ಭ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತನೋರ್ವ ಪೇಪರ್ ನೀಡುವಂತೆ ಕೇಳಿದ್ದಾನೆ. ಈ ವೇಳೆ ದೂರದಲ್ಲಿ ಇಬ್ಬರು ಬೈಕಿನಲ್ಲಿ ಕಾಯುತ್ತಾ ನಿಂತರೆ , ಇನ್ನೋರ್ವ ಅಂಗಡಿ ಬದಿಯಲ್ಲಿ ನಿಂತಿದ್ದನು. ಪೇಪರಿನ ಹಣ ಪಡೆದು ಚಿಲ್ಲರೆ ನೀಡುವ ಸಂದರ್ಭ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ಪವಿತ್ರ ಅವರ ಕುತ್ತಿಗೆಗೆ ಕೈ ಹಾಕಿ ಸರವನ್ನು ಎಳೆದು ಬಳಿಕ ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಲ್ಲಿ ಪರಾರಿಯಾಗಿದ್ದಾರೆ ಎಂದು ಉಳ್ಳಾಲ ಠಾಣೆಯಲ್ಲಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೆಳ್ಮ: ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಭಂಗಕ್ಕೆ ಯತ್ನಿಸಿರುವ ಕುರಿತು ಕೊಣಾಜೆ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು ದಾಖಲಾಗಿದೆ. ದೇರಳಕಟ್ಟೆ ನಿತ್ಯಾನಂದನಗರದ ನಿವಾಸಿ ಗಣೇಶ್ ಎಂಬಾತನ ವಿರುದ್ಧ ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಾ ಕೃಷ್ಣಪ್ಪ ಪೂಜಾರಿ ಅವರು ದೂರು ನೀಡಿದ್ದಾರೆ. ವಿಜಯ ಅವರ ನೆರೆಮನೆಯವರೇ ಆಗಿರುವ ಗಣೇಶ್ ನೀರಿನ ಕನೆಕ್ಷನ್ ವಿಚಾರಕ್ಕೆ ಸಂಬಂಧಿಸಿ ಬೆಳ್ಮ ಗ್ರಾ.ಪಂ ಗೆ ಗುರುವಾರದಂದು ಭೇಟಿ ನೀಡಿದ್ದರು. ಅಲ್ಲಿ ವಿಜಯಾ ಅವರ ಜತೆಗೆ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಗಣೇಶ್ ಅವರು ಸೀರೆ ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆಂದು ದೂರಲಾಗಿದೆ. ಬೆಳ್ಮ ಗ್ರಾ.ಪಂ ಚುನಾವಣೆ ಸಂದರ್ಭ 5ನೇ ವಾರ್ಡಿನಲ್ಲಿ ವಿಜಯಾ ಅವರ ಎದುರಾಳಿ ಬಿಜೆಪಿ ಅಭ್ಯರ್ಥಿಯಾಗಿ ಗಣೇಶ್ ಚುನಾವಣೆಗೆ ಸ್ಪರ್ಧಿಸಿದ್ದರು. ನಿನಗೆ ಕನೆಕ್ಷನ್ನೇ ಕೊಡುವುದಿಲ್ಲ ಅಂದಿದ್ದರು ! ಗ್ರಾಮ ಪಂಚಾಯಿತಿ ಚುನಾವಣಾ ಸಂದರ್ಭ ಬಿಜೆಪಿ ಅಭ್ಯರ್ಥಿಯಾಗಿದ್ದ ಗಣೇಶ್ ಅವರಿಗೆ ರಜನಿ ಶೆಟ್ಟಿ ಎಂಬವರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಪ್ರಪಂಚದಲ್ಲಿ ನಡೆಯುವ ಎಲ್ಲಾ ವಿಚಾರಗಳ ಮಾಹಿತಿಯನ್ನು ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು, ವಿದ್ಯಾರ್ಥಿಗಳು, ಮನೆ ಒಡತಿಯರು ಪಡೆಯುವಂತಾಗಬೇಕು ಅನ್ನುವ ದೃಷ್ಟಿಯಿಂದ ಹೋಪ್ ಫೌಂಡೇಶನ್ ಉಚಿತ ಡಿಜಿಟಲ್ ಸಾಕ್ಷರತಾ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದು ಇನ್ಫೋಸಿಸ್ ಬಿಪಿಓ ಇದರ ಮುಖ್ಯಸ್ಥ ಹಾಗೂ ಉಪಾಧ್ಯಕ್ಷ ರಾಘವೇಂದ್ರ.ಕೆ ಹೇಳಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ಆಶ್ರಯದಲ್ಲಿ ಹೋಪ್ ಫೌಂಡೇಶನ್ , ನಾಸ್ಕಾಂ ಫೌಂಡೇಶನ್ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಜಯಂತಿ ಕಾಂಪ್ಲೆಕ್ಸ್ ನಲ್ಲಿ ನ್ಯಾಷನಲ್ ಡಿಜಿಟಲ್ ಲಿಟರಸಿ ಮಿಷನ್ (ಎನ್ಡಿಎಲ್ಎಂ)ನ ಮೂರನೇ ಸೆಂಟರ್ (ಉಚಿತ ಕಂಪ್ಯೂಟರ್ ಶಿಕ್ಷಣ ) ತರಬೇತಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಇನ್ಫೋಸಿಸ್ ಸಂಸ್ಥೆಯ ಆಶ್ರಯದಲ್ಲಿರುವ ಹೋಪ್ ಸಂಸ್ಥೆ ಈಗಾಗಲೇ ಕೋಲಾರ, ಪೂನಾ ಸೇರಿ ಎರಡು ಡಿಜಿಟಲೀಕರಣ ಸಾಕ್ಷರತೆಗಾಗಿ ಸೆಂಟರ್ ಗಳನ್ನು ತೆರೆದಿದ್ದು, ಇದು ಮೂರನೇಯದ್ದಾಗಿದೆ. ಕಾರ್ಮಿಕರು, ಚಾಲಕರು, ಮನೆಯಲ್ಲಿರುವ ಮಹಿಳೆಯರು, ವಿದ್ಯಾರ್ಥಿಗಳು ಎಲ್ಲರೂ ಸೆಂಟರಿನಲ್ಲಿ ಉಚಿತ ಕಂಪ್ಯೂಟರ್ ಶಿಕ್ಷಣ ಪಡೆಯಬಹುದಾಗಿದೆ. ವ್ಯಕ್ತಿತ್ವ ವಿಕಸನ, ಗ್ರಾಮೀಣ ಭಾಗದ ಮಕ್ಕಳಿಗೆ ಖಾಸಗಿ ಕಂಪೆನಿಗಳ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಯಾವುದೇ ಒಂದು ವೃತ್ತಿಯಲ್ಲಿ ತೊಡಗಿಕೊಂಡಿರುವವರು ತಮ್ಮ ತಮ್ಮ ಸಂಘಟನೆಗಳನ್ನು ಕಟ್ಟಿಕೊಳ್ಳುವುದು ಸಹಜ. ಆದರೆ ಆ ಸಂಘಟನೆಗಳು ವೃತ್ತಿಯ ಅಭಿವೃದ್ದಿಯಲ್ಲಿ ಮಾತ್ರ ತೊಡಗಿಕೊಳ್ಳದೆ ಸಮಾಜಮುಖಿ ಕಾರ್ಯಗಳನ್ನೂ ಮಾಡಬೇಕು. ಇಂತಹ ಕಾರ್ಯವನ್ನು ಎಸ್ ಕೆಪಿಎ ಉಳ್ಳಾಲ ವಲಯವು ಮಾಡಿರುವುದರಿಂದ ಇಂದು ಸಾರ್ವಜನಿಕ ವಲಯಲದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಫೊಟೊಗ್ರಾಫರ್ಸ್ ಅಸೋಸಿಯೇಶನ್ ನ ಜಿಲ್ಲಾಧ್ಯಕ್ಷ ಕೆ.ವಾಸುದೇವರಾವ್ ಹೇಳಿದರು. ತೊಕ್ಕೊಟ್ಟಿನಲ್ಲಿರುವ ಕ್ಲಿಕ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಎಸ್ ಕೆಪಿಎ ಉಳ್ಳಾಲ ವಲಯದ ದ್ವಿತೀಯ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಳ್ಳಾಲ ವಲಯವು ಇತರ ಹದಿಮೂರು ವಲಯಗಳಂತೆ ತನ್ನ ಸದಸ್ಯರ ಏಳಿಗೆಗಾಗಿ ಶ್ರಮಿಸುತ್ತಿದ್ದು ಪ್ರತಿಯೊಬ್ಬ ಸದಸ್ಯನೂ ಸಂಘಟನೆಯಲ್ಲಿ ತೊಡಗಿಕೊಂಡಿರುವುದರಿಂದ ಕೇವಲ ಎರಡು ವರ್ಷಗಳ ಹಿದೆ ಪ್ರಾರಂಭವಾದ ಈ ವಲಯವರು ಇತರ ವಲಯಗಳಂತೆ ಉತ್ತಮ ಕೆಲಸವನ್ನು ಮಾಡಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿರುವುದು ಈ ವಲಯದ ಸದಸ್ಯರಲ್ಲಿರುವ ಸಂಘಟನಾತ್ಮಕ ಗುಣವನ್ನು ಎತ್ತಿ ತೋರಿಸುತ್ತಿದೆ ಎಂದರು. ಈಗಾಗಲೇ ಪ್ರಥಮ ಸಮಿತಿಯ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾ ಛಾಯಾಗ್ರಾಹಕರ ಸಂಘದ ಉಳ್ಳಾಲ ವಲಯದ ವತಿಯಿಂದ ಹಿರಿಯ ಛಾಯಾಗ್ರಾಹಕ ರಾಮಣ್ಣ ಪೂಜಾರಿಯವರನ್ನು ಅಸೈಗೋಳಿಯಲ್ಲಿರುವ ಅವರ ಸ್ವ ಗೃಹದಲ್ಲಿ ಸನ್ಮಾನಿಸುವ ಮೂಲಕ ವಿಶ್ವ ಛಾಯಾಗ್ರಹಣ ದಿನವನ್ನು ಗುರುವಾರ ಆಚರಿಸಲಾಯಿತು. ದಕ್ಷಣ ಕನ್ನಡ ಜಿಲ್ಲಾ ಛಾಯಾಗ್ರಹಕರ ಸಂಘದ ಅಧ್ಯಕ್ಷ ವಾಸುದೇವರಾವ್ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ, ವಿಶ್ವ ಛಾಯಾಗ್ರಹಣ ದಿನದಂಗವಾಗಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹಿರಿಯ ಛಾಯಾಗ್ರಾಹಕ ರಾಮಣ್ಣ ಪೂಜಾರಿಯವರನ್ನು ಸನ್ಮಾನಿಸುವ ಮೂಲಕ ಎಸ್ ಕೆಪಿಎ ಉಳ್ಳಾಲ ವಲಯವು ಅವಿಸ್ಮರಣೀಯವಾದ ಕಾರ್ಯವನ್ನು ಮಾಡಿದೆ ಎಂದು ಹೇಳಿದರು. ಇಂತಹ ಹಿರಿಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮ್ಮ ಪಾಲಿನ ಭಾಗ್ಯವೇ ಸರಿ. ಡಿಜಿಟಲ್ ತಂತ್ರಜ್ಞಾನದ ಆಗಮನದ ಮುನ್ನವೇ ರಾಮಣ್ಣ ಪೂಜಾರಿಯವರಂತಹ ಛಾಯಾಗ್ರಾಹಕರು ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದರು. ಇಂತಹ ಹಿರಿಯರನ್ನು ಈ ಸನ್ಮಾನಕ್ಕೆ ಆಯ್ಕೆ ಮಾಡಿರುವ ಉಳ್ಳಾಲ ವಲಯದ ಕಾರ್ಯವು ದಕ್ಷಿಣ ಕನ್ನಡ ಜಿಲ್ಲಾ ಛಾಯಾಗ್ರಾಹಕರು ಸಂಘಕ್ಕೇ ಹೆಮ್ಮೆಯ ವಿಷಯವಾಗಿದೆ ಎಂದರು.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಅವರೆಲ್ಲರೂ ಪ್ರತಿಭಾನ್ವಿತ ವಿದ್ಯಾರ್ಥಿಗಳು. ಉತ್ತಮ ಅಂಕದೊಂದಿಗೆ ಪದವಿ ಪಡೆಯೋ ಕನಸು ಕಂಡಿದ್ದರು. ನಿರೀಕ್ಷೆಯಂತೆಯೇ ಎಲ್ಲಾ ವಿಷಯಗಳಲ್ಲೂ ವಿಶಿಷ್ಟ ಶ್ರೇಣಿಯಲ್ಲೇ ಉತ್ತೀರ್ಣರಾಗಿದ್ದರು. ಆದರೆ ಕಾರ್ಪೋರೇಟರ್ ಲಾ ವಿಷಯ ಮಾತ್ರ ಅವರ ಭವಿಷ್ಯಕ್ಕೆ ಮುಳುವಾಗಿದೆ. ಹೆಚ್ಚು ಅಂಕ ಬರುತ್ತೆ ಅಂತಾ ನಂಬಿಕೆಯಿಟ್ಟು ಮರು ಮೌಲಮಾಪಕಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ರೀಸಲ್ಟ್ ಬಂದಾಗ ಅವರಿಗೆಲ್ಲಾ ಶಾಕ್ ಆಗಿತ್ತು. ಯಾಕೆಂದರೆ ಪಡೆದಿದ್ದ ಅಂಕದಲ್ಲೂ ಮೌಲ್ಯ ಮಾಪಕರು ಕಡಿತ ಮಾಡಿದ್ದಾರೆ. ಮಂಗಳೂರು ವಿವಿ ಮಾಡಿದ ಎಡವಟ್ಟು ಇದೀಗ ನೂರಾರು ವಿದ್ಯಾರ್ಥಿಗಳ ಭವಿಷ್ಯವನ್ನೇ ತೂಗುಯ್ಯಾಲೆಯಲ್ಲಿರಿಸಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಮಂಗಳೂರು ವಿಶ್ವವಿದ್ಯಾಲಯ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಅನ್ನೋ ಖ್ಯಾತಿಗೂ ಪಾತ್ರವಾಗಿದೆ. ಆದರೆ ಈ ಬಾರಿ ವಿವಿ ಮಾಡಿಕೊಂಡ ಮೌಲ್ಯಮಾಪನದ ಎಡವಟ್ಟಿನಿಂದಲೇ ವಿವಾದಕ್ಕೆ ಸಿಲುಕಿಕೊಂಡಿದೆ. ಹೀಗೆ ಅಂಕಪಟ್ಟಿಯನ್ನು ಹಿಡಿದುಕೊಂಡು ವಿವಿ ಮೆಟ್ಟಿಲೇರುತ್ತಿರುವವರು ಎಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ತಾಲೂಕಿನ ಮಡಂತ್ಯಾರು ಸೇಕ್ರೇಡ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿಗಳು. ಈ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಆಕೆಗಿನ್ನೂ 27ರ ಹರೆಯ. ಇನ್ನೂ ಬಾಳಿ ಬದುಕಬೇಕಾದ ಸುಪ್ರಿಯಾಳ ಇಳಿವಯಸ್ಸಿನಲ್ಲೇ ಲಿವರ್ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ. ಇದೀಗ ಸಂಪೂರ್ಣ ನಿಷ್ಕ್ರಿಯಗೊಂಡಿರುವ ಲಿವರಿನ ಕಸಿ ಪ್ರಕ್ರಿಯೆಗೆ ಲಕ್ಷಾಂತರ ಹಣ ಬೇಕಾಗಿರುವುದರಿಂದ ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬ ಕಂಗಾಲಾಗಿದೆ. ಅದಕ್ಕಾಗಿ ಮನೆಮಂದಿ ದಾನಿಗಳ ಮೊರೆಹೋಗಿದ್ದಾರೆ. ಕುಂಬಳೆ ಮಧೂರು ನಿವಾಸಿ ಮೋಹನ್ ಗಟ್ಟಿ ಮತ್ತು ಸುಲೋಚನಾ ದಂಪತಿ ನಾಲ್ವರು ಮಕ್ಕಳಲ್ಲಿ ಸುಪ್ರಿಯಾ ಕಿರಿಯವಳು. ಬಿ.ಕಾಂ ಪ್ರಥಮ ವರ್ಷ ಮುಗಿಸಿದ ಸುಪ್ರಿಯಾ ಕಾಲೇಜಿನ ಶುಲ್ಕ ಪಾವತಿಸಲು ರಜೆಯಲ್ಲಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಸದಾ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡಿದ್ದ ಸುಪ್ರಿಯಾಳಿಗೆ ಲಿವರ್ ಸಂಬಂಧಿ ತೊಂದರೆ ಇರುವುದರ ವಿಚಾರ ವೈದ್ಯರಿಂದ ಗೊತ್ತಾಗಿತ್ತು. ಆ ಬಳಿಕ ಸುಪ್ರಿಯಾ ಕಾಲೇಜನ್ನು ಮೊಟಕುಗೊಳಿಸಿದ್ದಳು. ಮನೆಮಂದಿ ದುಡಿದ ಹಣವನ್ನೆಲ್ಲಾ ಸುಪ್ರಿಯಾಳ ಚಿಕಿತ್ಸೆಗೆ ವ್ಯಯಿಸಲು ಆರಂಭಿಸಿದರು. ಆದರೆ ಲಿವರ್ ತೊಂದರೆ ತೀರಾ ಉಲ್ಬಣಿಸಿ, ಇದೀಗ ನಿಷ್ಕ್ರಿಯಗೊಂಡು ಹೊಟ್ಟೆಯಲ್ಲಿ ನೀರು ತುಂಬಲು ಆರಂಭವಾಗಿದೆ. ವೈದ್ಯರು ಲಿವರ್ ಕಸಿ ಮಾಡಿದಲ್ಲಿ ಸುಪ್ರಿಯಾಳನ್ನು ಬದುಕಿಸಬಹುದು ಅಂದಿದ್ದು,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಲ್ಲಾಪು: ತೊಕ್ಕೊಟ್ಟು ಕಲ್ಲಾಪು ಸಮೀಪ ತಂಡದಿಂದ ಹಲ್ಲೆಗೊಳಗಾದ ಪ್ರೀತೇಶ್ ಮತ್ತು ಕವಿತ್ರಾಜ್ ಪ್ರಕರಣಕ್ಕೆ ಸಂಬಂಧಿಸಿ ಪಿಕಪ್ ವಾಹನ ಚಾಲಕ ಇಕ್ಬಾಲ್ ಎಂಬಾತ ನೀಡಿರುವ ಪ್ರತಿದೂರಿನ ಆಧಾರದಂತೆ ಉಳ್ಳಾಲ ಪೊಲೀಸರು ಗಾಯಾಳುಗಳಿಬ್ಬರನ್ನು ನಿನ್ನೆ ಬಂಧಿಸಿದ್ದಾರೆ. ಪಿಕಪ್ ವಾಹನ ಓವರ್ ಟೇಕ್ ವಿಚಾರಕ್ಕೆ ಸಂಬಂಧಿಸಿ ಸೋಮವಾರ ತಡರಾತ್ರಿ ಕಲ್ಲಾಪು ಸಮೀಪ ಪ್ರೀತೇಶ್ ಮತ್ತು ಕವಿತರಾಜ್ ಎಂಬವರ ರಿಟ್ಝ್ ಕಾರು ತಡೆದು ಸುಮಾರು 50 ರಷ್ಟು ಮಂದಿ ಹಲ್ಲೆ ನಡೆಸಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಿನ್ನಮತೀಯರು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದಾಗಿ ಕೆಲಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಉಳ್ಳಾಲ ಪೊಲೀಸರಲ್ಲಿ ಅಪರಿಚಿತ ತಂಡ ದಾಳಿ ನಡೆಸಿರುವ ಕುರಿತು ಇಬ್ಬರು ದೂರು ನೀಡಿದ್ದರು. ಆನಂತರ ಮತ್ತೆ ಪ್ರತಿದೂರು ದಾಖಲಿಸಿದ ಪಿಕಪ್ ವಾಹನದ ಚಾಲಕ ಬೈಂದೂರು ನಿವಾಸಿ ಇಕ್ಬಾಲ್ ಎಂಬಾತ, ನೇತ್ರಾವತಿ ಸೇತುವೆ ಸಮೀಪ ರಿಟ್ಝ್ ಕಾರನ್ನು ಪಿಕಪ್ ವಾಹನಕ್ಕೆ ಅಡ್ಡವಿಟ್ಟ ಇಬ್ಬರು ವಾಹನದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಬೇಕರಿ ಮಾಲೀಕನ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿ ಸಹಿತ ಆತನ ತಂಡದಲ್ಲಿದ್ದ ಇನ್ನೋರ್ವನನ್ನು ಬಂಧಿಸಿದ್ದು, ಅಲ್ಲಿಗೆ ಒಟ್ಟು ಐದು ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಈವರೆಗೆ ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮಂಚಿಲದ ಜಮಾಲ್ ಕ್ವಾಟ್ರಸ್ ನಿವಾಸಿ ಫಯಾಝ್ (29), ಉಮ್ಮರ್ ನೌಫಾಲ್ (26) ಬಂಧಿತರು. ಈ ಹಿಂದೆ ಆ.11 ರಂದು ಅರ್ಫಾನ್ ಅಲಿಯಾಸ್ ಅರ್ಫಾ, ಸೈಫುಲ್ಲಾಸನ್ ಯಾನೆ ಸೈಫು, ಹನೀಫ್ ಅಲಿಯಾಸ್ ಇಬ್ರಾಹಿಂ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಘಟನೆ ವಿವರ: ಮಾಸ್ತಿಕಟ್ಟೆಯಲ್ಲಿ ಬೇಕರಿ ಅಂಗಡಿಯನ್ನು ನಡೆಸುತ್ತಿರುವ ಅಬ್ದುಲ್ ಸಲಾಂ ಅವರನ್ನು ಫಯಾಝ್ ಮತ್ತು ಐದು ಜನರ ತಂಡ ಆ.8ರಂದು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಿಂದೆ ಬೇಕರಿ ಅಂಗಡಿ ಮುಂದೆ ಬಂದು ಗಾಂಜಾ ಮುಂತಾದ ದುರಾಭ್ಯಾಸಗಳನ್ನು ನಡೆಸಿ ಗ್ರಾಹಕರಿಗೆ ತೊಂದರೆ ನೀಡುತ್ತಿದ್ದ ಫಯಾಝ್ ಮತ್ತು ತಂಡದ ವಿರುದ್ಧ ಅಂಗಡಿ…

