ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಮಹಿಳೆಯ ಕರಿಮಣಿ ಸರ ಕಳವಿಗೆ ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಹಿಡಿದು ಗೂಸಾ ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ರಾತ್ರಿ ಕುತ್ತಾರು ಬಳಿಯ ಅಜ್ಜನಕಟ್ಟೆ ಸಮೀಪ ನಡೆದಿದೆ. ಕಿನ್ಯಾ ಕೋಡಿ ಹೌಸ್ ನಿವಾಸಿ ಅಬ್ದುಲ್ ರೆಹಮಾನ್ (26) ಸೆರೆಸಿಕ್ಕಾತ. ಕೆಲಸ ಮುಗಿಸಿ ಕುತ್ತಾರಿನಿಂದ ಸುಭಾಷನಗರದತ್ತ ನಡೆದುಕೊಂಡು ಹೋಗುತ್ತಿದ್ದ ಸುಮಾರು 35-40ರ ಹರೆಯದ ಮಹಿಳೆಯ ಕರಿಮಣಿ ಸರವನ್ನು ಎಳೆಯಲು ಯತ್ನಿಸಿ ಅದು ವಿಫಲವಾಗಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪೊದೆಯೊಂದರಲ್ಲಿ ಅಡಗಿ ಕುಳಿತ ರೆಹಮಾನ್ ಮಹಿಳೆ ನಡೆದುಕೊಂಡು ಬರುತ್ತಿದ್ದಂತೆ ಏಕಾಏಕಿ ಹಾರಿ ಆಕೆಯ ಕುತ್ತಿಗೆಯಲ್ಲಿದ್ದ ಕರಿಮಣಿಸರವನ್ನು ಎಳೆಯಲು ಯತ್ನಿಸುತ್ತಿದ್ದಂತೆ ಅದು ತುಂಡಾಗಿತ್ತು. ಆದರೆ ಮಹಿಳೆ ಸರವನ್ನು ಗಟ್ಟಿಯಾಗಿ ಹಿಡಿದು ರಕ್ಷಣೆಗಾಗಿ ಬೊಬ್ಬೆ ಹೊಡೆದಾಗ ಸಾರ್ವಜನಿಕರು ಸೇರಿ ರೆಹಮಾನ್ನನ್ನು ರೆಡ್ ಹ್ಯಾಂಡಾಗಿ ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಉಳ್ಳಾಲ ಪೊಲೀಸರು ರೆಹಮಾನ್ನನ್ನು ವಶಕ್ಕೆ ಪಡೆದುಕೊಂಡು ಕಳವು ಪ್ರಕರಣ ದಾಖಲಿಸಿದ್ದಾರೆ.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ದೈವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ದರ್ಶನ ಪಾತ್ರಿ ಹೇಳಿದಂತೆ, ಸ್ಥಳೀಯರು ನಡೆಸಿದ ಪ್ರಾರ್ಥನೆಯ ಬೆನ್ನಿಗೆ ಮತ್ತೆ ಅದೇ ಸ್ಥಳಕ್ಕೆ ಕಳವು ನಡೆಸಲು ಬಂದ ಕಳ್ಳನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಜೀರಿನಲ್ಲಿ ನಡೆದಿದೆ. ಪಶ್ಚಿಮ ಬಂಗಾಲದ ಮೀರ್ಖಾಸಿಂ ಲಸ್ಕರ್ ಬಂಧಿತ. ಪಜೀರಿನಲ್ಲಿರುವ ಶ್ರೀ ಅರಸು ಮುಂಡಿತ್ತಾಯ ವೈದ್ಯನಾಥ ದೈವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕಳವು ನಡೆದ ಘಟನೆಗೆ ಸಂಬಂಧಿಸಿ ದೈವಸ್ಥಾನದ ದರ್ಶನ ಪಾತ್ರಿ ಎರಡು ವಾರಗಳೊಳಗೆ ಆರೋಪಿ ಸಿಕ್ಕಿಬೀಳುವುದಾಗಿ, ಅದಕ್ಕಾಗಿ ಸ್ಥಳೀಯರು ಪ್ರಾರ್ಥನೆ ನೆರವೇರಿಸಿದ್ದರು. ಅದರಂತೆ ಬುಧವಾರ ಮಧ್ಯಾಹ್ನ ವೇಳೆ ಪೊರಕೆ ಮಾರುವ ಮೀರ್ ಖಾಸಿಂ ಲಸ್ಕರ್ ದೈವಸ್ಥಾನದ ಬೀಗವನ್ನು ಒಡೆದು ಒಳನುಗ್ಗಲು ಯತ್ನಿಸುತ್ತಿರುವುದನ್ನು ಕಂಡ ಸ್ಥಳೀಯ ಮಹಿಳೆಯರು ಆತನನ್ನು ಬೆನ್ನಟ್ಟಿ ಹಿಡಿಯುವಲ್ಲಿ ವಿಫಲಗೊಂಡರು. ಈ ಬಗ್ಗೆ ಊರಿನ ಮಂದಿ ಸುದ್ಧಿ ತಿಳಿದು ಮತ್ತೆ ಕಳ್ಳನಿಗಾಗಿ ಹುಡುಕಾಟ ನಡೆಸಿ ದೈವಸ್ಥಾನದಿಂದ 2 ಕಿ.ಮೀ ದೂರದ ಪಾನೇಲ ಎಂಬಲ್ಲಿ ಹಿಡಿದು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕಳೆದ ಒಂದು ವರ್ಷದಲ್ಲಿ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಕ್ರಮ ಮರಳು ಗಾರಿಕೆ ಹಾಗೂ ಕಳ್ಳತನ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಹಲವಾರು ಭಾರಿ ಡಿವೈಎಫ್ಐ ವತಿಯಿಂದ ಮನವಿ ನೀಡಲಾಗುತ್ತಿದ್ದರೂ ಪೊಲೀಸರು ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪಾವೂರು ಗ್ರಾಮದ ಉಳಿಯ ಎಂಬಗ ಪ್ರದೇಶದಲ್ಲಿ ಸುಮಾರು 40 ಮನೆಗಳು ಇದ್ದು ಅಕ್ರಮ ಮರಳುಗಾರಿಕೆಯಿಂದ ಮನೆಗಳು ಕುಸಿದು ಬೀಳುವ ಸ್ಥಿತಿಗೆ ತಲುಪಿದೆ ಎಂದು ಮುಡಿಪು ಡಿವೈಎಫ್ಐನ ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ಅವರು ಹೇಳಿದರು. ಅವರು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕಳ್ಳತನ, ಅಪರಾದ ಚಟುವಟಿಕೆಗಳು ಮಾತ್ರವಲ್ಲದೆ ಅಕ್ರಮ ಮರಳುಗಾರಿಕೆಯ ವಿರುದ್ದ ಮತ್ತು ಕೊಣಾಜೆ ಠಾಣೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸುವಂತೆ ಒತ್ತಾಯಿಸಿ ಡಿವೈಎಫ್ಐ ವತಿಯಿಂದ ಕೊಣಾಜೆ ಠಾಣೆಯೆದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಉಳ್ಳಾಲ ವ್ಯಾಪ್ತಿಯಲ್ಲ ಕೇವಲ ಒಂದೇ ಪೊಲೀಸ್ ಠಾಣೆ ಇದ್ದಾಗ ಸಾರ್ವಜನಿಕರ ಹೋರಾಟದ ಫಲವಾಗಿ ಕೊಣಾಜೆ ವ್ಯಾಪ್ತಿಯಲ್ಲೂ ಪೊಲೀಸ್ ಠಾಣೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಸೈಕಲ್ನಿಂದ ಬಿದ್ದು ಮೂರು ವರ್ಷಗಳಿಂದ ಮಲಗಿದ ಸ್ಥಿತಿಯಲ್ಲಿದ್ದ ಮುನ್ನೂರು ಸುಭಾಷನಗರದ ಜಯಂತಿ ಅವರ ಪುತ್ರ 18ರ ಹರೆಯದ ಪುನೀತ್ನನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಕಾಳಜಿಯಿಂದ ಇಂದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. 15ರ ಹರೆಯದಲ್ಲಿ ಎಸ್ ಎಸ್ ಎಲ್ ಸಿ ಕಲಿಯುತ್ತಿದ್ದ ಪುನೀತ್ ತನ್ನ ಸಹೋದರನ ಜತೆಗೆ ಸೈಕಲ್ ಸವಾರಿ ನಡೆಸುತ್ತಿದ್ದ ಸಂದರ್ಭ ಚರಂಡಿಗೆ ಉರುಳಿಬಿದ್ದಿದ್ದರು. ಇದರಲ್ಲಿ ಪುನೀತ್ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿ ಜೀವಚ್ಛವವಾಗಿ ಹಾಸಿಗೆ ಹಿಡಿದಿದ್ದಾನೆ. ಮೂರು ವರ್ಷಗಳಿಂದ ಸತತ ಹಾಸಿಗೆಯಲ್ಲೇ ಮಲಗಿದ ಪುನೀತ್ ಗೆ ಪೈಪಿನ ಮೂಲಕ ಅನ್ನಾಹಾರ ನೀಡಲಾಗುತಿತ್ತು. ಕುಟುಂಬದ ಆಧಾರಸ್ತಂಭವಾಗಿದ್ದ ಪತಿಯನ್ನು ಕಳೆದುಕೊಂಡ ಪುನೀತ್ ತಾಯಿ ಜಯಂತಿ ಅವರಿಗೆ ಕುಟುಂಬ ನಿರ್ವಹಣೆಯೇ ಕಷ್ಟವಾಗಿರುವ ಸಂದರ್ಭ ಪುತ್ರನಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಿರಲಿಲ್ಲ. ಈ ಬಗ್ಗೆ ಕಾಳಜಿಯಿಂದ ದಾಮೋದರ್ ಉಳ್ಳಾಲ್ ಅವರು ಆಯುರ್ವೇದ ವೈದ್ಯರ ಮೂಲಕ ಬಾಲಕನಿಗೆ ಉಚಿತ ಚಿಕಿತ್ಸೆ ಕೊಡಿಸುತ್ತಿದ್ದರು. ಅದರಿಂದ ಚೇತರಿಸಿಕೊಳ್ಳಲು ಹಲವು ಸಮಯವೂ ಬೇಕಾಗಿತ್ತು.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹರೇಕಳ: ನೀರಲ್ಲಿ ಮುಳುಗುವುದೆಂದರೆ ನನ್ನಿಂದ ಸಹಿಸಲಾಗದು, ಹೇಗಾದರೂ ಅವರನ್ನು ಬದುಕಿಸಿಯೇ ಸಿದ್ಧ ಎಂದು ನಿರ್ಧರಿಸಿ ಹಾರಿಯೇ ಬಿಡುತ್ತೇನೆ… ಇದು ಕಳೆದ ಹಲವು ವರ್ಷಗಳಿಂದ ಹಲವು ಜೀವಗಳನ್ನು ರಕ್ಷಿಸಿರುವ ಆಪದ್ಭಾಂಧವ ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಹರೇಕಳದ ಮಹಮ್ಮದ್ ಇಕ್ಬಾಲ್ ಎಂಬವರ ಮನದಾಳದ ಮಾತು. ಯಾವುದೇ ಫಲಾಪೇಕ್ಷೆಯಿಲ್ಲದೆ, ಜೀವದ ಆಸೆಯನ್ನು ಬಿಟ್ಟು ಹಾರುವ ದೃಢಕಾಯದ ಮಹಮ್ಮದ್ ಇಕ್ಬಾಲ್ ಇತ್ತೀಚೆಗೆ ನಡೆದ ಎರಡು ಘಟನೆಗಳಲ್ಲಿ ಸಾರ್ವಜನಿಕ ಶ್ಲಾಘನೆಗೆ ಒಳಗಾಗಿದ್ದಾರೆ. ಎರಡು ವಾರಗಳ ಹಿಂದೆ ಹರೇಕಳ ಕಡವಿನ ಬಳಿ ಹೊಯ್ಗೆ ಸಾಗಾಟ ನಡೆಸುತ್ತಿದ್ದ ದೋಣಿ ದುರಂತಕ್ಕೀಡಾದ ಸಂದರ್ಭ, ಇಬ್ಬರ ಜೀವಗಳನ್ನು ರಕ್ಷಿಸುವಲ್ಲಿ ಇಕ್ಬಾಲ್ ಓರ್ವನೇ ಪ್ರಮುಖ ಪಾತ್ರ ವಹಿಸಿದ್ದರು. ಭಾನುವಾರವೂ ಹರೇಕಳದಿಂದ ಹಲವು ಕಿ.ಮೀ ದೂರದ ಚೇಳೂರಿನ ಕೆಎಐಡಿಬಿ ಸೈಟಿಗೆ ಬರುವಷ್ಟರಲ್ಲಿ ಜಯಪ್ರಕಾಶ್ ಮತ್ತು ದೀಕ್ಷಿತ್ ಮುಳುಗಿಯಾಗಿತ್ತು. ಘಟನೆ ನಡೆದು ಸುಮಾರು ಎರಡು ಗಂಟೆಗಳ ಕಾಲ ಕಲ್ಲು ಕ್ವಾರಿಗೆ ಇಳಿಯುವ ಸಾಹಸ ಯಾರು ನಡಸಿರಲಿಲ್ಲ. ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರೂ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಏರಿದ ಘಟನೆ ಕೊಲ್ಯ ಸಮೀಪ ಇದೀಗ ನಡೆದಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲರೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏಕಮುಖ ಸಂಚಾರವನ್ನು ಬಿಟ್ಟು ಕೊಡಲಾಗಿದೆ. ಈ ಮೂಲಕ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ ಎದುರಿನಿಂದ ಓವರ್ ಟೇಕ್ ಮಾಡುತ್ತಾ ಬರುತ್ತಿದ್ದ ವಾಹನವನ್ನು ತಪ್ಪಿಸುವ ಸಲುವಾಗಿ ಚಾಲಕ ಬಸ್ಸನ್ನು ಎಡಭಾಗಕ್ಕೆ ತಿರುಗಿಸಿದ ಪರಿಣಾಮ ಅದು ನಿಯಂತ್ರಣ ಕಲೆದುಕೊಂಡು ಡಿವೈಡರ್ ಮೇಲೇರಿದೆ. ಘಟನೆಯಿಂದ ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್ಸನ್ನು ಕ್ರೇನ್ ಮೂಲಕ ತೆರವುಗೊಳಿಸುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಬಂಟ್ವಾಳ ತಾಲೂಕು ಮೂಳೂರು ಬಾವಲಿಗುರಿಯಲ್ಲಿ ನೀರು ತುಂಬಿದ್ದ ಕೆಂಪು ಕಲ್ಲು ಕ್ವಾರಿಗೆ ಬಿದ್ದು ಇಬ್ಬರು ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಗಂಭೀರ ಸ್ಥಿತಿಯಲ್ಲಿ ಕಣಚೂರು ಆಸ್ಪತ್ರೆಗೆ ದಾಖಲಾದರೆ, ಇಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಮೃತಪಟ್ಟವರನ್ನು ಬೋಳಿಯಾರ್ ಗ್ರಾಮದ ಮಜಿ ನಿವಾಸಿಗಳಾದ ಜಯಪ್ರಕಾಶ್(22), ದೀಕ್ಷಿತ್( 19) ಎಂಬವರಾಗಿದ್ದು, ಘಟನೆಯಿಂದ ಸಂತೋಷ್ ಮತ್ತು ಅಕ್ಷಯ್ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಕಾಲಿಗೆ ಗಾಯಗೊಂಡಿರುವ ಸುದೇಶ್ ಮತ್ತು ಶೇಖರ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಘಟನೆಯ ವಿವರ : ಬೋಳಿಯಾರ್ ಮಜಿ ನಿವಾಸಿಗಳಾದ ಶೇಖರ್, ಜಯಪ್ರಕಾಶ್, ದೀಕ್ಷಿತ್, ಸುದೇಶ್, ಅಕ್ಷಯ್, ಸಂತೋಷ್ ಮೂರು ಬೈಕ್ಗಳಲ್ಲಿ ಇರಾ ಸಮೀಪದ (ಈಗ ಕೆಐಡಿಬಿಯ ಕೈಗಾರಿಕಾ ವಲಯಕ್ಕೆ ಸೇರಿರುವ)ಮೂಳೂರು (ಚೇಳೂರು ಗ್ರಾಮದ ಬಾವಲಿಗುರಿ) ಪ್ರದೇಶಕ್ಕೆ ಬೆಳಗ್ಗೆ 9 ಗಂಟೆಗೆ ಆಗಮಿಸಿದ್ದಾರೆ. ಸುಮಾರು 12 ಗಂಟೆಯ ಹೊತ್ತಿಗೆ ಮೂಳೂರಿನ ವಿಶಾಲವಾದ ಪ್ರದೇಶವಿರುವ ಬಾವಲಿಗುರಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಆಡಂಕುದ್ರು: ಇಸ್ಕಾನ್ ಸಂಸ್ಥೆಯ ಅನುಯಾಯಿ ಬೆಂಗಳೂರು ಮೂಲದ ಎಂ.ಟೆಕ್ ಪದವೀಧರನ ಕೊಳೆತ ಶವ ಸಂಶಯಾಸ್ಪದವಾಗಿ ಉಳ್ಳಾಲ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯ ಆಡಂಕುದ್ರು ಬಳಿ ಭಾನುವಾರ ಮಧ್ಯಾಹ್ನ ವೇಳೆ ಪತ್ತೆಯಾಗಿದೆ. ಇದೊಂದು ಕೊಲೆ ಎಂಬ ಆರೋಪವನ್ನು ಮೃತರ ಕುಟುಂಬ ಮೂಲಗಳು ಮಾಡಿ ಉಳ್ಳಾಲ ಪೊಲೀಸರಿಗೆ ಮಂಗಳೂರಿನ ಇಸ್ಕಾನ್ ಮುಖ್ಯಸ್ಥರ ವಿರುದ್ಧ ದೂರು ನೀಡಿದ್ದಾರೆ. ಬೆಂಗಳೂರಿನ ಜಿಂದಾಲ್ ಬಳಿಯ ತಿಪ್ಪೇನಹಳ್ಳಿ ನಿವಾಸಿ ಕೆ.ನರಸಿಂಹ ಮೂರ್ತಿ ಮತ್ತು ಸರಸ್ವತಿಯಮ್ಮ ದಂಪತಿ ಪುತ್ರ ರವಿ ಕುಮಾರ್ (25) ಮೃತದೇಹ ಸಂಶಾಯಸ್ಪದವಾಗಿ ಪತ್ತೆಯಾಗಿದೆ. ಮೃತದೇಹದ ಕುತ್ತಿಗೆಗೆ ಮೊಬೈಲಿನ ಚಾರ್ಜರ್ ಬಿಗಿದು ಕೈಯಲ್ಲಿದ್ದ ಚೀಲದಲ್ಲಿ ಕಲ್ಲು ಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕೊಲೆ ಆರೋಪ ಮಾಡಿರುವ ರವಿಕುಮಾರ್ ಕುಟುಂಬಸ್ಥರು ಇಸ್ಕಾನ್ ಸಂಸ್ಥೆಯ ಮಂಗಳೂರಿನ ಮುಖ್ಯಸ್ಥ ತಾರುಣ್ಯಸಾಗರ ದಾಸ್ ವಿರುದ್ಧ ಕೊಲೆ ಆರೋಪವನ್ನು ಮಾಡಿದ್ದಾರೆ. ಬೆಂಗಳೂರಿನ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಮೆಕಾನಿಕ್ನಲ್ಲಿ ಬಿ.ಇ. ಶಿಕ್ಷಣ ಪಡೆದ ಬಳಿಕ ಸುರತ್ಕಲ್ನ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಗೋರಿಗುಡ್ಡ: ತುಳು ಬದುಕು ಎಲ್ಲರಿಗೂ ಹಂಚಿಹೋಗಬೇಕು. ಶಾಲೆಯಲ್ಲಿ ತುಳುವಿನ ಪರಂಪರೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ತುಳು ಸಂಸ್ಕøತಿಯನ್ನು ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದು ಕುಳಾಯಿ ಶ್ರೀ ವೆಂಕಟ್ರಮಣ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೆ.ಕೆ.ಪೇಜಾವರ ಹೇಳಿದ್ದಾರೆ. ಅವರು ಗೋರಿಗುಡ್ಡ ಕಿಟೆಲ್ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ ` ತುಳು ಸಂಸ್ಕøತಿ ಬೊಕ್ಕ ಪರ್ಬೊಲೆನ ಪೊಲಬು ಪಿರಾಕ್ದ ವಸ್ತುಲೆನ ಪ್ರದರ್ಶನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಕೊಣಾಜೆ ಪಂಚಾಯಿತಿ ಸದಸ್ಯೆ ಮುತ್ತು.ಎನ್.ಶೆಟ್ಟಿ ಕೊಣಾಜೆ , ಮಾಜಿ ಸದಸ್ಯ ಹಾಗೂ ಕೃಷಿಕ ಸುದರ್ಶನ ಭಟ್, ಉಳ್ಳಾಲ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸುಹಾಸಿನಿ ಬಬ್ಬುಕಟ್ಟೆ, ಗಂಜಿಮಠದ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಭಾಸ್ಕರ ರೈ ಕುಕ್ಕುವಳ್ಳಿ, ಕಿಟೆಲ್ ಪ್ರೌಢಶಾಲೆ ಮುಖ್ಯಶಿಕ್ಷಕಿ ಡಯಾನ ಜ್ಯೋತಿ ಫ್ರ್ಯಾಂಕ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ವಿಠಲ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭ ಹಿಂದಿನ ಕಾಲದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಸ್ವಚ್ಛನಗರವನ್ನಾಗಿಸಲು ಎಲ್ಲಾ ಖಾಸಗಿ ಸಂಸ್ಥೆಗಳ ಸಹಕಾರ ಅಗತ್ಯ, ಈ ಮೂಲಕ ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಉಳ್ಳಾಲ ನಗರಸಭೆಯ ಪೌರಾಯುಕ್ತೆ ರೂಪಾ.ಟಿ.ಶೆಟ್ಟಿ ಹೇಳಿದ್ದಾರೆ. ಅವರು ಉಳ್ಳಾಲದ ಕೆ.ಪಾಂಡ್ಯರಾಜ್ ಬಳ್ಳಾಲ್ ಶಿಕ್ಷಣ ಸಂಸ್ಥೆಗಳು, ನರ್ಸಿಂಗ್ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಉಳ್ಳಾಲ ನಗರಸಭೆ ಜಂಟಿ ಆಶ್ರಯದಲ್ಲಿ ಉಳ್ಳಾಲದ ಅಬ್ಬಕ್ಕ ವೃತ್ತದಿಂದ ಮಾಸ್ತಿಕಟ್ಟೆವರೆಗೆ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನಿ ಅನುಷ್ಠಾನಕ್ಕೆ ತಂದಿರುವ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಉಳ್ಳಾಲ ನಗರವನ್ನು ಸ್ವಚ್ಛನಗರವನ್ನಾಗಿಸಲು ಎಲ್ಲರೂ ಪ್ರಯತ್ನಿಸಬೇಕು. ಇಂತಹ ಕಾರ್ಯದಲ್ಲಿ ಖಾಸಗಿ ಸಂಸ್ಥೆಗಳು ಇನ್ನಷ್ಟು ಕೈಜೋಡಿಸಬೇಕಿದೆ ಎಂದರು. ಸ್ವಚ್ಛ ಭಾರತ ಅಭಿಯಾನದ ಉಳ್ಳಾಲ ನಗರಸಭೆಯ ರಾಯಭಾರಿ ಮಾಧವ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಕೆ.ಪಾಂಡ್ಯರಾಜ್ ಬಳ್ಳಾಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಪ್ರಿಯಾ ಬಲ್ಲಾಳ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಖೈನಿ ಸಿಸಿಲಿಯಾ, ಪಿ.ಯು.ಸಿ ಕಾಲೇಜಿನ ಪ್ರಾಂಶುಪಾಲೆ ಶರ್ಮಿಳಾ…

