ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಸ್ತ್ರೀ ಸಮಾನತೆಯಿಂದ ಸಂಸ್ಕøತಿ ಅಳಿವಿನಂಚಿನಲ್ಲಿದ್ದು, ಇದರಿಂದ ಉನ್ನತ ಸ್ಥಾನದಲ್ಲಿರುವ ತಾಯಂದಿರು ಕೆಳಗಿಳಿಯುವಂತಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೌದಿಕ್ ಪ್ರಮುಖ್ ಗಜಾನನ ಪೈ ಖೇದ ವ್ಯಕ್ತಪಡಿಸಿದ್ದಾರೆ. ಅವರು ಕುಂಪಲ ವ್ಯಾಸನಗರದ ಕೇಸರಿ ಮಾತೃ ಮಂಡಳಿ ವತಿಯಿಂದ ಕೇಸರಿ ಸಭಾಂಗಣದಲ್ಲಿ ಜರಗಿದ ಶ್ರೀವರಮಹಾಲಕ್ಷ್ಮೀ ಪೂಜಾ ವೃತದ ಪ್ರಯುಕ್ತ ಜರಗಿದ ಧಾರ್ಮಿಕಾ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಂಪತ್ತಿನ ಅಧಿದೇವತೆಯ ಆರಾಧನೆಯಿಂದ ಸಂಸ್ಕøತಿಯನ್ನು ಉಳಿಸುವ ಕಾರ್ಯ ಆಗುತ್ತದೆ. ಈ ನಿಟ್ಟಿನಲ್ಲಿ ಸಾಮೂಹಿಕವಾಗಿ ವರಮಹಾಲಕ್ಷ್ಮೀ ಆರಾಧನೆ ಶ್ಲಾಘನೀಯ. ತಾಯಂದಿರಿಗೆ ಭಯಯಭೀತಿ ಇಲ್ಲದೆ ನೆಮ್ಮದಿ ಇರುವ ಪ್ರದೇಶದಲ್ಲಿ ದೇವರು ಇರುತ್ತಾರೆ. ಸಂಸ್ಕಾರ , ಪರಿಶ್ರಮ ಇರುವ ಮನೆಗಳಲ್ಲಿ ಲಕ್ಷ್ಮೀ ಒಲಿಯುತ್ತಾಳೆ. ಸಾಮಾನ್ಯ ವ್ಯಕ್ತಿಯನ್ನು ಒಳ್ಳೆಯ ದಾರಿಗೆ ತರುವುದು ಸಂಸ್ಕಾರದ ಅರ್ಥ. ಈಗಿನ ಪದ್ಧತಿಯಲ್ಲಿ ಕೂಡು ಕುಟುಂಬದ ಬದಲು ಸ್ವಾರ್ಥದ ಕಡೆ ಜನ ವಾಲುತ್ತಿದ್ದಾರೆ. ಮನೆಯಲ್ಲಿ ನಡವಳಿಕೆ, ಮಾತುಕತೆ ಸರಿಯಿದ್ದರೆ ಮನೆಯೆಲ್ಲಾ ಬೆಳಗುತ್ತದೆ. ಕರಣ ಪಿಶಾಚಿಯಂತಿರುವ ಮೊಬೈಲಿನಿಂದ ಈಗ ಮಕ್ಕಳ ದಿನಚರಿಯೇ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ನಾಟೆಕಲ್: ರಿಕ್ಷಾ ಚಾಲಕನನ್ನು ಕಲ್ಲಿನಿಂದ ಜಜ್ಜಿ, ಮರದ ಸೋಂಟೆಯಿಂದ ಬಡಿದು ಕೊಲೆಗೈದಿರುವ ಘಟನೆ ನಾಟೆಕಲ್ ಸಮೀಪದ ಮಾಂಗಟ್ಟೆ ಎಂಬಲ್ಲಿ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ. ಅಳೇಕಲ ನಿವಾಸಿ ಹಿದಾಯತ್ (35) ಕೊಲೆಗೀಡಾದ ರಿಕ್ಷಾ ಚಾಲಕ. ಶುಕ್ರವಾರ ರಾತ್ರಿ 8 ರ ಸುಮಾರಿಗೆ ಪತ್ನಿಗೆ ಕರೆ ಮಾಡಿದವರು ಬಾಡಿಗೆ ಇರುವುದಾಗಿ ತಿಳಿಸಿದ್ದರು. ರಾತ್ರಿ ಅಡುಗೆ ಮಾಡಬೇಡ ಬರುವಾಗ ತರುತ್ತೇನೆ ಅಂದು ಹೇಳಿದ್ದರು. ತಡರಾತ್ರಿವರೆಗೂ ಪತ್ನಿ ಕಾದರೂ ಹಿದಾಯತ್ ಮಾತ್ರ ಬಂದಿರಲಿಲ್ಲ. ಇಂದು ಬೆಳಿಗ್ಗೆ ಕೂಡಾ ಮನೆಗೆ ಬಾರದೇ ಇರುವುದರಿಂದ ಹಿದಾಯತ್ ಸಹೋದರ ಹನೀಫ್ ಅವರಿಗೆ ವಿಷಯ ತಿಳಿಸಿದ್ದರು. ಅವರು ಇನ್ನೋರ್ವ ಸಹೋದರ ಮಹಮ್ಮದ್ ರಫೀಕ್ ಅವರ ಜತೆಗೆ ಸೇರಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಜೀವ ಬೆದರಿಕೆಯಿತ್ತು : ಎರಡು ದಿನಗಳ ಹಿಂದೆ ಹಿದಾಯತ್ಗೆ ಅಳೇಕಲ ನಿವಾಸಿ ಫಾರುಕ್ ಎಂಬಾತ ಜೀವಬೆದರಿಕೆ ಒಡ್ಡಿದ್ದ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಹಿದಾಯತ್ ಶುಕ್ರವಾರ ಮಧ್ಯಾಹ್ನ ವೇಳೆ ಮೌಖಿಕವಾಗಿ ದೂರು ಸಲ್ಲಿಸಿದ್ದರು. ಇಂದು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಯುವಕನೋರ್ವನ ಶವ ಕೊಳೆತ ಸ್ಥಿತಿಯಲ್ಲಿ ಮುಡಿಪು ಜೋಸೆಫ್ ವಾಝ್ ಚರ್ಚಿನ ಎದುರುಗಡೆ ಮರದಡಿಯ ಗುಡ್ಡ ಪ್ರದೇಶದಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದರೂ, ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಡಿಪು ಗುಡ್ಡ ಪ್ರದೇಶದಲ್ಲಿರುವ ಮರದ ಅಡಿಯಲ್ಲಿ ಸುಮಾರು 30-35ರ ಹರೆಯದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶುಕ್ರವಾರದ ಪೂಜೆಗೆಂದು ಬಂದ ಮಹಿಳೆಯೋರ್ವರು ಶವವನ್ನು ಕಂಡು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಶವದ ಕೊರಳಿನಲ್ಲಿ ಶಾಲು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಣ್ಣ ಗಾತ್ರ ಹಾಗೂ ಕೊಂಬೆಗಳು ಗಟ್ಟಿಯಿಲ್ಲದ ಮರದಡಿಯಲ್ಲಿ ಶವ ಪತ್ತೆಯಾಗಿರುವುದರಿಂದ , ಮರದಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಲು ಸಾಧ್ಯವಿಲ್ಲ. ಹಾಗಿದ್ದರೂ ಕೊಂಬೆ ತುಂಡಾದ ಸ್ಥಿತಿಯಲ್ಲಿರಬೇಕಿತ್ತು. ಆದರೆ ಶವ ಸಿಕ್ಕ ಸ್ಥಳದಲ್ಲಿ ಅಂತಹ ಯಾವುದೇ ಕುರುಹುಗಳಿಲ್ಲ. ಶವ ಮಾತ್ರ ಕುತ್ತಿಗೆಯಲ್ಲಿ ಶಾಲು ಬಿಗಿದ ಸ್ಥಿತಿಯಲ್ಲಿ ಕೊಳೆತ ಸ್ಥಿತಿಯಲ್ಲಿರುವುದರಿಂದ 3-4 ದಿನಗಳ ಹಿಂದೆ ಯುವಕ ಮರಕ್ಕೆ ನೇಣುಬಿಗಿದಿರಬಹುದು. ಬಳಿಕ ಕೊಳೆತಾಗ ದೇಹದ ತೂಕವೂ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಾಪಿಕಾಡು: ಪೊಲದವರ ಯಾನೆ ಗಟ್ಟಿ ಸೇವಾ ಸಮಾಜದ ಮಹಿಳಾ ವಿಭಾಗದ ವತಿಯಿಂದ ಕಾಪಿಕಾಡು ಗಟ್ಟಿ ಸಮಾಜ ಭವನದಲ್ಲಿ ವರಮಹಾಲಕ್ಷ್ಮೀ ಪೂಜೆ ನೆರವೇರಿತು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಕ್ರೀಡೆಯು ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ದೈಹಿಕ ದೃಢತೆಯೊಂದಿಗೆ ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸಲು ಸಹಕಾರಿಯಾಗಬಲ್ಲುದು ಎಂದು ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ ಅವರು ಹೇಳಿದರು. ಅವರು ಕೊಣಾಜೆ ಗ್ರಾಮದ ಕುಂಟಾಲಗುಳಿಯಲ್ಲಿ ಶ್ರೀ ಮಹಾಕಾಳಿ ಮಿತ್ರಮಂಡಳಿಯ ವತಿಯಿಂದ ಭಾನುವಾರ ಕುಂಟಾಲಗುಳಿಯ ಮೈದಾನದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದ ವಿಜೇತ ತಂಡಗಳಿಗೆ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದರು. ಇಂದು ಕೇವಲ ಶಿಕ್ಷಣ ಮಾತ್ರ ನಮ್ಮನ್ನು ಪರಿಪೂರ್ಣವಾಗಿದು. ಶೈಕ್ಷಣಿಕ ಚಟುವಟಿಕೆಯೊಂದಿಗೆ ಕ್ರೀಡೆಯೂ ಕೂಡಾ ನಮ್ಮನ್ನು ಉತ್ತಮ ನಾಗರಿಕನನ್ನಾಗಿ ಸೃಷ್ಟಿಸಬಲ್ಲುದು. ಅಲ್ಲದೆ ಇಂದು ಗ್ರಾಮೀಣ ಪ್ರದೇಶದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಷ್ಟೋ ಜನರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದಾರೆ ಎಂದು ಹೇಳಿದರು. ದಸ್ತಾವೇಜು ಬರಹಗಾರರಾದ ಸದಾಶಿವಯ್ಯ ಶಾಸ್ತ್ರಿಯವರು ಮಾತನಾಡಿ, ಹಿಂದೆ ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿರಲಿಲ್ಲ. ಆದರೆ ಇಂದು ಬಹಳಷ್ಟು ಪ್ರೋತ್ಸಾಹ ಸಿಗುತ್ತಿದ್ದು, ಗ್ರಾಮೀಣ ಯುವಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಪಂಚಾಯಿತಿ ಸದಸ್ಯ ನಝರ್ ಷಾ ಪಟ್ಟೋರಿ ಅವರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ : ಕೋಟೆಕಾರ್ ಸಮೀಪದ ಸೋಮೇಶ್ವರ(ಉಳ್ಳಾಲ) ರೈಲ್ವೇ ಸ್ಟೇಷನ್ ಬಳಿಯ ಪಾಳುಬಿದ್ದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಸೇರಿದಂತೆ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ದಾಳಿ ಸಂದರ್ಭದಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ದಾಳಿ ವೇಳೆ ಉಳ್ಳಾಲ ಪೊಲೀಸ್ ಕಾನ್ಸ್ಟೇಬಲ್ ಮಹೇಶ್ ಗಟ್ಟಿ ಎಂಬವರಿಗೆ ಗಾಯವಾಗಿದೆ. ಬಂಧಿತರನ್ನು ನ್ಯೂಉಚ್ಚಿಲ ನಿವಾಸಿ ರಾಕೇಶ್(34), ಬೀರಿ ನಿವಾಸಿ ಮಹಮ್ಮದ್ ಸಿರಾಜ್(30) ಹಾಗೂ ಅಸೈಗೋಳಿ ನಿವಾಸಿ 35ರ ಹರೆಯದ ವಿವಾಹಿತೆ ಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ದಾಳಿ ಸಂಬಂಧ ಕೋಟೆಕಾರ್ ಬೀರಿ ನಿವಾಸಿ ಅಬ್ಬಾಸ್ ಮತ್ತು ಉಳ್ಳಾಲ ಮುಕ್ಕಚ್ಚೇರಿಯ ಮುಕ್ಕಚ್ಚೇರಿಯ ಜಾಫರ್ ಎಂಬವರು ಪರಾರಿಯಾಗಿದ್ದಾರೆ. ಸೋಮೇಶ್ವರದಲ್ಲಿರುವ ಉಳ್ಳಾಲ ರೈಲ್ವೇ ನಿಲ್ದಾಣ ಸಮೀಪದ ಪಾಳುಬಿದ್ದ ಮನೆಯಲ್ಲಿ ಗ್ಲಾಂಬ್ಲಿಂಗ್ ನಡೆಯುತ್ತಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿಯಂತೆ ಉಳ್ಳಾಲ ಎಸ್.ಐ ಭಾರತಿ ಮತ್ತು ಕಾನ್ಸ್ಟೇಬಲ್ ಮಹೇಶ್ ಗಟ್ಟಿ ಬಂದಿದ್ದು, ಬಳಿಕ ಇತರ ಪೊಲೀಸರನ್ನು ಕರೆಸಿದ್ದು, ಈ ಸಂದರ್ಭದಲ್ಲಿ ಪೊಲೀಸರನ್ನು ನೋಡಿ ರಾಕೇಶ್ ಓಡಲು ಯತ್ನಿಸಿದಾಗ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆ ಕಣಚೂರು ಪಬ್ಲಿಕ್ ಸ್ಕೂಲ್ನಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಮುಖ್ಯಅತಿಥಿಗಳಾಗಿ ಮಂಗಳೂರು ಸಿ.ಐ.ಎಸ್.ಎಫ್., ಎನ್. ಎಮ್.ಪಿ.ಟಿ ಡೆಪ್ಯುಟಿ ಕಮಾಂಡೆಂಟ್ ಶಿವೇಂದ್ರ ಪ್ರತಾಪ್ ಸಿಂಗ್, ಶಾಲಾ ನಾಯಕನ ಪ್ರತಿಜ್ಞಾ ವಿಧಿಯನ್ನು ಶಾಲಾ ಹಣಕಾಸು ವಿಭಾಗದ ಮುಖ್ಯಸ್ಥೆ ಶಹದಾ ರಹಿಮಾನ್ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕಣಚೂರು ವಿದ್ಯಾಸಂಸ್ಥೆಯ ಸಂಚಾಲಕ ಅಬ್ದುಲ್ ರಹಿಮಾನ್, ಕಣಚೂರು ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಇಕ್ಬಾಲ್ ಅಹಮ್ಮದ್ ಯು.ಟಿ., ಆನಂದಿ, ಹೇಮಲತಾ, ಲಿನೆಟ್ ಉಪಸ್ಥಿತರಿದ್ದರು. ತಶ್ರೀಫಾ, ಹಿಭಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿದರು. ಶಾಲಾ ನಾಯಕಿ ನಿಹಾ ಮಿಥಲ್ ವಂದಿಸಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಬಳಿ ರೈಲ್ವೇ ಹಳಿ ದಾಟುತ್ತಿದ್ದ ದೇರಳಕಟ್ಟೆ ಬಗಂಬಿಲ ನಿವಾಸಿ ಅಬ್ಬಾಸ್ (62) ಎಂಬವರು ರೈಲು ಬಡಿದು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಗೋಣಿ ಚೀಲ ವ್ಯಾಪಾರ ನಡೆಸುತ್ತಿದ್ದ ಅಬ್ಬಾಸ್ ತೊಕ್ಕೊಟ್ಟು ಮಂಚಿಲದಲ್ಲಿರುವ ಮಗಳ ಮನೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ತೊಕ್ಕೊಟ್ಟು ಒಳಪೇಟೆ ಬಳಿಯ ಮಂಚಿಲ ಬಳಿ ರೈಲು ಹಳಿ ದಾಟುತ್ತಿದ್ದಾಗ ಒಂದು ಹಳಿಯಲ್ಲಿ ರೈಲು ಬಂತೆಂದು ಇನ್ನೊಂದು ಹಳಿಗೆ ಇಳಿದಿದ್ದು, ಇನ್ನೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಇನ್ನೊಂದು ರೈಲಿನಡಿಗೆ ಸಿಲುಕಿ ಮೃತಪಟ್ಟಿದ್ದು, ರೈಲಿನ ಅಪಘಾತಕ್ಕೆ ಮೃತದೇಹ ಛಿದ್ರಗೊಂಡಿದ್ದು, ಪಕ್ಕದಲ್ಲೇ ಬಿದ್ದಿದ್ದ ಪರ್ಸ್ನಲ್ಲಿದ್ದ ಭಾವಚಿತ್ರದಿಂದ ಮೃತರನ್ನು ಗುರುತಿಸಲಾಯಿತು. ಘಟನಾ ಸ್ಥಳಕ್ಕೆ ಉಳ್ಳಾಲ ಪೆÇಲೀಸರು, ರೈಲ್ವೇ ಪೆÇಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಅನಾರೋಗ್ಯದ ವೇಳೆ ರೋಗಿಯು ಯಾವ ರೀತಿಯ ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಮಾರ್ಗದರ್ಶನ ನೀಡಲು ಪ್ರತಿ ಗ್ರಾಮ ಪಂಚಾಯತ್ಗಳಲ್ಲೂ ಮಾಹಿತಿ ಕೇಂದ್ರಗಳನ್ನು ನಿರ್ಮಿಸಲು ಸೂಚಿಸಿರುವುದಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದರು. ಕಿನ್ಯಾ ಸಿ ಹೆಚ್ ನಗರದ ಕುತುಬಿಯ್ಯಾ ಮದ್ರಸ ಸಭಾಂಗಣದಲ್ಲಿ ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ , ಕುತುಬಿಯ್ಯಾ ಹಳೆ ವಿದ್ಯಾರ್ಥಿ ಕಮಿಟಿ ಕಿನ್ಯ ,ಮತ್ತು ಕುತುಬಿಯ್ಯಾ ಮದ್ರಸದ ಸುವರ್ಣ ಮಹೋತ್ಸವ ಅಂಗವಾಗಿ ಏರ್ಪಡಿಸಿದ ಉಚಿತ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿದರು . ಪ್ರತಿ ಗ್ರಾಮದಲ್ಲೂ ಅನಾರೋಗ್ಯ ಪೀಡಿತರು ತಕ್ಷಣಕ್ಕೆ ಯಾವ ಆಸ್ಪತ್ರೆಗೆ ಹೋಗಿ ಯಾವ ರೀತಿಯ ಚಿಕಿತ್ಸೆ ಪಡೆಯಬೇಕೆಂಬ ಗೊಂದಲವನ್ನು ಹೋಗಲಾಡಿಸುವ ದೃಷ್ಟಿಯಲ್ಲಿ ಅನಾರೋಗ್ಯ ಪೀಡಿತರಿಗೆ ತಕ್ಷಣಕ್ಕೆ ಸೂಕ್ತ ಸಲಹೆ ಮಾರ್ಗದರ್ಶನಗಳನ್ನು ನೀಡಲು ಗ್ರಾಮ ಪಂಚಾಯತ್ನಲ್ಲೇ ಮಾಹಿತಿ ಕೇಂದ್ರಗಳನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಕಾಳಜಿ ಇಟ್ಟುಕೊಂಡು ಖಾಸಗಿ ಆಸ್ಪತ್ರೆಗಳು ನೀಡುತ್ತಿರುವ ಸೇವೆ ಶ್ಲಾಘನೀಯ. ಸರಕಾರವೂ ಈಗಾಗಲೇ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೆಳ್ಮ : ಗ್ರಾಮ ಪಂಚಾಯಿತಿ ಎಂಬುದು ರಾಜಕೀಯ ಕೇಂದ್ರವಲ್ಲ, ಅದು ಪಕ್ಷ ರಹಿತ ಕೇಂದ್ರವಾಗಿದ್ದು, ಅಲ್ಲಿಗೆ ಅಕ್ರಮವಾಗಿ ಪ್ರವೇಶಿಸಿ ಗ್ರಾಮದ ಪ್ರಥಮ ಮಹಿಳಾ ಪ್ರಜೆಯ ಮೇಲೆ ದೌರ್ಜನ್ಯ ಎಸಗುವುದು ದುರಾದೃಷ್ಟಕರ ತಪ್ಪಿತಸ್ಥ ಆರೋಪಿಯನ್ನು ಕೂಡಲೇ ಬಂಧಿಸದೇ ಇದ್ದಲ್ಲಿ ಕೊಣಾಜೆ ಠಾಣೆಯೆದುರು ಪ್ರತಿಭಟನೆ ನಡೆಸುವುದಾಗಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಮತಾ.ಯಸ್. ಗಟ್ಟಿ ಹೇಳಿದ್ದಾರೆ. ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಾ ಕೃಷ್ಣಪ್ಪ ಅವರ ಮಾನಭಂಗ ಯತ್ನ ಪ್ರಕರಣವನ್ನು ಖಂಡಿಸಿ ಪಂಚಾಯಿತಿನಲ್ಲಿ ಕಾಂಗ್ರೆಸ್ನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಖಂಡನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾ.ಪಂ.ಗಳಲ್ಲಿ ಶೇ.50 ರಷ್ಟು ಮಹಿಳೆಯರೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಲ್ಲಿದ್ದಾರೆ. ಮಹಿಳೆಯರು ಪ್ರಾಮಾಣಿಕ, ದಕ್ಷತೆ, ಪಕ್ಷಬೇಧ ಮರೆತು ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಮಟ್ಟದಿಂದ ಅಭಿವೃದ್ಧಿ ಪಥದಲ್ಲಿ ಇರುವ ಬೆಳ್ಮ ಪಂಚಾಯಿತಿನ ಅಭಿವೃದ್ಧಿಯಲ್ಲಿ ಅಧ್ಯಕ್ಷೆ ವಿಜಯಾ ಅವರ…

