ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ನಾರಾಯಣ ಗುರುಗಳ ತತ್ವಾದರ್ಶಗಳು ಸಾರ್ವಕಾಲಿಕವಾಗಿದ್ದು, ಯುವಜನರು ಅವರ ತತ್ವವನ್ನು ಅಳವಡಿಸಿಕೊಂಡಾಗ ಸಮಾಜದಲ್ಲಿ ಸಾಂಸ್ಕøತಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಸೋಮೇಶ್ವರದ ಪರಿe್ಞÁನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಾಬು ಬೆಳ್ಚಾಡ ಅಭಿಪ್ರಾಯಪಟ್ಟರು. ಅವರು ಸೋಮೇಶ್ವರ ಕೊಲ್ಯದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 161ನೇ ಜನ್ಮ ಜಯಂತಿಯ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಪುರುಷೋತ್ತಮ ಅಂಚನ್ ದೇರಳಕಟ್ಟೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಕಿನ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ನಾರಾಯಣ ಪೂಜಾರಿ, ರಾಜೀವ ಆಳ್ವ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರೇಮಲತಾ ಆರ್. ಆಳ್ವ , ಮಹಿಳಾ ಮಂಡಲ ಗೌರವಾಧ್ಯಕ್ಷೆ ವಿಶಾಲಾಕ್ಷಿ ಜೆ. ಸೋಮೇಶ್ವರ ಅಧ್ಯಕ್ಷೆ ಹೇಮಾವತಿ ಉಪಸ್ಥಿತರಿದ್ದರು. ಈ ಸಂದರ್ಭ ಸೋಮೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲಕೃಷ್ಣ ಸೋಮೇಶ್ವರ, ಅಶೋಕ್ ಕುಂಪಲ, ಕಿಶೋರ್…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ : ಕೊಲ್ಯ ಶ್ರೀ ಶಾರದಾ ಮಹೋತ್ಸವ ಸಮಿತಿಯ 2015-16ನೇ ಸಾಲಿನ ಅಧ್ಯಕ್ಷರಾಗಿ ಪ್ರವೀಣ್ ಕುಜುಮಗದ್ದೆ ಆಯ್ಕೆಯಾದರು. ಶ್ರೀ ಶಾರದಾ ಸಭಾ ಸದನದಲ್ಲಿ ನಡೆದ ಸಮಿತಿ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಸೀತರಾಮ ಬಂಗೇರ ಕೊಲ್ಯ, ಉಪಾಧ್ಯಕ್ಷರಾಗಿ ಸದಾಶಿವ ಬಪ್ಪಹಿತ್ತಿಲು, ದಿವಾಕರ ಕೊಲ್ಯ, ಶ್ಯಾಂಸುಂದರ್ ಜೆಪ್ಪು, ಡಿ.ಎನ್. ರಾಘವ ಮಾಸ್ತರ್ ಕೊಲ್ಯ, ಮನು ಕಟ್ಟೆಮನೆ, ಗಣೇಶ್ ಕೊಲ್ಯ, ಯಶೋಧರ ಕೊಲ್ಯ, ಮುರಳಿ ಐ.ಓ.ಸಿ ಮಾಡೂರು, ಹರೀಶ್ ಕೊಲ್ಯ, ಪುರುಷೋತ್ತಮ ಅಡ್ಕ, ಗುಣವತಿ ಜಿ. ಆಚಾರ್ಯ, ಶ್ರೀನಿವಾಸ್ ಕೊಲ್ಯ, ಗೌರಾವಾಧ್ಯಕ್ಷರಾಗಿ ರಾಮಚಂದ್ರ ಕುಂಪಲ, ರಮೇಶ್ ಕೊಲ್ಯ, ತೋನ್ಸೆ ಪುಷ್ಕಳ ಕುಮಾರ್ ಕೊಲ್ಯ, ಮೋಹನ್ ಶೆಟ್ಟಿ ಕುಂಪಲ, ಉಮೇಶ್ ಕುಲಾಲ್ ಕನೀರುತೋಟ, ಗೋಪಾಲಕೃಷ್ಣ ಎಸ್. ಪದ್ಮನಾಭ ಶೆಟ್ಟಿ ವರ್ಕಾಡಿ, ಎಡ್ವರ್ಡ್ ಲೋಬೋ, ಪ್ರಧಾನ ಕಾರ್ಯದರ್ಶಿಯಾಗಿ ಶೈಲೇಂದ್ರ ಕುಜುಮಗದ್ದೆ, ಜೊತೆ ಕಾರ್ಯದರ್ಶಿಯಾಗಿ ಜಗಜೀವನ್ ಕೊಲ್ಯ, ಶ್ರವಣ್ ಕುಜುಮಗದ್ದೆ, ಹರೀಶ್ ಕುಮಾರ್ ಆಚಾರ್, ಕೋಶಾಧಿಕಾರಿಯಾಗಿ ಪ್ರಕಾಶ್ ಎಚ್. , ಮುಖ್ಯ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಕೊಲ್ಯ ಶ್ರೀ ಶಾರದಾ ಮಹಿಳಾ ಮಂಡಳಿಯ 2015-16ನೇ ಸಾಲಿನ ಅಧ್ಯಕ್ಷರಾಗಿ ಪ್ರಮೀಳಾ ಚಂದ್ರಶೇಖರ್ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ರಜನಿಪ್ರಕಾಶ್, ಉಪಾಧ್ಯಕ್ಷರಾಗಿ ದೇವಕಿ ರಾಘವ, ಕಾರ್ಯದರ್ಶಿಯಾಗಿ ರೇಷ್ಮಾ ಪುಷ್ಕಳ ಕುಮಾರ್, ಜೊತೆಕಾರ್ಯದರ್ಶಿಯಾಗಿ ಶರ್ಮಿಳ ಶ್ರೀನಿವಾಸ್, ಕೋಶಾಧಿಕಾರಿಯಾಗಿ ಮಂಜುಳ ಬಾಲಕೃಷ್ಣ, ಸಂಘಟನಾ ಕಾರ್ಯದರ್ಶಿಯಾಗಿ ತುಳಸಿ ವಿಶ್ವನಾಥ್, ಕ್ರೀಡಾ ಸಂಚಾಲಕಿಯಾಗಿ ಜಯಂತಿ ರಮೇಶ್, ಜೊತೆ ಕ್ರೀಡಾ ಸಂಚಾಲಕಿಯಾಗಿ ಲೋಲಾಕ್ಷಿ, ಜಯ, ಸಲಹೆ-ಸೂಚನೆ ಗುಣವತಿ ಜೆ. ಆಚಾರ್ಯ, ಸದಸ್ಯರುಗಳಾಗಿ ವನಜಾಕ್ಷಿ, ಅಮಿತ, ಲೀಲಾವತಿ, ಪವಿತ್ರ, ಸರೋಜಿನಿ, ಜಯಂತಿ, ಚಿತ್ರಕಲಾ, ಸೌಮ್ಯ, ನವ್ಯಶ್ರೀ, ರಕ್ಷಿತ, ಹರ್ಷಿತ, ಅಪೂರ್ವ ಇವರು ಆಯ್ಕೆಯಾದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಊರಿನ ಜನರಿಗೆ ಮತ್ತು ಸ್ವಸಹಾಯ ಸಂಘದ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ವ್ಯಾಯಾಮ ಶಾಲೆಯ ಸದಸ್ಯರಿಗೆ ಕ್ರೀಡಾಕೂಟ ಕಾರ್ಯಕ್ರಮವು ಕುಂಪಲ ಹನುಮಾನ್ ನಗರ ಶ್ರೀ ವೀರಾಂಜನೇಯ ವ್ಯಾಯಾಮ ಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಜನಾಡಿ : ಪ್ರಪಂಚದಲ್ಲಿಯೇ ಅತಿಶ್ರೇಷ್ಠ ಧರ್ಮವಾದ ಇಸ್ಲಾಂ ಧರ್ಮದಲ್ಲಿರುವ ಆಚರಣೆ, ಆರಾಧನೆಗಳು ಹಾಗೂ ಧರ್ಮದ ಇತರ ಎಲ್ಲ ಕಾರ್ಯಗಳಲ್ಲಿ ಸಮುದಾಯದ ಜನತೆಗೆ ಪೂರ್ಣಪ್ರಮಾಣದ ವಿಶ್ವಾಸ ಮುಖ್ಯ. ಸತ್ಯದ ಹಾದಿಯಲ್ಲಿ ಸಾಗಿದಾಗ ಮಾತ್ರ ಬದುಕು ಸಾರ್ಥಕವಾಗಲು ಸಾಧ್ಯ ಎಂದು ಪ್ರವಾದಿಯವರು ಹೇಳಿದ್ದು ಇಸ್ಲಾಂ ಧರ್ಮ ಅನುಯಾಯಿಗಳಾದ ನಾವು ಅದೇ ಹಾದಿಯಲ್ಲೇ ಸಾಗಬೇಕು ಎಂದು ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟಗಳ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ. ಸುಲಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದರು. ನರಿಂಗಾನ ಮಂಜನಾಡಿಯ ಅಲ್ ಮದೀನಾ ಇಸ್ಮಾಮಿಕ್ ಕಾಂಪ್ಲೆಕ್ಸ್ನಲ್ಲಿ ಭಾನುವಾರ ನಡೆದ ಮೊದಲ `ಅಲ್ ಮರ್ಝೂಕಿ’ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪದವಿ ಪ್ರಭಾಷಣಗೈದು ಪದವಿ ಪಡೆದುಕೊಂಡವರು ಸಮಾಜಕ್ಕೆ ಮಾದರಿಯಾಗಿ, ಸೇವಾ ಮನೋಭಾವನೆಯಿಂದ ಕರ್ತವ್ಯ ರ್ನಿಹಿಸಬೇಕು. ಯಾರನ್ನೂ ದ್ವೇಷಿಸದೆ ಯಾರನ್ನೂ ನಿಂದಿಸದೆ ಧರ್ಮವಿರೋಧಿ ಚಟುವಟಿಕೆಯಲ್ಲಿ ಸಾಗದೇ ಇಸ್ಲಾಂ ಧರ್ಮದ ತತ್ವ ಸಿದ್ಧಾಂತಗಳನ್ನು ಜನತೆಗೆ ಬೋಧಿಸುವ ಹಾದಿಯಲ್ಲಿ ಮುಂದುವರಿಯಬೇಕು ಎಂದು ಕರೆ ನೀಡಿದರು. ಪಿ.ಎಂ. ಅಬ್ಬಾಸ್ ಮುಸ್ಲಿಯಾರ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ನಾಟೆಕಲ್: ರಿಕ್ಷಾ ಚಾಲಕ ಉಳ್ಳಾಲ ಅಳೇಕಲ ನಿವಾಸಿ ಹಿದಾಯತ್ (35) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಆತನ ಮೊದಲನೇ ಪತ್ನಿಯನ್ನು ಭಾನುವಾರ ಬಂಧಿಸಿದ್ದಾರೆ. ಉಳ್ಳಾಲ ಪ್ಯಾರೀಸ್ ಜಂಕ್ಷನ್ನಿನ ಬಳಿಯ ರೆಹಮತ್ತುಲ್ಲಾ ಎಂಬವರ ಪತ್ನಿ ಫಜೀಲಾ(28) ಎಂಬಾಕೆಯನ್ನು ಬಂಧಿಸಲಾಗಿದೆ. ಶನಿವಾರ ಹಿದಾಯತ್ ಶವ ನಾಟೆಕಲ್ ಸಮೀಪದ ಜನವಸತಿಯಿಲ್ಲದ ಪ್ರದೇಶದಲ್ಲಿ ಕಲ್ಲಿನಿಂದ ಮತ್ತು ಮರದ ಸೋಂಟೆಯಿಂದ ಬಡಿದು ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಎರಡು ದಿನಗಳ ಹಿಂದೆ ಹಿದಾಯತ್ಗೆ ಮೊದಲ ಪತ್ನಿಯ ಸಹೋದರ ಫಾರೂಕ್ ಎಂಬಾತ ಜೀವಬೆದರಿಕೆ ಒಡ್ಡಿದ್ದ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಹಿದಾಯತ್ ಕೊಲೆಯಾದ ನಂತರ ಈತನ ಮೊದಲ ಪತ್ನಿ ಫಜೀಲಾ ಳ ಸಹೋದರರು ನಾಪತ್ತೆಯಾಗಿದ್ದು, ಇದರಿಂದ ಕೊಲೆ ಆರೋಪಿಗಳು ಅವರೇ ಅನ್ನುವುದನ್ನು ಪೊಲೀಸರು ದೃಢೀಕರಿಸಿದ್ದರು. ಅಲ್ಲದೆ ಕೊಲೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಫಜೀಲಾಳನ್ನು ಪೊಲೀಸರು ಬಂಧಿಸಿದ್ದಾರೆ. ಹಿದಾಯತ್ ಗೆ ಫಜೀಲಾ ಮೊದಲ ಪತ್ನಿಯಾಗಿದ್ದು, ಆಕೆಗೆ ತಲಾಖ್ ನೀಡಿದ ನಂತರ ಮೂಡಬಿದ್ರೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಚ್ಚಿಲ: ಸಮಾಜಕ್ಕೆ ಉತ್ತಮ ಆರೋಗ್ಯವನ್ನು ಕಲ್ಪಿಸುವುದರ ಜೊತೆಗೆ ಜನಸಾಮಾನ್ಯರು ಕುಟುಂಬ ನಿರ್ವಹಣೆ ನಡೆಸಲು ಬೇಕಾದ ಉದ್ಯೋಗಾವಕಾಶಗಳನ್ನು ನೀಡುವಲ್ಲಿ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಉತ್ತಮ ಕಾರ್ಯ ನಡೆಸುತ್ತಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು. ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಬೋವಿ ವಿದ್ಯಾ ಸಂಸ್ಥೆ ಇದರ ಸಹಯೋಗದೊಂದಿಗೆ ,ಉಚ್ಚಿಲದ ಬೋವಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದರು. ಕಣಚೂರು ಆಸ್ಪತ್ರೆಯು ಸಮಾಜಕ್ಕೆ ಉತ್ತಮ ಆರೋಗ್ಯ ಭಾಗ್ಯ ನೀಡುವುದರ ಜತೆಗೆ ಪರಿಸರದ ಜನತೆಗೆ ಜೀವನ ನಿರ್ವಹಣೆಗೆ ಬೇಕಾದ ಉದ್ಯೋಗವನ್ನೂ ಕಲ್ಪಿಸಿ ಕೊಡುವಲ್ಲಿ ಯಶಸ್ವಿಯಾಗಿದೆ.ಜನರ ಆರೋಗ್ಯದ ವಿಷಯದಲ್ಲಿ ವ್ಯಾವಹಾರಿಕವಗಿ ವರ್ತಿಸದೆ ,ಸೇವಾ ಮನೋಭಾವನೆ ಬೆಳೆಸಿ ,ಎಲ್ಲಾ ಗ್ರಾಮಗಳಲ್ಲೂ ವೈದ್ಯಕೀಯ ಶಿಬಿರಗಳನ್ನು ವಿಸ್ತರಿಸುವಂತಾಗಬೇಕು ಎಂದರು. ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹಣಕಾಸು ಮತ್ತು ಆಡಳಿತ ನಿರ್ದೇಶಕರಾದ ಅಬ್ದುಲ್ ರೆಹಮಾನ್ ಮಾತನಾಡಿ ,ಪರಿಸರದ ಎಲ್ಲಾ ಗ್ರಾಮಗಳ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಟಿಕೇಟ್ ವಿಚಾರಕ್ಕೆ ಸಂಬಂಧಿಸಿ ಸಿಟಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಘಟನೆ ಕುಂಪಲ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಗಂಜಿಮಠ ನಿವಾಸಿ ಮಹೇಶ್ (32) ಹಲ್ಲೆಗೊಳಗಾದವರು. ನವೀನ್ ಮತ್ತು ಶಕ್ತಿ ಹಾಗೂ 10 ಮಂದಿಯ ತಂಡ ಬಸ್ಸನ್ನು ತಡೆದು ನಿರ್ವಾಹಕ ಮಹೇಶ್ ಗೆ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಟಿಕೇಟ್ ವಿಚಾರ ಹಿನ್ನೆಲೆ: ಶುಕ್ರವಾರ ಸಂಜೆ ವೇಳೆ ಸ್ಟೇಟ್ ಬ್ಯಾಂಕ್ ಬಳಿ ಅಶ್ವಿನಿ ಹೆಸರಿನ ಬಸ್ಸನ್ನು ಕುಂಪಲಕ್ಕೆ ಹೋಗುವ ಯುವತಿ ಏರಿದ್ದಳು. ಕುಂಪಲಕ್ಕೆ ಹೋಗಲು ರೂ.10 ಟಿಕೇಟ್ ದರವನ್ನು ನೀಡಿದ್ದಳು. ಆದರೆ ನಿರ್ವಾಹಕ ಮಹೇಶ್ ರೂ.12 ನೀಡುವಂತೆ ಹೇಳಿದ್ದ. ಆದರೆ ಯುವತಿ ಬೇರೆ ಬಸ್ಸಿನಲ್ಲಿ ರೂ.10 ಕೊಡುತ್ತೇವೆ, ಕೊಡುವುದಿಲ್ಲ ಎಂದು ತಿಳಿಸಿ ಬಸ್ಸಿನಿಂದ ಇಳಿದು ಬೇರೆ ಬಸ್ಸಿನಲ್ಲಿ ಪ್ರಯಾಣಿಸಿದ್ದಳು. ಇಂದು ಆಕೆಯೇ ತಂಡವೊಂದನ್ನು ಸೇರಿಸಿಕೊಂಡು ತನಗೆ ಹಲ್ಲೆ ನಡೆಸಿದ್ದಾಳೆ ಎಂದು ಮಹೇಶ್ ಆರೋಪಿಸಿ, ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಹರಕೆ ಹೇಳುವ ಚಟ: ನಿರ್ವಾಹಕ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಚ್ಚಿಲ: ಅಕ್ರಮವಾಗಿ ಮನೆಗೆ ನುಗ್ಗಲು ಯತ್ನಿಸಿದ ಆರು ಮಂದಿ ಯುವಕರ ತಂಡ ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅವರಿಗೆ ತಲವಾರು ಬೀಸಿ ಕೊಲೆಗೆ ಯತ್ನಿಸಿರುವ ಘಟನೆ ಉಚ್ಚಿಲದ ನಿತ್ಯಾನಿಕೇತನದ ಮನೆಯಲ್ಲಿ ಶುಕ್ರವಾರ ತಡರಾತ್ರಿ ವೇಳೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಉಳ್ಳಾಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕಿನ್ಯಾ ನಿವಾಸಿ ಫಯಾನ್ , ನಾಝೀರ್ ಮಂಜನಾಡಿ, ರಫೀಕ್ ಮಂಜನಾಡಿ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ರಮೀಝ್, ತೈಸರ್, ರುಕ್ಸಾನ್ ಮಂಜನಾಡಿ ಎಂಬವರು ಪರಾರಿಯಾಗಿದ್ದಾರೆ. ಶುಕ್ರವಾರ ತಡರಾತ್ರಿ ವೇಳೆ ರಾಜೇಶ್ ಉಚ್ಚಿಲ್ ಅವರ ಮನೆಗೆ ಬಂದ ಆರೋಪಿಗಳು ಬಾಗಿಲು ಬಡಿದಿದ್ದರು. ಬಾಗಿಲು ತೆರೆಯಲು ಮುಂದಾಗುತ್ತಿದ್ದಂತೆ ಆರೋಪಿಗಳಲ್ಲಿ ಓರ್ವ ತಲವಾರು ಬೀಸಿದ್ದು, ರಾಜೇಶ್ ಅವರು ದಾಳಿಯಿಂದ ತಪ್ಪಿಸಿದ್ದಾರೆ. ಕೂಡಲೇ ವಿಚಾರ ಮನೆಮಂದಿಗೆ ತಿಳಿದಾಗ ಅವರು ಬೊಬ್ಬೆ ಹಾಕಲು ಆರಂಭಿಸುತ್ತಿದ್ದಂತೆ ಸ್ಥಳೀಯರು ಇವರ ಮನೆಗೆ ಓಡಿ ಬರುವಷ್ಟರಲ್ಲಿ ಆರೋಪಿಗಳೆಲ್ಲರೂ ಹೊರಗಡೆ ನಿಲ್ಲಿಸಿದ್ದ ಎರಡು ಬೈಕುಗಳಲ್ಲಿ ಪರಾರಿಯಾದರು. ಕೂಡಲೇ ರಾಜೇಶ್ ಬೀರಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ರೋಗಿಗಳು ಸಾಯುವ ಸಂದರ್ಭ ವೈದ್ಯರ ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆಯನ್ನು ಖಂಡಿಸಿ ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ವತಿಯಿಂದ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಿಂದ ಉಳ್ಳಾಲ ಠಾಣೆಯವರೆಗೆ ಪ್ರತಿಭಟನಾ ಜಾಥಾ ಶನಿವಾರ ನಡೆಯಿತು. ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ಆ.17 ರಂದು ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ಮತ್ತು ಸಿಬ್ಬಂದಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ ಪ್ರತಿಭಟನಾಕಾರರು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಅತೀ ಹೆಚ್ಚು ಜೀವ ಅಪಾಯವಿರುವ ರೋಗಿಯ ನಿಧನವನ್ನು ಸಂಬಂಧಿಕರಿಗೆ ತಿಳಿಸುವ ಸಂದರ್ಭ ಕೆಲ ದುಷ್ಕರ್ಮಿಗಳು ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ವೈದ್ಯರ , ಅರೆ ವೈದ್ಯಕೀಯ ಸಿಬ್ಬಂದಿ , ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಹಲ್ಲೆ ಹಾಗೂ ಆಸ್ಪತ್ರೆಯ ಪೀಠೋಪಕರಣಗಳನ್ನು ಧ್ವಂಸಗೈದು ಹಾನಿ ಮಾಡಿರುವ ಪ್ರಕರಣ ನಡೆದರೂ ಪೊಲೀಸರು ಮಾತ್ರ ಆರೋಪಿಗಳನ್ನು ಬಂಧಿಸಲು ಮುಂದಾಗದೇ ಇರುವುದು ವಿಷಾಧನೀಯ. ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ರೋಗಿ ಸತ್ತರೆ, ಚಿಕಿತ್ಸೆಗೆ ನಿರೀಕ್ಷಿತ ಫಲಿತಾಂಶ ದೊರಕದೇ…

