ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಲ್ಲಾಪು: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಕಲ್ಲಾಪು ಸಮೀಪ ತಂಡವೊಂದು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ರಾ.ಹೆ.66ರ ಕಲ್ಲಾಪು ಬಳಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ತೊಕ್ಕೊಟ್ಟು ಕೃಷ್ಣನಗರದ ನಿವಾಸಿ ಪ್ರೀತೇಶ್ (23), ಉಳ್ಳಾಲಬೈಲಿನ ನಿವಾಸಿ ಕವಿತ್ ಪೂಜಾರಿ ಹಲ್ಲೆಗೊಳಗಾದವರು. ಘಟನೆ ವಿವರ: ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ರಿಟ್ಝ್ ಕಾರಿನಲ್ಲಿ ಬರುತ್ತಿದ್ದ ಗಾಯಾಳುಗಳು ಆಡಂಕುದ್ರು ಸಮೀಪ ಮೀನಿನ ಟೆಂಪೋವೊಂದನ್ನು ಓವರ್ ಟೇಕ್ ಮಾಡುವ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿತ್ತು. ಬಳಿಕ ಎರಡು ವಾಹನದವರು ಸ್ಥಳದಿಂದ ತೆರಳಿದ್ದರು. ಆದರೆ ಕಲ್ಲಾಪು ಸಮೀಪ ಕಾರು ತಲುಪುಷ್ಟರಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಭಿನ್ನಕೋಮಿನ ತಂಡ ಜಮಾಯಿಸಿದ್ದು, ಅದರಲ್ಲಿ 10 ಮಂದಿಯ ತಂಡ ಇಬ್ಬರಿಗೆ ಕೈಗೆ ಸಿಕ್ಕ ವಸ್ತುಗಳಲ್ಲಿ ಹಲ್ಲೆ ನಡೆಸಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಿಕೊಂಡು, ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಸೋಮೇಶ್ವರ ಶ್ರೀ ಸೊಮೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ತೊಕ್ಕೊಟ್ಟು: ತೊಕ್ಕೊಟ್ಟು ಕಾಪಿಕಾಡಿನ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಕುಂಪಲ: ಕುಂಪಲ ಶ್ರೀ ದುರ್ಗಾಪರಮೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಿಡ್ನಿ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ 24ರ ಹರೆಯದ ಯುವಕನೋರ್ವ ನಿನ್ನೆ ಮೃತಪಟ್ಟ ಘಟನೆ ದೇರಳಕಟ್ಟೆಯ ಯೆನೆಪೋಯದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಆರೋಪಿಸಿ ತಂಡವೊಂದು ದಾಂಧಲೆ ನಡೆಸಿ ಇಬ್ಬರು ವೈದ್ಯರು, ಇಬ್ಬರು ಬ್ರದರ್ಸ್ ಹಾಗೂ ಇಬ್ಬರು ದಾದಿಯರಿಗೆ ಹಲ್ಲೆ ನಡೆಸಿರುವ ಘಟನೆ ನಡೆದರೆ, ಇನ್ನೊಂದೆಡೆ ವೈದ್ಯರು ಯುವಕನ ಹೆತ್ತವರಿಗೆ ಹಲ್ಲೆ ನಡೆಸಿದ್ದಾರೆಂದು ತಂಡ ಆರೋಪಿಸಿದೆ. ಕೋಟೆಕಾರು ಬೀರಿಯ ಮ್ಯಾರೇಜ್ ಹಾಲ್ ಬಳಿಯ ನಿವಾಸಿ ಮಹಮ್ಮದ್ ಫೈಝಲ್ (24) ಮೃತ ಯುವಕ. ಎಂಟು ತಿಂಗಳ ಹಿಂದೆ ಗಲ್ಫ್ ರಾಷ್ಟ್ರಕ್ಕೆ ತೆರಳಿದ್ದ ಈತ ಕಿಡ್ನಿ ಸಂಬಂಧಿ ಕಾಯಿಲೆಗೆ ತೊಂದರೆಗೀಡಾದ ನಂತರ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದ. ಬಳಿಕ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಫೈಝಲ್ಗೆ ಡಯಾಲಿಸಿಸ್ಗೆ ಸೂಚಿಸಿದ್ದರು. ಅದರಂತೆ ನಿರಂತರ ಡಯಾಲಿಸಿಸ್ ನಡೆಸುತ್ತಾ ಬಂದಿದ್ದ ಫೈಝಲ್ ನ ಆರೋಗ್ಯ ನಿನ್ನೆ ಗಂಭೀರ ಸ್ಥಿತಿಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರಾದ ಡಾ.ರೋಷನ್ ಎಂಬವರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಮೂಳೂರು ಬಂಗಾರುಗುಡ್ಡೆ ನಿವಾಸಿಗಳು ದಲಿತ ಕಾಲನಿಗೆ ಹೋಗುವ ರಸ್ತೆ ದುರಸ್ತಿಗೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು. 5 ದಶಕಗಳ ಹಳೆಯದಾದ ದಲಿತ ಕಾಲನಿ ರಸ್ತೆ ತೀವ್ರವಾಗಿ ಕಡೆಗಣಿಸಲಾಗಿದೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾಗರಿಕರ, ದಲಿತರ ಕೂಗು, ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ದಲಿತ ಕಾಲನಿಯಲ್ಲಿ ವೃದ್ದರು, ಬುದ್ಧಿಮಾಂದ್ಯರು, ಅಂಗವಿಕಲ ಮಕ್ಕಳಿದ್ದಾರೆ. ಕಿಡ್ನಿ ಸಂಬಂಧಿ ತೊಂದರೆಗೊಳಪಟ್ಟ ರೋಗಿಗಳಿದ್ದಾರೆ. ಇವರನ್ನು ಆಸ್ಪತ್ರೆಗೆ ಶುಶ್ರೂಷೆಗೆ ಕೊಂಡೊಯ್ಯಲು ಒಂದೇ ರಸ್ತೆ ಇದೆ. ಅದೂ ತೀರಾ ನಾದುರಸ್ತಿಯಲ್ಲಿರುವುದರಿಂದ ರಿಕ್ಷಾ ಚಾಲಕರು ಬರಲು ಹಿಂಜರಿಯುತ್ತಿದ್ದಾರೆ. ಒಂದು ವೇಳೆ ಬಂದರೂ ದುಬಾರಿ ದ್ವಿಗುಣ ಬಾಡಿಗೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಇರಾ ಗ್ರಾಮದ ಸಣ್ಣರಬೈಲು ಪ್ರದೇಶಕ್ಕೆ ಬಂಗಾರುಗುಡ್ಡೆ ನಾಮಫಲಕವನ್ನು ಅಳವಡಿಸಿ, ವಾಸ್ತವ ಬಂಗಾರುಗುಡ್ಡೆಗೆ ಮಂಜೂರಾದ ಅನುದಾನದಲ್ಲಿ ರಸ್ತೆ ಡಾಮರೀಕರಣವನ್ನು ನಡೆಸಿ ದಲಿತರಿಗೆ ವಂಚಿಸಲಾಗಿದೆ. ಅದನ್ನು ಶೀಘ್ರವೇ ತೆರವುಗೊಳಿಸಬೇಕು . ಮೂಳೂರು -ಬಂಗಾರುಗುಡ್ಡೆ ರಸ್ತೆ 47 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು.…
ಉಳ್ಳಾಲ್ ನ್ಯೂಸ್ಡೆಸ್ಕ್ ಉಳ್ಳಾಲ: ಭಯೋತ್ಪಾದನೆ, ಆಂತರಿಕ ಗಲಭೆ, ದೇಶ ವಿರೋಧಿ ಕೃತ್ಯಗಳಿಂದ ಜನ ದೂರ ಇರುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುವುದು, ಸ್ವಾತಂತ್ರ್ಯ ಹೋರಾಟಕ್ಕೆ ಸಲ್ಲುವ ನಿಜವಾದ ಗೌರವ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಅವರು ಉಳ್ಳಾಲದ ಕರಾವಳಿ ಸಾಂಸ್ಕೃತಿಕ ಪರಿಷತ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ೬೯ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕಳ ಪ್ರತಿಮೆಗೆ ಹಾರವನ್ನು ಹಾಕಿ ವಿಶಿಷ್ಟವಾಗಿ ಆಚರಿಸಿದರು. ಈ ಸಂದರ್ಭ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಬಿಜೆಪಿ ಹಿರಿಯ ಮುಖಂಡ ಸೀತಾರಾಮ ಬಂಗೇರ, ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ನಿನ ಉಳ್ಳಾಲ ವಲಯ ಅಧ್ಯಕ್ಷ ಅರುಣ್ ಉಳ್ಳಾಲ್,ಚಂದ್ರಹಾಸ್ ಅಡ್ಯಂತಾಯ, ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು, ಯಶವಂತ ಅಮೀನ್, ಬಾಬು ಬಂಗೇರ, ರಾಮ ಉಳ್ಳಾಲ್, ಪ್ರೇಮನಾಥ್ ಪುತ್ರನ್, ಹರಿಯಪ್ಪ ಸಾಲ್ಯಾನ್, ಅನಿಲ್ ದಾಸ್, ಗಣೇಶ್ ಕಾಪಿಕಾಡ್, ಜೀವನ್ ತೊಕ್ಕೊಟ್ಟು, ಪ್ರವೀಣ್.ಯಸ್.ಕುಂಪಲ, ಪ್ರವೀಣ್ .ಡಿ.ಕುಂಪಲ, ಅಶೋಕ್ ಕುಂಪಲ,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಹಿಂದೆ ಪ್ರಥಮ ದರ್ಜೆಯಲ್ಲಿ ಅಂಕಗಳನ್ನು ಗಳಿಸುವುದು ಉತ್ತಮ ಎಂದು ಆಗುತ್ತಿತ್ತು. ಆದರೆ ಇಂದು ವಿದ್ಯಾರ್ಥಿಗಳು ನೂರು ಅಂಕ ತೆಗೆದರೂ ಪೋಷಕರಿಗೆ ಸಾಕಾಗುವುದಿಲ್ಲ. ಕೇವಲ ಅಂಕಗಳಿಂದಲೇ ವಿದ್ಯಾರ್ಥಿಗಳ ಪ್ರತಿಭೆಯನ್ನು ಅಳೆಯುವ ಪ್ರವತ್ತಿ ಹೆಚ್ಚಾಗಿರುವುದು ದುರದೃಷ್ಟಕರ ರಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಅಭಿಪ್ರಾಯ ಪಟ್ಟರು. ಅವರು ಹರೇಕಳ ನ್ಯೂಪಡ್ಪು ಸರಕಾರಿ ಪ್ರೌಢಶಾಲೆಯಲ್ಲಿ ಉಳ್ಳಾಲ ಬಿ. ಹೋಬಲಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ-2015 ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಂಕಗಳಿಸುವ ಭರಾಟೆಯಲ್ಲಿ ಸಾಂಸ್ಕøತಿಕ ಕಲೆಗಳಿಗೆ, ಕ್ರೀಡೆಗಳಿಗೆ ಬೆಲೆ ಇಲ್ಲದಂತಾಗಿದೆ. ಮಂಗಳೂರು ನಷ್ಟು ವ್ಯಾಪ್ತಿ ಹೊಂದಿರುವ ಚಿಕ್ಕಪುಟ್ಟ ರಾಷ್ಟರ ಕೂಡಾ ಪದಕಪಟ್ಟಿಯಲ್ಲಿ ಉತ್ತಮ ಸಾಧನೆ ತೋರುತ್ತಿದೆ. ಆದರೆ 125 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಪದಕಪಟ್ಟಿಯಲ್ಲಿ ತೀರಾ ಹಿಂದುಳಿದಿದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ನಾವು ಕೇವಲ ಶಿಕ್ಷಣ ಮಾತ್ರವಲ್ಲ ಇದರೊಂದಿಗೆ ಸಾಂಸ್ಕøತಿಕ ಕಲೆಗಳು ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಅಲ್ಲದೆ ಟಿ.ವಿ.ಮಾದ್ಯಮಗಳಲ್ಲಿ ಪ್ರದರ್ಶನವಾಗುವ ಡ್ಯಾನ್ಸ್ಗಳೇ ಇಂದು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ವಿಭಿನ್ನ ಧರ್ಮಕ್ಕೆ ಸೇರಿದ ಬಾಲಕ ಹಾಗೂ ಯುವತಿ ಚಕ್ಕಂದವಾಡುವುದನ್ನು ಕಂಡ ಹಿಂದು ಸಂಘಟನೆ ಕಾರ್ಯಕರ್ತರು ಥಳಿಸಿ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿಯ ಸಮೀಪ ಗುರುವಾರ ಸಂಜೆ ವೇಳೆ ನಡೆದಿದೆ. ಚೆಂಬುಗುಡ್ಡೆ ನಿವಾಸಿ ಅಫ್ರೀದಿ(17) ಎಂಬಾತನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತೊಕ್ಕೊಟ್ಟು ರೈಲ್ವೇ ಹಳಿ ಸಮೀಪ ಬಾಡಿಗೆ ಮನೆಯಲ್ಲಿದ್ದ 18ರ ಹರೆಯದ ಹಿಂದು ಯುವತಿ ಮನೆಗೆ ಬಂದಿದ್ದ ಈತ ಆಕೆಯ ಜತೆಗೆ ರೈಲ್ವೇ ಹಳಿಯಲ್ಲಿ ಕುಳಿತು ಅಸಭ್ಯವಾಗಿ ವರ್ತಿಸುತ್ತಿದ್ದ.ಇದನ್ನು ಗಮನಿಸಿದ್ದ ಪಾದಚಾರಿಗಳು ಹಿಂದು ಸಂಘಟನೆ ಕಾರ್ಯಕರ್ತರ ಗಮನಕ್ಕೆ ತಂದಿದ್ದರು. ಅದರಂತೆ ಕಾರ್ಯಕರ್ತರ ದಂಡು ಸ್ಥಳಕ್ಕಾಗಮಿಸಿ ಯುವತಿಗೆ ಎಚ್ಚರಿಸಿ, ಬಾಲಕನಿಗೆ ಥಳಿಸಿ ಬಳಿಕ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚೆಂಬುಗುಡ್ಡೆ: ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿರುವ ಬಗ್ಗೆ ಹಿಂದು ಸಂಘಟನೆ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಚೆಂಬುಗುಡ್ಡೆ ಕಸಾಯಿಖಾನೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು 2 ಸತ್ತುಹೋದ ಮತ್ತು 11 ಜೀವಂತ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದು, 3 ಆರೋಪಿಗಳು ಪರಾರಿಯಾಗಿದ್ದಾರೆ. ಏಳು ತಿಂಗಳ ಅವಧಿಯಲ್ಲಿ ಇದೇ ಕಸಾಯಿಖಾನೆಗೆ ಪೊಲೀಸರು ನಡೆಸಿದ ಮೂರನೇ ದಾಳಿ ಇದಾಗಿದೆ. ಆರೋಪಿಗಳಾದ ಚೆಂಬುಗುಡ್ಡೆ ಕಸಾಯಿಖಾನೆ ನಡೆಸುತ್ತಿರುವ ಸಹೋದರರಾದ ಎಂ.ಸಿ ಬಾವಾ, ಎಂ.ಸಿ.ಖಾದರ್ ಮತ್ತು ಉಳ್ಳಾಲದ ಮಿಲ್ಲತ್ನಗರ ನಿವಾಸಿ ಇಮ್ತಿಯಾಝ್ ಪರಾರಿಯಾಗಿದ್ದಾರೆ. ಮಂಗಳೂರಿನಿಂದ ಚೆಂಬುಗುಡ್ಡೆ ಕಸಾಯಿಖಾನೆಗೆ ಪಿಕಪ್ ವಾಹನದಲ್ಲಿ ಜಾನುವಾರು ಸಾಗಾಟ ನಡೆಸುತ್ತಿದ್ದ ಮಾಹಿತಿಯರಿತ ಕುತ್ತಾರು ಬಜರಂಗದಳದ ಕಾರ್ಯಕರ್ತರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ದಾಳಿ ನಡೆಸುವ ಸಂದರ್ಭ ಆರೋಪಿಗಳು ಪರಾರಿಯಾಗಿದ್ದು, ಒಂದೇ ಪಿಕಪ್ ವಾಹನದಲ್ಲಿ ತುಂಬಿಸಲಾಗಿದ್ದ 2 ಸತ್ತುಬಿದ್ದ ಮತ್ತು 11 ಜೀವಂತ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 4 ನೇ ದಾಳಿ: ಕಳೆದ ಏಳು ತಿಂಗಳ ಅವಧಿಯಲ್ಲಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಿಲಾರು: ಮದರಸ ಅಧ್ಯಯನ ನಡೆಸಲು ಬರುವ ಅಪ್ರಾಪ್ತ ಬಾಲಕಿಗೆ ಉಸ್ತಾದನೋರ್ವ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ತೊಕ್ಕೊಟ್ಟು ಸಮೀಪದ ಪಿಲಾರು ದಾರಂದಬಾಗಿಲು ಬಳಿ ಬೆಳಕಿಗೆ ಬಂದಿದ್ದು, ಆರೋಪಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಮದರಸ ಶಿಕ್ಷಕ ಬಂಟ್ವಾಳ ಸಜೀಪ ನಿವಾಸಿ ಮಹಮ್ಮದ್ ಮದನಿ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಈತನ ವಿರುದ್ಧ ಹಲವು ಬಾರಿ ಬಾಲಕಿ ಹೆತ್ತವರು ಮದರಸ ಸಮಿತಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ವಿರುದ್ಧ ಬಾಲಕಿ ಹೆತ್ತವರು ದೂರು ನೀಡಿದ್ದಾರೆ. ಬೆಳಗ್ಗಿನ ಸಮಯದಲ್ಲಿ ಅಧ್ಯಯನಕ್ಕೆ ಬರುತ್ತಿದ್ದ 9ರ ಹರೆಯದ ಬಾಲಕಿಯ ಮೇಲೆ ಶಿಕ್ಷಕ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ. ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಎರಡು ರೂಪಾಯಿ ಚಿಲ್ಲರೆ ವಿಚಾರಕ್ಕಾಗಿ ಪ್ರಯಾಣಿಕನೋರ್ವ ತಂಡವನ್ನು ಸೇರಿಸಿ ಉಳ್ಳಾಲದಿಂದ ಸ್ಟೇಟ್ ಬ್ಯಾಂಕಿಗೆ ತೆರಳುವ ಖಾಸಗಿ ಬಸ್ಸಿನ ನಿರ್ವಾಹಕನಿಗೆ ಕಲ್ಲಿನಿಂದ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಉಳ್ಳಾಲದ ಕೋಡಿ ಸೀರೂಟ್ ಎಂಬಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ. 44ಸಿ ಸುರಭಿ ಬಸ್ಸಿನ ನಿರ್ವಾಹಕ ಬಂಡಿಕೊಟ್ಯ ನಿವಾಸಿ ಕಿಶನ್ (22) ಹಲ್ಲೆಗೊಳಗಾದವರು. ಕೋಡಿ ನಿವಾಸಿ ಮಹಮ್ಮದ್ ಮತ್ತು ತಂಡ ಕೃತ್ಯ ಎಸಗಿರುವುದಾಗಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಮುಂಜಾನೆ ಸ್ಟೇಟ್ ಬ್ಯಾಂಕಿನತ್ತ ಹೋಗುತ್ತಿದ್ದ ಬಸ್ಸಿಗೆ ಕೋಡಿ ಸಮೀಪ ಮಹಮ್ಮದ್ ಬಸ್ಸನ್ನೇರಿದ್ದ. ಸ್ಟೇಟ್ ಬ್ಯಾಂಕಿಗೆ ರೂ.12 ಟಿಕೇಟ್ ದರ ಇರುವುದರಿಂದ ನಿರ್ವಾಹಕ ಎರಡು ರೂ. ಚಿಲ್ಲರೆ ಕೊಟ್ಟು ಸಹಕರಿಸುವಂತೆ ಹೇಳಿದ್ದರು. ಇದನ್ನೇ ವಿವಾದವನ್ನಾಗಿಸಿದ ಮಹಮ್ಮದ್ ನಿರ್ವಾಹಕನ ಜತೆಗೆ ಮಾತಿಗಿಳಿದು ಬಳಿಕ ಚಾಲಕ ಸಾಗರ್ ಎಂಬವರು ಮಧ್ಯಪ್ರವೇಶಿಸಿ ಮಹಮ್ಮದ್ಗೆ ವಾಪಸ್ಸು ರೂ.10 ನ್ನು ನೀಡಿ ಬಸ್ಸಿನಿಂದ ಕೆಳಗೆ ಇಳಿಸಿದ್ದರು. ಘಟನೆ ನಂತರ ಮತ್ತೆ ಉಳ್ಳಾಲದತ್ತ ಹೊರಟಿದ್ದ ಬಸ್ಸನ್ನು ಕೋಡಿ…

