Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ನಾಟೆಕಲ್: ನಾಟೆಕಲ್ ಬಳಿ ರಿಕ್ಷಾ ಚಾಲಕ ಉಳ್ಳಾಲ ಅಳೇಕಲ ನಿವಾಸಿ ಹಿದಾಯತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಸೇರಿದಂತೆ ಇಬ್ಬರ ಶೋಧ ಕಾರ್ಯ ಮುಂದುವರೆಸಿದ್ದಾರೆ. ಹಿದಾಯತ್‍ನನ್ನು ಆ.28ರಂದು ರಾತ್ರಿ ಕಿನ್ಯ ಗ್ರಾಮದ ಸಂಕೇಶ ರಸ್ತೆಯ ಮಾಂಗಟ್ಟೆ (ಕುಕ್ಕುದಕಟ್ಟೆ) ಬಳಿ ಸೋಂಟೆಯಿಂದ ಬಡಿದು ಕಲ್ಲಿನಿಂದ ಜಜ್ಜಿ ಕೊಲೆ ನಡೆಸಿದ್ದು ಆ. 29ರಂದು ಬೆಳಗ್ಗೆ ರಿಕ್ಷಾದ ಚಾಲಕನ ಸೀಟಿನಲ್ಲಿ ಕುಳ್ಳಿರಿಸಿದ ಸ್ಥಿತಿಯಲ್ಲೇ ಶವ ಪತ್ತೆಯಾಗಿತ್ತು. ಬಂಧಿತ ಆರೋಪಿಗಳನ್ನು ಹಿದಾಯತ್‍ನ ಮೊದಲ ಪತ್ನಿ ಉಳ್ಳಾಲ ಪೇಟೆ ನಿವಾಸಿಗಳಾದ ಫಾಝಿಲ (28) ಆಕೆಯ ಸಹೋದರ ಫಾಝಿಲ್(25), ಮದನಿನಗರದ ನಿವಾಸಿಗಳಾದ ಲುಕ್ಮಾನ್, ಇರ್ಫಾನ್, ಖುರ್ಷಿದ್, ಜಂಶೀರ್, ತನ್ವಿಝ್ ಎಂಬವರಾಗಿದ್ದು ಪ್ರಧಾನ ಆರೋಪಿಗಳಾದ ಮದನಿನಗರ ನಿವಾಸಿ ನಿಸಾರ್ ಮತ್ತು ನೌಫಾಲ್ ತಲೆಮರೆಸಿಕೊಂಡಿದ್ದಾರೆ. ಮೂರನೇ ಮದುವೆಯಾಗಿದ್ದ ಹಿದಾಯತ್‍ನ ಪ್ರಥಮ ಪತ್ನಿ ಫಾಝಿಲ ಈ ಕೊಲೆಗೆ ಪ್ರಮುಖ ಕಾರಣವಾಗಿದ್ದು, ಫಾಝಿಲಳಿಗೆ ಎರಡನೇ ಮದುವೆಯಾದ ಬಳಿಕವೂ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಹಿಂದೂ ಧರ್ಮದ ಪವಿತ್ರ ಗ್ರಂಥವಾದ ಭಗವದ್ಗೀತೆಯ ಬಗ್ಗೆ ವಿಚಾರವಾದಿಗಳು ಕೇವಲವಾಗಿ ಮಾತನಾಡುವ ಬದಲು ಅದನ್ನು ವಿಮರ್ಶಿಸಿ, ಅಧ್ಯಯಿಸಿದರೆ ಭಗದ್ಗೀತೆಯ ಮೌಲ್ಯಗಳು ತಿಳಿಯುತ್ತದೆ, ಪ್ರತಿ ಹಿಂದೂ ಮನೆಯಲ್ಲಿ ಇಂತಹ ಗ್ರಂಥಗಳು ಇದ್ದರೆ ಸಾಲದು ಅದನ್ನು ಮಕ್ಕಳಿಗೆ ಬೋಧಿಸುವಂತಹ ಕೆಲಸಗಳು ತಾಯಿಯಂದಿರಿಂದ ಆಗಬೇಕು ಆಗ ಮಕ್ಕಳು ಸಂಸ್ಕಾರಯುತವಾಗಿ ಬೆಳೆಯಲು ಸಾಧ್ಯ ಎಂದು ತುಳು ಸಾಹಿತ್ಯ ಪರಿಷತ್‍ನ ಮಾಜಿ ಸದಸ್ಯ ದಯಾನಂದ ಕತ್ತಲ್‍ಸಾರ್ ಅಭಿಪ್ರಾಯ ಪಟ್ಟರು. ಅವರು ಹಿಂದೂ ಯುವ ಸೇನೆ, ಓಂ ಶಕ್ತಿ ಶಾಖೆ ಎಕ್ಕೂರು ಇದರ ವತಿಯಿಂದ ಮನೆ ಮನೆಗೆ, ಮನ ಮನಕ್ಕೆ ಭಗವದ್ಗೀತೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಮಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಭಾಸ್ಕರಚಂದ್ರ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಮಂಗಳೂರು ಗಣೇಶೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ಶುಭಕರ ಚೌಟ ಎಕ್ಕೂರು, ಶ್ರೀನಿವಾಸ್ ಎಕ್ಕೂರು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ರಾಜ್ಯದಲ್ಲಿ ಅಂತರ್ಜಾಲದ ಮಟ್ಟ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಆಳಕ್ಕೆ ಕುಸಿಯುತ್ತಿರುವುದರಿಂದ ಅಂತರ್ಜಾಲ ಮಟ್ಟವನ್ನು ಹೆಚ್ಚಿಸಲು ಗಿಡಗಳನ್ನು ಹೆಚ್ಚು ವೃದ್ಧಿಸುವ ಭಾಗವಾಗಿ ಮತ್ತು ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಣಚೂರು ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಕಾರ್ಯ ರೂಪಿಸಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಇಕ್ಬಾಲ್ ಅಹಮ್ಮದ್ ಯು.ಟಿ. ಅಭಿಪ್ರಾಯಪಟ್ಟರು. ಅವರು ಕಣಚೂರು ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಬಳಿಕ ಎನ್.ಎಸ್.ಎಸ್. ಸ್ವಯಂ ಸೇವಕರು ಗಿಡಗಳನ್ನು ನೆಟ್ಟರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಜೀವನ್ ರಾಜ್, ಸಹಯೋಜನಾ„ಕಾರಿಗಳಾದ ಸುಜಾತ, ನಿರ್ಮಲಾ, ಉಪನ್ಯಾಸಕ ಅವಿನಾಶ್ ಎಸ್. ಎಂ. ಮತ್ತು ಎನ್.ಎಸ್.ಎಸ್. ಸ್ವಯಂ ಸೇವಕಿ ಹಫೀಝ, ಅಸ್ಮ, ಮುನಿಶಾ, ನಸ್ರೀಯಾ, ಲಿಖಿತಾ, ನಿಶಾ ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಾಪಿಕಾಡು: ಕಾಪಿಕಾಡು ಉಮಾಪುರಿ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಸೇವಾ ಸಮಿತಿಯ ವಾರ್ಷಿಕ ಮಹಾಸಭೆಯು ದಿನೇಶ್ ರೈ ಕಳ್ಳಿಗೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. 015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ದಿನೇಶ್ ರೈ ಕಳ್ಳಿಗೆ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಸುರೇಂದ್ರ ನಾಯಕ್, ನಾರಾಯಣ ರಾವ್, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿಯಾಗಿ ವೇಣುಗೋಪಾಲ್, ಉಪಾಧ್ಯಕ್ಷರುಗಳಾಗಿ ಪ್ರವೀಣ್ ಉಳ್ಳಾಲ್ ಬೈಲು, ವಾಮನ್. ಬಿ. ಮೈಂದನ್, ಗೋಪಿನಾಥ್ ಕಾಪಿಕಾಡ್, ಬೇಬಿ ಸುಂದರ್, ಜನಾರ್ಧನ್ ಆಚಾರ್ಯ, ನಾರಾಯಣ ಬಂಗೇರ, ಆಂತರಿಕ ಲೆಕ್ಕ ಪರಿಶೋಧಕರಾಗಿ ಆನಂದ್ ಶೆಟ್ಟಿ ಭಟ್ನಗರ ಮೊದಲಾದವರು ಆಯ್ಕೆಯಾದರು. ಈ ಸಂದರ್ಭ ದೇವಸ್ಥಾನ ಆಡಳಿತ ಮೊಕ್ತೇಸರ ಎ.ಜೆ. ಶೇಖರ್, ಮೊಕ್ತೇಸರುಗಳಾದ ದಿನೇಶ್ ಅತ್ತಾವರ, ಈಶ್ವರ್ ಉಳ್ಳಾಲ್, ರಘುರಾಮ ಶೆಟ್ಟಿ, ಮಹಾಲಿಂಗ ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ, ನಿಯಮಿತ ಮಂಗಳೂರು ಇದರ ಪ್ರಾಯೋಜಿತ ಸಂಸ್ಥೆಯಾದ ಶಿಕ್ಷಕರ ಸೇವಾ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಮಂಗಳೂರಿನ ಮಹಿಳಾ ಶಿಕ್ಷಕ ಶಿಕ್ಷಣಾ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಪ್ರತಿಷ್ಠಾನದ ಅಧ್ಯಕ್ಷೆ ರತ್ನಾವತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಅಧೀಕ್ಷಕಿ ಉಷಾ, ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘದ ಅಧ್ಯಕ್ಷ ಅಲೋಶಿಯಸ್ ಡಿ’ಸೋಜ ಉಪಸ್ಥಿತರಿದ್ದರು. ಪ್ರತಿಷ್ಠಾನದಿಂದ ಪ್ರಾಥಮಿಕ, ಪ್ರೌಢ ಹಾಗೂ ಪ.ಪೂರ್ವ ಕಾಲೇಜಿನ ಸುಮಾರು 123 ವಿದ್ಯಾರ್ಥಿಗಳಿಗೆ ರೂ. 78,400 ವಿತರಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷೆ ರತ್ನಾವತಿ ಸ್ವಾಗತಿಸಿದರು. ಹಿರಿಯರಾದ ಎ. ಸದಾಶಿವ ಪ್ರಸ್ತಾವನೆಗೈದರು. ಕಾರ್ಯಕಾರಿ ಸಮಿತಿ ಸದಸ್ಯೆ ರವಿಕಲಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷೆ ಮಹಾಲಕ್ಷ್ಮೀ ವಂದಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲ ಇದರ 32ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಕಾಂಚನ್ ಕೆ. ಉಳ್ಳಾಲ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ವಿಶ್ವನಾಥ್ ಎಸ್. ಉಳ್ಳಾಲ್, ಉಪಾಧ್ಯಕ್ಷರಾಗಿ ಷಣ್ಮುಖ ಶೆಟ್ಟಿಗಾರ್, ಗುಣಕಾರ್ ಉಳ್ಳಾಲ್, ಪ್ರಧಾನ ಶಿಕ್ಷಕರಾಗಿ ಲಿಂಗಪ್ಪ ಟೈಲರ್, ಕಾರ್ಯದರ್ಶಿಯಾಗಿ ಚಂದ್ರಹಾಸ್ ಶ್ರೀಯಾನ್, ಜೊತೆ ಕಾರ್ಯದರ್ಶಿಯಾಗಿ ನಿತೀನ್ ಬಸ್ತಿಪಡ್ಪು, ಕೋಶಾಧಿಕಾರಿಯಾಗಿ ಭುಜಂಗ್ ಟೈಲರ್, ಜೊತೆ ಕೋಶಾಧಿಕಾರಿಯಾಗಿ ಹರೀಶ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ಚಂದ್ರ ಉಳ್ಳಾಲ್ ಬೈಲ್, ಪ್ರಜ್ವಲ್, ಶಿವರಾಜ್, ಕ್ರೀಡಾ ಸಂಚಾಲಕರಾಗಿ ಹರೀಶ್ ಬಸ್ತಿಪಡ್ಪು, ಲತೀಶ್ ಬಂಡಿಕೊಟ್ಯ, ಹರ್ಷಿತ್, ಬೇಬಿರಾಜ್ ಬಂಡಿಕೊಟ್ಯ, ಸದಾಶಿವ ಉಳ್ಳಾಲ್ ಬೈಲ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಂದ್ರಶೇಖರ್, ಕಮಲಾಕ್ಷ, ಮಾಧವ, ಬಾಲಕೃಷ್ಣ, ಪದ್ಮನಾಭ ಟೈಲರ್, ಲೋಕೆಶ್ ಕೋಡಿ, ದಿನೇಶ್ ಪ್ಯಾನ್ಸಿ, ಯೋಗೀಶ್ ಟಿ.ಡಿ. ಸತೀಶ್ ಬಸ್ತಿಪಡ್ಪು, ಹರೀಶ್ ಬಂಡಿಕೊಟ್ಯ, ಸಾಗರ್, ಸುಂದರ, ಅಭಿಷೇಕ್, ಮೋಹನ್ ಹೂೈಗೆಗದ್ದೆ, ಸುಧೀರ್ ಭಗವತಿ, ವಿನೋದ್, ಶಶಿಧರ್, ಅಶ್ವಿನ್, ರವೀಂದ್ರರಾಜ್ ಇವರನ್ನು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ವಾರದೊಳಗೆ ವಿವಾಹ ನಿಶ್ಚಯವಾಗಬೇಕಿದ್ದ ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿ ನವೀನ್ ಮೊಂತೇರೊ(32) ಸೋಮೇಶ್ವರ ಕೆರೆಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ವೇಳೆ ನಡೆದಿದೆ. ಇದೇ ವೇಳೆ ಕೆರೆ ಪಾಲಾಗುತ್ತಿದ್ದ ನಾಲ್ವರನ್ನು ರಕ್ಷಿಸಲಾಗಿದೆ. ಟೂರಿಸ್ಟ್ ವಾಹನದ ಮಾಲಕರೂ ಚಾಲಕರಾಗಿದ್ದ ನವೀನ್ ಮೊಂತೇರೊ ತೊಕ್ಕೊಟ್ಟು ಜಂಕ್ಷನ್‍ನ ಟೂರಿಸ್ಟ್ ವಾಹನಗಳ ಚಾಲಕರು ಮಾಲಕರೊಂದಿಗೆ ಸೋಮೇಶ್ವರ ಬೀಚ್‍ಗೆ ತೆರಳಿದ್ದು, ನವೀನ್ ಅವರೊಂದಿಗೆ ಕೆರೆಗೆ ಇಳಿದಿದ್ದ ನಿತಿನ್, ಸುನಿಲ್, ಮುಜಾಹಿದ್ಧೀನ್, ರಾಜೇಶ್ ರಕ್ಷಣೆ ಮಾಡಲಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಘಟನೆಯ ವಿವರ : ಭಾರತ್ ಬಂದ್ ಹಿನ್ನಲೆಯಲ್ಲಿ ತೊಕ್ಕೊಟ್ಟು ಜಂಕ್ಷನ್‍ನ ಟೂರಿಸ್ಟ್ ವಾಹನ ಚಾಲಕರು ಮತ್ತು ಮಾಲಕರು ಮಧ್ಯಾಹ್ನದ ಬಳಿಕ ತೊಕ್ಕೊಟ್ಟು ಮೈದಾನದಲ್ಲಿ ವಾಲಿಬಾಲ್ ಆಟವಾಡಿ ಬಳಿಕ ಸುಮಾರು 20 ಜನ ತಂಡ ಸಂಜೆ ವೇಳೆಗೆ ಸೋಮೇಶ್ವರ ಬೀಚ್‍ಗೆ ತೆರಳಿದ್ದರು. ಬೀಚ್‍ನಲ್ಲಿ ಆಟವಾಡಿದ ಬಳಿಕ ಸೋಮೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆ ಇಳಿದು ಸ್ನಾನ ಮಾಡಿ ಮೊಬೈಲ್‍ಗಳಲ್ಲಿ ಫೋಟೊ ತೆಗೆದು ಎಲ್ಲರೂ ನೀರಿನಿಂದ ಮೇಲೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 10 ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ಉಳ್ಳಾಲದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಳ್ಳಾಲ, ಸೋಮೇಶ್ವರ, ಕೋಟೆಕಾರು, ಬೀರಿ, ಕಿನ್ಯಾ, ತಲಪಾಡಿ, ದೇರಳಕಟ್ಟೆ, ಎಲಿಯಾರುಪದವು, ಇನೋಳಿ, ಹರೇಕಳ, ಪಾವೂರು, ಕೊಣಾಜೆ, ಮುಡಿಪು, ಬೋಳಿಯಾರು, ಇರಾ, ಕುರ್ನಾಡು, ನಾಟೆಕಲ್ ಪ್ರದೇಶಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಕುತ್ತಾರು ಬಳಿ ನಸುಕಿನ ಜಾವ ವಾಹನಗಳು ತೆರಳದಂತೆ ಡಿವೈಎಫ್‍ಐ ಕಾರ್ಯಕರ್ತರು ಟಯರಿಗೆ ಬೆಂಕಿ ಹಾಕಿದ್ದು, ಬಳಿಕ ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಒಳಪ್ರದೇಶಗಳಲ್ಲಿ ರಿಕ್ಷಾ ಸಂಚಾರ ಇದ್ದರೆ, ನಗರ ಪ್ರದೇಶಗಳಲ್ಲಿ ರಿಕ್ಷಾ ಸಂಚಾರವೂ ವಿರಳವಾಗಿತ್ತು. ಜನಖಾಸಗಿ ವಾಹನಗಳಲ್ಲಿ ಅಧಿಕವಾಗಿ ತೆರಳಿ ಕೆಲಸ ಕಾರ್ಯಗಳನ್ನು ಪೂರೈಸಿದರು. ಈ ಭಾಗದದ್ಯಂತ ಶಾಲಾ-ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್‍ಗೊಳಿಸಿದ ಪರಿಣಾಮ ಜನ ಬಂದ್‍ಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿರುವುದು ಕಂಡುಬಂತು.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಇನೋಳಿ: ಇತ್ತೀಚೆಗೆ ಬ್ರಹ್ಮಕಲಶ ಆದ ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ನುಗ್ಗಿರುವ ಕಳ್ಳರು ದೇವರ ಉತ್ಸವ ಮೂರ್ತಿ, ಕಾಣಿಕೆ ಡಬ್ಬಿ, ಸಿ.ಸಿ.ಟಿವಿಯನ್ನು ಕಳವುಗೈದಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಅರ್ಚಕರು ಪೂಜೆಗೆಂದು ದೇವಸ್ಥಾನಕ್ಕೆ ಬಂದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಊರಿನ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಮಂಗಳವಾರ ತಡರಾತ್ರಿ ವೇಳೆ ಮುಂದಿನ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ರೂ.1 ಲಕ್ಷ ಬೆಲೆಯುಳ್ಳ ಪಂಚಲೋಹದ ಮೂರ್ತಿಯನ್ನು ಕಳವುಗೈದಿದ್ದಾರೆ. ಅಲ್ಲದೆ ದೇವಸ್ಥಾನದ ಒಳಗೆ ಇರಿಸಲಾದ ಕಾಣಿಕೆಡಬ್ಬಿಯನ್ನು ಕಳವುಗೈದಿರುವ ತಂಡ ಹೊರಹೋಗುವ ಸಂದರ್ಭ ಕೃತ್ಯದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವ ಶಂಕೆಯಿಂದ ಅದರಲ್ಲಿದ್ದ ದಾಖಲೆ ಸಹಿತ ಸಿಸಿಟಿವಿಯನ್ನು ಸಹ ಕಳವುಗೈದಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಕರೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಪಾಳುಬಿದ್ದಿದ್ದ ದೇವಸ್ಥಾನವನ್ನು ಊರ-ಪರವೂರ ಗ್ರಾಮಸ್ಥರ ಸಹಕಾರದೊಂದಿಗೆ ಇತ್ತೀಚೆಗಷ್ಟೇ ಬ್ರಹ್ಮಕಲಶೋತ್ಸವ ನಡೆಸಲಾಗಿತ್ತು. ಅದರ ಬೆನ್ನಲ್ಲೇ ಇಂತಹದ್ದೊಂದು ದುಷ್ಕøತ್ಯ ನಡೆಸಿರುವುದು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಮೂಲಭೂತ ಸೌಕರ್ಯಗಳು ಇದ್ದರೂ, ಸಂಬಂಧಪಟ್ಟವರು ಯಾವುದೇ ಕ್ರಮಕೈಗೊಳ್ಳದೇ ಇರುವುದು ಖಂಡನೀಯ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಶಿಕ್ಷಕೇತರ ಉದ್ಯೋಗಿಗಳ ಸಂಘದ ಅಧ್ಯಕ್ಷ ಗೋವಿಂದ ಮಟ್ಟಿ ಹೇಳಿದ್ದಾರೆ. ಅವರು ಭಾರತ್ ಬಂದ್ ಪ್ರಯುಕ್ತ ಮಂಗಳೂರು ವಿಶ್ವವಿದ್ಯಾನಿಲಯ ಶಿಕ್ಷಕೇತರ ಉದ್ಯೋಗಿಗಳ ಸಂಘದ ವತಿಯಿಂದ ಬುಧವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಕೊಣಾಜೆ ಮಂಗಳೂರು ವಿ.ವಿ ಕ್ಯಾಂಪಸ್ಸಿನಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಎಲ್ಲಾ ಶಿಕ್ಷಕೇತರ ಸಿಬ್ಬಂದಿಗೆ ಯುಜಿಸಿ ವೇತನ ನೀಡದೆ ಸತಾಯಿಸಲಾಗುತ್ತಿದೆ. ಕ್ವಾಟ್ರಸ್ ವಿಚಾರದಲ್ಲಿಯೂ ಶಿಕ್ಷಕೇತರ ಸಿಬ್ಬಂದಿ ಅನ್ಯಾಯಕ್ಕೊಳಗಾಗಿದ್ದಾರೆ. ಹೊರಗುತ್ತಿಗೆಯಾಧಾರದಡಿ ದುಡಿಸುವ ಸಿಬ್ಬಂದಿಯನ್ನು ಕಡಿಮೆ ವೇತನದಡಿ ದುಡಿಸಲಾಗುತ್ತಿದೆ. ಇವರನ್ನು ಖಾಯಂಗೊಳಿಸುವ ನಿರ್ಧಾರಕ್ಕೆ ಸರಕಾರ ಮುಂದಾಗಬೇಕಿದೆ. ಶಿಕ್ಷಕೇತರ ಸಿಬ್ಬಂದಿಗೆ ದೊರೆಯಬೇಕಾದ ಸೌಲಭ್ಯಗಳಿಗೆ ಯಾವುದೇ ಅಡಚಣೆಯಿಲ್ಲದಂತೆ ಮೇಲಾಧಿಕಾರಿಗಳು ನೋಡಿಕೊಳ್ಳಬೇಕು ಎಂದರು. ಬಳಿಕ ಸಲ್ಲಿಸಿದ ಮನವಿಯಲ್ಲಿ ಶಿಕ್ಷಕೇತರ ಸಿಬ್ಬಂದಿ ಯುಜಿಸಿ ವೇತನ ಶ್ರೇಣಿ ವಿಸ್ತರಣೆ, ಸಿಂಡಿಕೇಟ್…

Read More