ಉಳ್ಳಾಲ ನ್ಯೂಸ್ ನೆಟ್ವರ್ಕ್ ಚೆಂಬುಗುಡ್ಡೆ : ಉಳ್ಳಾಲ ನಗರಸಭಾ ವ್ಯಾಪ್ತಿಯ ಚೆಂಬುಗುಡ್ಡೆ ಮಹಾಂಕಾಳಿ ಪಡ್ಪು ಬಳಿ ಪರಿಶಿಷ್ಠ ಜಾತಿ ಮತ್ತು ವರ್ಗಗಳಿಗೆ ಸೇರಿದ ಕಾಲನಿಯಲ್ಲಿ ಎರಡನೇ ಮನೆ ನಿರ್ಮಿಸಲು ಯತ್ನಿಸಿದ್ದ ಮಹಿಳೆಯೊಬ್ಬರ ಪ್ರಯತ್ನಕ್ಕೆ ನಗರಸಭೆ ಅ„ಕಾರಿಗಳು ತಡೆಯೊಡ್ಡಿದ್ದು, ಮಹಿಳೆಯ ವಶದಲ್ಲಿ ಭೂಮಿಯನ್ನು ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಗರಸಭೆಯ ವಶಕ್ಕೆ ತೆಗೆದುಕೊಂಡರು. ಪಾರ್ವತಿ ಯಾನೆ ರಮ್ಯಾ ಕಳೆದ ಒಂದೂವರೆ ವರ್ಷದಿಂದ ಚೆಂಬುಗುಡ್ಡೆ ಮಹಾಂಕಾಳಿಪಡ್ಪುವಿನಲ್ಲಿ ವಾಸಿಸುತ್ತಿದ್ದು, ಪರಿಶಿಷ್ಠ ಜಾತಿ ಪಂಗಡಕ್ಕೆ ಸಂಬಂ„ಸಿದ ಸವಲತ್ತನ್ನು ನಗರಸಭೆಯಿಂದ ಪಡೆದಿದ್ದರು ಎನ್ನಲಾಗಿದೆ. ಕಳೆದ ಮೂರು ತಿಂಗಳಿಂದ ತನ್ನ ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗವನ್ನು ಅತಿಕ್ರಮಿಸಿಕೊಂಡು ಅದರಲ್ಲಿ ಮನೆ ಕಟ್ಟುವ ನಿಟ್ಟಿನಲ್ಲಿ ಸಂಬಂ„ತ ಇಲಾಖೆಯನ್ನು ಸಂಪರ್ಕಿಸಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಚಾರದಲ್ಲಿ ಕಳೆದ ಎರಡು ತಿಂಗಳಿಂದ ಸ್ಥಳೀಯರಿಗೆ ಮತ್ತು ಪಾರ್ವತಿ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಕೆರಳಿದ ಸ್ಥಳೀಯರು ಉಳ್ಳಾಲ ನಗರಸಭೆಗೆ ದೂರು ನೀಡಿದ್ದರು. ನಗರಸಭೆಯ ಅ„ಕಾರಿಗಳು ಪರಿಶೀಲನೆ ನಡೆಸಿ ಮಂಗಳವಾರ…
Author: UllalaVani
ಉಳ್ಳಾಲ ನ್ಯೂಸ್ ನೆಟ್ವರ್ಕ್ ಚಿತ್ರಗಳು: ಅಶೋಕ್ ಮಂಗಳೂರು ಮಾಡೂರು : ಮಾಡೂರಿನ ಶಿರಡಿ ಸಾಯಿಬಾಬಾನ ಮಂದಿರದಲ್ಲಿ ಬೆಳ್ಳಿ ಚಿನ್ನ, ರಥಕ್ಕೆ ಪ್ರಾಮುಖ್ಯತೆ ನೀಡದೆ ದೀನ ದಲಿತರ ಸೇವೆ ನಡೆಯುವ ಮೂಲಕ ಸಾಯಿಬಾಬರ ನಿಜವಾದ ಪೂಜೆ ಈ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಶ್ರೀ ನಿತ್ಯಾನಂದ ಮಹಾಪೀಠಂ, ಶ್ರೀ ಕ್ಷೇತ್ರ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಭಿಪ್ರಾಯಪಟ್ಟರು.ಅವರು ಮಾಡೂರು ಕೊಂಡಾಣದ ಸಾಯಿಧಾಮದ ಶ್ರೀ ಶಿರಡಿ ಬಾಬಾ ಮಂದಿರದ ದ್ವಿತೀಯ ವಾರ್ಷಿಕೋತ್ಸವ ಮತ್ತು ರಾಮನವಮಿ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಶಿರಡಿ ಸಾಯಿ ಮಂದಿರದಲ್ಲಿ ಸಂಕಲ್ಪ ದೈವ ಸಂಕಲ್ಪವಾಗಿದೆ. ಶಾಲೆ, ಆಸ್ಪತ್ರೆ ಸೇರಿದಂತೆ ಸಮಾಜದಲ್ಲಿ ಹಿಂದುಳಿದವರ ಕಾರ್ಯಕ್ಕೆ ಮಂದಿರ ಪೂರಕವಾಗುತ್ತಿದ್ದು, ಶಿರಡಿಗೆ ಹೋಗಲು ಅನಾನುಕೂಲವಾಗುವ ಭಕ್ತರಿಗೆ ಈ ಕ್ಷೇತ್ರ ಪರ್ಯಾಯ ಕ್ಷೇತ್ರವಾಗಿ ಬೆಳಗುತ್ತಿದೆ ಎಂದರು. ಶಿರಡಿ ಸಾಯಿ ಬಾಬಾರ ಭಕ್ತರಿಗೆ ಶ್ರದ್ಧೆ ಮತ್ತು ತಾಳ್ಮೆ ಅತೀ ಅಗತ್ಯ ಈ ಎರಡು ಗುಣಗಳು ಇದ್ದರೆ ಮನಸ್ಸಿನೊಂದಿಗೆ ಜ್ಞಾನಶುದ್ಧೀಕರಣ ಸಾಧ್ಯವಿದ್ದು, ಶ್ರದ್ಧೆ ಭಕ್ತಿಯಿಂದ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ರಾಜಗುಡ್ಡೆ : ಹರೇಕಳ ಗ್ರಾಮದ ರಾಜಗುಡ್ಡೆಯಲ್ಲಿರುವ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಮಿತಾ ಶೆಟ್ಟಿ ಅವರಿಗೆ ಶಾಲಾ ಎಸ್ಡಿಎಂಸಿ, ಗ್ರಾಮಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಸನ್ಮಾನ ಕಾಯಕ್ರಮ ನಡೆಯಿತು.ಎಸ್ಡಿಎಂಸಿ ಹಿರಿಯ ಸದಸ್ಯ ರಾಮದಾಸ್ ಪೂಂಜ ಮಾತನಾಡಿ ಸನ್ಮಾನ ನೆರವೇರಿಸಿ ತಮ್ಮ ವೃತ್ತಿ ಜೀವನದಲ್ಲಿ ಪ್ರಾಮಾಣಿಕ ಹಾಗೂ ಕ್ರೀಯಾಶೀಲವಾಗಿ ಸೇವೆ ಸಲ್ಲಿಸಿದ ಕೀರ್ತಿ ಅಮಿತಾ ಅವರದ್ದಾಗಿದ್ದು, ನಿವೃತ್ತ ಜೀವನದಲ್ಲೂ ತಮ್ಮ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಲಿ ಎಂದು ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕಿ ಅಮಿತಾ ಶೆಟ್ಟಿ ಮಾತನಾಡಿ ನಮ್ಮಿಂದಾಗಿ ಹಲವು ಮಂದಿ ಜೀವನ ಪಾಠ ಕಲಿಸಲು ಸಾಧ್ಯವಾದಂತಹ ಶಿಕ್ಷಕ ವೃತ್ತಿ ಅತ್ಯಂತ ತೃಪ್ತಿ ತಂದಿದೆ. ನನ್ನ ಗ್ರಾಮದಲ್ಲೇ, ಗ್ರಾಮಸ್ಥರ ಸಮ್ಮುಖದಲ್ಲಿ ವೃತ್ತಿಯಿಂದ ನಿವೃತ್ತಿಯಾಗುತ್ತಿರುವುದು ಸಂತಸ ತಂದಿದೆ ಎಂದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುಗುಣ, ನಿವೃತ್ತ ಮುಖ್ಯ ಶಿಕ್ಷಕಿ ಗಂಗಾಬಾಯಿ, ಎಸ್ಡಿಎಂಸಿ ಉಪಾಧ್ಯಕ್ಷೆ ಶಾಂತ, ಸಮುದಾಯದತ್ತ ಶಾಲೆ ನೋಡೆಲ್ ಶಿಕ್ಷಕರಾದ ಶಿವಕುಮಾರ್…
ಉಳ್ಳಾಲ ನ್ಯೂಸ್ ನೆಟ್ವರ್ಕ್ ನಾಟೆಕಲ್ : ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾದ ವೇವ್ಸ್-2017 ಸ್ಪರ್ಧೆಯಲ್ಲಿ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸಯನ್ಸ್ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಫಾತಿಮಾ ಮುಫಿದಾ, ಪೇಪರ್ ಪ್ರೆಸೆಂಟೇಷನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ದೇರಳಕಟ್ಟೆ: ಬ್ಯಾರಿಕಲಾವಿದರು ಮತ್ತು ಬರಹಗಾರರ ಒಕ್ಕೂಟವಾಗಿರುವ ದೇರಳಕಟ್ಟೆಯ `ಮೇಲ್ತೆನೆ’ ಸಂಘಟನೆಯ ವತಿಯಿಂದ ದೇರಳಕಟ್ಟೆಯಲ್ಲಿ `ಬ್ಯಾರಿ ಸಾಹಿತ್ಯ ಸಂವಾದಕೂಟ’ ನಡೆಯಿತು. ಮೇಲ್ತೆನೆ ಅಧ್ಯಕ್ಷ ಆಲಿಕುಂಞ ಪಾರೆ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಇಸ್ಮತ್ ಫಜೀರ್ ಮಂಡಿಸಿದ `ಬ್ಯಾರಿ ಭಾಷೆಯ ಪ್ರಭೇದಗಳು’ ಎಂಬ ಪ್ರಬಂಧದ ಮೇಲೆ ಚರ್ಚೆ ನಡೆಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾದ ಆರೀಫ್ ಕಲ್ಕಟ್ಟ, ಬಶೀರ್ ಅಹ್ಮದ್ಕಿನ್ಯ, ಪ್ರೋ| ನಿಯಾಝ್ ಚರ್ಚೆಯಲ್ಲಿ ಭಾಗವಹಿಸಿದ್ದರು.ಜತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ ಸ್ವಾಗತಿಸಿ, ವಂದಿಸಿದರು.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಕಿನ್ಯಾ : ಎಲ್ಲರಿಗೂ ಸಮಾನವಾಗಿ ಗೌರವ ನೀಡಬೇಕೆಂದು ಇಸ್ಲಾಂ ಕಲ್ಪಿಸುತ್ತದೆ. ಗೌರವ ಸ್ಥಾನಮಾನ ನೀಡುವ ವಿಚಾರದಲ್ಲಿ ಧರ್ಮ, ಸಂಪ್ರದಾಯ, ಜಾತಿ ಲೆಕ್ಕಾಚಾರ ಮಾಡಲು ಇಸ್ಲಾಂ ಅವಕಾಶ ನೀಡಲಿಲ್ಲ ಎಂದು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹೇಳಿದರು. ಅವರು ಕಿನ್ಯ ಮಸ್ಜಿದುಲ್ ಬುಖಾರಿ, ಎಸ್ವೈಎಸ್ ಮತ್ತು ಎಸ್ಸೆಸ್ಸೆಫ್ ಇದರ ಆಶ್ರಯದಲ್ಲಿ ಕಿನ್ಯದಲ್ಲಿ ಭಾನುವಾರ ನಡೆದ ಸುನ್ನಿ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. ಇಸ್ಲಾಂನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರೆ ಮಾತ್ರ ಧರ್ಮದ ಮಹತ್ವ ಅರಿಯಲು ಸಾಧ್ಯ. ಧರ್ಮದ ವಿಚಾರದಲ್ಲಿ ಚರ್ಚೆ ಮಾಡುವ ಮೊದಲು ಅಧ್ಯಯನ ಅಗತ್ಯ ಎಂದರು.ಅಸಯ್ಯದ್ ಕೆ.ಎಸ್. ಆಲವಿ ತಂಙಳ್ ಅಲ್ ಐದರೂಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಸ್ಸಯ್ಯದ್ ಕುಂಞ ಕೋಯ ತಂಙಳ್ ದುವಾ ನೆರವೇರಿಸಿದರು. ಶರಫ್ಪುಲ್ ಉಲಮಾ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಅಶ್ರಫ್ ಸಖಾಫಿ ಕಿನ್ಯ , ಇಝುದ್ದೀನ್ ಅಹ್ಸನಿ ಕಿನ್ಯ, ಬುಖಾರಿ ಮಸ್ಜಿದ್ ಖತೀಬ್ ನಿಸಾರ್ ಮದನಿ, ಕಿನ್ಯ ಮಸೀದಿ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಬಾವಲಿಗುರಿ : ಪಾವೂರು ಹರೇಕಳದ ಬಾವಲಿಗುರಿ ಶ್ರೀ ಬಬ್ಬುಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ ನಡೆಯುವ ಕೋರ್ದಬ್ಬು ತನ್ನಿಮಾನಿಗ ಪರಿವಾರ ದೈವಗಳ 10ನೇ ವರ್ಷದ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆ ಎ.15ರಿಂದ ಎ.17ರವರೆಗೆ ನಡೆಯಲಿದೆ. ಎ. 17ರಂದು ಶನಿವಾರ ಶ್ರೀ ಸತ್ಯನಾರಾಯಣ ಪೂಜೆ, ಸ್ಥಳ ಗುಳಿಗ ಹಾಗೂ ಬಬ್ಬುಸ್ವಾಮಿ ನತ್ತು ತನ್ನಿಮಾನಿಗ ದೈವದ ನೇಮೋತ್ಸವ, ಎ.16ರಂದು ಪಂಜುರ್ಲಿ ಗುಳಿಗ ನೇಮ, ಎ,17ರಂದು ರಾಹುಗುಳಿಗ ನೇಮೋತ್ಸವ ನಡೆಯಲಿದೆ ಎಂದು ಸಮಿತಿ ಪ್ರಕಟನೆ ತಿಳಿಸಿದೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಕುಂಪಲ ಗುರು ನಗರದ ಶ್ರೀ ಮಾರುತಿ ಮಠದ ಶ್ರೀಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ನಡೆಯುತ್ತಿರುವ 108 ದಿನಗಳ ಆಹೋರಾತ್ರಿ ಭಜನಾ ಕಾರ್ಯಕ್ರಮದ 100ನೇ ದಿನದ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ಕಂಚಿನ ಪ್ರಭಾವಳಿ ಮತ್ತು ಹಸಿರು ಹೊರೆಕಾಣಿಕೆ ಶ್ರೀ ಅಮೃತಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಅಂಬಿಕಾರೋಡ್ ಗಟ್ಟಿ ಸಮಾಜ ಭವನದ ಬಳಿಯಿಂದ ಶ್ರೀ ಕ್ಷೇತ್ರಕ್ಕೆ ನಡೆದ ಹೊರೆ ಕಾಣಿಕೆ ಮೆರವಣಿಗೆಗೆ ಸೋಮೇಶ್ವರದ ದಿನೇಶ್ ಫಣಿಕ್ಕರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷರು, ಸದಸ್ಯರು, ಭಜನಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ :ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಅಪರಾಧ ವಿಭಾಗದ ಉಪ ನಿರೀಕ್ಷಕರ ಜೀಪಿಗೆ ಟಿಪ್ಪರೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಸೋಮೇಶ್ವರ ಬಳಿ ಸೋಮವಾರ ಬೆಳಗ್ಗಿನ ಜಾವ ನಡೆದಿದ್ದು, ಜೀಪಿನಲ್ಲಿದ್ದ ಎಸ್ಐ ಸಹಿತ ಚಾಲಕ ಪವಾಡಸದೃಶ್ಯವಾಗಿ ಪಾರಾಗಿದ್ದು, ಟಿಪ್ಪರನ್ನು ಕೊಲ್ಯ ಬಳಿ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಪರಾಧ ವಿಭಾಗದ ಉಪ ನಿರೀಕ್ಷಕ ಮೋಹನ್ದಾಸ್ ಸಂಚರಿಸುತ್ತಿದ್ದ ಜೀಪಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಚಾಲಕ ಕಾನ್ಸ್ಟೇಬಲ್ ಪ್ರಶಾಂತ್ ಮತ್ತು ಮೋಹನ್ ದಾಸ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಪೋಲಿಸರ ವಾಹನಕ್ಕೆ ಡಿಕ್ಕಿ ಹೊಡೆಸಿದ ಚಾಲಕ ಬೆದರಿ ಟಿಪ್ಪರನ್ನು ನಿಲ್ಲಿಸದೆ ಪರಾರಿಯಾಗಿದ್ದು ಬಳಿಕ ಟಿಪ್ಪರನ್ನು ಕೊಲ್ಯದಲ್ಲಿ ವಶಕ್ಕೆ ತೆಗೆದುಕೊಂಡರು. ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆಟೋ ಚಾಲಕ ಕೆ.ಸಿ.ರೋಡ್ ನಿವಾಸಿ ಶೇಖ್ ಮೊಯ್ದೀನ್ (65)ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ. ಎ. 1ರಂದು ಕೋಟೆಕಾರು ಪೆಟ್ರೋಲ್ ಪಂಪ್ ಬಳಿ ತನ್ನ ಆಟೋ ರಿಕ್ಷಾಕ್ಕೆ ಪೆಟ್ರೋಲ್ ಹಾಕಿಸಿ ಅಲ್ಲಿಂದ ಆಟೋ ರಿಕ್ಷಾ ಪಾರ್ಕ್ ಗೆ ತೆರಳುತ್ತಿದ್ದ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮಾರುತಿ ಒಮ್ನಿ ಕಾರು ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೊಯ್ದಿನ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಮೃತರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ. ಆರೋಪಿ ಚಾಲಕನನ್ನು ಉಳ್ಳಾಲ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.

