ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಕಾಸರಗೋಡು, ದಕ್ಷಿಣ ಕನ್ನಡ ಸೇರಿದಂತೆ ಕೊಡಗು ಜಿಲ್ಲೆಗಳ ಹಲವಾರು ಪ್ರಧಾನ ದೇವಸ್ಥಾನಗಳ ಪ್ರಧಾನ ತಂತ್ರಿವರ್ಯರಾದ ಬ್ರಹ್ಮಶ್ರೀ ನೀಲೇಶ್ವರ ಕೀಕಾಂಗೋಟ್ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು (ಹಿರಿಯ) (73) ಎ.11ರಂದು ಮಂಗಳವಾರ ನಿಧನ ಹೊಂದಿದರು. ಉಚ್ಚಿಲ ಕೋಟೆ ಶ್ರೀ ಮಹಾವಿಷ್ಣು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಆಗಿದ್ದ ಪದ್ಮನಾಭ ತಂತ್ರಿವರ್ಯರು ಕಳೆದ 53 ವರ್ಷಗಳಿಂದ ಪರಂಪರಾಗತವಾದ ತಂತ್ರಸ್ಥಾನವನ್ನು ನಡೆಸಿಕೊಂಡು ಬರುವ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದರು. ಸುಮಾರು 900 ವರ್ಷಗಳ ಹಿಂದೆ ಉಚ್ಚಿಲದಿಂದ ನೀಲೇಶ್ವರಕ್ಕೆ ಸ್ಥಳಾಂತರಗೊಂಡಿದ್ದ ಇವರ ಹಿರಿಯರಿಂದ ನೀಲೇಶ್ವರ ತಂತ್ರಿವರ್ಯರು ಎನ್ನುವ ಹೆಸರು ಬಂದಿದ್ದು, ಬಳಿಕ ಉಚ್ಚಿಲದಲ್ಲಿ ನೆಲೆ ನಿಂತು ಕೇರಳ ಆಗಮ ಶಾಸ್ತ್ರಕ್ಕನುಸಾರವಾಗಿ, ತಂತ್ರಸ್ಥಾನವನ್ನು ಕ್ಷೇತ್ರ ಆಚಾರ ನಿಯಮಗಳನ್ನು ಪಾಲಿಸಿಕೊಂಡು ಬಂದ ಹಿನ್ನಲೆಯಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಕೊಡಗು, ಜಿಲ್ಲೆಗಳ ಹಲವಾರು ಪ್ರಧಾನ ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ಪ್ರತಿಷ್ಠಾ ಕಾರ್ಯ ಮತ್ತು ಉತ್ಸವಗಳನ್ನು ನಡೆಸಿಕೊಂಡು ಬರುವ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದರು. ವೈಧಿಕದೊಂದಿಗೆ ವಿಶ್ವ ಹಿಂದೂ ಪರಿಷತ್ನ ಉಳ್ಳಾಲ ವಲಯ…
Author: UllalaVani
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಪರಿಶಿಷ್ಟ ಸಮುದಾಯದವರು ಸ್ವಾವಲಂಬಿಯಾಗಿ ಬದುಕಲು ಮತ್ತು ತಮ್ಮ ಹಕ್ಕುಗಳನ್ನು ಪಡೆಯುವ ಸಲುವಾಗಿ ಬಿಜೆಪಿ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಇದಾಗಿದೆ ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು. ಅವರು ಪಂಡಿತ್ ದೀನ್ ದಯಾಳ್ ಉಪಾಧ್ಯಯರ ಜನ್ಮಶತಾಬ್ಧಿ ವರ್ಷಾಚರಣೆ ಪ್ರಯುಕ್ತ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಮಹಿಳಾ ಮೋರ್ಚಾ ಮತ್ತು ಮುನ್ನೂರು ಗ್ರಾಮ ಸಮಿತಿಯ ಜಂಟಿ ಆಶ್ರಯದಲ್ಲಿ ಮುನ್ನೂರು ಗ್ರಾಮದ ಮಾಯಿಲ ಎಂಬವರ ಮನೆ ಎದುರುಗಡೆ ಬುಧವಾರ ಹಮ್ಮಿಕೊಂಡಿದ್ದ ಪರಿಶಿಷ್ಠ ಜಾತಿ ಪಂಗಡದ ಕುಟುಂಬಗಳಿಗೆ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಮತ್ತು ಬಿಸು ಆಚರಣೆ, ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿ ಶಿಕ್ಷಣ ಪಡೆದವರು ಹಿಂದುಳಿಯಲು ಸಾಧ್ಯವಿಲ್ಲ. ಹಿಂದುಳಿದವರು ಅನ್ನುವ ಪ್ರಮೇಯವೇ ಸಮಾಜದಲ್ಲಿ ಇರದಂತೆ, ಎಲ್ಲರೂ ಹಿಂದು ಸಮುದಾಯದವರಾಗಿ ಬಾಳುವಂತ ವಾತಾವರಣ ನಿರ್ಮಾನ ಆಗಬೇಕಿದೆ. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಅರಿವಿನ ಜತೆಗೆ ಅವರ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಮಂಗಳೂರು : ಬ್ಯಾರಿ ಗೈಯ್ಸ್ ಕೆಎಸ್ಎ ವತಿಯಿಂದ ಎ. 22 ರಂದು ಮಂಗಳೂರಿನ ಪುರಭವನದಲ್ಲಿ ಬೃಹತ್ ಬ್ಯಾರಿ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ನಾಲ್ಕು ಬಡ ಕುಟುಂಬಕ್ಕೆ ನಿರ್ಮಿಸಿಕೊಟ್ಟ ನಾಲ್ಕು ಮನೆಯ ಕೀಲಿ ಕೈ ಹಸ್ತಾಂತರ ಹಾಗೂ ಮುಂದಿನ ಯೋಜನೆಯಾದ ಇಪ್ಪತ್ತು ಮನೆ ನಿರ್ಮಾಣದ ಅರ್ಜಿ ಸ್ವೀಕಾರವು ಇದೇ ಸಂದರ್ಭದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಅತ್ಯಾಕರ್ಷಕ ಶೈಲಿಯ ದಫ್ ಪ್ರದರ್ಶನ, ಖುರ್ಆನ್ ಸಂಪೂರ್ಣ ಕಂಠಪಾಠ ಮಾಡಿದ ಬಾಲ ಪ್ರತಿಭೆಗಳಿಗೆ ಸನ್ಮಾನ, ರಾಷ್ಟ್ರ ,ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿz. ಇದರೊಂದಿಗೆ ಬೃಹತ್ ರಕ್ತದಾನ ಶಿಬಿರ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ, ಉಚಿತ ಕಣ್ಣು ತಪಾಸಣಾ ಶಿಬಿರ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ,ರಾಜಕೀಯ,ಶೈಕ್ಷಣಿಕ ರಂಗದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಬ್ಯಾರಿ ಗೈಯ್ಸ್ ಕೆಎಸ್ಎ ತಂಡದ ನಾಯಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇರಳಕಟ್ಟೆಯ ಖಾಸಗಿ ಲಾಡ್ಜೊಂದರಲ್ಲಿ ನಡೆದಿದೆ. ತಲಶ್ಶೇರಿ ಪಿಣರಾಯಿ ಸಮೀಪದ ಕೋವತ್ತಲತ್ತಿಲ್ ನಿವಾಸಿ ತ್ರಿಕೇಶ್ (35) ಆತ್ಮಹತ್ಯೆಗೈದವರು. ಕೇರಳದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಮಂಗಳವಾರದಂದು ಬಂದಿದ್ದರು. ತಡರಾತ್ರಿ 10 ರ ವೇಳೆ ದೇರಳಕಟ್ಟೆ ಸಮೀಪ ಲಾಡ್ಜಿನಲ್ಲಿ ರೂಮನ್ನು ಬುಕ್ ಮಾಡಿದ್ದರು. ಬುಧವಾರ ಮಧ್ಯಾಹ್ನ ವೇಳೆ ಮರತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನಾರೋಗ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದ ಸಂದರ್ಭ ಸಿಡಿಲು ಬಡಿದು ಮೂವರ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟುವಿನ ನೇತ್ರಾವತಿ ನದಿಯಲ್ಲಿ ಬುಧವಾರ ಸಂಜೆ ನಡೆದಿದೆ. ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಬಂದಿದ್ದ ಕಾರ್ಮಿಕರಾದ ಜಯ್ಯಮ್ಮ(28). ಕಣಕಮ್ಮ(29),ಶಶಿಕಲಾ(7) ಸಾವನ್ನಪ್ಪಿದ ದುದೈ೯ವಿಗಳು. ಘಟನೆಯಲ್ಲಿ ಲಿಖಿತ(2) ಗಂಭೀರ ಗಾಯಗೊಂಡಿದ್ದು ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರು ಮಕ್ಕಳು ಸೇರಿ ನಾಲ್ವರು ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದರು ವೇಳೆ ಮೂವರು ಸಾವನ್ನಪ್ಪಿದ್ದು ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
ಉಳ್ಳಾಲ ನ್ಯೂಸ್ ನೆಟ್ವರ್ಕ್ ಪುತ್ತೂರು: ಪುತ್ತೂರು ನಗಾರಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ನಗರ ಯೋಜನಾ ಸಹಾಯಕ ನಿರ್ದೇಶಕಿ 10ಸಾವಿರ ರೂಪಾಯಿ ಹಣ ಲಂಚ ಪಡೆಯುತ್ತಿದ್ದ ಸಂದರ್ಭ ಎಸಿಬಿ ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ. ನಗರ ಯೋಜನಾ ಸಹಾಯಕ ನಿರ್ದೇಶಕಿ ಲಾವಣ್ಯ ಲಂಚ ಪಡೆಯುತ್ತಿದ್ದವರು ಎಂದು ತಿಳಿದುಬಂದಿದೆ. ಪೂತ್ತೂರಿನ ರಾಮ್ ಮೋಹನ್ ಪೈ ಎಂಬವರಿಗೆ ಸಂಬಂಧಿಸಿದ ಜಾಗಕ್ಕೆ ಭೂ ಪರಿವರ್ತನೆಗೆ ಎನ್.ಓ.ಸಿ ನೀಡಲು 20ಸಾವಿರ ಲಂಚ ಕೇಳಿದ್ದ ಲಾವಣ್ಯ ಎಂದು ತಿಳಿದು ಬಂದಿದ್ದು. ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಸುಧೀರ್ ಹಾಗೂ ಇನ್ಸ್ಪೆಕ್ಟರ್ ಯೋಗೀಶ್ ಕುಮಾರು ನೇತೃತ್ವದ ತಂಡ ದಾಳಿ ನಡೆಸಿದೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ:ಇಂಡಿಯಾನ್ ಮುಜಾದ್ದೀನ್ ನಂಟಿನ ಹಿನ್ನಲೆ ಹಾಗೂ ಸ್ಫೋಟಕ ಪತ್ತೆ ಮತ್ತು ವಿಧ್ವಂಸಕ ಕೃತ್ಯಕ್ಕೆ ಯೋಜನೆ ಹಿನ್ನಲೆ ಉಳ್ಳಾಲದಲ್ಲಿ ಬಂಧಿತರಾಗಿದ್ದ ಮೂವರು ಉಗ್ರರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಮಹತ್ವದ ತೀರ್ಪುನ್ನು ಬುಧವಾರ ನೀಡಿದೆ. ಉಳ್ಳಾಲದಲ್ಲಿ 9008ರಲ್ಲಿ ಮಂಗಳೂರು ಪೊಲೀಸರು ಏಳು ಮಂದಿಯನ್ನ ಬಂಧಿಸಿದ್ದರು.ಈ ಪೈಕಿ ಸೈಯ್ಯದ್ ಮಹಮ್ಮದ್ ನೌಷದ್, ಅಹ್ಮದ್ ಬಾವಾ ಅಬೂಬಕ್ಕರ್ ಮತ್ತು ಫಕೀರ್ ಅಹ್ಮದ್ ಆರೋಪ ಸಾಬೀತಾಗಿದ್ದು ಮಂಗಳೂರಿನ ಮೂರನೇ ಹೆಚ್ಚುವರಿ ಜೆಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶೆ ಪುಪ್ಪಾಂಜಲಿ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಮೂಲಕ ಮಹತ್ವದ ತೀರ್ಪನ್ನು ನೀಡಿದ್ದಾರೆ. ಮಹಮ್ಮದ್ ಆಲಿ, ಜಾವೇದ್ ಅಲಿ, ಮಹಮ್ಮದ್ ರಫೀಕ್, ಶಬೀರ್ ಭಟ್ಕಳ ಇವರನ್ನು ದೋಷಮುಕ್ತಗೊಳಿಸಲಾಗಿದೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ತಲಪಾಡಿ : ತಲಪಾಡಿ ಗ್ರಾಮ ಪಂಚಾಯತ್ನ ಮೇಗಿನ ಪಂಜಾಳದಲ್ಲಿ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿಯ ಏಕಾಂಗಿ ಮಹಿಳೆಯ ಮನೆ ದುರಸ್ತಿಯನ್ನು ಎಸ್ವೈಎಸ್ ಮೇಗಿನ ಪಂಜಾಳ ಶಾಖೆಯ ವತಿಯಿಂದ ಮಾಡಿ ಕೊಡಲಾಯಿತು.ತಲಪಾಡಿ ಎಸ್ಎಸ್ವೈಎಸ್ ಸೆಂಟರ್ ಅಧ್ಯಕ್ಷ ಉಮ್ಮರ್ ಎನ್.ಎಸ್. ನೇತೃತ್ವದಲ್ಲಿ ನಡೆದ ಮನೆ ದುರಸ್ತಿ ಕಾರ್ಯ ನಡೆಯಿತು. ಉಮ್ಮರ್ ಎನ್ಎಸ್ : ಎಸ್ವೈಎಸ್ನ ಮೇಗಿನ ಪಂಜಾಳ ಶಾಖೆಯ ವತಿಯಿಂದ `ಸಾಂತ್ವಾನದ ಕಡೆ ನಮ್ಮ ನಡೆ’ ಎನ್ನುವ ನಿಟ್ಟಿನಲ್ಲಿ ಕಳೆದ 20 ವರ್ಷಗಳಿಂದ ನಾದುರಸ್ತಿಯಲ್ಲಿದ್ದ ಗೋಪಿ ಅವರ ಮನೆಯ ದುರಸ್ತಿ ಕಾರ್ಯವನ್ನು ನಡೆಸಿಕೊಟ್ಟಿದ್ದು ಇದು ಒಂದು ಅರ್ಥಪೂರ್ಣ ಕಾರ್ಯಕ್ರಮ. ಪಂಚಾಯತ್ನಿಂದ ಯಾವುದೇ ಸಹಾಯ ದೊರಕದೆ ಇದ್ದಾಗ ಗೋಪಿ ಅವರು ನಮ್ಮ ಸಂಘಟನೆಯನ್ನು ಸಂಪರ್ಕಿಸಿದಾಗ ಸಂಸ್ಥೆ ಒಪ್ಪಿಕೊಂಡು ಈ ಕಾರ್ಯ ನಿರ್ವಹಿಸಿದೆ ಇದರಿಂದ ಈ ಪ್ರದೇಶದಲ್ಲಿ ಸಾಮರಸ್ಯದೊಂದಿಗೆ ಜಾತ್ಯಾತೀತವಾದ ಆದರ್ಶ ಸಮಾಜದೊಂದಿಗೆ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದರು. ಯಹ್ಯಾ : ಸ್ಥಳೀಯ ಬಡವರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಿದರೆ ಅವರಿಗೆ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಮಂಗಳೂರು : “ಕುಸೆಲ್ದರಸೆ ’ ಖ್ಯಾತಿಯ ತುಳು ರಂಗಭೂಮಿ ಹಾಗೂ ಚಿತ್ರನಟ ಮಂಗಳೂರಿನ ನವೀನ್ ಡಿ. ಪಡೀಲ್ 2016ನೆ ಸಾಲಿನ ಉತ್ತಮ ಪೋಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಪ್ರಾದೇಶಿಕ ಭಾಷೆಗಳ ಪೈಕಿ ತುಳು ಚಲನಚಿತ್ರದಲ್ಲಿ ಪ್ರಥಮ ಬಾರಿಗೆ ಪೋಷಕ ಪಾತ್ರದಲ್ಲಿ ಅಭಿನಯಿಸಿದ ಪಡೀಲ್ ಈ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ. ಸೂರ್ಯ ಮೆನನ್ ನಿರ್ದೇಶನದ ‘ಕುಡ್ಲ ಕೆಫೆ’ ತುಳು ಚಲನಚಿತ್ರದ ಪಾತ್ರಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ‘‘ಪ್ರಶಸ್ತಿ ಬಂದಿರುವುದು ತಂಬಾ ಸಂತಸ ತಂದಿದೆ. ಕನ್ನಡ, ಕೊಂಕಣಿ ಇತರ ಪ್ರಾದೇಶಿಕ ಭಾಷೆಗಳ ನಡುವೆ ಪ್ರಥಮ ಬಾರಿಗೆ ನನಗೆ ತುಳುವಿನಲ್ಲಿ ಉತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ. ಇದಕ್ಕಾಗಿ ತುಳುನಾಡಿನ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’’ಎಂದು ನವೀನ್ ಡಿ. ಪಡೀಲ್ ಪತ್ರಿಕೆಯೊಂದಿಗೆ ಹರುಷವನ್ನು ಹಂಚಿಕೊಂಡಿದ್ದಾರೆ. ತುಳು ನಾಟಕರಂಗದಲ್ಲಿ ಖ್ಯಾತ ಹಾಸ್ಯ ನಟನಾಗಿ, ಪೋಷಕ ನಟನಾಗಿ ಹಾಸ್ಯ ನಾಟಕಗಳ ಪ್ರಮುಖ ನಟನಾಗಿ ಮಿಂಚಿರುವ ನವೀನ್ ಡಿ. ಪಡೀಲ್ ಸುಮಾರು 70ಕ್ಕೂ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಕೊಣಾಜೆ: ಡೀಸಿಲ್ ಕಳ್ಳತನ ನಡೆಸಿ ಮಾರಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿ ಡೀಸಿಲ್ ಹಾಗೂ ಸ್ಕೂಟರೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಬಂಧಿತ ಆರೋಪಿಗಳನ್ನು ಅಜಯ್ ಡಿಸೋಜ ಹಾಗೂ ಅವಿನಾಶ್ ಡಿಸೋಜ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಓರ್ವನಾದ ಅಜಯ್ ಎಂಬಾತ ಹರೇಕಳದ ಮೀನುಗಾರಿಕಾ ಸಂಸ್ಥೆಯೊಂದರಲ್ಲಿ ಎ.ಸಿ.ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ಡೀಸಿಲನ್ನು ಕ್ಯಾನ್ ಮೂಲಕ ತುಂಬಿಸಿ ತನ್ನ ಸಹೋದರನಾದ ಅವಿನಾಶ್ನ ಮೂಲಕ ಅಲ್ಲಿಂದ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಮೀನುಗಾರಿಕಾ ಸಂಸ್ಥೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಡೀಸಿಲ್ ಹಾಗೂ ಸ್ಕೂಟರೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

