UN NETWORKS ಕೊಣಾಜೆ:ಜಾತಿ ಧರ್ಮಗಳ ನಡುವೆ ಹೊಡೆದಾಟ ಕೊಲೆಯಂತಹ ಕೃತ್ಯಗಳು ಒಂದಡೆಯಾದರೆ. ಇನ್ನೊಂದೆಡೆ ಸಾಮರಸ್ಯ ಸ್ಥಾಪಿಸುವಂತಹ ಕಾರ್ಯಗಳು ನಡೆಯುತ್ತಾ ಇರುತ್ತದೆ. ಇಲ್ಲೊಂದು ಪ್ರದೇಶದಲ್ಲಿ ಶಬರಿಮಲೆ ಯಾತ್ರೆಗೆ ತೆರಳುವ ಮುನ್ನ ಮಸೀದಿಗೆ ಸೌಹಾರ್ಧಯುತ ಭೇಟಿಯನ್ನು ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುವ ಕಾರ್ಯ ನಡೆಸುತ್ತಾ ಬಂದಿದೆ. ಕೊಣಾಜೆ ಸಮೀಪದ ಶಾರದಾನಗರದ ಸಪ್ತಸ್ವರ ಕಲಾತಂಡದ ಅಯ್ಯಪ್ಪ ವೃತಧಾರಿಗಳು ಸಾಮರಸ್ಯಕ್ಕಾಗಿ ಮಸೀದಿಗೆ ಸೌಹಾರ್ದ ಭೇಟಿಯನ್ನು ನಡೆಸಿಕೊಂಡು ಬರುವ ಯಾತ್ರಾರ್ಥಿಗಳಾಗಿದ್ದು, ಕಳೆದ ಹಲವು ವರ್ಷಗಳಿಂದ ಕೋಡಿಜಾಲ್ನ ರಿಫಾಯಿಯ ಜುಮಾ ಮಸೀದಿಗೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಸಿ ಸಿಹಿ ಹಂಚುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ವರ್ಷವೂ ಮಸೀದಿಗೆ ಬುಧವಾರ ಭೇಟಿ ನೀಡಿದ ಭಕ್ತಾಧಿಗಳ ತಂಡ ಮಸೀದಿಯ ಮದರಸದ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಿದರು. ಈ ಸಂದರ್ಭದಲ್ಲಿ ಗುರುಸ್ವಾಮಿ ರಾಮಚಂದ್ರ ಗಟ್ಟಿ ಮೇಲಿನತೋಟ, ಚಿತ್ತರಂಜನ್, ಅನೂಪ್, ಶರತ್ ನೇತೃತ್ವದ ಅಯ್ಯಪ್ಪ ಮಾಲಾಧಾರಿಗಳನ್ನು ಮಸೀದಿಯ ಖತೀಬರಾದ ಅಬೂಬಕ್ಕಾರ್ ಸಖಾಫಿ, ಪ್ರ. ಕಾರ್ಯದರ್ಶಿ ಅಬೂಬಕ್ಕಾರ್ ಕೋಡಿಜಾಲ್, ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್ ಬರಮಾಡಿಕೊಂಡರು.
Author: UllalaVani
UN NETWORKS ಉಳ್ಳಾಲ: ಬೆಳ್ಮ ಗ್ರಾಮದ ದೇರಳಕಟ್ಟೆಯ ರೆಂಜಾಡಿ ಮಖಾಂ ಉರೂಸ್ ಪ್ರಯುಕ್ತ 7ದಿವಸಗಳ ಮತ ಪ್ರವಚನ ಜನವರಿ 28ರಿಂದ ಫೆಬ್ರವರಿ4ರ ತನಕ ಬೆಳ್ಮ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ. ಜ,28ರಂದು ಪೇರೋಡು ಮುಹಮ್ಮದ್ ಅಝ್ಝರಿ,ಜ,29ರಂದು ಪಿ.ಎಂ ಅನ್ಸಾರ್ ಫೈಝಿ ಬುರ್ ಹಾರಿ, ಜ,30ರಂದು ಶಾಕೀರ್ ಬಾಖವಿ ಮಂಬಾಡ್,ಜ,31ರಂದು ಮುಹಮ್ಮದ್ ಅಶ್ರಫ್ ರಹ್ಮಾನಿ ಚೌಕಿ ಕಾಸರಗೋಡು, ಫೆಬ್ರವರಿ 1ರಂದು ಬಿ.ಎಂ ರಶೀದ್ ಸ ಅದಿ ಬೋಳಿಯಾರ್,ಫೆ 2ರಂದು ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಫೆ, 3ರಂದು ಬಿ.ಎಚ್ ಅಬೂಸ್ವಾಲಿಹ್ ಉಸ್ತಾದ್ ಮತ್ತು ಎನ್.ಎಚ್ ಅದಂ ಫೈಝಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆ.4ರಂದು ಸಮಾರೋಪ ಸಮಾರಂಭ ಅಸರ್ ನಮಾಝಿನ ಬಳಿಕ ಕೂಟು ಝಿಯಾರತ್ ಕೆ.ಪಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ನೇತ್ರತ್ವದಲ್ಲಿ ಮುಹಮ್ಮದ್ ಶರೀಫ್ ಬಾಖವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಂಜೆ 5ಗಂಟೆಗೆ ಸೌಹಾರ್ದ ಸಂಗಮ, ಇಶಾ ನಮಾಝಿನ ಬಳಿಕ ಸ್ವಲಾತ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ಹೈ ದ್ರೋಸ್ ತಂಞಳ್ ಕಿಲ್ಲೂರು…
UN NETWORKS ಮಂಗಳೂರು: ಕಡಲತೀರ ಕರಾವಳಿ ಕೋಮುದಳ್ಳುರಿಗೆ ಸಿಲುಕಿ ನಲುಗಿ ಹೋಗಿವೆ.ಒಂದು ಕಾಲದಲ್ಲಿ ಬುದ್ದಿವಂತರ ಜಿಲ್ಲೆ,ಶಾಂತಿಪ್ರಿಯ ಜಿಲ್ಲೆ ಎಂದು ಕರೆಯಲ್ಪಡುತ್ತಿದ್ದ ದಕ್ಷಿಣ ಕನ್ನಡ ಅಶಾಂತಿಯ ಬೀಡಾಗಿದೆ.ಕರಾವಳಿಯಲ್ಲಿ ಭಯದ ವಾತಾವರಣ ನಿರ್ಮಾಣಗೊಂಡು ಪದೇ ಪದೇ ಶಾಂತಿ ಕದಡುವ ಕೆಲಸ ನಡೆಯುತ್ತಲೇ ಇದೆ.ಕಾರಣವಿಲ್ಲದ ತಪ್ಪಿಗೆ ಕೋಮುಖ ವ್ಯಾಘ್ರಗಳ ಹಟ್ಟಹಾಸಕ್ಕೇ ಅಮಾಯಕರ ಜೀವಗಳು ಬೀಳುತ್ತಲೇ ಇವೆ.ಕರಾವಳಿಯ ಕಣ್ಣೀರಿಗೆ ಕಾರಣರು ಯಾರು ಎಂಬ ಪ್ರಶ್ನೆ ಮೂಡಿದಾಗ ಅದಕ್ಕೆ ಸರಿಯಾದ ಉತ್ತರವೇ ಸಿಗದಂತಾಗಿದೆ. ಮೇಲ್ನೋಟಕ್ಕೆ ಬಂಟಿಗ್ಸ್ ವಿವಾದಕ್ಕಾಗಿ ದೀಪಕ್ ರಾವ್ ನನ್ನ ಕೊಲೆ ನಡೆದಿದೆ ಎನ್ನಲಾಗುತ್ತಿದೆ.ಕೊಲೆಮಾಡಿದವರು ಕೆಲವ ಮುಸ್ಲಿಂ ಹೆಸರನ್ನು ಹೊಂದಿರುವ ಮುಸ್ಲಿಂ ನಾಮದಾರಿಗಳು.ಅದೇ ಕಾರಣಕ್ಕಾಗಿ ಅದೇ ದಿನ ರಾತ್ರಿ ಅಮಾಯಕ ಬಷೀರ್ ಮೇಲೆ ನಾಲ್ವರು ಹಿಂದೂ ಮಂತಾಂದರು ಅತ್ಯಂತ ಕ್ರೋರವಾಗಿ ಹಲ್ಲೆ ನಡೆಸುತ್ತಾರೆ.ಅಲ್ಲೆಗೊಳಗಾದ ಬಷೀರ್ ರಕ್ತದ ಮುಡುವಿನಲ್ಲಿ ಬಿದ್ದು ಹೊದ್ದಾಡುತಿದ್ದ ಸಮಯದಲ್ಲಿ ರೋಹಿತ್ ಹಾಗೂ ಶೇಖರ್ ಎಂಬ ಹಿಂದೂ ಯುವಕರು ಬಷೀರ್ ನನ್ನ ಸಮೀಪದ ಆಸ್ಪತ್ರೆಗೆ ಸೇರಿಸುತ್ತಾರೆ. ದೀಪಕ್ ರಾವ್ ತನ್ನ ಜೀವನಕ್ಕಾಗಿ ಮಜೀದ್ ಎಂಬ ಮುಸ್ಲಿಂ…
UN NETWORKS ಉಳ್ಳಾಲ: ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಕೊಟ್ಟಾರಚೌಕಿಯಲ್ಲಿ ಆಕಾಶಭವನನಿವಾಸಿ ಬಶೀರ್ ಹತ್ಯೆ ನಡೆಸಿದ ಹಂತಕರು ಕೃತ್ಯ ಬಳಿಕ ಎಸೆದ ಮೊಬೈಲ್ ಮತ್ತು ಮಾರಕಾಸ್ತ್ರಗಳನ್ನು ನೇತ್ರಾವತಿ ಸೇತುವೆಯಿಂದ ನದಿಗೆ ಎಸೆದಿದ್ದು, ಈ ಕುರಿತ ಮಹಜರು ಎಸಿಪಿ ವೆಲಂಟೈನ್ ನೇತೃತ್ವದ ಪೊಲೀಸರ ತಂಡದಿಂದ ಬುಧವಾರ ನಡೆಯಿತು. ಸಂದೇಶ್, ಧನುಷ್, ಸೃಜಿತ್ ಮತ್ತು ಕಿಶನ್ ಎಂಬವರನ್ನು ಪ್ರಕರಣ ಸಂಬಂಧ ಬಂಧಿಸಲಾಗಿತ್ತು. ನಾಲ್ವರು ಬಶೀರ್ ಅವರನ್ನು ಕೊಟ್ಟಾರಚೌಕಿ ಬಳಿ, ಫಾಸ್ಟ್ ಫುಡ್ ಅಂಗಡಿ ಮುಚ್ಚಿ ಮನೆಗೆ ಹಿಂತಿರುಗುವ ಸಂದರ್ಭ ತಡೆದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕಡಿದು ಕೊಲೆಗೆ ಯತ್ನಿಸಿದ್ದರು. ನಾಲ್ಕು ದಿನಗಳ ಬಳಿಕ ಎ.ಜೆ. ಆಸ್ಪತ್ರೆಯಲ್ಲಿ ಬಶೀರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಹತ್ಯೆಗೆ ಉಪಯೋಗಿಸಿದ ಮಾರಕಾಸ್ತ್ರ, ಮೊಬೈಲುಗಳನ್ನು ನಾಲ್ವರು ಆರೋಪಿಗಳು ನೇತ್ರಾವತಿ ಸೇತುವೆಯಿಂದ ನದಿಗೆ ಎಸೆದು ಕೇರಳದ ಮಂಜೇಶ್ವರ ಕಡೆಗೆ ಪರಾರಿಯಾಗಿದ್ದರು. ಬಂಧಿತರ ವಿಚಾರಣೆ ಕೈಗೊಂಡಾಗ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ತಣ್ಣೀರುಬಾವಿ ಮುಳುಗುತಜ್ಞರನ್ನು ಉಪಯೋಗಿಸಿಕೊಂಡು ಮಾರಕಾಸ್ತ್ರ ಮತ್ತು ಮೊಬೈಲಿಗೆ ಎಸಿಪಿ ನೇತೃತ್ವದ ಪೊಲೀಸರ…
UN NETWORKS ಬಂಟ್ವಾಳ : ಎಸ್.ಕೆ.ಎಸ್.ಎಸ್.ಎಫ್ ಕ್ಯಾಂಪಸ್ ವಿಂಗ್ ಕೇಂದ್ರ ಸಮಿತಿ ವತಿಯಿಂದ ಜನವರಿ 11 ರಿಂದ 19 ರ ವರೆಗೆ ನಡೆಯಲಿರುವ ಕ್ಯಾಂಪಸ್ ಯಾತ್ರೆಯ ಭಾಗವಾಗಿ ಸಮಸ್ತ ಕೇರಳ ಜಂಇಯತುಲ್ ಉಲಮಾದ ಅಧ್ಯಕ್ಷರಾದ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ಪತಾಕೆಯನ್ನು ಕ್ಯಾಂಪಸ್ ವಿಂಗ್ ಪದಾಧಿಕಾರಿಗಳಿಗೆ ನೀಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕ್ಯಾಂಪಸ್ ವಿಂಗ್ ಕೇಂದ್ರ ಸಮಿತಿಯ ಕೊ-ಆರ್ಡಿನೇಟರ್ ಶಬಿನ್ ಮುಹಮ್ಮದ್, ಅಧ್ಯಕ್ಷ ಇಸ್ಹಾಕ್ ತ್ರಿಶ್ಶುರ್, ಉಪಾಧ್ಯಕ್ಷ ಬದ್ರುದ್ದೀನ್ ಕುಕ್ಕಾಜೆ, ದ.ಕ ಜಿಲ್ಲಾ ಕನ್ವಿನರ್ ಜೌಹರ್ ಕುಕ್ಕಾಜೆ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಇಂದಿರಾ ಕ್ಯಾಂಟೀನ್ ತೆರೆದರೆ ತಮ್ಮ ವ್ಯಾಪಾರಕ್ಕೆ ತೊಂದರೆಯಾಗಬಹುದು ಎಂದು ಆತಂಕಿಸಿ ಕೆಲವು ಹೋಟೆಲ್ನವರು ಬೇರೆಯವರನ್ನು ಛೂ ಬಿಟ್ಟು ವಿರೋಧ ವ್ಯಕ್ತಪಡಿಸುತ್ತಿದ್ದು, ಉಳ್ಳಾಲದಲ್ಲಿ ಗುರುತಿಸಲಾಗಿರುವ ಖಾಲಿ ಜಾಗದಲ್ಲಿರುವ ಕೊರಗಜ್ಜನ ಕಟ್ಟೆಯನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಉಳ್ಳಾಲದಲ್ಲೂ ಖಾಲಿ ಜಾಗ ಗುರುತಿಸಲಾಗಿದೆ. ಅಲ್ಲಿರುವ ಕೊರಗಜ್ಜನ ಕಲ್ಲನ್ನು ಯಾವ ಕಾರಣಕ್ಕೂ ತೆಗೆಯುವುದಿಲ್ಲ. ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಾರದೆ ಸೂಕ್ತ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು ಎಂದರು.ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ಗೆ ಜಾಗ ಗುರುತಿಸಲಾಗಿದೆ. ಬೆಂಗಳೂರು ಮಾದರಿಯಲ್ಲೇ ಕ್ಯಾಂಟೀನ್ ನಿರ್ಮಾಣವಾಗುತ್ತಿವೆ. ಇಂದಿರಾ ಕ್ಯಾಂಟೀನ್ ತೆರೆದರೆ ತಮ್ಮ ವ್ಯಾಪಾರಕ್ಕೆ ತೊಂದರೆಯಾಗಬಹುದು ಎಂದು ಆತಂಕಿಸಿ ಕೆಲವು ಹೋಟೆಲ್ನವರು ಬೇರೆಯವರನ್ನು ಛೂ ಬಿಟ್ಟು ವಿರೋಧ ಮಾಡಿಸುತ್ತಿದ್ದಾರೆ. ಉಳ್ಳಾಲದಲ್ಲೂ ಖಾಲಿ ಜಾಗ ಗುರುತಿಸಲಾಗಿದೆ. ಅಲ್ಲಿರುವ ಕೊರಗಜ್ಜನ ಕಲ್ಲನ್ನು ಯಾವ ಕಾರಣಕ್ಕೂ ತೆಗೆಯುವುದಿಲ್ಲ. ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ…
UN NETWORKS ಮಂಗಳೂರು: ಮನಪಾ ಸದಸ್ಯ ತಿಲಕ್ ರಾಜ್ ಕೃಷ್ಣಾ ಪುರ ಮೇಲೆ ಶಾಸಕ ಬಿ ಎ ಮೊಯ್ದೀನ್ ಬಾವಾನ ಕುಮ್ಮಕ್ಕಿನಿಂದ ರಾಜ್ಯ ಮಾಜಿ ಮುಖ್ಯಮಂತ್ರಿ ಜೆ ಡಿ ಎಸ್ ನಾಯಕ ಕುಮಾರ ಸ್ವಾಮಿ ಮಾಡಿದ ಆಧಾರರಹಿತ ಗುರು ತರ ಅರೋಪದ ಹಿನ್ನೆಲೆ ಕೃಷ್ಣಾ ಪುರದಲ್ಲಿ ನಾಗರಿಕರು ಬೃಹತ್ ಪ್ರತಿಭಟನೆ ನಡೆಸಿ ತಿಲಕ್ ರಾಜ್ ರವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆ ಯಲ್ಲಿ ಗ್ರಾಮದ ಹಿರಿಯರಾದ ಅಜೀಜ್ ಪ್ಯಾನ್ಸಿ, ಪಿ, ಟಿ, ರೈ ಯಾನೆ ಮಂಜುಕಾವ, ಶರೀಫ್ ಎಂ ಎಸ್, ಲೋಕೇಶ್ ಬೊಳ್ಳಾಜೆ, ಪ್ರಶಾಂತ್ ಮೂಡಾಯಿಕೊಡಿ, ನ್ಯಾಯವಾದಿ ಸದಾಶಿವ ಐತಾಳ್, ಸುಂದರ ಶೆಟ್ಟಿ, ಮಹಾಬಲ ಶೆಟ್ಟಿ, ಯಶ್ ಪಾಲ್ ಸಾಲ್ಯಾನ್, ಶಶಿಕಲಾ ಶೆಟ್ಟಿ, ಸದಾನಂದ ಸನಿಲ್ ಮುಂತಾದವರು ಉಪಸ್ಥಿತರಿದ್ದರು.
UN NETWORKS ಮಂಗಳೂರು : ಕಾಟಿಪಳ್ಳದ ದೀಪಕ್ ರಾವ್ ಕೊಲೆ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಈಗ ದೊಡ್ಡ ವಿವಾದವಾಗಿ ಬೆಳೆದಿದೆ. ಮೈಸೂರಲ್ಲಿ ಸೋಮವಾರ ಬೆಳಗ್ಗೆ ಮಾತನಾಡಿದ ಕುಮಾರಸ್ವಾಮಿ, ದೀಪಕ್ ಕೊಲೆ ಕೇಸಲ್ಲಿ ಬಿಜೆಪಿ ಕಾರ್ಪೊರೇಟರ್ ಒಬ್ಬರ ಕೈವಾಡವಿದೆ ಎಂದು ಹೇಳಿದ್ದು ವರದಿಯಾಗಿತ್ತು. ಬಳಿಕ ಈ ಬಗ್ಗೆ ಕುಮಾರಸ್ವಾಮಿ ಯೂಟರ್ನ್ ಹೊಡೆದು ತನಗೆ ಬಂದಿರುವ ಮಾಹಿತಿ ತಪ್ಪಿರಬಹುದು ಎಂದು ಹೇಳಿದ್ದಾರೆ ಎಂದು ಸುದ್ದಿಯಾಯಿತು. ಕುಮಾರಸ್ವಾಮಿ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಕೊಲೆ ಪ್ರಕರಣದ ಕುರಿತು ದಾಖಲೆಗಳಿದ್ದರೆ ಕುಮಾರಸ್ವಾಮಿ ನೀಡಿ ಸಹಕರಿಸಿ ಎಂದು ಹೇಳಿದರು. ಮಂಗಳೂರಲ್ಲಿ ಮಾತನಾಡಿದ ಬಿಜೆಪಿ ಮುಖಂಡರು ಕುಮಾರಸ್ವಾಮಿ ಹಾಗು ಶಾಸಕ ಮೊಯ್ದಿನ್ ಬಾವಾ ಅವರನ್ನೇ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು. ಜೊತೆಗೆ ಜೆಡಿಎಸ್ ನಲ್ಲಿರುವ ಮೊಯ್ದಿನ್ ಬಾವಾ ಅವರ ಸೋದರ ಬಿ ಎಂ ಫಾರೂಕ್ ಅವರ ಕುಮ್ಮಕ್ಕಿನಿಂದ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಹೇಳಿದ್ದಿಷ್ಟು…
UN NETWORKS ಉಳ್ಳಾಲ: ಮಸೀದಿ ಹಾಗೂ ಅಂಗಡಿಗಳಿಗೆ ಹಾನಿಗೈದು ಗಲಭೆಗೆ ಸಂಚು ರೂಪಿಸಿದ ಇಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ಘಟನೆ ಖಂಡಿಸಿ ಹಾಗೂ ಕೃತ್ಯಕ್ಕೆ ಬೆಂಬಲ ನಿಂತವರ ತನಿಖೆ ನಡೆಸಿ ಅವರನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನಾಟೆಕಲ್ ವರ್ತಕರ ಸಂಘ ಅಂಗಡಿ ಮುಂಗಟ್ಟುಗಳನ್ನು ಬಂದ್ ನಡೆಸಿ ಪ್ರತಿಭಟನೆಯನ್ನು ಸೋಮವಾರ ನಡೆಸಿದರು. ಸುಳ್ಯದ ಏನಕಲ್ನ ಯತಿರಾಜ್ (23) ಮತ್ತು ಬೀದಿಗುಡ್ಡೆಯ ನಿತಿನ್ (25) ಬಂಧಿತರು. ಇಬ್ಬರು ತಡರಾತ್ರಿ ಬೈಕಿನಲ್ಲಿ ಬಂದು ನಾಟೆಕಲ್ ಜಂಕ್ಷನ್ನಿನಲ್ಲಿರುವ ಅಬ್ದುಲ್ ರಝಾಕ್ ಎಂಬವರ ಬೇಕರಿ ಅಂಗಡಿಗೆ ಸೇರಿದ 2 ಫ್ರಿಡ್ಜ್ ನ ಗಾಜುಗಳನ್ನು ಪುಡಿಗೈದು, ಹಂಝ ನೌಷನ್ ಎಂಬವರಿಗೆ ಸೇರಿದ ಬೀಫ್ ಸ್ಟಾಲ್ನ ಕಲ್ಲುಗಳನ್ನು ಧ್ವಂಸಗೊಳಿಸಿ, ಇಬ್ರಾಹಿಂ ಎಂಬವರಿಗೆ ಸೇರಿದ ನಾಟೆಕಲ್ ಬೇಕರಿ ಅಂಗಡಿಯ ಸಿಸಿ ಕ್ಯಾಮರಾವನ್ನು ಹುಡಿಗೈದು, ಸೆಲೂನ್ ಅಲ್ಲೇ ಸ್ವಲ್ಪ ದೂರದಲ್ಲಿರುವ ರಕ್ಷೀದಿ ಮಸೀದಿಯ ಎರಡು ಟ್ಯೂಬ್ ಲೈಟ್ ಮತ್ತು ಸಿಎಫ್ಎಲ್ ಬಲ್ಬ್ ಗಳನ್ನು ಪುಡಿಗೈದಿದ್ದಾರೆ. ಘಟನೆ ನಡೆದು ಕೊಣಾಜೆ ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ದುಷ್ಕರ್ಮಿಗಳಿಬ್ಬರು…
UN NETWORKS ಉಳ್ಳಾಲ: ಬೆಂಗಳೂರು, ಧಾರವಾಡ ಬಳಿಕ ಮೂರನೆ ಜಿಲ್ಲೆಯಾಗಿ ದ.ಕ.ದಲ್ಲಿ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರವು ನಿರ್ಮಾಣವಾಗುತ್ತಿದ್ದು, ಮುಂದಿನ 18 ತಿಂಗಳಲ್ಲಿ ಈ ಕೇಂದ್ರ ಕಾರ್ಯಾಚರಿಸಲಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದ್ದಾರೆ. ಪಜೀರು ಗ್ರಾಮದ ಕೆಐಎಡಿಬಿ ಕಂಬ್ಳಪದವು ಬಳಿಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಚಾಲನಾ ತರಬೇತಿ ಕೇಂದ್ರ, ಬಂಟ್ವಾಳದಲ್ಲಿ ಆರ್ಟಿಒ ಕಚೇರಿ ಸೇರಿದಂತೆ ಸಾರಿಗೆ ಇಲಾಖೆಯು ದ.ಕ. ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳಿಗಾಗಿ ಒಟ್ಟು 44 ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಅದರಲ್ಲಿ ರೂ.15 ಕೋಟಿ ಯನ್ನು ಕಂಬ್ಲಪದವು ಚಾಲನಾ ತರಬೇತಿ ಕೇಂದ್ರಕ್ಕೆ ವ್ಯಯಿಸಲಾಗುತ್ತಿದೆ. ಜೀವಕ್ಕೆ ಬೆಲೆ ಕೊಡದೆ ಅನೇಕ ಅವಘಢಗಳು ಸಂಭವಿಸುತ್ತಿರುವ ಕಾಲಘಟ್ಟವನ್ನು ಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಸಾರಿಗೆ ಇಲಾಖೆ ರಸ್ತೆ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಹೆಚ್ಚಿನ ಕ್ರಮಕೈಗೊಳ್ಳುತ್ತಿದೆ. ಸರಕಾರದ ವತಿಯಿಂದ ಮಹಿಳೆಯರಿಗೆ ಘನ ವಾಹನಗಳ ತರಬೇತಿಯನ್ನು ಕೊಡಿಸಿ,…

