Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು:ಶಿಕ್ಷಣದ ಜತೆಗೆ ಸಾಮಾಜಿಕ ಸಹಕಾರ, ಮಾನವೀಯತೆಯ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಕುತ್ತಾರಪದವಿನ ಮುನ್ನೂರು ಯುವಕ ಮಂಡಲ ಇದರ 48 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳಲ್ಲಿ ಸಾಮಾಜಿಕ ಮೌಲ್ಯಗಳು ಬೆಳೆದಾಗ, ಸಮಾಜಕ್ಕೆ ಪೂರಕವಾಗಿ ಬೆಳೆಯಲು ಸಾಧ್ಯ. ಇದರಿಂದ ಹೆತ್ತವರ ಆಸ್ತಿ ಸಂಪತ್ತಾಗುತ್ತಾರೆ. ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಕಾರ್ಯ ಮಹತ್ತರವಾದದ್ದು, ಈ ನಿಟ್ಟಿನಲ್ಲಿ ಸೇವೆ ಕಾರ್ಯಗಳನ್ನು ನಡೆಸುತ್ತಿರುವ ಯುವಕ ಮಂಡಲದ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಗಣಪತಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಹಾಗೂ ಸಾಹಿತಿ ಚಂದ್ರಕಲಾ ನಂದಾವರ ಮಾತನಾಡಿ ಯುವಕರಿಗೆ ಸಂವಿಧಾನದ ಸಾಮಾನ್ಯ ವಿಚಾರದ ಅರಿವಿಲ್ಲ, ಅದಕ್ಕಾಗಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಸ್ಕಾಲರ್ ಶಿಪ್ ಗಾಗಿ ಶಾಲೆಗೆ ಓಡಿ ಬರುವ ಹೆತ್ತವರು,…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಸಮುದ್ರಕ್ಕೆ ಸ್ನಾನಕ್ಕಿಳಿದ ವ್ಯಕ್ತಿಯೋವ೯ರು ಸಮುದ್ರಪಾಲಾದ ಘಟನೆ ಉಳ್ಳಾಲ ಸಮೀಪದ ಮುಕ್ಕಚ್ಚೇರಿ ಸೀಗ್ರೌಂಡ್ ಎಂಬಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.   ಮಾಸ್ತಿಕಟ್ಟೆ ನಿವಾಸಿ ಹನೀಫ್ ಮಾಸ್ತಿಕಟ್ಟೆ(೩೫) ಸಮುದ್ರಪಾಲಾದವರು. ಬಿಸಿಲಿನಿಂದಾಗಿ ಮೈಯಲ್ಲಿ ಹುಣ್ಣಾಗಿತ್ತು ಎಂದು ಉಪ್ಪು ನೀರಿನ ಸ್ನಾನಕ್ಕೆಂದು ಬೆಳಿಗ್ಗೆ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಸಮುದ್ರದ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿ ಸಮುದ್ರಪಾಲಾಗಿದ್ದಾರೆ. ಸ್ಥಳೀಯರು ಶೋಧ ಕಾಯ೯ ಮಂದುವರಿಸಿದ್ದಾರೆ. ವಿವಾಹಿತರಾಗಿದ್ದ ಹನೀಫ್ ಅವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಸಮುದ್ರದಲ್ಲಿ ಶೋಧ ಕಾಯ೯ ನಡೆಯುತ್ತಿದೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆ ಅಯೋಜಿಸಿರುವ ” ಭೀತಿ ರಾಜಕೀಯದ ವಿರುದ್ದ ಐಕ್ಯಗೊಳ್ಳೋಣ” ಎಂಬ ರಾಷ್ಟೀಯ ಅಭಿಯಾನದ ಅಂಗವಾಗಿ ಎಪ್ರಿಲ್ 24 ರಂದು 3:30 ಕ್ಕೆ ಉಳ್ಳಾಲದ ಹಝ್ರತ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಹಾಗೂ ರ್ಯಾಲಿ ನಡೆಯಲಿದೆ. ಈ ಸಾರ್ವಜನಿಕ ಸಮಾವೇಶವನ್ನು ಎಸ್ ಡಿ ಪಿ ಐ ರಾಷ್ಟೀಯಾಧ್ಯಕ್ಷ ಎ. ಸಯೀದ್ ಉದ್ಘಾಟಿಸಲಿದ್ದಾರೆ. ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ರಾಷ್ಡೀಯ ಪ್ರ.ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ರಾಜ್ಯ ಪ್ರ.ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ರಾಜ್ಯ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಅಲ್ಪೋನ್ಸ್ ಫ್ರಾಂಕೋ, ಆಕ್ರಮ್ ಹಸನ್, ಮಂಗಳೂರು ವಿಧಾನಸಭಾಧ್ಯಕ್ಷ ಅಬ್ಬಾಸ್ ಕಿನ್ಯ, ರಿಯಾಝ್ ಪರಂಗಿಪೇಟೆ, ಅತಾವುಲ್ಲ ಜೋಕಟ್ಟೆ, ಕೂಸಪ್ಪ ಮುತಾಂದವರು ಭಾಗವಹಿಸಲಿದ್ದಾರೆ. ಸಮಾವೇಶದ ಮೊದಲು…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಹೊಟೇಲ್ ಕಾರ್ಮಿಕನೋರ್ವ ಸಹುದ್ಯೋಗಿ ಇಬ್ಬರು ಕಾರ್ಮಿಕರಿಗೆ ಚೂರಿಯಿಂದ ಇರಿದಿರುವ ಘಟನೆ ದೇರಳಕಟ್ಟೆ ಸಮೀಪದ ಶಾಂತಿಭಾಗ್‍ನ ಖಾಸಗಿ ಲಾಡ್ಜಿನಲ್ಲಿ ಸಂಭವಿಸಿದ್ದು, ಈ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಿಹಾರ ಮೂಲದ ನಿತೇಶ್ (25) ಸ್ಥಿತಿ ಚಿಂತಾಜನಕವಾಗಿದ್ದು, ಇನ್ನೋರ್ವ ನೇಪಾಳ ಮೂಲದ ಪ್ರದೀಪ್ (25) ಗಾಯಗೊಂಡಿದ್ದಾನೆ. ಇಬ್ಬರಿಗೆ ಒರಿಸ್ಸಾ ಮೂಲದ ತಾಹಿರ್ ಎಂಬಾತ ಚೂರಿಯಿಂದ ಶನಿವಾರ ಬೆಳಿಗ್ಗೆ ಇರಿದು ಪರಾರಿಯಾಗಿದ್ದಾನೆ. ಘಟನೆ ವಿವರ: ಶಾಂತಿಬಾಗ್ ನಲ್ಲಿರುವ ನ್ಯೂ ತಾಜ್ ಹೊಟೇಲಿನಲ್ಲಿ ಕಾರ್ಮಿಕರಾಗಿದ್ದ ಎಲ್ಲರೂ ಅಲ್ಲೇ ಸಮೀಪದ ಖಾಸಗಿ ಲಾಡ್ಜಿನಲ್ಲಿ ಉಳಿದುಕೊಂಡಿದ್ದರು. ಶನಿವಾರ ನಸುಕಿನ ಜಾವ ತಾಹಿರ್ ಬೇಗನೇ ಎದ್ದು ಹೊಟೇಲಿಗೆ ಕೆಲಸಕ್ಕೆಂದು ತೆರಳಿದ್ದ. ಅಲ್ಲಿಂದ ವಾಪಸ್ಸಾಗಿದ್ದ ಈತ ರೂಮಿನಲ್ಲಿ ಮಲಗಿದ್ದ ನಿತೇಶ್ ಕುತ್ತಿಗೆಯ ಭಾಗಕ್ಕೆ ಚೂರಿಯಿಂದ ಇರಿದಿರುವುದಲ್ಲದೆ, ಸಮೀಪದಲ್ಲೇ ಮಲಗಿದ್ದ ಪ್ರದೀಪ್ ಎಂಬಾತನ ಕತ್ತಿಗೆ ಚೂರಿ ಇರಿಯಲು ಯತ್ನಿಸಿದಾಗ ತಪ್ಪಿ ಮುಖಕ್ಕೆ ಇರಿಯಲಾಗಿದೆ. ಲಾಡ್ಜಿನ ಮೇಲಿನ ಮಹಡಿಯಲ್ಲಿ ಬೆಳಗ್ಗಿನ ವೇಳೆ ಘಟನೆ ಸಂಭವಿಸಿದ್ದರಿಂದಾಗಿ ಕೃತ್ಯ ಯಾರ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಇನೋಳಿ: ವೇಗದ ತಂತ್ರಜ್ಞಾನವನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಲು ಮತ್ತು ಅಭಿವೃದ್ಧಿಪಡಿಸಲು ದೇಶದಲ್ಲಿ ಇನ್ನಷ್ಟು ಸಂಶೋಧನಾ ಚಟುವಟಿಕೆಗಳು ನಡೆಯಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಭೈರಪ್ಪ ತಿಳಿಸಿದ್ದಾರೆ. ಬ್ಯಾರೀಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ನೇತೃತ್ವದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ (`ಹೈ ಸ್ಪೀಡ್   ಪ್ಲೋವ್ಸ್ ಆ?ಯಂಡ್ ಡಾಕ್ ಎಚ್.ಎಸ್. ಡಾಕ್’) ಯಾಂತ್ರಿಕತೆಯಲ್ಲಿ ವೇಗದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಇಂಜಿನಿಯರ್‍ಗಳ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರಸ್ತುತ ವೇಗದ ತಂತ್ರಜ್ಞಾನವನ್ನು ಬಳಸುವ ಬಾಹ್ಯಕಾಶ, ವೈಮಾನಿಕ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಎದುರಿಸಬೇಕಾಗಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡು ಕೊಳ್ಳುವ ದೃಷ್ಟಿಯಿಂದ ಈ ಕ್ಷೇತ್ರದ ಬಗ್ಗೆ ಇನ್ನಷ್ಟು ಗಮನಹರಿಸಬೇಕಾದ ಅಗತ್ಯ ಕಂಡು ಬರುತ್ತಿದೆ. ಈ ದೃಷ್ಟಿಯಿಂದ ವೇಗದ ತಂತ್ರಜ್ಞಾನದ ಬಗ್ಗೆ ಹಮ್ಮಿಕೊಳ್ಳಲಾಗುವ ಇಂತಹ ಕಾರ್ಯಾಗಾರಗಳು ಮಹತ್ವದ್ದಾಗಿವೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಇಸ್ರೋದ ಎರೋಡೈನಾಮಿಕ್ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ.ಆರ್.ಸಿ.ಮೆಹ್ತಾ ಮಾತನಾಡಿ,…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಇನೋಳಿ.ಎಸ್ಕೆಎಸ್ಸೆಸ್ಸೆಫ್ ಇನೋಳಿ ಶಾಖೆ ವತಿಯಿಂದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಮಜ್ಲಿಸುನ್ನೂರು ಕಾರ್ಯಕ್ರಮ ಎ,29ರಂದು ಮರ್ಹೂ ಯು.ಎಚ್ ಉಮರಬ್ಬ ವೇದಿಕೆ ಇನ್ನೋಳಿ ಜುಮಾ ಮಸೀದಿ ಬಳಿ ನಡೆಯಲಿದೆ. ಎಸ್ಕೆಎಸ್ಸೆಸ್ಸೆಫ್ ಇನೋಳಿ ಶಾಖಾ ಉಸ್ತುವಾರಿ ಹಾಜಿ ಮುಹಮ್ಮದ್ ಇನೋಳಿ ಗಂಡಿ ಧ್ವಜಾರೋಹಣ ಗೈಯಲ್ಲಿದ್ದು ಅಸ್ಸಯ್ಯಿದ್ ಅಮೀರ್ ತಂಙಳ್ ಅಲ್-ಬುಖಾರಿ ಕಿನ್ಯಾ ನೇತೃತ್ವವಹಿಸಲಿದ್ದು ಪಾಣಕ್ಕಾಡ್ ಅಸ್ಸಯ್ಯದ್ ಶಫೀಕ್ ಅಲೀ ಶಿಹಾಬ್ ತಂಙಳ್ ದುಅ ಮಾಡಲಿದ್ದಾರೆ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲ್ಲಿದ್ದು ಕೆ.ಪಿ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಲ್ಲಿದ್ದಾರೆ. ವಾಗ್ಮಿ ಸಲೀಂ ವಾಫಿ ಅಂಬಲಕ್ಕಂಡಿ ಭಾಗವಹಿಸಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ನರಿಂಗಾನ: ನರಿಂಗಾನ ಗ್ರಾಮದ ನೆತ್ತಿಲಪದವು ಕೆದಂಬಾಡಿ ಎಂಬಲ್ಲಿ 15 ಹರೆಯದ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ. ಆತ್ಮಹತ್ಯೆಗೈದ ಬಾಲಕಿಯನ್ನು ನೆತ್ತಿಲ ಪದವಿನ ಯೂಸೂಫ್ ಎಂಬವರ ಪುತ್ರಿ ಶೈನಾ(15) ಎಂದು ಗುರುತಿಸಲಾಗಿದೆ. ಈಕೆ ಮನೆಯ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಈಕೆಯ ತಂದೆ ಯೂಸುಫ್‍ಗೆ ಎರಡು ಮದುವೆಯಾಗಿದ್ದು, ಆತ್ಮಹತ್ಯೆಗೈದವಳು ಎರಡನೇ ಪತ್ನಿಯ ಮಗಳಾಗಿದ್ದಾಳೆ. ಯೂಸುಫ್‍ನ ಎರಡನೇ ಪತ್ನಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: 2016-17ನೇ ಸಾಲಿನ ಸಿ.ವಿ.ರಾಮನ್ ಜನ್ಮ ಶತಮಾನೋತ್ಸವ ಪ್ರಶಸ್ತಿ ಪುರಸ್ಕತರಾದಂತಹ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮವು ಶುಕ್ರವಾರ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಪ್ರೊ.ಶಾಂತರಾಮ್ ಶೆಟ್ಟಿ ಅವರು, ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ಬಹಳ ಆಳವಾಗಿ ತೊಡಗಿಸಿಕೊಂಡು ಅಪಾರ ಸಾಧನೆ ಮಾಡುತ್ತಿರುವ ಪ್ರೊ.ಕೆ.ಭೈರಪ್ಪ ಅವರಿಗೆ ಅರ್ಹವಾಗಿಯೇ ಸಿ.ವಿ.ರಾಮನ್ ಜನ್ಮಶತಮಾನೋತ್ಸವ ಪ್ರಶಸ್ತಿಯು ಲಭಿಸಿದ್ದು ಇದು ಮಂಗಳೂರು ವಿವಿಗೂ ದೊರೆತ ಗೌರವಾಗಿದೆ ಎಂದರು. ವಿಶ್ವವಿದ್ಯಾಲಯದ ಕುಲಪತಿಯಾಗಿ, ಉತ್ತಮ ಸಂಶೋಧಕರಾಗಿ, ಉತ್ತಮ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ.ಕೆ.ಭೈರಪ್ಪ ಅವರು ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಒತ್ತು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಅವರು ಮಾದರಿಯಾಗಿದ್ದಾರೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಮಾತನಾಡಿ, ಸಮಾಜಸೇವೆಯೊಂದಿಗೆ ಜ್ಞಾನವನ್ನು ವಿಸ್ತರಿಸಿಕೊಂಡು ಬದ್ದತೆಯಲ್ಲಿ ಕೆಲಸ ಮಾಡಿದರೆ ಗೌರವ ತನ್ನಿಂದ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಪಜೀರು: ಪಜೀರು ತಂಜರೆಯ ಗುಳಿಗ ಬನದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುಳಿಗ ದೈವದ ಪ್ರತಿಷ್ಠಾ ಕಲಶೋತ್ಸವವು ನಡಿಬೈಲು ಶ್ರೀ ಶಂಕರನಾರಾಯಣ ಭಟ್ಟರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.

Read More

ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಉಳ್ಳಾಲದ ಶೈಕ್ಷಣಿಕ ರಂಗದ ಬೆಳವಣಿಗೆಗೆ ಪೂರಕವಾದ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‍ನ ಅಧೀನದಲ್ಲಿ ಬನಾತ್ ಕಾಲೇಜು ಕಟ್ಟಡ ಸ್ಥಾಪನೆ, `ಹಝ್ರತ್ ಮದನಿ ಇಲ್ಮ್’ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಮದನಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಎ.22ರಂದು ಸಂಜೆ 4:30ಕ್ಕೆ ಹಝ್ರತ್ ಶಾಲಾ ವಠಾರ ಮದನಿ ಗ್ರೌಂಡ್‍ನಲ್ಲಿ ನಡೆಯಲಿದೆ ಎಂದು ಉಳ್ಳಾಲ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ತಿಳಿಸಿದ್ದಾರೆ. ನಗರದ ಪ್ರೆಸ್‍ಕ್ಲಬ್‍ನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಝ್ರತ್ ಸೈಯದ್ ಬನಾತ್ ಕಾಲೇಜು ಕಟ್ಟಡಕ್ಕೆ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ಆಶೀರ್ವಚನ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಸಮಾರಂಭಕ್ಕೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಆಹಾರ ಮತ್ತು ನಾಗರಿಕ ಪೂರೈಕೆ…

Read More