Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಂಗಳೂರು : ಮೂರರ ಹರೆಯದ ಬಾಲಕಿ ಕಾರಿನ ಒಳಗಡೆಯೇ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಪುತ್ತೂರಿನ ಹಾರಾಡಿ ಶಾಲೆ ಸಮೀಪ ನಡೆದಿದೆ. ಉಳ್ಳಾಲದ ಇಮ್ರಾನ್ ಮತ್ತು ಸಂಶೀರಾ ದಂಪತಿ ಪುತ್ರಿ ರೆಹಮತ್ (3) ಸಾವನ್ನಪ್ಪಿದ ಬಾಲಕಿ. ಅಜ್ಜಿ ಮನೆಗೆಂದು ತಾಯಿ ಜತೆಗೆ ಬಂದಿದ್ದ ಬಾಲಕಿ ಹಾಗೂ ಮನೆಯಲ್ಲಿದ್ದ ಇತರೆ ಮಕ್ಕಳನ್ನು ಸಂಶೀರಾ ಅವರ ಸಹೋದರ ಕಾರಿನಲ್ಲಿ ಸಂಬಂಧಿಕರ ಮನೆಗೆಂದು ಕರೆದೊಯ್ದಿದ್ದರು. ಅಲ್ಲಿಂದ ವಾಪಸ್ಸಾದ ಬಳಿಕ ಹಾರಾಡಿಯಲ್ಲಿ ಎಲ್ಲ ಮಕ್ಕಳು ಮನಗೆ ತಲುಪಿದ್ದರೆ ಬಾಲಕಿ ಮಾತ್ರ ಬಂದಿರಲಿಲ್ಲ. ಕೂಡಲೇ ಕಾರಿನತ್ತ ಧಾವಿಸಿದ ಮನೆಮಂದಿ ಕಾರೊಳಗಡೆ ಬಾಲಕಿ ಮೃತಪಟ್ಟಿರುವುದು ಗೋಚರಿಸಿದೆ. ಅಸೌಖ್ಯದಿಂದ ಬಾಲಕಿ ಸಾವನ್ನಪ್ಪಿರುವುದಾಗಿ ಮನೆಮಂದಿ ತಿಳಿಸಿದ್ದಾರೆ. ಬಾಲಕಿ ತಂದೆ ವಿದೇಶದಲ್ಲಿದ್ದು, ಅವರು ಊರಿಗೆ ಮರಳಿದ ನಂತರ ಉಳ್ಳಾಲದಲ್ಲಿ ಬಾಲಕಿಯ ಅಂತಿಮ ಸಂಸ್ಕಾರ ನಡೆಯಲಿದೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಂಗಳೂರು: ಕುಡ್ಲ ಎಕ್ಸ್ ಪ್ರೆಸ್ ಗೆ ಗೊಮ್ಮಟೇಶ್ವರ ಎಕ್ಸ್ ಪ್ರೆಸ್  ಎಂದು ಮರುನಾಮಕರಣ ಮಾಡಿರುವುದು ತುಳುನಾಡಿಗೆ ಮಾಡಿದ ಮಲತಾಯಿ ಧೋರಣೆ ಕೂಡಲೇ ಕುಡ್ಲ ಎಕ್ಸ್ ಪ್ರೆಸ್ ಎಂದು ಪುನರ್ ನಾಮಕರಣ ಮಾಡದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ  ಯೋಗೀಶ್ ಶೆಟ್ಟಿ ಜಪ್ಪು ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ ಬೆಂಗಳೂರು-ಮಂಗಳೂರು ರೈಲಿನ ಹೆಸರು ಈ ಹಿಂದೆ ಉದ್ಘಾಟನೆ ಆಗುವ ಸಂದರ್ಭದಲ್ಲಿ ಕುಡ್ಲಎಕ್ಸ್ ಪ್ರೆಸ್  ಎಂದು ನಾಮಕರಣ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತುಳುನಾಡಿಗೆ ಸಣ್ಣ ಮಟ್ಟಿನಲ್ಲಾದರೂ ಮಾನ್ಯತೆ ಸಿಕ್ಕಿತು ಎಂಬ ಅಭಿಮಾನ ನಮ್ಮಲ್ಲಿತ್ತು. ಕೇಂದ್ರ ಸರ್ಕಾರ ತನ್ನ 2014ರ ಭಜೆಟ್‍ನಲ್ಲಿ ಯಶವಂತಪುರ-ಮಂಗಳೂರು ನಡುವೆ ಹೊಸದಾಗಿ ಈ ರೈಲನ್ನು ಘೋಷಿಸಲಾಗಿತ್ತು. ಈ ರೈಲನ್ನು ತುಳುನಾಡಿನ ಜನರ ಒತ್ತಾಯದ ಮೇರೆಗೆ ಹೊಸ ರೈಲಿನ ಘೋಷಣೆ ಮಾಡಿ ಅದಕ್ಕೆ ಕುಡ್ಲ ಎಕ್ಸ್ ಪ್ರೆಸ್  ಎಂದು ನಾಮಕರಣ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಹಿಂದು ಧರ್ಮದ ಮೂಲ ತತ್ವಗಳನ್ನು ಅರಿತು ಸಂಘಪರಿವಾರ ಮತ್ತು ಬಿಜೆಪಿ ರಾಜಕೀಯ ಮಾಡಲಿ. ಇಲ್ಲವಾದಲ್ಲಿ ದೇಶಕ್ಕೆ ಕಂಟಕ ಎದುರಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಇಬ್ರಾಹಿಂ ಕೋಡಿಜಾಲ್ ಹೇಳಿದ್ದಾರೆ. ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕೊಲೆ, ಹಲ್ಲೆ , ಅತ್ಯಾಚಾರ, ದರೋಡೆ ಮೊದಲಾದ ಕ್ರಿಮಿನಲ್ ಪ್ರಕರಣಗಳಿಗೆ ಕೋಮು ಬಣ್ಣ ಹಚ್ಚಿ ಮುಗ್ಧ ಜನರ ಭಾವನೆಗಳನ್ನು ಕೆರಳಿಸಿ ಜಿಲ್ಲೆಯ ಸಾಮರಸ್ಯವನ್ನು ಕದಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಬಿಜೆಪಿಯ ಕುಟಿಲ ಮತ್ತು ಅಪಾಯಕಾರಿ ರಾಜಕೀಯ ನೀತಿಯ ವಿರುದ್ಧ ಕಾಂಗ್ರೆಸ್ ಪಕ್ಷದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜನ ಮತ ನೀಡಿ ಗೆಲ್ಲಿಸಿದ ಜಿಲ್ಲೆಯ ಸಂಸದರೇ ಜಿಲ್ಲೆಗೆ ಬೆಂಕಿ ಹಚ್ಚಲು ಹೊರಟು ರಾಜಕೀಯ ಲಾಭ ಮಾಡಲು ಹೊರಟಿರುವುದು ದುರದೃಷ್ಟ. ಕೊಣಾಜೆ ಕಾರ್ತಿಕ್ ರಾಜ್ ಪ್ರಕರಣ ಸಂಶಯದ ಪ್ರಕರಣವಾಗಿತ್ತು. ಇದನ್ನೇ ಲಾಭವನ್ನಾಗಿ ಬಿಜೆಪಿ ಉಪಯೋಗಿಸಿಕೊಂಡು ಜಾತಿ ಧರ್ಮದ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಕಾರ್ತಿಕ್ ರಾಜ್ ಪ್ರಕರಣದಲ್ಲಿ ಧೋರಣೆ ಅನುಸರಿಸಿ ಒಂದು ಸಮುದಾಯದ ಯುವಕರ ಮೇಲೆ ದೌರ್ಜನ್ಯ ನಡೆಸಿದ ಕೊಣಾಜೆ ಠಾಣಾಧಿಕಾರಿಯವರ ಮೇಲೆ ಕ್ರಮಕೈಗೊಳ್ಳದೇ ಇದ್ದಲ್ಲಿ, ಜಿಲ್ಲೆಯ ಮುಸ್ಲಿಮರನ್ನು ಸೇರಿಸಿಕೊಂಡು ಮತ್ತೊಮ್ಮೆ ಪೊಲೀಸ್ ಕಮೀಷನರೇಟ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಎಚ್ಚರಿಕೆ ನೀಡಿದ್ದಾರೆ. ಅವರು ನಾಗರಿಕ ಸಮಿತಿ ಕೊಣಾಜೆ ವಲಯ ಆಶ್ರಯದಲ್ಲಿ ಕಾರ್ತಿಕ್ ರಾಜ್ ಹತ್ಯೆ ಪ್ರಕರಣದಲ್ಲಿ ಸ್ವಜನ ಪಕ್ಷಪಾತ ತೋರಿದ ಕೊಣಾಜೆ ಠಾಣಾಧಿಕಾರಿ ಅಶೋಕ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕುಟುಂಬದ ರಕ್ಷಣೆ ಮಾಡಿದ ಆರೋಪ ಹಾಗೂ ರಾಜಕೀಯ ನಾಯಕರು ಮಾಹಿತಿ ನೀಡಿದರೂ ತನಿಖೆ ನಡೆಸದೆ ಧೋರಣೆ ಅನುಸರಿಸದ ಕೊಣಾಜೆ ಠಾಣಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕಿದೆ. ಠಾಣಾಧಿಕಾರಿಯಾಗಲೂ ಅನರ್ಹರಾಗಿದ್ದಾರೆ, ರಾತ್ರಿ 2 ಗಂಟೆ ವೇಳೆ ಠಾಣೆಯಿಂದ ಮನೆಗೆ ಹೊರಡುವ ಅಭ್ಯಾಸ ಬೆಳೆಸಿಕೊಂಡಿರುವ ಪೊಲೀಸರು ತಡರಾತ್ರಿಯೇ ಸಮಯ ಸಿಕ್ಕಂತೆ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ನೀರಿನ ಟ್ಯಾಂಕರ್ ವಾಹನ ಮೂರು ಬೈಕುಗಳಿಗೆ ಸರಣಿಯಾಗಿ ಅಪಘಾತ ನಡೆಸಿರುವ ಘಟನೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಬಳಿ ಬುಧವಾರ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡರೆ, ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೈಕ್ ಸವಾರ ಅನ್ಸಾರ್ ಸ್ಥಿತಿ ಚಿಂತಾಜನಕವಾಗಿದ್ದು, ಆನಂದ್ ಸ್ಥಿತಿ ಕೂಡಾ ಗಂಭೀರವಾಗಿದೆ. ಇನ್ನಿಬ್ಬರು ಹರೀಶ್ ಎಂಬವರ ಕಾಲು ಮುರಿತಕ್ಕೊಳಗಾದರೆ, ಮುಸ್ತಾಫ ಸಣ್ಣಪುಟ್ಟ ಗಾಯವಾಗಿ ಪಾರಾಗಿದ್ದಾರೆ. ಮೂರು ಬೈಕುಗಳಲ್ಲಿದ್ದ ನಾಲ್ವರು ಕೂಡಾ ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಗೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಕುತ್ತಾರಿನಿಂದ ತೊಕ್ಕೊಟ್ಟು ಕಡೆಗೆ ನೀರು ಹೇರಿಕೊಂಡು ಬರುತಿದ್ದ ಟ್ಯಾಂಕರ್ ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಲ್ಲಿದ್ದ ಮೂರು ಬೈಕುಗಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರೆಲ್ಲರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಿಕ್ಷಾ ಟೆಂಪೋ ಮೂಲಕ ತೊಕ್ಕೊಟ್ಟು ಆಸ್ಪತ್ರೆಗೆ ದಾಖಲಿಸಿ ಬಳಿಕ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸರು ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್‍ವರ್ಕ್ ಉಳ್ಳಾಲ:ಪೂರ್ವ ಹಾಗೂ ಪಶ್ಚಿಮ ಎತ್ತರಾಗಿರುವುದರಿಂದ ಹೆಚ್ಚು ಶಕ್ತಿಯಿರುವ ಜಾಗ ನಡುಪೊಳಿಕೆ ಬಲ್ಯ ಆಗಿದ್ದು, ಈ ನಿಟ್ಟಿನಲ್ಲಿ ಸ್ಥಳದಲ್ಲಿ ಶ್ರೀ ಕೊರಪೊಳು ಮೈರೆಗೆ ನೂತನ ಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ಸ್ಥಳದಲ್ಲಿ ಗುಡಿ ನಿರ್ಮಾಣ ಆಗುವವರೆಗೆ ಸ್ಥೂಲಶರೀರ ಕಾಪಾಡಬೇಕಿದೆ ಎಂದು ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು. ಅವರು ಕುಂಪಲ ನಡುಪೊಳಿಕೆ ಬಲ್ಯದಲ್ಲಿ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಶ್ರೀ ಸ್ವಾಮಿ ಕೊರಗಜ್ಜ ಹಾಗೂ ಕೊರಪೊಳು ಮೈರೆ ನೂತನ ಗುಡಿ ನಿರ್ಮಾಣಕ್ಕೆ ಸೋಮವಾರ ಜರಗಿದ ಶಿಲಾನ್ಯಾಸ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಲಾನ್ಯಾಸ ನಡೆದಲ್ಲಿ ಮಹಿಳೆಯೊಬ್ಬಳು ಗರ್ಭಧಾರಣೆ ಆದಂತೆ. ಗರ್ಭಿಣಿ ಮಹಿಳೆಯನ್ನು ವೃತ ನಡೆಸಿ ಪೋಷಿಸಿದಂತೆ, ಶಿಲಾನ್ಯಾಸ ನಡೆದ ಸ್ಥಳದ ಜನರು ಗಡ್ಡಧಾರಿಯಾಗಿಯೋ ಅಥವಾ ಇಷ್ಟದ ಆಹಾರವನ್ನು ಗುಡಿ ನಿರ್ಮಾಣ ಆಗುವವರೆಗೆ ತ್ಯಜಿಸಿ ವೃತಾಚಾರಣೆಯಲ್ಲಿ ಪಾಲ್ಗೊಂಡು, ಗುಡಿ ನಿರ್ಮಾಣದಲ್ಲಿ ಶ್ರಮಿಸಬೇಕಿದೆ ಎಂದರು. ಧಾರ್ಮಿಕ ಉಪನ್ಯಾಸ ನೀಡಿದ ಮಂಜೇಶ್ವರ ಹಾಗೂ ಉಳ್ಳಾಲದ ಧರ್ಮ…

Read More

ಉಳ್ಳಾಲ್ ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು: 80,000 ದಷ್ಟು ಪಿಂಚಣಿದಾರರಿರುವ ಜಿಲ್ಲೆಯ ಮಂಗಳೂರಿನ ಪ್ರಾವಿಡಂಟ್ ಫಂಡ್ ಕಚೇರಿಯಲ್ಲಿ ಕೇವಲ 60 ಮಂದಿ ಸಿಬ್ಬಂದಿ ಮಾತ್ರವಿದ್ದು, ಇದರಿಂದ ಕಾರ್ಮಿಕರ ಪಿಂಚಣಿ ವಿತರಣೆಯೂ ಸಮಗ್ರ ರೀತಿಯಲ್ಲಿ ಆಗುತ್ತಿಲ್ಲ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ. ಅವರು ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ತೊಕ್ಕೊಟ್ಟು ಹೊಸ ಬಸ್ ನಿಲ್ದಾಣದ ಬಳಿ ಮಂಗಳವಾರ ನಡೆದ ಮೇ ದಿನದ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 1986ರಲ್ಲಿ ನಡೆದ ಕಾರ್ಮಿಕರ ಚಳವಳಿಯನ್ನು ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ವರ್ಗಗಳು ಮುರಿದಿತ್ತು. ದಬ್ಬಾಳಿಕೆ ಮೂಲಕ ಕಾರ್ಮಿಕ ಸಂಘಟನೆಯ ಮುಖಂಡರುಗಳನ್ನೇ ಬಂಧಿಸಿತ್ತು. ಈ ನಿಟ್ಟಿನಲ್ಲಿ ಆರಂಭವಾದ ಕಾರ್ಮಿಕರ ದಿನಾಚರಣೆ , ಕಾರ್ಮಿಕರ ಹಕ್ಕುಗಳನ್ನು ಪಡೆಯುವಲ್ಲಿ ಶ್ರಮವಹಿಸುವ ದಿನವಾಗಿದೆ. ಜಾಗತೀಕರಣ, ಉದಾರೀಕರಣ, ಖಾಸಗೀರಕಣದ ಜಾರಿಯಿಂದಾಗಿ ಎಲ್ಲಾ ಸರಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಸಲಾಗುತ್ತಿದೆ. ಹಿಂದೆ ಮಂಗಳೂರಿನ ಪ್ರಾವಿಡೆಂಟ್ ಫಂಡ್ ಕಚೇರಿಯಲ್ಲಿದ್ದ 200 ಕ್ಕೂ ಅಧಿಕ ಸಿಬ್ಬಂದಿಯನ್ನು ವರ್ಗಾಯಿಸಲಾಗಿದೆ. ಇದೀಗ ಕೇವಲ 60 ಮಂದಿ ಮಾತ್ರ…

Read More

ಉಳ್ಳಾಲ್ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಕಳೆದ ಏಳು ತಿಂಗಳ ಹಿಂದೆ ಗಣೇಶಮಹಲ್ ಸಮೀಪ ಹತ್ಯೆಗೀಡಾಗಿದ್ದ ಕಾರ್ತಿಕ್ ರಾಜ್ ಮನೆಗೆ ರಾಜ್ಯ ಗೃಹಸಚಿವ ಜಿ.ಪರಮೇಶ್ವರ್ ಭೇಟಿ ಮಾಡಿ ಹೆತ್ತವರಿಗೆ ಸಾಂತ್ವನ ಹೇಳಿದರು. ಕಾರ್ತಿಕ್ ನನ್ನು ಆತನ ತಂಗಿ ಕಾವ್ಯಾಳೇ ಸುಪಾರಿ ನೀಡುವುದಾಗಿ ಭರವಸೆ ನೀಡಿ ಕುತ್ತಾರು ಸಂತೋಷನಗರ ನಿವಾಸಿ ಸಹೋದರರಾದ ಗೌತಂ ಮತ್ತು ಗೌರವ್ ಎಂಬವರಿಂದ ಹತ್ಯೆ ನಡೆಸಿದ್ದಳು. ಎರಡು ದಿನಗಳ ಹಿಂದೆಯಷ್ಟೇ ಮೂವರು ಆರೋಪಿಗಳ ಬಂಧನವಾಗಿತ್ತು. ಭೇಟಿ ಸಂದರ್ಭ ಪಜೀರು ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಕಲಚೇತನರನ್ನು ಗುರುತಿಸಿ ಅವರಿಗೆ ಸಿಗುವ ಸರಕಾರ ಸವಲತ್ತನ್ನು ನೀಡಲು ಪಂಚಾಯತ್ ಸಿದ್ಧವಿದೆ ಎಂದು ಸೋಮೇಶ್ವರ ಗ್ರಾಮ ಪಂಚಾಯತ್ನ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅಭಿಪ್ರಾಯಪಟ್ಟರು. ಸೋಮೇಶ್ವರ ಗ್ರಾಮ ಪಂಚಾಯತ್ನಲ್ಲಿ ನಡೆದ ಅರಿವಿನ ಸಿಂಚನ ಕಾರ್ಯಕ್ರಮದಲ್ಲಿ 51 ವಿಕಲಚೇತನರಿಗೆ ಸಹಾಯಧನ ವಿತರಿಸಿ ಮಾತನಾಡಿದರು. ಪಂಚಾಯತ್ನಲ್ಲಿ ಸಹಾಯಧನಕ್ಕಾಗಿ 51 ಅರ್ಜಿಗಳು ಬಂದಿದ್ದು, ಎಲ್ಲಾ ಅರ್ಜಿಗಳಿಗೂ ಸಹಾಯಧನವನ್ನು ವಿತರಿಸಲಾಗಿದೆ. ವಿಕಲಚೇತನರೂ ಇತರರಂತೆ ಬದುಕು ಕಟ್ಟಿಕೊಳ್ಳುವ ಕಾರ್ಯ ಆಗಬೇಕು ಈ ನಿಟ್ಟನಲ್ಲಿ ಪಂಚಾಯತ್ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ರವಿಶಂಕರ್ ಸೋಮೇಶ್ವರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನೋಹರ ಗೌಡ, ಸಿಬ್ಬಂದಿ ರೂಪ ಉಳಿಯ, ಪಂಚಾಯತ್ ಸದಸ್ಯರಾದ ಮನೋಜ್ ಕಟ್ಟೆಮನೆ, ಹರಿಶ್ಚಂದ್ರ ಅಡ್ಕ, ಹರೀಶ್ ಕುಂಪಲ, ಶೈಲೇಶ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದೊಂದಿಗೆ ಲಂಡನ್ನ ಪ್ಲೇಮೌತ್ ಸ್ಕೂಲ್ ಆಫ್ ಬಯಾಲಾಜಿಕಲ್ ಆ್ಯಂಡ್ ಮರೈನ್ ಸೈನ್ಸ್ ವಿಶ್ವವಿದ್ಯಾನಿಲಯದೊಂದಿಗೆ ಹವಾಮಾನ ಬದಲಾವಣೆಯ ಪರಿಣಾಮ ಸಮುದ್ರ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಅದರ ಪರಿಣಾಮದ ವಿಚಾರದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಒಡಂಬಡಿಕೆಗೆ ಸಹಿ ಹಾಕಿದೆ. ನಿಟ್ಟೆ ವಿಶ್ವವಿದ್ಯಾನಿಲಯದ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವು ಪ್ಲೇಮೌತ್ ಸ್ಕೂಲ್ ಆಫ್ ಬಯೋಲಾಜಿಕಲ್ ಎಂಡ್ ಮೆರೈನ್ ಸೈನ್ಸ್ ವಿವಿಯೊಂದಿಗೆ ಯುನೆಸ್ಕೋ ಸೂಕ್ಷ್ಮಜೀವಿ ಸಂಪನ್ಮೂಲ ಕೇಂದ್ರದ ಭಾಗವಾಗಿ ಜಂಟಿ ಸಂಶೋಧನಾ ಅವಕಾಶಗಳು, ಹಾಗೂ ಬೋಧನೆ ಮತ್ತು ಎರಡೂ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಪ್ರಯೋಜನವನ್ನು ಈ ಒಡಂಬಡಿಕೆಯಿಂದ ಪಡೆಯಬಹುದು. ಸ್ಕೂಲ್ ಆಫ್ ಯೂನಿವರ್ಸಿಟಿ ಪ್ಲೆಮೌತ್ ಬಯಲಾಜಿಕಲ್ ಮತ್ತು ಮರೈನ್ ಸೈನ್ಸ್ನ ಮುಖ್ಯಸ್ಥ ಡಾ| ಮೈರಿ ನೈಟ್, ಮಾತನಾಡಿ ಹವಾಮಾನ ಬದಲಾವಣೆಯು ನಮ್ಮ ಭೂಮಿ ಎದುರಿಸುತ್ತಿರುವ ಮುಖ್ಯ ಸವಾಲಾಗಿದ್ದು, ಈ ವಿಚಾರದ ಕುರಿತು ಸಂವಾದ ಸಂಶೋಧನೆಗಳು ಆಗಬೇಕಾಗಿದ್ದು, ಎರಡು ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ…

Read More