Author: UllalaVani

Kannada News From Coastal Karnataka

UN NETWORKS ಮುಡಿಪು: ಕುರ್ನಾಡು ಪಂಚಾಯಿತಿಯ 2017-18ನೇ ಸಾಲಿನ ಅನುದಾನದಿಂದ ಮುಡಿಪು ಜಂಕ್ಷನ್‍ನಲ್ಲಿ ನಿರ್ಮಿಸಲಾದ ಹೈಮಾಸ್ಟ್ ದೀಪದ ಉದ್ಘಾಟನೆಯು ಶುಕ್ರವಾರ ನಡೆಯಿತು. ಹೈಮಾಸ್ಟ್ ದೀಪವನ್ನು ಉದ್ಘಾಟಿಸಿ ಮಾತನಾಡಿದ ಅಮ್ಮೆಂಬಳ ಸಹಕಾರಿ ಬ್ಯಾಂಕ್‍ನ ಹಿರಿಯರಾದ ಟಿ.ಜಿ.ರಾಜಾರಾಮ ಭಟ್ ಅವರು, ಮುಡಿಪು ಪ್ರದೇಶವು ಅಭಿವೃದ್ದಿ ಹೊಂದುತ್ತಿರುವ ಪ್ರದೇಶವಾದರೂ ಮುಡಿಪು ಜಂಕ್ಷನ್‍ನಲ್ಲಿ ಸರಿಯಾದ ದೀಪದ ವ್ಯವಸ್ಥೆ ಇಲ್ಲದೆ ಬಹಳಷ್ಟು ತೊಂದರೆಯಾಗುತ್ತಿತ್ತು. ಅಲ್ಲದೆ ಜಂಕ್ಷನ್ ಪ್ರದೇಶದಲ್ಲಿಯೇ ಹಲವಾರು ಕಳ್ಳತನ ಪ್ರಕರಣಗಳೂ ನಡೆದಿದ್ದವು. ಈ ಸಮಸ್ಯೆಯನ್ನು ಮನಗಂಡು ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸುತ್ತಿರುವ ಕುರ್ನಾಡು ಪಂಚಾಯಿತಿ ಇದೀಗ ಹೈ ಮಾಸ್ಟ್ ದೀಪವನ್ನು ಒದಗಿಸಿಕೊಟ್ಟು ಮುಡಿಪನ್ನು ಬೆಳಗುವಂತಹ ಕೆಲಸವನ್ನು ಮಾಡಿದೆ ಎಂದರು. ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ, ಕುರ್ನಾಡು, ಮುಡಿಪು ಪ್ರದೇಶಗಳಲ್ಲಿ ಹಲವಾರು ಪ್ರತಿಷ್ಟಿತ ಕಂಪೆನಿಗಳು, ವ್ಯಾಪಾರಮಳಿಗೆಗೆಳು ಆರಂಭಗೊಂಡು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಈ ಭಾಗದ ಅಭಿವೃದ್ಧಿಯಲ್ಲಿ ಇಲ್ಲಿಯ Pಕುರ್ನಾಡು ಪಂಚಾಯಿತಿಯ ಪ್ರಾಮಾಣಿಕ ಆಡಳಿತವೂ ಪ್ರಮುಖ ಕಾರಣವಾಗಿದೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೆ…

Read More

UN NETWORKS ಮಂಗಳೂರು: ಉಳ್ಳಾಲದ ಟಾರ್ಗೆಟ್ ಗ್ರೂಪ್ ಲೀಡರ್ ಕುಖ್ಯಾತಿ ಟಾರ್ಗೆಟ್ ಇಲ್ಯಾಸ್‍ನನ್ನು ತನ್ನ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಚೂರಿಯಿಂದ ಚುಚ್ಚಿ ಹತ್ಯೆಗೈದಿರುವ ಘಟನೆ ಕುಡ್ಪಾಡಿ ಮಸೀದಿ ಎದುರುಗಡೆಯ ಮಿಸ್ತಾಹ್ ಗೆಲೋರ್ ಅಪಾರ್ಟ್‍ಮೆಂಟಿನಲ್ಲಿ ಶನಿವಾರ ಮುಂಜಾನೆ ವೇಳೆ ಸಂಭವಿಸಿದೆ. ಪತ್ನಿ ಹಾಗೂ ಒಂದೂವರೆ ವರ್ಷದ ಮಗುವಿನ ಜತೆಗೆ ಅಪಾರ್ಟ್‍ಮೆಂಟಿನಲ್ಲಿದ್ದ ವಾಸವಿದ್ದ ಇಲ್ಯಾಸ್ ಮನೆಗೆ ಬೆಳಿಗ್ಗೆ ಬಂದಿರುವ ದುಷ್ಕರ್ಮಿಗಳು, ಬಾಗಿಲು ತಟ್ಟಿದ್ದರು. ಖುದ್ದು ಇಲ್ಯಾಸ್ ಬಾಗಿಲು ತೆಗೆಯುತ್ತಿದ್ದಂತೆ ಇಬ್ಬರು ದುಷ್ಕರ್ಮಿಗಳು ಇಲ್ಯಾಸ್ ಎದೆಯ ಭಾಗಕ್ಕೆ ಚೂರಿಯಿಂದ ಚುಚ್ಚಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡು ತನ್ನ ಮನೆಯಲ್ಲೇ ಬಿದ್ದಿದ್ದ ಆತನನ್ನು ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ. ಉಳ್ಳಾಲದಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ವಾರೆಂಟ್ ಎದುರಿಸುತ್ತಿದ್ದ ಈತ , ಮುಕ್ಕಚ್ಚೇರಿ ಜುಬೈರ್ ಹತ್ಯೆ ನಂತರ ಉಳ್ಳಾಲ ಪೊಲೀಸರು ಬಂಧಿಸಿದ್ದರು. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ದುಷ್ಕರ್ಮಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

Read More

UN NETWORKS ತೊಕ್ಕೊಟ್ಟು: ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ತೊಕ್ಕೊಟ್ಟು  ಇದರ ವತಿಯಿಂದ ಸ್ವಾಮಿ ವಿವೇಕಾನಂದರ 155 ನೇ ಜನ್ಮದಿನಾಚರಣೆ ಪ್ರಯುಕ್ತ ವಿವೇಕ ಧ್ವನಿ -2018 ಕಾರ್ಯಕ್ರಮ ಮತ್ತು ಕೆ.ಎಮ್.ಸಿ. ವತಿಯಿಂದ ಮಣಿಪಾಲ್ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ತೊಕ್ಕೊಟು ಕ್ಲಿಕ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉಧ್ಟಾಟಿಸಿದ ಮಂಗಳೂರು ರಥಬೀದಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ.ನವೀನ್ ಕೊಣಾಜೆಯವರು ಸ್ವಾಮಿ ವಿವೇಕಾನಂದರು ಸನಾತನ ಹಿಂದೂ ಧರ್ಮ ಮತ್ತು ಭಾರತದ ಮಣ್ಣಿನ ಶಕ್ತಿಯನ್ನು ಸಮಗ್ರ ಜಗತ್ತಿಗೆ ಪರಿಚಯಿಸಿದ್ದ ವೀರ ಸನ್ಯಾಸಿ. ಇಂದಿನ ಯುವ ಸಮುದಾಯಕ್ಕೆ ಸರ್ವ ವಿಧದಲ್ಲೂ ಪ್ರೇರಣೆ ನೀಡುವ ಮಹಾನ್ ಮೇಧಾವಿ.ಅವರ ಮಾರ್ಗದರ್ಶನದ ಬೆಳಕಿನಿಂದ ಭಾರತ ವಿಶ್ವ ಗುರುವಾಗಲಿದೆ ಎಂದು ಹೇಳಿದರು. ಕೆ.ಎಮ್.ಸಿ. ಅತ್ತಾವರದ ಸಾರ್ವಜನಿಕ ಸಂರ್ಪಕಧಿಕಾರಿ ರಾಕೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆರೋಗ್ಯ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾಗದ ಜೀವನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತರಾದ ಸೌರಜ್ ಮಂಗಳೂರು…

Read More

UN NETWORKS ಕೊಣಾಜೆ: ಉತ್ತಮ ಶಿಕ್ಷಣ, ವ್ಯಕ್ತಿತ್ವದೊಂದಿಗೆ ಮಾದರಿ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಣ ಸಂಸ್ಥೆಗಳು ಕೂಡಾ ಮಹತ್ವವಾದ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಕೊಣಾಜೆಯ ವಿಶ್ವಮಂಗಳ ವಿದ್ಯಾಸಂಸ್ಥೆಯು ಕಳೆದ 35 ವರ್ಷದಿಂದ ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದರೊಂದಿಗೆ ಮುನ್ನಡೆಯುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಅಭಿಪ್ರಾಯಪಟ್ಟರು. ಅವರು ಕೊಣಾಜೆ ವಿಶ್ವವಿದ್ಯಾಲಯ ಆವರಣದಲ್ಲಿರುವ ವಿಶ್ವಮಂಗಳ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಪಠ್ಯ ಚಟುವಟಿಕೆಗಳ ಜೊತೆಗೆ ದೇಶಕ್ಕಾಗಿ ಅಧ್ಬುತವಾದ ಕೊಡುಗೆ ನೀಡಿದಂತಹ ಅಬ್ದುಲ್ ಕಲಾಂ, ಸಿ.ವಿ.ರಾಮನ್, ಸಿಎನ್‍ಎನ್ ರಾವ್ ಮೊದಲಾದವರು ಹಿರಿಯ ಬದುಕನ್ನು ವಿದ್ಯಾರ್ಥಿಗಳಿಗೆ ತಿಳಿಯ ಪಡಿಸುವ ಕಾರ್ಯಕ್ರಮಗಳನ್ನು ಸರಣಿಯಾಗಿ ಹಮ್ಮಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಪ್ರೇರಣೆಯಾಗಿ ಅವರ ಬೆಳವಣಿಗೆಗೆ ಸಹಕಾರಿಯಾಗಬಲ್ಲುದು ಎಂದರು. ವಿಶ್ವಮಂಗಳ ವಿದ್ಯಾಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವಂತೆಯೆ ಪಠ್ಯೇತರವಾಗಿ ಕ್ರೀಡೆ ಹಾಗೂ ಇತರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವುದು ಶ್ಲಾಘನೀಯವಾಗಿದೆ. ಈ ವಿದ್ಯಾ ಸಂಸ್ಥೆಯು ಇನ್ನಷ್ಟು…

Read More

UN NETWORKS ತೊಕ್ಕೊಟ್ಟು : ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರದ ಶತಮನೋತ್ಸವದ ಸಮಾರೋಪ ಕಾರ್ಯಕ್ರಮದ ಉದ್ಘಾಟನೆಯ ಅಂಗವಾಗಿ ಪವಿತ್ರ ಮೂರ್ತಿಯ ಮೆರವಣಿಗೆ ವಾಹನ ಜಾಥಾದ ಮೂಲಕ ಸೋಮೆಶ್ವರದಿಂದ ತೊಕ್ಕೊಟ್ಟು ಧರ್ಮಕೇಂದ್ರದ ವರೆಗೆ ಬುಧವಾರ ಸಂಜೆ ನಡೆಯಿತು. ಫೋಟೋ:ಪಚ್ಚು ಪೆರ್ಮನ್ನೂರು ಶತಮಾನೋತ್ಸವದ ಧ್ವಜಾರೋಹಣ ಹಾಗೂ ಶತಮನೋತ್ಸವದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಫಾ. ವಿಕಾರ್ ಜನರಲ್ ಡೆನಿಸ್ ಮೊರಸ್ ಪ್ರಭುನೆರವೇರಿಸಿದರು. ಪೂರ್ವಿ ತಯಾರಿಯಾಗಿ 9 ದಿವಸಗಳ ನೋವೆನ ಪ್ರಾರ್ಥನೆಗಳ ಮೊದಲ ದಿನದ ಪ್ರಾರ್ಥನೆ ನಡೆಯಿತು. ಈ ಸಂದರ್ಭ ಕುಟುಂಬಗಳಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಭಕ್ತಿವಿಧಿಯಲ್ಲಿಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಧರ್ಮಗುರುಗಳಾದ ಫಾ| ಜೆ.ಬಿ. ಸಲ್ಡಾನ್ಹಾ, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ , ಸಹಾಯಕ ಧರ್ಮಗುರುಗಳಾದ ಫಾ| ಸ್ಟ್ಯಾನಿ ಪಿಂಟೊ , |ಫಾ| ಲೈಝಿಲ್ ಡಿ’ಸೋಜ, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಪ್ರಾಂಶುಪಾಲರಾದ ಫಾ| ಎಡ್ವಿನ್ ಮಸ್ಕರೇನಸ್, ತೊಕ್ಕೊಟ್ಟು ಡಿವೈನ್ ಸೆಂಟರಿನ ಫಾ| ಜೋಸೆಫ್, ನೆಹರುನಗರ ಆಲೋಶಿಯನ್ ಕಾನ್ವೆಂಟಿನ ಮುಖ್ಯಸ್ಥೆ ಸಿ| ಬೆನ್ನಿ ಬರೆಟ್ಟೊ,…

Read More

UN NETWORKS ಮಂಗಳೂರು: ಕ್ರೀಡಾಪಟುಗಳಿಗೆ ಪರೀಕ್ಷೆ ಸಂದರ್ಭ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಮಂಗಳೂರು ವಿಶ್ವವಿದ್ಯಾನಿಲಯ ಪ್ರಥಮ ಬಾರಿ ಕಲ್ಪಿಸಿದ್ದು, ಸ್ಪರ್ಧೆಯಿಂದ ವಾಪಸ್ಸಾದ ಕೂಡಲೇ ಸ್ಪರ್ಧಾಳುಗಳಿಗೆ ವಿಶೇಷ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ಒಂದು ವರ್ಷದವರೆಗೆ ಕಾಯಬೇಕಾದ ಅನಿವಾರ್ಯತೆಯಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಕೆ.ಬೈರಪ್ಪ ಹೇಳಿದರು. ಅವರು ಮಂಗಳೂರು ರಥಬೀದಿಯ ಡಾ.ಪಿ ದಯಾನಂದ ಪೈ-ಡಾ.ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವತಿಯಿಂದ ಮಂಗಳ ಕ್ರೀಡಾಂಗಣದಲ್ಲಿ ಗುರುವಾರ ಮಹಿಳೆಯರು , ಪುರುಷರು ಹಾಗೂ ವಿಶೇಷ ಚೇತನ ಮಕ್ಕಳಿಗಾಗಿ ಆಯೋಜಿಸಲಾಗಿದ್ದ 37 ನೇ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಅಥ್ಲೆಟಿಕ್ ಮೀಟ್ , ಪುರಷರ ವಿಭಾಗಕ್ಕೆ ಸಂತ ಫಿಲೋಮಿನ ಕಾಲೇಜು ಅಸೋಷಿಯೇಷನ್ ಟ್ರೋಫಿ ಮತ್ತು ಮಹಿಳೆಯರಿಗಾಗಿ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಟ್ರೋಫಿಗೆ ಚಾಲನೆ ನೀಡಿ ಮಾತನಾಡಿದರು. ಹಿಂದೆ ವಿದ್ಯಾರ್ಥಿ ಕ್ರೀಡಾಪಟುಗಳು ಪರೀಕ್ಷೆ ಸಂದರ್ಭ ಸ್ಪರ್ಧೆಗಳಲ್ಲಿ ಭಾಗವಹಿಸಿದಲ್ಲಿ, ಒಂದು ವರ್ಷದ ನಂತರ ಪರೀಕ್ಷೆಯನ್ನು ಬರೆಯುವ ಅನಿವಾರ್ಯತೆಯಿತ್ತು.…

Read More

UN NETWORKS ಮಂಗಳೂರು: ಮೋದಿ ಬಳಿಕ ನಾನು ದೇಶದ ಪ್ರಧಾನಿಯಾಗುತ್ತೇನೆ. ಮುಂಬರುವ ಚುನಾವಣೆಯಲ್ಲಿ ಹುಚ್ಚ ವೆಂಕಟ ಸೇನೆ ಸ್ಪರ್ಧಿಸಲಿದೆ ಎಂದು ಬಿಗ್‌ಬಾಸ್ ಖ್ಯಾಾತಿಯ ಹುಚ್ಚ ವೆಂಕಟೇಶ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಹೊಸ ಪಕ್ಷ ಸ್ಥಾಪಿಸಬೇಕಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಆಗಿಲ್ಲ. ನನ್ನ ಹುಚ್ಚ ವೆಂಕಟ್ ಸೇನೆ ಸಕ್ರಿಯವಾಗಿದೆ. ಅದನ್ನು ಮುಂದಿನ ಚುನಾವಣೆ ವೇಳೆಯಾದರೂ ರಾಜಕೀಯ ಪಕ್ಷವನ್ನಾಗಿಸಬೇಕು. ಮೋದಿ ಇನ್ನು ಸ್ವಲ್ಪ ವರ್ಷ ದೇಶದ ಪ್ರಧಾನಿಯಾಗಿರುತ್ತಾರೆ. ಅವರ ನಂತರ ನಾನು ದೇಶದ ಪ್ರಧಾನಿಯಾಗುವೆ ಎಂದರು.

Read More

UN NETWORKS ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಒಂಭತ್ತನೇಯ ವಾರ್ಡಿನ ಶಾರದಾ ನಗರ ಹೌಸಿಂಗ್ ಕಾಲನಿಯ ಕಾಂಕ್ರೀಟೀಕರಣ ರಸ್ತೆ ಮತ್ತು ಸುಸಜ್ಜಿತವಾದ ಚರಂಡಿಯ ಉದ್ಘಾಟನೆಯನ್ನು ಶಾರದಾ ನಗರ ಅಭಿವೃದ್ಧಿ ಸೊಸೈಟಿಯ ಉಪಾಧ್ಯಕ್ಷ ರಮೇಶ್ ಹೆಬ್ಬಾರ್ ನೆರವೇರಿಸಿದರು. ಶಾರದಾ ನಗರ ಹೌಸಿಂಗ್ ಕಾಲನಿಯ ಒಂದನೇ ಅಡ್ಡ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ,ಕೋಟೆಕಾರ್ ಪಟ್ಟಣ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಊರಿನವರು ರಸ್ತೆ ಅಭಿವೃದ್ಧಿಪಡಿಸಲು ಬೇಡಿಕೆಯನ್ನಿಟ್ಟಿದ್ದರು,ಈ ನಿಟ್ಟಿನಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ಎಸ್.ಎಫ್.ಸಿ.ನಿಧಿಯಿಂದ 3 ಲಕ್ಷ ರೂಪಾಯಿಯ ಅನುದಾನದಲ್ಲಿ ಉತ್ತಮ ವಾದ ಕಾಂಕ್ರೀಟೀಕರಣ ರಸ್ತೆ ಯಾಗಿದೆ ಎಂದು ಒಂಭತ್ತನೇಯ ವಾರ್ಡಿನ ಸದಸ್ಯ ಹಮೀದ್ ಹಸನ್ ಮಾಡೂರು ತಿಳಿಸಿದರು. ಶಾರದಾ ನಗರ ಅಭಿವೃದ್ಧಿ ಸೊಸೈಟಿಯ ಮಾಜಿ ಅಧ್ಯಕ್ಷ ನಾರಾಯಣ, ಸದಸ್ಯರಾದ ರಘುರಾಮ ಶೆಟ್ಟಿ,ಪೂರ್ಣಿಮಾ, ಪಾರ್ವತಿ ಮುರಳಿ,ಜಮೀಳಾ.ಕೆ, ಮುರಳಿ, ರವಿ ಕಿರಣ್, ಸವಿತಾ, ಖುರ್ಷಿದ ಬಾನು,ಹಸೀನಾ, ಶಹನಾಝ್,ಸಯ್ಯದ್ ಸಿಬಿತುಲ್ಲಾ, ಅಬ್ದುರ್ರಹಮಾನ್, ವನಿತಾ ಶೆಟ್ಟಿ, ಗುತ್ತಿಗೆದಾರ ಇಸ್ಮಾಯಿಲ್ ಉಪಸ್ಥಿತರಿದ್ದರು.

Read More

UN NETWORKS ತಲಪಾಡಿ: ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕ್ಯಾಂಪಸ್‍ನ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ `ಸ್ಪಿರಿಟ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ನೃತ್ಯಗಳನ್ನು ಪ್ರಸ್ತುತಪಡಿಸಿದರು.

Read More

UN NETWORKS ಉಳ್ಳಾಲ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯ ಅನಾವರಣದೊಂದಿಗೆ ಅವರಲ್ಲಿ ಸಾಮಾಜಿಕ, ಮಾನವೀಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಮೌಲ್ಯಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಕೊಡುಗೆ ಅಪಾರ ಎಂದು ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು. ಅವರು ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕ್ಯಾಂಪಸ್‍ನ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ `ಸ್ಪಿರಿಟ್’ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಕೌನ್ಸಿಲರ್ ಮಮತಾ ಭಂಡಾರಿ ಮಾತನಾಡಿ ಶಾರಾದ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅವರ ಕಾರ್ಯ ಶೈಲಿಯಿಂದ ಒಂದೊಂದು ವಿಶೇಷತಾ ಗುಣವನ್ನು ಹೊಂದಿರುವುದು ಕಾಣುತ್ತದೆ. ಇಲ್ಲಿ ಮಕ್ಕಳಿಗೆ ಸಂಸ್ಕಾರದೊಂದಿಗೆ ಮೌಲ್ಯಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು. ವಿದ್ಯಾರ್ಥಿನಿ ಶೈಲಾಶ್ರೀ ಐತಾಳ್ ಸ್ವಾಗತಿಸಿದರು. ದೃಶ್ಯ ಭಂಡಾರಿ ವಂದಿಸಿದರು. ಝಾಹಿದ್ ಮಹಮ್ಮದ್, ಅಂಕಿತಾ ಹೆಗ್ಡೆ ಸಾತ್ವಿಕ ಹರೀಶ್ ಕುಮಾರ್, ಅನಂತ್…

Read More