Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಸಯ್ಯದ್ ಮದನಿ ಅರೆಬಿಕ್ ಎಜ್ಯುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಮದರಸದ ಪಬ್ಲಿಕ್ ಪರೀಕ್ಷೆ ಆರಂಭಗೊಂಡಿದ್ದು, ಪ್ರಥಮ ಬಾರಿಗೆ ಟ್ರಸ್ಟ್ ವಿದ್ಯಾರ್ಥಿಗಳು ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು. 5, 7 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಉಳ್ಳಾಲ ಹಝ್ರತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಪಬ್ಲಿಕ್ ಪರೀಕ್ಷೆ ಇದಾಗಿರುವುದರಿಂದ ಶಾಲೆಯಲ್ಲಿ ನಡೆಯುವಂತೆ ಪರೀಕ್ಷೆ ಬರೆಯುವ ಮಕ್ಕಳಿಗರ ಗುರುತು ಚೀಟಿ, ಹಾಲ್ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು ಧಾರ್ಮಿಕ ಶಿಕ್ಷಣದಲ್ಲಿ ಹೊಸ ಪರಿಕಲ್ಪನೆಗೆ ನಾಂದಿ ಹಾಡಲಾಗಿದೆ. ದರ್ಗಾ ಅಧೀನದಲ್ಲಿ ಚಾರಿಟೇಬಲ್ ಹಾಗೂ ಅರೆಬಿಕ್ ಎಜ್ಯುಕೇಶನ್ ಟ್ರಸ್ಟ್ ಎನ್ನುವ ಪ್ರತ್ಯೇಕ ವಿಭಾಗಗಳಿದ್ದು ದರ್ಗಾ ಅಧ್ಯಕ್ಷರು ಮುಖ್ಯಸ್ಥರಾಗಿದ್ದರೆ, ಉಳಿದೆರೆಡು ಟ್ತಸ್ಟ್ಗಳಿಗೆ ಉಪಾಧ್ಯಕ್ಷರ ಸಹಿತ ಪದಾಧಿಕಾರಿಗಳು, ಟ್ರಸ್ಟಿಗಳಿದ್ದಾರೆ. ಇಲ್ಲಿನ ಯೋಜನೆಗನ್ನು ಪದಾಧಿಕಾರಿಗಳು ಚರ್ಚಿಸಿ ಕೈಗೊಳ್ಳುತ್ತಿದ್ದು ದರ್ಗಾ ಸಮಿತಿಯ ಅನುಮತಿ ಬಳಿಕ ಕಾರ್ಯ ರೂಪಕ್ಕೆ ಬರುತ್ತದೆ. ಹಿಂದೆ ಆಯಾ ಮದರಸಗಳಲ್ಲಿ ಪರೀಕ್ಷೆ ಅಧೀನದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಟ್ರಸ್ಟ್ ಅಧೀನದಲ್ಲಿ 33…

Read More

ಉಳ್ಳಾಲ್ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಸಮಾಜ ಬೆಳೆಸುವ ಮಕ್ಕಳ ಆರೋಗ್ಯವನ್ನು   ಕಾಪಾಡುವ ಸರಕಾರದ ಕಾರ್ಯಕ್ರಮವನ್ನು ಉತ್ತೇಜಿಸುವ ಕಾರ್ಯ ಸಮಾಜಕ್ಕೆ ಪೂರಕವಾದುದು  ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ  ಉಳ್ಳಾಲ ನಗರಸಭೆ ಸದಸ್ಯ ಫಾರುಕ್ ಉಳ್ಳಾಲ್  ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರ  ಮತ್ತು ಯುನೈಟೆಡ್ ಸೋಷಿಯಲ್ ಮೂವ್‍ಮೆಂಟ್  ಉಳ್ಳಾಲ ಇದರ ಆಶ್ರಯದಲ್ಲಿ  ಉಳ್ಳಾಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿದ ಎರಡನೇ ಸುತ್ತಿನ  ಪಲ್ಸ್ ಪೋಲಿಯೋ  ನಿರ್ವಹಣೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಸಾಮಾಜಿಕ ಕಳಕಳಿಯೊಂದಿಗೆ ನಿರಾಶ್ರಿತರ ಧ್ವನಿಯಾಗಿ ಆರಂಭಗೊಂಡಿರುವ ಸಂಘಟನೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ.   ಉಳ್ಳಾಲಕ್ಕೆ ಬರುವ ಕಟ್ಟಡ  ಕಾರ್ಮಿಕರಲ್ಲಿ ಮಲೇರಿಯಾ ಪ್ರಕರಣ ಹೆಚ್ಚಿತ್ತು. ಆದರೆ  ಪ್ರಾಥಮಿಕ ಆರೋಗ್ಯ ಕೇಂದ್ರ ಅದನ್ನು ಹತೋಟಿಗೆ ತರುವಲ್ಲಿ ಬಹಳಷ್ಟು ಶ್ರಮವಹಿಸಿ ಯಶಸ್ವಿಯಾಗಿದೆ.  ಹಾಗೆಯೇ ಪಲ್ಸ್ ಪೋಲಿಯೋ  ಕುರಿತ ಜಾಗೃತಿ ಸಂಘಟನೆಗಳ ಮೂಲಕ ಮಾಡಿಸುವುದರಿಂದ ಅದರ ಕುರಿತಾಗಿ ಇರುವ ತಪ್ಪು ಕಲ್ಪನೆಗಳು ಜನರಿಂದ ದೂರವಾಗಲಿದೆ. ಇದರಿಂದ ಮಕ್ಕಳ ಆರೋಗ್ಯವನ್ನು  ಕಾಪಾಡಲು ಸಾಧ್ಯ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಬೈಕಂಪಾಡಿಯ ಚಿತ್ರಾಪುರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ `ಮೊಗವೀರ ಪ್ರೀಮಿಯರ್ ಲೀಗ್ ಸೀಸನ್ -2’ಗೆ ಉಳ್ಳಾಲ ಮೊಗವೀರಪಟ್ಣದ ಮಾರುತಿ ಯುವಕ ಮಂಡಲ ಮತ್ತು ಮಾರುತಿ ಕ್ರಿಕೆಟರ್ಸ್‍ನ ನೇತೃತ್ವದ ಕ್ರಿಕೆಟ್ ತಂಡ ಸಿದ್ಧಗೊಂಡಿದ್ದು, ತಂಡದ ಜರ್ಸಿ ಬಿಡುಗಡೆ ಕಾರ್ಯಕ್ರಮ ಮಾಯಾ ಹೋಟೆಲ್‍ನ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಆಯ್ದ ತಂಡಗಳು ಮೊಗವೀರ ಯುವ ವೇದಿಕೆಯ ಆಶ್ರಯದಲ್ಲಿ ನಡೆಯಲಿರುವ ಎಂಪಿಎಲ್ ಸೀಸನ್ -2ರಲ್ಲಿ ಭಾಗವಹಿಸಲಿದ್ದು, ಸಾಂಸ್ಕøತಿಕ ಸಾಮಾಜಿಕ ಮತ್ತು ಕ್ರೀಡೆ ಅದರಲ್ಲೂ ಕ್ರಿಕೆಟ್‍ನಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಉಳ್ಳಾಲ ಮೊಗವೀರಪಟ್ಣದ ಮಾರುತಿ ಯುವಕ ಮಂಡಲದ ಮಾರುತಿ ಕ್ರಿಕೆಟರ್ಸ್ ತಂಡ ಕ್ರಿಕೆಟ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದು ಪ್ರದೀಪ್ ಹೆಜಮಾಡಿ ಅವರ ನಾಯಕತ್ವದಲ್ಲಿಕ್ರಿಕೆಟ್ ಪಟುಗಳಾದ ಯಶ್‍ಪಾಲ್, ಸೂರಜ್, ಸುಶಾಂತ್, ರಾಕೇಶ್, ಕೌಶಿಕ್, ಜೀವನ್, ಅಶ್ವಿತ್, ಅಸ್ವಿನ್, ವರದರಾಜ್, ಸಂದೀಪ್, ಜನಾರ್ಧನ್, ರೂಪೇಶ್, ದೀಕ್ಷಿತ್ ತಂಡದಲ್ಲಿ ಆಟವಾಡಲಿದ್ದಾರೆ. ಜರ್ಸಿ ಬಿಡುಗಡೆ : ತಂಡದ ಜರ್ಸಿ ಬಿಡುಗಡೆ ಮಾಡಿದ ಮತ್ಸೋದ್ಯಮಿ ಮೋಹನ್…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ವಿವಾಹಿತೆಯಾಗಿದ್ದರೂ ಪತಿಯನ್ನು ತೊರೆದಿದ್ದ ಸಹೋದರಿ ಮನೆಯಲ್ಲಿದ್ದುಕೊಂಡು ಬೇರೆ ಯುವಕನನ್ನು ಪ್ರೀತಿಸುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಸಹೋದರನ ಮೇಲೆ ದ್ವೇಷ ಬೆಳೆಸಿಕೊಂಡ ಸಹೋದರಿ ತನ್ನ ಪ್ರಿಯಕರನಿಗೆ ಸುಪಾರಿ ನೀಡುವ ಮೂಲಕ ಸಹೋದರನನ್ನೇ ಹತ್ಯೆಗೈದಿದ್ದಾಳೆ. ಇದು ರಾಜ್ಯಾದ್ಯಂತ ಸುದ್ಧಿ ಮಾಡಿದ್ದ ಕೊಣಾಜೆ ಪಜೀರು ಸುದರ್ಶನಗರದ ಮಾಜಿ ತಾ.ಪಂ ಸದಸ್ಯ ಉಮೇಶ್ ಗಾಣಿಗ ಎಂಬವರ ಪುತ್ರ ಕಾರ್ತಿಕ್ ರಾಜ್ ಹತ್ಯೆ ಪ್ರಕರಣದ ಅಸಲಿಯತ್ತು. ಪ್ರಕರಣಕ್ಕೆ ಸಂಬಂಧಿಸಿ ಏಳು ತಿಂಗಳುಗಳ ಬಳಿಕ ಕೋಟೆಕಾರು ಮಾಡೂರು ನಿವಾಸಿಗಳಾದ ಗೌತಂ (26) ಹಾಗೂ ಆತನ ಸಹೋದರ ಪ್ರೀತಂ (23) ಸೇರಿದಂತೆ ಹತ್ಯೆಯಾದ ಕಾರ್ತಿಕ್ ರಾಜ್ ಸಹೋದರಿ ಕಾವ್ಯಾ ಳನ್ನು ಡಿಸಿಐಬಿ ಪೊಲೀಸರು ಬಂಧಿಸುವ ಮೂಲಕ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದ್ದಾರೆ. ವಿವಾಹಿತೆಯಾಗಿದ್ದರೂ ಪತಿಯಿಂದ ದೂರವಿದ್ದ ಕಾವ್ಯಾಳನ್ನು ಗೌತಂ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದನ್ನು ಕಾವ್ಯಾಳ ಸಹೋದರ ಕಾರ್ತಿಕ್ ರಾಜ್ ವಿರೋಧಿಸಿದ್ದನಲ್ಲದೆ, ಆಕ್ಷೇಪವನ್ನು ಎತ್ತಿದ್ದನು. ಇದನ್ನೇ ದ್ವೇಷವಾಗಿ ಬೆಳೆಸಿಕೊಂಡ ಕಾವ್ಯ , ಗೌತಮನಿಗೆ ತನ್ನ ಒಡವೆಗಳನ್ನು ಅಡವಿಟ್ಟು ರಊ. 5…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಕೊಣಾಜೆ ಪಜೀರು ನಿವಾಸಿ ಉಮೇಶ್ ಗಾಣಿಗ ಎಂಬವರ ಪುತ್ರ ಕಾರ್ತಿಕ್ ರಾಜ್ (27) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ  ಸಿಸಿಐಬಿ ಪೊಲೀಸರಿಂದ ಮೂವರು ಆರೋಪಿಗಳ ಬಂಧಿಸಿರುವುದಾಗಿ ತಿಳಿದುಬಂದಿದೆ. ಕಾರ್ತಿಕ್ ಸಂಬಂಧಿ ಯುವತಿಯೇ ಆಕೆಯ ಪ್ರಿಯಕರ ಹಾಗೂ ಆತನ ಸಹೋದರನ ಜತೆಗೆ ಸೇರಿಕೊಂಡು ಹತ್ಯೆ ನಡೆಸಿರುವುದಾಗಿ ತಿಳಿದುಬಂದಿದೆ. ಅದರಂತೆ ಮೂವರನ್ನು ಡಿಸಿಐಬಿ ಪೊಲೀಸರು ಶುಕ್ರವಾರ ಬೆಳಿಗ್ಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಂದು ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ, ಬಿಜೆಪಿಯ ಮುಖಂಡರು ಕಾರ್ತಿಕ್ ರಾಜ್ ಹತ್ಯೆ ಬಳಿಕ ಮನೆಗೆ ಭೇಟಿ ನೀಡಿದ್ದರು. ಅಲ್ಲದೆ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದಂತೆ ಹಿಂದು ಹಿತ ರಕ್ಷಣಾ ವೇದಿಕೆ ವತಿಯಿಂದ ಎರಡು ಬಾರಿ ಕೊಣಾಜೆ ಪೊಲೀಸ್ ಠಾಣೆ ಎದುರುಗಡೆ ಪ್ರತಿಭಟನೆಯೂ ನಡೆದಿತ್ತು. ಅ.23 , 2016 ರಂದು ಪಜೀರು ಮನೆಯಿಂದ  ದೇರಳಕಟ್ಟೆಯ  ಜಿಮ್ ಗೆಂದು  ಅಸೈಗೋಳಿವರೆಗೆ  ಜಾಗಿಂಗ್ ನಡೆಸುತ್ತಿದ್ದ ಸಂದರ್ಭ ನಸುಕಿನ 5…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಜನಸಾಮಾನ್ಯರ, ವಿದ್ಯಾರ್ಥಿಗಳ ಬೇಡಿಕೆಗಳಿಗೆ, ಅಹವಾಲಿಗೆ ತಕ್ಷಣ ಸ್ಪಂದಿಸುವ ಸಚಿವ ಯು. ಟಿ. ಖಾದರ್ ಇದೀಗ ಗ್ರಾಮೀಣ ಪ್ರದೇಶದ ಬಾಲಕನೊಬ್ಬನ ಆಸೆಯೊಂದನ್ನು ಈಡೇರಿಸಿದ್ದಾರೆ. ಪುತ್ತೂರು ತಾಲೂಕಿನ ಕಡಬ ಹೊಸಮಠ ಎಂಬಲ್ಲಿನ ಎಚ್.ಕೆ. ಮೊಹಿದೀನ್ ಎಂಬವರ ಪುತ್ರ ಮುಹಮ್ಮದ್ ರಾಹೀದ್ ಪ್ರತಿಭಾವಂತ ಬಾಲಕ. ಕಡಬ ಕ್ನಾಯನ ಜ್ಯೋತಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾದ ಈತನಿಗೆ ಅದೇಕೋ ಐಪಿಎಲ್ ಕ್ರಿಕೆಟ್ ಪಂದ್ಯಾಟ ಪ್ರತ್ಯಕ್ಷ ನೋಡಬೇಕೆಂಬ ಆಸೆ ಮನಸ್ಸಿನಲ್ಲಿತ್ತು. ಇದು ಈಡೇರುತ್ತಾ ಇಲ್ಲವೋ ಎಂದು ಈತನಿಗೆ ಗೊತ್ತಿರಲಿಲ್ಲ.ಈಗಿರುವಾಗ, ಇತ್ತೀಚೆಗೆ ರಾಹಿದ್ ಮಂಗಳೂರಿನಲ್ಲಿ ಮದುವೆ ಕಾಯ9ಕ್ರಮವೊಂದಕ್ಕೆ ಹೋಗಿದ್ದಾಗ, ಆ ಹಾಲ್ ಗೆ ಸಚಿವ ಯು.ಟಿ. ಖಾದರ್ ಕೂಡಾ ಬಂದಿದ್ದರು. ಅಲ್ಲಿ ಸ್ವಲ್ಪ ಕಷ್ಟಪಟ್ಟು ನೇರವಾಗಿ ಸಚಿವರನ್ನು ಭೇಟಿಯಾದ ರಾಹಿದ್, ತನ್ನ ಪರಿಚಯ ಹೇಳಿ, ತನಗೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾಟ ವೀಕ್ಷಿಸಲು ಟಿಕೆಟ್ ಒದಗಿಸಿಕೊಡುವಂತೆ ಸಚಿವರಲ್ಲಿ ಪುಟ್ಟ ಬೇಡಿಕೆ ಇಟ್ಟನು. ಬಾಲಕನ ಈ ಬೇಡಿಕೆಗೆ ತಲೆದೂಗಿದ ಸಚಿವರು, ಅತನ ಶಾಲಾ ಸಾಧನೆಗಳು, ಮಾಕ್ಸ್9 ವಿಚಾರಿಸಿದರು. ಬಳಿಕ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್  ಕರೋಪಾಡಿ:ದುಷ್ಕರ್ಮಿಗಳಿಂದ ಕೊಲೆಗೀಡಾದ ಯುವ ನೇತಾರ, ಕರೊಪ್ಪಾಡಿ ಪಂಚಾಯತ್ನ ಉಪಾಧ್ಯಕ್ಷ ಅರಸಳಿಕೆ ಅಬ್ದುಲ್ ಜಲೀಲ್ ಕರೋಪ್ಪಾಡಿ ಯವರ ಮನೆಗೆ ಉಳ್ಳಾಲದ ಯುನೈಟೆಡ್ ಸೋಷಿಯಲ್ ಮೂಮೆಂಟ್ನ ಪ್ರತಿನಿಧಿಗಳಾದ ನಗರದ ಚಾರ್ಟೆಡ್ ಅಕೌಂಟೆಂಟ್ ಯು.ಹೆಚ್. ಅಹ್ಮದ್, ಜಿಲ್ಲಾ ಕಾಂಗ್ರೆಸ್ ನ ವಕ್ತಾರರಾದ ಫಾರೂಕ್ ಉಳ್ಳಾಲ್, ಸರಕಾರಿ ಗುತ್ತಿಗೆದಾರ ಅಹ್ಮದ್ ಬಾವ ಕೊಟ್ಟಾರ, ಉದ್ಯಮಿ ಬಿ.ಎಂ. ಬದ್ರುದ್ದೀನ್ , ಎಸ್.ಎಂ.ಸಿ ಟ್ರಸ್ಟ್ ನ ಮಾಜಿ ಕಾರ್ಯದರ್ಶಿ ಹಾಜಿ ಯು.ಎನ್.ಬಾವ, ಯು.ಬಿ.ಸಿದ್ದೀಕ್, ಯುವ ಮುಖಂಡರುಗಳಾದ ಹೈದರ್ ಉಳ್ಳಾಲ್ ಬೈಲ್ ಹಾಗೂ ಇಬ್ರಾಹಿಂ ಮುಕ್ಕಚೇರಿ ಜೊತೆಯಲ್ಲಿದ್ದರು. ಮೃತರ ತಂದೆ ಮತ್ತು ಕುಟುಂಬ ಸದಸ್ಯರನ್ನು ಕಂಡು ಸಾಂತ್ವನ ಹೇಳಿದ ನಿಯೋಗ, ಮುತ್ಸದ್ಧಿತನದ ದೂರದರ್ಶಿತ್ವ ನಾಯಕತ್ವವನ್ನು ನಾಡ ಜನ ಬಯಸುತ್ತಿದ್ದು. ಸಂಯಮ ಮತ್ತು ತಾಳ್ಮೆ ಯೊಂದಿಗೆ ಜಲೀಲ್ ರ ಇಚ್ಛೆಯನ್ನೂ ತಾವೇ ಪೂರ್ತಿಸಿ ಕೊಡುವ ಅಗತ್ಯವಿದೆ. ಆದ್ದರಿಂದ ಜನಸೇವೆ ಯನ್ನು ಹಿಂದಿಗಿಂತಲು ಹೆಚ್ಚಿನ ಹುರುಪಿನೊಂದಿಗೆ ಮುಂದುವರಿಸುವ ಅಗತ್ಯ ಇದೆ ಎಂದು ಉಸ್ಮಾನ್ ಹಾಜಿ ಕರೊಪ್ಪಾಡಿಯವರಲ್ಲಿ ವಿನಂತಿಸಿತು.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಜನರಿಗೆ ಮೌಲ್ಯಯುತವಾದ ಜ್ಞಾನ, ಮಾಹಿತಿ ಸಂಪನ್ಮೂಲವನ್ನು ಒದಗಿಸುವ ಮೂಲಕ ಅವರನ್ನು ತೃಪ್ತಿಪಡಿಸುವ ಕೆಲಸವನ್ನು ಗ್ರಂಥಾಲಯಗಳು ಮಾಡುತ್ತಿವೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಗ್ರಂಥಾಲಯವು ಹಲವಾರು ಆಧುನಿಕ ಸೌಲಭ್ಯಗಳೊಂದಿಗೆ ಜನರ ಮೂಲಭೂತ ಬೇಡಿಕೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಮುಖವಾಗಿ ಗ್ರಂಥಾಲಯಗಳು ಮತ್ತು ಸಾರ್ವಜನಿಕರ ನಡುವೆ ಇರುವ ಅಂತರವನ್ನು ಕಡಿಮೆಗೊಳಿಸಿ ಹೆಚ್ಚೆಚ್ಚು ಜನರು ಇದರ ಬಳಕೆ ಮಾಡುವಂತಹ ಕೆಲಸ ಹಾಗೂ ಮಾಹಿತಿ ವಿಜ್ಞಾನದ ಮಹತ್ವವನ್ನು ತಿಳಿಯಪಡಿಸುವ ಕಾರ್ಯವು ಇಂತಹ ವಿಚಾರ ಸಂಕಿರಣಗಳಿಂದ ಆಗಬೇಕಾಗಿದೆ ಎಂದು ಗುಜರಾತ್ ಸೆಂಟ್ರಲ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೈಬ್ರೆರಿ ಮತ್ತು ಇನ್‍ಫಾರ್ಮೇಶನ್ ಸೈಯನ್ಸ್‍ನ ಡೀನ್ ಪ್ರೊ. ಮುತ್ತಯ್ಯ ಕೊಗನುರಾಮತ್ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿವಿ ಮಂಗಳಾ ಸಭಾಂಗಣದಲ್ಲಿ `ಪ್ರೋಫೆಶನಲಿಸಂ ಇನ್ ಲೈಬ್ರೆರಿ ಆಂಡ್ ಇನ್‍ಫಾರ್ಮೇಶನ್ ಸರ್ವಿಸಸ್ ಫಾರ್ ಯೂಸರ್ ಎಂಪವರ್‍ಮೆಂಟ್: ಅಪೋರ್ಚುನಿಟಿಸ್ ಆಂಡ್ ಚಾಲೆಂಜಸ್’ ಎಂಬ ವಿಷಯದಲ್ಲಿ ರಾಷ್ಟ್ರಮಟ್ಟದ ಎರಡು ದಿನಗಳ ಸಮ್ಮೇಳನವನ್ನು ಗುರುವಾರ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೋಟೆಕಾರು : ಎಲ್ಲಾ ಸಮಾಜಗಳನ್ನು ಒಂದುಗೂಡಿಸುವ ಕಾರ್ಯವನ್ನು ಶ್ರೀ ಶಂಕರ ಜಯಂತಿ ಉತ್ಸವದ ಮೂಲಕ ಕೈಗೆತ್ತಿಕೊಂಡಿರುವ ಕಾರ್ಯ ಮಹತ್ಕಾರ್ಯವಾಗಿದ್ದು, ಇದು ಶೃಂಗೇರಿ ಮಠದ ಸಂಪರ್ಕವನ್ನು ಹೆಚ್ಚಿನ ರೀತಿಯಲ್ಲಿ ಬೆಳೆಸುವ ಮೂಲಕ ಯಶಸ್ವಿಯಾಗಲಿದೆ ಎಂದು ಉಡುಪಿ ಜಿಲ್ಲಾ ಮರಾಠ ಸಮಾಜ ಸೇವಾ ಸಂಘದ ಅಧ್ಯಕ್ಷ ಅನಂತ ನಾಯಕ್ ಅಭಿಪ್ರಾಯಪಟ್ಟರು. ಅವರು ಶ್ರೀ ಶಂಕರ ಸೇವಾ ಪ್ರತಿಷ್ಠಾನ ಮತ್ತು ಶ್ರೀ ಶಾಂಕರ ತತ್ವಪ್ರಸಾರ ಅಭಿಯಾನಂ ಶ್ರೀ ಶೃಂಗೇರಿ ಶಂಕರ ಮಠ ಕೋಟೆಕಾರು ವತಿಯಿಂದ ಕೋಟೆಕಾರು ಮಠದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಂಕರ ಜಯಂತಿ ಉತ್ಸವ-2017 ರನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮದ ಸಂರಕ್ಷಣೆಗೆ ಭರತಖಂಡದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿದ ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರ ಕಾರ್ಯ ಅಜರಾಮರ. ನಾಶದ ಅಂಚಿನಲ್ಲಿದ್ದ ಸನಾತನ ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸಿದ ಕೀರ್ತಿ ಅವರದ್ದಾಗಿದೆ. ಭರತಖಂಡದಲ್ಲಿ ಏಕತೆಯನ್ನು ಸ್ಥಾಪಿಸುವಲ್ಲಿಯೂ ಸಫಲರಾದವರು. ಇದೀಗ ಅವರ ಜಯಂತಿ ಉತ್ಸವದ ಸಂದರ್ಭ ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಕಾರ್ಯ ಮಹತ್ತರವಾದದ್ದು ಎಂದರು. ವಿಶೇಷ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಬಾಹುಬಾಲಿ 2 ಸಿನಿಮಾ ನೋಡಲು ಹೋಗಬೇಕು ಆದರೆ ಈ ದುಬಾರಿ ಸಿನಿಮಾ ಟಿಕೆಟ್ ದರವನ್ನು ಯಾರಪ್ಪಾ ಕೊಡುವುದು ಎಂದು ತಲೆಕೆಡಿಸಿಕೊಳ್ಳುತ್ತಿರುವ ಸಿನಿಪ್ರಿಯರಿಗೆ ಇಲ್ಲಿದೆ ಶುಭಸುದ್ದಿ. ಕರ್ನಾಟಕ ಸರಕಾರ ಸಿನಿಮಾ ಟಿಕೆಟ್ ದರವನ್ನು ಗರಿಷ್ಠ ರೂ 200 ಎಂದು ನಿಗದಿಪಡಿಸಿದ್ದು ಈ ಬಗ್ಗೆ ಈಗಾಗಲೇ ಅಧಿಕೃತ ಸೂಚನೆಯನ್ನು ಹೊರಡಿಸಿದೆ. ಈ ಆದೇಶವು ಇಂದಿನಿಂದಲೇ ಜಾರಿಗೆ ಬರಲಿದ್ದು ಬಾಹುಬಲಿ 2 ಸಿನಿಮಾ ಈ ಆದೇಶಕ್ಕೆ ಒಳಪಡುವ ಮೊದಲ ಸಿನಿಮಾವಾಗಲಿದೆ. ಹಾಗಾಗಿ ರಾಜಮೌಳಿಯ ಬೆಳ್ಳಿತೆರೆಯ ಮೇಲಿನ ಕೌತುಕವನ್ನು ಕೇವಲ ರೂ. 200ರಲ್ಲಿ ನೋಡಬಹುದಾಗಿದೆ. ಈ ಬಗ್ಗೆ ಮಾತನಾಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಸರಕಾರದ ಆದೇಶದ ಪ್ರತಿ ಕೈಗೆ ಸೇರಿದ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಮಲ್ಟಿಪ್ಲೆಕ್ಸ್‍ಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ. ಪ್ರೈಮ್‍ಟೈಮ್‍ಗಳಲ್ಲಿ ಅಂದರೆ ಅಪರಾಹ್ನ 1.30, 4.30 ಮತ್ತು 7.30ರ ಸಮಯಗಳಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಅವರು…

Read More