ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ :ವಿಶ್ವ ಯೋಗ ದಿನ ಅಂಗವಾಗಿ ಉಳ್ಳಾಲ ನಗರಸಭೆಯಲ್ಲಿ ಆರ್ಟ್ ಆಫ್ ಲಿವಿಂಗ್ ನ ಸದಸ್ಯೆ ಸುಮನ ಕಾಮತ್ ಇವರ ನೇತೃತ್ವದಲ್ಲಿ ಯೋಗಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನಗರಸಭಾ ಪೌರಾಯುಕ್ತೆ ವಾಣಿ ಆಳ್ವರವರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Author: UllalaVani
ಉಳ್ಳಾಲ ನ್ಯೂಸ್ ನೆಟ್ವರ್ಕ್ ಕೊಣಾಜೆ : ಎಸ್ಡಿಪಿಐ ಅಧ್ಯಕ್ಷ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದಲ್ಲಿ ಆರೋಪಿಯೆಂದು ಹರೇಕಳ ಮೂಲದ ಹಿಂದು ಸಂಘಟನೆ ಕಾರ್ಯಕರ್ತನ ಹೆಸರು ಹಾಗೂ ಭಾವಚಿತ್ರವನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಸುಳ್ಳು ಮಾಹಿತಿ ಹಬ್ಬಿಸಿದವರ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೇಕಳದಲ್ಲಿ ಹಿಂದು ಸಂಘಟನೆಗಳಲ್ಲಿ ಕಾಣಿಸಿಕೊಂಡಿದ್ದ ಪ್ರೇಮ್ ಎಂಬವರು ದೂರು ನೀಡಿದ್ದಾರೆ. ಪೂರ್ವದ್ವೇಷವನ್ನು ಇಟ್ಟುಕೊಂಡ ತಂಡವೊಂದು ಅಶ್ರಫ್ ಕಲಾಯಿ ಪ್ರಕರಣದಲ್ಲಿ ತಾನು ಭಾಗಿಯಾಗಿರುವುದಾಗಿ ಸುಳ್ಳು ಸುದ್ಧಿ ಹಬ್ಬಿಸಿ , ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ಯಾಪ್ ಗಳಲ್ಲಿ ಹರಿಯಬಿಟ್ಟಿದ್ದಾರೆ. ಇದು ತನ್ನ ಘನತೆಗೆ ಧಕ್ಕೆಯನ್ನು ಉಂಟುಮಾಡಿದೆ. ಅಲ್ಲದೆ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಜೀವ ಅಪಾಯದಲ್ಲಿದೆ. ಇಲಾಖೆ ಸೂಕ್ತ ಕ್ರಮಕೈಗೊಂಡು ರಕ್ಷಣೆ ನೀಡುವಂತೆಯೂ, ಸುಳ್ಳು ಸುದ್ಧಿ ಹಬ್ಬಿಸಿ ಮತ್ತೆ ಜೀವಕ್ಕೆ ಕುತ್ತು ತರುವ ಪ್ರಯತ್ನದ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ದೂರು ನೀಡಿದ್ದಾರೆ. ಅದರಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಬೆಂಜನಪದವಿನಲ್ಲಿ ಬುಧವಾರ ನಡೆದ ಎಸ್ಡಿಪಿಐ ಅಧ್ಯಕ್ಷ ಅಶ್ರಫ್ ಕಲಾಯಿ ಅವರ ಹತ್ಯೆಯನ್ನು ಉಳ್ಳಾಲ ದರ್ಗಾಧ್ಯಕ್ಷ ರಶೀದ್ ಹಾಜಿ ಖಂಡಿಸಿದ್ದಾರೆ. ಅಶ್ರಫ್ ಕಲಾಯಿ ಅವರ ಹತ್ಯೆ ನಡೆಸಿದ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸ ಬೇಕು ಎಂದು ಅವರು ಒತ್ತಾಯಿಸಿದ್ದಾರೆ. ರಿಕ್ಷಾ ಚಾಲಕರಾಗಿ ಮತ್ತು ಸಮಾಜ ಸೇವಕರಾಗಿ ದುಡಿಯುತ್ತಿದ್ದ ಅಶ್ರಫ್ ಕಲಾಯಿ ಅವರ ಹತ್ಯೆಯ ಸಂದರ್ಭದಲ್ಲಿ ಅವರನ್ನು ರೌಡಿಶೀಟರ್ ಎಂದು ಮಾಧ್ಯಮಗಳು ತಪ್ಪು ಮಾಹಿತಿಯನ್ನು ಹರಡಿರುವುದೂ ಖಂಡನೀಯವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ.ರೋಡು ಶಾಖೆಯಲ್ಲಿನ ಸಿಬ್ಬಂದಿಗೆ ಚೂರಿ ತೋರಿಸಿ ಶೌಚಾಲಯದೊಳಕ್ಕೆ ಕೂಡಿ ಹಾಕಿ ಕೋಟ್ಯಂತರ ರೂ. ಬೆಲೆಬಾಳುವ ಚಿನ್ನಾಭರಣವನ್ನು ದರೋಡೆಗೆ ಯತ್ನಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ವೇಳೆ ನಡೆದಿದೆ. ಶುಕ್ರವಾರ ಕೆಲ ಸಿಬ್ಬಂದಿ ಮಸೀದಿಗೆ ತೆರಳುವ ಮಾಹಿತಿ ಪಡೆದಿದ್ದ ದರೋಡೆಕೋರರು ಬೈಕಿನಲ್ಲಿ ಬಂದು ಕೃತ್ಯ ಎಸಗಿದ್ದಾರೆ. ಮಧ್ಯಾಹ್ನ ವೇಳೆ ಕೇವಲ 3 ಸಿಬ್ಬಂದಿ ಮಾತ್ರವಿದ್ದು, ಈ ವೇಳೆ ಚೂರಿ ಹಿಡಿದುಕೊಂಡು ಒಳನುಗ್ಗಿದ ದರೋಡೆಕೋರರು ಸಿಬ್ಬಂದಿಯನ್ನು ಬೆದರಿಸಿ ಶೌಚಾಲಯದೊಳಕ್ಕೆ ಕೂಡಿಹಾಕಿ ಬಾಗಿಲು ಮುಚ್ಚಿದ್ದರು. ಬಳಿಕ ಲಾಕರಿನಲ್ಲಿದ್ದ ಚಿನ್ನವನ್ನು ಗೋಣಿಚೀಲದಲ್ಲಿ ತುಂಬಿಸಿದ ಇಬ್ಬರು ದರೋಡೆಕೋರರು ಬೈಕಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಂತೆಯೇ, ಶೌಚಾಲಯದ ಬಾಗಿಲು ಮುರಿದು ಹೊರಬಂದ ಸಿಬ್ಬಂದಿ ರಾಮಚಂದ್ರ ಎಂಬವರು ಕಲ್ಲನ್ನೆತ್ತಿ ದರೋಡೆಕೋರನೋರ್ವನ ಹೃದಯಭಾಗಕ್ಕೆ ಎಸೆದಿದ್ದ. ಆದರೆ ಇಬ್ಬರು ಗೋಣಿಚೀಲ ಸಮೇತ ಮತ್ತೆ ಪರಾರಿಯಾಗಲು ಯತ್ನಿಸಿದಾಗ ಮತ್ತೊಂದು ಕಲ್ಲನ್ನು ಹಿಂಬದಿ ಕುಳಿತಿದ್ದವನ ಮೇಲೆ ಎಸೆದಿದ್ದಾನೆ. ಇದರಿಂದ ಬೆದರಿದ ದರೋಡೆಕೋರ ಗೋಣಿಚೀಲವನ್ನು ಸ್ಥಳದಲ್ಲೇ ಎಸೆದು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಇಫ್ತಾರ್ ಮೀಟ್ ಏರ್ಪಡಿಸುವ ಉದ್ದೇಶ ಸರಿ ಇರಬೇಕು. ಹೊರತು ಹೆಸರಿಗಾಗಿ ಇಫ್ತಾರ್ ಕೂಟ ಅಯೋಜಿಸಬಾರದು ಎಂದು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹಾಜಿ ಹೇಳಿದರು. ಅವರು ಸಯ್ಯಿದ್ ಮದನಿ ಅರಬಿಕ್ ಎಜ್ಯುಕೇಶನಲ್ ಟ್ರಸ್ಟ್, ಸಯ್ಯಿದ್ ಮದನಿ ದಅïವಾ ಕಾಲೇಜು ಮತ್ತು ಸಯ್ಯಿದ್ ಮದನಿ ದಅïವಾ ಸ್ಟೂಡೇಂಟ್ ಎಸೋಶಿಯೇಶನ್ ಇದರ ವತಿಯಿಂದ ಉಳ್ಳಾಲ ದರ್ಗಾ ವಠಾರ ಮದನಿ ಹಾಲ್ನಲ್ಲಿ ನಡೆದ ಇಫ್ತಾರ್ ಮೀಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭ ದುವಾ ವಿದ್ಯಾರ್ಥಿಗಳ ಮಾಸಿಕ ಕೈಬರಹ ಇಖ್ರಲ್ ಬುಲೈಟಿನ್ ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಉದ್ಘಾಟಿಸಿದರು. ಸಯ್ಯಿದ್ ಮದನಿ ದುವಾ ಕಾಲೇಜ್ ಪ್ರಾಂಶುಪಾಲ ಇಬ್ರಾಹೀಂ ಅಹ್ಸನಿ ಮುಖ್ಯ ಪ್ರಭಾಷಣಗೈದರು. ಸಯ್ಯಿದ್ ಮದನಿ ಅರಬಿಕ್ ಎಜುಕೇಶನ್ ಟ್ರಸ್ಟ್ ಜೋತೆ ಕಾರ್ಯದರ್ಶಿ ಅಸಿಫ್ ಅಬ್ದುಲ್ಲಾ, ಉಳ್ಳಾಲ ಕೇಂದ್ರ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಚ್ಚಿಲ:ಕರ್ನಾಟಕ-ಕೇರಳ ಗಡಿಭಾಗದ ಉಚ್ಚಿಲ ಸಮುದ್ರ ತೀರದಲ್ಲಿನ ನದಿ ತೀರದಿಂದ ದೋಣಿ ಮೂಲಕ ಅವ್ಯಾಹತವಾಗಿ ಮರಳು ಸಾಗಾಟ ನಡೆಯುತ್ತಿದ್ದು, ಗುರುವಾರ ಸ್ಥಳೀಯ ಯುವಕರ ತಂಡವೊಂದು ವಿರೋಧ ವ್ಯಕ್ತಪಡಿಸಿದರೂ ಮರಳು ಸಾಗಾಟವನ್ನು ತಂಡ ನಿಲ್ಲಿಸಿಲ್ಲ. ಉಚ್ಚಿಲ ಎಂಡ್ ಪಾಯಿಂಟ್ನಲ್ಲಿರುವ ನದಿ ತಟದಿಂದ ಐದು ದೋಣಿಗಳ ಮೂಲಕ ಅವ್ಯಾಹತವಾಗಿ ಮರಳು ಸಾಗಾಟ ನಡೆಸಲಾಗುತ್ತಿದೆ. 25 ಮಂದಿಯ ತಂಡ ಮರಳುಗಾರಿಕೆ ನಡೆಸುತ್ತಿರುವುದನ್ನು ಸ್ಥಳೀಯ ಯುವಕರ ತಂಡ ಸಂಜೆ ವೇಳೆ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ದೋಣಿಯಲ್ಲಿದ್ದವರು ತೆಂಗಿನಮರದ ಬುಡಕ್ಕೆ ಮರಳು ಹಾಕಲೆಂದು ಕೊಂಡೊಯ್ಯುತ್ತಿರುವುದಾಗಿ ತಿಳಿಸಿ, ಮತ್ತೆ ಸಾಗಾಟಕ್ಕೆ ಮುಂದಾಗಿದ್ದಾರೆ. ನದಿ ತಟದಿಂದ ಮೀ.ಅಂತರ ದೂರದಲ್ಲಿ ಮರಳು ದಾಸ್ತಾನಿರಿಸಿ ಬಳಿಕ ಕೇರಳ ಕಡೆಗೆ ಸಾಗಾಟ ನಡೆಸಲಾಗುತ್ತಿದೆ ಅನ್ನುವುದು ಸ್ಥಳೀಯರ ಆರೋಪವಾಗಿದೆ. ಸೋಮೇಶ್ವರ ಗ್ರಾಮ ಪಂಚಾಯಿತಿ ಈಗಾಗಲೇ ಎರಡು ಬಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಆದರೆ ಮರಳು ಸಾಗಾಟ ಕಂಡುಬಂದಿರಲಿಲ್ಲ. ಈ ಕುರಿತ ಲಿಖಿತ ದೂರೂ ದಾಖಲಾಗಿಲ್ಲ. ಗಡಿಪ್ರದೇಶವಾಗಿದ್ದು, ತಲಪಾಡಿ ಗ್ರಾಮ ಪಂಚಾಯಿತಿಗೆ ಸೇರಿದ್ದಾಗಿರುತ್ತದೆ.…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಬೆಂಜನಪದವಿನಲ್ಲಿ ಬುಧವಾರ ನಡೆದ ಎಸ್ಡಿಪಿಐ ಅಧ್ಯಕ್ಷ ಅಶ್ರಫ್ ಕಲಾಯಿ ಅವರ ಕೊಲೆ ಹಿನ್ನಲೆಯಲ್ಲಿ ಬಂಟ್ವಾಳ, ಪುತ್ತೂರು, ಸುಳ್ಯ,ಬೆಳ್ತಂಗಡಿ ತಾಲೂಕುಗಳಲ್ಲಿ ಹೇರಲಾಗಿದ್ದ ಸೆಕ್ಷನ್ 144 ನ್ನು ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ವಿಸ್ತರಣೆಗೊಳಿಸಲಾಗಿದೆ. ಜೂ. 27 ರ ಮಧ್ಯರಾತ್ರಿ 12 ಗಂಟೆಯ ವರೆಗೆ ಉಳ್ಳಾಲ ಹಾಗೂ ಮುಡಿಪು ಭಾಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದಾಗಿ ಮಂಗಳೂರು ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಜೂ. 14ರಿಂದ ಜೂ. 21ರ ತನಕ ವಿಸ್ತರಿಸಲಾಗಿತ್ತು. ಬುಧವಾರ ಬಂಟ್ವಾಳ ತಾಲೂಕು ಬೆಂಜನಪದವಿನಲ್ಲಿ ಅಶ್ರಫ್ ಅವರ ಕೊಲೆ ಕೃತ್ಯ ಸಂಭವಿಸಿದ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು 7 ದಿನಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಈ ಸಂದರ್ಭದಲ್ಲಿ ಜನರು ಗುಂಪು ಕೂಡುವುದನ್ನು, ಆಯುಧಗಳನ್ನು ಒಯ್ಯುವುದು, ಘೋಷಣೆ ಕೂಗುವುದು, ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗೃತಕ್ರಮವಾಗಿ ಆದೇಶ ಹೊರಡಿಸಲಾಗಿದೆ. .
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಚ್ಚಿಲ:ಅಪಘಾತದ ಲಾಭ ಪಡೆದುಕೊಂಡ ಐದು ಜನ ಕಿರಾತಕರ ತಂಡವೊಂದು ವಿದೇಶದಿಂದ ಮನೆಗೆ ವಾಪಸ್ಸಾಗುತ್ತಿದ್ದವನ ಸೇರಿ ಆತನನ್ನು ಮನೆಗೆ ಕರೆದುಕೊಂಡು ಹೋಗಲು ಬಂದವನನ್ನು ಅಪಹರಿಸಿ ಐದು ಲಕ್ಷ ರೂ. ಬೇಡಿಕೆಯಿಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲದಲ್ಲಿ ನಡೆದಿದ್ದು, ನಿರಂತರ 3 ಗಂಟೆಗಳ ಕಾರ್ಯಾಚರಣೆ ಬಳಿಕ ಮಂಜೇಶ್ವರ ಹಾಗೂ ಉಳ್ಳಾಲ ಪೊಲೀಸರು ಜಂಟಿಯಾಗಿ ಅಪಹೃತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದ ಚಂದೇರಾ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಿಕರಿಪುರ ಪಡನ್ನ ನಿವಾಸಿ ತಾಹಿಝ್ ಎಂಬವರನ್ನು ತಂಡ ಅಪಹರಿಸಿದೆ. ಇವರ ಜತೆಗೆ ಕಾರಿನಲ್ಲಿದ್ದ ವಿದೇಶದಿಂದ ಆಗಷ್ಟೇ ಬಂದಿದ್ದ ಅಶ್ರಫ್ ಎಂಬವರನ್ನು ಅಪಹರಣಕ್ಕೂ ಯತ್ನಿಸಿತ್ತು. ಘಟನೆ ವಿವರ: ನಿನ್ನೆ ಮಧ್ಯಾಹ್ನ ಬಜಪೆ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಅಶ್ರಫ್ ಅವರನ್ನು ಸಂಬಂಧಿ ತಾಹೀಝ್ ಹೋಂಡ ಸಿಟಿ ಕಾರಿನಲ್ಲಿ ಕೇರಳದ ಮನೆಗೆ ಕರೆದೊಯ್ಯುತ್ತಿದ್ದರು. ಈ ಸಂದರ್ಭ ಉಚ್ಚಿಲ ರಾ.ಹೆ.66ರಲ್ಲಿ ಕಾರು ಬೈಕಿಗೆ ಢಿಕ್ಕಿ ಹೊಡೆದಿತ್ತು. ಈ ವೇಳೆ ಬೈಕಿನಲ್ಲಿದ್ದವರು ಗಲಾಟೆಗೆ ಇಳಿದಿದ್ದು, ಬೈಕ್ ದುರಸ್ತಿಯ ಸಂಪೂರ್ಣ ವೆಚ್ಚಕ್ಕೆ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಮೊಂಟೆಪದವು : ಕಸಾಯಿಖಾನೆಗೆ ಸಾಗಿಸಲೆಂದು ತೋಟದಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ 12 ಜಾನುವಾರುಗಳನ್ನು ಕೊಣಾಜೆ ಪೊಲೀಸರು ಮೊಂಟೆಪದವು ಸಮೀಪ ವಶಕ್ಕೆ ಪಡೆದುಕೊಂಡು ಗೋಶಾಲೆಗೆ ಹಸ್ತಾಂತರಿಸಿದ್ದಾರೆ. 3 ಕರುಗಳು ಸೇರಿದಂತೆ 9 ದನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊಂಟೆಪದವು ಶಾಲೆ ಸಮೀಪದ ತೋಟವೊಂದರಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಿರುವ ಮಾಹಿತಿಯನ್ನು ಹಿಂದು ಸಂಘಟನೆ ಕೊಣಾಜೆ ಪೊಲೀಸರಿಗೆ ನೀಡಿತ್ತು. ಅದರಂತೆ ಕೊಣಾಜೆ ಪೊಲೀಸರು ಮೊಂಟೆಪದವು ಸಮೀಪಕ್ಕೆ ತೆರಳಿ ಪರಿಶೀಲಿಸಿದಾಗ ವಾರೀಸುದಾರರಿಲ್ಲದೆ ಜಾನುವಾರುಗಳನ್ನು ಕಟ್ಟಿಡಲಾಗಿತ್ತು. ಕಳವುಗೈದು ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಲು ಮುಂದಾಗಿದ್ದ ತಂಡ ತೋಟದಲ್ಲಿ ಕಟ್ಟಿಡಲಾಗಿದೆ ಅನ್ನುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡು ಪಜೀರು ಗೋವನಿತಾಶ್ರಯಕ್ಕೆ ಒಪ್ಪಿಸಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ತಲಪಾಡಿ: ತುಳು ನಾಟಕ ರಂಗದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಮಂಜೇಶ್ವರದ ಶಾರದಾ ಆರ್ಟ್ಸ್ ಕಲಾವಿದೆರ್ ಮತ್ತು ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಅವರ ನೂತನ ಕಲಾಕಾಣಿಕೆ `ಅಣ್ಣೆ ಬರ್ಪೆಗೆ’ ಮತ್ತು `ಅಂಚಗೆ-ಇಂಚಗೆ’ ನಾಟಕಗಳ ಮುಹೂರ್ತ ಕಾರ್ಯಕ್ರಮ ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ರಚಿಸಿರುವ , ನವೀನ್ ಡಿ. ಪಡೀಲ್ ನಿರ್ದೇಶನದ `ಅಂಚಗೆ-ಇಂಚಗೆ’ ಹಾಗೂ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿರುವ , ಕೃಷ್ಣ ಜಿ. ಮಂಜೇಶ್ವರ ನಿರ್ದೇಶಿಸಿರುವ `ಅಣ್ಣೆ ಬರ್ಪೆಗೆ’ ನಾಟಕಗಳು ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ ಅಭಿನಯದೊಂದಿಗೆ ನಾಟಕ ಮೂಡಿಬರಲಿದೆ. ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ನಾಟಕಕ್ಕೆ ಮುಹೂರ್ತ ನೆರವೇರಿಸಿ ಮಾತನಾಡಿ ಕಲೆಯ ಮೇಲಿನ ಗೌರವ, ಕಲಿಕೆಯ ತುಡಿತ ಮತ್ತು ಶ್ರಮದಾಯಕ ಅಧ್ಯಯನವಿದ್ದರೆ ಶ್ರೇಷ್ಠ ಕಲಾವಿದನಾಗಿ ಹೊರಹೊಮ್ಮುವಲ್ಲಿ ಕಲಾಮಾತೆ ಅನುಗ್ರಹ ಇದ್ದೇ ಇದೆ. ಪೂರ್ಣ ಪ್ರಮಾಣದ ಪ್ರತಿಭೆ ಮತ್ತು ಶುದ್ಧ ಹೃದಯಗಳ…

