UN NETWORKS ಉಳ್ಳಾಲ: ಉಳ್ಳಾಲದಲ್ಲಿ ಕಡಲ್ಕೊರೆತ ಮಂಗಳವಾರವೂ ಮುಂದುವರಿದಿದ್ದು, ಕಡಲ್ಕೊರೆತದಿಂದ ಅಪಾಯದಂಚಿನಲ್ಲಿರುವ ಮನೆಗಳಿಂದ ಸ್ಥಳಾಂತರಗೊಳ್ಳದ ಮನೆಮಂದಿಗೆ ಉಳ್ಳಾಲ ನಗರಸಭೆ ವತಿಯಿಂದ ಎಚ್ಚರಿಕೆ ನೋಟೀಸು ಜಾರಿ ಮಾಡಲಾಗಿದೆ. ಕೈಕೋ, ಹಿಲೆರಿಯಾನಗರ, ಮುಕ್ಕಚ್ಚೇರಿ, ಭಾಗಗಳಲ್ಲಿ 150 ಮನೆಗಳಿದ್ದು, ಈ ಪೈಕಿ 35 ಮನೆಗಳಿಗೆ ಸೋಮವಾರದಿಂದ ಸಮುದ್ರದ ಅಲೆಗಳು ಹೊಡೆಯಲು ಆರಂಭಿಸಿತ್ತು. ಆಲಿಯಬ್ಬ , ಬೀಫಾತಿಮ್ಮ, ಮಹಮ್ಮದ್ ಎಂಬವರಿಗೆ ಸೇರಿದ ಮನೆಗಳು ಸಂಪೂರ್ಣ ಸಮುದ್ರ ಪಾಲಾಗಿದ್ದರೆ, ಉಳಿದ 35 ಮನೆಗಳಿಗೆ ಅಲೆಗಳು ಇಂದು ಕೂಡಾ ಅಪ್ಪಳಿಸುತ್ತಲಿವೆ. ಮನೆ ಅಂಗಳದಲ್ಲಿ ಸಮುದ್ರದ ನೀರು ಇಕ್ಕಟ್ಟಾಗಿ ಮನೆಯೊಳಗೂ ಹೊಕ್ಕಿದೆ. ಮನೆಗಳಲ್ಲಿ ವಾಸಿಸಲು ಯೋಗ್ಯವಿಲ್ಲದಿದ್ದರೂ, ತಹಶೀಲ್ದಾರ್ ಸೂಚಿಸಿದಂತೆ ಗಂಜಿಕೇಂದ್ರಕ್ಕೂ ಹಲವರು ಸ್ಥಳಾಂತರಗೊಂಡಿಲ್ಲ. ಈ ನಿಟ್ಟಿನಲ್ಲಿ ಅಪಾಯದಂಚಿನಲ್ಲಿದ್ದರೂ, ಸ್ಥಳಾಂತರಗೊಳ್ಳದ ಮನೆಮಂದಿಗೆ ಕೂಡಲೇ ಸ್ಥಳಾಂತರವಾಗುವಂತೆ ನಗರಸಭೆಯಿಂದ ಎಚ್ಚರಿಕೆ ನೋಟೀಸು ನೀಡಲಾಗುವುದು ಎಂದು ಉಳ್ಳಾಲದ ಗ್ರಾಮಕರಣಿಕ ಪ್ರಮೋದ್ ಹೇಳಿದ್ದಾರೆ. ಮನೆಯಲ್ಲಿ ಕುಳಿತುಕೊಳ್ಳಲು ಹೆದರಿಕೆಯಾಗುತ್ತದೆ. ಮನೆಯೊಳಗಡೆ ನೀರು ಬರುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬರುತ್ತಾರೆ ನೋಡಿ ಹೋಗುತ್ತಾರೆ. ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿದೆ. ಸೋಮವಾರ ಭೇಟಿ…
Author: UllalaVani
UN NETWORKS ಕೊಣಾಜೆ : ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಉತ್ತಮ ಶಿಸ್ತನ್ನು ಬೆಳೆಸುವುದರೊಂದಿಗೆ ಉತ್ತಮ ಪ್ರಜೆಯನ್ನಾಗಿ ರೂಪಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಇಂತಹ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ನಾಗೇಂದ್ರ ಪ್ರಕಾಶ್ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ವಿವಿ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ ಆಯ್ಕೆ ಶಿಬಿರ ಹಾಗೂ ನಾಯಕತ್ವ ಶಿಬಿರ 2018-19 ವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾಲಯವು ಈಗಾಗಲೇ ಪರಿಸರಕ್ಕೆ ಪೂರಕವಾದ ವನಮಹೋತ್ಸವ, ಪ್ಲಾಸ್ಟಿಕ್ ಮುಕ್ತ ಸಮಾಜದಂತಹ ಹಲವಾರಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇಂತಹ ಕಾರ್ಯಕ್ರಮಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಸಹಕಾರವೂ ಅಗತ್ಯ ಎಂದರು. ಅಲ್ಲದೆ ಶಿಬಿರದಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ವಿವಿ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಸ್ವಚ್ಚ ಭಾರತ್ ಮಿಷನ್ನ…
UN NETWORKS ಸೋಮೇಶ್ವರ: ಸೋಮೇಶ್ವರ ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.1 ರಂದು ಆಚರಿಸಲು ಉದ್ದೇಶಿಸಲಾದ ಶತಮಾನೋತ್ಸವದ ಸಮಿತಿ ರಚನೆ ಇತ್ತೀಚೆಗೆ ಶಾಲೆಯಲ್ಲಿ ನಡೆದ ಸಭೆಯಲ್ಲಿ ನಡೆಯಿತು. ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಎನ್.ಜಿ.ಮೋಹನ್ ಆಯ್ಕೆಯಾದರು. ಪದ್ಮನಾಭ ತಂತ್ರಿ, ಗೋಪಾಲಕೃಷ್ಣ ಉಚ್ಚಿಲ್, ಡಾ.ಜೆ.ಎನ್. ಭಟ್ , ರೇವತಿ.ಡಿ.ಉಚ್ಚಿಲ್, ಲಕ್ಷ್ಮೀ .ಡಿ.ಉಚ್ಚಿಲ್, ಸತೀಶ್ ಕಾರಂತ್, ಕೃಷ್ಣಪ್ಪ ಉಚ್ಚಿಲ್, ಚಂದ್ರಶೇಖರ್ ಉಚ್ಚಿಲ್, ಇಸ್ಮಾಯಿಲ್, ಮಹಮ್ಮದ್ ಆಲಿ, ರಾಜೇಶ್ ಉಚ್ಚಿಲ್ ಇವರನ್ನು ಗೌರವಾಧ್ಯಕ್ಷರುಗಳಾಗಿ, ಕಾರ್ಯಾಧ್ಯಕ್ಷರಾಗಿ ರಾಘವ.ಆರ್.ಉಚ್ಚಿಲ್, ಉಪಾಧ್ಯಕ್ಷರುಗಳಾಗಿ ಯು.ಹೆಚ್.ದಾಮೋದರ್, ಸುಕನ್ಯಾ ಉಚ್ಚಿಲ್, ವಾಣಿ ಲೋಕಯ್ಯ, ರೋಹಿತಾಶ್ವ, ರಘು ಉಚ್ಚಿಲ್. ಅಹ್ಮದ್ ಹುಸೈನ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಬೆಳ್ಚಪ್ಪಾಡ ಅಡ್ಕ, ಜೊತೆ ಕಾರ್ಯದರ್ಶಿಗಳಾಗಿ ವಿಜಯ ಕುಮಾರ್ ಎನ್.ಉಚ್ಚಿಲ್, ನಾರಾಯಣ ಸಿ.ಉಚ್ಚಿಲ್, ಮನೋಜ್ ಕೆ.ಉಚ್ಚಿಲ್, ಸಚಿನ್ ಎಸ್.ಉಚ್ಚಿಲ್, ಯಶವಂತಿ, ಚಂದ್ರಿಕಾ ರೈ, ಪ್ರಫುಲ್ಲಾ ಪಂಡಿತ್, ಪ್ರವೀಣ್ ಬಸ್ತಿ , ಕೋಶಾಧಿಕಾರಿಯಾಗಿ ಹರೀಶ್ .ಟಿ.ಉಚ್ಚಿಲ್ ಹಾಗೂ 60 ಮಂದಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
UN NETWORKS ಉಳ್ಳಾಲ: ದ.ಕ. ಜಿಲ್ಲೆಯಲ್ಲಿ ಮಂಗಳೂರಿನ ನಂತರದ ದೊಡ್ಡ ನಗರವಾಗಿ ಉಳ್ಳಾಲವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿರುವ ಯೋಜನೆಗಳನ್ನು ಉಳ್ಳಾಲದಲ್ಲಿಯೂ ಕಾರ್ಯಗತ ಮಾಡುತ್ತಿದ್ದು ಮುಂದಿನ ಐದು ವರ್ಷಗಳಲ್ಲಿ ಉಳ್ಳಾಲ ಮಹತ್ತರವಾದ ಬದಲಾವಣೆಯಾಗಲಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಉಳ್ಳಾಲ ಪೌರಸಮಿತಿಯಿಂದ ನಗರಸಭಾ ಮೈದಾನದಲ್ಲಿ ನಡೆದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ‘ಕರುನಾಡ ಮಾಣಿಕ್ಯ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ನಾನು ಇಂದು ಸಚಿವನಾಗಿ ಕಾರ್ಯ ನಿರ್ವಹಿಸುವಲ್ಲಿ ಉಳ್ಳಾಲ ಕ್ಷೇತ್ರದ ಸರ್ವಧರ್ಮದ ಜನಸಾಮಾನ್ಯರ ಕೊಡುಗೆ ಅಪಾರವಾಗಿದೆ. ಈ ಕ್ಷೇತ್ರದಲ್ಲಿ ಅವರ ಶಾಸಕನಾಗದೆ ಜನಸೇವಕನಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಎಲ್ಲಾ ಜಾತಿಧರ್ಮದವರ ಸಹಕಾರ ಪಡೆದುಕೊಂಡು ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದ ಅವರು ಉಳ್ಳಾಲದ ಕೋಟೆಪುರ ಹಿಂದೆ ಮಿನಿ ಬಂದರಾಗಿತ್ತು. ಕೇರಳದ ಚೆರ್ವತ್ತೂರಿನಿಂದ ಮಂಗಳೂರನ್ನು ಸಂಪರ್ಕಿಸುವ ಮುಖ್ಯ ರಸ್ತೆ ಕೋಟೆಪುರವರೆಗೆ ಇತ್ತು. ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದ ಅವರು ಒಂಭತ್ತುಕೆರೆ ಆಶ್ರಯ…
UN NETWORKS ಉಳ್ಳಾಲ: ಸಮುದ್ರದ ಅಲೆಗಳ ಅಬ್ಬರ ಸೋಮವಾರ ಇನ್ನಷ್ಟು ಹೆಚ್ಚಿದ್ದು ಉಳ್ಳಾಲದ ಕೈಕೋ, ಹಿಲೆರಿಯಾನಗರದ ಮನೆಗಳಿಗೆ ಅಲೆಗಳು ಅಪ್ಪಳಿಸಿ 6 ಮನೆಗಳು ಭಾಗಶ: ಹಾನಿಗೊಂಡಿದೆ. 35 ಕುಟುಂಬಗಳು ಸ್ಥಳಾಂತರಗೊಂಡಿದ್ದಾರೆ. ಹಿಲಿರಿಯಾನಗರದ ಆಲಿಯಬ್ಬ , ಝೈನಾಬಿ, ಸಕೀನಾ , ಜಮೀಲಾ , ಸಾಕಿರಾ ಬಾನು, ರುಖಿಯಾ ಎಂಬವರ ಮನೆಗಳಿಗೆ ಅಲೆಗಳು ಅಪ್ಪಳಿಸುವುದರಿಂದ ಭಾಗಶ: ಹಾನಿಯಾಗಿದ್ದು, ವಾಸಿಸಲು ಅಸಾಧ್ಯವಾಗಿದೆ. ಭಾನುವಾರ ತಡರಾತ್ರಿಯಿಂದ ಅಲೆಗಳು ಮನೆಗಳಿಗೆ ಅಪ್ಪಳಿಸಲು ಆರಂಭವಾಗಿದ್ದು, ಸೋಮವಾರ ಮಧ್ಯಾಹ್ನದ ವೇಳೆ ಕೆಲ ಮನೆಗಳ ಅವಶೇಷಗಳು ಮಾತ್ರ ಉಳಿದಿದೆ. ಉಳ್ಳಾಲ ನಗರಸಭೆ ವತಿಯಿಂದ ಒಂಭತ್ತುಕೆರೆ ಸರಕಾರಿ ಶಾಲೆ ಮತ್ತು ಉಳ್ಳಾಲ ದರ್ಗಾ ವಠಾರದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಆದರೆ ಮನೆಮಂದಿ ಮಹಿಳೆಯರಿಗೆ ಅಲ್ಲಿ ನೆಲೆಸಲು ಅಸಾಧ್ಯ, ಎಂದು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಶಾಶ್ವತ ಪರಿಹಾರಕ್ಕೆ ಒತ್ತಾಯ : ಮುಕ್ಕಚ್ಚೇರಿ, ಹಿಲೆರಿಯಾನಗರ, ಕೈಕೋ ನಿವಾಸಿಗಳು ಮಧ್ಯಾಹ್ನ ಉಳ್ಳಾಲ ನಗರಸಭೆಗೆ ಮುತ್ತಿಗೆ ಹಾಕಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದರು. ಸ್ಥಳಕ್ಕೆ ಜನಪ್ರತಿನಿಧಿಗಳು ಬರುವುದು ಬೇಡ, ಅಧಿಕಾರಿಗಳೇ ಬಂದು…
UN NETWORKS ಮುಡಿಪು: ವಿದ್ಯಾರ್ಥಿ ಜೀವನದಲ್ಲಿ ಉತ್ತಮ ರೀತಿ ಸಂಸ್ಕಾರ ಬೆಳಸಿಕೊಂಡು ಬಂದರೆ ನಮ್ಮ ಜೀವನದಲ್ಲಿ ಯಶಸ್ಸು ಸಾಧ್ಯ. ವಿಧ್ಯಾರ್ಥಿಗಳು ಶಾಲಾ ದಿನಗಳಲ್ಲಿ ವಿದ್ಯಾರ್ಥಿ ಪರಿಷತ್ಗಳಲ್ಲಿ ತೊಡಗಿಸಿಕೊಂಡರೆ ನಾಯಕತ್ವ ಗುಣ ಬೆಳೆಯಲು ಸಾಧ್ಯ ಎಂದು ದ.ಕ ಪೋಲಿಸ್ ವರಿಷ್ಠಾಧಿಕಾರಿ ಡಾ| ಬಿ.ಆರ್ ರವಿಕಾಂತ್ ಗೌಡ ಅಭಿಪ್ರಾಯಪಟ್ಟರು. ಬಂಟ್ವಾಳ ತಾಲೂಕಿನ ಮುಡಿಪುವಿನ ಸೂರಜ್ ಸಮೂಹ ವಿದ್ಯಾ ಸಂಸ್ಥೆಯ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ಗೆ ಚಾಲನೆ ನೀಡಿ ಮಾತನಾಡಿದರು. ಸೂರಜ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ್ ಎಸ್. ರೇವಣ್ಕರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾದರು ಎಂಬ ಉದ್ದೇಶದಿಂದ 13 ವಿದ್ಯಾರ್ಥಿಗಳಿಂದ ಪ್ರಾರಂಭಿಸಿದ ಸಂಸ್ಥೆ ಇಂದು 900 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಎಲ್ಲರ ಸಹಕಾರ ದಿಂದ ಸಂಸ್ಥೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದು ಹೇಳಿದರು. ವಿದ್ಯಾರ್ಥಿ ಪರಿಷತ್ ನೂತನ ತಂಡಗಳ ಗುರುತಿನ ಗೌರವದ ಧ್ವಜವನ್ನು ತಂಡದ ನಾಯಕರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಡಾ| ಬಿ.ಆರ್. ರವಿಕಾಂತ್…
UN NETWORKS ಕೊಣಾಜೆ : ಮಕ್ಕಳಿಗೆ ಬಾಲ್ಯದಲ್ಲಿ ವಿದ್ಯೆಯ ಜೊತೆ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಬೇಕು, ಇದು ಮಗುವಿನ ಸರ್ವತೋಮಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಧನಲಕ್ಷಿ ಗಟ್ಟಿ ಅಭಿಪ್ರಾಯಪಟ್ಟರು. ವಿಶ್ವಮಂಗಳ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಶಾಲಾ ರಕ್ಷಕ – ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರೊ| ಇಸ್ಮಾಯಿಲ್ ಅವರು ಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತ, “ವಿಶ್ವಮಂಗಳ ಶಾಲೆಯ ವಿದ್ಯಾರ್ಥಿಗಳಿಗೆ ಬೇಕಾದ ಆದಷ್ಟುಹೆಚ್ಚಿನ ಸೌಕರ್ಯಗಳನ್ನು ಒದಗಿಸಿದೆ. ವಿದ್ಯಾರ್ಥಿಗಳು ಶಿಕ್ಷಕರಿಗೆ ಹಾಗೂ ಹೆತ್ತವರಿಗೆ ಗೌರವವನ್ನು ನೀಡಿ ಒಳ್ಳೆಯ ಶಿಕ್ಷಣವನ್ನು ಪಡೆಯಬೇಕು“ ಎಂದು ಹೇಳಿದರು. ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೊ| ಭೋಜ ಪೂಜಾರಿ, ಖಜಾಂಚಿಗಳಾದ ಡಾ| ಪರಮೇಶ್ವರ್, ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಪ್ರೊ|. ಶಿವಣ್ಣ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಅಂತು ಡಿ’ಸೋಜಾ ಉಪಸ್ಥಿತರಿದ್ದರು. ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾವತಿ ಸ್ವಾಗತಿಸಿದರು. ಪ್ರೌಢ ಶಾಲೆಯ ದೈಹಿಕ ಶಿಕ್ಷಕ ದಿಲೀಪ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ…
UN NETWORKS ಅಂಬ್ಲಮೊಗರು: ಅಂಬ್ಲಮೊಗರು ಗ್ರಾಮದ ತಿಲಕನಗರದಲ್ಲಿ ನಗರಪ್ರದೇಶದ ರೀತಿಯಲ್ಲಿ ಸರಕಾರದ ವಸತಿ ಸಂಕೀರ್ಣ ರಚಿಸಲು ಉದ್ದೇಶಿಸಲಾಗಿದ್ದು, ಇದು ರಾಜ್ಯದಲ್ಲೇ ಪ್ರಥಮ ಯೋಜನೆಯಾಗಿದೆ ಎಂದು ಅಂಬ್ಲಮೊಗರು ಗ್ರಾಮ ಪಂಚಾಯಿತಿನ ಅಧ್ಯಕ್ಷ ಎಸ್.ಎಂ ರಫೀಕ್ ಹೇಳಿದರು.ಅವರು ಅಂಬ್ಲಮೊಗರು ಗ್ರಾಮ ಪಂಚಾಯಿತಿನ 2018-19 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಿಲಕನಗರದಲ್ಲಿ ವಸತಿ ಸಂಕೀರ್ಣ : ಅಂಬ್ಲಮೊಗರು ಗ್ರಾಮದ ತಿಲಕನಗರದಲ್ಲಿ ಸರಕಾರದ ವಸತಿ ಸಂಕೀರ್ಣ ರಚಿಸುವ ಉದ್ದೇಶವನ್ನು ಸಚಿವರು ಇಟ್ಟುಕೊಂಡಿದ್ದಾರೆ. ಜಾಗವನ್ನು ಸ್ಲಂ ಬೋರ್ಡಿಗೆ ಸೇರಿಸುವ ಮೂಲಕ ನಗರ ವ್ಯಾಪ್ತಿಗಳಲ್ಲಿ ಬರುವಂತಹ ವಸತಿ ಸಂಕೀರ್ಣ ನಿರ್ಮಿಸಲಾಗುವುದು. ಪ್ರತಿಯೊಂದು ಮನೆಯಲ್ಲಿ ಎರಡು ಬೆಡ್ ರೂಂ , ಹಾಲ್ ಮತ್ತು ಅಡುಗೆ ಕೋಣೆಯಿರುತ್ತದೆ. ಕರ್ನಾಟಕದಲ್ಲೇ ಇದು ಮೊದಲ ಯೋಜನೆಯಾಗಿದೆ. ಗ್ರಾಮಸ್ಥರಿಗೆ ಇದೊಂದು ಒಳ್ಳೆಯ ಅವಕಾಶ ಎಂದಿದ್ದಾರೆ. ಬೀದಿ ದೀಪ ಸಮಸ್ಯೆ : ಗ್ರಾಮದಲ್ಲಿ ಬೀದಿ ದೀಪಗಳ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಸಂಜೆ ನಂತರ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಅನ್ನುವ ಮಹಿಳೆಯ…
UN NETWORKS ಸೋಮೇಶ್ವರ: ಸೋಮೇಶ್ವರ ದೇವಸ್ಥಾನದ ದೇವರ ಕೆರೆಯಲ್ಲಿ ಮೀನು ಮರಿ ಬಿತ್ತನೆ ಕಾರ್ಯಕ್ರಮ ಭಾನುವಾರ ನಡೆಯಿತು. ಕುಂಪಲ ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ , ಕೇಸರಿ ಮಾತೃ ಮಂಡಳಿ ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮೀನುಗಾರಿಕಾ ಇಲಾಖೆ, ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ರೋಟರಿ ಕ್ಲಬ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಪಂಚಾಯತ್ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಸುಶ್ಮಿತಾ ರಾವ್ ಇವರು ಕೆರೆಗಳ ಸ್ವಚ್ಛತೆಯಲ್ಲಿ ಮೀನುಗಳ ಪಾತ್ರಗಳ ಬಗ್ಗೆ ತಿಳಿಸಿದರು. ಈ ಸಂದರ್ಭ ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ , ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ರೊಟೇರಿಯನ್ ಮಾಧವ ಸುವರ್ಣ, ಕೇಸರಿ ಮಿತ್ರ ವೃಂದದ ಅಧ್ಯಕ್ಷ ನವೀನ್ ಕುಜುಮಗದ್ದೆ, ಟ್ರಸ್ಟಿ ಬಿ. ನಾರಾಯಣ ಕುಂಪಲ, ಶಿವಪ್ರಕಾಶ್ ಉಪಸ್ಥಿತರಿದ್ದರು. ಸಂದೀಪ್ ಕುಂಪಲ ಸ್ವಾಗತಿಸಿದರು. ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭ ಸುಮಾರು…
UN NETWORKS ಉಳ್ಳಾಲ: ಪರಿಸರ ಎಂದರೆ ಕೇವಲ ಮರ ಬಳ್ಳಿಗಳು ಮಾತ್ರ ಅಲ್ಲ, ಭೌಗೋಳಿಕ, ಜೈವಿಕವಾಗಿ ದೇವರ ಸೃಷ್ಟಿಯಾಗಿದೆ. ಆದರೆ ಇದನ್ನು ಉಳಿಸಬೇಕಾದ ನಾವು ಸಾಮಾಜಿಕ ಪರಿಸರ ಕಾಳಜಿ ಮರೆತಿದ್ದೇವೆ ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಅಭಿಪ್ರಾಯಪಟ್ಟರು. ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯಲ್ಲಿ ರತ್ನ ಇಕೋ ಕ್ಲಬ್ ವತಿಯಿಂದ ಶನಿವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡಗಳನ್ನು ವಿತರಿಸಿ ಮಾತನಾಡಿದರು.ಕಾಡು ಕಡಿಮೆಯಾದಾಗ ಕಾಡುಪ್ರಾಣಿಗಳು, ಸರೀಸೃಪಗಳು ನಾಡಿಗೆ ಬರುವ ಪ್ರಮೇಯ ಬರುತ್ತದೆ. ನಮ್ಮ ಹಿರಿಯರು ಗಿಡ ನೆಟ್ಟು ಬೆಳೆಸಿದ್ದರಿಂದ ನಾವಿಂದು ಹಣ್ಣು, ಇತರ ಆಹಾರ ವಸ್ತುಗಳನ್ನು ಸೇವಿಸುತ್ತಿದ್ದೇವೆ. ಮುಂದಿನ ಪೀಳಿಗೆಗೂ ಮುಂದುವರಿಯಬೇಕಾದರೂ ಇಂದೇ ಗಿಡ ನೆಡಬೇಕಾಗುತ್ತದೆ. ಪ್ರತಿವರ್ಷ ಹುಟ್ಟುಹಬ್ಬ ಆಚರಿಸುವ ಸಂದರ್ಭ ಸವಿ ನೆನಪಿಗಾಗಿ ಗಿಡ ನೆಟ್ಟು ಬೆಳೆಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಹೇಳಿದರು. ಹರೇಕಳ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ.ರವೀಂದ್ರ ರೈ ಮಾತನಾಡಿ, ಶಿಕ್ಷಣದ ಜೊತೆಗೆ ಮಾನವೀಯತೆ ಬಿಂಬಿಸುವ ಕಾರ್ಯಕ್ರಮದೊಂದಿಗೆ ಸಂಸ್ಕಾರ ಕಲಿಸುವ ಕೆಲಸ ಆಂಗ್ಲಮಾಧ್ಯಮ ಶಾಲೆಯಲ್ಲಿ…

