Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಕೇರಳದಿಂದ ಗಾಂಜಾವನ್ನು ಅಕ್ರಮವಾಗಿ ತಂದು ಮಂಗಳೂರು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಕಾರು ಸಮೇತ ಸಿಸಿಬಿ ಪೊಲೀಸರು ತಲಪಾಡಿ ಟೋಲ್ ಗೇಟ್ ಸಮೀಪ ಭಾನುವಾರ ಬಂಧಿಸಿದ್ದಾರೆ. ಕಾಟಿಪಳ್ಳ ಕೃಷ್ಣಾಪುರದ ಕೇಶವ ಸನಿಲ್ (47) ಬಂಧಿತ ಆರೋಪಿ. ಕಾರಿನಲ್ಲಿ ಗಾಂಜಾ ತಂದು ಮಂಗಳೂರು ನಗರದಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿ ಪಡೆದ ಸಿಸಿಬಿ ತಂಡ ತಡೆಹಿಡಿದು ಬಂಧಿಸಿದ್ದಾರೆ. ಬಂಧಿತನಿಂದ 1.830 ಕೆಜಿ ಗಾಂಜಾ, ಮೊಬೈಲ್ ಫೋನ್ ಹಾಗೂ ಹುಂಡೈ ಇಯಾನ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ.2,85,500 ಎಂದು ಅಂದಾಜಿಸಲಾಗಿದೆ. ಈತ ಕೇರಳ ಮೂಲದ ವ್ಯಕ್ತಿಯಿಂದ ಗಾಂಜಾ ಖರೀದಿಸಿ ಮಂಗಳೂರು ನಗರದಲ್ಲಿ ಮಾರಾಟಕ್ಕೆ ತಂದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದು, ಹೆಚ್ಚಿನ ತನಿಖೆಗಾಗಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಲಾಗಿದೆ. ಈತನ ವಿರುದ್ಧ ಮುಲ್ಕಿ ಠಾಣೆಯಲ್ಲಿ ಕೊಲೆಯತ್ನ, ಸುರತ್ಕಲ್ ಠಾಣೆಯಲ್ಲಿ ಕೊಲೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಒಟ್ಟು 12…

Read More

UN NETWORKS ಮಂಜನಾಡಿ : ಕಲ್ಕಟ್ಟ ಜಂಕ್ಷನನ್ನು ಸುಸಜ್ಜಿತವಾಗಿ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ರೂಪಿಸಲಾಗುವುದು, ವಿಶೇಷ ಅನುದಾನ ಮಂಜೂರುಗೊಳಿಸಿದ ತಕ್ಷಣವೇ ಜಂಕ್ಷನ್ನಿನ ಚಿತ್ರಣ ಬದಲಾವಣೆಯಾಗಲಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಕಲ್ಕಟ್ಟದ ಎಸ್ಸೆಸ್ಸೆಫ್ ಮತ್ತು ತಕ್ವತುಲ್ ಇಸ್ಲಾಂ ಯಂಗ್‍ಮೇನ್ಸ್ ಅಸೋಶಿಯೆಷನ್ ಇವರು ಮಂಜನಾಡಿ ಗ್ರಾಮದ ಕಲ್ಕಟ್ಟದಲ್ಲಿ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಬಸ್ಸು ತಂಗುದಾಣ ಉದ್ಘಾಟಿಸಿ ಮಾತನಾಡಿದರು. ಎಸ್ಸೆಸ್ಸೆಫ್ ಸಂಘಟನೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ತೊಡಗಿಸಿಕೊಂಡು ಪ್ರವಾದಿಯವರ ಸದ್ಗುಣಗಳ ಅಳವಡಿಸಿಕೊಂಡು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂಧಿಸುತ್ತಾ ಬಂದಿದೆ. ಇದೀಗ ಎಲ್ಲಾ ಧರ್ಮದ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಬಸ್ಸು ನಿಲ್ದಾಣದ ವ್ಯವಸ್ಥೆಯನ್ನು ಕಲ್ಪಿಸುವ ಮುಖೇನ ವಿವಿಧ ಸಂಘಟನೆಗಳಿಗೆ ಆದರ್ಶವಾಗಿ ನಿಂತಿದೆ. ಕಲ್ಕಟ್ಟ ಪ್ರದೇಶ ಮಂಜನಾಡಿ ಗ್ರಾಮದ ಕೇಂದ್ರ ಭಾಗವಾಗಿದೆ. ಮಂಗಳಾಂತಿ ಎರಡು ಕಣ್ಣುಗಳಾಗಿ ಪರಿವರ್ತನೆಯಾಗಿದೆ. ಪ್ರದೇಶದ ದೇವಸ್ಥಾನ ಮತ್ತು ಮಸೀದಿಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಎಲ್ಲಾ ಧರ್ಮದವರು ಸೇರಿಕೊಂಡು ನಡೆಸುತ್ತಾ ಬರುವುದು ಗ್ರಾಮದ ಜನರ ಸಹೋದರತೆಗೆ ಸಾಕ್ಷಿಯಾಗಿದೆ. ಕಲ್ಕಟ್ಟ ಜಂಕ್ಷನ್ನಿನ ಅಭಿವೃದ್ಧಿಗೆ ವಿಶೇಷ…

Read More

UN NETWORKS ಮಂಗಳೂರು: ಉಮ್ರಾ ಹಾಗೂ ಇತರ ಯಾತ್ರಿಕರ ಅನುಕೂಲಕ್ಕಾಗಿ ಮಂಗಳೂರಿನಿಂದ ನೇರ ವಿಮಾನ ವ್ಯವಸ್ಥೆ ಮಾಡಬೇಕೆಂದು DK HUPTOA ದಕ್ಷಿಣ ಕನ್ನಡ ಹಜ್ಜ್ ಮತ್ತು ಉಮ್ರಾ ಟೂರ್ ಅಪರೇಟರ್ ಸಂಘ ಒತ್ತಾಯಿಸಿದೆ. ಸಂಘವು ಈ ಬಗ್ಗೆ ಕರ್ನಾಟಕ ಸರ್ಕಾರದ ಹಜ್ಜ್ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಗ್ರಾಹಕರ ವ್ಯವಹಾರಗಳ ಸಚಿವ ಝಮೀರ್ ಅಹ್ಮದ್ ಅವರಿಗೆ ಮನವಿ ಸಲ್ಲಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ತಮಗೆ ತಿಳಿದಿರುವಂತೆ ಗಣನೀಯವಾಗಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವು ಸಾಂಪ್ರದಾಯಿಕವಾಗಿ ವಾಸಿಸುತ್ತಿರುವ ಜಿಲ್ಲೆಯಾಗಿರುತ್ತದೆ. ಮಂಗಳೂರು ಕೇಂದ್ರೀಕೃತ ದ.ಕ. ಜಿಲ್ಲೆಯಿಂದ ಈ ಹಿಂದೆ ಅಸಂಖ್ಯಾತ ಉಮ್ರಾ ಯಾತ್ರಾರ್ಥಿಗಳು ಪವಿತ್ರ ಉಮ್ರಾ ಕಾರ್ಯ ನಿರ್ವಹಿಸಲು ಈ ಹಿಂದೆ ಬೆಂಗಳೂರು , ಕೋಝೀಕೊಡು ಮತ್ತು ಮುಂಬಯಿಯ ಮೂಲಕ ಪ್ರಯಾಣ ಮಾಡಿರುತ್ತಾರೆ. ಪ್ರಸ್ತುತ, ಯಾತ್ರಾರ್ಥಿಗಳು ಹಿರಿಯ ನಾಗರಿಕರಾಗಿರುವುದರಿಂದ, ಮಂಗಳೂರಿನಿಂದ ರಾಜ್ಯದ ರಾಜಧಾನಿಯಾದ ಬೆಂಗಳೂರಿಗೆ ಸುಮಾರು 400 ಕಿ.ಮೀಟರ್ ನಷ್ಟು ಯಾ ದೂರದ ಮುಂಬೈ ನಿಂದ ಬಸ್ಸು ಮಾರ್ಗ ಯಾ ಖಾಸಗಿ ವಾಹನ ಯಾ…

Read More

UN NETWORKS ನರಿಂಗಾನ : ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ ಬಳಿ ಮನೆಯೊಂದರ ಸಮೀಪವೇ ಮಣ್ಣುಕುಸಿದ ಪರಿಣಾಮ ಮನೆ ಅಪಾಯದಂಚಿನಲ್ಲಿದೆ. ನರಿಂಗಾನದ ತೌಡುಗೋಳಿ ಸಮೀಪದ ಮೋರ್ಲ ಬಳಿಯ ಗುಲಾಬಿ ಶೆಟ್ಟಿ ಎಂಬವರ ಮನೆಯ ಬಳಿ ಶುಕ್ರವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಗೆ ಮಣ್ಣು ಕುಸಿದು ಬಿದ್ದಿದೆ. ಇವರ ಮನೆ ಸಮೀಪ ನೀರು ಹರಿಯುವ ತೋಡು ಇದ್ದು ಇದರ ಬಳಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ತೆಂಗಿನ ಮರವೊಂದು ಬೀಳುವ ಸ್ಥಿತಿಯಲ್ಲಿದ್ದು ಅಲ್ಲದೆ ಮನೆಯು ಕೂಡಾ ಕುಸಿತದ ಅಪಾಯದಲ್ಲಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮ ಕರಣಿಕ ತೌಫಿಕ್ ಹಾಗೂ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿ ಅವರು ಜೊತೆಗಿದ್ದರು.

Read More

UN NETWORKS ತೊಕ್ಕೊಟ್ಟು: ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ನಿರಂತರವಾಗಿ ತೊಂದರೆ ಅನುಭವಿಸುತ್ತಿದ್ದು, ವಿಳಂಬ ನೀತಿ ಅನುಸರಿಸಿದ ಸಂಸದರ ಹಾಗೂ ಕೇಂದ್ರ ಸರಕಾರದ ಆಡಳಿತ ವೈಫಲ್ಯ ವಿರುದ್ಧ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಹೇಳಿದ್ದಾರೆ. ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕೇಂದ್ರ ಸರಕಾರದ ಆಡಳಿತ ವೈಫಲ್ಯ ಖಂಡಿಸಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಪ್ರಧಾನಿ ಮೋದಿ ಅವರು ಆಡಳಿತದ ಚುಕ್ಕಾಣಿ ಹಿಡಿದು ನಾಲ್ಕು ವರ್ಷ ಕಳೆದರೂ ಚುನಾವಣಾ ಪೂರ್ವ ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ . ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಬೆಲೆ ಹೆಚ್ಚಿದ್ದರೂ ಯುಪಿಎ ಸರಕಾರದ ಅವಧಿಯಲ್ಲಿ ಬೆಲೆ ನಿಯಂತ್ರಣಕ್ಕೆ ತಂದಿತ್ತು. ಈಗ ತೈಲ ಬೆಲೆ ಬ್ಯಾರಲ್ ಗೆ ಕಡಿಮೆಯಾದರೂ ಮೋದಿ ಕಡಿತಗೊಳಿಸಿಲ್ಲ. ನೋಟು ಅಮಾನ್ಯೀಕರಣ, ಜಿಎಸ್ ಟಿ ಅಂಬಾನಿ ಅದಾನಿ ಯಂತಹ ಬಂಡವಾಳಶಾಹಿಗಳಿಗೆ ಸಹಾಯ ಮಾಡಿತೇ ವಿನಹ ಜನಸಾಮಾನ್ಯರಿಗೆ ಪ್ರಯೋಜನವಾಗಿಲ್ಲ. ರೈತರೇ ಬೆನ್ನೆಲುಬು ಎಂದು…

Read More

UN NETWORKS ಉಳ್ಳಾಲ: ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯ ಜೊತೆಗೆ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಅನುಕೂಲಕರವಾದ ಮಿತದರದಲ್ಲಿ ಶಸ್ತ್ರಚಿಕಿತ್ಸೆ ನಡೆಸಿಕೊಂಡು ಬರುತ್ತಿರುವ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯ ಶ್ಲಾಘನೀಯ ಎಂದು ರಾಜ್ಯ ಆಹಾರ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟರು. ದೇರಳಕಟ್ಟೆ ಯೇನೆಪೋಯ ಆಸ್ಪತ್ರೆಯಲ್ಲಿ ಶನಿವಾರ ನಡೆದ ರೊಬೊಟಿಕ್ ಮತ್ತು 3ಡಿ ನೆಫ್ರೋಸ್ಕೋಪಿ ನೇರ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಉದ್ಯಮಿಗಳು ವ್ಯಾಪಾರದ ದೃಷ್ಟಿಕೋನವನ್ನು ಇಟ್ಟುಕೊಂಡೇ ಮುಂದುವರಿಯುವವರು. ಆದರೆ ಯೆನೆಪೋಯ ಸಂಸ್ಥೆ ಮಾಲೀಕರು ಉದ್ಯಮಿಯಾದರೂ ಬಡವರ್ಗದವರ ಸೇವೆ ಮಾಡುವ ಹಿತದೃಷ್ಟಿಯನ್ನು ಇಟ್ಟುಕೊಂಡು ಮುಂದುವರಿಯುತ್ತಿದ್ದಾರೆ. ಇತರೆ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಂದ ಯೇನೆಪೋಯ ವಿವಿ ಅಂತಹ ದೃಷ್ಟಿಕೋನದಿಂದ ಹೊರತಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ರೋಬೊ ಮೂಲಕ ನಡೆಸುವ ಒಂದು ಶಸ್ತ್ರಚಿಕಿತ್ಸೆಗೆ ಐದು ಲಕ್ಷ ವೆಚ್ಚ ತಗಲುತ್ತದೆ ಬಡವರಿಗೆ ಅಸಾಧ್ಯವಾಗಿರುವ ಶಸ್ತ್ರ ಚಿಕಿತ್ಸೆ ಕಳೆದ ಎರಡು ವರ್ಷಗಳಲ್ಲಿ 250 ಬಡ ರೋಗಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸಂಸ್ಥೆ…

Read More

UN NETWORKS ಹರೇಕಳ: ಜಗತ್ತಿನಾದ್ಯಂತ ಖ್ಯಾತಿಯನ್ನು ಗಳಿಸಿರುವ ಹರೇಕಳ ಮೆಣಸು ಸಹಿತ ಇತರೆ ಕೃಷಿಕಾಯಕ ನಡೆಸುವ ಹರೇಕಳದ ಎಕರೆಗಟ್ಟಲೆ ಭೂಮಿ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹಾಗೂ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಬಂಜರು ಆಗಿ ಪರಿವರ್ತನೆಗೊಂಡಿದೆ ಎಂದು ರೈತ ಸಂಘ(ಹಸಿರು ಸೇನೆಯ ) ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಹೇಳಿದ್ದಾರೆ. ಹರೇಕಳ ಸಂಪಿಗೆದಡಿ, ಕುತ್ತಿಮೊಗೇರು ಸಂಪೂರ್ಣ ಕೃಷಿಭೂಮಿಯನ್ನೇ ಹೊಂದಿದೆ. ಇಲ್ಲಿ ಈಗಲೂ ಭತ್ತ, ಕಬ್ಬು, ಮೆಣಸು ಬೆಳೆಯಲಾಗುತ್ತಿದೆ. ಆದರೆ ಸುಮಾರು 200 ಎಕರೆಯಷ್ಟು ಕೃಷಿಭೂಮಿ ಸಂಪೂರ್ಣ ಬರಡಾಗಿದೆ. ಇದಕ್ಕೆ ಕಾರಣ ಆಧುನಿಕತೆಯ ನಾಗಲೋಟ, ಅಧಿಕಾರಿ ವರ್ಗ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಎನ್ನುವುದು ಸತ್ಯ. ಹತ್ತು ವರ್ಷಗಳ ಹಿಂದೆ ಈ ಭಾಗದಲ್ಲೂ ಗುಡ್ಡ ಅಗೆದು ರಸ್ತೆ ನಿರ್ಮಿಸಲಾಯಿತು. ಆದರೆ ಇದು ರೈತರ ಪಾಲಿಗೆ ಶಾಪವಾಯಿತು. ರಸ್ತೆಯೇನೋ ಆಯಿತು, ಆದರೆ ನೀರು ಹರಿಯಲು ಚರಂಡಿ ವ್ಯವಸ್ಥೆಯಾಗಲಿಲ್ಲ. ಇದರ ಪರಿಣಾಮ ಒಂದೆಡೆ ಗುಡ್ಡದಿಂದ ಮಳೆನೀರು ಮಣ್ಣಿನೊಂದಿಗೆ ಹರಿದು ಗದ್ದೆ ಸೇರಿತು. ಪ್ರತೀ ಮಳೆಗಾಲದಲ್ಲೂ ಗದ್ದೆಗೆ ನೀರು ಹರಿದು ಸಂಪೂರ್ಣ…

Read More

UN NETWORKS ಸುರತ್ಕಲ್ : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಎಂಬಲ್ಲಿ ಅಕ್ರಮವಾಗಿ ಡೀಸೆಲ್ ಮತ್ತು ಫರ್ನಿಶ್ ಆಯಿಲ್ ಸಂಗ್ರಹಿಸಿಟ್ಟ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಡೀಸೆಲ್, ಫರ್ನಿಶ್ ಆಯಿಲ್ ಹಾಗೂ ಇತರ ಉತ್ಪನ್ನಗಳನ್ನು ವಶಪಡಿಸಿಕೊಂಡಿರುತ್ತಾರೆ. ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಎಂಬಲ್ಲಿ ಅಕ್ರಮವಾಗಿ ಡೀಸೆಲ್, ಫರ್ನಿಶ್ ಆಯಿಲ್ ಕಳ್ಳತನ ಮಾಡಿ ಸಂಗ್ರಹಿಸಿಟ್ಟ ಬಗ್ಗೆ ಮಾಹಿತಿಯ ಆಧಾರದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಸುರತ್ಕಲ್ ಪೊಲೀಸರು ದಾಳಿ ನಡೆಸಿ ಈ ಕೃತ್ಯದಲ್ಲಿ ಭಾಗಿಯಾದಕುಳಾಯಿಗುಡ್ಡೆ ನಿವಾಸಿ ಸಂತೋಷ್, ಪ್ರಾಯ(36)ಎಂಬಾತನನ್ನು ವಶಕ್ಕೆ ಪಡೆದುಕೊಂಡು, ಸದ್ರಿ ಸ್ಥಳದಲ್ಲಿ ದೊರೆತ 10 ಬ್ಯಾರೆಲ್ ಫರ್ನಿಶ್ ಆಯಿಲ್, 2 ಬ್ಯಾರೆಲ್ ಡೀಸೆಲ್, 3ಟ್ಯಾಂಕರ್ ಗಳು, 2 ದ್ವಿಚಕ್ರ ವಾಹನಗಳು, ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 20 ಲಕ್ಷ ಆಗಬಹುದು. ಈ ದಂಧೆಯನ್ನು ಆರೋಪಿಯು ಎಂ. ಆರ್.ಪಿ.ಎಲ್ ನಿಂದ ಡೀಸೆಲ್ ಹಾಗೂ ಫರ್ನಿಶ್ ಆಯಿಲ್…

Read More

UN NETWORKS ಮುಡಿಪು :ರಿಕ್ಷಾ ಮತ್ತು ಬಸ್ಸಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಸಹಿತ ರಿಕ್ಷಾ ಚಾಲಕ ಸೇರಿ 8 ಮಂದಿ ಗಾಯಗೊಂಡಿರುವ ಘಟನೆ ಮುಡಿಪು ಮೂಳೂರು ರಸ್ತೆ ನಡುವೆ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮುಡಿಪು ಭಾರತಿ ಶಾಲಾ ವಿದ್ಯಾರ್ಥಿಗಳಾದ , ಮೂಳೂರು ಹಾಗೂ ಇರಾ ನಿವಾಸಿಗಳಾದ ಹಝರತ್ (9), ಅಫ್ವಾನಾ (7), ತಪ್ಸೀರಾ (19), ಸಫ್ವಾನ್ (15) , ಅಸ್ನಾ , ದಿವ್ಯಾ(9) , ಧನ್ಯಾ (12) ಹಾಗೂ ರಿಕ್ಷಾ ಸಮೀರ್ (24) ಗಾಯಗೊಂಡವರು. ಕಿರಿದಾದ ರಸ್ತೆಯಲ್ಲಿ ಬೈಕೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮೂಳೂರಿನಿಂದ ಮುಡಿಪು ಕಡೆಗೆ ವಿದ್ಯಾರ್ಥಿಗಳನ್ನು ಹೇರಿಕೊಂಡು ಬರುತ್ತಿದ್ದ ರಿಕ್ಷಾ ಮುಡಿಪುವಿನಿಂದ ಬಿ.ಸಿ.ರೋಡು ಕಡೆಗೆ ತೆರಳುತ್ತಿದ್ದ ಬಸ್ಸಿನ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

UN NETWORKS ಉಳ್ಳಾಲ: ಬಿಜೆಪಿಗಿಂತ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ಸೇ ದೊಡ್ಡ ಶತ್ರುವಾಗಿದೆ. ಜಿಲ್ಲೆಯಾದ್ಯಂತ ಪಕ್ಷದ ಮುಖಂಡರನ್ನು ದೂರ ಇಡುವ ಮೂಲಕ ಜೆಡಿಎಸ್ ಅನ್ನು ಮುಗಿಸುವ ಪ್ರಯತ್ನ ಕಾಂಗ್ರೆಸ್ಸಿಗರಿಂದ ಆಗುತ್ತಿದೆ ಎಂದು ಜಿಲ್ಲಾ ಜಾತ್ಯಾತೀತ ಜನತಾದಳದ ಅಧ್ಯಕ್ಷ ಮುಹಮ್ಮದ್ ಕುಂಞ ಹೇಳಿದ್ದಾರೆ. ಅವರು ಉಳ್ಳಾಲ ನಗರ ಜಾತ್ಯಾತೀತ ಜನತಾದಳದ ಉಳ್ಳಾಲ ಸಮುದಾಯ ಭವನದಲ್ಲಿ ಜರಗಿದ ಕಾರ್ಯಕರ್ತರ, ಅಭಿಮಾನಿಗಳ, ಹಿತೈಷಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ಪ್ರತಿಯೊಂದು ಸರಕಾರದ ಕಾರ್ಯಕ್ರಮಗಳಲ್ಲಿ ಜನತಾದಳದ ಮುಖಂಡರನ್ನು ದೂರ ಇಡುವ ಪ್ರಯತ್ನ ಕಾಂಗ್ರೆಸ್ಸಿನಿಂದ ಆಘುತ್ತಿದೆ. ಪಕ್ಷದ ನಾಯಕರನ್ನು ಅನುಮಾನ ಮೂಡಿಸುವ ರೀತಿಯಲ್ಲಿ ನೋಡಲಾಘುತ್ತಿದೆ. ಉಳ್ಳಾಲದಲ್ಲಿಯೂ ಜೆಡಿಎಸ್ ಅನ್ನು ಮುಗಿಸುವ ಪ್ರಯತ್ನಗಳು ಮುಂದುವರಿದಿದೆ. ಇದಕ್ಕೆ ವೇದಿಕೆಯಲ್ಲಿ ಕುಳಿತುಕೊಳ್ಳುವ ಮುಖಂಡರು ಒಗ್ಗಟ್ಟಾಗಬೇಕಿದೆ. ಜಿಲ್ಲೆಯಲ್ಲಿರುವ ನಾಯಕರು ಸರಿಯಾಗಿ ಉಳ್ಳಾಲ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಸ್ತಿತ್ವಕ್ಕೆ ಬರುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿಧಾನಸಭಾ ಚುನಾವಣೆ ವೇಳೆ ಅಭ್ಯರ್ಥಿಗಳ ಆಯ್ಕೆ ಮಾಡದ ರೀತಿಯಲ್ಲಿ, ಸೂಕ್ತ, ಸಮಾಜಮುಖಿ, ಪ್ರಾಮಾಣಿಕರಾಗಿ, ಜನಬೆಂಬಲಿಸುವ ಅಭ್ಯರ್ಥಿಗಳನ್ನು ಗುರುತಿಸಿ ಉಳ್ಳಾಲ ನಗರಸಭೆಯ…

Read More