Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಉಳ್ಳಾಲ ದರ್ಗಾ ನನಗೆ ಹೊಸತೇನಲ್ಲ. ಕಳೆದ 35 ವರ್ಷಗಳಿಂದ ನಾನು ಕುಟುಂಬ ಸಮೇತವಾಗಿ ದರ್ಗಾಕ್ಕೆ ಪ್ರಾರ್ಥನೆಗೆ ಬರುತ್ತಿದ್ದೆವು. ಬನಾತ್ ಕಾಲೇಜಿಗೆ ಸರಕಾರ ಮಂಜೂರು ಮಾಡಲಾಗಿರುವ 2ಕೋಟಿ ರೂ. ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಅಲ್ಲದೇ ಭಕ್ತಾದಿಗಳಿಗೆ ಅನ್ನಾಹಾರ ಒದಗಿಸುವ ಪಾಕಶಾಲೆಗೆ ನನ್ನ ವೈಯ್ಯಕ್ತಿಕವಾಗಿ 10 ಲಕ್ಷ ರೂ ನೀಡುತ್ತೇನೆ ಎಂದು ವಕ್ಫ್ ಖಾತೆ ಸಚಿವ ಝಮೀರ್ ಅಹ್ಮದ್ ಹೇಳಿದರು. ಅವರು ಶುಕ್ರವಾರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ ಸಂದರ್ಭ ಪಾಕ ಶಾಲೆಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ಉಳ್ಳಾಲ ದರ್ಗಾದಲ್ಲಿ ಭಕ್ತಾದಿಗಳ ಸಂಖ್ಯೆ ಬಹಳಷ್ಟಿದೆ. ಭಕ್ತಾದಿಗಳಿಗೆ ಅನ್ನಾಹಾರ ನೀಡುವುದು ಉತ್ತಮ ಯೋಜನೆ. ಪಾಕ ಶಾಲೆ ನಿರ್ಮಾಣಕ್ಕೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸಚಿವ ಖಾದರ್ ಜತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡುವ ವ್ಯವಸ್ಥೆಮಾಡುತ್ತೇವೆ ಎಂದು ಭರವಸೆ ನೀಡಿದರು. ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಸರಕಾರಕ್ಕೆ ದರ್ಗಾ ಸಮಿತಿ ರೂ.1.48 ಕೋಟಿ ಪಾವತಿಸುವಂತೆ ವಕ್ಫ್ ಬೋರ್ಡ್ ಬೇಡಿ ಇಟ್ಟಿದೆ.…

Read More

UN NETWORKS ಹರೇಕಳ: ಹರೇಕಳ ಗ್ರಾಮದ ಬಾವಲಿಗುರಿ ಬಸ್ ನಿಲ್ದಾಣದ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಬಾವಲಿಗುರಿಯ ಮಹಮ್ಮದ್ ಯಾನೆ ಮಾಮು(42), ನ್ಯೂಪಡ್ಪುವಿನ ಮಹಮ್ಮದ್ ನಿಝಾಮ್(24) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 500 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಹರೇಕಳ ಗ್ರಾಮದ ನ್ಯೂಪಡ್ಪು ಎಂಬಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮಂಜನಾಡಿ ಮಂಗಳಾಂತಿಯ ಅಹ್ಮದ್ ಕಬೀರ್(32) ಎಂಬಾತನನ್ನು ಕೂಡಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕೊಣಾಜೆ ಠಾಣಾ ಅಧಿಕಾರಿ, ಸಿಬ್ಬಂದಿ ಮತ್ತು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಭಾಗವಹಿಸಿದ್ದರು.

Read More

UN NETWORKS ಪಂಪವೆಲ್: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಇಂದು ಪಂಪವೆಲ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ಮತ್ತು ರಸ್ತೆ ಅವೈಜ್ಞಾನಿಕ ವಿರುದ್ಧ ಇಂದು ಪಂಪವೆಲ್ ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಯುವ ಜನತಾದಳದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಮತ್ತು ಜಿಲ್ಲಾ ಸಂಸದರ ವಿರುದ್ಧ ಘೋಷಣೆಗಳನ್ನು ಕೂಗುವುದು ಕೇಳಿಬಂತು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಜನತಾದಳದ ಆಕ್ಷಿತ್ ಸುವರ್ಣ ಅವರು ಜಿಲ್ಲೆಯ ಸಂಸದರು ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದೆ ಕೇವಲ ಸುಳ್ಳು ಆಶ್ವಾಸನೆ ಮುಖಾಂತರ ಜನರಿಗೆ ಕಣ್ಣಿಗೆ ಮೋಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 7-8 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಇಲ್ಲಿಯವರೆಗೂ ಕೂಡ ಪೂರ್ಣಗೊಳ್ಳದೇ ಅನೇಕ ಸಾವು ನೋವಿಗೆ ಕಾರಣವಾಗಿರುವ ಸಂಸದರನ್ನು ಈ ಬಾರಿ ತಿರಷ್ಕರಿಸಬೇಕು ಎಂದು ತಿಳಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಬಿ.ಮಹಮ್ಮದ್ ಕುಂಞ ವಿಟ್ಲ ಈ ಮೇಲ್ಸೇತುವೆಯಿಂದ…

Read More

UN NETWORKS ಕೊಣಾಜೆ: `ಭಾರತೀಯರೆಲ್ಲರೂ ಒಳ್ಳೆಯವರು ಅನ್ನುವ ವಿಶ್ವಾಸವಿದೆ. ಇದೀಗ ಬಸ್ಸಿನಲ್ಲಿ ಕಳೆದುಕೊಂಡಿರುವ ಐಫೋನ್ ಮೊಬೈಲನ್ನು ಹಿಂತಿರುಗಿಸಿದ ಬಸ್ಸು ನಿರ್ವಾಹಕರ ಪ್ರಾಮಾಣಿಕತನ ನನ್ನನ್ನು ಭಾರತೀಯರ ಮೇಲಿನ ಪ್ರೀತಿಯನ್ನು ಹಾಗೂ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ ‘ ಎಂದು ಬಸ್ಸಿನಲ್ಲಿ ಐಫೋನ್ ಮೊಬೈಲನ್ನು ಕಳೆದುಕೊಂಡಿದ್ದ ಅಪಘಾನಿಸ್ತಾನ ಮೂಲದ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯ ಮನದಾಳದ ಮಾತು. ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಾಂಗ ಮಾಡುತ್ತಿರುವ ಸದಾಂ ಮುಕ್ರೇಷಿ ಮೂಲತ: ಅಪಘಾನಿಸ್ತಾನದ ಮಿರ್ ಖಾಸೇಂ ನಿವಾಸಿ. ಪ್ರಥಮ ವರ್ಷ ಪದವಿ ವಿದ್ಯಾಭ್ಯಾಸಕ್ಕೆ ಸೇರ್ಪಡೆಗೊಂಡಿರುವ ಇವರು ಬುಧವಾರ ಕಾಲೇಜು ಮುಗಿಸಿ ದೇರಳಕಟ್ಟೆಯಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ವಾಪಸ್ಸಾಗುವ ವೇಳೆ ಕಿಸೆಯಲ್ಲಿದ್ದ ಐಫೋನ್ ಮೊಬೈಲ್ ಕಳೆದುಹೋಗಿತ್ತು. ಅದಕ್ಕಾಗಿ ವಸತಿ ನಿಲಯದ ಸಿಸಿಟಿವಿ, ಕಾಲೇಜಿನ ಆಸುಪಾಸು ವಿವಿದೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ವಿದೇಶಿಗನಾಗಿರುವುದರಿಂದ ಪೊಲೀಸ್ ಠಾಣೆಗೂ ಹೋಗಲು ಹಿಂಜರಿದ ವಿದ್ಯಾರ್ಥಿ ತನ್ನ ಸಹಪಾಠಿಗಳಲ್ಲಿ ವಿಚಾರ ತಿಳಿಸಿದ್ದರು. ಅವರು ಸಿಕ್ಕವರು ವಾಪಸ್ಸು ತಂದುಕೊಡುವ ವಿಶ್ವಾಸ ವ್ಯಕ್ತಪಡಿಸಿದ್ದರು. ವಿಪರ್ಯಾಸವೆಂದರೆ ನೂತನವಾಗಿ ಖರೀದಿಸಿದ ಮೊಬೈಲಿನಲ್ಲಿದ್ದ ಸಿಮ್ ಕೂಡಾ…

Read More

UN NETWORKS ಸೋಮೇಶ್ವರ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಡಲ ತಟದಲ್ಲಿ ಆತಂಕದಲ್ಲಿದ್ದ ಜನತೆ ಬುಧವಾರ ಮಧ್ಯಾಹ್ನ ಸ್ವಲ್ಪ ಮಟ್ಟಿಗೆ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದತೆಂಯೇ ಸ್ವಲ್ಪ ನಿರಾಳರಾದರೂ ಸಂಜೆಯಿಂದ ಸುರಿಯುತ್ತಿರುವ ಮಳೆಗಿಂತಲೂ ಬಿರುಸಿನ ಗಾಳಿಗೆ ರಾತ್ರಿ ಮತ್ತೆ ಕಡಲು ಅಬ್ಬರಿಸಿದೆ. ಸೋಮೇಶ್ವರ ಉಚ್ಚಿಲ ಸೀಗ್ರೌಂಡ್ ಕಡಲ ತಟದಲ್ಲಿ ಸುಮಾರು 45ಮನೆಗಳಿದ್ದರೂ 15ರಷ್ಟು ಮನೆ ಮಂದಿ ಮನೆ ಕುಸಿತ, ಮನೆ ಸಮುದ್ರ ಪಾಲು ಮೊದಲಾದ ಕಾರಣದಿಂದ ಸ್ಥಳಾಂತರಗೊಂಡಿದ್ದು ಪ್ರಸ್ತುತ ವಾಸವಿರುವ 30ಮನೆಗಳಲ್ಲಿ ಆತಂಕ ಹೆಚ್ಚಿದೆ. ತಾತ್ಕಾಲಿಕ ಕಾಮಗಾರಿಯಡಿಯಲ್ಲಿ ಕಲ್ಲು ಹಾಕುತ್ತಿದ್ದರೂ ಕಡಲ ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾದರೆ ಮನೆಗಳು ಧರೆಗುರುಳುವ ಚಿಂತೆಯಲ್ಲಿದ್ದಾರೆ. ಉಚ್ಚಿಲದ ಚಂದ್ರಶೇಖರ್ ಅವರ ಮನೆ ಎರಡು ವರ್ಷ ಹಿಂದೆ ಹಾಗೂ ಯಮುನಾ ಅವರ ಮನೆ ಕಳೆದ ವರ್ಷ ಸಮುದ್ರ ಪಾಲಾಗಿತ್ತು. ಜೊತೆಗೆ ಹಲವು ಗೆಸ್ಟ್ ಹೌಸ್ ಧರೆಗುರುಳಿತ್ತು. ಈ ಭಾಗದಲ್ಲಿರುವ ತಟದಿಂದ ಸ್ವಲ್ಪ ದೂರದಲ್ಲಿರುವ ಮಣ್ಣಿನ ಗೋಡೆಯಿಂದ ನಿರ್ಮಿಸಲಾದ ಮುರಳೀ ಉಚ್ಚಿಲ ಅವರ ಹಳೆಯ ಮನೆ ಹಾಗೂ…

Read More

UN NETWORKS ಕಿನ್ಯ: ಕಿನ್ಯ ಗ್ರಾಮ ಪಂಚಾಯತ್ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಕಿನ್ಯ ಗ್ರಾಮ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ನಡೆಯಿತು, ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಭಾರತಿ.ಕೆ ನೋಡೆಲ್ ಅಧಿಕಾರಿಯಾಗಿ ಸಭೆಯನ್ನು ನಡೆಸಿದರು. ಕಿನ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಕುತ್ತಡ್ಕ, ಗ್ರಾಮಸ್ಥರಿಗೆ ಸರಕಾರದಿಂದ ಸಿಗುವ ಸವಲತ್ತು ಯೋಜನೆಯ ವಿಷಯದಲ್ಲಿ ಮಾಹಿತಿ ನೀಡಿದರು.ಪಂಚಾಯತ್ ಉಪಾಧ್ಯಕ್ಷ ಸಿರಾಜ್ ಕಿನ್ಯ ಮಾತನಾಡಿ ಕಿನ್ಯ ಗ್ರಾಮದಲ್ಲಿ ಕೃಷಿಕರು ಹೆಚ್ಚಾಗಿರುವುದರಿಂದ ಕುಂಭ ದ್ರೋಣ ಮಳೆಯಿಂದ ಕೃಷಿಗಳು ನಾಶವಾಗಿದೆ,ಈ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರವೇ ಪರಿಶೀಲಿಸಿ ಪರಿಹಾರ ಒದಗಿಸಬೇಕು ಮತ್ತು ಕಿನ್ಯ ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಆಡಳಿತ ವರ್ಗದೊಂದಿಗೆ ಕೈ ಜೋಡಿಸಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ ಸರಕಾರಿ ಶಾಲೆಯ ಮಕ್ಕಳಿಗೆ ಕ್ಷೀರ ಬಾಗ್ಯ ,ಶೂ ಬಾಗ್ಯಕ್ಕಿಂತ ಹೆಚ್ಚುವರಿ ಶಿಕ್ಷಕರನ್ನು ನೀಡಿ ಸರಕಾರಿ ಶಾಲೆಯನ್ನು ಉಳಿಸ ಬೇಕೆಂದು ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಕಚೇರಿಯ ಸಂಯೋಜಕರಾದ ಪ್ರಾನ್ಸಿಸ್ ಲ್ಯಾನ್ಸಿ…

Read More

UN NETWORKS ಉಡುಪಿ: ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಗುರುವಾರ ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ರತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿರುವುದಾಗಿ ಕೆಎಂಸಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ. ಸೋಮವಾರ ಶಿರೂರು ಮೂಲ ಮಠದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸ್ವಾಮೀಜಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವಿಪರೀತ ವಾಂತಿ ಮಾಡಿದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

Read More

UN NETWORKS ದೇರಳಕಟ್ಟೆ: ಮಲ್ಟಿಪಲ್ ಮೈಲೋಮಾ(ರಕ್ತ ಕ್ಯಾನ್ಸರ್) ಬಳಲುತ್ತಿದ್ದ ರೋಗಿಯ ಅಸ್ಥಿಮಜ್ಜೆ ಕಸಿ ವಿಧಾನವನ್ನು ಮಾಡುವಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರ ತಂಡ ಪ್ರಥಮ ಭಾರಿಗೆ ಯಶಸ್ವಿಯಾಗಿದೆ. ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಲೀಲಾ ನಾರಾಯಣ ಶೆಟ್ಟಿ ಕ್ಯಾನ್ಸರ್ ಕೇಂದ್ರದ ಮೆಡಿಕಲ್ ಅಂಕೊಲಾಜಿ ತಜ್ಞರಾದ ಡಾ.ವಿಜೀತ್ ಶೆಟ್ಟಿ ಹಾಗೂ ಅವರ ನೇತೃತ್ವದ ವೈದ್ಯಕೀಯ ತಂಡ ಯಶಸ್ವಿ ಕಾಂಡಕೋಶ ಕಸಿ ವಿಧಾನವನ್ನು ಪೂರೈಸಿದೆ.ಬೆಳ್ತಂಗಡಿ ತಾಲೂಕಿನ 55 ರ ಹರೆಯದ ವ್ಯಕ್ತಿಯೋರ್ವರು ಕಳೆದ ಮೂರು ವರ್ಷಗಳಿಂದ ತೀವ್ರ ಬೆನ್ನುನೋವು ಮತ್ತು ರಕ್ತ ಹೀನತೆಯಿಂದ ಬಳಲುತ್ತಿದ್ದರು ಅವರ ಖಾಯಿಲೆ ಕುರಿತಾಗಿ ಕ್ಷೇಮ ಆಸ್ಪತ್ರೆಯಲ್ಲಿ ಹಲವು ಭಾರಿ ತಪಾಸಣೆ ನಡೆಸಿದಾಗ ಅವರಿಗೆ ರಕ್ತ ಕ್ಯಾನ್ಸರ್ ಇರುವುದಾಗಿ ಪತ್ತೆಯಾಗಿದೆ. ಕಾಯಿಲೆ ಲಕ್ಷಣ:ಈ ವೇಳೆ ವಿಲಕ್ಷಣ ಪ್ಲಾಸ್ಮ ಕೋಶಗಳ ಅಸಹಜ ಬೆಳವಣಿಗೆಯಾಗಿ ಮೂಳೆ ಮಜ್ಜೆಯ ರಕ್ತದ ಉತ್ಪಾದನೆಯಲ್ಲಿ ಏರುಪೇರಾಗುತ್ತದೆ. ಈ ಸಂದರ್ಭ ಕ್ಲಪ್ತ ಕಾಲಕ್ಕೆ ಸೂಕ್ಷ್ಮ ಚಿಕಿತ್ಸೆ ದೊರೆದೇ ಇದಲ್ಲಿ ರಕ್ತ ಹೀನತೆ ಮೂತ್ರಪಿಂಡ ವೈಫಲ್ಯ ಮತ್ತು ಮೂಳೆಗಳ ಮುರಿತಕ್ಕೆ ಕಾರಣವಾಗುತ್ತದೆ. ಅಟೊಲೋಗಸ್ ಚಿಕಿತ್ಸೆ…

Read More

UN NETWORKS ಮುಡಿಪು: ಮುಡಿಪು ಸರಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ರೂ. 2 ಕೋಟಿ ಅನುದಾನ ಹಾಗೂ ಕಾಲೇಜಿಗೆ ಉತ್ತಮ ಪ್ರಯೋಗಾಲಯವನ್ನು ಸರಕಾರ ಮಂಜೂರುಗೊಳಿಸಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ ಅವರು ಕುರ್ನಾಡು ಗ್ರಾಮದ ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಪದವಿ ಪೂರ್ವ ಕಾಲೇಜಿ ವಿಭಾಗದ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ಫಲಿತಾಂಶದಲ್ಲಿ ನಗರ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಸಕಾರಾತ್ಮಕ ಆಲೋಚನೆಗಳನ್ನು ಮೈಗೂಡಿಸಿಕೊಂಡು ಸಮಸ್ಯೆಗಳನ್ನು ಬಗೆಹರಿಸುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ. ಮಕ್ಕಳು ತಾವು ಆಡುವ ಮಾತು ಮತ್ತು ಮಾಡುವ ಕೆಲಸ ಸಮಾಜಕ್ಕೆ ಮತ್ತು ದೇಶಕ್ಕೆ ಪೂರಕವಾಗಿರಬೇಕು. ಈ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯ. ಶಾಲಾ ಆಡಳಿತ ಮಂಡಳಿ ಬೆಂಗಳೂರಿಗೆ ಬಂದು ಭೇಟಿ ನೀಡಿ ಕಾಲೇಜಿನ ಅಭಿವೃದ್ಧಿಗೆ ಬೇಡಿಕೆಯಿಟ್ಟಾಗ, ಸಂಬಂಧಪಟ್ಟ ಇಲಾಖೆಗಳಲ್ಲಿ ಮಾತುಕತೆ…

Read More

UN NETWORKS ಉಳ್ಳಾಲ: ಕರ್ನಾಟಕ ರಾಜ್ಯ ಸರಕಾರದ ಪಶು ಸಂಗೋಪಣೆ ಮತ್ತು ಮೀನುಗಾರಿಕೆ ಸಚಿವ ವೆಂಕಟ್ ರಾವ್ ನಾಡಗೌಡರವರನ್ನು ಜಾತ್ಯತೀತ ಜನತಾದಳದ ನಿಯೋಗವು ಬೇಟಿಮಾಡಿ ಬೋಟ್ ಮಾಲಕರಿಗೆ ಡಿಸೀಲ್ ಸಬ್ಸಿಡಿ ಯು ತಕ್ಷಣ ಬಿಡುಗಡೆ ಮಾಡುವಂತೆ,ಹಾಗೂ ಮೀನುಗಾರಿಕಾ ಜೆಟ್ಟಿಯ ವಿಸ್ತರಣಾ ಕಾಮಗಾರಿಯನ್ನ ತ್ವರಿತವಾಗಿ ಪ್ರಾರಂಭಿಸಲು ಒತ್ತಾಯಿಸಿದರು. ಈ ಎರಡೂ ಬೇಡಿಕೆಯ ಕುರಿತು ಸಕರಾತ್ಮಕವಾಗಿ ಸ್ಪಂಧಿಸಿಧ ಸಚಿವರು ಡೀಸೀಲ್ ಸಬ್ಸಿಡಿಯನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡವುದಾಗಿ ಸಚಿವರು ಹೇಳಿದ್ದಾರೆ.ನಿಯೋಗದಲ್ಲಿ ರಾಜ್ಯಜನತಾದಳ ನಾಯಕ ನಝೀರ್ ಉಳ್ಳಾಲ್,ಫಾರೂಕ್ ಯು.ಯಚ್ ಕೌನ್ಸಿಲರ್,ಜನತಾದಳ ನಾಯಕರಾದ ಇಬ್ರಾಹಿಂ ತವಕ್ಕಲ್,ಖಲೀಲ್ ಮುಕ್ಕಚ್ಚೇರಿ,ಮೀನುಗಾರಿಕಾ ಘಟಕದ ರತ್ನಾಕರ ಸುವರ್ಣ,ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಮೂಲ್ಕಿ ನಿಯೋಗದಲ್ಲಿದ್ದರು

Read More