UN NETWORKS ಕೊಣಾಜೆ: ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯು ಹಲವಾರು ಪ್ರಕರಣಗಳಲ್ಲಿ ದಸ್ತಗಿರಿಯಾದ ಮತ್ತು ನ್ಯಾಯಾಂಗ ಬಂಧನದಲ್ಲಿರುವ ಅಬ್ದುಲ್ ಅಝೀಜ್ ಎಂಬಾತನ ಸಹಚರನಾಗಿದ್ದಾನೆ. ಈ ಹಿಂದೆ ಮಂಗಳೂರು ಉತ್ತರ, ಮಂಗಳೂರು ಗ್ರಾಮಾಂತರ ಮತ್ತು ಕೊಣಾಜೆ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ದ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಯಿಂದ 300 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಅಶೋಕ್ ಪಿ, ಸಿಬ್ಬಂದಿಗಳಾದ ಅಶೋಕ್ ಕುಮಾರ್, ನಾಗರಾಜ್, ಉಮೇಶ್ ರಾಠೋಡ್ ಹಾಗೂ ದಕ್ಷಿಣ ಉಪವಿಭಾಗದ ರೌಡಿ ನಿಗ್ರಹದಳದ ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Author: UllalaVani
UN NETWORKS ಕೊಣಾಜೆ: ಗೋವಿನ ಸೇವೆ ಎಂಬುದು ಅದೊಂದು ಪುಣ್ಯದ ಕಾರ್ಯ. ಇಂದಿನ ಕಾಲದಲ್ಲಿ ಎಲ್ಲರೂ ಗೋವು ಸಾಕಲು ಕಷ್ಟವಾಗಬಹುದಾದರೂ ನಿರಂತರ ಗೋ ಸೇವೆ ಮಾಡುತ್ತಿರುವಂತಹ ಗೋವನಿತಾಶ್ರಯ ಟ್ರಸ್ಟ್ ನಂತಹ ಸಂಸ್ಥೆಗಳಿಗೆ ನಾವು ಪ್ರೋತ್ಸಾಹಿಸಿ ಸಹಕಾರ ನೀಡಬೇಕಾಗಿದೆ. ಗೋವುಗಳ ದತ್ತುಸ್ವೀಕಾರ ಕಾರ್ಯಕ್ರಮ ಉತ್ತಮ ಯೋಜನೆಯಾಗಿದ್ದು ಪ್ರತಿಯೊಬ್ಬರು ಈ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯೋಣ ಎಂದು ಕರ್ನಾಟಕ ಬ್ಯಾಂಕ್ ಲಿಮಿಟೆಡ್ನ ಮ್ಯಾನೇಜಿಂಗ್ ಡೈರೆಕ್ಟರ್ ಮಹಾಬಲೇಶ್ವರ ಎಂ.ಎಸ್ ಅವರು ಹೇಳಿದರು. ಅವರು ಪಜೀರು ಗೋವನಿತಾಶ್ರಯ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ನಡೆದ ಬನಶಂಕರಿಯ ಆರಾಧನೆ ಮತ್ತು ಗೋವುಗಳ ದತ್ತುಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಪಜೀರು ಗೋಶಾಲೆ ಯಾವುದೇ ಕಮರ್ಷಿಯಲ್ ಉದ್ದೇಶದಿಂದ ನಿರ್ಮಾಣವಾಗದೆ ಗೋಸೇವೆಯ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡುತ್ತಿದೆ. ಯಾವುದೇ ಗೋವುಗಳ ಸಂರಕ್ಷಣೆಗಾಗಿ ಆರ್ಥಿಕವಾಗಿ ಸಂಸ್ಥೆಗೆ ಬಲತುಂಬಬೇಕಾಗಿದ್ದು ಈ ನಿಟ್ಟಿನಲ್ಲಿ ಮಂಗಳೂರಿನ ಜನತೆ ಗೋಗ್ರಾಸದ ಮೂಲಕ ಗೋವನ್ನು ದತ್ತು ತೆಗೆದುಕೊಂಡು ನಮ್ಮಿಂದಾದ ಸಹಕಾರವನ್ನು ನೀಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಅವರು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ನಾಲ್ಕು…
UN NETWORKS ತೊಕ್ಕೊಟ್ಟು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಡಾ| ಜಯಮಾಲಾ ಇವರು ಬಾಳೆಪುಣಿಯ ಹೂಹಾಕುವಕಲ್ಲು ಸರಕಾರಿ ಶಾಲೆಯಲ್ಲಿ ಜೂ.26 ರಂದು ನಡೆಯಲಿರುವ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಯಸ್ ಗಟ್ಟಿ ಹೇಳಿದ್ದಾರೆ. ತೊಕ್ಕೊಟ್ಟು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ತ್ರೀಶಕ್ತಿ , ಮಹಿಳಾ ಸಂಘಟನೆಗಳೂ ,ಅಭಿಮಾನಿಗಳು ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿರುವ ಹಿರಿಯ ನಟಿ ಹಾಗೂ ಸಚಿವೆ ಜಯಮಾಲಾ ಉದ್ಘಾಟಿಸಲಿದ್ದಾರೆ. ಜಿಲ್ಲೆಯಲ್ಲಿ ನಾಲ್ಕು ದಿನಗಳ ಭೇಟಿಯನ್ನು ಹಮ್ಮಿಕೊಂಡಿರುವ ಸಚಿವರು ಜಿಲ್ಲೆಯ ವೈಶಿಷ್ಟ್ಯ ಮಾಸ ಆಷಾಢದ ತಿಂಡಿ ತಿನಿಸುಗಳ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿವರ್ಷದಂತೆ ಅಂಗನವಾಡಿಗಳಲ್ಲಿ ನಡೆಯಲಿರುವ ಪೌಷ್ಠಿಕ ಆಹಾರ ಸಪ್ತಾಹದಲ್ಲಿಯೂ ಭಾಗವಹಿಸಲಿದ್ದಾರೆ ಎಂದರು. ಸುದ್ಧಿಗೋಷ್ಠಿಯಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ,…
UN NETWORKS ತೊಕ್ಕೊಟ್ಟು: ಹುಸಿ ಭರವಸೆಗಳ ಮೂಲಕ ಅಧಿಕಾರ ಹಿಡಿದುಕೊಂಡಿರುವ ಕೇಂದ್ರದ ಎನ್ಡಿಎ ಸರಕಾರದ ಆಡಳಿತ ವೈಫಲ್ಯದಿಂದ ರಾಷ್ಟ್ರೀಕೃತ ಬ್ಯಾಂಕುಗಳು ನಷ್ಟದ ಹಾದಿಯಲ್ಲಿದ್ದು, ಮುಚ್ಚುವ ಹಂತಕ್ಕೆ ತಲುಪಿದೆ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಆರೋಪಿಸಿದ್ದಾರೆ. ತೊಕ್ಕೊಟ್ಟುವಿನಲ್ಲಿ ಮಂಗಳವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುಪಿಎ ಸರಕಾರದ ಅವಧಿಯಲ್ಲಿ ಇದ್ದಂತಹ ಕಚ್ಛಾ ತೈಲ ಬೆಲೆ ಇದೀಗ ಮೂರುಪಾಲು ಜಾಸ್ತಿಯಾಗಿದೆ. ಕರಾವಳಿಯ ಕೇಂದ್ರ ಬಿಂದು ರೈಲ್ವೇ ನಿಲ್ದಾಣವನ್ನು ವಿಶ್ವದರ್ಜೆಗೆ ಸೇರಿಸುವಲ್ಲಿ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾನದಂಡಕ್ಕೆ ಅನುಸಾರವಾಗಿ ಬೆಳೆಯದೆ ಸಂಸದರ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಬರುವಂತಹ ರಸ್ತೆಗಳೆಲ್ಲಾ ಸಂಪೂರ್ಣ ಹೊಂಡಮಯವಾಗಿದೆ. ಪಂಪ್ ವೆಲ್ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಅವ್ಯವಸ್ಥೆ ಮತ್ತು ವಿಳಂಬದಿಂದಾಗಿ ಹಲವು ಜೀವಗಳು ಬಲಿಯಾಗಿವೆ. ಇದರ ವಿರುದ್ಧ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಿದ್ಧತೆ ನಡೆಸಿರುವ ಪ್ರತಿಭಟನೆಗೆ ಮುಡಿಪು ಬ್ಲಾಕ್ ಕೈಜೋಡಿಸುತ್ತದೆ. ಜನಧನ ಖಾತೆಯನ್ನು ತೆರೆಸಿ ಅದರಲ್ಲಿಯೂ ರೂ.3 ನ್ನೂ ಹಾಕಲು ಸರಕಾರ…
UN NETWORKS ಕೊಣಾಜೆ: ಸಮಾಜದಲ್ಲಿ ಅನ್ನವನ್ನು ಬಿಸಾಡುವ ಯುವಸಮುದಾಯ ಬಹಳಷ್ಟಿದ್ದಾರೆ. ಈ ನಡುವೆ ಅನ್ನದ ಅಗುಳಿನ ಬೆಲೆ ಗೊತ್ತಾಗುವಂತೆ ವಿದ್ಯಾರ್ಥಿಗಳನ್ನು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯ ಉತ್ತಮವಾದುದು ಎಂದು ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಹೇಳಿದ್ದಾರೆ. ಅವರು ಕೊಣಾಜೆ ಗ್ರಾಮವನ್ನು ಎರಡು ವರ್ಷಗಳಿಂದ ದತ್ತು ಪಡೆದುಕೊಂಡ ಡಾ| ಪಿ.ದಯಾನಂದ ಪೈ-ಸತೀಶ್ ಪೈ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇದರ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಮೂರನೇ ಭಾನುವಾರ ಕೊಣಾಜೆಯ ಅಣ್ಣೆರೆಪಾಲು ಗದ್ದೆಗಳಲ್ಲಿ ನಡೆಯುತ್ತಿರುವ ಕೃಷಿ ಕಾಯಕದಲ್ಲಿ ಭಾಗವಹಿಸಿ ಮಾತನಾಡಿದರು. ಒಂದೇ ಕಾಲೇಜಿನ ಸುಮಾರು 800 ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕಾರ್ಯ ರಾಜ್ಯದ ಇತರೆಡೆ ಎಲ್ಲಿಯೂ ಆಗಲಿಲ್ಲ. ವಿದ್ಯಾರ್ಥಿಗಳು ಗದ್ದೆಗಳಲ್ಲಿ ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿರುವ ವಾತಾವರಣ ಕೊಣಾಜೆಯಲ್ಲಿದೆ. ಕೃಷಿ ಬದುಕಿನ ಅನುಭವವನ್ನು ಹಂಚುವ ಕಾರ್ಯ ಆಗಿದೆ. ಕಲಿಕೆಯ ಜೊತೆಗೆ ಕೃಷಿ ಕಾರ್ಯದ ಮೂಲಕ ಮನರಂಜನೆಯ ಪಾಠವೂ ಆಗಿದೆ. ಈ ಮೂಲಕ ಯುವ…
UN NETWORKS ಕೊಣಾಜೆ: ಕೊಣಾಜೆ ಪಂಚಾಯಿತಿ ಅಧೀನದಲ್ಲಿರುವ ಗ್ರಾಮದ ಹಲೆವೆಡೆ ಇರುವ ಅಂಗಡಿಗಳ ಮಾಲಿಕರು ಪಂಚಾಯಿತಿಗೆ ಬಾಡಿಗೆ ನೀಡದೆ ವಂಚಿಸುತ್ತಿದ್ದಾರೆ. ಆದರೂ ಪಂಚಾಯಿತಿ ಸುಮ್ಮನೆ ಕುಳಿತ್ತಿದ್ದು ಬಾಡಿಕೆ ಕಟ್ಟದಿರುವ ಅಂಗಡಿಗಳ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ರಸ್ತೆ ಬದಿಯಲ್ಲಿ ಗೂಡಂಗಡಿಗಳನ್ನು ಹಾಕಿ ತೊಂದರೆ ನೀಡುತ್ತಿರುವುವರಿಗಾದರೂ ಈ ಅಂಗಡಿಗಳನ್ನು ನೀಡಿ ಕಾನೂನು ಪಾಲಿಸಿ ಎಂದು ಕೊಣಾಜೆ ಗ್ರಾಮಸ್ಥರು ಆಗ್ರಹಿಸಿದರು. ಕೊಣಾಜೆ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಸೋಮವಾರದಂದು ಅಸೈಗೊಳಿಯ ಲಯನ್ಸ್ ಕ್ಲಬ್ನಲ್ಲಿ ನಡೆದಿದ್ದು ಈ ಸಂದರ್ಭದಲ್ಲಿ ಗ್ರಾಮಸ್ಥರು ಟ್ಯಾಂಕರ್ ನೀರು ಸರಬರಾಜು ಟೆಂಡರ್, ವಿದ್ಯುತ್ ಸಮಸ್ಯೆ, ಎಸ್ಸಿ ಎಸ್ಟಿ ಅನುದಾನ ಬಳಕೆ ಸಮಸ್ಯೆ ಸೇರಿದಂತೆ ಹಲವಾರು ವಿಚಾರಗಳ ಕುರಿತು ವಾಕ್ಸಮರ ನಡೆಸಿದರು. ಪಂಚಾಯಿತಿಯ ಅಧೀನದ ಕಟ್ಟಡಗಳಲ್ಲಿ ಅಂಗಡಿ ನಡೆಸುತ್ತಿರುವರು ಬಾಡಿಗೆ ನೀಡದೆ ವಂಚಿಸುತ್ತಿದ್ದಾರೆ ಮಾತ್ರವಲ್ಲದೆ ರಸ್ತೆ ಬದಿಗಳಲ್ಲಿ ಅದೆಷ್ಟೋ ಗೂಡಂಗಡಿಗಳು ನಿರ್ಮಾಣಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರ ವಿರುದ್ದ ಪಂಚಾಯಿತಿ ಕ್ರಮಕೈಕೊಳ್ಳಬೇಕು. ಅಲ್ಲದೆ ಬಾಡಿಗೆ ಅಂಗಡಿಯವರ ವಿರುದ್ದ ಕ್ರಮ…
UN NETWORKS ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸಲು ಪೂರಕವಾಗುವ ಎಲ್ಲಾ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲ ತಿಳಿಸಿದ್ದಾರೆ.ರಾಜ್ಯ ಸರಕಾರದ ಸಂಪುಟ ದರ್ಜೆಯ ಸಚಿವೆಯಾಗಿ ಆಯ್ಕೆಯಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿರುವ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು. ಬ್ಯಾರಿ, ಕೊಂಕಣಿ ಸಾಹಿತ್ಯ ಅಕಾಡಮಿಗಳಿಗೆ ಕಟ್ಟಡ ನಿರ್ಮಾಣದ ಬಗ್ಗೆಯೂ ಗಮನಹರಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಗೆ ರಂಗ ಮಂದಿರ ಆಗಬೇಕು ಎನ್ನುವ ಬೇಡಿಕೆಯನ್ನು ಆಧ್ಯತೆಯೊಂದಿಗೆ ಪರಿಗಣಿಸಲಾಗುವುದು ಎಂದು ಜಯಮಾಲ ತಿಳಿಸಿದರು. ಇಂದಿರಾ ಗಾಂಧಿ ಸಶಕ್ತ ಮಹಿಳೆಗೆ ಒಂದು ಮಾದರಿಯಾದವರು: ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮಹಾನ್ ನಾಯಕಿ, ಅಲ್ಲದೆ ಓರ್ವ ಸಶಕ್ತ ಮಹಿಳೆ ದೇಶದಲ್ಲಿ ಯಾವ ಎತ್ತರದ ಸ್ಥಾನವನ್ನು ಏರಬಹುದು ಎಂದು ತೋರಿಸಿಕೊಟ್ಟ ಮಹಿಳೆಯಾಗಿದ್ದಾರೆ. ದೇಶದಲ್ಲಿ ಧ್ವನಿ ಇಲ್ಲದ ಮಹಿಳೆಯರ ಧ್ವನಿ ಪೆಟ್ಟಿಗೆಯಾಗಿದ್ದರು. ಅವರ ಮೂಲಕ ಮಹಿಳೆಯರ…
UN NETWORKS ಉಳ್ಳಾಲ: ಬೆಂಗಳೂರು ಬಸವೇಶ್ವರನಗರದ ಸಿಟಿ ಕಂಟ್ರೋಲ್ ಟೆಕ್ನಾಲಜಿ (ಇಂಡಿಯಾ) ಪ್ರೈ. ಲಿ ಇವರು ರಚಿಸಿದ ರೋಬೊ ಕೋಸ್ಟಲ್ ಅಬ್ಸರ್ವರ್ ( ರೋಬೊ ಕರಾವಳಿ ವೀಕ್ಷಕ ) ಮತ್ತು ರೋಬೊ ಲೈಫ್ ಸೇವರ್ ( ರೋಬೊ ಜೀವರಕ್ಷಕ) ಇದರ ಪ್ರಾತ್ಯಕ್ಷಿಕೆಯನ್ನು ಜಿಲ್ಲಾಡಳಿತದ ನಿರ್ದೇಶನದಂತೆ ಗೃಹರಕ್ಷಕ ದಳ , ಪ್ರವಾಸೋದ್ಯಮ , ಅಗ್ನಿ ಶಾಮಕ ದಳ, ಕರಾವಳಿ ಕಾವಲು ಪಡೆಯ ಉಪಸ್ಥಿತಿಯಲ್ಲಿ ಉಳ್ಳಾಲದ ಮೊಗವೀರಪಟ್ನ ಸಮುದ್ರ ತೀರದಲ್ಲಿ ಸೋಮವಾರ ನಡೆಸಲಾಯಿತು. ರೋಬೊ ಲೈಫ್ ಸೇವರ್ ( ರೋಬೊ ಜೀವರಕ್ಷಕ) : ಬ್ಯಾಟರಿ ಚಾಲಿತ ಉಪಕರಣವಾಗಿದ್ದು, ಲೈಫ್ ಗಾರ್ಡ್ ಉಪಯೋಗಿಸಿ ರಚಿಸಲಾಗಿದೆ. ಸೆನ್ಸಾರ್ , ಕೆಮರಾಗಳಿರುವ ಲೈಫ್ ಗಾರ್ಡನ್ನು ರಿಮೋಟಿನ ಮೂಲಕ ನಿಯಂತ್ರಿಸಲಾಗುತ್ತದೆ. ನೀರಿನಲ್ಲಿ ನಾಲ್ಕು ಕಿ.ಮೀ ಉದ್ದಕ್ಕೆ ಚಲಿಸಬಹುದಾದ ಉಪಕರಣವನ್ನು ಬ್ಯಾಟರಿಯಲ್ಲಿ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಿಸುತ್ತದೆ. ದಡದಿಂದಲೇ ರಿಮೋಟ್ ಮುಖೇನ ನಿಯಂತ್ರಿಸಿ ಅಪಾಯದಲ್ಲಿರುವವರನ್ನು ಉಪಕರಣದ ಮೂಲಕ ರಕ್ಷಿಸಬಹುದಾಗಿದೆ. ಅಲೆಗಳ ಅಬ್ಬರಕ್ಕೆ ಕಾರ್ಯಾಚರಣೆ ಮೊಟಕು : ಉಳ್ಳಾಲದ ಮೊಗವೀರಪಟ್ನ ಸಮುದ್ರ ತೀರದಲ್ಲು…
UN NETWORKS ಮೊಂಟೆಪದವು: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮೊಂಟೆಪದವು ಬಳಿಯ ಗುದ್ರು ಎಂಬಲ್ಲಿ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಉಳ್ಳಾಲ ಅಳೇಕಲದ ಖಲೀಲ್ (30) ಮೃತರು. ಉಳ್ಳಾಲ ಅಳೇಕಲದ ಐದು ಮಂದಿಯ ಯುವಕರ ತಂಡ ಮೊಂಟೆಪದವಿನ ಗುದ್ರುವಿನಲ್ಲಿರುವ ಈಜು ಕೊಳದಲ್ಲಿ ಆಟವಾಡುತಿದ್ದ ಸಂದರ್ಭ ಖಲೀಲ್ ನೀರಿನಲ್ಲಿ ಮುಳುಗಿದ್ದಾರೆ. ಅದು ತಕ್ಷಣಕ್ಕೆ ಯಾರ ಅರಿವಿಗೂ ಬಂದಿರಲಿಲ್ಲ ಎನ್ನಲಾಗಿದೆ. ಸ್ವಲ್ಪ ಹೊತ್ತಿನಲ್ಲಿಯೇ ಖಲೀಲ್ ಅವರನ್ನು ಹುಡುಕುವ ಯತ್ನ ನಡೆದಿದ್ದು, ಸುಮಾರು ಅರ್ಧ ತಾಸಿನ ಬಳಿಕ ಖಲೀಲ್ ಅವರನ್ನು ಕೊಳದ ಆಳದಿಂದ ಹೊರತೆಗೆಯಲಾಗಿದೆ. ಆ ವೇಳೆ ಅವರು ಮೃತಪಟ್ಟಿದ್ದರು ಎಂದು ಜಮೀನಿನ ಸಂಬಂಧಿಕರು ಕೊಣಾಜೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
UN NETWORKS ಉಳ್ಳಾಲ: ಸ್ಕೂಟರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಸ್ಕೂಟರ್ ಸವಾರನ ಮೇಲೆ ಲಾರಿಯೊಂದು ಚಲಿಸಿ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪಿನಮೊಗೆರು ಸಮೀಪ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಎಕ್ಕೂರಿನ ಫಿಶರೀಸ್ ಕಾಲೇಜಿನ ಪ್ರಯೋಗಾಲಯದ ಹಿರಿಯ ಸಹಾಯಕ ಹುದ್ದೆಯನ್ನು ನಿರ್ವಹಿಸುತ್ತಿದ್ದ ದೇರೆಬೈಲ್ ನಿವಾಸಿ ಕೃಷ್ಣ (55) ಮೃತಪಟ್ಟವರು. ವೈಯಕ್ತಿಕ ಕೆಲಸದ ನಿಮಿತ್ತ ತೊಕ್ಕೊಟ್ಟು ಕಡೆಗೆ ಬಂದವರು ಮರಳಿ ಮನೆಗೆ ವಾಪಸ್ಸಾಗುವ ಸಂದರ್ಭ ಘಟನೆ ಸಂಭವಿಸಿದೆ. ಹಿಂಬದಿಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಎಡಕ್ಕೆ ಉರುಳಿದರೆ, ಸವಾರ ಬಲಕ್ಕೆ ರಸ್ತೆಯ ಮಧ್ಯಭಾಗಕ್ಕೆ ಬಿದ್ದಿದ್ದರು. ಅದೇ ವೇಳೆ ಹಿಂಬದಿಯಿಂದ ಬಂದ ಲಾರಿ ಅವರ ಮೇಲೆಯೇ ಚಲಿಸಿದ ಪರಿಣಾಮ ಸ್ಥಳದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ತಲೆಯಲ್ಲಿ ಹೆಲ್ಮೆಟ್ ಧರಿಸಿದ್ದರೂ, ಕಂಟೈನರ್ ಲಾರಿ ಚಲಿಸಿದ ಪರಿಣಾಮ ಹೆಲ್ಮೆಟ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಮಂಗಳೂರು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

