UN NETWORKS ಇರಾ : ಇರಾ-ಕಲ್ಲಾಡಿ ಮಲೆಯಾಳಿ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾಗಿ ದಾಮೋದರ ಡಿ.ಇರಾ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪ್ರವೀಣ್ ವೈ.ಬಿ, ಉಪಾಧ್ಯಕ್ಷರಾಗಿ ಹರೀಶ್ ಟೈಲರ್ ಇರಾ, ಕಾರ್ಯದರ್ಶಿ ರಕ್ಷಿತ್ ಆರ್.ಸೂತ್ರಬೈಲು, ಜತೆ ಕಾರ್ಯದರ್ಶಿ ನವೀನ್ ಮೇಗಿನಬೈಲು, ಕ್ರೀಡಾ ಕಾರ್ಯದರ್ಶಿ ವಂಶಿತ್ ಸಂಪಿಲ, ಸಾಂಸ್ಕೃತಿಕ ಕಾರ್ಯದರ್ಶಿ ಸುಜನ್ ವೈ.ಬಿ ಆಯ್ಕೆಯಾಗಿದ್ದಾರೆ.
Author: UllalaVani
UN NETWORKS ಇರಾ: ಮಲೆಯಾಳಿ ಬಿಲ್ಲವ ಸೇವಾ ಸಂಘ ಇರಾ-ಕಲ್ಲಾಡಿ ಇದರ ನೂತನ ಅಧ್ಯಕ್ಷರಾಗಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಆರ್. ಕರ್ಕೇರ ಆಯ್ಕೆಯಾಗಿದ್ದಾರೆ. ಇರಾ ಕಲ್ಲಾಡಿ ಮಲೆಯಾಳಿ ಬಿಲ್ಲವ ಸೇವಾ ಸಂಘ, ಯುವ ವೇದಿಕೆ ಹಾಗೂ ಮಹಿಳಾ ವೇದಿಕೆಯ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ತನಿಯಪ್ಪ ಎಚ್ ವಹಿಸಿದ್ದರು. ಗೌರವಾಧ್ಯಕ್ಷರಾಗಿ ತನಿಯಪ್ಪ ಎಚ್.ಹಲಸಿನಡಿ, ಉಪಾಧ್ಯಕ್ಷರಾಗಿ ಪಿ.ರಾಮಕೃಷ್ಣ ಸೂತ್ರಬೈಲ್, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಸೂತ್ರಬೈಲು, ಜತೆ ಕಾರ್ಯದರ್ಶಿಯಾಗಿ ಗಣೇಶ್ ಕಿನ್ನಿಮಜಲು, ಹರೀಶ್ ಇರಾ, ಮಾಧವ ಸೇರಿಗಾರಬೈಲು,ಕೋಶಾಧಿಕಾರಿಯಾಗಿ ವಾಮನ ಡಿ. ಆಯ್ಕೆಯಾಗಿದ್ದಾರೆ. ಗುರಿಕಾರರಾದ ನಾಗೇಶ್ ಗುರಿಕಾರ ಕಲ್ಲಾಡಿ, ಸತೀಶ್ ಗುರಿಕಾರ, ರಾಮ ಗುರಿಕಾರ ಚಟ್ಟೆಕಲ್ಲು, ಪ್ರಮುಖರಾದ ವೈ.ಬಿ.ಸುಂದರ್ ಇರಾ, ಗೋಪಾಲ ಅಶ್ವತ್ಥಡಿ, ಪ್ರವೀಣ್ ವೈ.ಬಿ, ಸ್ಮಿತಾ ಉಮೇಶ್ ಮುಂತಾದವರು ಉಪಸ್ಥಿತರಿದ್ದರು. ರಾಮಕೃಷ್ಣ ಸೂತ್ರಬೈಲು, ಪ್ರತಾಪ್ಚಂದ್ರ, ಉಷಾ ಜಗದೀಶ್ ಲೆಕ್ಕಪತ್ರ ವಾಚಿಸಿದರು. ಸ್ವಜಾತಿ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
UN NETWORKS ಬಾಳೆಪುಣಿ : ಅಂಗನವಾಡಿಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಅಂಗನವಾಡಿಗಳ ಸ್ವರೂಪ ಬದಲಾಯಿಸುವ ಮಹತ್ವಾಂಕಾಕ್ಷಿ ಯೋಜನೆಯನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಸರಕಾರ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕರಿಗೆ ಕಳೆದ ಫೆಬ್ರವರಿಯಲ್ಲಿ ವೇತನ ಪರಿಷ್ಕರಣೆ ಮಾಡಿದೆ.ಪೋಷಕರು ಮಕ್ಕಳ ಆರೋಗ್ಯದ ಕುರಿತು ನಿವಾ ಇಡುವಂತೆಯೇ ಅಂಗನವಾಡಿಯಲ್ಲಿ ನೈರ್ಮಲ್ಯ ಕಾಪಾಡುವುದು ಶಿಕ್ಷಕಿಯರು ಹಾಗೂ ಸಹಾಯಕಿಯರ ಆದ್ಯ ಕರ್ತವ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಜಯಮಾಲ ಅಭಿಪ್ರಾಯಪಟ್ಟರು. ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಹೂ ಹಾಕುವ ಕಲ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸಭಾಭವನದಲ್ಲಿ ಗುರುವಾರ ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 60000 ಅಂಗನವಾಡಿಗಳಿದ್ದು 3331ಮಿನಿ ಅಂಗನವಾಡಿಗಳು, 100ಮೊಬೈಲ್ ಅಂಗನವಾಡಿಗಳಿದೆ. ನಗರಕ್ಕೆ 250ಹೊಸ ಅಂಗನವಾಡಿ ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿಯೇ 500ಕ್ಕೂ ಹೆಚ್ಚು ಅಂಗನವಾಡಿಗಳಿವೆ. ನಾವು ಹಾಲು ಉಪ್ಪಿಟ್ಟಿಗಾಗಿಯೇ ಅಂಗನವಾಡಿಗೆ ಹೋಗುತ್ತಿದ್ದೆವು. ಅದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ. ಹಿಂದಿನ ಸರ್ಕಾರ ಮಕ್ಕಳಿಗೆ ಹಾಲು, ಮೊಟ್ಟೆ ಯೋಜನೆ ಜಾರಿಗೆ…
UN NETWORKS ಉಳ್ಳಾಲ: ವಿದ್ಯಾರ್ಥಿಗಳು ಎಂದಿಗೂ ಬಡವರು ಅನ್ನುವ ಕೀಳರಿಮೆ ಬೆಳೆಸದಿರಿ, ಬಡತನವನ್ನು ಮೆಟ್ಟಿ ನಿಲ್ಲುವಂತೆ ಕಿಟೆಲ್ ವಿದ್ಯಾ ಸಂಸ್ಥೆ ಪ್ರೋತ್ಸಾಹಿಸುತ್ತಿರುವುದನ್ನು ಉಪಯೋಗಿಸಿ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬೆಳೆದು ಜೀವನದಲ್ಲಿ ಯಶಸ್ವಿಯಾಗಿ ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ. ಗೋರಿಗುಡ್ಡೆ ಕಿಟೆಲ್ ಮೆಮೋರಿಯಲ್ ಸಂಯುಕ್ತ ಪದವಿ ಪೂರ್ವ ಕಾಲೇಜು ಇದರ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಬಡವರಾದರೂ ಮನಸ್ಥಿತಿಯಲ್ಲಿ ಕುಗ್ಗದೆ, ಯಶಸ್ಸಿನ ಹಾದಿಯಲ್ಲಿ ಬೆಳೆಯಬೇಕಿದೆ. ಬಡತನವನ್ನು ಮೆಟ್ಟಿ ನಿಲ್ಲುವಂತೆ ಪ್ರೋತ್ಸಾಹಿಸುತ್ತಿರುವ ಸಂಸ್ಥೆಯು ಸರಕಾರದ ಕಲ್ಪನೆಗಿಂತ ಮೊದಲೇ ಬಿಸಿಯೂಟವನ್ನು ಆರಂಭಿಸಿರುವುದು ಶ್ಲಾಘನೀಯ. ಮುಚ್ಚುತ್ತಿರುವ ಕನ್ನಡ ಶಾಲೆಗಳ ಸಮಯದಲ್ಲಿ ಹೆಚ್ಚಿನ ಸಂಖ್ಯೆಯನ್ನು ಇಟ್ಟುಕೊಂಡು ಸಂಸ್ಥೆ ಬೆಳೆಯುತ್ತಿದೆ. ಇಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳು ಮನುಷ್ಯತ್ವವನ್ನು ಬೆಳೆಸಿಕೊಂಡು ಪದವಿಯನ್ನು ಪಡೆದುಕೊಂಡು ಸಮಾಜಕ್ಕೆ ಮಾದರಿಯಾಗಿ ಬೆಳೆಯಿರಿ ಎಂದು ಹಾರೈಸಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಎಕ್ಕೂರು ಫಿಶರೀಸ್ ಕಾಲೇಜಿನ ಪ್ರೊ.…
UN NETWORKS ಉಳ್ಳಾಲ: ಪಂಪ್ ವೆಲ್, ತೊಕ್ಕೊಟ್ಟು, ತಲಪಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮೇಲ್ಸೇತುವೆ ಸಹಿತ ತಕ್ಷಣ ಪೂರ್ಣಗೊಳಿಸಬೇಕು, ಅಕ್ರಮವಾಗಿ ನಡೆಯುತ್ತಿರುವ ಟೋಲ್ ಸಂಗ್ರಹವನ್ನು ರದ್ದುಗೊಳಿಸಬೇಕು, ತೊಕ್ಕೊಟ್ಟು ಸಹಿತ ಹೆದ್ದಾರಿಯಲ್ಲಿ ಹದಗೆಟ್ಟ ರಸ್ತೆಗಳನ್ನು ಆದ್ಯತೆಯಲ್ಲಿ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಆಗಸ್ಟ್ 5 ರಂದು ತೊಕ್ಕೊಟ್ಟು ಮೇಲ್ಸೇತುವೆ ಬಳಿಯಿಂದ ತಲಪಾಡಿ ಟೋಲ್ ಗೇಟ್ ವರಗೆ ಪಾದಯಾತ್ರೆ, ಟೋಲ್ ಗೇಟ್ ಸಮೀಪ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಡಿವೈಎಫ್ಐ ಉಳ್ಳಾಲ ವಲಯ ಅಧ್ಯಕ್ಷರಾದ ಜೀವನ್ ರಾಜ್ ಕುತ್ತಾರ್ ಹೇಳಿದರು. ಆ. 5 ರಂದು ನಡೆಯಲಿರುವ ಕಾಲ್ನಡಿಗೆ ಜಾಥ `ತಲಪಾಡಿ ಚಲೋ’ ಯಶಸ್ವಿಗಾಗಿ ಗುರುವಾರ ತಲಪಾಡಿಯ ಕೆ.ಸಿ ರೋಡ್ ನಲ್ಲಿ ನಡೆದ ಊರ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಪಂಪ್ ವೆಲ್, ತೊಕ್ಕೊಟ್ಟು, ತಲಪಾಡಿ ಭಾಗದಲ್ಲಿ ಆರಂಭಗೊಂಡು ಹತ್ತು ವರ್ಷಗಳಾಗಿವೆ. ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿತನ, ಗುತ್ತಿಗೆ ಕಂಪೆನಿಗಳ ಕಳಪೆ ನಿರ್ವಹಣೆ, ಅವೈಜ್ಞಾನಿಕ ಕಾಮಗಾರಿ, ತಮ್ಮ ಜವಾಬ್ದಾರಿಗಳ ಅರಿವಿಲ್ಲದ ಜನಪ್ರತಿನಿಧಿಗಳಿಂದಾಗಿ…
UN NETWORKS ಕೋಟೆಕಾರು: ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ವ್ಯಾಪ್ತಿಗೆ ಒಳಪಡುವ ಸುಮಾರು 100 ನವೋದಯ ಸಂಘಗಳು, ಸ್ವ-ಸಹಾಯ ಸಂಘಗಳ ನಿರ್ವಹಣೆಯ ಬಗ್ಗೆ ಒಂದು ದಿನದ ಮಾಹಿತಿ ತರಭೇತಿ ಶಿಬಿರ ಕಾರ್ಯಕ್ರಮವು ಬುಧವಾರದಂದು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು. ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ್ ಅದ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬ್ಯಾಂಕ್ ನ ವ್ಯವಸ್ಥಾಪಕ ಲೋಕಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು .ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಸ್ವ-ಸಹಾಯ ಸಂಘಗಳ ಮೇಲ್ವಿಚಾರಕ ಹರಿನಾಥ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ಸುದರ್ಶನ್ ಕಾರ್ಯಕ್ರಮದಲ್ಲಿ ತರಭೇತಿ ನೀಡಿದರು. ರುಕ್ಮಿಣಿ,ಪದ್ಮಾ,ರೇಣುಕಾ,ಗಾಯತ್ರಿ,ರಜತ,ಪವಿತ್ರ,ಶೋಭಾ,ವಂದನ,ಸುಷ್ಮಾ,ದಿವ್ಯಾ,ಪವಿತ್ರ,ಎವರೆಸ್ಟ್ ಅವರನ್ನು ಲೆಕ್ಕಪರಿಶೋಧಕರಾಗಿ ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.ಮಾಧವಿ ಆಚಾರ್ಯ ಸ್ವಾಗತಿಸಿದರು. ರೇಶ್ಮಾ ಎಸ್ ಕಾರ್ಯಕ್ರಮವನ್ನು ನಿರೂಪಿಸಿ ಮೋಹಿನಿ ವಂದಿಸಿದರು
UN NETWORKS ಆದೂರು:.ಸಯ್ಯಿದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ಆದೂರು ರವರ ನೇತೃತ್ವದಲ್ಲಿ ಮಜ್ಲಿಸ್ ಎಜ್ಯು ಪಾರ್ಕ್ ಸಂಸ್ಥೆಯ ಅಧೀನದಲ್ಲಿ ನಿರ್ಮಿಸಿದ ಎಜ್ಯು ಪಾರ್ಕ್ ಗ್ರಾಂಡ್ ಮಸ್ಜಿದ್ ನಲ್ಲಿ ಜುಮಾ ಪ್ರಾರಂಭ ಕಾರ್ಯಕ್ರಮ ನಾಳೆ ಬೆಳ್ಳಗೆ 10ಗಂಟೆಗೆ ಎಜ್ಯು ಪಾರ್ಕ್ ಆದೂರು ಮಂಙಪಾರೆ ವಠಾರದಲ್ಲಿ ನಡೆಯಲಿದೆ. ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಉಸ್ತಾದ್, ರಾಜ್ಯ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
UN NETWORKS ಉಳ್ಳಾಲ: ನಾಯಿಯೊಂದು ಅಡ್ಡಬಂದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಮುನ್ನೂರು ಗ್ರಾಮದ ರಾಣಿಪುರ ಸಮೀಪ ಸೋಮವಾರ ತಡರಾತ್ರಿ ನಡೆದಿದೆ. ರಿಕ್ಷಾ ಚಾಲಕ ಮದಕ ನಿವಾಸಿ ಮಹಮ್ಮದ್ ಆಲಿ (50) ಮೃತ ದುರ್ದೈವಿ. ಕುತ್ತಾರು ಸಮೀಪ ರಿಕ್ಷಾ ನಿಲ್ಲಿಸುತ್ತಿದ್ದ ಇವರು ಕೆಲಸ ಮುಗಿಸಿ ಕುತ್ತಾರಿನಿಂದ ರಾತ್ರಿ 10.30 ಸುಮಾರಿಗೆ ಮದಕ ಸಮೀಪ ಮನೆಗೆ ತೆರಳುತ್ತಿದ್ದ ಸಂದರ್ಭ ರಾಣಿಪುರ ಇಳಿಜಾರು ಪ್ರದೇಶದಲ್ಲಿ ನಾಯಿಯೊಂದು ರಸ್ತೆಗೆ ಅಡ್ಡವಾಗಿ ದಾಟಿತ್ತು. ಅದರ ಪ್ರಾಣ ಉಳಿಸಲೆಂದು ರಿಕ್ಷಾ ತಿರುಗಿಸಿದ ಪರಿಣಾಮ ರಿಕ್ಷಾ ಅಡ್ಡಬಿದ್ದು, ಕೆಳಗಿನ ಕಂದಕಕ್ಕೆ ಉರುಳಿಬಿದ್ದಿದೆ. ಘಟನೆಯಲ್ಲಿ ಅಡ್ಡಬಂದ ನಾಯಿಯೂ ಸಹ ಮೃತಪಟ್ಟಿದೆ. ಎದೆಯ ಭಾಗಕ್ಕೆ ಹೊಡೆದ ಗಾಯವಾಗಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಾದವರು ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿರುವ ಮಹಮ್ಮದ್ ಆಲಿ ಮನೆಯಲ್ಲಿ ಬಡತನ ಹಾಗೂ ಪತ್ನಿಯೂ ಅನಾರೋಗ್ಯದಿಂದ ಇದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ರಿಕ್ಷಾ ಕೂಡಾ…
UN NETWORKS ಉಳ್ಳಾಲ: ಸರಕಾರದ ಜತೆಗೆ ಸೇರಿಕೊಂಡು ಜನರಿಗೆ ಒಳಿತಾಗಬೇಕು ಅನ್ನುವ ಮನೋಭಾವದೊಂದಿಗೆ ಕಾರ್ಯಾಚರಿಸಿ ಗ್ರಾಮದ ಜನರಿಗೆ ಬಹುಮುಖ್ಯವಾದ ಕುಡಿಯುವ ನೀರು ಪೂರೈಸಿದ ಸಂಘಟನೆ ಕಾರ್ಯ ಸಮಾಜಕ್ಕೆ ಮಾದರಿ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ಅವರು ಶೇಖಾ ಮರ್ಕಝ್ ಯೂತ್ ವೆಲ್ಫೇರ್ ಅಸೊಶಿಯೇಷನ್ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಕಿನ್ಯ ಗ್ರಾಮದ ಖುತುಬಿನಗರದಲ್ಲಿ 12ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಸ್ಥಾವರ ಉದ್ಘಾಟಿಸಿ ಮಾತನಾಡಿದರು. ಕುಡಿಯುವ ನೀರಿಗಾಗಿ ಲಕ್ಷಾಂತರ ರೂ ವ್ಯಯಿಸಿ ಬಾವಿಯನ್ನು ನಿರ್ಮಿಸಿ, ಅದಕ್ಕೆ ಉತ್ತಮವಾದ ಪೈಪ್ ಲೈನ್ ರೂಪಿಸಿ ಗ್ರಾಮದ ಜನರಿಗೆ ಅನುಕೂಲವಾಗುವಂತಹ ಯೋಜನೆಯನ್ನು ಸಂಘಟನೆ ಹಮ್ಮಿಕೊಂಡಿದೆ. ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ದೊರೆತಿದೆ. ಇಂತಹ ಮಹತ್ತರ ಯೋಜನೆಗಳನ್ನು ರೂಪಿಸಲು ಸರಕಾರದ ಜೊತೆಗೆ ಸಂಘmನೆ ಕೈಜೋಡಿಸಿರುವ ಕಾರ್ಯ ಶ್ಲಾಘನೀಯ ಎಂದರು. ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೋಹಮ್ಮದ್ ಮೋನು, ಸದಸ್ಯ ಜಬ್ಬಾರ್ ಬೋಳಿಯರ್,ಶೇಖಾ ಮರ್ಕಝ್ ಯೂತ್ ವೆಲ್ಫೇರ್ ಅಸೊಶಿಯೇಷನ್ ಅಧ್ಯಕ್ಷ ಅಬೂಬಕ್ಕರ್, ಉಪಾಧ್ಯಕ್ಷ…
UN NETWORKS ಮುಂಬಯಿ: ಮುಂಬಯಿನಲ್ಲಿ ವೃತ್ತಿಯಲ್ಲಿ ಇಂಟೀರಿಯರ್ ಇಂಜಿನಿಯರ್ ಆಗಿರುವ ಉಡುಪಿ ಸಮೀಪದ ಕುದಿ ಗ್ರಾಮದ ಕುದಿ ಸುಧಾಕರ ಶೆಟ್ಟಿ ಮತ್ತು ಕುದಿ ಸಂತೋಷ್ ಶೆಟ್ಟಿ ಸಹೋದರರ ಪಿತ್ರಾರ್ಜಿತವಾಗಿ ಬಂದ ಒಂದು ಕಾಲದಲ್ಲಿ ನಮಗೆ ಜೀವನಾಡಿ ಆಗಿದ್ದ ತಮ್ಮ ಗದ್ದೆಗಳನ್ನು ಹಡಿಲು ಬಿಡದೆ ಮುಂಬಯಿಯಿಂದ ಆಗಮಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಕೃಷಿ ಪ್ರಧಾನಕಸುಬಾಗಿರುವ ಭಾರತದ ಹಳ್ಳಿಗಳಲ್ಲಿ `ರೈತದೇಶದ ಬೆನ್ನೆಲುಬು’ ಎಂಬ ನಾಣ್ಣುಡಿಯಂತೆ ದೇಶ ಸ್ವತಂತ್ರವಾದ ಅಂದಿನಿಂದ ಇವತ್ತಿನವರೆಗೂ ದೇಶದ ರಾಜ್ಯದ ಉದ್ದಗಲಕ್ಕೂ ರೈತರ ಬಗ್ಗೆ ಸಂಸತ್ತಿನಲ್ಲಿ ವಿದಾನ ಸೌಧದಲ್ಲಿ ಬಹಳಷ್ಟು ಚರ್ಚೆಗಳೊಂದಿಗೆ ಸಾಲ ಮನ್ನ ಯೋಜನೆಗಳನ್ನು ಕೈಗೊಂಡರೂ, ಈ ದೇಶದ ಕೃಷಿ ರೈತರ ಸ್ಥಿತಿಗತಿಗಳನ್ನು ಬದಲಾಯಿಸಲು ಸಾಧ್ಯವಾಗಲೇ ಇಲ್ಲ. ಅದರ ಬದಲು ಕೃಷಿ ಪ್ರಧಾನದೇಶವುಕೈಕಾರಿಕಾ ವ್ಯವಹಾರ ಪ್ರಧಾನ ದೇಶವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವುದು. ಈ ವರ್ಷಉತ್ತಮ ಮುಂಗಾರು ಮಳೆಯಿಂದ ಕೃಷಿಗೆ ಅನುಕೂಲಕರವಾದ ಕರಾವಳಿ ಭಾಗದಲ್ಲಿ ಹಡಿಲು ಬಿದ್ದ ಕೃಷಿಭೂಮಿಯಲ್ಲಿ ಪುನಃ ಭತ್ತದ ನೇಜಿ ನಾಟಿಯಿಂದ ಹಸನು ಗೊಳಿಸಿರುವುದು ಗೋಚರಿಸುತ್ತಿಲ್ಲ. ರೈತಾಪಿ ವರ್ಗದಯುವಜನತೆ…

