UN NETWORKS ಉಳ್ಳಾಲ: KCF ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ ಹಜ್ಜ್ ಸ್ವಯಂ ಸೇವಕರ ಪೂರ್ವ ತಯಾರಿ ತಝ್ಕಿಯತ್ ಶಿಬಿರ ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ರವರ ಅಧ್ಯಕ್ಷತೆಯಲ್ಲಿ ಕುದೈ ಏಷ್ಯನ್ ಹಾಲ್ ನಲ್ಲಿ ಜರಗಿತು. ಉಮ್ಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ರವರು HVC ಕಾರ್ಯಕರ್ತರು ಪವಿತ್ರ ಮಕ್ಕಾ ಮಣ್ಣಿಗೆ ಅಲ್ಲಾಹನ ಅತಿಥಿಗಳಾಗಿ ಬರುವ ಹಾಜಿಗಳಿಗೆ ನೀಡುವ ಸೇವೆಯ ಮಹತ್ವ ಹಾಗೂ ಸಂಘಟಣಾ ನಿಯಮ ಪಾಲನೆ, ನಾಯಕರ ಅದೇಶ ಪಾಲನೆ, HVC ಸಮವಸ್ತ್ರದ ಸೂಕ್ಷ್ಮತೆಯ ಗೌರವ, ಹಾಜಿಗಳೊಂದಿಗೆ ತಾಳ್ಮೆ ಸ್ವಭಾವ ಉತ್ತಮ ಸ್ನೇಹ ಭಾಂದವ್ಯ ಹಾಗೂ ಸದಾ ಹಸನ್ಮುಖಿಯರಾಗಿ ಕಾರ್ಯಚರಿಸುವುದು ಈಗೇ ಹತ್ತು ಹಲವಾರು ವಿಷಯಗಳ ಬಗ್ಗೆ ಕಾರ್ಯಕರ್ತರ ಮನ ಕರಗುವ ರೀತಿಯಲ್ಲಿ ವಿವರಣೆ ನೀಡಿದರು. KCF ಮಕ್ಕತ್ತುಲ್ ಮುಕರ್ರಮಃ ಸಾಂತ್ವನ ವಿಭಾಗ ಅಧ್ಯಕ್ಷರು ಮೂಸಾ ಹಾಜಿ ಕಿನ್ಯ ತಮ್ಮ ಅನುಭವಗಳನ್ನು ಕಾರ್ಯಕರ್ತರಿಗೆ ಹಂಚಿದರು.KCF ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ ಶಿಕ್ಷಣ ವಿಭಾಗ ಅಧ್ಯಕ್ಷರು ಉಸ್ಮಾನ್ ಸಅದಿ ನೆಲ್ಯಾಡಿ ಮಾತಾನಾಡಿ…
Author: UllalaVani
UN NETWORKS ತೊಕ್ಕೊಟ್ಟು: ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ವಿಳಂಬವಾಗಲು ಇಲ್ಲಿನ ಶಾಸಕರೇ ನೇರ ಕಾರಣವಾಗಿದ್ದಾರೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಆರೋಪಿಸಿದ್ದಾರೆ. ತೊಕ್ಕೊಟ್ಟುವಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರು ವರ್ಷದ ಹಿಂದೆ ತನ್ನ ಕೆಲವು ಕಾರ್ಯಕರ್ತರ ಗುಂಪು ಕೂಡಿಸಿ ಹೆದ್ದಾರಿ ಕೆಲಸವನ್ನು ಶಾಸಕರೇ ನಿಲ್ಲಿಸಿದ್ದರು. ಹೆದ್ದಾರಿ ಕಾಮಗಾರಿಗೆ ಭೂಸ್ವಾಧೀನ ಮಾಡಿ ಕೊಡುವುದು ರಾಜ್ಯ ಸರಕಾರದ ಕೆಲಸ. ಆದರೆ ಸ್ಥಳೀಯ ಶಾಸಕರು ಅದರಲ್ಲಿ ವಿಳಂಬ ನೀತಿ ಅನುಸರಿಸಿದ್ದಾರೆ.ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರ ಸಂಸ್ಥೆ ನವಯುಗ್ ಬ್ಯಾಂಕ್ ಖಾತೆಗಳನ್ನು ಅಂದಿನ ಕಾಂಗ್ರೆಸ್ ಸರಕಾರ ಬ್ಲಾಕ್ ಮಾಡಿರುವುದರಿಂದ ಸಂಸ್ಥೆ ಹಣಕಾಸಿನ ಮುಗ್ಗಟ್ಟು ಅನುಭವಿಸುತ್ತಿದೆ. ಅವರು ಬಿಲ್ ಪಾವತಿಸದೆ ಕಾಮಗಾರಿ ಸ್ಥಗಿತವಾಗಿತ್ತು. ಇದೀಗ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿದ್ದರೂ, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರ ವಿರುದ್ಧ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ದಿನ ದೆಹಲಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಸಚಿವ ನಿತಿನ್ ಗಡ್ಕರಿಯವರ ಗಮನಕ್ಕೆ ತಂದಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ…
UN NETWORKS ತೊಕ್ಕೊಟ್ಟು: ಬಡವರ್ಗದ ಮಕ್ಕಳಿಗೆ ಕಲೆಯ ಪ್ರೋತ್ಸಾಹದ ಜೊತೆಗೆ ಶಿಕ್ಷಣ, ಗೋವು ಕಳವಿಗೆ ಸಂಬಂಧಿಸಿದ ಕ್ರಾಂತಿಕಾರಿ ಹೆಜ್ಜೆ ಹಾಗೂ ಕುರ್ನಾಡು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಳೆಸುವ ಕೀರ್ತಿಯನ್ನು ಹೊಂದಿದ ಹಿರಿಯ ರಾಜಾರಾಂ ಭಟ್ ಅವರಿಗೆ ಗುರುವಂದನೆ ನಡೆಸುತ್ತಿರುವ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಕಾರ್ಯ ಅರ್ಥಪೂರ್ಣ ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು. ಅವರು ತೊಕ್ಕೊಟ್ಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ವ್ಯಾಸ ಪೂರ್ಣಿಮೆಯಂದು ನಡೆಸುತ್ತಿರುವ 11 ನೇ ವರ್ಷದ ಗುರುವಂದನೆಯನ್ನು ಗೋಪ್ರೇಮಿ ಮುಡಿಪು ರಾಜರಾಮ್ ಭಟ್ ಅವರಿಗೆ ಅವರ ಮುಡಿಪುವಿನ ಸ್ವಗೃಹದಲ್ಲಿ ಶುಕ್ರವಾರ ನೆರವೇರಿಸಿ ಮಾತನಾಡಿದರು. ಭಗತ್ ಸಿಂಗ್ ಹೆಸರಿನಲ್ಲಿ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆಂಬ ಉದ್ದೇಶದೊಂದಿಗೆ ಸ್ಥಾಪನೆಗೊಂಡಿರುವ ಪ್ರತಿಷ್ಠಾನ ಸಂಘಟಿತವಾಗಿ ಹೋರಾಡುವ ಶಕ್ತಿಯನ್ನು ಹೊಂದಿದೆ. ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಾನದ ಸದಸ್ಯರು ನಿರಂತರವಾಗಿ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಇಡೀ ಕುರ್ನಾಡು ಪ್ರದೇಶಕ್ಕೆ ಸಹಕಾರಿ ಸಂಘ ಸ್ಥಾಪನೆ,…
UN NETWORKS ಬಂಟ್ವಾಳ: ಭಾರತದ ಎಪ್ಪತ್ತೆರಡನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ವಲಯ ಮಟ್ಟದಲ್ಲಿ ಆಗಸ್ಟ್ ಒಂದರಿಂದ ಹದಿನೈದರ ತನಕ ನಡೆಸಲಿರುವ “ಪ್ರಜಾ ಸಂಗಮ” ಕಾರ್ಯಕ್ರಮದ ರಾಜ್ಯ ಮಟ್ಟದ ಚಾಲನಾ ಸಮಾವೇಶವು ಆಗಸ್ಟ್ ಒಂದರಂದು ಬುದವಾರ ಸಂಜೆ ನಾಲ್ಕು ಗಂಟೆಗೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸ್ಪರ್ಶ ಸಭಾಂಗಣದಲ್ಲಿ ನಡೆಯಲಿರುವುದಾಗಿ ಎಸ್. ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂದು ನಡೆಯುವ ಕಾರ್ಯಕ್ರಮ ದಲ್ಲಿ ಸಂಘಟನೆಯ ರಾಜ್ಯ ನಾಯಕರು, ಜಿಲ್ಲಾ ಸಮಿತಿಯ ಮುಖಂಡರು , ವಿವಿಧ ವಲಯ ಸಮಿತಿಗಳ ಪ್ರತಿನಿಧಿಗಳು ಹಾಗೂ ಸ್ಥಳೀಯ ಸಾಮಾಜಿಕ, ರಾಜಕೀಯ ರಂಗದ ಪ್ರಮುಖರು ಭಾಗವಹಿಸಲಿರುವರು.ಮುಂದೆ ರಾಜ್ಯದ ವಿವಿಧ ಸೆಂಟರ್ ಸಮಿತಿಗಳ ಉಸ್ತುವಾರಿಯಲ್ಲಿ ಸ್ಥಳೀಯ ಎಲ್ಲಾ ಮತ-ಧರ್ಮ-ವರ್ಗ ದ ಜನರನ್ನು ಸೇರಿಸಿ ಸೆಂಟರ್ ಮಟ್ಟದಲ್ಲಿ ಪ್ರಜಾ ಸಂಗಮಗಳು ನಡೆಯಲಿದ್ದು ಕಾರ್ಯಕ್ರಮ ದ ಘೋಷವಾಕ್ಯವಾದ ” ಭಾರತ ಭಾರತೀಯರದ್ದಾಗಲಿ” ಎಂಬ ವಿಷಯದ ಕುರಿತು ಉಪನ್ಯಾಸ ಹಾಗೂ ಚರ್ಚೆ…
UN NETWORKS ತಲಪಾಡಿ : ಶ್ರೀ ದುರ್ಗಾಪರಮೇಶ್ವರೀ ಸೇವಾ ಸಂಘ ಯುವಕ ಮಂಡಲ ದೇವಿಪುರ ತಲಪಾಡಿ ಕಿನ್ಯಾ ಕೋಟೆಕಾರು ಮೂರು ಗ್ರಾಮಗಳ ಗ್ರಾಮಸ್ಥರು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ `ದೇವೆರೆನ ಬಾಕಿಲ್ದ ಕಂಡಡೊಂಜಿ ದಿನ’ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಬಾಲಕೃಷ್ಣ ಭಟ್ ಪಂಜಾಳ ದೀಪ ಬೆಳಗಿಸಿ, ಅಲಂಕಾರ ಗುಡ್ಡೆ ಮಲರಾಯ ದೈವದ ಪಾತ್ರಿ ಅಂತ ಪೂಜಾರಿ ತೆಂಗಿನ ಗರಿ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಲಪಾಡಿ ಪಂಜಾಳ ರವೀಂದ್ರನಾಥ ಪಕ್ಕಳ ಕಂಬಳದ ಕೋಣ ಗದ್ದೆಯಲ್ಲಿ ಓಡಿಸುವ ಮುಖಾಂತರ ಕೆಸರುಗದ್ದೆ ಪ್ರಾರಂಭಗೊಂಡಿತು. ಕೆಸರುಗದ್ದೆಯ ಕುರಿತಾದ ಶೀರ್ಷಿಕೆಯ ಹಾಡಿನ ಧ್ವನಿ ಸುರಳಿಯನ್ನು ಐತಪ್ಪ ಶೆಟ್ಟಿ ಪಾಲು ಬಿಡುಗಡೆಗೊಳಿಸಿದರು. ತಾಲೂಕು ಪಂಚಾಯತ್ ಮಾಜಿ ಸದಸ್ಯ ಮೋಹನ್ ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ ತಲಪಾಡಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲಕೃಷ್ಣ ಮೇಲಾಂಟ, ಕ್ಯಾಪ್ಟನ್ ಮಾಧವ ಶೆಟ್ಟಿ, ಮಧು ವಿಜಯ ತಲಪಾಡಿ, ಸ್ತ್ರಿ ಶಕ್ತಿ ಗುಂಪಿನ ಒಕ್ಕೂಟದ…
UN NETWORKS ಪಂಜಿಮೊಗರು: ಹಿಂದೂ ಯುವ ಸೇನೆ, ವಿದ್ಯಾಶಾಖೆ, ಪಂಜಿಮೊಗರು ಇದರ ಅಧ್ಯಕ್ಷರಾಗಿ ಸಂದೀಪ್ ಪೂಜಾರಿ ಆಯ್ಕೆಯಾಗಿದ್ದಾರೆ. ವಾಮನ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಹಿಂದೂ ಯುವ ಸೇನಾ ಕೇಂದ್ರೀಯ ಮಂಡಳಿಯ ಅಧ್ಯಕ್ಷ ಯಶೋಧರ ಚೌಟ ನೂತನ ಪದಾಧಿಕಾರಿಗಳ ಘೋಷಣೆ ಮಾಡಿದರು. ಗೌರವಾದ್ಯಕ್ಷರುಗಳಾಗಿ ದಯಾನಂದ ಶೆಟ್ಟಿ, ಗಣೇಶ್ ಶೆಟ್ಟಿ, ವಾಮನ ಪೂಜಾರಿ, ಗಣೇಶ್ ಪೂಜಾರಿ, ಉಮೇಶ್ ಪೂಜಾರಿ, ಪುರುಷೋತ್ತಮ ಕುಲಾಲ್. ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಪೂಜಾರಿ, ಕೋಶಾಧಿಕಾರಿಯಾಗಿ ಸಂತೋಷ್ ಕುಮಾರ್, ಹರೀಶ್ ಶೆಟ್ಟಿ, ಉಪಾಧ್ಯಕ್ಷರುಗಳಾಗಿ, ಹರೀಶ್ ಕುಮಾರ್, ಜೀವನ್ ಕುಮಾರ್, ಧನ್ರಾಜ್ ಶೆಟ್ಟಿ, ದೀಪಕ್ ಪೂಜಾರಿ, ಪ್ರವೀಣ್ ಶೆಟ್ಟಿ, ವಿಶ್ವನಾಥ್, ಜೊತೆ ಕಾರ್ಯದರ್ಶಿಯಾಗಿ, ಚೇತನ್ ಕುಮಾರ್, ಚಂದ್ರಶೇಖರ, ಸುಧಾಕರ ಶೆಟ್ಟಿ, ರಾಜೇಶ್ ಶೆಟ್ಟಿ, ಸುರೇಶ್ ಅನ್ನಿ, ಸಂದೀಪ್ ಸಾಲ್ಯಾನ್. ಪ್ರಧಾನ ಸಂಘಟನಾ ಕಾರ್ಯದರ್ಶಿಗಳಾಗಿ, ಉದಯ ಶೆಟ್ಟಿ, ಕಿರಣ್ ಶೆಟ್ಟಿ, ಯಶವಂತ ಆಚಾರ್ಯ, ಶುಭಕರ, ಸುಧಾಕರ ಶೆಟ್ಟಿ, ರವೀಂದ್ರ, ಸುಪ್ರಿತ್ ಶೆಟ್ಟಿ, ವಿವೇಕ್ ಸುವರ್ಣ, ಭವಾನಿ…
UN NETWORKS ಬಿಜೈ: ವಿದ್ಯಾರ್ಥಿಗಳ ಮೆದುಳು ಚುರುಕುಗೊಳ್ಳಲು ಚೆಸ್ ಪ್ರಮುಖ ಪಾತ್ರ ವಹಿಸುತ್ತದೆ. ಚೆಸ್ ಆಡುವುದರಿಂದ ವಿದ್ಯಾರ್ಥಿಗಳ ಏಕಾಗ್ರತೆಯ ಮಟ್ಟವನ್ನು, ಸಮಯ ಪ್ರಜ್ಞೆಯನ್ನು, ಅದರೊಂದಿಗೆ ಕ್ರಿಯಾಶೀಲತೆಯ ಗುಣವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅಭಿಪ್ರಾಯಪಟ್ಟರು. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು ದಕ್ಷಿಣ ವಲಯ ಮತ್ತು ಲೂಡ್ಸ್ ಪ್ರೌಢ ಶಾಲೆ ಬಿಜೈ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಿಜೈ ಪ್ರೌಢಶಾಲಾ ಸಭಾಂಗಣದಲ್ಲಿ ಗುರುವಾರ ನಡೆದ ಮಂಗಳೂರು ದಕ್ಷಿಣ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಚೆಸ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದ್ರಿ ವಾರ್ಡ್ನ ಕಾರ್ಪೊರೇಟರ್ ಪ್ರಕಾಶ್ ಸಾಲಿಯಾನ್ರವರು ವಹಿಸಿ ಚೆಸ್ ಆಟದಲ್ಲಿ ವಿಶ್ವನಾಥ್ ಆನಂದರ ಸಾಧನೆ ಅದ್ಭುತವಾಗಿದ್ದು ನಮ್ಮ ದೇಶವೇ ಹೆಮ್ಮೆ ಪಡುವಂತಹ ಕಾರ್ಯವನ್ನು ಮಾಡಿದ್ದಾರೆ. ಈ ನೆಲೆಯಲ್ಲಿ ವಿದ್ಯಾರ್ಥಿಗಳು ಬಹಳ ಪ್ರೀತಿಯಿಟ್ಟು ಚೆಸ್ ಪಂದ್ಯಾಟವನ್ನು ಆಡಬೇಕು ಎಂದು ಶುಭವನ್ನು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕಾಪಿಕಾಡ್ ವಾರ್ಡ್ನ ಕಾರ್ಪೊರೇಟರ್ ಲ್ಯಾನ್ಸಿ ಲೋಟ್ ಪಿಂಟೋ, ಕರ್ನಾಟಕ…
UN NETWORKS ಉಳ್ಳಾಲ: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಳಜಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದು, ಮುನ್ನೂರು ಯುವಕ ಮಂಡಲದಂತಹ ಸಂಘಟನೆಗಳು ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯ ನಡೆಸಿದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ| ರೋಹನ್ ಮೊನಿಸ್ ಅಭಿಪ್ರಾಯಪಟ್ಟರು. ಕುತ್ತಾರು ಎಮ್.ವೈ.ಎಮ್. ಸಭಾಂಗಣದಲ್ಲಿ ಮುನ್ನೂರು ಯುವಕ ಮಂಡಲ ಕುತ್ತಾರು ಪದವು ಇದರ ಸುವರ್ಣ ಮಹೋತ್ಸವದ ಅಂಗವಾಗಿ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ದ.ಕ. ಜಿಲ್ಲೆ ಇದರ ಸಹಯೋಗದೊಂದಿಗೆ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ನಾಲ್ಕು ವರ್ಷದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಕಣಚೂರು ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ನೂರಾರು ಆರೋಗ್ಯ ಶಿಬಿರಗಳ ಮೂಲಕ ಲಕ್ಷಾಂತರ ರೋಗಿಗಳಿಗೆ ಆರೋಗ್ಯ ಸೇವೆಯನ್ನು ನಡೆಸಿದ್ದು, ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದರಿಂದ ಇಂತಹ ಶಿಬಿರಗಳನ್ನು ಆಯೋಜಿಸಲು…
UN NETWORKS ಹರೇಕಳ: ವಿದ್ಯಾರ್ಥಿಗಳು ಜೀವನದಲ್ಲಿ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ, ಇಂತಹ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಘದ ಚಟುವಟಿಕೆಗಳು ಪೂರಕ ಎಂದು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ರವೀಂದ್ರ ರೈ ಅಭಿಪ್ರಾಯಪಟ್ಟರು. ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಘದ ಮಂತ್ರಿಗಳ ಪದಗ್ರಹಣ ಮತ್ತು ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳು ಭಾಷಣ ಕೌಶಲ್ಯ,ಸಮಯ ಪ್ರಜ್ಞೆ, ಶಿಸ್ತು, ತಾಳ್ಮೆ, ಸದಾ ಹಸನ್ಮುಖಿಯಾಗಿರುವುದು ಬಹಳ ಪ್ರಾಮುಖ್ಯ. ಇಂತಹ ಗುಣಗಳನ್ನು ಅಳವಡಿಸಿಕೊಂಡಾಗ ಶಾಲೆ ಉತ್ತಮ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ ಎಂದರು. ವಿದ್ಯಾರ್ಥಿ ಸಂಘ ನಾಯಕಿಯಾಗಿ ಪ್ರಿಯ, ಉಪಮುಖ್ಯಮಂತ್ರಿಯಾಗಿ ನಿಶಾನ್, ಪ್ರಧಾನ ಕಾರ್ಯದರ್ಶಿಯಾಗಿ ಧನ್ಯ, ಸಭಾಪತಿಯಾಗಿ ಶರಣ್ಯ, ವಿದ್ಯಾ ಮಂತ್ರಿಯಾಗಿ ನಿಶ್ಮಿತಾ, ಆರೋಗ್ಯ ಮಂತ್ರಿಯಾಗಿ ಬದ್ರುನ್ನೀಸ, ಕ್ರೀಡಾ ಮಂತ್ರಿಯಾಗಿ ಸ್ಟೀಪನ್ ಜೋಸ್ಟನ್ ಡಿ’ಸೋಜ, ಕೃಷಿ ಮಂತ್ರಿಯಾಗಿ ಅಭಿಲಾಷ್, ಪ್ರವಾಸ ಮಂತ್ರಿಯಾಗಿ ಲಾವಣ್ಯ, ವಾರ್ತಾ ಮಂತ್ರಿಯಾಗಿ ಸುಷ್ಮಿತಾ, ಆಹಾರ ಮಂತ್ರಿಯಾಗಿ ರಶ್ಮಿತಾ, ಗೃಹ ಮಂತ್ರಿಯಾಗಿ ಕಾವ್ಯಶ್ರೀ, ಪೀಠೋಪಕರಣ ಮಂತ್ರಿಯಾಗಿ ಪ್ರಜ್ವಲ್ ನಾಯಕ್,…
UN NETWORKS ತೊಕ್ಕೊಟ್ಟು: ಬ್ಯಾಂಕಿಂಗ್ ವ್ಯವಹಾರ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ, ಸೌಲಭ್ಯಗಳಿಂದ ಹೆಸರುಗಳಿಸಿದ ಫೆಡರಲ್ ಬ್ಯಾಂಕ್ ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಿರುವುದು ತುಂಬಾ ಸಂತೋಷಕರ, ಈ ದೆಶೆಯಲ್ಲಿ ತೊಕ್ಕೊಟ್ಟಿನ ಶಾಖೆ ಇನ್ನಷ್ಟು ಬೆಳೆಯಲಿ ಎಂದು ತೊಕೊಟ್ಟು ಡಿವೈನ್ ರಿಟ್ರೇಟ್ ಕೇಂದ್ರದ ಧರ್ಮಗುರು ವಂ| ಫಾ| ಜೋಸೆಫ್ ವನಿಯಂತಾರ ಅಭಿಪ್ರಾಯಪಟ್ಟರು. ಅವರು ಫೆಡರಲ್ ಬ್ಯಾಂಕ್ ತೊಕ್ಕೋಟ್ಟು ಶಾಖೆಯ 6ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ನಗರ ಸಭೆಯ ಪೌರಾಯುಕ್ತೆ ವಾಣಿ ವಿ.ಆಳ್ವ ಫೆಡರಲ್ ಬ್ಯಾಂಕ್ ತೊಕ್ಕೋಟ್ಟು ಶಾಖೆಯ ಸೇವೆಯನ್ನು ಶ್ಲಾಘಿಸಿದರು. ತೊಕ್ಕೊಟ್ಟಿನ ಉದ್ಯಮಿ ಇಸ್ಮಾಯಿಲ್, ಫೆಡರಲ್ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀಕಾಂತ್.ಕೆ ರವರು, ಫೆಡರಲ್ ಬ್ಯಾಂಕಿನ ಪ್ರಾದೇಶಿಕ ವಲಯದಲ್ಲಿ ಒಟ್ಟು 7 ಜಿಲ್ಲೆಗಳು ಒಳಪಟ್ಟಿದ್ದು 26 ಶಾಖೆಗಳನ್ನು ಹೊಂದಿದ್ದು, ಬ್ಯಾಂಕಿಗೆ 70 ವರ್ಷಗಳ ಇತಿಹಾಸವಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಅನಿವಾಸಿ ಭಾರತೀಯರಿಗೆ ಕ್ಲಪ್ತ ಸಮಯಕ್ಕೆ ಸೇವೆ ಒದಗಿಸುತ್ತಿದ್ದು, ಅಂತರ್ ಜಾಲದಲ್ಲಿ ನೆಟ್ ಬ್ಯಾಂಕಿಂಗ್ ಆದುನಿಕರಣಗೊಳಿಸಿದ ದೇಶದಲ್ಲಿಯೇ ಪ್ರಥಮ ಬ್ಯಾಂಕ್…

