Author: UllalaVani

Kannada News From Coastal Karnataka

UN NETWORKS ಇನೋಳಿ: ನಾಗರ ಪಂಚಮಿಗೆಂದು ಕೇದಗೆ ಹೂ ಕಿತ್ತು ಮೀನಿಗೆ ಗಾಳ ಹಾಕಲು ತೆರಳಿದ್ದ ವ್ಯಕ್ತಿ ನೀರುಪಾಲಾಗಿ ಸಾವನ್ನಪ್ಪಿದ ಘಟನೆ ಇನೋಳಿಯ ಗುಂಡ್ಯ ಸಮೀಪದ ನೇತ್ರಾವತಿ ನದಿಯ ಹಿನ್ನೀರಿನ ಕೊಲದಲ್ಲಿ ಗುರುವಾರ ಸಂಜೆ ನಡೆದಿದೆ. ಗುಂಡ್ಯ ನಿವಾಸಿ ಹರೀಶ್ ನಾಯ್ಕ್ (30)ಎಂಬವರೇ ಸಾವನ್ನಪಿದ ದುರ್ದೈವಿ.ಗುರವಾರ ಸಂಜೆ ಗುಂಡ್ಯದ ನೇತ್ರಾವತಿ ನದಿಗೆ ತಾಗಿರುವ ಖಾಸಗಿ ತೋಟದಲ್ಲಿರುವ ಕೃತಕ ಹಿನ್ನೀರಿನ ಕೊಳಕ್ಕೆ ಕೇದಗೆ ಹೂ ಕೀಳಲೆಂದು ಹೋದ ಹರೀಶ್ ಅವರು ನಂತರ ಮೀನಿಗೆ ಗಾಳ ಹಾಕುತ್ತಿದ್ದರೆನ್ನಲಾಗಿದೆ.ಈ ವೇಳೆ ನೀರಿನ ಸುಳಿಗೆ ಸಿಕ್ಕಿ ನೀರುಪಾಲಾಗಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕದಳ,ಪೊಲೀಸರು,ಸ್ಥಳೀಯ ಈಜುಗಾರರು ಸೇರಿ ಮೃತದೇಹವನ್ನು ಸಂಜೆಯೇ ಮೇಲಕ್ಕೆತ್ತಿದ್ದಾರೆ.ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN NETWORKS ಮಲಪ್ಪುರಂ: ಪಟ್ಟಿಕ್ಕಾಡ್ ಜಾಮಿಅಃ ನೂರಿಯ್ಯ ಅರಬಿಯ್ಯಾದಲ್ಲಿ ವಿದ್ಯಾರ್ಜನೆಗೈಯ್ಯುತ್ತಿರುವ ದ.ಕ. ಜಿಲ್ಲೆಯ ವಿದ್ಯಾರ್ಥಿಗಳ ಒಕ್ಕೂಟವಾದ ದಕ್ಷಿಣ ಕನ್ನಡ ಸ್ಟೂಡೆಂಟ್ಸ್ ಫೋರಂ(ಡಿ.ಕೆ.ಎಸ್.ಎಫ್) ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಮಖ್ದೂಮಿ ಅಮ್ಮೆಮ್ಮಾರ್, ಉಪಾಧ್ಯಕ್ಷರುಗಳಾಗಿ ಸಯ್ಯದ್ ಮುಹ್ಯುದ್ದೀನ್ ತಂಙಳ್ ಕೊಣಾಜೆ, ಮುಹಮ್ಮದ್ ಆಸಿಫ್ ಕಡಬ, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ನಈಂ ಮುಕ್ವೆ, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಸ್ಸಮದ್ ಆನೆಮಹಲ್, ಮುಹಮ್ಮದ್ ಸ್ವಾಬಿರ್ ಈಶ್ವರಮಂಗಳ, ವರ್ಕಿಂಗ್ ಕಾರ್ಯದರ್ಶಿಯಾಗಿ ಅಬ್ದುಲ ಮಜೀದ್ ಕಲಂದರಿಯಾ, ಕೋಶಾಧಿಕಾರಿಯಾಗಿ ಮುಹಮ್ಮದ್ ತ್ವಯ್ಯುಬ್ ಬೊಳ್ಳೂರ್, ಲೆಕ್ಕ ಪರಿಶೋಧಕರಾಗಿ ಅಲಿ ಹಸನ್ ಕುಕ್ಕಾಜೆ, ಸಿರಾಜ್ ಮಣಿಮಜಲು ಆಯ್ಕೆಗೊಂಡರು. ಅದೇ ರೀತಿ ಉಪಸಮಿತಿಗಳಾದ ಮೀಡಿಯಾವಿಂಗ್ ಗೆ ಲುಕ್ಮಾನುಲ್ ಹಕೀಂ ಕೊೈಲ ಮತ್ತು ಜಾಬಿರ್ ಕೊಳಂಬೆ, ಪಬ್ಲಿಷಿಂಗ್ ಬ್ಯೂರೋಗೆ ಮುಹಮ್ಮದ್ ಸ್ವಾಬಿರ್ ಮತ್ತು ಹಂಝ ತೋಡಾರು, ದವಾ ವಿಂಗ್‍ಗೆ ಸಫ್ವಾನ್ ಸುಂಕದಕಟ್ಟೆ ಮತ್ತು ಮುಹಮ್ಮದ್ ಹಸನ್ ಸಾಲೆತ್ತೂರು ಚೈಯರ್‍ಮೇನ್, ಕನ್ವೀನರುಗಳಾಗಿ ಆಯ್ಕೆಯಾದರು. ಕಾರ್ಯಕ್ರಮವನ್ನು ಜಾಮಿಅಃ ಪ್ರೊಫೆಸರ್ ಶೈಖುನಾ ಸುಲೈಮಾನ್ ಫೈಝೀ ಚುಂಗತ್ತರ ಉದ್ಘಾಟಿಸಿದರು.…

Read More

UN NETWORKS ತೊಕ್ಕೊಟ್ಟು : ತೊಕ್ಕೊಟ್ಟು ಬಳಿ ರೈಲ್ವೇ ಹಳಿ ದಾಟುತ್ತಿದ್ದ ವೇಳೆ ಯುವತಿ ರೈಲಿಗೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಬುಧವಾರ ಸಂಭವಿಸಿದೆ. ಕಂಕನಾಡಿ ನಿವಾಸಿ ಮಹಮ್ಮದ್ ಕುಂಞಿ ಎಂಬವರ ಪುತ್ರಿ ತಬಸ್ಸುಂ(23) ಎನ್ನುವವರು ಮೃತ ದುರ್ದೈವಿ. ವಿವಾಹಿತೆಯಾಗಿರುವ ಅವರು ಫಾರ್ಮಸಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.ರೈಲ್ವೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Read More

UN NETWORKS ತಲಪಾಡಿ : ತಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲಂಕಾರುಗುಡ್ಡೆ,ಮಕ್ಯಾರು ರಸ್ತೆ ಅವ್ಯವಸ್ಥೆ ಹಾಗೂ ಇದರಿಂದ ಗ್ರಾಮಸ್ಥರಿಗೆ,ಶಾಲಾ ಮಕ್ಕಳಿಗೆ ಆಗುತ್ತಿರುವ ತೊಂದರೆಯನ್ನು ಮುಂದಿಟ್ಟು ಸ್ಥಳೀಯರು ಪ್ರತಿಭಟನೆಯನ್ನು ನಡೆಸಿ ತಲಪಾಡಿ ಗ್ರಾಮ ಪಂಚಾಯಿತಿ ಕಛೇರಿಗೆ ಬುಧವಾರ ಮುತ್ತಿಗೆ ಹಾಕಿದರು. ರಾಷ್ಟ್ರೀಯ ಹೆದ್ದಾರಿ 66 ರಿಂದ ಸುಮಾರು 50 ಕ್ಕೂ ಅಧಿಕ ಮನೆಗಳಿರುವ ಮಕ್ಯಾರು ಪ್ರದೇಶಕ್ಕೆ 100 ವರ್ಷಗಳ ಇತಿಹಾಸವಿರುವ ಕಾಲುದಾರಿಯಿತ್ತು.ಕ್ರಮೇಣ ಅಭಿವೃದ್ಧಿ ಆಗುತ್ತಿದ್ದಂತೆ 25 ವರ್ಷಗಳ ಹಿಂದೆ ರಸ್ತೆಯನ್ನು ಅಗಲೀಕರಣಗೊಳಿಸಿ ವಾಹನಗಳು ತೆರಳುವ ರಸ್ತೆಯಾಗಿ ಮಾರ್ಪಾಡಾಗಿತ್ತು. ಇದೀಗ 1 ಕಿ.ಮೀ ಉದ್ದದ ರಸ್ತೆ ಇಡೀ ಹೊಂಡಗಳಿಂದ ಕೂಡಿದೆ. ಮಳೆ ಬಂತೆದರೆ ಕೆಸರು ತುಂಬಿದ ರಸ್ತೆಯಲ್ಲಿ ಸಣ್ಣ ಮಕ್ಕಳು,ವೃದ್ಧರು,ಮಹಿಳೆಯರು,ಅಂಗವಿಕಲರು ಕಷ್ಟ ಪಟ್ಟು ಹೋಗುವಂತಹ ದುರಾವಸ್ಥೆ ಇಲ್ಲಿದೆ.ಗ್ರಾಮ ಸಭೆಗಳಲ್ಲಿ,ವಾರ್ಡ್ ಸಭೆಗಳಲ್ಲಿ ಗ್ರಾಮಸ್ಥರು ಹಲವು ಬಾರಿ ಜ್ವಲಂತ ಸಮಸ್ಯೆಯ ಕುರಿತು ಗಮನಹರಿಸುವಂತೆ ಒತ್ತಾಯಿಸಿದರು ಪಂಚಾಯಿತಿ ಅಧಿಕಾರಿಗಳಾಗಲಿ,ಆಡಳಿತ ಸಮಿತಿಯಾಗಲಿ,ವಾರ್ಡ್ ಸದಸ್ಯರಾಗಲಿ ಯಾವುದೇ ಮುತುವರ್ಜಿವಹಿಸಿಲ್ಲ ಎಂದು ಪ್ರತಿಭಟನೆಕಾರರು ಆರೋಪಿಸಿದರು. 1970 ರಲ್ಲಿ ತಲಪಾಡಿಯಿಂದ ಅಲಂಕಾರಗುಡ್ಡೆಯಾಗಿ ದೇವಿಪುರಕ್ಕೆ 7 ಮಂದಿ ಜೊತೆಗೆ…

Read More

UN NETWORKS ನರಿಂಗಾನ: 2019 ಫೆಬ್ರವರಿ 1 ರಿಂದ 3 ರ ತನಕ ನಡೆಯಲಿರುವ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ರಜತ ಮಹೋತ್ಸವದ ಸಿದ್ದತೆ, ಪ್ರಚಾರ ಹಾಗೂ ಯೊಜನಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಸಮ್ಮೇಳನ ಸಂಘಟನಾ ಸಮಿತಿ ರಚನಾ ಸಭೆಯು ಅಲ್ ಮದೀನ ಕ್ಯಾಂಪಸಿನ ಮಸ್ಜಿದ್ ನಲ್ಲಿ ಮಂಗಳವಾರ ನಡೆಯಿತು. ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಯ್ಯಿದ್ ಇಸ್ಮಾಯಿಲ್ ಅಲ್ ಹಾದೀ ತಂಙಳ್ ಉಜಿರೆ ದುಆ ಮೂಲಕ ಚಾಲನೆಗೈದರು. ದ.ಕ.ಉಸ್ತುವಾರಿ ಸಚಿವ ಯು.ಟಿ.ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಬೆಳ್ಳಿಹಬ್ಬದ ಸೇವಾ ಯೋಜನೆಗಳಾದ 25 ಜೋಡಿ ಸಾಮೂಹಿಕ ವಿವಾಹ, 25 ಬಾವಿ ನಿರ್ಮಾಣ ಸಹಿತ 25 ಸೇವಾ ಯೋಜನೆಗಳನ್ನು ವಿವರಿಸಿದರು. ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಬಿ.ಎಸ್.ಅಬ್ದುಲ್ಲ ಕುಂಞಿ ಫೈಝಿ, ಮುಹಮ್ಮದಲಿ ಸಖಾಫಿ ಸುರಿಬೈಲ್, ಎಸ್.ಪಿ. ಹಂಝ ಸಖಾಫಿ, ಸುಲೈಮಾನ್ ಕರಿವಳ್ಳೂರು ಶುಭ ಹಾರೈಸಿದರು. ಸಯ್ಯಿದ್…

Read More

UN NETWORKS ತೊಕ್ಕೊಟ್ಟು: ತೊಕ್ಕೊಟ್ಟಿನ ಗಂಗಾ ಕಾಂಪ್ಲೆಕ್ಸ್‌ನಲ್ಲಿ ಜಾತ್ಯಾತೀತ ಜನತಾದಳದ ಚುನಾವಣಾ ಕಚೇರಿಯನ್ನು ಹಿರಿಯ ನಾಯಕ ಹಾಜಿ ಅಬೂಬಕರ್ ನಾಟೆಕಲ್ ಉದ್ಘಾಟಿಸಿದರು. ಗಂಗಾಧರ ಉಳ್ಳಾಲ್ ಅವರ ಕಟ್ಟಡದಲ್ಲಿರುವ ಬ್ಯಾಂಕ್‌ನ್ನು ತೆರವುಗೊಳಿಸಿ ಪಕ್ಷಕ್ಕಾಗಿ ಕಚೇರಿಯನ್ನು ನೀಡಿದರ ಬಗ್ಗೆ ಸಭೆಯಲ್ಲಿ ಪ್ರಶಂಸೆ ವ್ಯಕ್ತವಾಯಿತು. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಅಧ್ಯಕ್ಷತೆಯನ್ನು ವಹಿಸಿದ್ದರು.ಕ್ಷೇತ್ರಾಧ್ಯಕ್ಷ ಮೋಹನ್ ದಾಸ್, ದಿನಕರ್ ಉಳ್ಳಾಲ್ ಪುತ್ತುಮೋನು, ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಅಝೀಝ್ ಮಲಾರ್, ಯು.ಎಚ್. ಫಾರೂಕ್, ಝಾಕೀರ್ ಉಳ್ಳಾಲ್, ಅಲಪ್ಪಿ ಡಿಸೋಜ, ಯು.ಎನ್. ಬಶೀರ್ ಅಹ್ಮದ್, ಸಾಲಿಹ್ ಉಸ್ಮಾನ್, ಅಕ್ಸಾ, ಅಶ್ರಫ್ ಕೋಡಿ, ಜಬ್ಬಾರ್ ಉಳ್ಳಾಲ್ ಮುಂತಾದವರು ಉಪಸ್ಥಿತರಿದ್ದರು. ನಝೀರ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಮುನೀರ್ ಮುಕ್ಕಚೇರಿ ವಂದಿಸಿದರು.

Read More

UN NETWORKS ಉಳ್ಳಾಲ: ಯುವಕನೋರ್ವ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾ.ಹೆ.66 ರ ನೇತ್ರಾವತಿ ಸೇತುವೆಯಲ್ಲಿ ಬುಧವಾರ ಮಧ್ಯಾಹ್ನ ವೇಳೆ ನಡೆದಿದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ರಿಕ್ಷಾದಲ್ಲಿ ದಂಪತಿ ತೆರಳುತ್ತಿದ್ದ ಸಂದರ್ಭ ಕಪ್ಪು ಬಣ್ಣದ ಟೀಶರ್ಟ್  ಹಾಗೂ ಬ್ಯಾಗ್ ಧರಿಸಿದ ಯುವಕ ಸೇತುವೆಯಿಂದ ಜಿಗಿದಿರುವುದನ್ನು ಕಂಡಿದ್ದಾರೆ. ಕೂಡಲೇ ರಿಕ್ಷಾ ನಿಲ್ಲಿಸಿ ಸೇತುವೆಯಡಿ ನೋಡಿದಾಗ ಯುವಕ ಮುಳುಗಿ ಮೇಲೇಳುತ್ತಿರುವ ದೃಶ್ಯ ಕಂಡುಬಂದಿದೆ. ಉಳಿದ ವಾಹನ ಸವಾರರು ನಿಲ್ಲಿಸಿ ನೋಡುವಷ್ಟರಲ್ಲಿ ಕೇವಲ ಬ್ಯಾಗ್ ಮಾತ್ರ ನದಿ ನೀರಿನಲ್ಲಿ ತೇಲಾಡುತಿತ್ತು. ಮಹಿಳೆ ಹೇಳಿಕೆಯಂತೆ ಸುಮಾರು 30 ರಿಂದ 35ರ ಹರೆಯದ ಯುವಕನಾಗಿದ್ದಾನೆಂದು ತಿಳಿದುಬಂದಿದೆ.

Read More

UN NETWORKS ಕಿನ್ಯ: ಬುಖಾರಿ ಜುಮಾ ಮಸ್ಜಿದ್ ಬದ್ರಿಯ ನಗರ ಕಿನ್ಯ ಇದರ ವತಿಯಿಂದ ಪವಿತ್ರವಾದ ಹಜ್ಜ್ ಕರ್ಮ ನಿರ್ವಹಿಸಲು ಯಾತ್ರೆಗೈಯ್ಯುವ ಬುಖಾರಿ ಜುಮಾ ಮಸೀದಿಯ ಪ್ರಧಾನ ಕಾರ್ಯಧರ್ಶಿ ಅಬ್ಬಾಸ್ ನಾಟೆಕಲ್ ಅವರಿಗೆ ಬೀಳ್ಕೊಡುವ ಸಮಾರಂಭ ಸೋಮವಾರ ಕಿನ್ಯ ಬುಖಾರಿ ಮಸೀದಿಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಸೈಯ್ಯದ್ ಜಲಾಲುಧ್ಧೀನ್ ಸಹದಿ ತಂಙಳ್‍ರವರು ಹಜ್ಜ್ ಇಸ್ಲಾಮಿನ ಪುಣ್ಯ ಕರ್ಮವಾಗಿದ್ದು, ಇದಕ್ಕೆ ಅರ್ಹರಾದವರು ಯಾತ್ರೆ ಮಾಡಲೇಬೇಕು. ಅದೇ ರೀತಿ ಹಜ್ಜ್‍ಯಾತ್ರಿಕರನ್ನು ಗೌರವಿಸುವುದು ಕೂಡಾ ಉತ್ತಮ ಕಾರ್ಯ ಎಂದರು. ಈ ಸಂದರ್ಭದಲ್ಲಿ ಅವರನ್ನು ಬುಖಾರಿ ಮಸೀದಿಯ ಜಮಾಅತ್ ವತಿಯಿಂದ ಶಾಲು ಹೂದಿಸಿ ಬೀಳ್ಕೂಡಲಾಯಿತು ಕಾರ್ಯಕ್ರಮದಲ್ಲಿ ಸೈಯ್ಯದ್ ಅಲವಿತಂಙಳ್,ಉಸ್ಮಾನ್ ಸಖಾಫಿ, ಕೆ.ಎಸ್. ಹಮ್ಮದ್ ಕುಂಞ, ವಿ.ಎ. ಮೊಹಮ್ಮದ್ ಮುಸ್ಲಿಯಾರ್,ಕೆ.ಎಂ.ಮುಸ್ತಫ ನಹೀಮಿ,ಕೆ.ಹೆಚ್. ಮೂಸಕುಂಞ, ಎಂ.ಕೆ.ಎಂ. ಇಸ್ಮಾಯಿಲ್,ಹೈದರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.ಮೆಹಬೂಬ್ ಸಖಾಫಿ ಕಿನ್ಯ ಸ್ವಾಗತಿಸಿದರು.

Read More

UN NETWORKS ಉಳ್ಳಾಲ: ಎಸ್‍ಎಂಎ ಮಂಜನಾಡಿ ರೀಜನಲ್ ಇದರ ವಾರ್ಷಿಕ ಕೌನ್ಸಿಲ್ ಸಭೆ ಸೋಮವಾರ ಸಮಿತಿಯ ಅಧ್ಯಕ್ಷ ಕತ್ತರ್ ಬಾವಾ ಹಾಜಿಯವರ ಅಧ್ಯಕ್ಷತೆಯಲ್ಲಿ ಮಂಗಳಾಂತಿ ಮದ್ರಸದಲ್ಲಿ ಜರಗಿತು. ಕಲ್ಕಟ್ಟ ಮಸೀದಿ ಖತೀಬ್ ಇಝುದ್ದೀನ್ ಅಹ್ಸನಿ ಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆತುರು ಸಅದ್ ಮುಸ್ಲಿಯಾರ್ ಸಮಿತಿಯ ದ್ಯೇಯೋದ್ದೇಶಗಳನ್ನು ವಿವರಿಸಿದರು. ರಿಟೈನಿಂಗ್ ಆಫೀಸರ್ ಆಗಮಿಸಿದ ಪಿ.ಎಂ. ಮಹಮ್ಮದ್ ಮದನಿಯವರು ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಯ ಬಗ್ಗೆ ವಿವರಿಸಿ ಚರ್ಚೆಗೆ ನೇತೃತ್ವ ವಹಿಸಿದ್ದರು. ಸಮಿತಿಯ ಪ್ರ.ಕಾರ್ಯದರ್ಶಿ ಮುಸ್ತಪಾ ಕಮಾಲ್ ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷರುಗಳಾದ ಉಮ್ಮರ್ ಸಖಾಫಿ, ಕುಂಞ ಬಾವಾ ಹಾಜಿ ಕಲ್ಕಟ್ಟ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ವಿದ್ಯಾರ್ಥಿನಿಯರು ಪಠ್ಯೇತರ ಚಟುವಟಿಕೆಗಳಲ್ಲಿ ಸಿಕ್ಕಿದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ತಮ್ಮಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣ ಮಾಡಬೇಕು ಎಂದು ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಫ್ಯಾರ ಮೆಡಿಕಲ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ| ವಿವಿಯನ್ ಡಿಸೋಜ ಅಭಿಪ್ರಾಯಪಟ್ಟರು. ಕಣಚೂರು ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಸಂಘಗಳ ಉದ್ಛಾಟನೆ ನೆರವೇರಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಇಕ್ಬಾಲ್ ಅಹಮ್ಮದ್ ಯು.ಟಿ.ಮಾತಾಡಿ ಪಠ್ಯೇತರ ಚಟುವಟಿಕೆಗಳ ಧ್ಯೇಯ ಮತ್ತು ಉದ್ದೇಶದ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿದರು. ವಿವಿಧ ಸಂಘಗಳ ಸಂಘಟಕರಾದ, ಮಾನವಿಕ ಸಂಘದ ಸತ್ಯಾನಾರಾಯಣ ಭಟ್, ಸಾಹಿತ್ಯ ಸಂಘದ ಲತಾ, ವಾಣಿಜ್ಯ ಸಂಘದ ಉಷಾ, ಎನ್. ಎಸ್.ಎಸ್ ಸಂಘದ ಕುಮಾರಿ ಸೌಮ್ಯ , ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಮುಫೀದಾ ಸ್ವಾಗತಿಸಿದರು. ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಬಶರಿಯಾ ಮೊನೆಕೋ ವಂದಿಸಿದರು. ದ್ವೀತಿಯ ಬಿ.ಸಿ.ಎ ವಿದ್ಯಾರ್ಥಿನಿ ಮನಾಲ್ ಕಾರ್ಯಕ್ರಮ ನಿರೂಪಿಸಿದರು.

Read More