Author: UllalaVani

Kannada News From Coastal Karnataka

UN NETWORKS ಉಳ್ಳಾಲ: ನಾಗರಪಂಚಮಿ ಪೂಜೆ ಮುಗಿಸಿದ ಅರ್ಚಕರೋರ್ವರು ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಸೋಮೇಶ್ವರದ ನಿವಾಸಿ ರಾಮಚಂದ್ರ ಭಟ್ (67) ಮೃತರು. ನಾಗರಪಂಚಮಿ ಪ್ರಯುಕ್ತ ತೊಕ್ಕೊಟ್ಟುವಿನ ಸೇವಂತಿಗುಡ್ಡೆ ಪ್ರದೇಶದಲ್ಲಿ ಬೆಳಿಗ್ಗೆ ಪೂಜೆ ನೆರವೇರಿಸಿದ ಇವರು ಬಳಿಕ ಸುಸ್ತಾಗುತ್ತಿದೆ ಎಂದು ತೊಕ್ಕೊಟ್ಟುವಿನ ಸಹಾರ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ವೈದ್ಯರು ಮಂಗಳೂರಿಗೆ ಕೊಂಡೊಯ್ಯುವಂತೆ ಸಲಹೆ ನೀಡಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಸೇರಿಸುವ ದಾರಿಮಧ್ಯೆ ಅವರು ಸಾವನ್ನಪ್ಪಿದ್ದಾರೆ. ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಕಿರಿಶಾಂತಿ ಮತ್ತು ಬಲಿ ಸೇವೆಯಲ್ಲಿ ದೇವರನ್ನು ಹೊರುತ್ತಿದ್ದ ಇವರು ನಿವೃತ್ತಿ ಬಳಿಕವೂ ಅದೇ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ಗುಡಿಯಲ್ಲಿ ಪ್ರಸಾದ ನೀಡುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

UN NETWORKS ಕೊಣಾಜೆ: ಭಾರತ ಎಂಬುದು ಅದೊಂದು ಶಕ್ತಿ. ಭಾರತದ ನೆಲದಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯವಾಗಿದೆ. ಸ್ವತಂತ್ರ ದೇಶವನ್ನು ಕಟ್ಟುವಲ್ಲಿ ಸರ್ವವನ್ನೂ ತ್ಯಾಗ ಮಾಡಿದ ಮಹಾತ್ಮರನ್ನು ನಾವು ಎಂದಿಗೂ ಮರೆಯದೆ ಮುನ್ನಡೆಯಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ ಶಿವಮೊಗ್ಗ ಅವರು ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ 72ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಂದಿನ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ನನ್ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಜೈಲಿನಲ್ಲಿರುವಾಗ ಸ್ವಾತಂತ್ರಕ್ಕಾಗಿ ಅದೆಷ್ಟೋ ವರ್ಷದಿಂದ ಹೋರಾಡುತ್ತಿದ್ದ ಮಹಾತ್ಮರ ಪರಿಚಯವಾಗಿತ್ತು. ನಾನು ಶಿವಮೊಗ್ಗದಲ್ಲಿ ವಾಸವಾಗಿದ್ದರೂ ನನ್ನ ಸ್ವಂತ ಊರು ದಕ್ಷಿಣ ಕನ್ನಡದ ಮೊಡಂಕಾಪು. ಇಂದು ನಾವು ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಜಾತಿ ಮತ ಭೇದವಿಲ್ಲದ ಸೌಹಾರ್ದ ಸಮಾವನ್ನು ಕಟ್ಟಬೇಕಿದ್ದು ಇದರಲ್ಲಿ ಯುವ ಸಮುದಾಯದ ಪಾತ್ರವೂ ಪ್ರಮುಖವಾಗಿದೆ ಎಂದರು. ನಾವು ಮಾಡುವ ಯಾವುದೇ ಉದ್ಯೋಗ ಆಗಲಿ, ವಿದ್ಯೆ ಆಗಲಿ ಪ್ರೀತಿ ಶ್ರದ್ಧೆಯಿಂದ ಮಾಡಿದರೆ ಖಂಡಿತಾ ನಮಗೆ ಅದರ ಫಲ ಸಿಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ…

Read More

UN NETWORKS ಸೋಮೇಶ್ವರ : ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು ಕೋಟೆಕಾರು : ಕೋಟೆಕಾರು ವಿಷ್ಣುಮೂರ್ತಿ ದೇವಸ್ಥಾನದ ನಾಗಬನದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಕೊಣಾಜೆ : ಕೊಣಾಜೆ ಕೆಳಗಿನಮನೆ ಬಳಿಯ ನಾಗಬನದಲ್ಲಿ ನಾಗರ ಪಂಚಮಿ ಉತ್ಸವ ನಡೆಯಿತು. ಕುಂಪಲ: ಕುಂಪಲ ಚೇತನನಗರದ ಶ್ರೀ ದುರ್ಗಾ ಪರಮೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಉತ್ಸವ ನಡೆಯಿತು. ಪಿಲಾರ್: ಪಿಲಾರು ಲಕ್ಷ್ಮಿಗುಡ್ಡೆ ನಾಗಬ್ರಹ್ಮ ಕ್ಷೇತ್ರದಲ್ಲಿ ನಾಗರ ಪಂಚಮಿ ನಡೆಯಿತು.

Read More

UN NETWORKS ಮಾಡೂರು: ಗೋಲ್ಡನ್ ಕ್ರಿಕೆಟರ್ಸ್ ಮಾಡೂರು ಗೋಲ್ಡನ್‌ ಕ್ರಿಕೆಟರ್ಸ್  ವತಿಯಿಂದ ಗೋಲ್ಡನ್ ಗ್ರೌಂಡ್ ನಲ್ಲಿ ನಡೆದ ಸ್ವಾತಂತ್ರ್ಯೋವದ ಧ್ವಜರೋಹಣ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ನೆರೆವೇರಿಸಿದರು. ಕಾಂಗ್ರೆಸ್ ಕೋಟೆಕಾರ್ ಮಹಿಳಾ ಸಮಿತಿ ಅಧ್ಯಕ್ಷೆ ಚಾಂದಿನಿ ಹರೀಶ್, ಕಾಂಗ್ರೆಸ್ ಮುಖಂಡರಾದ ಸಲೀಂ ಮೇಗ, ರಹಿಮಾನ್ ಕೋಡಿಜಾಲ್, ಗೋಲ್ಡನ್ ತಂಡದ ಅಧ್ಯಕ್ಷ ಎಂ.ಎ ಬಶೀರ್, ನಾಯಕನಾದ ಸಲಾಂ ಕೊಂಡಾಣ, ಹಿರಿಯ ಆಟಗಾರ ಆಸಿಪ್ ಮಾಡೂರು, ರಶೀದ್ ಮಾಡೂರು ಎಂಜೆಎಫ್ ಸದಸ್ಯರಾದ ರಪೀಕ್ ಮುಂಬೈ, ಇಸ್ಮಾಯಿಲ್ ಕೊಂಡಾಣ, ಸಮಾಜ ಸೇವಕರಾದ ರಿಯಾಝ್ ಕೊಂಡಾಣ ಉಪಸ್ಥಿತರಿದ್ದರು.ರಶೀದ್ ಮಾಡೂರು ಸ್ವಾಗತಿಸಿದರು. ಉಳ್ಳಾಲ್ ಬ್ಲಾಕ್ ಕಾಂಗ್ರೆಸ್ ಉಳ್ಳಾಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಕಚೇರಿಯಲ್ಲಿ ನಡೆದ 72ನೇ ಸ್ವಾತಂತ್ರ್ಯ ದಿನದ‌ ಧ್ವಜಾರೋಹಣ  ಬ್ಲಾಕ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಸೇವಾದಳ ಮುಖ್ಯ ಸಂಘಟಕ ರೂಪೇಶ್ ಭಟ್ನಗರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಪ್ರ.ಕಾರ್ಯ ಧರ್ಶಿ ರಹಿಮಾನ್ ಕೋಡಿಜಾಲ್,…

Read More

UN NETWORKS ಕೈರಂಗಳ:ಇಲ್ಲಿನ ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ವತಿಯಿಂದ 72 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಡಿ.ಜಿ ಕಟ್ಟೆ ಸಂಸ್ಥೆಯ ಕಛೇರಿಯಲ್ಲಿ ನಡೆಯಿತು.ತಾ.ಪಂ ಸದಸ್ಯರಾದ ಹೈದರ್ ಕೈರಂಗಳ ಧ್ವಜಾರೋಹಣ ನೆರವೇರಿಸಿದರು. ದುಆ ನೆರವೇರಿಸಿ ಮಾತನಾಡಿದ ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ತೋಟಾಲ್ ಖತೀಬ್ ಮುಹಿಯ್ಯದ್ದೀನ್ ಸಹದಿ ತೋಟಾಲ್, ಸಮಾಜದಲ್ಲಿ ಸೌಹರ್ದತೆ ನೆಲೆನಿಲ್ಲಬೇಕಾಗಿದೆ.ಎಲ್ಲರೂ ಜಾತಿ-ಭೇದವನ್ನು ಮರೆತು ಈ ನಾಡಿನ ಒಳಿತಿಗಾಗಿ ಒಂದಾದಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.ಗ್ರಾ.ಪಂ ಸದಸ್ಯರಾದ ಲೋಹಿತ್ ಗಟ್ಟಿ,ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಅಧ್ಯಕ್ಷ ಹಂಝ.ಬಿ,ಕೃಷ್ಣ ಗೇಮ್ಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ್ ಕೈರಂಗಳ,ಪ್ರಮುಖರಾದ ಹೈದರ್,ಆಸಿಫ್ ಪಾರೆ,ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಜಾಬಿರ್ ತೋಟಾಲ್ ಸ್ವಾಗತಿಸಿ,ಧನ್ಯವಾದಗೈದರು.

Read More

UN NETWORKS ಕುವೈತ್: ಉದ್ಯೋಗವನ್ನು ಅರಸಿ ಕೊಲ್ಲಿ ರಾಷ್ಟ್ರಗಳಲ್ಲಿ ಜೀವಿಸಬೇಕಾದ ಸನ್ನಿವೇಶದಲ್ಲಿ ಕುವೈತ್ ನಲ್ಲಿ ಕೆಸಿಎಫ್ ಆಯೋಜಿಸಿದ “ಭಾರತ ಭಾರತೀರದ್ದಾಗಿರಲಿ” ಎಂಬ ಘೋಷ ವಾಕ್ಯದೊಂದಿಗೆ “ಪ್ರಜಾ ಸಂಗಮ” ಎಂಬ ಕಾರ್ಯಕ್ರಮವು ಮರುಭೂಮಿಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ರಾಷ್ಟ್ರ ಪ್ರೇಮದ ಕಾಳಜಿಯನ್ನು ಇನ್ನಷ್ಟು ಹೆಚ್ಚಿಸಿದೆ. ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಫಾಹಿಲ್ ನಲ್ಲಿರುವ ಕೆಸಿಎಫ್ ಕೇಂದ್ರ ಕಛೇರಿಯಲ್ಲಿ ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರು,ಕೆಸಿಎಫ್ ಅಂತರರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ,ಕೊಡಗಿನ ಕಣ್ಮಣಿ ಬಹುಮಾನ್ಯ ಕೌಸರ್ ಸಖಾಫಿಯವರ ದುವಾದೊಂದಿಗೆ ಆರಂಭವಾಯಿತು. ಕೇಂದ್ರ ಕಾರ್ಯದರ್ಶಿ ತೌಫೀಕ್ ಅಡ್ಡೂರ್ ಎಲ್ಲರನ್ನೂ ಸ್ವಾಗತಿಸಿ ಕೆಸಿಎಫ್ ಕುವೈತ್ ನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದು ಕುವೈತ್ ನ ಅನಿವಾಸಿಗರಿಗೆ ಸಂತೋಷದ ಕ್ಷಣವಾಗಿದೆ ಎಂದರು. ಅಧ್ಯಕ್ಷ ಭಾಷಣದಲ್ಲಿ ಹೋರಾಟ ,ತ್ಯಾಗದಿಂದ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ವನ್ನು ಗಳಿಸಿತು ನಮಗೆ ಭಾರತದಲ್ಲಿ ಇದ್ದಂತೆ ಸ್ವಾತಂತ್ರ್ಯ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ ಎಂದು ರಾಷ್ಟ್ರ ಪ್ರೇಮದ ಬಗ್ಗೆ ತಿಳಿಸಿದರು.…

Read More

UN NETWORKS ಉಳ್ಳಾಲ: ದೇರಳಕಟ್ಟೆ ಬದ್ರಿಯ ಜುಮಾ ಮಸೀದಿ ಅಧೀನದ ಹಯಾತುಲ್ ಇಸ್ಲಾಂ ಮದರಸ ವತಿಯಿಂದ 72ನೇ ಸ್ವಾತಂತ್ರ್ಯೋತ್ಸವ ಅಚರಿಸಲಾಯಿತು.ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಡಿ.ಅಬ್ಬಾಸ್ ಹಾಜಿ ಧ್ವಜಾರೋಹಣಗೈದರು.ಬದ್ರಿಯ ಜುಮಾ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಅರ್ಶದಿ ಸಂದೇಶ ಭಾಷಣಗೈದರು. ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ಟ್ರಸ್ಟ್ ಅಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಬದ್ರಿಯ ಜುಮಾ ಮಸೀದಿ ಉಪಾಧ್ಯಕ್ಷ ಅಬ್ದುಲ್ ಅಝೀಝ್,ಪ್ರ.ಕಾರ್ಯದರ್ಶಿ ಸೇಟ್ ಮೋನು, ಎಸ್ಕೆಎಸ್ಸೆಸ್ಸೆಫ್ ಮುಖಂಡ ತಬುಕ್ ದಾರಿಮಿ, ಶೇಕಬ್ಬ ಹಾಜಿ,ದೇರಳಕಟ್ಟೆ ಮದರಸ ಮ್ಯಾನೇಜ್‍ಮೆಂಟ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಹಯಾತುಲ್ ಇಸ್ಲಾಂ ಮದರಸ ಸದರ್ ಮುಹಲೀಂ ಅಬ್ದುಲ್ಲಾ ಫೈಝಿ, ಹಯಾತುಲ್ ಇಸ್ಲಾಂ ಮದರಸ ಉಸ್ತುವಾರಿಗಳಾದ ಹನೀಫ್ ಜೆ. ಹಂಝ ಎಚ್.ಆರ್ ಮದರಸ ಅಧ್ಯಾಪಕರಾದ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಬಶೀರ್ ಅಝ್‍ಹರಿ ಉಪಸ್ಥಿತರಿದರು.

Read More

UN NETWORKS ಇನೋಳಿ: ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ರಾಮಾಯಣ ಮಾಸಾಚರಣೆ ಯ ಅಂಗವಾಗಿ ಸಮುದ್ರೋಲಂಘನ ಹರಿಕಥಾ ಸತ್ಸಂಗ ಕಾರ್ಯಕ್ರಮವನ್ನು ಪುಂಡರಿಕಾಕ್ಷ ಬೆಳ್ಳೊರು ಇವರು ನಡೆಸಿದರು.

Read More

UN NETWORKS ದೇರಳಕಟ್ಟೆ: ರಾಮಾಯಣ ಮಾಸಾಚರಣೆಯ ಅಂಗವಾಗಿ ಶ್ರೀ ಅಯ್ಯಪ್ಪ ದೇವಸ್ಥಾನ ದೇರಳಕಟ್ಟೆಯಲ್ಲಿ ಅತಿಕಾಯ ಮೋಕ್ಷ ಎಂಬ ಹರಿಕಥಾ ಸತ್ಸಂಗ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದೇವಸ್ಥಾನ ಗುರುಸ್ವಾಮಿ ವಿಶ್ವನಾಥ ಕಾಯರಪಳಿಕೆ ಉದ್ಘಾಟಿಸಿದರು. ರಾಮಾಯಣ ಮಾಸಾಚರಣೆ ಸಮಿತಿಯ ಗೌರವ ಅಧ್ಯಕ್ಷ ರಾದ ರವೀಂದ್ರ ಶೆಟ್ಟಿ ಉಳಿದೋಟು, ಸಮಿತಿ ಅಧ್ಯಕ್ಷರಾದ ಹರಿದಾಸ ಮಾಡೂರು, ಚಂದ್ರಹಾಸ ಅಡ್ಯಂತಾಯ, ಸೀತಾರಾಮ ಶೆಟ್ಟಿ ದಡಸ್ ಮತ್ತಿತರರು ಉಪಸ್ಥಿತರಿದ್ದರು.

Read More

UN NETWORKS ಕುಂಪಲ: ರಾಮಾಯಣ ಮಾಸಾಚರಣೆಯ ಅಂಗವಾಗಿ ಶ್ರೀ ಕೃಷ್ಣಮುಖ್ಯಪ್ರಾಣ ದೇವಸ್ಥಾನ ಮಾರುತಿ ಮಠ ಗುರುನಗರ ಕುಂಪಲದಲ್ಲಿ ಕುಂಭಕರ್ಣ ಮೋಕ್ಷ ಹರಿಕಥಾ ಸತ್ಸಂಗ ಕಾರ್ಯಕ್ರಮವನ್ನು ಪುಂಡರಿಕಾಕ್ಷ ಬೆಳ್ಳೊರು ಇವರು ನಡೆಸಿದರು.

Read More