Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕೇಂದ್ರ ಸಮಿತಿ ತೊಕ್ಕೋಟ್ಟು ಉಳ್ಳಾಲ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ಕುಟುಂಬ ಮಿಲನ “ಆಟಿ ವಿಶೇಷ ಕಾರ್ಯಕ್ರಮವು ಜಪ್ಪು ರಿವರ್ ಡೇಲ್ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಲರಾಯ ಧೂಮವತಿ ಬಂಟ ದೈವಗಳ ಭಂಡಾರಮನೆಯ ಟ್ರಸ್ಟಿಯಾದಬಾಬು ಶಾಸ್ತ ಕಿನ್ಯ ಉದ್ಘಾಟಿಸಿ ಶುಭ ಹಾರೈಸಿದರು.ಅಧ್ಯಕ್ಷತೆಯನ್ನು ಕೆ.ಟಿ ಸುವರ್ಣ ವಹಿಸಿ ಆಟಿದ ವಿಶೇಷತೆಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಸತೀಶ್ ಕರ್ಕೇರ, ಕೆ.ಪಿ ಸುರೇಶ್, ಚಂದ್ರಶೇಖರ್ ಉಚ್ಚಿಲ್, ಆನಂದ ಕೆ ಅಸೈಗೊಳಿ, ಲಕ್ಷ್ಮಣ ಪೂಜಾರಿ, ಚಂದ್ರಹಾಸ್ ಪಂಡಿತ್ ಹೌಸ್, ಹರೀಶ್ ಅಂಬ್ಲಮೊಗರು, ರಾಜೇಶ್ ಉಳ್ಳಾಲ್, ಉದಯ ಆರ್.ಕೆ, ರವಿ ಸುವರ್ಣ ಉಪಸ್ಥಿತರಿದ್ದರು. ವೇದಿಕೆಯ ಪ್ರ. ಕಾರ್ಯದರ್ಶಿ ಜೀವನ್ ಕುಮಾರ್ ಸ್ವಾಗತಿಸಿ , ಧನ್ಯವಾದ ವಿತ್ತರು.ಮನೋರಂಜನೆಯ ಅಂಗವಾಗಿ ವಿವಿಧ ಸ್ಪರ್ಧೆ , ಕ್ವಿಜ್ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಆಟಿಯ ವಿಶೇಷ ತಿಂಡಿ ತಿನಿಸುಗಳನ್ನು ಸವಿಯಲಾಯಿತು.

Read More

UN NETWORKS ಕೊಣಾಜೆ: ಮಂಗಳ ಗ್ರಾಮೀಣ ಯುವಕ ಸಂಘ ಕೊಣಾಜೆ, ಮೊಸರು ಕುಡಿಕೆ ಉತ್ಸವ ಸಮಿತಿ ಕೊಣಾಜೆ ಹಾಗೂ ನಾಗಬ್ರಹ್ಮ ಪ್ರಗತಿಪರ ಸ್ವಹಾಯ ಸಂಘಗಳ ಆಶ್ರಯದಲ್ಲಿ 15ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾನುವಾರ ಸಾರ್ವಜನಿಕ ಕ್ರೀಡಾಕೂಟ ನಡೆಯಿತು. ಪ್ರಗತಿಪರ ಕೃಷಿಕ ಹಾಗೂ ಪಂಚಾಯತ್ ಸದಸ್ಯ ಅಚ್ಯುತಗಟ್ಟಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ, ಕಳೆದ ಹಲವಾರು ವರ್ಷಗಳಿಂದ ಮಂಗಳ ಗ್ರಾಮೀಣ ಯುವಕ ಸಂಘ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ಕ್ರೀಡಾಕೂಟಗಳು ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಜಾತಿ ಮತ ಭೇದವಿಲ್ಲದೆ ಪರಿಸರದ ಪ್ರತಿಯೊಬ್ಬರೂ ಪಾಲ್ಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಮತ್ತು ಸಮಾಜದಲ್ಲಿ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕೊಣಾಜೆಯ ಸೀತಾರಾಮ ಗಟ್ಟಿ, ಮಹಾಬಲ ಗಟ್ಟಿ, ದಯಾನಂದ ಗಟ್ಟಿ, ಮಹಮ್ಮದ್ ಮನ್ಸೂರ್, ರಾಜೇಶ್ ಶೆಟ್ಟಿ, ಸುನೀಲ್ ಕುಮಾರ್ ಗಟ್ಟಿ, ಹಸನ್ ಕುಂಞ, ಅದ್ರಾಮ, ಹೆನ್ರಿ ಡಿ’ಸೋಜ, ಸುಧಾಕರ ಕೊಣಾಜೆ, ಅಬ್ಬಾಸ್, ಶೆರೀಫ್ ಕೋಡಿಜಾಲ್, ಚಂದ್ರಶೇಖರ…

Read More

UN NETWORKS ಉಳ್ಳಾಲ: ಮಕ್ಕಳನ್ನು ಧೈರ್ಯವಂತಹ ಮನುಷ್ಯನನ್ನಾಗಿ ಮಾಡುವಂತಹ ಪ್ರಯತ್ನ ಆಗಬೇಕಿದೆ. ಈ ಮೂಲಕ ಅವರಲ್ಲಿ ಸರಿ ದಾರಿ ಮತ್ತು ತಪ್ಪು ದಾರಿಗಳ ಜ್ಞಾನ ವೃದ್ಧಿಯಾಗಲು ಸಾಧ್ಯ ಎಂದು ಶ್ರೀ ಕ್ಷೇತ್ರ ಕೊಂಡಾಣ ಸಮಿತಿ ಅಧ್ಯಕ್ಷ ರಾಜೇಶ್ ರೈ ಕೋಟೆಕಾರ್ ಗುತ್ತು ಅಭಿಪ್ರಾಯಪಟ್ಟರು. ಅವರು ಎಸ್ಸೆಸ್ಸೆಫ್ ರಾಜ್ಯಾದಂತಹ ಹಮ್ಮಿಕೊಂಡ “ನಮ್ಮ ಮಕ್ಕಳು ನಮ್ಮವರಾಗಲು” ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ವತಿಯಿಂದ ಜನಜಾಗೃತಿ ಮೂಡಿಸುವ ಬೈಕ್ ರ್ಯಾಲಿಯ ಸಮಾರೋಪ ಹಾಗೂ ಎಸ್‍ವೈಎಸ್ ಕೆಸಿ ರೋಡು ಸೆಂಟರ್ ವತಿಯಿಂದ 72ನೇ ಸ್ವಾತಂತ್ರ್ಯದ ಅಂಗವಾಗಿ ಬೀರಿ ಖಾಸಗಿ ಸಭಾಂಗಣದಲ್ಲಿ ಭಾನುವಾರ ಜರಗಿದ “ಭಾರತ ಭಾರತೀಯರದ್ದಾಗಲಿ” ಪ್ರಜಾ ಸಂಗಮ ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿದರು. ಯುವಸಮುದಾಯ ಮಾರ್ಕಿನ ಹಿಂದುಗಡೆ ಓಡುವಂತಹ ವಾತಾವರಣ ಇದೆ. ಹಿಂದೆ ಕೂಡು ಕೂಡು ಕುಟುಂಬವಿತ್ತು. ಎಲ್ಲಾ ನೀತಿಪಾಠವನ್ನು ಮನೆಯೊಳಗೇ ಕಲಿಯುವಂತಹ ಸ್ಥಿತಿಯಿತ್ತು. ಮಕ್ಕಳಿಗೆ ಮನೆಯೇ ಪಾಠಶಾಲೆ ಆಗಿತ್ತು. ಆದರೆ ಇದೀಗ ಹೊರಗಡೆ ಆಟವಾಡುವಂತಹ ಮಕ್ಕಳನ್ನು ಒಳಗೆ ಕರೆತಂದು ಬಂಧಿಯಲ್ಲಿಟ್ಟು ಓದಿಸುವ…

Read More

UN NETWORKS ಕುಂಪಲ: ಮನೆಗಳಲ್ಲಿ ಆಚಾರ ವಿಚಾರಗಳು ಉಳಿಯಬೇಕಾದಲ್ಲಿ ಮಹಿಳೆಯರು ಕೈಯಿಂದ ರಿಮೋಟನ್ನು ಬಿಟ್ಟು ಸೋಫಾದಿಂದ ಎದ್ದು ಕ್ರಿಯಾಶೀಲರಾಗಿ ಬಾಳುವ ವಾತಾವರಣ ನಿರ್ಮಿಸಬೇಕು ಎಂದು ಉದ್ಯಮಿ ದಿನೇಶ್ ಎಂ.ಪಿ ಅಭಿಪ್ರಾಯಪಟ್ಟರು. ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ವತಿಯಿಂದ ಬಾಲಕೃಷ್ಣ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಜರಗಿದ ಆಟಿದ ಪರ್ಬ, ಜ್ಞಾನ ದೀವಿಗೆ ಪುರಸ್ಕಾರ, ಗ್ರಾಮೀಣ ಕ್ರೀಡಾ ಪಂಥದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೀವನದಲ್ಲಿ ಸಕಾರಾತ್ಮಕ ಗುಣಗಳನ್ನು ಅಳವಡಿಸಲು ಆಚಾರಗಳು, ವಿಚಾರಗಳು ಪ್ರಮುಖವಾಗಿರಬೇಕು. ಆದರೆ ಇಂದು ಆಚಾರಗಳನ್ನು ಉಳಿಸುವ ಪ್ರಯತ್ನವಾಗುತ್ತಿಲ್ಲ. ಸೀರಿಯಲ್ ಗಳನ್ನೊ ನೋಡುತ್ತಾ ಅದರ ಅನುಕರಣೆಯಲ್ಲಿ ವಿಚಾರಗಳನ್ನು ನಶಿಸುತ್ತಾ ಜೀವನ ನಡೆಯುತ್ತಿದೆ. ಅದಕ್ಕಾಗಿ ಮಹಿಳೆಯರು ಸೀರಿಯಲ್ ಗಳಿಂದ ದೂರವಾಗಿ ಹಿಂದಿನವರ ಆಚಾರಗಳನ್ನು ಮತ್ತು ವಿಚಾರಗಳನ್ನು ಎತ್ತಿಹಿಡಿಯಬೇಕಾಗಿದೆ. ಆಷಾಢಕ್ಕೆ ಒಂದು ದಿನ ಆಚರಿಸಿದ ಮರುದಿನ ಮನಸ್ಥಿತಿ ಯಾವ ರೀತಿಯಲ್ಲಿರುತ್ತದೆ ಅನ್ನುವ ವಿಚಾರದ ಕುರಿತು ವಿಮರ್ಶೆ ಮಾಡಬೇಕಿದೆ. ಜನ ಮಾಯಾಲೋಕದಲ್ಲಿ ಬಾಳುತ್ತಾ ಆಷಾಢದಲ್ಲಿ ಒಂದು ದಿನ ಆಚರಿಸಿಬಿಡುತ್ತಾರೆ. ಆದರೆ ಆಚರಣೆಯಿಂದ ಮನಸ್ಥಿತಿ ಸಕಾರಾತ್ಮಕವಾಗಿ ಆನಂದವಾಗಿರಲು…

Read More

UN NETWORKS ಮುಡಿಪು: ಮಜ್ಲೀಸ್ ಇಜ್ಯು ಪಾರ್ಕ್ ಮುಡಿಪು‌ನಲ್ಲಿ‌ ಮಾಸಿಕ‌ ನಡೆಸಿ ಬರುವ ಸಖಾಫಿಯ್ಯಾ ರಾತೀಬ್ ಮಜ್ಲಿಸ್ ಅಸ್ಸಯ್ಯಿದ್ ಮುಹಮ್ಮದ್ ಅಶ್ರಫ್ ಆಸ್ಸಖಾಫ್ ತಂಙಳ್ ಅದೂರು ನೇತ್ರತ್ವದಲ್ಲಿ ನಡೆಯಿತು. ಸಂಸ್ಥೆಯ ಮ್ಯಾನೇಜರ್ ಜಲಾಲುದ್ದೀನ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶವಾದ ಮುಡಿಪುನಲ್ಲಿ ಎಜ್ಯು ಪಾರ್ಕ್ ಎಂಬ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಮುಡಿಪು ಪರಿಸರ ಧಾರ್ಮಿಕ ಹಾಗೂ ಲೌಕಿಕ ವಿದ್ಯೆ ಯಿಂದ ಬೆಳಗಿದೆ. ಮುಂದಿನ ದಿನಗಳಲ್ಲಿ ಕ್ರಾಂತಿ ಮಾಡಲಿದೆ ಎಂದು ಹೇಳಿದರು. ಕೌಸರ್ ಸಖಾಫಿ ಪನ್ನೂರು ಮುಖ್ಯ ಪ್ರಭಾಷಣ ಗೈದು ಮಾತನಾಡಿ ಸೈಯದ್ ತಂಙಳ್ ಕುಟುಂಬವನ್ನು ಗೌರವಿಸಿ. ಅವರು ಪ್ರವಾದಿ ರಕ್ತ ಸಂಬಂಧಿಕರು ಎಂಬುದನ್ನು ಮರೆಯದೆ ಅವರಿಗೆ ಧಾರ್ಮಿಕ ಲೌಕಿಕ ಜ್ಞಾನ ಇಲ್ಲದಿದ್ದರೂ ಅವರು ಯಾವ ಸ್ಥಿತಿಯಲ್ಲಿ ಇದರು ಅವರನ್ನು ಗೌರವಿಸಿ. ಸೈಯದ್ ಗಳನ್ನು ಗೌರವಿಸುವವರು ಮಾತ್ರ ಮುಸಲ್ಮಾನರು ಎಂದು ಹೇಳಿದರು. ಎಸ್.ಎಂ ಎ ಮುಡಿಪು ವಲಯಾಧ್ಯಕ್ಷ ಅಬೂಬಕ್ಕರ್, ಮಂಞಪಾರ ಸಮೀರ್ ಸಖಾಫಿ, ನ್ಯಾಯವಾದಿ ಉಬೈದ್ ಸಖಾಫಿ, ಪುತ್ತುಬಾವ ಹಾಜಿ, ಬಾಳೇಪುಣಿ…

Read More

UN NETWORKS ಬೆಂಗಳೂರು: ಬೆಂಗಳೂರಿಗೆ ಹೊಸ ಟೇಸ್ಟನ್ನು ಪರಿಚಯಿಸಲು ಮುಂದಾಗಲಿರುವ ` ಕುಲುಕ್ಕಿ’ ಸಂಸ್ಥೆ ಯಶಸ್ವಿಯಾಗಿ ಎಲ್ಲಾ ಹರೆಯದವರಿಗೂ ಮೆಚ್ಚುವಂತೆ ಮುಂದುವರಿಯಲಿ ಎಂದು ರಾಜ್ಯ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು. ಬೆಂಗಳೂರಿನ ಕೋರಮಂಗಲದ ಐದನೇ ಬ್ಲಾಕ್ , ಎಂಪೈರ್ ಹೊಟೇಲಿನ ಎದುರುಗಡೆ ಶನಿವಾರ ಕುಲುಕ್ಕಿ ( ಮೀಟ್, ಈಟ್ ಆಂಡ್ ಡ್ರಿಂಕ್ ) ಸಂಸ್ಥೆಯನ್ನು ಉದ್ಘಾಟನೆಗೊಳಿಸಿ ಮಾತನಾಡಿದರು. ಕೋರಮಂಗಲ ಅಂದರೆ ಹೊಸ ಜನ , ಹೊಸ ಯುವಕರಿಗೆ ಪ್ರಸಿದ್ಧವಾದಂತಹ ಜಾಗವಾಗಿದೆ. ಈ ಭಾಗದಲ್ಲಿ ಹೊಸ ಟೇಸ್ಟ್ ಗಳನ್ನು ಪರಿಚಯಿಸಲು ಮುಂದಾಗಿರುವ ` ಕುಲುಕ್ಕಿ’ ಸಂಸ್ಥೆ ಯಶಸ್ವಿಯಾಗಲಿದೆ. ಇಂತಹ ಕಾರ್ಯಕ್ರಮವನ್ನು ಒಪ್ಪಿಕೊಳ್ಳುವುದು ಬಹಳಷ್ಟು ಕಡಿಮೆ. ಆದರೆ ಹೊಸ ಜನರೇಷನ್ನಿನವರು ಒಪ್ಪಿಕೊಳ್ಳುವಂತಹ ಹೊಸ ಟೇಸ್ಟನ್ನು ಪರಿಚಯಿಸುವ ಕಾರ್ಯ ಆಗಿರುವುದರಿಂದ ಉದ್ಘಾಟನೆ ನಡೆಸಿರುವೆ. ಬೆಂಗಳೂರಿಗೆ ಇದೊಂದು ಸಂತಸದ ಕ್ಷಣವಾಗಿದೆ. ಬೆಂಗಳೂರಿಗೆ ಕುಲುಕ್ಕಿಯನ್ನು ಪರಿಚಯಿಸಲಾಗುತ್ತಿದ್ದು, ಈ ಮೂಲಕ ಎಲ್ಲಾ ಹರೆಯದವರಿಗೂ ಕುಲುಕ್ಕಿ ಮೆಚ್ಚುವಂತಿರಲಿ ಸಂಸ್ಥೆ ಬೆಂಗಳೂರಿಗರ ಮನ ಗೆಲ್ಲಲಿ ಎಂದು ಶುಭಹಾರೈಸಿದರು. ಕುಲುಕ್ಕಿ…

Read More

UN NETWORKS ತೊಕ್ಕೊಟ್ಟು: ಹಿರಿಯ ನಾಗರಿಕರೊಬ್ಬರು ತನ್ನ ಸಹೋದರಿ ಮತ್ತು ಬಾವನಿಗೆ ರಾಡಿನಿಂದ ತಲೆಗೆ ಬಡಿದು ಕೊಲೆಗೆ ಯತ್ನಿಸಿದ ಘಟನೆ ತೊಕ್ಕೊಟ್ಟುವಿನ ಕಾಪಿಕಾಡು ಒಂದನೇ ಅಡ್ಡಕ್ರಾಸಿನಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದ್ದು, ಆರೋಪಿ ಠಾಣೆಗೆ ತೆರಳಿ ಶರಣಾಗಿದ್ದಾರೆ. ಕಾಪಿಕಾಡು ನಿವಾಸಿ ಜಾನೆಟ್ ಡಿಸೋಜಾ(58) ಮತ್ತು ಬಾವ ಜೋಸೆಫ್ (65) ಎಂಬವರ ತಲೆಗೆ ರಾಡಿನಿಂದ ಬಡಿದು ಕೊಲೆಗೆ ಯತ್ನಿಸಲಾಗಿದೆ. ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾನೆಟ್ ಅವರ ಹಿರಿಯ ಸಹೋದರ ಡೇನಿಸ್ (78) ಎಂಬವರು ಕೃತ್ಯ ನಡೆಸಿದ್ದು, ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. `ನೋಡಿಕೊಳ್ಳುತ್ತಿರಲಿಲ್ಲ’ : ಹಿರಿಯ ನಾಗರಿಕನಾಗಿರುವ ಡೇನಿಸ್ ಅವರು ಅವಿವಾಹಿತರಾಗಿದ್ದಾರೆ. ಸಿವಿಲ್ ಗುತ್ತಿಗೆದಾರನಾಗಿದ್ದ ಅವರು ಸಹೋದರಿ ಹಾಗೂ ಸಹೋದರಿಯರ ಜವಾಬ್ದಾರಿಯನ್ನು ಯುವ ಹರೆಯದಲ್ಲಿ ವಹಿಸಿಕೊಂಡಿದ್ದರು. ತಮ್ಮ ಪಾಲಿನ ಮನೆಯನ್ನೂ ಸಹೋದರಿಯ ಹೆಸರಿಗೆ ಮಾಡಿಕೊಂಡಿದ್ದ ಅವರು, ಸಹೋದರಿಯ ಕುಟುಂಬದ ಜೊತೆಗೆ ಒಂದೇ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಕೆಲ ವರ್ಷಗಳಿಂದ ಸಹೋದರಿ ಮತ್ತು ಬಾವ ಸರಿಯಾಗಿ…

Read More

UN NETWORKS ಉಳ್ಳಾಲ: ನಿಟ್ಟೆ ಉಷಾ ನರ್ಸಿಂಗ್ ಕಾಲೇಜಿನ ಮಕ್ಕಳ ಶುಶ್ರೂಷಾ ವಿಭಾಗದ ವತಿಯಿಂದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಡಾ| ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕ ಸವಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನರ್ಸಿಂಗ್ ಕಾಲೇಜಿನ ಜೀವಿತಾ ಆಳ್ವ ಸ್ತನ್ಯಪಾನ ವಾರದ ಪ್ರಾಮುಖ್ಯತೆಯನ್ನು ವಿವರಿಸಿದರು. ಹರ್ಷ ಥೋಮಸ್ ಮತ್ತು ಶಂಸೀನ ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಶಂಸುಲ್ ಉಲಮಾ ಅರೇಬಿಕ್ ಕಾಲೇಜು – ತೋಡಾರ್ ಇದರ ಅಬುಧಾಬಿ ಘಟಕದ ನೂತನ ಕಮಿಟಿ ಶುಕ್ರವಾರ ರಚನೆಗೊಂಡಿತು.. ಗೌರವಾಧ್ಯಕ್ಷರು ಜನಾಬ್ ಹನೀಫ್ ಹರಿಯಮೂಲೆ, ಅಧ್ಯಕ್ಷರಾಗಿ ಜನಾಬ್ ಯಾಹ್ಯಾ ಕೊಡ್ಲಿಪೇಟ್,ಪ್ರಧಾನ ಕಾರ್ಯದರ್ಶಿ ಜನಾಬ್ ಹಫೀಜ್ ತುಂಬೆ,ಕೋಶಾಧಿಕಾರಿ ಜನಾಬ್ ಶಾಫಿ ಪೆರುವಾಯಿ ಅವರನ್ನು ಆರಿಸಲಾಯಿತು. ಉಪಾದ್ಯಕ್ಷರುಗಳಾಗಿ ಜನಾಬ್ ಬಷೀರ್ ಹರಿಯಮೂಲೆ ,ಜನಾಬ್ ಮುಹಮ್ಮದ್ ಮಡಿಕೇರಿ, ಜನಾಬ್ ಕಾದರ್ ಕಾರ್ಕಳ, ಕಾರ್ಯದರ್ಶಿಗಳಾಗಿ ಜನಾಬ್ ರಾಯಿಜ್ಹ್ ಹರಿಯಮೂಲೆ, ಜನಾಬ್ ಅಶ್ರಫ್ ಮಾಂಕುಡೆ ವಿಟ್ಲ ಇವರನ್ನು ನೇಮಿಸಲಾಯಿತು. ಸಂಚಾಲಕರನ್ನಾಗಿ ಜನಾಬ್ ಜಲೀಲ್ ಮರಕಿಣಿ, ಜನಾಬ್ ಫೈಸಲ್ ಗುಣಾಜೆ,ಇವರನ್ನು ಆಯ್ಕೆ ಮಾಡಲಾಯಿತು. ಮತ್ತು ಹತ್ತು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ SKSSF ಕರ್ನಾಟಕ ಅಬುಧಾಬಿ ಇದರ ಅಧ್ಯಕ್ಷರಾದ ಜನಾಬ್ ಹನೀಫ್ ಹರಿಯಮೂಲೆ ಯವರು ಸಭೆಯಲ್ಲಿ ಆಸೀನರಾದ ಯುವ ಸಮೂಹಕ್ಕೆ ನಾಯಕತ್ವ ಹೇಗಿರಬೇಕು, ಮಗನಾಗಿ, ಗಂಡನಾಗಿ, ಒಬ್ಬ ಸಹೋದರನಾಗಿ, ತಂದೆಯಾಗಿ, ನೆರೆಕರೆಯರೊಂದಿಗೆ ಹಾಗು ಸಮುದಾಯಕ್ಕೆ ನಮ್ಮ ಕರ್ತವ್ಯಗಳನ್ನು ಹೇಗೆ ನಿಭಾಹಿಸೋದು…

Read More

UN NETWORKS ಮಂಗಳೂರು: ಕುಲುಕ್ಕಿ ಶರಬತ್ ಕುಡಿದವರು, ಕೇಳದವರು ಯಾರಿಲ್ಲ ಹೇಳಿ !!! ಕೇರಳ, ಮಂಗಳೂರಿನ ಜನರ ಅಚ್ಚುಮೆಚ್ಚಿನ ಕುಲುಕ್ಕಿ ಶರಬತ್ ನ್ನು ಇದೀಗ ಬೆಂಗಳೂರಿನ ಜನರಿಗೂ ಪರಿಚಯಿಸಲು ಮಂಗಳೂರಿನ ತಂಡವೊಂದು ಸಿದ್ಧವಾಗಿದೆ. ಕರ್ನಾಟಕ ರಾಜ್ಯ ಸರಕಾರದ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಿ.ಕೆ.ಶಿವಕುಮಾರ್ ಆಗಸ್ಟ್ 11 ಸಂಜೆ 4.00 ಗಂಟೆಗೆ ಬೆಂಗಳೂರಿನ ಕೋರಮಂಗಲದಲ್ಲಿ ಅಧಿಕೃತವಾಗಿ KULUKKI (MEET, EAT & DRINK) ಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಕೋರಮಂಗಲದ ಐದನೇ ಬ್ಲಾಕ್ , ಎಂಪೈರ್ ಹೊಟೇಲಿನ ಎದುರುಗಡೆ KULUKKI (MEET, EAT & DRINK) ಜತೆಯಾಗು, ತಿನ್ನು, ಹಾಗೂ ಕುಡಿಯಿರಿ ಅನ್ನುವ ಲಾಂಛನದೊಂದಿಗೆ ಶುಭಾರಂಭಗೊಳ್ಳಲಿದೆ. ಆಫರ್ ಆಗಿ ` ವಾಟ್ಸ್ಯಾಪ್ ಮೂಲಕ ಮೊಬೈಲ್ ಸಂಖ್ಯೆ +9191988125776 ಸಂಖ್ಯೆಗೆ ಇಂಗ್ಲೀಷಿನಲ್ಲಿ `KULUKKI’ ಟೈಪ್ ಮಾಡಿ ಜತೆಗೆ ತಮ್ಮ ಹೆಸರನ್ನು ಹಾಕಬೇಕಾಗಿದೆ. ವಿಜೇತರಾದವರಿಗೆ ಮೆನುವಿನಲ್ಲಿರುವ ಒಂದು ಐಟಂ ಅನ್ನು ಉಚಿತವಾಗಿ ನೀಡಲಿದ್ದೇವೆ. ಒಂದು ವಾರದಲ್ಲಿ ಒಬ್ಬ ವಿಜೇತರಾಗುತ್ತಾರೆ ಎಂದು ಸಂಸ್ಥೆ ಮಾಲೀಕರು…

Read More