Author: UllalaVani

Kannada News From Coastal Karnataka

UN NETWORKS ತೊಕ್ಕೊಟ್ಟು: ತೊಕ್ಕೊಟ್ಟು ಭಟ್ನಗರದ ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 58ನೇ ವರ್ಷದ ತೊಕ್ಕೋಟು ಮೊಸರು ಕುಡಿಕೆ ಉತ್ಸವ ಸೆ . 2 ರಿಂದ 3 ರವರೆಗೆ ತೊಕ್ಕೊಟ್ಟುವಿನಲ್ಲಿ ನಡೆಯಲಿದೆ. ಸೆ.2 ರ ಭಾನುವಾರ ತಲಪಾಡಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ತಲಪಾಡಿ ಇವರಿಂದ ತೊಕ್ಕೊಟ್ಟು ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆಯಲ್ಲಿ ಶ್ರೀ ಕೃಷ್ಣ ಬೆಳ್ಳಿ ಪ್ರತಿಮೆ ಪ್ರತಿಷ್ಠೆ ಸೆ.3 ರ ಬೆಳಿಗ್ಗೆ ಶ್ರೀ ವಿಠೋಭ ರುಕ್ಮಾಯಿ ಮಂದಿರ ತೊಕ್ಕೊಟ್ಟು ಇವರಿಂದ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಮಡಕೆ ಒಡೆಯುವ ಸ್ಪರ್ಧೆ ಜೊತೆಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಸಂಜೆ 6 ಗಂಟೆಗೆ ಅಡಿಕೆ ಮರ ಏರುವ ಸ್ಪರ್ಧೆ ಬಳಿಕ ಸಿಂಚನ ಮೆಲೋಡೀಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ಬಳಿಕ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಸಂಜೆ 7.30 ರಿಂದ ಶ್ರೀ ಜೈ…

Read More

UN NETWORKS ಅಸೈಗೋಳಿ: ಕೇವಲ ಪ್ರಶಸ್ತಿಗಾಗಿ ಕ್ರೀಡೆಯಲ್ಲಿ ಭಾಗವಹಿಸದೆ ಕ್ರೀಡಾ ಮನೋಭಾವದೊಂದಿಗೆ ಉತ್ತಮ ಆರೋಗ್ಯ ಮತ್ತು ಮನೋರಂಜನೆಯ ದೃಷ್ಟಿಯಲ್ಲಿ ಭಾಗವಹಿಸುವುದರಿಂದ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಯುವ ಉದ್ಯಮಿ ಅರುಣ್ ಶೆಟ್ಟಿ ಅಭಿಪ್ರಾಯಪಟ್ಟರು. ಅಸೈಗೋಳಿ ಯುವಕ ಮಂಡಲ ಮತ್ತು ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಭಾನುವಾರ ಅಸೈಗೋಳಿ ಕೇಂದ್ರ ಮೈದಾನದಲ್ಲಿ 31ನೇ ವರ್ಷದ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ನಡೆದ ಸಾರ್ವಜನಿಕ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು. ಸಮಿತಿಯ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪುಲ್ಲು ಅಧ್ಯಕ್ಷತೆ ವಹಿಸಿದ್ದರು. ಸಲಹೆಗಾರರಾದ ಆನಂದ ಕೆ.ಅಸೈಗೋಳಿ, ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ಕೋಶಾಧಿಕಾರಿ ಸುಧಾಕರ್ ಭಟ್, ಸ್ವಾಗತ ಸಮಿತಿ ಸದಸ್ಯೆ ದೇವಕಿ ಮುಂತಾದವರು ಉಪಸ್ಥಿತರಿದ್ದರು. ಸಮಿತಿಯ ಪದಾಧಿಕಾರಿಗಳಾದ ಕೃಷ್ಣಪ್ಪ ಎನ್.ಕೊಣಾಜೆ, ದೀಕ್ಷಿತ್, ದೀಪಕ್, ಪುರಂದರ ಶೆಟ್ಟಿ ಅಸೈ, ಪ್ರಣಾಮ, ಮಧುಕಾಂತ್ ಸಹಕರಿಸಿದರು. ಕ್ರೀಡಾ ಸಂಚಾಲಕ ರಾಧಕೃಷ್ಣ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಪ್ರಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ರತ್ನ…

Read More

UN NETWORKS ಪಾವೂರು: ಪ್ರತಿ ಮನುಷ್ಯ, ಜೀವಿಯಲ್ಲೂ ಒಂದೊಳ್ಳೆಯ ಗುಣ ಇರುತ್ತದೆ, ಆದರೆ ಅದನ್ನು ಗುರುತಿಸುವವರ ಕೊರತೆ ಇದೆ ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಡಾ.ಪ್ರಶಾಂತ್ ಕುಮಾರ್ ಕೆ.ಎಸ್. ಅಭಿಪ್ರಾಯಪಟ್ಟರು. ಪಾವೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಂಟು ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪದೋನ್ನತಿಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ರೋಟರಿ ಕ್ಲಬ್ ಸಹಕಾರದಲ್ಲಿ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ತನ್ನ ಅವಧಿಯಲ್ಲಿ ಶಾಲೆ ಅಭಿವೃದ್ಧಿ ಕಾಣಬೇಕಾದರೆ ಜನಪ್ರತಿನಿಧಿಗಳು ಒದಗಿಸಿಕೊಟ್ಟ ಸರ್ಕಾರಿ ಅನುದಾನ, ಶಿಕ್ಷಣ ಪ್ರೇಮಿಗಳು, ಊರಿನ ಜನರು, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳ ಸಹಕಾರ ಕಾರಣವಾಗಿದ್ದು, ತಾನು ನಿಮಿತ್ತ ಮಾತ್ರ. ಪದೋನ್ನತಿಗೊಂಡರೂ ಜೀವನದಲ್ಲಿ ಎಂದಿಗೂ ಪಾವೂರು ಶಾಲೆ, ಗ್ರಾಮಸ್ಥರ ಸಹಕಾರ ಮರೆಯಲಾಗದು ಎಂದು ಹೇಳಿದರು. ಕೊಣಾಜೆ ವಲಯ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಶಂಕರಾನಂದ ಎನ್.ಇನವಳ್ಳಿ ಮಾತನಾಡಿ, ಸಭ್ಯತೆ, ಕ್ರಿಯಾಶೀಲತೆ, ಪಾಂಡಿತ್ಯ ಹೊಂದಿರುವ ಪ್ರಶಾಂತ್ ಅವರು ವಿದ್ಯಾರ್ಥಿಗಳನ್ನು ಕುಟುಂಬಿಕರಂತೆ ನೋಡಿಕೊಳ್ಳುತ್ತಿದ್ದರು ಎಂದರು.ಅಧ್ಯಕ್ಷತೆ…

Read More

UN NETWORKS ಕೊಣಾಜೆ: ಕೊಣಾಜೆ ಗ್ರಾಮದ ಅಣ್ಣೆರೆಪಾಲು ಪುರುಷಕೋಡಿ ಬಳಿ ಪರಮೇಶ್ವರ ಗೌಡ ಎಂಬವರ ದನದ ಹಟ್ಟಿಯು ಭಾರೀ ಮಳೆಗೆ ಕುಸಿದು ಬಿದ್ದು ಹಾನಿ ಸಂಭವಿಸಿದ ಘಟನೆ ಮಂಗಳವಾರ ನಡೆದಿದೆ. ಘಟನೆ ಸಂಭವಿಸಿದಾಗ ಹಟ್ಟಿಯೊಳಗೆ ದನಗಳು ಇದ್ದರೂ ಅಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ. ಕೊಣಾಜೆಯ ರಾಮಾಂಜನೇಯ ವ್ಯಾಯಾಮಶಾಲೆಯ ಸದಸ್ಯರು ಮಂಗಳವಾರ ಕುಸಿದು ಬಿದ್ದ ಹಟ್ಟಿಯ ಹೆಂಚುಗಳನ್ನು ತೆಗೆದು ಮಣ್ಣು ತೆರವುಗೊಳಿಸುವಲ್ಲಿ ಸಹಕಾರ ನೀಡಿದ್ದಾರೆ.

Read More

UN NETWORKS ದೇರಳಕಟ್ಟೆ: SKSSF .SYS ದೇರಳಕಟ್ಟೆ ಶಾಖೆ ಹಾಗೂ ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಜಂಟೀ ಆಶ್ರಯದಲ್ಲಿ ಕೇರಳ ಹಾಗೂ ಕೊಡಗಿನ ನೆರೆ ಸಂಕಷ್ಟದಲ್ಲಿರುವವರಿಗೆ ಸಹಾಯಾರ್ಥವಾಗಿ ದೇರಳಕಟ್ಟೆ ಪರಿಸರದಲ್ಲಿ ನಿಧಿ ಸಂಗ್ರಹ ಯಾತ್ರೆ ಯನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ SKSSF ದೇರಳಕಟ್ಟೆ ಕ್ಲಸ್ಟರ್ ಅಧ್ಯಕ್ಷರಾದ ಸಯ್ಯದ್ ಅಲಿ.SYS ಅಧ್ಯಕ್ಷರಾದ ಹಾಜಿ ಮುಹಮ್ಮದ್ ಅಲಿ,SYS ಕಾರ್ಯದರ್ಶಿ ಸಿದ್ದೀಕ್ ದುಬೈ, ಮದರಸ ಮ್ಯಾನೇಜ್ ಮೆಂಟ್ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ,ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಅದ್ಯಕ್ಶರಾದ ಹಯಾನ್ ಆಶಿಕ್,SKSSFದೇರಳಕಟ್ಟೆಅಧ್ಯಕ್ಷರಾದ ನೌಫಾಲ್ ಬಿ,ಮುಂತಾದವರು ಭಾಗವಹಿಸಿದ್ದರು.

Read More

ಮಾಡೂರು: ಶಬರಿ ಫ್ರೆಂಡ್ಸ್ ಮಾಡೂರು ಇದರ 15ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶ್ರೀ ಕೃಷ್ಣ ಸಾಂಸ್ಕೃತಿಕ ಮಹೋತ್ಸವ ಮುದ್ದು ಕೃಷ್ಣ 2018 ಪುಟಾಣಿಗಳ ಪ್ರತಿಭಾ ಕಾರ್ಯಕ್ರಮವು ಆ.26 ರಂದು ಭಾನುವಾರ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಮಾಡೂರುನಲ್ಲಿ ನಡೆಯಲಿದೆ. ಮಾಜಿ ಶಾಸಕರು ಕೆ.ಜಯರಾಮ ಶೆಟ್ಟಿ ಕಾರ್ಯಕ್ರಮವನ್ನು ಉಧ್ಘಾಟಿಸಲಿದ್ದು ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ.ಉಚ್ಚಿಲ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ತುಳು ಚಿಂತಕ ನವನೀತ್ ಶೆಟ್ಟಿ ಕದ್ರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ನ್ಯಾಯಾವಾದಿ ರಾಮ್ ಪ್ರಸಾದ್ ಎಸ್, ಶ್ರೀ ಕ್ಷೇತ್ರ ಕೊಂಡಾಣ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ರೈ ಕೋಟೆಕಾರು ಗುತ್ತು, ಉದ್ಯಮಿ ಸೂರಜ್ ಸುವರ್ಣ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕ್ ನಿರ್ದೇಶಕ ಉದಯ್ ಕುಮಾರ್ ಶೆಟ್ಟಿ, ಚಲನಚಿತ್ರ ನಟ ಅರವಿಂದ ಬೋಳಾರ್, ರೋಶನ್ ಎಮ್ ಶೆಟ್ಟಿ, ಧೀರಜ್ ಗಟ್ಟಿ, ಜಯಶ್ರೀ ಪ್ರಪುಲಾ ದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿವೃತ್ತ ಯೋಧ ಪ್ರವೀಣ್ ಕುಮಾರ್…

Read More

UN NETWORKS ಉಳ್ಳಾಲ: ಉಳ್ಳಾಲ ಉಳಿಯ ನೇತ್ರಾವತಿ ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆಯಾಗಿ ಸ್ಥಳೀಯ ಜನವಸತಿ ಪ್ರದೇಶಗಳು ಜಲಾವೃತವಾಗಿದೆ. ಗುರುವಾರ ತಡರಾತ್ರಿಯಿಂದ ನೆರೆ ಬಂದಿದ್ದು, ಸುಮಾರು 50 ಕ್ಕು ಅಧಿಕ ಮನೆಗಳು ಜಲಾವೃತವಾಗಿದೆ. ಉಳಿಯ ನಿವಾಸಿ ವಿಲ್ಫ್ರೆಡ್ ಡಿಸೋಜ, ಎಂಡ್ರಿ ಡಿಸೋಜ, ಸುನಿಲ್, ಭವಾನಿ, ಜಗದೀಶ್, ಲ್ಯಾನ್ಸಿ ಡಿಸೋಜ, ರುಫೀನಾ ಡಿಸೋಜ, ರೆಮೇಝಾ, ಫೆಲಿಕ್ಸ್ ಡಿಸೋಜ, ಸ್ಟೀವನ್ , ಪ್ರವೀಣ್ ಕುಟಿನ್ಹಾ, ರಾಬಟ್ 9 ಡಿಸೋಜ, ಸ್ಟೆಲ್ಲಾ , ರಚನಾ, ಸುಝಾನ ಡಿಸೋಜ ಎಂಬವರ ಮನೆಗಳ ಅಂಗಳದಲ್ಲಿ ನೀರು ತುಂಬಿದೆ. ರಾತ್ರಿಯಿಡೀ ಮಲಗಲಿಲ್ಲ : ತಡರಾತ್ರಿ 11 ಗಂಟೆ ನಂತರ ಮನೆ ಅಂಗಳವಿಡೀ ಜಲಾವೃತವಾಗಿದೆ. ಎಲ್ಲರೂ ಮನೆಯೊಳಗೆ ನೀರು ಬರುವ ಆತಂಕದಲ್ಲಿ ಸಾಮಾಗ್ರಿಗಳನ್ನು ಮೇಲಕ್ಕೆ ಇಟ್ಟಿದ್ದಾರೆ. ಸ್ಥಳೀಯ ಯುವಕರೆಲ್ಲರೂ ಸೇರಿಕೊಂಡು ಹೊರಗಡೆಯೇ ಸ್ಥಳೀಯರ ನೆರವಿಗೆ ನಿಂತಿದ್ದರು. ಹಲವು ವರ್ಷಗಳ ಬಳಿಕ ಈ ಭಾಗದಲ್ಲಿ ನೆರೆ ನೀರು ತುಂಬಿದೆ . ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಅವಶ್ಯಕತೆ ಬಿದ್ದಲ್ಲಿ ಸಂತ್ರಸ್ತರಿಗಾಗಿ ಗಂಜಿ…

Read More

UN NETWORKS ಉಳ್ಳಾಲ: ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಲವಾರು ಕ್ರಾಂತಿಕಾರಿ ಯೋಜನೆಗಳನ್ನು ನೀಡಿದ ಅಟಲ್ ಬಿಹಾರಿ ವಾಜಪೇಯಿಯವರು ಜಗತ್ತು ಮೆಚ್ಚಿದ ನಾಯಕ. ಬಿ.ಜೆ.ಪಿ.ಯನ್ನು ಕಟ್ಟಿ ಬೆಳೆಸಿ ಲೋಕಸಭೆಯಲ್ಲಿ ಎರಡು ಸ್ಥಾನದಿಂದ ಆಡಳಿತ ನಡೆಸುವವರೆಗೆ ಎತ್ತರಕ್ಕೆ ಏರಿಸಿದ ಮಹಾನ್ ನಾಯಕ ಎಂದು ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಹೇಳಿದರು. ಅವರು ಕೊಲ್ಯ ಸೌಭಾಗ್ಯ ಭವನದಲ್ಲಿ ಶುಕ್ರವಾರ ನಡೆದ ಮಂಗಳೂರು ವಿಧಾನ ಕ್ಷೇತ್ರದ ವತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು.ಚತುಷ್ಫದ ರಸ್ತೆ, ಪೋಖರಾಣು ಪರಮಾಣು ಪರೀಕ್ಷೆ, ಸರ್ವ ಶಿಕ್ಷಣ ಅಭಿಯಾನದಂತ ಕಾರ್ಯಕ್ರಮ ಮೂಲಕ ದೇಶಕ್ಕೆ ಭದ್ರ ಬುನಾದಿ ನೀಡಿದವರು. ಎಷ್ಟೇ ಮೃದು ಸ್ವಭಾವದವರಾದರೂ ಕಠಿಣ ನಿರ್ಧಾರ ಕೈಗೊಳ್ಳಲು ಹಿಂಜರಿಯದವರಲ್ಲ. ದೇಶ ದೊಡ್ಡ ನಾಯಕನನ್ನು ಕಳೆದಿದೆ. ಪಕ್ಷಕ್ಕೆ ತುಂಬಲಾರದ ನಷ್ಟ ಎಂದರು. ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಉಪಾಧ್ಯಕ್ಷ ರಾದ ಚಂದ್ರಹಾಸ್ ಉಳ್ಳಾಲ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರವೀಂದ್ರ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಹಿರಿಯರಾದ ಸೀತರಾಮ ಬಂಗೇರ,…

Read More

UN NETWORKS ಉಳ್ಳಾಲ: ಸ್ಟಾರ್ ಫ್ರೆಂಡ್ಸ್ ಪನೀರ್ ಇದರ ವತಿಯಿಂದ 72 ನೇಯ ಸ್ವಾತಂತ್ರ್ಯತ್ಸೋವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಹ್ಮದ್ ಕಬೀರ್ ಪನೀರ್ ವಹಿಸಿದರು.ದ್ವಜಾಹರಣವನ್ನು ರಹಮಾನಿಯ ಜುಮ್ಮಾ ಮಸೀದಿ ಇಮಾಮರಾದ ಯಾಸರ್ ಅರಾಫತ್ ಕೌಸರಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಹ್ಮಾನಿಯಾ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಲ್ವಿನ್ ಡಿಸೋಜ,ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮೀತಿ ಸದಸ್ಯರಾದ ಝಹೀದ್ ಮಲಾರ್,ದ ಕ ಕಾಂಗ್ರೆಸ್ ಅಲ್ಪಸಂಖ್ಯಾತ ಉಪಾಧ್ಯಕ್ಷರಾದ ಪಿ. ಮ್ ಇಸ್ಮಾಯಿಲ್ದ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಷ್ಮಾ ಜನಾರ್ದನ್, ಕೋಟೆಕಾರ್ ಪಟ್ಟಣ ಪಂಚಾಯಿತ್ ಇದರ ಸ್ಥಳೀಯ ಕೌನ್ಸಿಲರ್ ಗಳಾದ ಲಾನ್ಸಿ ಡಿಸೋಜ, ಮೊಹಮ್ಮದ್,ಹಿತೈಸಿಗಲಾದ ಪಿ.ಮ್. ಇಬ್ರಾಹಿಂ ಕತಾರ್, ಅಬ್ದುಲ್ ರಹಿಮಾನ್ ಹಾಜಿ, ಪುತ್ತುಬಾವ ಅರ್ಕಾನ ಉಪಸ್ಥಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಸವಾದ್ ಪನೀರ್ ಅಚ್ಚುಕಟ್ಟಾಗಿ ನಿರ್ವಹಿಸಿದರು.

Read More

UN NETWORKS ಉಳ್ಳಾಲ: ವಿದ್ಯುತ್ ತಂತಿ ನೆರೆ ನೀರಿಗೆ ಬಿದ್ದು ಅದರಲ್ಲಿ ವಿದ್ಯುತ್ ಪ್ರವಹಿಸಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಉಳ್ಳಾಲ ನಗರಸಭೆ ವ್ಯಾಪ್ತಿಯ ಉಳ್ಳಾಲ ಉಳಿಯ ಸಮೀಪ ಗುರುವಾರ ತಡರಾತ್ರಿ ವೇಳೆ ನಡೆದಿದ್ದು, ಶುಕ್ರವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಉಳ್ಳಾಲ ಉಳಿಯ ಎವ್ರಿ ಡಿಸೋಜ ಮತ್ತು ಮೋನಿಕಾ ಡಿಸೋಜ ದಂಪತಿ ಪುತ್ರ ಅಶೊಕ್ ಡಿಸೋಜ (33) ಸಾವನ್ನಪ್ಪಿದವರು. ಬೋಟು ನಿರ್ಮಾಣ ಮತ್ತು ಸಿಯಾಳ ಮಾರಾಟ ಕೆಲಸವನ್ನು ನಡೆಸುತ್ತಿದ್ದ ಅಶೋಕ್ ಎಂದಿನಂತೆ ಉಳಿಯ ಸಮೀಪ ತನ್ನ ಗೆಳೆಯರ ಜತೆಗೆ ಮಾತನಾಡಿ, ಮನೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಮನೆಗೆ ವಾಪಸ್ಸಾಗಿದ್ದರು. ಆದರೆ ದುರಾದೃಷ್ಟವಶಾತ್ ನೇತ್ರಾವತಿ ನದಿ ತೀರದಲ್ಲಿರುವ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ನೆರೆ ನೀರು ನಿಂತಿತ್ತು. ಸಂಜೆ ಬೀಸಿದ ಭಾರೀ ಗಾಳಿಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ನೆರೆ ನೀರಿಗೆ ಬಿದ್ದಿತ್ತು. ಇದನ್ನು ಗಮನಿಸದೆ ಅಶೋಕ್ ಅವರು ದಾರಿನಡುವೆ ನೀರನ್ನು ದಾಟುತ್ತಿದ್ದಂತೆ ವಿದ್ಯುತ್ ಶಾಕ್ ತಗಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೆಮಂದಿ ಕಾಯುತ್ತಲೇ ಇದ್ದರು…

Read More