Author: UllalaVani

Kannada News From Coastal Karnataka

UN NETWORKS ಕೊಣಾಜೆ: ಜಾತಿ, ಧರ್ಮಗಳ ಮಧ್ಯೆ ಕಂದರ ಸೃಷ್ಟಿಯಾಗಿರುವ ಇಂದಿನ ದಿನಗಳಲ್ಲಿ ಹಿಂದುಗಳ ಹಬ್ಬಗಳನ್ನು ಇತರ ಧರ್ಮೀಯರು ಜೊತೆಯಾಗಿ ಆಚರಿಸುವ ನಿಟ್ಟಿನಲ್ಲಿ ಪ್ರತೀ ಗ್ರಾಮದಲ್ಲೂ ನೈಜ ಅರ್ಥದಲ್ಲಿ ಸರ್ವಧರ್ಮ ಸಮ್ಮೇಳನ ನಡೆದಾಗ ದೇಶ ನೈಜ ಜಾತ್ಯಾತೀತ ಆಗಲಿದೆ ಎಂದು ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಭಿಪ್ರಾಯಪಟ್ಟರು. ಕೊಣಾಜೆ ಮಂಗಳ ಗ್ರಾಮೀಣ ಯುವಕ ಸಂಘ, ಮೊಸರು ಕುಡಿಕೆ ಉತ್ಸವ ಸಮಿತಿ, ನಾಗಬ್ರಹ್ಮ ಪ್ರಗತಿಪರ ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ 15ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಂಗಳ ಗ್ರಾಮೀಣ ಯುವಕ ಸಂಘದ ಕಲಾ ವೇದಿಕೆಯಲ್ಲಿ ಭಾನುವಾರ ನಡೆದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಹಾಗೂ ಸರ್ವಧರ್ಮ ಸಮನ್ವಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶ್ರೀ ಕೃಷ್ಣನ ವೇಷ ಹಾಕಿಸಿ ವೇದಿಕೆಗಳಲ್ಲಿ ಮಕ್ಕಳನ್ನು ನೃತ್ಯಕ್ಕೆ ಪ್ರೋತ್ಸಾಹ ನೀಡುವ ಪೋಷಕರು ಹಿಂದು ಧರ್ಮದ ಬಗ್ಗೆಯೂ ತಿಳಿಹೇಳಬೇಕಿದೆ…

Read More

UN NETWORKS ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಸಮೀಪ ನಡೆದುಕೊಂಡು ಹೋಗುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರೆದುರು ಅಪರಿಚಿತನೋರ್ವ ದುರ್ವರ್ತನೆ ತೋರಿದ ಘಟನೆ ಬುಧವಾರ ಸಂಜೆ ವೇಳೆ ನಡೆದಿದ್ದು, ಘಟನೆ ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದ ವಿ.ವಿ ಆಡಳಿತ ವಿರುದ್ಧ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆವರೆಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ. ಬುಧವಾರ ಸಂಜೆ ವಿದ್ಯಾರ್ಥಿನಿಯರು ತರಗತಿ ಮುಗಿಸಿ ಹಾಸ್ಟೆಲ್ ಕಡೆಗೆ ನಡೆದುಕೊಂಡು ಹೋಗುವ ಸಂದರ್ಭ ಕನ್ನಡ ವಿಭಾಗದ ಎದುರು ಕಿರಿದಾದ ಕಾಡಿನಲ್ಲಿ ಅಪರಿಚಿತನೋರ್ವ ನಿಂತಿದ್ದನು. ಕೆಂಪು ಬಣ್ಣದ ಗ್ಲ್ಯಾಮರ್ ಬೈಕಿನಲ್ಲಿ ಬಂದಿದ್ದ ಈತ ಹಲವು ಸಮಯ ಅಲ್ಲೇ ನಿಂತಿದ್ದನು. ಅದೇ ದಾರಿಯಲ್ಲಿ ನಾಲ್ವರು ವಿದ್ಯಾರ್ಥಿನಿಯರು ದಾಟುತ್ತಿದ್ದಂತೆ ಪ್ಯಾಂಟಿನ ಝಿಪ್ ತೆಗೆದು ಅಶ್ಲೀಲವಾಗಿ ಸನ್ನೆ ಮಾಡಿದವ ಮತ್ತೆಯೂ ಅಲ್ಲೇ ನಿಂತಿದ್ದನು. ತದನಂತರ ವಿದ್ಯಾರ್ಥಿನಿಯರು ಸೆಕ್ಯುರಿಟಿ ಸಿಬ್ಬಂದಿ ದೂರು ನೀಡುತ್ತಿದ್ದಂತೆ, ಬೈಕ್ ಸಮೇತ ಅಲ್ಲಿಂದ…

Read More

UN NETWORKS ಉಳ್ಳಾಲ : ಉಳ್ಳಾಲ ನಗರಸಭೆಗೆ ನಡೆಯುವ ಮೊದಲ ಚುನಾವಣೆಗೆ 43 ಮತಗಟ್ಟೆಗಳು ಸಿದ್ಧಗೊಂಡಿದ್ದು ಬಿಗಿ ಬಂದೋಬಸ್ತ್‍ನಲ್ಲಿ ಶುಕ್ರವಾರ (ಇಂದು) ಮತದಾನ ನಡೆಯಲಿದ್ದು 31 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 102 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಕಾಂಗ್ರೆಸ್ ಎಲ್ಲಾ 31 ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದರೆ, ಬಿಜೆಪಿ 24 ಸ್ಥಾನಗಳಲ್ಲಿ, ಜೆಡಿಎಸ್ 21 ಸ್ಥಾನಗಳಲ್ಲಿ ಎಸ್‍ಡಿಪಿಐ 9 ಸ್ಥಾನಗಳಲ್ಲಿ, ಸಿಪಿಐಎಂ 5 ಸ್ಥಾನಗಳಲ್ಲಿ, 12 ಪಕ್ಷೇತರರರು ಸ್ಪರ್ಧೆಯಲ್ಲಿದ್ದಾರೆ. 14 ವಾರ್ಡ್‍ಗಳು ಮಹಿಳೆಯರಿಗೆ ಸೀಮಿತವಾಗಿದ್ದರೆ ಉಳಿದ 17 ವಾರ್ಡ್‍ಗಳಲ್ಲಿ ಪುರುಷರು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಪ್ರಬಲ ಕ್ಷೇತ್ರವಾಗಿರುವ ಭಟ್ನಗರ, ಮೊಗವೀರಪಟ್ಣ , ಉಳ್ಳಾಲ ಬೈಲು ವಾರ್ಡಗಳು ಮಹಿಳೆರಿಗೆ ಮೀಸಲಾತಿ ಬಂದಿದೆ. ಮುಸ್ಲಿಂ ಮತದಾರರನ್ನು ಹೊಂದಿರುವ 1ನೇ ವಾರ್ಡ್ ಕೋಟೆಪುರದಲ್ಲಿ ಕಳೆದ ಪುರಭೆಯಲ್ಲಿ ಬಿಜೆಪಿ ಅಭ್ಯರ್ಥಿಯಿದ್ದರೂ ಈ ಬಾರಿ ಅಭ್ಯರ್ಥಿಗಳ ಕೊರತೆಯಿಂದ ಬಿಜೆಪಿ ಕಣಕ್ಕಿಳಿದಿಲ್ಲ. ಕಳೆದ ಎರಡು ಅವಧಿಗೆ ಪಕ್ಷೇತರ ಅಭ್ಯರ್ಥಿಗಳಿಗೆ ವರವಾಗಿದ್ದ ಉಳಿಯ ಹೊೈಗೆ ವಾರ್ಡ್ ಈ ಬಾರಿ ಮಹಿಳಾ ಮೀಸಲಾತಿ ತಂದಿದ್ದು, ಈ ಬಾರಿಯೂ ಕಾಂಗ್ರೆಸ್‍ಗೆ…

Read More

UN NETWORKS ಉಳ್ಳಾಲ: ಬಿರುಸುಗೊಂಡಿರುವ ಸಮುದ್ರ ದಲ್ಲಿ ಸಮುದ್ರಪಾಲಾಗುತ್ತಿದ್ದ ಬಾಲಕನನ್ನು ಯುವಕನೋರ್ವ ಎರಡು ಗಂಟೆಗಳ ಕಾಲ ಈಜಾಡಿ ರಕ್ಷಿಸಿ ಸಾಹಸ ಮೆರೆದಿರುವ ಘಟನೆ ಉಳ್ಳಾಲ ಸಮೀಪದ ಕೈಕೋ ಎಂಬಲ್ಲಿ ಗುರುವಾರ ಸಂಜೆ ವೇಳೆ ಸಂಭವಿಸಿದೆ. ಕೈಕೋ ನಿವಾಸಿ ರಾಹಿಲ್ (16) ರಕ್ಷಣೆಗೊಳಗಾದವ. ಈತನನ್ನು ನೆರೆಯ ನಿವಾಸಿ ಕಬೀರ್ ಎಂಬಾತ ಸಾಹಸ ಮೆರೆದು ರಕ್ಷಿಸಿದ್ದಾನೆ. ರಾಹಿಲ್ ಸಂಜೆ ಹೊತ್ತಿಗೆ ಬಲೆ ಹಾಕಿ ಮೀನು ಹಿಡಿಯಲು ಯತ್ನಿಸುತ್ತಿದ್ದ. ಈ ವೇಳೆ ಜೋರಾಗಿ ಬಂದ ಅಲೆಯಿಂದಾಗಿ ಬಾಲಕ ನೀರುಪಾಲಾಗಿದ್ದ . ರಕ್ಷಣೆಗೆ ಯಾರೂ ಮುಂದಾಗದೇ ಇದ್ದಾಗ ಜೀವದ ಹಂಗು ತೊರೆದು ಸ್ಥಳದಲ್ಲೇ ಇದ್ದ ಕಬೀರ್ ಸಮುದ್ರಕ್ಕೆ ಹಾರಿ ನಿರಂತರ ಎರಡು ಗಂಟೆಗಳ ಕಾಲ ಕಾರ್ಯಾಚರಿಸಿ ರಾಹಿಲ್ ನನ್ನು ಮೇಲಕ್ಕೆತ್ತಿದ್ದಾನೆ. ಸಾಹಸ ಮೆರೆದ ಕಬೀರ್ ನನ್ನು ಸ್ಥಳೀಯರು ಅಭಿನಂದಿಸಿದ್ದಾರೆ.

Read More

UN NETWORKS ಕೊಣಾಜೆ: ಹಿಂದುಳಿದ ವರ್ಗದ ಜನರು ಒಂದು ಕಾಲದಲ್ಲಿ ದಾರಿಯಲ್ಲಿ ನಡೆದಾಡುವುದಕ್ಕೂ ಕಷ್ಟದ ಪರಿಸ್ಥಿತಿ ಇತ್ತು. ಪ್ರಾಣಿಗಳಿಗಾದರೂ ಸ್ವಾತಂತ್ರ್ಯ ಇತ್ತು ಆದರೆ ಮನುಷ್ಯರಿಗಿರಲಿಲ್ಲ. ಇಂತಹ ಅಸ್ಪಶ್ಯತೆ ತುಂಬಿದ ಸಮಾಜದಲ್ಲಿ ನಾರಾಯಣ ಗುರುವರ್ಯರ ಹುಟ್ಟಿಬಂದು ಸಮಾಜದಲ್ಲಿದ್ದ ಅಸ್ಪ್ರಶ್ಯತೆ, ಜಾತಿ ಭೇದವನ್ನು ತೊಡೆದು ಹಾಕುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ನಾರಾಯಣ ಗುರುವರ್ಯರು ಪರಿವರ್ತನೆಯ ಹರಿಕಾರ ಎಂದು ವರ್ಕಲ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಗುರುವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕೇರಳದಲ್ಲಿ ನಾರಾಯಣ ಗುರು ಜಯಂತಿ ಆಚರಣೆಗೆ ಸರ್ಕಾರ ರಜೆ ನೀಡುತ್ತಿದ್ದರೂ, ಕರ್ನಾಟಕದಲ್ಲಿ ನಾರಾಯಣ ಗುರುವರ್ಯರ ಇಷ್ಟು ಭಕ್ತಾಭಿಮಾನಿಗಳಿದ್ದರೂ ಸರ್ಕಾರ ರಜೆ ಘೋಷಿಸಿಲ್ಲ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದರು. ಇಂದಿನ ಯುವಕರು ದಾರಿ ತಪ್ಪುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಯುವಕರು ನಾರಾಯಣ ಗುರುವರ್ಯರ ನಡೆದು ಬಂದ ಹಾದಿ ಹಾಗೂ ಅವರ…

Read More

UN NETWORKS ಮುಡಿಪು: ಮುಡಿಪಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್ಸ್ ಘಟಕದ ವತಿಯಿಂದ ಸದ್ಭಾವನಾ ದಿನ ಮತ್ತು ಕೋಮು ಸೌಹಾರ್ದ ಸಪ್ತಾಹ ನಡೆಯಿತು. ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಭಾವೈಕ್ಯತೆಯಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರ ಪಾತ್ರ ಮತ್ತು ಸೌಹಾರ್ದತೆಯಲ್ಲಿ ಮಹಿಳೆಯರ ಜವಾಬ್ದಾರಿಗಳು, ರಾಷ್ಟ್ರೀಯತೆ, ತ್ಯಾಗ, ಸ್ನೇಹ, ಸಂಯಮ, ಶಿಕ್ಷಣ ಸಂಸ್ಥೆಗಳ ಪಾತ್ರ ಯುವ ಪೀಳಿಗೆಯ ಕರ್ತವ್ಯ ಇತ್ಯಾದಿ ವಿಷಯಗಳನ್ನು ಪದವಿ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ರೇಂಜರ್ಸ್ ಲೀಡರ್ ಶುಭ ಕೆ. ಎಚ್. ವಿದ್ಯಾರ್ಥಿಗಳಿಗೆ ಸದ್ಭಾವನಾ ಪ್ರತಿಜ್ಞೆ ಬೋಧಿಸಿದರು. ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆದರು. ಸಮಾರೋಪದಲ್ಲಿ ವಿವಿಧ ಸಂಸ್ಥೆಯ ರೇಂಜರ್ಸ್‍ಗಳಿಗೆ ಮುಡಿಪು ಗ್ರಾಮದ ಸ್ಕೌಟ್ ಮತ್ತು ಗೈಡ್ಸ್‍ಗಳಿಗೆ ಸದ್ಭಾವನೆ ಮತ್ತು ಸೌಹಾರ್ದತೆಯ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು. ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಲತಾ ಜಿ. ಎಸ್ ಮಾತನಾಡಿ ಸೌಹಾರ್ದತೆ ಎಂಬುದು ಕುಸಿದು ಬಿದ್ದ ಗುಡ್ಡಗಳ ನಡುವೆ ತಲೆ ಎತ್ತಿ ನಿಂತಿವೆ. ಭಾರತ ಭೌಗೋಳಿಕವಾಗಿ,…

Read More

UN NETWORKS ಮುಡಿಪು: ಮುಡಿಪಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2018-19ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭಿಸಿದ ಎನ್‍ಎಸ್‍ಎಸ್ ಘಟಕದ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಭವನದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಮಂಗಳೂರು ರಥಬೀದಿಯ ಡಾ. ದಯಾನಂದ ಪೈ-ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ನವೀನ್ ಕೊಣಾಜೆ ಉದ್ಘಾಟಿಸಿ ಎನ್‍ಎಸ್‍ಎಸ್‍ನ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ್ ರಾವ್ ಎಂ. ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಜ್ವಲ್ ಡಿಸೋಜ ಸ್ವಾಗತಿಸಿದರು. ಎನ್‍ಎಸ್‍ಎಸ್ ಘಟಕದ ಯೋಜನಾಧಿಕಾರಿ ಶೋಭಾಮಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್‍ಎಸ್‍ಎಸ್‍ನ ವಿದ್ಯಾರ್ಥಿ ಪ್ರತಿನಿಧಿ ಅಭಯ ಅಶೋಕ ಭಟ್ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತಾ ಪಿ. ಪ್ರಾರ್ಥಿಸಿದರು. ಎನ್‍ಎಸ್‍ಎಸ್‍ನ ವಿದ್ಯಾರ್ಥಿನಿ ಪ್ರತಿನಿಧಿ ದಾಕ್ಷಾಯಿನಿ ವಂದಿಸಿದರು.

Read More

UN NETWORKS ತಲಪಾಡಿ: ಶಿಕ್ಷಣ ಸಂಸ್ಥೆಗಳಲ್ಲಿ ಹಳೆ ವಿದ್ಯಾರ್ಥಿಗಳ ರಚನಾತ್ಮಕ ಕಾರ್ಯ ಮಹತ್ವಪೂರ್ಣವಾಗಿದ್ದು ಅದರಲ್ಲೂ ಪ್ರಾಥಮಿಕ ಶಿಕ್ಷಣ ಸಂಸ್ಥೆಯನ್ನು ಸದಾ ಸ್ಮರಿಸುವ, ಮರಿಯಾಶ್ರಮ ಹಳೆ ವಿದ್ಯಾರ್ಥಿ ಸಂಘ ಶ್ಲಾಘನೀಯ ಎಂದು ಶಾಲಾ ಸಂಚಾಲಕ ಧರ್ಮಗುರು ಎಡ್ವಿನ್ ಮಸ್ಕರೇನಸ್ ಹೇಳಿದರು. ಶಾಲಾ ಅಮೃತ ಮಹೋತ್ಸವ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಿದ ಪ್ರಾರಂಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಅಮೃತಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸುಭಾಶ್ಚಂದ್ರ ಕಣ್ವತೀರ್ಥ ಮಾತನಾಡಿ ಕರ್ನಾಟಕ ಗಡಿನಾಡ ಅಭಿವದ್ಧಿ ಪ್ರಾಧಿಕಾರವು ಬಿಡುಗಡೆಗೊಳಿಸಿದ ಪ್ರಾರಂಭಿಕ ಹಂತದ ಸಹಾಯ ಧನ ಹಾಗೂ ಅದಕ್ಕಾಗಿ ಸಹಾಯ ಮಾಡಿದ ಡಾ. ವೀರಪ್ಪ ಮೋಯಿಲಿಯವರನ್ನು ಹಾಗೂ ಸಚಿವ ಯು. ಟಿ. ಖಾದರ್ ಅವರನ್ನು ಅಭಿನಂದಿಸಿ, ಸುಮಾರು 65ಲಕ್ಷ ರೂ. ಅಂದಾಜು ವೆಚ್ಚದ ಈ ಯೋಜನೆಯು ವಿವಿಧ ಹಂತಗಳಲ್ಲಿ ನಡೆಯುವುದು ಎಂದು ತಿಳಿಸಿದರು. ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ವಿನಯ ನಾಯಕ್ ಮಾತನಾಡಿ ಯೋಜನೆಯ ಒಟ್ಟು ವೆಚ್ಚವನ್ನು ಸರಿದೂಗಿಸಲು ಹಳೆ ವಿದ್ಯಾರ್ಥಿಗಳ ವಿವಿಧ ಸ್ತರಗಳಲ್ಲಿ ಶ್ರಮಿಸಬೇಕೆಂದು ವಿನಂತಿಸಿದರು.ಮುಖ್ಯ…

Read More

UN NETWORKS ಉಳ್ಳಾಲ: ಹಿಂದೆ ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ ಇಂದು ದೇಶದ ಕ್ರೀಡೆಯಾಗಿ ಮಾರ್ಪಟ್ಟಿದ್ದು ಇದರಲ್ಲಿ ಭಾಗವಹಿಸಲು ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ ಎಂದು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ-ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಕೋಟೆಪುರ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯ ಸರಕಾರದಲ್ಲಿ ಉಳ್ಳಾಲ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಗೆಲುವಿನ ಗುರಿಯೊಂದಿಗೆ ಆಟದಲ್ಲಿ ಭಾಗವಹಿಸಬೇಕಿದೆ. ಸೋತರೆ ಮುಂದಿನ ಬಾರಿ ಗೆಲುವು ಸಾಧಿಸಬಹುದು. ಇಂದು ಶಾಲಾ ಮಟ್ಟದ ಆಟದಲ್ಲಿ ಭಾಗಿಯಾದವರು ಮುಂದೆ ಜಿಲ್ಲಡ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಶಿಕ್ಷಣ ಸಂಯೋಜಕಿ ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೋ, ಸಿಆರ್ ಪಿ ನಳಿನಿ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಅನ್ಸಾರ್ ಇನೋಳಿ ಇವರನ್ನು ಸನ್ಮಾನಿಸಲಾಯಿತು. ದರ್ಗಾ ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಸದಸ್ಯ…

Read More

UN NETWORKS ಉಳ್ಳಾಲ: ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಶಾಸಕರ ಹಾಗೂ ಮುಖ್ಯಮಂತ್ರಿಗಳ ಬಹುತೇಕ ಅನುದಾನವನ್ನು ವಿನಿಯೋಗಿಸಿ ಮಂಗಳೂರು ನಗರದಂತೆ ನಗರೀಕರಣ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಜನ ಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನ ಎಲ್ಲಾ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ರಸ್ತೆ ಕಾಂಕ್ರೀಟಿಕರಣ, ಕಡಲ್ಕೊರೆತ ತಡೆಗೆ ಯೋಜನೆ, ಮೀನುಗಾರಿಕಾ ಜಟ್ಟಿಯಂತಹ ಅಭಿವೃದ್ಧಿ ಪರ ಯೋಜನೆಗಳನ್ನು ಕ್ಷೇತ್ರದಲ್ಲಿ ನಡೆಸಲಾಗಿದೆ. ಮುಂದೆಯೂ ಅಭಿವೃದ್ಧಿ ಕಾರ್ಯ ನಡೆಸಲು ಕಾಂಗ್ರೆಸ್ ಅಭ್ಯರ್ಥಿಗಳನ್ನು ಜನತೆ ಬೆಂಬಲಿಸಬೇಕಿದೆ. ನಗರೋತ್ಥಾನ ಯೋಜನೆಯಡಿ 25 ಕೋಟಿ ಅನುದಾನವನ್ನು ಮಂಜೂರುಗೊಳಿಸಲಾಗಿದ್ದು, ಕ್ಷೇತ್ರ ವ್ಯಾಪ್ತಿ ಕಾಂಕ್ರೀಟಿಕರಣದಿಂದ ಬಾಕಿಯಾಗಿರುವ ರಸ್ತೆಗಳ ಕಾಮಗಾರಿ ಮಳೆಗಾಲ ಮುಗಿದ ತಕ್ಷಣ ನಡೆಯಲಿದೆ. ಒಂಭತ್ತುಕೆರೆ ಸಮೀಪ ಪ್ರತ್ಯೇಕ ಟ್ಯಾಂಕ್ ನಿರ್ಮಿಸಿ ನೂತನ ಪೈಪ್ ಲೈನ್ ಅಳವಡಿಸಿ ನಗರಸಭೆ ವ್ಯಾಪ್ತಿಗೆ 24 ಗಂಟೆಗಳ ಕಾಲ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲಾಗಿದೆ. ಸಮಯಕ್ಕೆ ಸರಿಯಾಗಿ ಲೈಸೆನ್ಸ್, ರೇಷನ್ ಕಾರ್ಡು ಕೊಡುವ…

Read More