Author: UllalaVani

Kannada News From Coastal Karnataka

UN NETWORKS ತಲಪಾಡಿ: ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ 150ನೆ ಜನ್ಮದಿನಾಚರಣೆಯ ಪ್ರಯುಕ್ತ ನಯೀ ತಾಲೀಮ್ ದಿವಸವನ್ನು ಆಚರಿಸುವ ಮೂಲಕ ನಯೀ ತಾಲೀಮ್ ಸಪ್ತಾಹಕ್ಕೆ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಯು.ಬಿ. ಮೊಹಮ್ಮದ್ ಚಾಲನೆ ನೀಡಿದರು. ಕೋಶಾಧಿಕಾರಿ ಇಸ್ಮಾಯಿಲ್ ನಾಗತೋಟ ಶಾಲಾ ಅಕ್ಷರ ಕೈತೋಟವನ್ನು ಉದ್ಘಾಟಿಸಿ, ಮಹಾತ್ಮ ಗಾಂಧೀಜಿಯವರಿಗೆ ನುಡಿನಮನ ಸಲ್ಲಿಸಿದರು. ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ಅಶ್ವಿನಿ.ಎಸ್, ವಿದ್ಯಾರ್ಥಿಗಳಾದ ಮಹಮ್ಮದ್ ಉದೈಫ್ ಹಾಗೂ ಜೈನಾಬಿ ಅಫ್ರೀನಾ ಗಾಂಧೀಜಿಯ ವಿಚಾರ ಧಾರೆಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಕಾರ್ಯದರ್ಶಿ, ಅರಬಿಕುಂಞ ಮುಖ್ಯ ಶಿಕ್ಷಕ ಮೊಹಮ್ಮದ್ ರಫೀಕ್, ಹಿರಿಯ ಶಿಕ್ಷಕಿ ಐರಿನ್, ಸಾಧನಾ, ಲತಾ ಪಿ, ನವೀನ್ ಪ್ರಸಾದ್, ರಮೇಶ್, ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಚಂದ್ರಕಲಾ ಎಂ. ಸ್ವಾಗತಿಸಿ ವನಿತಾ ಕೆ. ವಂದಿಸಿದರು. ಸಿಟಿಇ ಪ್ರಶಿಕ್ಷಣಾರ್ಥಿ ಪದ್ಮಶ್ರೀ ಕೆ. ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ಬಜ್ಪೆ: ಬಜ್ಪೆ ಮೇಲ್ಸಾಲು ಮೊಗವೀರ ಸಂಘ ಹಿರಿಯಡಕ (17 ಗ್ರಾಮ ಸಭೆಗಳ ಒಕ್ಕೂಟ) ಇದರ ಆಶ್ರಯದಲ್ಲಿ ಬಾರಕೂರು ಮೊಗವೀರ ಸಂಯುಕ್ತ ಸಭಾ, ಬೆಣ್ಣೆ ಕುದ್ರು ಇದರ ಸಹಯೋಗದೊಂದಿಗೆ ಮಾಧವ ಮಂಗಲ ಸಭಾಭವನ – ಹಿರಿಯಡಕದಲ್ಲಿ ಮೊಗವೀರ ಗುರಿಕಾರರಿಗೆ ಗೌರವಧನ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಸಂಘದ ವಾರ್ಷಿಕ ಸಭೆ ನಡೆಸಲಾಯಿತು. ನಾಡೋಜ ಜಿ ಶಂಕರ್ ರವರು ಕಾರ್ಯಕ್ರಮ ಉಧ್ಘಾಟಿಸಿ, ಮೊಗವೀರ ಸಮಾಜವು ಮುಂದಿನ ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆಬರುವಂತೆ ಕರೆ ನೀಡಿದರು. ಈ ಶೈಕ್ಷಣಿಕ ವರ್ಷದಿಂದಲೇ ಇಂಜಿನೀರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಗುವುದೆಂದು ಘೋಷಿಸಿದರು.ಉದಯ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿನಯ ಕರ್ಕೇರ, ಸುಂದರ ಕಾಂಚನ್, ವಿಠಲ ಶ್ರೀಯಾನ್, ಪ್ರಮೋದ್ ಸುವರ್ಣ, ರವೀಂದ್ರ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು. ಪುರಂದರ ಕೋಟ್ಯಾನ್ ವರದಿ ವಾಚಿಸಿದರು, ರಾಜೇಂದ್ರ ಸುವರ್ಣ ಲೆಕ್ಕಾಚಾರ ಮಂಡಿಸಿದರು. ಸುಮಾರು 6ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನ…

Read More

UN NETWORKS ಉಳ್ಳಾಲ: ಎಸ್ಕೆ ಎಸ್ಸೆಸ್ಸೆಫ್ ಸಂಘಟನೆ ಕೊಡಗು ಪ್ರದೇಶದಲ್ಲಿ ಪ್ರಕೃತಿ ವಿಕೋಪವಾದಾಗ ಅಲ್ಲಿಗೆ ದಾವಿಸಿ ನೇರೆ ಸಂತ್ರಸ್ತ 400 ಮಂದಿಯನ್ನು ರಕ್ಷಿಸಿಸಿದೆವೆ. ಇಂತಹ ಜನ ಸ್ನೇಹಿ ಸೇವೆ ‌ಮಾಡುವ ಮೂಲಕ ಎಸ್ಕೆ‌ಎಸ್ಸೆಸ್ಸೆಫ್ ಸಂಘಟನೆ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ಎಸ್ಕೆ ಎಸ್ಸೆಸ್ಸೆಫ್ ಮಂಗಳೂರು ವಲಯ ಅಧ್ಯಕ್ಷ ರಿಯಾಝ್ ರಹ್ಮಾನಿ‌ ಹೇಳಿದರು. ಅವರು ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ವತಿಯಿಂದ ವಿಖಾಯ ಸ್ಥಾಪಕ ದಿನದ ಪ್ರಯುಕ್ತ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ‌ ಮಾತನಾಡಿದರು.ಎಸ್ಕೆ ಎಸ್ಸೆಸ್ಸೆಫ್ ವಿಖಾಯ‌ ವಿಭಾಗ ಊರಿನಿಂದ ‌ಬಂದ‌ ಹಾಜ್ಜಾಜಿಗಳ‌‌ ಸೇವೆ ಮಾಡುವ ಮೂಲಕ ವಿದೇಶದಲ್ಲೂ ಸಕ್ರಿಯವಾಗಿದೆ. ಅಸೈಯದ್ ಅಬೂಬಕ್ಕರ್ ಸಿದ್ದೀಕ್ ತಂಞಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ‌ ಕೋಶಾಧಿಕಾರಿ ಅಮೀರ್ ತಂಞಳ್ ಕಿನ್ಯ, ದೇರಳಕಟ್ಟೆ ಬದ್ರಿಯ ಜುಮಾ‌‌ ಮಸೀದಿ ಖತೀಬ್ ಶರೀಷ್ , ಕ್ಲಸ್ಟರ್ ಅಧ್ಯಕ್ಷ ಸೈಯದ್ ಅಲಿ ದೇರಳಕಟ್ಟೆ , ಅನ್ಸಾರುಲ್ ಮುಸ್ಲಿಮಿನ್ ಅಸೋಸಿಯೇಷನ್ ಅಧ್ಯಕ್ಷ ಇಲ್ಯಾಸ್…

Read More

UN NETWORKS ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ತೊಕ್ಕೊಟ್ಟು ಸೆಕ್ಟರ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ಎಸ್ ಎಫ್ ಅಳೇಕಲ ಶಾಖೆಯ ವತಿಯಿಂದ “ಮದ್ಯ ಮುಕ್ತ ಗ್ರಾಮ” ಜಾಗೃತಿ ಅಭಿಯಾನ ಕಾರ್ಯಕ್ರಮವು ಅಕ್ಟೋಬರ್ 2 ರಂದು ಮಗ್ರಿಬ್ ನಮಾಝಿನ ಬಳಿಕ ಅಳೇಕಲದ ಹೃದಯ ಭಾಗದಲ್ಲಿ ನಡೆಯಿತು. ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಮುಸ್ತಫಾ ಮಾಸ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಸ್ತಾದರು ಸಂದೇಶ ಭಾಷಣ ಮಾಡಿದರು. ಅಳೇಕಲ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಯು.ಎಸ್ ಹಂಝ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಸನ್ಮಾನ್ಯ ಯು.ಟಿ ಖಾದರ್ ರವರು ಮದ್ಯ ಮುಕ್ತ ಗ್ರಾಮ- ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಎಸ್ಎಸ್ಎಫ್ ಸಂಘಟನೆಯನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಉಳ್ಳಾಲ ನಗರಸಭಾ ಸದಸ್ಯರಾದ ಯು.ಎ ಇಸ್ಮಾಯಿಲ್, ಅಝ್ಗರ್…

Read More

UN NETWORKS ಉಳ್ಳಾಲ: ವ್ಯಸನಿಗಳಾಗಲು ಹಲವು ಕಾರಣಗಳಿವೆ. ನೋವು, ಖುಷಿ ಸಂದರ್ಭ ಅಮಲಿಗೆ ಮೊರೆ ಹೋಗುತ್ತಾರೆ. ಆದರೆ ಇಂತಹ ಸಂದರ್ಭ ದುಷ್ಚಟಕ್ಕೆ ಬಲಿಯಾಗುವುದು ಸಲ್ಲದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನ್ನ ಗೌಡ ಅಭಿಪ್ರಾಯಪಟ್ಟರು.ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ನಡೆದ 1363ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾವುದೋ ಕಾರಣಕ್ಕೆ ಅಮಲು ವ್ಯಸನ ನ್ಯಾಯಾಲಯಕ್ಕೆ ಬರುವ ಅಪರಾಧಿಗಳಲ್ಲಿ  ಶೇ.70-80 ಅಪರಾಧಿಗಳು ದುಶ್ಚಟಕ್ಕೆ ‌ಬಲಿಬಿದ್ದವರು. ಕೊಲ್ಯ ಶಿಬಿರದಲ್ಲಿದ್ದವರು ಅಪರಾಧಕ್ಕೆ ಬಲಿಯಾಗಿಲ್ಲ. ಶಿಬಿರದಲ್ಲಿ ಭಾಗಿಯಾದವರು ಮುಂದಿನ ದಿನಗಳಲ್ಲಿ ಸ್ನೇತರನ್ನೂ ದುಶ್ಚಟದಿಂದ ಹೊರತರುವ ಪ್ರಯತ್ನದ ಮೂಲಕ ರಾಯಭಾರಿಗಳಾಗಿ‌ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ಚೌಟ ಅಧ್ಯಕ್ಷತೆ ವಹಿಸಿದ್ದರು. ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಶ್ರೀ ಮೂಕಾಂಬಿಕಾ ಕ್ಷೇತ್ರದ ಟ್ರಸ್ಟಿ ಮಧುಸೂದನ್ ನಾಯರ್, ಅಖಿಲ…

Read More

UN NETWORKS ಉಳ್ಳಾಲ: ಗಾಂಧಿ ಜಯಂತಿ ಅಂಗವಾಗಿ ನಡೆದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ 15 ದಿನಗಳ ಸ್ವಚ್ಛಭಾರತ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಂಗಳವಾರ ಉಳ್ಳಾಲ ನಗರಸಭೆಯಲ್ಲಿ ನಡೆಯಿತು. ಗಾಂಧಿ ಜಯಂತಿ ಪ್ರಯುಕ್ತ ನಡೆದ ಸ್ವಚ್ಚ ಭಾರತ್ ಕಾರ್ಯಕ್ರಮದ ಸಮಾರೋಪ ಸಮಾರಂಭವಿವಿಧ ಶಾಲಾ ಕಾಲೇಜುಗಳ ಮಕ್ಕಳಿಂದ ಜಾಥಾ, ವಿವಿಧ ಆಟೋಟ ಸ್ಪರ್ಧೆಗಳು, ಬೀದಿನಾಟಕ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪರಿಸರವಾದಿ ಕೃಷ್ಣಪ್ಪ ಮಂಗಳೂರು ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರು, ವಿವಿಧ ಶಾಲೆಗಳ ಅದ್ಯಾಪಕರು, ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್ ಕಾವೇರಿ ಇದರ ಸದಸ್ಯರು, ಉಳ್ಳಾಲ ನಗರಸಭಾ ಸಿಬ್ಬಂದಿ ಹಾಜರಿದ್ದರು. ಕಾರ್ಯಕ್ರಮವನ್ನು ನಗರಸಭೆ ಸದಸ್ಯ ಇಸ್ಮಾಯಿಲ್ ನಿರೂಪಿಸಿದರು. ಪೌರಾಯುಕ್ತೆ ವಾಣಿ ವಿ ಆಳ್ವ ಸ್ವಾಗತಿಸಿದರು. ಕಿರಿಯ ಆರೋಗ್ಯ ನಿರೀಕ್ಷಕ ರಾಜೇಶ್ ವಂದಿಸಿದರು.

Read More

UN NETWORKS ಉಳ್ಳಾಲ: ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಆರೋಗ್ಯ ಕ್ಷೇತ್ರದಲ್ಲಿನ ಅನುಪಮ ಸೇವೆಗಾಗಿ ರಾಜ್ಯ ಸರಕಾರ ಸಲ್ಲಿಸುತ್ತಿರುವ 2018ರ ಸಾಲಿನ ರಾಜ್ಯ ಪ್ರಶಸ್ತಿಯನ್ನು ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೋಮವಾರ ನೀಡಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಯೆನೆಪೋಯ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿಭಾಗದ ಪ್ರಾಧ್ಯಪಕಿ ಹಾಗೂ ಮುಖ್ಯಸ್ಥೆ ಡಾ| ಪ್ರಭಾ ಅಧಿಕಾರಿ ಅವರಿಗೆ ಪ್ರಶಸ್ತಿ ಪ್ರಧಾನಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ, ಶಾಸಕ ಶರವಣ ಜತೆಗಿದ್ದರು.

Read More

UN NETWORKS ಹರೇಕಳ: ಮಾನವನ ಅಂತಿನ ತಾಣವಾಗಿರುವ ಹಿಂದು ರುದ್ರಭೂಮಿ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿರುವ ಕಾರ್ಯಕ್ರಮ ಅತ್ಯಂತ ಔಚಿತ್ಯಪೂರ್ಣ ಎಂದು ದೇರಳಕಟ್ಟೆ ವಿದ್ಯಾರತ್ನ ಶಾಲೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು. ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ಮೂರು ಗ್ರಾಮಸ್ಥರ ಸಹಕಾರದಲ್ಲಿ ಭಾನುವಾರ ಹರೇಕಳ ಹಿಂದು ರುದ್ರಭೂಮಿಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹರೇಕಳದಲ್ಲಿರುವ ರುದ್ರಭೂಮಿ ಪಾವೂರು, ಅಂಬ್ಲಮೊಗರು ಮತ್ತು ಹರೇಕಳ ಗ್ರಾಮಕ್ಕೆ ಸಂಬಂಧಪಟ್ಟಿದ್ದು, ಇದರ ನಿರ್ವಹಣೆ ಮುಖ್ಯ. ಪ್ರಧಾನಮಂತ್ರಿಯ ಸ್ವಚ್ಛ ಭಾರತ್ ಅಭಿಯಾನದಡಿ ರ್ಸಾಜನಿಕ ಸ್ಥಳದಲ್ಲೂ ಸ್ವಚ್ಛತಾ ಕಾರ್ಯ ನಡೆಸಿದಾಗ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ಸಾಧ್ಯ ಎಂದು ಹೇಳಿದರು. ಪಾವೂರು ಗ್ರಾ.ಪಂ. ವಾಮನ್‍ರಾಜ್ ಮಾತನಾಡಿ, ಮೋಕ್ಷ ಪ್ರಾಪ್ತಿ ನೀಡುವ ಹಿಂದು ರುದ್ರಭೂಮಿಗಳು ಎಲ್ಲ ಗ್ರಾಮಗಳಲ್ಲಿ ಇಲ್ಲದಿದ್ದರೂ ಹರೇಕಳದಲ್ಲಿದ್ದು ಅಭಿವೃದ್ಧಿಪಡಿಸಿ ಉಳಿಸುವ ನಿಟ್ಟಿನಲ್ಲಿ ಯುವಕರು ಪಣ ತೊಟ್ಟಿರುವುದು ಶ್ಲಾಘನೀಯ, ಇಂತಹ ಕಾರ್ಯಗಳಲ್ಲಿ ಹಿಂದು ಸಮುದಾಯ ಕೈಜೋಡಿಸುವ ಅವಶ್ಯಕತೆಯಿದೆ’ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣಪ ಮಾಸ್ಟರ್,…

Read More

UN NETWORKS ಕುತ್ತಾರು: ಹಿಂದೆಲ್ಲಾ ಅನ್ನದಾನ, ವಿದ್ಯಾದಾನ ಮಹತ್ವ ಎನಿಸಿತ್ತು, ಆದರೆ ಇಂದು ಸರ್ಕಾರದ ಉಚಿತ ಅಕ್ಕಿಯಿಂದ ಅನ್ನ ಸಿಗುತ್ತಿದೆ, ಗೂಗಲ್‍ನಲ್ಲಿ ಶಿಕ್ಷಣ ಸಿಗುತ್ತಿದೆ. ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯೇ ಇಲ್ಲದ ರಕ್ತದಾನ ಶ್ರೇಷ್ಠವಾಗಿದ್ದು, ದಾನಿಗಳು ಸಾಮಾಜಿಕ ಬದ್ಧತೆ ತೋರಿದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಜಿಲ್ಲಾ ಶಾಖೆ, ರೋಟರಿ ಕ್ಲಬ್ ಮಂಗಳೂರು ಪೂರ್ವ, ರೋಟರಿ ಸಮುದಾಯದಳ ಕೊಲ್ಯ, ಮುನ್ನೂರು ಯುವಕ ಮಂಡಲ ಹಾಗೂ ದುರ್ಗಾವಾಹಿನಿ ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕುತ್ತಾರ್ ಎಂವೈಎಂ ಸಭಾಂಗಣದಲ್ಲಿ ಬೃಹತ್ ರಕ್ತದಾನ ಹಾಗೂ ಅರ್ಹ ವಿಕಲಚೇತನರಿಗೆ ಪುನಶ್ಚೇತನಗೊಳಿಸುವ ಉಚಿತ ಸಲಕರಣೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 20 ವರ್ಷಗಳ ಹಿಂದೆ ರಕ್ತದಾನ ಮಾಡುವುದೆಂದರೆ ಭಯದ ವಿಷಯ, ಇಂತಹ ಶಿಬಿರ ಅಯೋಜಿಸುವಾಗ ದಾನಿಗಳು ಮುಂದಾದರೂ ಹೆತ್ತವರು ಅವಕಾಶ ನೀಡುತ್ತಿರಲಿಲ್ಲ. ಇದರಿಂದಾಗಿ ಶಿಬಿರಗಳೇ ರದ್ದಾಗುತ್ತಿದ್ದ ಉದಾಹರಣೆಗಳಿವೆ. ಆದರೆ ಇಂದು ದಾನಿಗಳೂ ಇದ್ದಾರೆ, ಸಾಕಷ್ಟು ಪ್ರೋತ್ಸಾಹವೂ ಸಿಗುತ್ತಿದೆ. ವೈದ್ಯಕೀಯ ವ್ಯವಸ್ಥೆಯಲ್ಲೂ…

Read More

UN NETWORKS ಉಳ್ಳಾಲ: ಜನರಲ್ಲಿ ಬಿಜೆಪಿಯ ಬಗ್ಗೆ ಉತ್ತಮ ಅಭಿಪ್ರಾಯ ಈಗಿಲ್ಲ. ನರೇಂದ್ರಮೋದಿ ಮುಂದೆ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ. ಈಗಿರುವ ಸ್ಥಾನ ಅವರಿಗೆ ಮುಂದೆ ಸಿಗುವುದಿಲ್ಲ. ಉತ್ತರಪ್ರದೇಶ, ಬಿಹಾರ, ಸೇರಿದಂತೆ ಬಹಳಷ್ಟು ರಾಜ್ಯಗಳಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಾನ ಗಳಿಸಲಿದೆ ಎಂದು ಸಚಿವ ಖಾದರ್ ಹೇಳಿದರು. ಅವರು ಉಳ್ಳಾಲದಲ್ಲಿ ಮಂಗಳವಾರ ನಡೆದ ಉಳ್ಳಾಲ ನಗರ ಕಾಂಗ್ರೆಸ್ ಮತ್ತು ಯು.ಟಿ. ಖಾದರ್ ಅಭಿಮಾನಿಗಳ ವೇದಿಕೆಯ ವತಿಯಿಂದ ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ನಡೆದ ಕೇಂದ್ರ ಸರಕಾರದ ಆಡಳಿತ ನೀತಿಯನ್ನು ವಿರೋಧಿಸಿ ನಡೆದ ಜಾಗೃತಿ ಅಭಿಯಾನ ಮತ್ತು ಅಭಿನಂದನಾ ಸಭೆಯಲ್ಲಿ ಮಾತನಾಡಿದರು. ಕೇರಳದ ಕಾಂಗ್ರೆಸ್‍ನ ಹಿರಿಯ ಮುಖಂಡ ಹರೀಶ್ ಬಾಬು ಮಾತನಾಡಿ, ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರನ್ನು ಕಾವಲುಗಾರ ಎಂದು ಹೇಳಲು ಆಗುವುದಿಲ್ಲ. ನಾಲ್ಕುವರೆ ವರ್ಷದ ಆಡಳಿತದಲ್ಲಿ ಶೂನ್ಯ ಸಾಧನೆ ದಾಖಲು ಮಾಡಿದೆ. ಅವರ ಮೇಲೆ ಜನರಿಗೆ ವಿಶ್ವಾಸ ಇತ್ತು. ವಿಶ್ವಾಸದ ಮೆಲೆ ಆರಿಸಿದರೂ ಅವರು ಜನಪರ ಸೇವೆ ಮಾಡಿಲ್ಲ ಎಂದವರು ಟಿಪ್ಪುಸುಲ್ತಾನ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ…

Read More