Author: UllalaVani

Kannada News From Coastal Karnataka

UN NETWORKS ದೇರಳಕಟ್ಟೆ: ಭೀಕರ ನೆರೆಗೆ ನಲುಗಿದ ಕೇರಳ ನೆರೆ ಸಂತ್ರಸ್ತರ ನೆರವಿಗೆ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯ ಆಗಮಿಸಿದ್ದು, 40ಲಕ್ಷ ರೂ. ಸಹಾಯಧನವನ್ನು ಹಸ್ತಾಂತರ ಮಾಡಿದೆ. ಕೇರಳ ನೆರೆ ಸಂತ್ರಸ್ತರಿಗೆ 40ಲಕ್ಷ ರೂ. ಸಹಾಯಧನವನ್ನು ನಿಟ್ಟೆ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಮುಖ್ಯಸ್ಥ ವಿಶಾಲ್ ಹೆಗ್ಡೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಚೆಕ್ ಮೂಲಕ ಹಸ್ತಾಂತರಿಸಿದ್ದಾರೆ. ಸಚಿವ ಟಿ.ಪಿ. ಜಯರಾಜನ್ ಹಾಗೂ ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯ ಸಮಿತಿ ಜಿಲ್ಲಾ ಸಮಿತಿ ಸದಸ್ಯ ವಿ. ಮುರಲಿ, ನ್ಯಾಯವಾದಿ ಅಮಲ್ ತೊಪ್ಪಿಲ್, ಕ್ಷೇಮ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಮಂತ್ ಶೆಟ್ಟಿ ಜೊತೆಗಿದ್ದರು. ಕೊಡಗಿಗೂ 40ಲಕ್ಷ ರೂ. ಹಸ್ತಾಂತರಿಸಿದ್ದ ಸಂಸ್ಥೆ: ನಿಟ್ಟೆ ವಿಶ್ವವಿದ್ಯಾಲಯ ವತಿಯಿಂದ ಕೊಡಗಿನ ನೆರೆ ಸಂತ್ರಸ್ತರ ನೆರವಿಗೂ ಆಗಮಿಸಿದ್ದ ನಿಟ್ಟೆ ಸಂಸ್ಥೆ, 40ಲಕ್ಷ ರೂ. ಸಹಾಯಧನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿತ್ತು. ಮಂಗಳೂರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಮಿಸಿದ್ದ ವೇಳೆ ನಿಟ್ಟೆ ವಿವಿ ಸಹಕುಲಾಧಿಪತಿ ವಿಶಾಲ್ ಹೆಗ್ಡೆ ಚೆಕ್ ಹಸ್ತಾಂತರಿಸಿದ್ದರು.

Read More

UN NETWORKS ಜಪ್ಪು : ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಕೆಳ ಸೇತುವೆ ನಿರ್ಮಾಣ ತಕ್ಷಣ ಮಾಡಬೇಕೇಂದು ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ಮತ್ತು ನಿರ್ಮಲ ನಗರ ನಾಗರಿಕ ಹಿತರಕ್ಷಣಾ ವೇದಿಕೆ ಇದರ ಜಂಟಿ ಆಶ್ರಯದಲ್ಲಿ ಜಪ್ಪು ಮಹಕಾಳಿಪಡು ರೈಲ್ವೆ ಗೇಟ್ ಬಳಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಯೋಗೀಶ್ ಜೆಪ್ಪು ಮಾತನಾಡಿ, ಮನಪಾ ಸ್ಮಾರ್ಟ್ ಸಿಟಿ ಕನಸು ಹೊತ್ತುಕೊಂಡಿದ್ದರೂ ಮಂಗಳೂರಿನ ಹೃದಯಭಾಗ ಮೂಲಭೂತ ಸೌಲಭ್ಯದಿಂದ ವಂಚಿತವಾಗಿವೆ. ಅಲ್ಲದೇ ಜಪ್ಪು ಮಹಾಕಾಳಿಪಡ್ಲು ರೈಲ್ವೆ ಕೆಳ ಸೇತುವೆ , ರೈಲ್ವೆ ಗೇಟ್ ನಿರ್ಮಾಣವಾಗದೇ ಉಳಿದಿವೆ. 10 ನಿಮಿಷಕ್ಕೊಂದರಂತೆ ರೈಲು ಸಂಚಾರ ಇಲ್ಲಿನ ರಸ್ತೆಗೆ ಅಡ್ಡವಾಗಿ ಸಂಚರಿಸುವುದರಿಂದ ತೊಕ್ಕೊಟ್ಟು, ತಲಪಾಡಿ, ದೇರಳಕಟ್ಟೆ, ಕೊಣಾಜೆ ಮತ್ತು ಕೇರಳಕಡೆಯಿಂದ ಬರುವ ವಾಹನ ಸವಾರರು, ಪ್ರಯಾಣಿಕರು ರೈಲ್ವೆ ಗೇಟ್ ಅಕ್ಕಪಕ್ಕ ಸರದಿ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಇದೆ. ಈ ಸಮಸ್ಯೆ ಪರಿಹರಿಸುವ ಕೆಲಸ ತಕ್ಷಣ ಆಗಬೇಕು. ಕೆಳಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ…

Read More

UN NETWORKS ಕೊಣಾಜೆ: ಸರ್ಜಿಕಲ್ ಸ್ಟ್ರೈಕ್ ಭಾರತದ ಆತ್ಮಸ್ಥೈರ್ಯ ಹಾಗೂ ಮನೋಬಲವನ್ನು ಹೆಚ್ಚಿಸಿದೆ. ಇಸ್ರೆಲ್, ಅಮೇರಿದಂತಹ ಮುಂದುವರಿದ ರಾಷ್ಟ್ರಗಳು ಮಾತ್ರ ಇಂತಹ ನಿರ್ದಿಷ್ಟ ದಾಳಿಯಲ್ಲಿ ಗುರುತಿಸಿದ್ದ ರಾಷ್ಟ್ರಗಳಾಗಿದ್ದವು. ಇದೀಗ ಭಾರತವು ಕೂಡಾ ಯಶಸ್ವಿ ನಿರ್ದಿಷ್ಟ ದಾಳಿಯ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಿ ಗುರುತಿಸುವಂತಾಗಿದೆ. ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸೈನಿಕರ ಸೇವೆಯನ್ನು ನಾವು ಸದಾ ಸ್ಮರಿಸಿಕೊಳ್ಳಬೇಕಿದೆ ಎಂದು ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಅವರು ಹೇಳಿದರು. ಭಾರತವು ನಡೆಸಿದ ಸರ್ಜಿಕಲ್ ದಾಳಿಗೆ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ವತಿಯಿಂದ ಮಂಗಳಸಭಾಂಗಣದಲ್ಲಿ ಶನಿವಾರ ನಡೆದ ನಿರ್ದಿಷ್ಟ ದಾಳಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೆಲವು ದೇಶಗಳು ಇಂತಹ ನಿರ್ದಿಷ್ಟ ದಾಳಿ ನಡೆಸಿವೆ. ಅವುಗಳಲ್ಲಿ ಕೆಲವು ಯಶಸ್ವಿಯಾದರೆ ಇನ್ನು ಕೆಲವು ದಾಳಿಗಳು ಪೈಲ್ಯೂರ್ ಆಗಿದೆ. ಆದರೆ ಭಾರತವು ಸರಿಯಾದ ನಿಟ್ಟಿನಲ್ಲಿ ಇಟ್ಟ ಹೆಜ್ಜೆಯೊಂದಿಗೆ ವೀರ ಸೈನಿಕರ ಬಲದಿಂದ ನಿರ್ದಿಷ್ಟ ದಾಳಿಯ ಮೂಲಕ ವಿರೋದಿ ದೇಶಕ್ಕೆ…

Read More

UN NETWORKS ಉಳ್ಳಾಲ: ಬೆಂಕಿ ಅವಘಢಕ್ಕೆ ತುತ್ತಾಗಿ ಮನೆಯೊಳಗಿದ್ದ ಇಲೆಕ್ಟ್ರಾನಿಕ್ ಸಾಮಗ್ರಿಗಳು ಸಂಪೂರ್ಣ ಸುಟ್ಟುಹೋಗಿ, ಮನೆಯೂ ಭಾಗಶ: ಹಾನಿಯಾಗಿರುವ ಘಟನೆ ಉಳ್ಳಾಲ ನಗರಸಭೆಯ 24ನೇ ವಾರ್ಡಿನ ಧರ್ಮನಗರ ಬೊಟ್ಟು ಎಂಬಲ್ಲಿ ಶನಿವಾರ ಸಂಜೆ ವೇಳೆ ನಡೆದಿದೆ. ಘಟನೆ ವೇಳೆ ಮನೆಯೊಳಗಿದ್ದ ಟ್ಯೂಷನ್ನಿಗೆಂದು ಬಂದಿದ್ದ 15 ಮಕ್ಕಳು ಹಾಗೂ ಮನೆಯ ಮೂರು ಮಂದಿ ಪವಾಡಸದೃಶವಾಗಿ ಪಾರಾಗಿದ್ದಾರೆ. ಬೊಟ್ಟು ಎಂಬಲ್ಲಿ ಜಯಂತ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಲೀಲಾ ಪೂಜಾರ್ತಿ ಅವರ ಕುಟುಂಬ ಎರಡು ವರ್ಷಗಳಿಂದ ಇದ್ದಾರೆ. ಲೀಲಾ ಪೂಜಾರ್ತಿ ಸೇರಿದಂತೆ ಅವರ ಮಕ್ಕಳಾದ ರಶ್ಮಿತಾ, ರಕ್ಷಿತಾ ಅವಘಢ ಸಂದರ್ಭ ಮನೆಯೊಳಗಿದ್ದರು. ಇನ್ನೋರ್ವ ಪುತ್ರ ರಾಕೇಶ್ ಕೆಲಸಕ್ಕೆ ತೆರಳಿದ್ದರು. ರಶ್ಮಿತಾ ಅವರು ಟ್ಯೂಷನ್ ನೀಡುತ್ತಿದ್ದು, ಸುಮಾರು 15 ಮಕ್ಕಳು ಮನೆಯೊಳಗಿದ್ದರು. ಇದೇ ವೇಳೆ ಸಿಡಿಲು ಬಡಿದು ಮನೆಯೊಳಗಿದ್ದ ಟಿವಿಯೊಳಗೆ ಬೆಂಕಿ ಕಾಣಿಸಿಕೊಂಡಿತ್ತು. ಮಕ್ಕಳು ಮನೆಮಂದಿಯ ಗಮನಕ್ಕೆ ತಂದಿದ್ದರು. ಕೂಡಲೇ ಮಕ್ಕಳು ಸೇರಿದಂತೆ ಮನೆಮಂದಿ ಮನೆ ಹೊರಗಡೆ ತೆರಳಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣಕ್ಕೆ ಸ್ಥಳಕ್ಕೆ…

Read More

UN NETWORKS ಉಳ್ಳಾಲ: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸಂಭ್ರಮಾಚರಣೆ ಮತ್ತು ಸಹೋದರಿ ನಿವೇದಿತಾ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ದ್ವಿಗ್ವಿಜಯ ರಥವು ಬೆಂಗಳೂರಿನಿಂದ ಹೊರಟು ರಾಜ್ಯದಾದ್ಯಂತ ಸಂಚರಿಸಿ ಬುಧವಾರ ಸಂಜೆ ಕೋಟೆಕಾರಿಗೆ ತಲುಪಿದ್ದು, ಈ ಸಂದರ್ಭದಲ್ಲಿ ರಥವನ್ನು ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದರು. ಕೋಟೆಕಾರ್ ಬೀರಿಯಲ್ಲಿ ಭಕ್ತರು ಸ್ವಾಮಿ ವಿವೇಕಾನಂದರ ಹಾಗೂ ಸಹೋದರಿ ನಿವೇದಿತಾ ಅವರ ವಿಗ್ರಹಗಳಿಗೆ ವೀರಯೋಧ ಸಂತೋಷ್ ಕುಲಾಲ್ ಹಾಗೂ ಹಿರಿಯರಾದ ಕೃಷ್ಣ ಶೆಟ್ಟಿ ತಾಮಾರು ಮತ್ತು ನಾಗರಿಕರು ಪುಷ್ಪಾರ್ಚನೆ ಸಲ್ಲಿಸಿದರು.ವಿವೇಕ ಶಿಕ್ಷಣವಾಹಿನಿಯ ಸಂಸ್ಥಾಪಕರಾದ ನಿತ್ಯಾನಂದ ವಿವೇಕವಂಶಿಯವರು ಈ ಸಂದರ್ಭದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಮತ್ತು ಚಿಕಾಗೋದಲ್ಲಿ ಅವರು ರಾಷ್ಟ್ರವನ್ನು ಕುರಿತು ಮಾಡಿದ ಭಾಷಣವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಗ್ರಾಮಾಂತರ ಸಂಪರ್ಕ ಪ್ರಮುಖ್ ಸುಜಿತ್ ಕೋಟೆಕಾರ್, ಬೀರಿ ಗಣೇಶ ಮಂದಿರದ ಅಧ್ಯಕ್ಷರಾದ ರಾಮನಾಥ್ ಕೋಟೆಕಾರ್, ಕಾರ್ಯದರ್ಶಿ ಮಿಥುನ್,…

Read More

UN NETWORKS ಉಳ್ಳಾಲ: ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ‌  ಇದರ ದ.ಕ ಜಿಲ್ಲಾಧ್ಯಕ್ಷರಾಗಿ ಎಚ್. ಇಸ್ಮಾಯಿಲ್ ಶಾಫಿ ಬಬುಕಟ್ಟೆ ನೇಮಕಗೊಂಡಿದ್ದಾರೆ. ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ‌ಯ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಅಲಿರವರು ನೆಮಕಗೋಳಿಸಿದ್ದಾರೆ.

Read More

UN NETWORKS ಉಳ್ಳಾಲ: ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದಕ್ಷಿಣ ವಲಯ ಮತ್ತು ಭಗವತಿ ಆಂಗ್ಲ ಮಾಧ್ಯಮ ಪ್ರೌಢ ಶಲೆ ಸಂಕೋಳಿಗೆ ಉಚ್ಚಿಲ ಇದರ ಸಂಯುಕ್ತ ಆಶ್ರಯದಲ್ಲಿ 17 ವರ್ಷ ವಯೋಮತಿಯೊಳಗಿನ ಉಳ್ಳಾಲ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಸಮಾರೋಪ ಸಮಾರಂಭವು ಸೆ.28ರಂದು ಶುಕ್ರವಾರ ಮಂಗಳೂರು ವಿಶ್ವ ವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯಿತು. ತಾಪಂ ಸದಸ್ಯೆ ಸುರೇಖ ಚಂದ್ರಹಾಸ್, ನಾಟಿ ವೈದ್ಯೆ ಶಂಕರನಾಂದ ಇನ್ನೋಳಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಿಷ್ಣು ಹೆಬ್ಬಾರ್, ಮಂಗಳೂರು ತಾಲೂಕು ದೈಹಿಕ ಶಿಕ್ಷಣದ ಅಧ್ಯಕ್ಷ ತ್ಯಾಗಂ ಹರೇಕಳ, ಕಾರ್ಯದರ್ಶಿ ರಾಜೀವ್ ನಾಯಕ್, ಉಪಾಧ್ಯಕ್ಷ ಪ್ರೀತಂ ಉಳ್ಳಾಲ್, ದೈಹಿಕ ಶಿಕ್ಷಣ ಸಂಘದ ಉಳ್ಳಾಲ ವಲಯದ ನೋಡೆಲ್‍ ಅಧಿಕಾರಿ ಮೋಹನ್ ಶಿರ್ಲಾಲ್ ಮತ್ತು ಪ್ರಮೋದ್ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಸಂಘದ ನೋಡೆಲ್‍ ಅಧಿಕಾರಿ ಉರ್ಬನ್ ಮಸ್ಕರನೇಸ್, ಉಚ್ಚಿಲದ ಭಗವತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಸುರೇಖಜೆ, ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಪ್ರಮೀಳ,…

Read More

UN NETWORKS ಮುಂಬಯಿ: ಅಸೋಸಿಯೇಶನ್ ಆಫ್ ಕನ್ನಡ ಕೂಟ’ಸ್ ಆಫ್ ಅಮೇರಿಕಾ ಸಂಸ್ಥೆಯು ಉತ್ತರಟೆಕ್ಸಾಸ್ ಮಲ್ಲಿಗೆ ಕನ್ನಡ ಕೂಟ ಇದರ ಆಶ್ರಯದಲ್ಲಿ ಇತ್ತೀಚೆಗೆ ಅಮೆರಿಕದ ಡಾಲಸ್ ನಗರದ ಶೆರಟಾನ್ ಸಮಾವೇಶ ಸಭಾಗೃಹದಲ್ಲಿ ಆಯೋಜಿಸಿದ್ದ ತ್ರಿದಿನಗಳಲ್ಲಿ10ನೇ ಅಕ್ಕ ವಿಶ್ವಕನ್ನಡ ಸಮ್ಮೇಳನಕ್ಕೆ ಮುಂಬಯಿನ ಪ್ರತಿಷ್ಠಿತ ಕವಿಯಾಗಿ ಗುರುತಿಸಿಕೊಂಡು ಸಮ್ಮೇಳನಕ್ಕೆ ಆಹ್ವಾನಿತ ಕನ್ನಡದ ಸಂವೇದನಾ ಶೀಲ ಕವಿ ಗೋಪಾಲ ತ್ರಾಸಿ ನಾಡಿನ ಹೆಸರಾಂತ ಕವಿ ಜಯಂತ್ ಕಾಯ್ಕಿಣಿ ಅಧ್ಯಕ್ಷತೆಯಲ್ಲಿ ಜರಗಿದ `ಶ್ರಾವಣ ಮಧ್ಯಾಹ್ನ-ಅಕ್ಕ2018 ಕವಿಗೋಷ್ಠಿ’ಯಲ್ಲಿತನ್ನ ಹುಣ್ಣಿಮೆ-ಅಭಗ್ನ ಹಾಗೂ ಹೋಳಿ ಎಂಬ ಎರಡು ಕವಿತೆಗಳನ್ನು ಪ್ರಸ್ತುತ ಪಡಿಸಿದರು. ಗೋಪಾಲ ತ್ರಾಸಿ ಅವರನ್ನು ಅಕ್ಕ ಸಮಿತಿ ಕಾರ್ಯಾಧ್ಯಕ್ಷ ಅಮರ್‍ನಾಥ್ ಗೌಡ ಮತ್ತು ಅಕ್ಕ ಸಂಸ್ಥೆಯ ಅಧ್ಯಕ್ಷ ಶಿವಮೂರ್ತಿ ಕೀಲರ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಅಂತೆಯೇ ತ್ರಾಸಿ ಅವರ ಕಾವ್ಯ ಪ್ರತಿಭೆಯ ಬಹುಮುಖ ಪ್ರತಿಭಾ ಸಂಪನ್ನತೆಯನ್ನು ಗುರುತಿಸಿ ಮೊಂಟ್‍ಗೊಮೆರಿ ಕಂಟ್ರಿ ರಾಜ್ಯ ಕೌನ್ಸಿಲ್ ವತಿಯಿಂದ ಕೌನ್ಸಿಲ್ ಸದಸ್ಯ ರೋಜ್ಹರ್ ಬೆರ್ಲಿನರ್ ಅವರು ತ್ರಾಸಿ ಅವರಿಗೆ ಗೌರವಪತ್ರ ಪ್ರದಾನಿಸಿ ಅಭಿನಂದಿಸಿದರು.ಮುಂಬಯಿಯ ರಾತ್ರಿ ಶಾಲೆಯಿಂದ…

Read More

UN NETWORKS ಮುಂಬಯಿ: ಮಹಾನಗರದಲ್ಲಿನ ಹಿರಿಯ ರಾಜಕಾರಣಿ ಲಕ್ಷ್ಮಣ್ ಸಿ.ಪೂಜಾರಿ ಅವರನ್ನು ರಾಷ್ಟ್ರವಾದಿ ಕಾಂಗ್ರೇಸ್ ಪಾರ್ಟಿ (ಎನ್‍ಸಿಪಿ) ಇದರ ಮುಂಬಯಿ ಪ್ರದೇಶ ಸಮಿತಿಯ ಹಿರಿಯ ಉಪಾಧ್ಯಕ್ಷರಾಗಿ ಪಕ್ಷದ ಪಾರ್ಲಿಮೆಂಟ್ ಬೋರ್ಡ್ ಪುನಾರಯ್ಕೆ ಗೊಳಿಸಿದೆ ಹಾಗೂ ಸುಮಾರು ಆರು ತಾಲೂಕುಗಳ ಅಧೀನದ ದಕ್ಷಿಣ ಮುಂಬಯಿ ಜಿಲ್ಲಾ (ಪ್ರಶಾಸನ)ದ ನಿರೀಕ್ಷಕ ಹುದ್ದೆಯನ್ನೂ ಪ್ರದಾನಿಸಲಾಗಿದೆ ಎಂದು ಎನ್‍ಸಿಪಿ ಮುಂಬಯಿ ಪ್ರದೇಶ ಸಮಿತಿ ಅಧ್ಯಕ್ಷ ಸಚಿನ್ ಅಹಿರೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಷ್ಟ್ರವಾದಿ ಕಾಂಗ್ರೇಸ್ ಪಾರ್ಟಿಯ ಸರ್ವೋಚ್ಛ ನಾಯಕ, ಮಾಜಿ ಕೇಂದ್ರ ಸಚಿವ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ನಿಕಟವರ್ತಿ ಆಗಿರುವ ಲಕ್ಷ್ಮಣ್ ಪೂಜಾರಿ ಅವರು ಎನ್‍ಸಿಪಿ ಸ್ಥಾಪನೆಯ ದಿನದಿಂದಲೇ ಪಕ್ಷದಲ್ಲಿ ಸಕ್ರೀಯರಾಗಿದ್ದು, ಪಕ್ಷದ ಪದಾಧಿಕಾರಿಗಳ ಪ್ರಥಮ ಅವಧಿಯಲ್ಲೇ ಪ್ರಧಾನ ಕಾರ್ಯದರ್ಶಿ ಆಗಿ, ನಂತರ ಸತತ ಐದು ಅವಧಿಗಳಲ್ಲಿ ಉಪಾಧ್ಯಕ್ಷರಾಗಿಯೇ ನೇಮಕ ಗೊಂಡಿರುವರು. ಸದ್ಯ ಎನ್‍ಸಿಪಿಯಲ್ಲಿ ಉನ್ನತ ಹುದ್ದೆಯನ್ನು ಹೊಂದಿದ ತುಳು ಕನ್ನಡಿಗರಲ್ಲಿ ಲಕ್ಷ್ಮಣ್ ಪೂಜಾರಿ ಓರ್ವರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲ್ಕಿ ಚಿತ್ರಾಪುರ…

Read More

UN NETWORKS ದೇರಳಕಟ್ಟೆ: ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆಯಿಂದ ಆಟವಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾಪಟುವಾಗಿ ಕ್ಷೀಡಾ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಕಾಣಲು ಸಾಧ್ಯ ಎಂದು ಅಂತರ್ ರಾಷ್ಟ್ರೀಯ ಕಬ್ಬಡಿ ತೀರ್ಪುಗಾರರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೇಮನಾಥ್ ಉಳ್ಳಾಲ್ ಅಭಿಪ್ರಾಯಪಟ್ಟರು. ಯೇನೆಪೊಯ ಯಂಡೊರೆನ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ ಮಂಗಳೂರು ವಿ.ವಿ ಮಟ್ಟದ “ಜ್ಯಾಯಿಸ್ ಪೈಸ್” ಸ್ಮಾರಕ ರೋಲಿಂಗ್ ಟ್ರೋಫಿ ಮಹಿಳೆಯರ ಅಂತರ ಕಾಲೇಜು ಬಾಸ್ಕೇಟ್ ಬಾಲ್ ಪಂದ್ಯ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕುಲಪತಿ ಡಾ| ಕಿಶೋರ್ ಕುಮಾರ್ ಸಿ.ಕೆ., ವಿದ್ಯಾರತ್ನ ವಿದ್ಯಾಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ನಗರ ಪಂಚಾಯತ್ ಕೌನ್ಸಿಲರ್ ಭವಾನಿ ಉಪಸ್ಥಿತರಿದ್ದರು. ಸ್ಕೂಲ್ ಆಫ್ ಸೋಶಿಯಲ್ ವರ್ಕ ರೋಶನಿ ನಿಲಯದ ಪ್ರಾಂಶುಪಾಲೆ ಪ್ರೊ| ಜ್ಯೂಲಿಯಟ್ ಸಿ.ಜೆ ಅಧ್ಯಕ್ಷತೆ ವಹಿಸಿದ್ದರು.

Read More